ಬಣ್ಣದ ನೆರಳು ……: ಸತೀಶ್ ಶೆಟ್ಟಿ, ವಕ್ವಾಡಿ.
ಮುಂಗಾರಿಗೆ ಯಾಕಿಷ್ಟು ಅವಸರವೋ ಗೊತ್ತಿಲ್ಲ. ಊರಲ್ಲಿ ಯಕ್ಷಗಾನ ಮೇಳಗಳು ತಮ್ಮ ತಿರುಗಾಟಕ್ಕೆ ಮಂಗಳ ಹಾಡುವ ಮುನ್ನವೇ ಮಳೆ ತನ್ನ ಒಡ್ಡೋಲಗ ಆರಂಭಿಸಿಬಿಟ್ಟಿದೆ. ಸಾಮಾನ್ಯವಾಗಿ ಜೂನ್ ಮೊದಲ ವಾರದಲ್ಲಿ ಕರಾವಳಿಗೆ ಕಾಲಿಡುತ್ತಿದ್ದ ಮುಂಗಾರು ಈ ಬಾರಿ ಹೆಚ್ಚು ಕಡಿಮೆ ಇಪ್ಪತ್ತು ದಿನಗಳ ಮೊದಲೇ ನೆಲೆಯೂರವ ಲಕ್ಷಣ ಹೆಚ್ಚಾದಂತಿದೆ. ನಿನ್ನೆ ರಾತ್ರಿಯಿಂದ ಧೋ ಅಂತ ಬ್ರೇಕ್ ಇಲ್ಲದೆ ಸುರಿಯುತ್ತಿದ್ದ ಮಳೆ ಊರಲ್ಲಿ ನೆರೆಯನ್ನೇ ಸೃಷ್ಟಿಸಿತ್ತು. ಕಡಲ ಶಬ್ದ ಮತ್ತು ಕಪ್ಪುಗಟ್ಟಿದ ಆಕಾಶ ಭಾರೀ ಮಳೆಯ ಮುನ್ಸೂಚನೆ ನೀಡುತ್ತಿತ್ತು. “ಥತ್, ಎಂತ … Read more