ಕಪ್ಪೆ ಉಚ್ಚೆಯೂ ಬೆಳ್ಳಿ ಕಪ್ಪೆಯೂ. . . : ರಮೇಶ್ ನೆಲ್ಲಿಸರ. ತೀರ್ಥಹಳ್ಳಿ

ಮೀನುಶಿಕಾರಿಯಾಗದೆ ಹದಿನೈದು ದಿನಗಳೇ ಆಗಿ ಹೋಗಿದ್ದವು, ಸಿಕ್ಕ ಒಂದೆರಡು ಸೋಸಲು ಸಾಂಬಾರಿಗೆ ಸರಿಯಾಗಿ, ಅಲ್ಲಿ ಇಲ್ಲಿ ಕೂಲಿಮಾಡಿಕೊಂಡು ರಾಮಯ್ಯ ಹೇಗೋ ಬಿಕನಾಸಿ ಜೀವನದ ಗಾಲಿಯಿರದ ಚಕ್ಕಡಿಯನ್ನು ನೂಕುತ್ತಿದ್ದ ಅಥವಾ ಅದೇ ಇವನನ್ನು ದಿಕ್ಕುದಸೆಯಿಲ್ಲದೆ ಎಳೆಯುತ್ತಿತ್ತು. ನಲವತ್ತು ವರ್ಷದ ಹೆಂಡತಿಗೆ ಮತ್ತು ಐವತ್ತು ವರ್ಷದ ಆತನಿಗೆ ಜನಿಸಿದ ನಾಗನೆಂಬ ಮಗ ಹೇಗೋ ಹುಟ್ಟಿದರಾಯಿತೆಂದು ಹುಟ್ಟಿದಂತಾಗಿ ಐದು ವರ್ಷ ಸರಿದರೂ ನಾಲ್ಕೋ ಐದೋ ಕೆಜಿ ಮಾಂಸವನ್ನು ಎಲುಬು ಚಕ್ಕಳದ ದೇಹದಲ್ಲಿ ಅಲ್ಲಲ್ಲಿ ಅಡಗಿಸಿಟ್ಟುಕೊಂಡು ಒಂದು ಜೀವವಿರಬಹುದೇನೋ ಎಂದು ಅನಿಮಾನಿಸುವಂತೆ ಬದುಕಿದ್ದ. … Read more

ಅವಮಾನವೇ ಆದರ್ಶವಾದ ಕಥೆ: ಅಯ್ಯಪ್ಪ ಕಂಬಾರ

ಊರ ಅಗಸಿ ಬಾಗಿಲಿನ ಬಳಿ ಕಾರು ಬಂದ ತಕ್ಷಣ ಡ್ರೈವರ್ ಸರ್. . ಸರ್. . ಎದ್ದೇಳಿ ಸರ್ ನಿಮ್ಮ ಊರು ಬಂತು ಎಂದ. ಆಗ ಸಮಯ 11 ಗಂಟೆ ರಾತ್ರಿ. ಆಜೀವ ದಡಬಡಾಯಿಸಿ ಎದ್ದು ಕಾರು ನಿಲ್ಲಿಸು ಎಂದವನೇ ಕಣ್ಣು ಪಿಚ್ಚು ಒರೆಸಿಕೊಳ್ಳುತ್ತ, ಮುಖದಲ್ಲಿ ಎಲ್ಲಿಂದಲೋ ನಗು ಕಡ ತಂದು ಕಾರಿನ ಗಾಜು ಇಳಿಸಿ ಆಕಡೆ ಈಕಡೆ ಹಿಂದೆ ಮುಂದೆ ಮೇಲೆ ಕೆಳಗೆ ನೋಡುತ್ತ, ಇದ್ದಕ್ಕಿದ್ದವನೆ ಕೆಳಗಿಳಿದು, ಬಾಗಿ ನೆಲ ಮುಟ್ಟಿ ನಮಸ್ಕರಿಸಿ ಮೇಲೆದ್ದ. ಬೀದಿ … Read more

ಮುಂಬಯಿ ಮಾವ: ಶೀಲಾ ಭಂಡಾರ್‌ಕರ್, ಮೈಸೂರು

ಮೂಲ ಕೊಂಕಣಿ: ವಲ್ಲಿ ಕ್ವಾಡ್ರಸ್, ಅಜೆಕಾರು. ಕನ್ನಡಕ್ಕೆ ಅನುವಾದ: ಶೀಲಾ ಭಂಡಾರ್‌ಕರ್, ಮೈಸೂರು ‘ಮುಂಬೈ ಮಾವ ತೀರಿ ಹೋದನಂತೆ.’ ಬೆಳಿಗ್ಗೆ ಎದ್ದು ಅಡುಗೆಮನೆಯೊಳಗೆ ಚಹ ಮಾಡಲು ನೀರು ಕುದಿಯಲಿಡುವ ಸಮಯಕ್ಕೆ ಸರಿಯಾಗಿ ವಾಟ್ಸ್ ಆ್ಯಪ್‍ಗೆ ಬಂದ ಮೆಸೆಜ್ ಓದಿದ ರೀಟಾಳ ಮನಸ್ಸಿನಲ್ಲಿ ಯಾವುದೇ ಭಾವನೆಗಳು ಹುಟ್ಟಲಿಲ್ಲ. ಅವನಿಷ್ಟು ದಿನ ಎಲ್ಲಿದ್ದ? ಯಾರ ಜತೆಯಲ್ಲಿದ್ದ? ಏನಾಗಿದ್ದ? ಎನ್ನುವುದು ಯಾರಿಗೂ ಸರಿಯಾಗಿ ತಿಳಿದಿರಲಿಲ್ಲ. ಆದರೂ ಹೋದ ವಾರ, ಊರಿನ ಕಾಲೇಜಲ್ಲಿ ಓದುತ್ತಿರುವ ಸೋದರತ್ತೆಯ ಮಗನೊಬ್ಬ “ಫ್ಯಾಮಿಲಿ” ಎನ್ನುವ ಹೆಸರಿನ ವಾಟ್ಸ್ … Read more

ಚಿಮಣಿ ಬುಡ್ಡಿ: ಚೈತ್ರಾ ವಿ.ಮಾಲವಿ

ಕೇರಿಯ ಬೀದಿ ದೀಪದ ಮಂದ ಬೆಳಕಲ್ಲಿ ತನ್ನ ಗುಡಿಸ್ಲು ಮುಂದ ಓದ್ತಾ ಕುಂತಿದ್ಲು ಪಾರಿ. “ಲೇ.. ಪಾರಿ, ಚಿಮಣಿ ಬುಡ್ಡಿ ಎಲ್ಲಿಟ್ಟಿ? ಕಾಣವಲ್ತು” ಒದರಿದ್ಲು ಅವ್ವ ಹುಲಿಗೆವ್ವ. “ಯವ್ವಾ, ಅಲ್ಲೇ ಇಟ್ಟಿನಿ ನೋಡ್ಬೇ” ಕುಂತಲ್ಲೇ ಉಸರಿದಳು. ಕತ್ಲು ಕವಿದ ಗುಡಿಸ್ಲು ಒಳಗ ತಡಕಾಡ್ತಿದ್ದ ಹುಲಿಗೆವ್ವಗ ಅಡಿಗೆ ಮನಿ ಮೂಲ್ಯಾಗ ತಣ್ಣಗ ಕುಂತಿದ್ದ ಚಿಮಣಿ ಬುಡ್ಡಿ ಕರ್ರಗೆ ಕಾಣ್ತು. ಏನೇನೋ ಗುನುಗುತ್ತಾ ಚಿಮಣಿ ಬುಡ್ಡಿಯನ್ನು ಕೈಗೆ ತಕ್ಕಂಡು, ಗುಡಿಸ್ಲು ನಡು ಕಂಬಕ ತಂದಿಟ್ಲು. ಬೆಂಕಿಪಟ್ಣ ಕಾಣ್ದೇ ಪಾರಿ ಮ್ಯಾಲಾ … Read more

ಬದಲಾಗುವ ಬಣ್ಣಗಳು (ಕೊನೆಯ ಭಾಗ): ಅಶ್ಫಾಕ್ ಪೀರಜಾದೆ

ಇಲ್ಲಿಯವರೆಗೆ -7 – ಪ್ರತೀಕ ಮೊದಲು ಬಂದವನೇ ಚೇತನನ್ನು ಭೇಟಿಯಾದ. ಚೇತನ ತನ್ನ ಹೆಂಡ್ತಿ ಮಕ್ಕಳನ್ನು ತೋರಿಸಿ ತಾನೀಗ ಸಂಸಾರ ಸಮೇತ ಹಾಯಾಗಿರುವುದಾಗಿ ಹೇಳಿದ “ಅವಳ ಸಂಗ ಬಿಟ್ಟು ಬಿಟ್ಟಿದ್ದೇನೆ. ಆದರೂ ಒಮ್ಮೊಮ್ಮೆ ಅವಳು ನೆನಪಾಗಿ ಕಾಡುತ್ತಾಳೆ ಒಂದೆರಡು ಪೆಗ್ಗು ಹಾಕಿ ಮಲಗಿ ಬಿಡುತ್ತೇನೆ” ಎಂದು ಹೇಳಿದಾಗ ಪ್ರತೀಕನಿಗೆ ಆಶ್ಚರ್ಯವಾಗುತ್ತದೆ. “ಗಂಡ ಹೆಂಡತಿಗಿಂತ ಹೆಚ್ಚಾಗಿ ಇದ್ದವರು ನೀವು… ಇಬ್ಬರೂ ಇಷ್ಟು ಸುಲಭವಾಗಿ ಹೇಗೆ ಅಗಲಿದಿರಿ..?” ಎಂದು ಪ್ರತೀಕ ಪ್ರಶ್ನೆಸಿದಾಗ ಏನು ಮಾಡಲಿ ಅನಿವಾರ್ಯವಾಯಿತು. ಈ ಮದುವೆ ಸಂಬಂಧ … Read more

ಸೆಳತ: ಕಿರಣ್. ವ್ಹಿ, ಧಾರವಾಡ

ಸುಧಾಕರ ಹಾಗು ಸ್ವಾತಿ ರಾತ್ರೋರಾತ್ರಿ ಊರು ಬಿಟ್ಟು ಹೊರಟು ಹೋದರು. ಇಬ್ಬರದು ಮೂರು ವರ್ಷಗಳ ಪ್ರೇಮ್ ಕಹಾನಿ ಆಗಿದ್ದರಿಂದ ಸೆಳತ ಹೆಚ್ಚಿಗೆಯೆ ಇತ್ತು. ಸುಧಾಕರ, ಆಟೊ ಓಡಿಸಿಕೊಂಡು ನಾಲ್ಕು ಕಾಸು ಸಂಪಾದನೆ ಮಾಡುತಿದ್ದ. ಅದ್ಹೇಗೊ ಇಬ್ಬರ ನಡುವೆ ಪ್ರೇಮಾಂಕುರವಾಗಿಬಿಟ್ಟಿತ್ತು. ಸುಧಾಕರನ ತಾಯಿ ಜಲಜಮ್ಮನಿಗೆ, ಗಂಡ ತೀರಿ ಹೋದಾಗಿನಿಂದ ಕೆಲಸ ಮಾಡಬೇಕಾದ ಅನಿವಾರ್ಯತೆ ಬಂದಿತ್ತು. ಬಡತನವೊ, ಅಥವ ಮನೆಯ ಯಜಮಾನನಿಲ್ಲವೆಂಬ ಕಾರಣಕೋ, ಸುಧಾಕರನಿಗೆ ವಿದ್ಯೆ ಅಷ್ಟೊಂದು ತಲೆಗೆ ಹೋಗಲಿಲ್ಲ. ಕಾಲಕಳದಂತೆ ಓದಬೇಕೆಂಬ ಹಂಬಲವು ಕಡಿಮೆಯಾಯಿತು. ತಾಯಿಗೆ ವಯಸ್ಸಾಗುತ್ತಿದೆ ಎಂದು … Read more

ಧರ್ಮಸಂಕಟ: ಗಿರೀಶ ಜಕಾಪುರೆ

ಹಿಂದಿ ಮೂಲ – ಪ್ರೇಮಚಂದ ಕನ್ನಡಕ್ಕೆ – ಗಿರೀಶ ಜಕಾಪುರೆ 1. ‘ಪುರುಷರಲ್ಲಿ ಸ್ತ್ರೀಯರಲ್ಲಿ ಬಹಳ ವ್ಯತ್ಯಾಸವಿರುತ್ತದೆ. ನಿಮ್ಮ ಮನಸ್ಸು ಕನ್ನಡಿಯಂತೆ ಕಠಿಣವಾಗಿರುತ್ತದೆ, ಮತ್ತೆ ನಮ್ಮದು ಹೂವಿನಂತೆ ಮೃದು. ಹೂಗಳು ವಿರಹದ ಶಾಖ ತಾಳಲಾರವು’ ‘ಹರಳು ತಾಗಿದರೂ ಸಾಕು ಕನ್ನಡಿ ಚೂರಾಗುತ್ತದೆ. ಮೃದು ವಸ್ತುಗಳಲ್ಲಿ ಲೌಚಿಕತೆ ಇರುತ್ತದೆ’ ‘ಬಿಡು, ಮಾತಲ್ಲಿ ಮರಳು ಮಾಡಬೇಡ. ದಿನವಿಡೀ ನೀ ಬರುವ ದಾರಿ ನೋಡುತ್ತೇನೆ, ರಾತ್ರಿಯಿಡಿ ಗಡಿಯಾರದ ಮುಳ್ಳುಗಳನ್ನು. ಇಷ್ಟಾದ ಮೇಲೆ ಹೇಗೋ ಕಷ್ಟಪಟ್ಟು ನಿನ್ನ ದರ್ಶನವಾಗುತ್ತದೆ’ ‘ನಾನು ಸದಾಕಾಲ ನಿನ್ನನ್ನು … Read more

ಬದಲಾಗುವ ಬಣ್ಣಗಳು (ಭಾಗ 3): ಅಶ್ಫಾಕ್ ಪೀರಜಾದೆ

ಇಲ್ಲಿಯವರೆಗೆ – 5 – ಚೇತನ ವಿವಾಹದ ನಂತರ ಇನ್ನಷ್ಟು ವಿಚಲಿತನಾದ. ಇನ್ನಷ್ಟು ದ್ವಂದ್ವಕ್ಕೆ ಒಳಗಾದ ಮಾನಸಿಕವಾಗಿ ಕಾವೇರಿಯೊಂದಿಗೆ ಹೊಂದಾಣಿಕೆ ಸಾಧ್ಯವಾಗುತ್ತಿರಲಿಲ್ಲ. ಪವಿತ್ರೆಯ ನೆನಪು ಅವನೆದೆಯಲ್ಲಿ ಬಿರುಗಾಳಿಯಾಗಿ ಬೀಸಿದಾಗ ಈತ ತರಗೆಲೆಯಂತಾಗಿ ಬಿಡುತ್ತಿದ್ದ. ತತ್ತರಿಸಿ ಹೋಗುತ್ತಿದ್ದ. ಮನದ ಯಾತನೆಯ ತೀವ್ರತೆ ಕಡಿಮೆಗೊಳಿಸಲು ಮತ್ತೇ ಮತ್ತೇ ಅವನು ಕುಡಿತಕ್ಕೆ ಶರಣಾಗುತ್ತಿದ್ದ. ಅದೇ ಅಮಲಿನಲ್ಲಿ ಎಲ್ಲ ಮನಸಿನ ಎಲ್ಲ ತಡೆಗೊಡೆಗಳು ದಾಟಿ ಮತ್ತೆ ಪವಿತ್ರೆಯ ಮನೆಯ ದಾರಿ ಹಿಡಿಯುತ್ತಿದ್ದ. ಪವಿತ್ರಳ ಮನೆ ಇವನಿಗೆ ಮಾನಸಿಕ ನೆಮ್ಮದಿಯ ಕೇಂದ್ರವಾಗಿತ್ತು. ಈತನ ಮದ್ವೆಯ … Read more

ಬದಲಾಗುವ ಬಣ್ಣಗಳು (ಭಾಗ 2): ಅಶ್ಫಾಕ್ ಪೀರಜಾದೆ

ಇಲ್ಲಿಯವರೆಗೆ  – 3 – ತಿಂಗಳ ಬಳಿಕ ಪ್ರೇಮಾ ಮರಳಿ ಬಂದ ಸುದ್ದಿ ಕತ್ತಲೆ ಕವಿದ ಚೇತನನ ಮನಸ್ಸಿಗೆ ಸುರ್ಯೋದಯವಾಗಿತ್ತು. ತಿಂಗಳಿಂದ ಶೇವ್ ಕಾಣದ ಮುಖದ ತುಂಬ ಗಡ್ಡ ಮೀಸೆ… ಬಾಚನಿಗೆ ಕಾಣದ ತಲೆ… ಕೆದರಿದ ಕೂದಲು… ಮೈಮೇಲೆ ಕೊಳೆಯಾದ ಬಟ್ಟೆಗಳು… ಹಳ್ಳಿ ಹುಂಬನಂತೆ ಹುಚ್ಚನಂತೆ ತೋರುತ್ತಿದ್ದ. ಹಾಗೇ ಸೀದಾ ಪ್ರೇಮಾಳ ಮನೆಯತ್ತ ಹೆಜ್ಜೆ ಹಾಕಿದ್ದ. ಡೋರ ಮುಂದೆ ನಿಂತು ಬೆಲ್ ಮಾಡಿದ ಕೆಲವೇ ಕ್ಷಣಗಳಲ್ಲಿ ಪ್ರೇಮಾಳ ತಂದೆ ಬಾಗಿಲು ತೆರೆದು ಚೇತನನ ಸ್ಥಿತಿ ನೋಡಿ ಸ್ವಲ್ಪ ಗಾಬರಿಯಾದರು. ಏಕೆಂದರೆ ಮೊದಲಿನಿಂದಲೂ ಚೇತನ ಪ್ರೇಮಾಳ … Read more

ಜೈನಾಬಿ, ರೋಸ್ ಮೇರಿ, ಮತ್ತು ಮಾಯಾ ಬಾರ್:  ವಸುಧಾ ಪ್ರಭು

ಟಕ್-ಟಕ್-ಟಕ್ ಮಾಯಾ ಬಾರಿನ ಮೇಲೆ ನಿನ್ನೆ ಮುನ್ಸಿಪಾಲಿಟಿಯವರು ಮಾಡಿದ ದಾಳಿಯಿಂದಾಗಿ ಎಂದಿಗಿಂತ ಒಂದೂವರೆ ಗಂಟೆಯ ಮೊದಲೇ ಫ್ಲ್ಯಾಟಿಗೆ ಬಂದರೆ, ನೆರೆಯ ಫ್ಲ್ಯಾಟ್ ನಲ್ಲಿರುವ ಅಮ್ಮಿ ಬಾಗಿಲು ಬಡಿದಾಗಲೇ ಜೈನಾಬಿಗೆ ಎಚ್ಚರವಾಯಿತು. ಕಣ್ಣು ಸರಿಯಾಗಿ ಬಿಡುತಿದ್ದಂತೆಯೇ ಎದ್ದು ಮೊದಲು ಬಚ್ಚಲಿಗೆ ಧಾವಿಸಿದಳು. ಒಂದರ ಮೇಲೊಂದು ಬಾಲ್ದಿ ಇಟ್ಟಂತೆ ಬಾಲ್ದಿಯನ್ನು ನಲ್ಲಿ ಕೆಳಗೆ ನೀರು ತುಂಬಲು ಇಟ್ಟು ಟೂತ್ ಪೇಸ್ಟ್ ಬ್ರಶ್ ಹಿಡಿದು ಹಲ್ಲುಜ್ಜತೊಡಗಿದಳು. ನಾಲ್ಕು ಅಂತಸ್ತಿನ ಕಟ್ಟಡದಲ್ಲಿ ನಾಲ್ಕನೇ ಅಂತಸ್ತಿನಲ್ಲಿರುವ ಇರುವ ಇವಳ  ಮನೆಯ ನಲ್ಲಿಯಲ್ಲಿ ಸಪೂರವಾಗಿ ಕೇವಲ … Read more

ಬದಲಾಗುವ ಬಣ್ಣಗಳು (ಭಾಗ 1): ಅಶ್ಫಾಕ್ ಪೀರಜಾದೆ

– 1 – ಡಿಶಂಬರ್ – 25, ಕ್ರಿಸಮಸ್ ಹಬ್ಬ. ಯೇಸು ಈಗಲೂ ಆ ಗೋಡೆಯ ಮೇಲೆ ನೇತಾಡುತ್ತಿದ್ದ. ಪ್ರತಿ ಹೊಸ ವರ್ಷದಂದು ಯೇಸು ಚಿತ್ರವಿರುವ ದಿನದರ್ಶಿಕೆ ತಂದು ಪವಿತ್ರ ತನ್ನ ಮನೆಯಲ್ಲಿ ನಿತ್ಯ ಆರಾಧನೆ ಸಲ್ಲಿಸುವದನ್ನು ರೂಡಿಸಿಕೊಂಡಿದ್ದಳು. ಮನುಕುಲವನ್ನೇ ಉದ್ಧರಿಸಿದ ಯೇಸುತನ್ನನ್ನು ಕೂಡ ಒಂದಿಲ್ಲ ಒಂದು ದಿನ ಉದ್ಧರಿಸುತ್ತಾನೆ ಎನ್ನುವ ಬಲವಾದ ನಂಬಿಕೆ ಅವಳದು. ಆ ಕ್ಯಾಲೆಂಡರದಲ್ಲಿ ಡಿಶೆಂಬರ 1980 ಎಂದು ಅಚ್ಚಾದ ಕೊನೆ ತಿಂಗಳ ಪುಟದ ಬಣ್ಣವೆಲ್ಲ ಮಾಸಹೋಗಿ ಹೊಗೆ ಹಿಡದವರಂತೆ ಬಣ್ಣ ಬದಲಾಗಿ ಸ್ಪಷ್ಟವಾಗಿ ಕಾಣದ ದಿನಾಂಕಗಳ … Read more

ಮೂಕ ಕಹಳೆ: ಗಿರಿಜಾ ಜ್ಞಾನಸುಂದರ್

ಕೈಯಲ್ಲಿ ಮಿಠಾಯಿ ಡಬ್ಬಿ ಹಿಡಿದು ಅಮ್ಮನ ಬಳಿ ಓಡಿ ಬಂದಳು ಆರತಿ, “ಅಮ್ಮ, ನಾನು     ಎಸ್ಎಸ್ಎಲ್ಸೀ ಪಾಸ್ ಆದೆ, ಫಸ್ಟ್ ಕ್ಲಾಸ್” ಎಂದು ಹೇಳುತ್ತಾ ಅಮ್ಮನ ಬಾಯಿಗೆ ಸಿಹಿಯನ್ನು ತುರುಕಿದ್ದಳು. ಅಮ್ಮನ ಖುಷಿಯನ್ನು ಅಮ್ಮ ತನ್ನ ಮುಗುಳ್ನಗೆಯಲ್ಲಿ ತಿಳಿಸಿದಳು. ಮನೆಯಲ್ಲಿ ಸಂಭ್ರಮ. ಒಂದು ವಾರವಾಗಿತ್ತು. ಯಾವ ಕಾಲೇಜು ಸೇರುವುದು, ಯಾವ ವಿಷಯ ಓದುವುದು ಎಂದು ಚರ್ಚೆ ನಡೆಯುತ್ತಿತ್ತು. ಆರತಿಯ ಅಜ್ಜಿ ಮನೆಗೆ ಬಂದರು. ಅಜ್ಜಿಗೂ ಸಿಹಿ ಕೊಟ್ಟದಾಯಿತು, ಸಂತೋಷ ಹಂಚಿದ್ದಾಯಿತು. ಆದರೂ ಅಜ್ಜಿ ಯಾಕೋ ಸಂತೋಷದಲ್ಲಿದ್ದಂತಿರಲಿಲ್ಲ. ಆರತಿಯ … Read more

ಕಾಣೆಯಾದವರು !!!: ಸತೀಶ್ ಶೆಟ್ಟಿ ವಕ್ವಾಡಿ

“ಸಾರ್, ಸಾರ್, ನಾಗೇಶ್ ಮೇಸ್ಟ್ರು ಕಾಣೆಯಾಗಿದ್ದರಂತೆ !!.” ಬೆಳ್ಳಂ ಬೆಳಿಗ್ಗೆ ಪ್ರಾಂಶುಪಾಲರ ಕಚೇರಿಗೆ ಎದುರುಸಿರು ಬಿಡುತ್ತಾ ನುಗ್ಗಿದ ಕಾಲೇಜು ಕ್ಲರ್ಕ್ ರೂಪ ಗಾಬರಿ ಮತ್ತು ದುಗುಡದಿಂದ ಹೇಳಿದಾಗ, ಪ್ರಾಂಶುಪಾಲರಾದ ನಾರಾಯಣ ಉಪಾಧ್ಯಾಯರಿಗೆ ಜೀವ ಬಾಯಿಗೆ ಬಂದಂತಾಯಿತು. ಆಗ ತಾನೆ ಕಾಲೇಜಿಗೆ ಬಂದು ತಮ್ಮ ಛೇಂಬರಿನ ದೇವಮೂಲೆಯಲ್ಲಿದ ದೇವರ ಫೋಟೋಕ್ಕೆ ಹೂ ಹಾರಹಾಕಿ, ಉದುಕಡ್ಡಿ ಹಚ್ಚುತ್ತಿದ್ದವರಿಗೆ ರೂಪ ಹೇಳಿದ ವಿಷಯ ಬರಸಿಡಿಲು ಬಡಿದಂತಾಯಿತು. ಕೈಲಲ್ಲಿದ್ದ ಉದುಕಡ್ಡಿಯನ್ನು ಅಲ್ಲೆ ಬಿಟ್ಟು ಸೀದಾ ಸಿಟಿಗೆ ಬಂದು ಕೂತ ಉಪಾಧ್ಯಾಯರು ಗಾಬರಿಗೆ ಪಕ್ಕದಲ್ಲಿದ್ದ … Read more

ಕಾಮಾಟಿಪುರದ ರಾಣಿ: ಜೆ.ವಿ.ಕಾರ್ಲೊ

ಇಂಗ್ಲಿಷಿನಲ್ಲಿ: ಎಸ್.ಹುಸೇಯ್ನ್ ಝೈದಿ/ ಜೇನ್ ಬೋರ್ಜೆಸ್ ಕನ್ನಡಕ್ಕೆ: ಜೆ.ವಿ.ಕಾರ್ಲೊ ಅವಳಿಗೆ ವಧುವಿನಂತೆ ಶೃಂಗರಿಸಿ ಮಂಚದ ಮೇಲೆ ಕುಳ್ಳಿರಿಸಿ ಸುತ್ತ ಗುಲಾಬಿ ಪಕಳೆಗಳನ್ನು ಹರವಲಾಗಿತ್ತು. ತುಟಿಗಳಿಗೆ ಗಾಢವಾದ ಕೆಂಪು ಬಣ್ಣವನ್ನು ಬಳಿದು ದೊಡ್ಡದಾದ ಮೂಗುತಿಯನ್ನು ತೊಡಿಸಿದ್ದರು. ಆ ಕೋಣೆಯಲ್ಲಿ ಪುರಾತನ ಗ್ರಾಮಫೋನೊಂದು ಹಳೆ ಹಿಂದಿ ಹಾಡನ್ನು ಪದೇ ಪದೇ ಹಾಡುತ್ತಿತ್ತು. ಮೊದಲರಾತ್ರಿಯ ವಾತಾವರಣವನ್ನು ಅಲ್ಲಿ ಸೃಷ್ಟಿಸಲಾಗಿತ್ತು. ಆದರೆ ಮಧುಗೆ ಇದಾವುದರ ಪರಿವೆಯೂ ಇರಲಿಲ್ಲ. ತನ್ನನ್ನೇಕೆ ಇಲ್ಲಿ ತಂದು ಕುಳ್ಳಿರಿಸಿದ್ದಾರೆಂದು ಅವಳಿಗಿನ್ನೂ ಅರ್ಥವಾಗಿರಲಿಲ್ಲ. ಒಮ್ಮೆಲೆ ಬಾಗಿಲು ತೆರೆದು ಒಳಗೆ ಬಂದ … Read more

ವಂಶೋದ್ಧಾರ !: ಅಶ್ಫಾಕ್ ಪೀರಜಾದೆ

ಪಾತರಗಿತ್ತಿಯಂತಾ ಚಂಚಲ ಚಲ್ವಿ ಈ ಪಾರಿ! ಕಡ್ಡೀಲೇ ಬರದಾಂಗ ಬಳಕು ಶರೀರದ ವೈಯ್ಯಾರಿ !! ನಡದರ ನಾಟ್ಯ ನವಿಲಿನ್ಯಾಂಗ„ !! ಉಲಿದರ ಕೋಗಿಲೆ ಹಾಡಿದಾಂಗ„ !!! ಹಡದವರ ಮುದ್ದಿನ ಮಗಳಾಗಿ ಆಡಕೊಂತ ಮಾಡಕೊಂತ, ಹಂಗ„ ಚಾರುಚೂರು ಸಾಲೀನೂ ಕಲಕೊಂತ ಬೆಳೆದ ಹುಡ್ಗಿ ಒಂದಿವ್ಸ ದೊಡ್ಡಾಕಿ ಆದ ಸುದ್ದಿ ಮಲೇರಿಯಾ ಜ್ವರದಾಂಗ ಸುತ್ತ ಹಳ್ಳಿಗೆಲ್ಲ ಹರಡಿ, ಮೊದಲ„ ಅವಳ ರೂಪಲಾವಣ್ಯ ಮನಸಿನ್ಯಾಗ ತುಂಬಕೊಂಡ ಕನಸ ಕಾಣಾಕ ಹತ್ತಿದ ಪಡ್ಡೆ ಹುಡಗರ ನಿದ್ದಿಗೆಡಸಿತ್ತ. ಥ್ವಾಡೆ ಮಂದಿಗೆ ಈ ವಿಶ್ಯಾ ಮೊಜಿನ … Read more

ರೈತನ ಮಗಳ ಎಂ.ಬಿ.ಬಿ.ಎಸ್. : ಕೊಟ್ರೇಶ್ ಕೊಟ್ಟೂರು

ನಾಳೆ ಹೇಗಾದರೂ ಮಾಡಿ ಮುಖ್ಯಮಂತ್ರಿಗಳನ್ನು ಭೇಟಿ ಮಾಡಿಯೇ ತೀರುವೆ ಎನ್ನುವ ಭರವಸೆಯಿಂದ ಜಗದೀಶ ಭಾನುವಾರ ರಾತ್ರಿ 7.00 ಗಂಟೆಗೆ ತನ್ನೆಲ್ಲಾ ಬಟ್ಟೆಯನ್ನು ಪ್ಯಾಕ್ ಮಾಡಿ ರಾತ್ರಿ 10.30 ಕ್ಕೆ ಬಸ್ ಇರುವುದು ಅದಕ್ಕೆ ಹೊರಟರಾಯಿತು ಎಂದು ಅಂದುಕೊಂಡು ತನ್ನ ಹೆಂಡತಿ ಮುಬೀನಾಗೆ ಹೇಳಿದ “ಏನೆ ನಾನು ಬೆಳಿಗ್ಗೆ ಬೆಂಗಳೂರು ಹೋಗ್ತಿದ್ದೀನಿ ಮಗಳಿಗೆ ಏನಾದ್ರೂ ಇದ್ರೆ ಕೊಡು ಅಂದ” ಅದಕ್ಕೆ ಮುಬೀನಾ “ಅಲ್ರೀ ಇಲ್ಲಿ ಉಣ್ಣಾಕ ಏನೂ ಗತಿಯಿಲ್ಲ, ಮಳೆ ನೋಡಿದ್ರ ಕಣ್ಮರೆಯಾಗ್ಯಾತಿ ಏನು ಅದ ಮನ್ಯಾಗ ಬರೀ … Read more

ಕ್ಯಾ ಯಹೀ ಪ್ಯಾರ್ ಹೇ…..: ಗಿರಿಜಾ ಜ್ಞಾನಸುಂದರ್

ಬೆಳಿಗ್ಗೆ ಏಳುತ್ತಲೇ ಗಲಾಟೆ ಮಾಡುತ್ತಿದ್ದ ತನ್ನ ಪುಟ್ಟ ಅಚಿಂತ್ಯನನ್ನ ತನ್ನ ಕಂಕುಳಲ್ಲಿ ಹೊತ್ತುಕೊಂಡು ಅಡುಗೆ ಮನೆಗೆ ಧರಿತ್ರಿ ಬಂದಳು. ಗಂಟೆ ಆಗಲೇ ೬ ಆಗಿತ್ತು. ಗಂಡನಿಗೆ ಅಡುಗೆ ಮಾಡಿ ಡಬ್ಬಿಗೆ ಹಾಕಬೇಕು, ಹೆಚ್ಚು ಸಮಯವಿಲ್ಲ ಎಂದು ದಡಬಡ ಕೆಲಸ ಮಾಡುತ್ತಿದ್ದಳು. ಗಂಡನ ಪ್ರೀತಿಯ ವಾಂಗೀಬಾತ್ ಮಾಡುತ್ತ ಜೊತೆಯಲ್ಲಿ ಗಸಗಸೆ ಪಾಯಸ ಮಾಡುವುದರಲ್ಲಿ ಮಗ್ನಳಾಗಿದ್ದಳು. ಪುಟ್ಟ ಮಗು ಕೈಬಿಡುತ್ತಿಲ್ಲ. ಆದರೂ ಅವನ ಹುಟ್ಟುಹಬ್ಬಕ್ಕೆಂದು ಅವನಿಗೆ ಮತ್ತು ಅವನ ಸಹೋದ್ಯೋಗಿಗಳಿಗೂ ಆಗುವಂತೆ ಪ್ರೀತಿಯಿಂದ ತಯಾರು ಮಾಡಿ, ಡಬ್ಬಿಗೆ ಹಾಕಿದಳು. ಅಷ್ಟರಲ್ಲಿ … Read more

ರೇಷ್ಮೆ ಸೀರೆ: ಅಶ್ಫಾಕ್ ಪೀರಜಾದೆ

-1- ಅನುದಾನ ರಹಿತ ಖಾಸಗೀ ಶಾಲೆಯೊಂದರ ಸಹ ಶಿಕ್ಷಕನಾಗಿ ಕಾರ್ಯ ನಿರ್ವಹಿಸುತ್ತಿರುವ 40 ವಯದ ಅನಂತನದು ಸುಂದರ ಸಂಸಾರ. ಮಗ ಅಮೀತ ಓದಿನಲ್ಲಿ ಜಾಣ ಅನ್ನುವ ಕಾರಣಕ್ಕೆ ನಗರದ ಪ್ರತಿಷ್ಠಿತ ಕಾಲೇಜವೊಂದರಲ್ಲಿ ಪಿ ಯು ವಿಜ್ಞಾನ ಓದುತ್ತಿದ್ದಾನೆ. ಮಗಳು ಮಯೂರಿ ಕೂಡ ಜಾಣ ವಿದ್ಯಾರ್ಥಿನಿ, ಎಂಟನೇಯ ತರಗತಿಯಲ್ಲಿ ಓದುತ್ತಿದ್ದಾಳೆ. ಅವಳು ಈ ಸಣ್ಣ ವಯಸ್ಸಿನಲ್ಲಿ ಭರತ ನಾಟ್ಯದಲ್ಲಿ ಹೆಸರು ಮಾಡುತ್ತಿರುವ ಅಪರೂಪದ ಉದಯೋನ್ಮುಖ ಪ್ರತಿಭೆಯೂ ಹೌದು. ಇವಳು ಹಲವಾರು ಸಾಂಸ್ಕøತಿಕ ಕಾರ್ಯಕ್ರಮಗಳಲ್ಲಿ ಭಾಗವಹಿಸಿ ಕಲಿಯುತ್ತಿರುವ ಶಾಲೆಗೆ, ಹುಟ್ಟಿದ … Read more

ತೆರೆದಿದೆ ಮನೆಯೋ…: ಅಶ್ಫಾಕ್ ಪೀರಜಾದೆ

ಬದುಕಿನ ಮುಸ್ಸಂಜೆಯಲ್ಲಿ ಕುಳಿತು ನನ್ನ ಜೀವನದ ಮರಳು ಗಾಡಿನಲ್ಲಿ ನನಗಾಗಿ ನನ್ನತ್ತ ನಡೆದು ಬಂದವರ ಹೆಜ್ಜೆಗಳ ಗುರುತು ಹುಡುಕಲು ಪ್ರಯತ್ನಿಸುತ್ತೇನೆ. ಹೃದಯದಲ್ಲಿ ಎದ್ದ ಬಿರುಗಾಳಿಗೆ ಸರಿದು ಹೋದ ಮರಳಿನಲ್ಲಿ ಗುರುತು ಸಿಗದಂತೆ ಅವಶೇಷವಾಗಿ ಅಳಿದುಳಿದ ಗುರತುಗಳೇ!. ಒಂದೇ ಒಂದು ಸ್ಥಿರವಾದ ಹೆಜ್ಜೆ ಅಲ್ಲಿ ಮೂಡಿದ್ದು ಗೋಚರಿಸುವುದೇ ಇಲ್ಲ. ನಾನು ನನ್ನ ಮನೆಯಲ್ಲಿ ಒಂಟಿಯಾಗಿ ಕುಳಿತು ಇವುಗಳನ್ನೆಲ್ಲ ಅವಲೋಕಿಸುತ್ತ ಮತ್ತೇ ನನ್ನತ್ತ ಯಾರಾದರೂ ಬರಬಹುದೇ ಎಂದು ಬರುವವರ ಹೆಜ್ಜೆ ಸಪ್ಪಳ ಆಲಿಸಲು ಮೈಯಲ್ಲ ಕಿವಿಯಾಗಿಸುತ್ತೇನೆ. ಗಾಳಿಗೆ ಹಾರಿ ಹೋದ … Read more

ಬಣ್ಣದ ನೆರಳು ……: ಸತೀಶ್ ಶೆಟ್ಟಿ, ವಕ್ವಾಡಿ.

ಮುಂಗಾರಿಗೆ ಯಾಕಿಷ್ಟು ಅವಸರವೋ ಗೊತ್ತಿಲ್ಲ. ಊರಲ್ಲಿ ಯಕ್ಷಗಾನ ಮೇಳಗಳು ತಮ್ಮ ತಿರುಗಾಟಕ್ಕೆ ಮಂಗಳ ಹಾಡುವ ಮುನ್ನವೇ ಮಳೆ ತನ್ನ ಒಡ್ಡೋಲಗ ಆರಂಭಿಸಿಬಿಟ್ಟಿದೆ. ಸಾಮಾನ್ಯವಾಗಿ ಜೂನ್ ಮೊದಲ ವಾರದಲ್ಲಿ ಕರಾವಳಿಗೆ ಕಾಲಿಡುತ್ತಿದ್ದ ಮುಂಗಾರು ಈ ಬಾರಿ ಹೆಚ್ಚು ಕಡಿಮೆ ಇಪ್ಪತ್ತು ದಿನಗಳ ಮೊದಲೇ ನೆಲೆಯೂರವ ಲಕ್ಷಣ ಹೆಚ್ಚಾದಂತಿದೆ. ನಿನ್ನೆ ರಾತ್ರಿಯಿಂದ ಧೋ ಅಂತ ಬ್ರೇಕ್ ಇಲ್ಲದೆ ಸುರಿಯುತ್ತಿದ್ದ ಮಳೆ ಊರಲ್ಲಿ ನೆರೆಯನ್ನೇ ಸೃಷ್ಟಿಸಿತ್ತು. ಕಡಲ ಶಬ್ದ ಮತ್ತು ಕಪ್ಪುಗಟ್ಟಿದ ಆಕಾಶ ಭಾರೀ ಮಳೆಯ ಮುನ್ಸೂಚನೆ ನೀಡುತ್ತಿತ್ತು. “ಥತ್, ಎಂತ … Read more