ಝೆನ್ ಕತೆಗಳು: ಗೋವಿಂದ ರಾವ್ ವಿ. ಅಡಮನೆ

೧. ಇನ್ನೇನೂ ಪ್ರಶ್ನೆಗಳಿಲ್ಲ. ಸಾಮಾಜಿಕ ಸಮಾರಂಭವೊಂದರಲ್ಲಿ ಝೆನ್‌ ಗುರುವನ್ನು ಸಂಧಿಸಿದ ಮನೋವೈದ್ಯನೊಬ್ಬ ತನ್ನನ್ನು ಕಾಡುತ್ತಿದ್ದ ಪ್ರಶ್ನೆಯೊಂದನ್ನು ಕೇಳಲು ತೀರ್ಮಾನಿಸಿದ. “ನಿಜವಾಗಿ ನೀವು ಜನರಿಗೆ ಹೇಗೆ ಸಹಾಯ ಮಾಡುತ್ತೀರಿ?” ವಿಚಾರಿಸಿದ ಮನೋವೈದ್ಯ. “ಇನ್ನೇನೂ ಪ್ರಶ್ನೆಗಳನ್ನು ಕೇಳಲಾಗದ ಸ್ಥಿತಿಗೆ ಅವರನ್ನು ಕೊಂಡೊಯ್ಯುತ್ತೇನೆ,” ಉತ್ತರಿಸಿದರು ಝೆನ್‌ ಗುರುಗಳು. ***** ೨. ಸ್ವರ್ಗ. ಮರುಭೂಮಿಯಲ್ಲಿ ಇಬ್ಬರು ದಾರಿ ತಪ್ಪಿ ಅಸಹಾಯಕರಗಿದ್ದಾರೆ. ಹಸಿವು ಮತ್ತು ಬಾಯಾರಿಕೆಯಿಂದ ಶಯುವಂತಾಗಿದ್ದಾರೆ. ಕೊನೆಗೆ ಅವರು ಅತೀ ಎತ್ತರವಾಗಿದ್ದ ಗೋಡೆಯೊಂದರ ಸಮೀಪಕ್ಕೆ ಬರುತ್ತಾರೆ. ಗೋಡೆಯ ಆಚೆ ಬದಿಯಲ್ಲಿ ಜಲಪಾತದ ಸದ್ದು … Read more

ಕನ್ನಡದ ಬರಹಗಳನ್ನು ಹಂಚಿ ಹರಡಿ

ಪಿತೃ ಪೂಜೆಯ ಊಟ: ಸಾವಿತ್ರಿ ವಿ. ಹಟ್ಟಿ

ನಾನು, ಅಕ್ಕ ಮತ್ತು ಅವ್ವ ಆಬಾಲಿ ಹೂವು ಹೆಣ್ಕೊಂತ ಕುಂತಿದ್ವಿ. ಅಕ್ಕ ಮತ್ತು ಅವ್ವ ಮನೆತನಕ್ಕ ಸಂಬಂಧ್ಸೀದ ವಿಷಯ ಮಾತಾಡ್ಕೊಂತ ಇದ್ರು. ಮಧ್ಯೆ ಮಧ್ಯೆ ನಾನು ಅವರ ಮಾಲೀಗೂ ನನ್ನ ಮಾಲೀಗೂ ಹೋಲಿಸಿ ನೋಡಿ ಜಾಸ್ತಿ ನಾನೇ ಕಟ್ಟಿದ್ದು ಅಂತ ಧಿಮಾಕಿನಿಂದ ಹೂವು ಹೆಣೆಯಾಕ್ಹ್ಹತ್ತಿದ್ದೆ.  ಆ ಹೊತ್ಗೆ ಹೊರಬಾಗಿಲ ಹತ್ರ ಯಾರದಾ ನೆಳ್ಳು ಬಿದ್ದಂಗಾತು. ಬಾಗಿಲ ತೋಳು ಹಿಡಿದು ಹಣಕಿ ಹಾಕಿದಂಗಾತು. ಎದ್ದು ಹೋಗಿ ನೋಡಿದೆ. ಯಾರೂ ಇರಲಿಲ್ಲ. ಯಾವಾ ಸಣ್ಣ ಹುಡುಗ್ರು ಆಟ ಆಡ್ಕೊಂತ ಬಂದು … Read more

ಕನ್ನಡದ ಬರಹಗಳನ್ನು ಹಂಚಿ ಹರಡಿ

ಸಂಸಾರ ಸಾಗರದಿ ಅನುಮಾನದ ಅಲೆಗಳು: ಹೊರಾ.ಪರಮೇಶ್ ಹೊಡೇನೂರು

 "ಸಂಸಾರ" ಎಂಬುದು ಅನಾದಿ ಕಾಲದಿಂದಲೂ ಗಂಡು ಮತ್ತು ಹೆಣ್ಣುಗಳ ನಡುವೆ ಸೃಷ್ಟಿಸಿಕೊಳ್ಳುವ ಅಪೂರ್ವ ಅನುಬಂಧವಾಗಿದ್ದು ಅವರ ನಡುವಿನ ದೈಹಿಕ ಮತ್ತು ಮಾನಸಿಕ ಸಮ್ಮಿಲನದ ಫಲವಾಗಿ ಪಡೆಯುವ ಮಕ್ಕಳಿಂದಾಗಿ ಪೀಳಿಗೆಗಾಗಿ ಸರಣಿ ಹರಿದುಕೊಂಡು ಬಂದಿವೆ. "ಮದುವೆ" ಎಂಬ ಸಾಮಾಜಿಕ ಒಪ್ಪಂದದ ಪರವಾನಗಿ ಪಡೆದು ಜೀವನ ಸಂಗಾತಿಗಳಾಗಿ, ಪರಸ್ಪರ ನಿಷ್ಠರಾಗಿ ಬಾಳುವ ದಂಪತಿಗಳ ಬೇಕು ಬೇಡಗಳು, ಕಷ್ಟ-ಸುಖಗಳು, ಇಷ್ಟ-ಅನಿಷ್ಟಗಳು, ನೀತಿ-ನಿರ್ಧಾರಗಳು ಬಹುತೇಕ ಇಬ್ಬರೂ ಕೂಡಿ ಚರ್ಚಿಸುವ ಮೂಲಕ ಕೈಗೊಂಡರೂ, ಹೆಚ್ಚಾಗಿ ಜೀವನೋಪಾಯಕ್ಕಾಗಿ ದುಡಿಯುವ ಪುರುಷನೇ(ಪತಿ) ಮನೆಯ ಯಜಮಾನಿಕೆ ವಹಿಸಿದರೆ, ಮಹಿಳೆಯು(ಸತಿ) … Read more

ಕನ್ನಡದ ಬರಹಗಳನ್ನು ಹಂಚಿ ಹರಡಿ

ಹನಿ ಮಳೆಗೊಂದು ಬೆಚ್ಚನೆ ಪ್ರೇಮ ಕಥನ: ಅನಿತಾ ನರೇಶ್ ಮಂಚಿ

“ಆಗ್ಲಿಲ್ವಾ ತಾಯೀ ನಿನ್ನ ಅಲಂಕಾರ? ಅದೇನು ಕಾಲೇಜಿಗೆ ಹೋಗ್ತಿಯೋ ಇಲ್ಲಾ ಫ್ಯಾಷನ್ ಪೆರೇಡಿಗೋ.. ಯಾವ ಹುಡುಗನನ್ನು ಕೊಲ್ಲಲು ಇಷ್ಟೊಂದು ಭಿನ್ನಾಣ? ಇದೇ ಹೊತ್ತಲ್ಲಿ ಪುಸ್ತಕ ಬಿಡ್ಸಿದ್ರೆ ನೀನು  ರ್ಯಾಂಕ್ ಬರ್ತಿದ್ದೆ ಬಿಡು” ಎಂದ ಅತ್ರಿ. “ಹೋಗೋ..   ನೀನು ಮೇಕಪ್ಪು  ಮಾಡದವನು ಬಾರೀ ಓದಿ  ಕಡಿದು ಕಟ್ಟೆ ಹಾಕಿದ್ದೀಯಲ್ಲಾ.. ಸಾಕು..” ಎಂದು ಕಿಚಾಯಿಸಿದಳು ಗಾನ.  “ಯಾಕೇ? ನಂಗೇನಾಗಿದೆ ..? ಓದ್ಲಿಲ್ಲ ಅನ್ನೋದು ಬಿಟ್ರೆ ಏನು ಕಮ್ಮಿ ಇದೆ ಹೇಳು.. ಹೊಲದಲ್ಲಿ  ಚೆನ್ನಾಗಿ ದುಡೀತೀನಿ ..  ಚೆನ್ನಾಗಿ ತಿಂತೀನಿ.. … Read more

ಕನ್ನಡದ ಬರಹಗಳನ್ನು ಹಂಚಿ ಹರಡಿ

ಸಿಡಿದೆದ್ದ ಗಾಂಧೀಶಕ್ತಿಸ್ಥಳ ಬದನವಾಳು: ಎಸ್.ಜಿ. ಸೀತಾರಾಮ್

  “ಬದನವಾಳು” ಎಂದೊಡನೆ ಹಳೆಯ ಮೈಸೂರಿಗರ ಮನಸ್ಸಿಗೆ ಬರುವುದು, ಗಾಂಧೀ ರಚನಾತ್ಮಕ ಕಾರ್ಯಕ್ರಮದಡಿಯಲ್ಲಿ 88 ವರ್ಷಗಳ ಕೆಳಗೆ, ಅಂದರೆ 1927ರಲ್ಲಿ, ಅಲ್ಲಿ ಸ್ಥಾಪಿಸಲ್ಪಟ್ಟ, “ನೂಲುವ ಪ್ರಾಂತ್ಯ” ಮತ್ತು “ಖಾದಿ ಗ್ರಾಮೋದ್ಯೋಗ ಕ್ಷೇತ್ರ.”  ಮೈಸೂರು-ಚಾಮರಾಜನಗರ ರೈಲು ಮಾರ್ಗದಲ್ಲಿರುವ ಈ ಗಾಂಧೀಕ್ಷೇತ್ರವು, ನಂಜನಗೂಡಿನಿಂದ 9 ಕಿ.ಮೀ. ಮತ್ತು ಮೈಸೂರಿನಿಂದ 34 ಕಿ.ಮೀ. ದೂರದಲ್ಲಿದೆ; “ತಗಡೂರು” ಎಂಬ ಇದರ “ಅವಳಿ” ಗಾಂಧೀಕ್ಷೇತ್ರದಿಂದ 9 ಕಿ.ಮೀ. ದೂರದಲ್ಲಿದೆ. “ಮೈಸೂರು ಗಾಂಧೀ” ಎಂದೇ ಪ್ರಸಿದ್ಧರಾಗಿದ್ದ ತಗಡೂರು ರಾಮಚಂದ್ರ ರಾವ್ ಮತ್ತು ಅಗರಂ ರಂಗಯ್ಯ (ಸಾಧ್ವೀ … Read more

ಕನ್ನಡದ ಬರಹಗಳನ್ನು ಹಂಚಿ ಹರಡಿ

ಕಾರ್-ಬಾರ್!: ಗುರುಪ್ರಸಾದ್ ಕುರ್ತಕೋಟಿ

ಇಲ್ಲಿಯವರೆಗೆ ವೆಂಕಟ್ ಗೆ ಬಾಡಿಗೆ ಕಾರು ತೆಗೆದುಕೊಳ್ಳೋದು ಹೆಚ್ಚು ಕಡಿಮೆ ಅನಿವಾರ್ಯವಾಗಿತ್ತು. ಇವನು ಇನ್ನೂ ಮೂರು ವಾರಗಳಾದರೂ ಅಮೆರಿಕಾದಲ್ಲಿ ಇರುವುದು ಬಾಕಿ ಇತ್ತು. ದಿನಾಲೂ ತನ್ನ ಕಾರಿನಲ್ಲಿ ಕರೆದೊಯ್ಯುತ್ತಿದ್ದ ಇವನ ಸಹೋದ್ಯೋಗಿ ರಜೆಯ ಮೇಲೆ ಭಾರತಕ್ಕೆ ಹೋಗಿದ್ದನಾದ್ದರಿಂದ ಇವನಿಗೆ ದಿನಾಲೂ ಆಫಿಸಿಗೆ ಹೋಗುವುದೇ ಕಷ್ಟವಾಗಿತ್ತು. ಅದೂ ಅಲ್ಲದೆ, ಅಲ್ಲಿ ಕಾರಿಲ್ಲವೆಂದರೆ ಕಾಲೇ ಕಳೆದುಕೊಂಡಂತೆ. ತನ್ನ ಅಪ್ಪ ಕಾರು ತರಲು ಹೋಗುತ್ತಿದ್ದಾನೆ ಎನ್ನುವುದೇ ಖುಷಿ ಗೆ ಕೌತುಕದ ಸಂಗತಿಯಾಗಿತ್ತು. ಜಾನುನೂ  ಅಲ್ಲಿ ಇಲ್ಲಿ ಅಡ್ಡಾಡಲು ಅನುಕೂಲವಾಗುತ್ತದೆಂದು ಖುಷಿಯಲ್ಲಿದ್ದಳು.  … … Read more

ಕನ್ನಡದ ಬರಹಗಳನ್ನು ಹಂಚಿ ಹರಡಿ

ಸಾಮಾನ್ಯ ಜ್ಞಾನ (ವಾರ 74): ಮಹಾಂತೇಶ್ ಯರಗಟ್ಟಿ

ಪ್ರಶ್ನೆಗಳು: 1.    ಕೇಂದ್ರ ಸಂಗೀತ – ನಾಟಕಅಕಾಡೆಮಿಯಅಧ್ಯಕ್ಷರಾಗಿದ್ದ ಮೊದಲ ಕನ್ನಡಿಗಯಾರು? 2.    ಸಿಸ್ಮೋಗ್ರಫಿ ಇದುಯಾವುದರಕುರಿತುಅಧ್ಯಯನವಾಗಿದೆ? 3.    ಉಕಾಯ್ ನೀರಾವರಿಯೋಜನೆಯಾವ ನದಿಗೆ ಸಂಬಂಧಿಸಿದೆ? 4.    ಭಾರತದಲ್ಲಿಅತಿದೊಡ್ಡರೇಡಿಯೋಟೆಲಿಸ್ಕೋಪ್‍ಎಲ್ಲಿದೆ? 5.    ಯು.ಪಿ.ಎಸ್(UPS) ನ ವಿಸ್ತøತರೂಪವೇನು? 6.    ಅಂಬಿಕಾತನಯದತ್ತಇದುಯಾರಕಾವ್ಯನಾಮ? 7.    1954ರಲ್ಲಿ ಪಾಟೀಲ ಪುಟ್ಟಪ್ಪನವರು ಹೊರಡಿಸಿದ ಪತ್ರಿಕೆಯಾವುದು? 8.    ನಳಂದ ವಿಶ್ವವಿದ್ಯಾಲಯಯಾವಧರ್ಮದ ತತ್ವಗಳನ್ನು ತಳಹದಿಯಾಗಿ ಹೊಂದಿತ್ತು? 9.    ಭಾರತದಲ್ಲಿಮೊದಲ ಬಾರಿಗೆರೈಲ್ವೆ ಮಾರ್ಗಆರಂಭವಾದಾಗಗವರ್ನರ್‍ಜನರಲ್‍ಯಾರಾಗಿದ್ದರು? 10.    ಚಂಪಾರಣ್ಯರೈತ ಚಳುವಳಿ ಇದುಯಾರ ಮುಂದಾಳತ್ವದಲ್ಲಿ ನಡೆಯಿತು? 11.    ರಾಷ್ಟ್ರಧ್ವಜದಲ್ಲಿರುವ ಬಿಳಿ ವರ್ಣಯಾವುದರದೋತ್ಯಕವಾಗಿದೆ? 12.    ರಾಷ್ಟ್ರಕೂಟರರಾಜ್ಯ ಸ್ಥಾಪನೆಗೆ ಅಡಿಪಾಯ ಹಾಕಿದದೊರೆಯಾರು? … Read more

ಕನ್ನಡದ ಬರಹಗಳನ್ನು ಹಂಚಿ ಹರಡಿ

ಕಾಣದ ಕಣ್ಣಿಗೊಂದು: ಪ್ರಶಸ್ತಿ ಪಿ.

ಬೆಳಗ್ಗೆ ಹೊಂಬಿಸಿಲಿನೊಂದಿಗೆ ಮಗುವ ನಗುವಿನಂತೆ ಸೌಮ್ಯವಾಗಿದ್ದ ವರುಣದೇವ ಸಂಜೆಯಾಗುತ್ತಿದ್ದಂತೆ ಕಾಳಿಯಂತೆ ಆರ್ಭಟಿಸತೊಡಗಿದ್ದ. ಒಂದಾನೊಂದು ಕಾಲದ ಕೆರೆಗಳನ್ನೇ ಆಪೋಷನ ತೆಗೆದುಕೊಂಡು ಎದ್ದು ನಿಂತ ಅಪಾರ್ಟುಮೆಂಟುಗಳನ್ನೆಲ್ಲಾ ಮತ್ತೆ ಕೆರೆಗಳನ್ನಾಗಿಸಿಯೇ ಬಿಡೋ ಸಂಕಲ್ಪದಲ್ಲಿದ್ದಾನಾ ಇವನಿಂದು ಎಂಬ ಭಯ ರಸ್ತೆಗಳಲ್ಲಿ ಹರಿಯುತ್ತಿದ್ದ ಮೊಣಕಾಲುದ್ದದ ನೀರ ನೋಡಿ ಕಾಡುತ್ತಿತ್ತು. ಹಿಂದಿನ ದಿನವಷ್ಟೇ ಹೊಸದಾಗಿ ಮಾಡಿದ ಟಾರ್ ರೋಡನ್ನೆಲ್ಲಾ ಅಗೆದು, ಮುಚ್ಚದೇ ಹಾಗೇ ಬಿಟ್ಟ ಗ್ಯಾಸ್ ಕೇಬಲ್ಲಿನವರಿಗೆ ಬಸ್ಸಿನ ಚಕ್ರ ಹೂತು ಕುಂತ ಡ್ರೈವರ್ರು ಶಾಪ ಹಾಕುತ್ತಿದ್ದ. ಹೊಂಡಗಳ ತಪ್ಪಿಸಿ ಸರಿ ರಸ್ತೆಯಲ್ಲಿ ನಡೆಸಲೋಸುಗ ನಿಧಾನವಾದ … Read more

ಕನ್ನಡದ ಬರಹಗಳನ್ನು ಹಂಚಿ ಹರಡಿ

ಮೌಢ್ಯತೆಯ ಕೊಡಲಿಗೆ ಕಾಂತತೆಯ ಕಾವು: ರೋಹಿತ್ ವಿ. ಸಾಗರ್

  ಕಬ್ಬಿಣದಂತಹ ಕೆಲವು ವಸ್ತುಗಳನ್ನು ಪ್ರೀತಿಯಿಂದ ಸೆಳೆದು ಕೊಳ್ಳುವ ವಿಶೇಷ ರೀತ್ಯ ವಸ್ತುಗಳನ್ನು ಆಯಸ್ಕಾಂತಗಳು ಎಂದು ಕರೆಯುತ್ತೇವೆ. ಅವುಗಳಿಗೆ ಈ ಆಯಸ್ಕಾಂತ ಎಂಬ ಹೆಸರು ಬಂದಿದ್ದು ಒಲವು ಎಂಬ ಅರ್ಥ ನೀಡುವ ಐಮಂತ್ ಎಂಬ ಫ್ರೆಂಚ್  ಭಾಷೆಯ ಪದದಿಂದ. ಇಲ್ಲಿ ಒಲವು ಎಂದರೆ ಕಬ್ಬಿಣದಂತಹ ವಸ್ತುಗಳ ಬಗೆಗಿರುವ ಪ್ರೀತಿ ಎಂದು ಬೇರೆ ಬಿಡಿಸಿ ಹೇಳಬೇಕಾಗಿಲ್ಲ ಅಲ್ಲವೇ. ಪ್ರಾನ್ಸಿನವರು ಮಾತ್ರ ವಲ್ಲ ನೈಸರ್ಗಿಕವಾಗಿ ದೊರೆಯುತ್ತಿದ್ದ ಆಯಸ್ಕಾಂತಗಳನ್ನು ಮೊದಲ ಬಾರಿ ಹಡಗು ದೋಣಿಗಳಲ್ಲಿ ದಿಕ್ಕು ತೋರಿಸುವ  ಸೂಜಿಗಲ್ಲುಗಳಾಗಿ ಬಳಸಿದ್ದ ಚೀನಿಯರು … Read more

ಕನ್ನಡದ ಬರಹಗಳನ್ನು ಹಂಚಿ ಹರಡಿ

ಝೆನ್ ಕತೆಗಳು: ಗೋವಿಂದ ರಾವ್ ವಿ. ಅಡಮನೆ

೧. ಮೀನಿನ ಕುರಿತು ತಿಳಿಯುವುದು. ಚುಆಂಗ್‌ ಝು ಒಂದು ದಿನ ತನ್ನ ಮಿತ್ರನೊಂದಿಗೆ ನದೀ ತಟದಲ್ಲಿ ನಡೆದುಕೊಂಡು ಹೋಗುತ್ತಿದ್ದರು.  ಚುಆಂಗ್‌ ಝು ತನ್ನ ಮಿತ್ರನಿಗೆ ಹೇಳಿದ, “ಮೀನುಗಳು ಈಜಾಡುತ್ತಿರುವುದನ್ನು ನೋಡು. ಅವು ಅದರಿಂದ ನಿಜವಾಗಿಯೂ ಸುಖಿಸುತ್ತಿವೆ.” “ನೀನು ಮೀನಲ್ಲವಲ್ಲ, ಆದ್ದರಿಂದ ಅವು ಸುಖಿಸುತ್ತಿವೆಯೋ ಇಲ್ಲವೋ ಎಂಬುದನ್ನು ನೀನು ನಿಜವಾಗಿಯೂ ತಿಳಿಯಲು ಸಾಧ್ಯವಿಲ್ಲ,” ಪ್ರತಿಕ್ರಿಯಿಸಿದ ಆ ಮಿತ್ರ. ಚುಆಂಗ್‌ ಝು ಹೇಳಿದ, “ನೀನು ನಾನಲ್ಲ. ಅಂದ ಮೇಲೆ ಮೀನುಗಳು ಸುಖಿಸುತ್ತಿವೆ ಎಂಬುದು ನನಗೆ ತಿಳಿದಿಲ್ಲ  ಎಂಬುದು ನಿನಗೆ ಹೇಗೆ … Read more

ಕನ್ನಡದ ಬರಹಗಳನ್ನು ಹಂಚಿ ಹರಡಿ

ಏನಿದು ಮೇಕೆದಾಟು???: ಅಖಿಲೇಶ್ ಚಿಪ್ಪಳಿ

ಕೊಡಗಿನಲ್ಲಿ ಹುಟ್ಟಿದ ಜೀವನಾಡಿ ನದಿ ಕಾವೇರಿಗೆ ಸಂಗಮ ಎಂಬಲ್ಲಿ ಅರ್ಕಾವತಿ ಎಂಬ ಮತ್ತೊಂದು ನದಿ ಸೇರುತ್ತವೆ. ಇಲ್ಲಿಂದ ಜಲಪಾತದೋಪಾದಿಯಲ್ಲಿ ಕಾವೇರಿ ದುಮ್ಮಿಕ್ಕುತ್ತಾಳೆ. ಕಡಿದಾದ ಕಣಿವೆಯಲ್ಲಿ ಸಾಗುವ ಕಾವೇರಿ ಸಂಗಮದಿಂದ ಮೂರುವರೆ ಕಿ.ಮಿ. ಸಾಗುವಷ್ಟರಲ್ಲಿ ಮೇಕೆದಾಟು ಸಿಗುತ್ತದೆ. ಹಿಂದೊಮ್ಮೆ ಹುಲಿಯೊಂದು ಮೇಕೆಯನ್ನು ಹಿಡಿಯಲು ಅಟ್ಟಿಸಿಕೊಂಡು ಬಂತಂತೆ. ಬೆದರಿದ ಮೇಕೆ ಜೋರಾಗಿ ಓಡಿ ಬಂದು ಜೀವವುಳಿಸಿಕೊಳ್ಳಲು ನದಿಯ ಈ ದಡದಿಂದ ಆ ದಡಕ್ಕೆ ಜಿಗಿಯಿತಂತೆ, ಹುಲಿಗೆ ಹಾರಲು ಸಾಧ್ಯವಾಗಲಿಲ್ಲ. ಇಲ್ಲಿ ಮೇಕೆಯ ಶೌರ್ಯವನ್ನು ಹೊಗಳಲು ಈ ಪ್ರದೇಶಕ್ಕೆ ಮೇಕೆದಾಟು ಎಂದು … Read more

ಕನ್ನಡದ ಬರಹಗಳನ್ನು ಹಂಚಿ ಹರಡಿ

’ಪಾನ ಮಹಿಮೆ’: ಗುಂಡುರಾವ್ ದೇಸಾಯಿ ಮಸ್ಕಿ

                                             ನನಗೆ ಇದುವರೆಗೂ ಅರ್ಥವಾಗದ ವಿಷಯವೆಂದ್ರೆ ಪಾರ್ಟಿ ಅಂದ್ರ ಜನ ಕುಡಿತ, ಕಡಿತಾ ಇರಬೇಕು ಅಂತ ಭಾವಸ್ತಾರಲ್ಲ ಯಾಕೆ ಅಂತ! ಅದು ಬಿಟ್ಟು ಸ್ವಾದಿಷ್ಟ ಭೋಜನ ಸವದ್ರ ಪಾರ್ಟಿ ಆಗಲ್ವಾ. ಇಂತಹ ವಿರೋಧ ಕಾರಣಕ್ಕಾಗಿಯೇ ನಾನು ಹಲವಾರು ಸಂಬಂಧಗಳನ್ನು ಕಳೆದುಕೊಂಡಿದ್ದೇನೆ. ಏನು ಚಟ ಮಾಡದ ಹುಂಬ ಎಂದು … Read more

ಕನ್ನಡದ ಬರಹಗಳನ್ನು ಹಂಚಿ ಹರಡಿ

ಕಾಡ ಹಾಡು: ಅಖಿಲೇಶ್ ಚಿಪ್ಪಳಿ

ಎ ಫಾರ್ ಆಪಲ್ ಯಾಕೆ ಅನಿಮಲ್ ಯಾಕಲ್ಲ? ಲಕ್ಷಗಟ್ಟಲೇ ಡೊನೇಷನ್ ತೆತ್ತು, ಅಸಾಧಾರಣವಾದ ಇಂಟರ್‍ಯೂನ ಎದುರಿಸಿ ಪುಟ್ಟಿಗೊಂದು ಸೀಟುಕೊಡಿಸಿ ನಿರಾಳವಾಗುವಂತಿಲ್ಲ. ಕ್ಲಾಸಿಗೆ ಮೊದಲಾಗಿ ಬರಬೇಕು, ಇದು ಎಲ್ಲಾ ತಂದೆ-ತಾಯಿಗಳ ಇಚ್ಛೆ. ಎಲ್.ಕೆ.ಜಿ.ಯಿಂದಲೇ ಟ್ಯೂಷನ್ ಶುರು. ಜೊತೆಗೆ ಪಠ್ಯೇತರ ಚಟುವಟಿಕೆಗಳಲ್ಲೂ  ಮುಂದಿರಬೇಕು. ಬಹುತೇಕ ಖಾಸಗಿ ಶಾಲೆಗಳಲ್ಲಿ ಹಾಗೂ ಸರ್ಕಾರಿ ಶಾಲೆಗಳಲ್ಲಿ ಇದೇ ನಿಯಮವಿದೆ. ಖಾಸಗಿ ಶಾಲೆಗಳು ಈ ಅಲಿಖಿತ ನಿಯಮವನ್ನು ಕಟ್ಟುನಿಟ್ಟಾಗಿ ಪಾಲಿಸಿ ಯಶಸ್ಸುಗಳಿಸುತ್ತಾರೆ. ಪಾಪ ಸರ್ಕಾರಿ ಶಾಲೆಗಳ ಶಿಕ್ಷಕರನ್ನೂ ಸರ್ಕಾರ ಎಲ್ಲಾ ಕೆಲಸಗಳಿಗೂ ಬಳಸಿಕೊಳ್ಳುತ್ತದೆಯಾದ್ದರಿಂದ ಈ ನಿಯಮವನ್ನು … Read more

ಕನ್ನಡದ ಬರಹಗಳನ್ನು ಹಂಚಿ ಹರಡಿ

ಭವ: ಪ್ರಶಸ್ತಿ ಪಿ.

ಮಧ್ಯಾಹ್ನದಿಂದಲೂ ಮಳೆಯ ಕಣ್ಣಾಮುಚ್ಚಾಲೆಯಾಟದಲ್ಲಿ ಕಾಮನಬಿಲ್ಲಿನ ಚಿತ್ತಾರಗಳ ಬಿಡಿಸಿ ಸುಸ್ತಾದ ಸೂರ್ಯ ಮೋಡಗಳ ಮರೆಯಲ್ಲಿ ವಿಶ್ರಾಂತಿ ತೆಗೆದುಕೊಳ್ಳುತ್ತಿದ್ದಾನೋ ಎಂಬಂತೆ ಕವಿದಿದ್ದ  ಮಬ್ಬುಗತ್ತಲು. ಇಲ್ಲಾಡಿ ಬೇಸರಗೊಂಡ ಮೋಡಗಳು ಇನ್ನೆಲ್ಲೋ ಹಾರಿದಂತೆ ಸೂರ್ಯ ಆಗಸವನ್ನೇ ಪಟವನ್ನಾಗಿಸಿ ಬಿಡುವು ಕಳೆಯುತ್ತಿದ್ದ . ಹಳದಿ ಕೇಸರಿಗಳ ಚಿತ್ತಾರ ಬಿಡಿಸುತ್ತಿದ್ದ ರವಿ, ಹೊಗೆಯುಗುಳುತ್ತಿದ್ದ ಬಸ್ಸುಗಳು, ದಿನವಿಡೀ ಸುರಿದ ಮಳೆಯಿಂದ ತಂಪಾದ ದಾರಿಪಕ್ಕದ ಮರಗಳು, ಕೊಚ್ಚೆಯಿಂದ ಕಾಲಿಡಲೂ ಆಗದಂತಹ ರಸ್ತೆಯ ಇಕ್ಕೆಲಗಳು..ಬದುಕೂ ಹೀಗೆ ಅಲ್ಲವೇ ? ಚಂದವೆಂದುಕೊಂಡ್ರೆ ಚಂದ ಚಂದ. ಗೋಳೆಂದುಕೊಂಡ್ರೆ ಗೋಳೇ ಗೋಳು ! ಪ್ರಕೃತಿಗೆ … Read more

ಕನ್ನಡದ ಬರಹಗಳನ್ನು ಹಂಚಿ ಹರಡಿ

ಮೂವರ ಕವನಗಳು: ಮಲ್ಲಿಕಾರ್ಜುನ ಗೌಡ್ರು, ರಾಘವೇಂದ್ರ ಇ. ಆಶಾದೀಪ

೧) ಸಾಕ್ಷಿ: ನಾನು ಕೊಟ್ಟ ಕಾಣಿಕೆಗಳಿಗೆ ನಿನ್ನ ನೆನಪುಗಳೇ.. ನನಗೆ ಸಾಕ್ಷಿ.! ನೀನು ಕೊಟ್ಟ ನೆನಪುಗಳಿಗೆ ನನ್ನ ಕಣ್ಣೀರ ಹನಿಗಳೇ.. ನಿನಗೆ ಸಾಕ್ಷಿ..!! ೨) ಶ್ರೀಮಂತ: ನಾನು ನೋವುಗಳ  ಆಗರ್ಭ ಶ್ರೀಮಂತ ನಾ ಬಚ್ಚಿಟ್ಟ ಆಸ್ತಿ.. ಯಾರೂ ಕೇಳದ, ಯಾರೂ ಬೇಡದ, ಯಾರೂ ಕದಿಯದ, 'ಕರಗದ ಕಣ್ಣೀರ ಹನಿಗಳು' ನಾನು ನೋವುಗಳ ಆಗರ್ಭ ಶ್ರೀಮಂತ -ಮಲ್ಲಿಕಾರ್ಜುನ ಗೌಡ್ರು           ಕಾಯುವಿಕೆ ಜಗದ ನಿಯಮ ಕಾಡಿಸದಿರು ಓ ಸಖೀ ನೀ ನನ್ನಿಂದ ದೂರಾಗಿ … Read more

ಕನ್ನಡದ ಬರಹಗಳನ್ನು ಹಂಚಿ ಹರಡಿ

’ಪ್ರೇಮಕಾವ್ಯ’ ಕಾದಂಬರಿ ಕುರಿತು: ವೀರಣ್ಣ ಮಂಠಾಳಕರ್, ಬಸವಕಲ್ಯಾಣ

ಕಾವ್ಯಶ್ರೀ ಮಹಾಗಾಂವಕರ್ ಅವರ ಸಾಮಾಜಿಕ ಕಾದಂಬರಿ ’ಪ್ರೇಮಕಾವ್ಯ’ ಜಾತಿಯೆಂಬ ಕಂದಾಚಾರದ ನಡುವೆ ಪ್ರೇಮಿಗಳಿಬ್ಬರೂ ಸಿಕ್ಕಿ ಬೀಳುವ ಕಥಾ ವಸ್ತು ಹೊಂದಿದೆ. ಸರಳ ನಿರೂಪಣೆ, ಸರಾಗವಾಗಿ ಓದಿಸಿಕೊಂಡು ಹೋಗುವ ಸಂಭಾಷಣೆ, ಯುವ ಪ್ರೇಮಿಗಳಿಬ್ಬರು ಪ್ರೀತಿಗಾಗಿ ನಡೆಸುವ ಹೋರಾಟ ಮನ ಮುಟ್ಟುತ್ತದೆ. ಬಸ್ ಪ್ರಯಾಣದ ಮೂಲಕ ಎರಡು ಹೃದಯಗಳ ಮಧ್ಯೆ ಆಗುವ ತಲ್ಲಣಗಳು, ಅಲ್ಲಿಂದಲೇ ಶುರುವಾಗುವ ಪರಿಚಯ ಅರಿಯದೇ ಹುಟ್ಟಿಕೊಳ್ಳುವ ಪ್ರೀತಿ.  ಬ್ರಾಹ್ಮಣ ಜಾತಿಯ ಕಟ್ಟುಪಾಡುಗಳಿಗೆ ಕಟಿಬಿದ್ದು ಹೆತ್ತವರು ನಡೆಸುವ ದರ್ಪ, ತಾಯಿ ಭಾಗ್ಯಳ ಸಹಜ ಉಪದೇಶ, ಹಲವು ಕಷ್ಟ, … Read more

ಕನ್ನಡದ ಬರಹಗಳನ್ನು ಹಂಚಿ ಹರಡಿ