ಸೋಲು: ಗಿರಿಜಾ ಜ್ಞಾನಸುಂದರ್

ಸಪ್ಪೆ ಮೊರೆ ಹಾಕಿಕೊಂಡು ಬರುತ್ತಿದ್ದ ಪ್ರೀತಿಯನ್ನು ಪಕ್ಕದ ಮನೆ ಆಂಟಿ “ಏನ್ ಪುಟ್ಟಿ! ರಿಸಲ್ಟ್ ಏನಾಯ್ತು? ಯಾವಾಗ್ಲೂ ಫಸ್ಟ್ ಬರ್ತಿದ್ದೆ ಅಲ್ವಾ. ಈಸಲ ಏನು? ಸ್ವೀಟು ಕೊಡ್ಲಿಲ್ಲ?” ಸುಮ್ಮನೆ ತಲೆ ತಗ್ಗಿಸಿ ಅಲ್ಲಿಂದ ಹೊರಟು ಬಂದಿದ್ದಳು. ಶಾಲೆಯಲ್ಲಿ ಎಲ್ಲದರಲ್ಲೂ ಮುಂದಿದ್ದ ಹುಡುಗಿ. ಇಡೀ ಶಾಲೆಗೆ ೧೦ನೇ ತರಗತಿಯಲ್ಲಿ ಎರಡನೇ ಸ್ಥಾನದಲ್ಲಿ ಪಾಸಾಗಿದ್ದವಳು. ಅವರಪ್ಪ ಅದಕ್ಕಾಗಿ ತಮ್ಮ ಸುತ್ತಮುತ್ತಲಿನ ಮನೆಗಳಿಗೆಲ್ಲ ಒಂದೊಂದು ಸ್ವೀಟ್ ಡಬ್ಬವನ್ನೇ ಹಂಚಿದ್ದರು. ತಮ್ಮ ಶಾಲೆಯಿಂದ ಬೇರೆ ಶಾಲಿಗಳಿಗೂ ಬಹಳಷ್ಟು ಸ್ಪರ್ಧೆಗಳಲ್ಲಿ ಭಾಗವಹಿಸಿ ಬಹುಮಾನ ತಂದುಕೊಟ್ಟವಳು. … Read more

ಶೃತಿ ನೀ ಮಿಡಿದಾಗ (ಕೊನೆಯ ಭಾಗ): ವರದೇಂದ್ರ.ಕೆ ಮಸ್ಕಿ

ಇತ್ತ ಮನೆಯಲ್ಲಿ ಅಕ್ಕ ನಳಿನಿ ಕಡೆಯಿಂದ ಒಂದು ವಿಷಯ ಬಂತು. ಭಾವನ ತಮ್ಮ ನಿತಿನ್ ಅಮೇರಿಕಕ್ಕೆ ಹೋಗಿದ್ದ, ಇಂಜಿನಿಯರ್ ಕೆಲಸ, ಕೈತುಂಬಿ ಹಂಚಬಹುದಾದಷ್ಟು ಸಂಬಳ. ವಿದ್ಯಾವಂತ ಬುದ್ಧಿವಂತ. ನೋಡೋಕೆ ಸ್ಫುರದ್ರೂಪಿ, ಒಳ್ಳೆಯ ಮೈಕಟ್ಟು, ಸದಾ ಮುಗುಳ್ನಗೆಯ ಸರದಾರ, ನಿರಹಂಕಾರಿ, ಮಿತ ಮಾತುಗಾರ, ನಿಷ್ಕಲ್ಮಷ ಹೃದಯವಂತ, ಅಪ್ಪಟ ಬಂಗಾರದ ಗುಣವಂತ. ನಮ್ಮ ಶೃತಿಗೆ ತಕ್ಕುದಾದ ಜೋಡಿ; ಎಂದು ಅಕ್ಕ, ನಿತಿನ್ ಗೆ ಶೃತೀನ ತಂದುಕೊಳ್ಳೊ ವಿಚಾರ ಎತ್ತಿಬಿಟ್ಟಳು. ಇದ್ದಕ್ಕಿದ್ದ ಹಾಗೆ ಎರಗಿ ಬಂದ ವಿಷಯ ಶೃತಿ ಮನಸ್ಸಿಗೆ ತಳಮಳ … Read more

ಕೆಂಪು ನೆರಳು!: ಎಸ್.ಜಿ.ಶಿವಶಂಕರ್

ವಾಸುದೇವರಿಗೆ ಗಾಢ ನಿದ್ರೆ. ಅಂತಾ ನಿದ್ರೆಯನ್ನು ಎಂದೂ ಮಾಡಿಲ್ಲ ಎನ್ನಿಸುವ ನಿದ್ರೆ. ಮೂರು ದಿನದಿಂದ ನಿದ್ರೆಯಿಲ್ಲದೆ ಹೈರಾಣಾಗಿದ್ದಕ್ಕೋ ಏನೋ..ಗಾಢ ನಿದ್ರೆ ಅವರಿಸಿತ್ತು! ಅಸ್ತಿತವನ್ನೇ ಮರೆಸಿದ ನಿದ್ರೆ! ದೇಹದ ಅರಿವಿಲ್ಲದ ನಿದ್ರೆ! ದೇಹದ ಭಾರವೇ ಇರಲಿಲ್ಲ! ತನಗೆ ಶರೀರವೇ ಇಲ್ಲ-ಎನ್ನುವಷ್ಟು ಹಗುರ, ನಿರಾಳ ಭಾವನೆ! ತಾನು ಬದುಕಿರುವೆನೋ? ಇಲ್ಲವೋ? ಜಾಗ, ಜಾವಗಳ ಅರಿವೇ ಇಲ್ಲದ ವಿಚಿತ್ರ ಹೊಚ್ಚ ಹೊಸ ಅನುಭವ! ಇಂತದು ಹಿಂದೆಂದೂ ಆಗಿರಲೇ ಇಲ್ಲ! ಎಲ್ಲಿರುವೆ? ಸಮಯ ಎಷ್ಟು? ಹಗಲೋ? ರಾತ್ರಿಯೋ? ಎಚ್ಚರವೇ ಇಲ್ಲ ಎಂದರೆ ಅದು … Read more

ಸಾಫಲ್ಯ: ಉಮೇಶ್‌ ದೇಸಾಯಿ

ಅದು ಅಖಿಲ ಭಾರತ ಮಟ್ಟದ ಸಂಗೀತದ ಅಂತಿಮ ಕಾರ್ಯಕ್ರಮ. ಕನ್ನಡದ ಆ ವಾಹಿನಿ ಅನೇಕ ವರ್ಷಗಳಿಂದ ಈ ಸ್ಫರ್ಧೆ ಏರ್ಪಡಿಸುತ್ತ ಬಂದಿದೆ. ಇಂದು ಅಂತಿಮ ಸುತ್ತು. ಎಲ್ಲ ಸ್ಫರ್ಧಿಗಳಲ್ಲೂ ವಿಚಿತ್ರ ತಳಮಳ ಈಗಾಗಲೇ ಈ ವಾಹಿನಿಯ ಈ ಅಂತಿಮಸ್ಫರ್ಧೆಯ ಕುರಿತಾಗಿ ಸಾಮಾಜಿಕ ಜಾಲತಾಣಗಳಲ್ಲಿ ಅಂತೆಯೇ ಇತರೇ ಸುದ್ದಿವಾಹಿನಿಗಳಲ್ಲಿ ಈ ಕುರಿತು ಅನೇಕ ಚರ್ಚೆಗಳಾಗಿವೆ…ಯಾರು ಗೆಲ್ಲಬಹುದು ಪ್ರಶಸ್ತಿಯನ್ನು ಈ ಕುರಿತಾಗಿ ಅಲ್ಲಲ್ಲಿ ಬೆಟಿಂಗ್ ಕೂಡ ನಡೆಯುತ್ತಿದೆ ಎಂಬ ಸುದ್ದಿಯೂ ಅನೇಕ ವಾಹಿನಿಗಳಲ್ಲಿ ಹರಿದಾಡುತ್ತಿತ್ತು. ಸ್ಫರ್ಧಿಗಳಲ್ಲಿ ತಳಮಳವಿತ್ತು ನಿಜ ಅಂತೆಯೇ … Read more

ತಲಾಖ್: ಸಿದ್ದರಾಮ ತಳವಾರ, ದಾಸ್ತಿಕೊಪ್ಪ.

ಊರಿನ ಮುಂಭಾಗದಲ್ಲೇ ಶತಮಾನಗಳಷ್ಟು ಹಳೆಯದಾದ ಹುಣಸೀಮರದ ಬುಡದಲ್ಲಿ ಪೇಚು ಮಾರಿ ಹಾಕಿಕೊಂಡು ತಲೆ ಮೇಲೆ ಕೈ ಹೊತ್ತು ಕೂತ ಕರವೀರನನ್ನು ಸಮಾಧಾನ ಮಾಡಲು ಯಾರೊಬ್ಬರೂ ಮುಂದೆ ಬರಲಿಲ್ಲ. ಅಷ್ಟಕ್ಕೂ ಅಲ್ಲೇನಾಗಿತ್ತು ಎಂದು ಅದಾರಿಗೂ ಸ್ಪಷ್ಟವಾಗಿ ಗೊತ್ತಾಗಿರಲಿಲ್ಲ. ಎಲ್ಲರ ಮುಖದಲ್ಲೂ ಭಯ, ಸಂಶಯ, ಆಶ್ಚರ್ಯ, ಸಂದೇಹವೇ ಮನೆ ಮಾಡಿದಂತಿತ್ತು. ಆಗಷ್ಟೇ ಕಚೇರಿಯಿಂದ ಬಂದ ಮಂಜನಿಗೆ ಇದಾವುದರ ಪರಿವೆಯೂ ಇರಲಿಲ್ಲವಾದರೂ ಅಲ್ಲಿ ಏನೋ ಒಂದು ದುರ್ಘಟನೆ ಜರುಗಿರಬಹುದೆಂಬ ಗುಮಾನಿಯಂತೂ ಮಂಜನ ತಲೆಯಲ್ಲಿ ಓಡುತ್ತಿತ್ತು. “ ಹಾಂ,, ನನ್ ಮಗಳು ಅಂಥಾದ್ದೇನು … Read more

ಶೃತಿ ನೀ ಮಿಡಿದಾಗ (ಭಾಗ ೨): ವರದೇಂದ್ರ.ಕೆ ಮಸ್ಕಿ

ಸುಶಾಂತನ ಪ್ರೇಮ ಪತ್ರ ಓದುತ್ತ ಓದುತ್ತ ಶೃತಿಯ ಅಂತರಂಗದಿ ಪ್ರೇಮದ ಬೀಜ ಮೊಳಕೆ ಒಡೆದು ಬಿಟ್ಪಿತು. ಇದು ಪ್ರೇಮವೋ, ಅಥವಾ ಪ್ರಥಮಬಾರಿಗೆ ಒಬ್ಬ ಹುಡುಗನ ಮನದ ಭಾವಕೆ ಸ್ಪಂದಿಸುವ ವಯೋಸಹಜ ಆಕಾಂಕ್ಷೆಯೋ ತಿಳಿಯದ ದ್ವಂದ್ವಕ್ಕೆ ಶೃತಿಯ ಮನಸು ಹೊಯ್ದಾಡಿ ವಯೋಸಹಜವಾಗಿ ಮೂಡುವ ಭಾವನೆಯೇ ಪ್ರೀತಿ ಅಲ್ಲವೆ? ಹೌದು ಎಂದುಕೊಂಡಳು. ಯವ್ವನ ದೇಹಕ್ಕೆ ಮಾತ್ರ ಆಗಿದ್ದ ಶೃತಿಯ ಮನಸಿಗೂ ಯವ್ವನ ಬಯಸುವ ಪ್ರೀತಿ, ಪ್ರೀತಿ ನೀಡುವ ಹೃದಯ ಒಂದಿದೆ ಎಂದು ತೋರಿಸಿದ ನಿಜ ಪ್ರೇಮಿ ಸುಶಾಂತ. ಅವನ ಪ್ರೇಮವನ್ನು … Read more

ದೇವ್ರಾಟ..: ತಿರುಪತಿ ಭಂಗಿ

ಪ್ಯಾಟಿಗೆ ಹೋಗಿದ್ದ ಹನಮ್ಯಾ ಪೋಲಿಸರ ಕೈಯಾಗ ಸಿಕ್ಕಾಕ್ಕೊಂಡ ಬಲ್ಲಂಗ ಗಜ್ಜತಿಂದಿದ್ದ. ‘ಸತ್ನೋ ಯಪ್ಪಾ..’ ಅಂತ ನರಳ್ಯಾಡಕೋತ, ಕುಂಟಕೋತ, ಕುಂಡಿಮ್ಯಾಲ ಗಸಾಗಸಾ ತಿಕ್ಕೋತ ಮನಿಹಾದಿ ಹಿಡದಿದ್ದ. “ಈ ಪೋಲಸ್ರಿಗೆ ಮುಕಳಿ-ಮಾರಿ ಯಾವ್ದಂತ ಒಂದೂ ಗೊತ್ತಿಲ್ಲ, ದಬಾದಬಾ ದನಾ ಬಡ್ದಂಗ ಬಡಿತಾರ, ನಮ್ದ ಎಂತ ಸರಕಾರೋ,ಎಂತಾ ಕಾನೂನೋ..ಏನ್ ಆಡಳಿತಾನೋ..ನಮ್ಮ ದೇಶದಾಗ..! ಎಲ್ಲ ದೇವ್ರಾಟ. ಮೈತುಂಬ ಹಿಗ್ಗಾಮುಗ್ಗಾ ಪೋಲಿಸ್ರು ಥಳಸಿದ ಏಟಿಗೆ ಹನಿಮ್ಯಾನಿಗೆ ಎಂದೂ ನೆನಪಾಗದ ದೇಶದ ಸರಕಾರ, ಕಾನೂನು, ಆಡಳಿತಗಳೆಲ್ಲ ನೆನಪಾಗಿ ಮೈತುಂಬ ಪರಚಿದಂತಾದವು. ನಮಗ ರಕ್ಷಣಾ ಕೊಡವ್ರ ನಮಗ … Read more

ಶೃತಿ ನೀ ಮಿಡಿದಾಗ: ವರದೇಂದ್ರ.ಕೆ ಮಸ್ಕಿ

ಸದಾ ಕಪ್ಪು ಕೂದಲ ಗಡ್ಡಧಾರಿ ಮಿಂಚು ಮಾತುಗಳ ರಾಯಭಾರಿ ನಗುವಿನ ಸಮಯಗಳಿಗೆ ಸೂತ್ರಧಾರಿ. ರಸವತ್ತಾದ ಹೃದಯ ಸಿಂಹಾಸನದಿ ನೆಲೆ ಊರುವ ಅಧಿಕಾರಿ, ಅಂಗಾರಕನ ಬಣ್ಣ ಗರುವಿನ ವಿಶಾಲ ಮನ, ಅವನಿಯ ತಾಳ್ಮೆ ಸುಗುಣಗಳ ಗಣಿ ಸುಶಾಂತ ಒಲವಿನ ಪುಷ್ಪ ಹಿಡಿದು ಬದುಕೆಲ್ಲ ನೀನೆ, ನೀನಿಲ್ಲದೆ ಮತ್ತೇನಿದೆ ನಿನ್ನ ಒಲವಿನ ಒಂದು ಬೊಗಸೆಯಲಿ ನನ್ನ ಹಿಡಿದುಬಿಡು ಗೆಳತಿ ಎಂದು ದೊಂಬಾಲು ಬಿದ್ದವನ ಅಸ್ತಿತ್ವ ಅವಳ ಒಲುಮೆ ಪಡೆಯಲು ಕಳೆದುಹೋದರೂ ಪರವಾಗಿಲ್ಲ ಎನ್ನುವಷ್ಟು ಹುಚ್ಚು ಪ್ರೇಮ ಹಚ್ಚಿಕೊಂಡವನು. ಸದಾ ಕಣ್ಗಳಲಿ … Read more

ಮಂಗಳ: ಗಿರಿಜಾ ಜ್ಞಾನಸುಂದರ್

ಮಧ್ಯರಾತ್ರಿಯ ಹೊತ್ತು, ಹೊರಗೆ ನಾಯಿಗಳ ಕೆಟ್ಟ ಕೂಗು. ಕೇಳಲು ಹಿಂಸೆ ಅನಿಸುತ್ತಿದೆ. ನರಳುತ್ತಿರುವ ಗಂಡ. ದಿನವೂ ಕುಡಿದು ಬಂದು ಹಿಂಸೆ ಮಾಡುತ್ತಿದ್ದ ಮನುಷ್ಯ. ಅವನನ್ನು ಉಳಿಸಿಕೊಳ್ಳುವುದು ಅಸಾಧ್ಯ ಅನ್ನಿಸುತ್ತಿದೆ. ಅವನು ಕುಡಿದುಬಂದಿರುವುದರಲ್ಲಿ ಏನಾದರು ಬೆರೆತಿತ್ತೋ ಏನೋ ತಿಳಿದಿಲ್ಲ. ಅಥವಾ ಡಾಕ್ಟರ್ ಹೇಳಿದಂತೆ ಅವನು ಕುಡಿತ ನಿಲ್ಲಿಸದ ಕಾರಣದಿಂದ ಅವನ ಅಂಗಾಂಗಗಳು ತೊಂದರೆ ಆಗಿವೆಯೇನೋ. ಏನು ಮಾಡಲೂ ತೋಚುತ್ತಿಲ್ಲ ಅವಳಿಗೆ. ಹೆಸರಲ್ಲಷ್ಟೇ ಮಂಗಳ ಎಂದು ಉಳಿದಿತ್ತು. ಬೇರೆಲ್ಲವೂ ಅವಳಿಗೆ ಜೀವನದಲ್ಲಿ ಅಮಂಗಳವೇ. ಅವಳ ಜೀವನ ಹೀಗೆಯೇ 22 ವರ್ಷದಿಂದ … Read more

ಕಾಲದ ಚಿತ್ರ: ಎಂ. ಜವರಾಜ್

ರಾತ್ರಿ ಹತ್ತಾಯ್ತು. ಕರೆಂಟ್ ಇಲ್ಲದೆ ಊರು ಗಕುಂ ಎನುವ ಹೊತ್ತಲ್ಲಿ ಬೀದಿಯಲ್ಲಿ ನಿಂತ ಅಕ್ಕಪಕ್ಕದ ಮನೆಯವರು ಗುಸುಗುಸು ಮಾತಾಡುತ್ತ ಇದ್ದರು. ಕರೆಂಟ್ ಇಲ್ಲದ್ದರಿಂದ ಟಿವಿ ನ್ಯೂಸ್ ನೋಡಲು ಆಗದೆ ದಿಂಬಿಗೆ ತಲೆ ಕೊಟ್ಟೆ. ಕರೋನಾ ಭೀತಿಯಿಂದ ದೇಶ ಪ್ರಕ್ಷುಬ್ಧವಾಗಿ ನಾಳಿನ ಜನತಾ ಕರ್ಫ್ಯೂಗೆ ಸನ್ನದ್ಧವಾಗಿತ್ತು. ಆಗಲೇ ಹೆಂಡತಿ ನಿದ್ರೆಗೆ ಜಾರಿದ್ದಳು. ನನ್ನ ಮಗಳು ಸೆಕೆಗೊ ಸೊಳ್ಳೆ ಹೊಡೆತಕೊ ಹೊರಳಾಡುತ್ತ ಕೈ ಕಾಲು ಆಡಿಸುತ್ತಿದ್ದಳು.ಹಬ್ಬದ ಹೊತ್ತಲ್ಲಿ ಇದೆಂಥ ಕೆಲ್ಸ ಆಯ್ತು.. ಛೇ! ಈ ಸಾರಿ ಯುಗಾದಿಗೆ ಏನೇನು ಮಾಡಬೇಕು. … Read more

ಅನಾದಿ ಮೊರೆಯ ಕೇಳಿ..: ತಿರುಪತಿ ಭಂಗಿ

“ಭಾಳಂದ್ರ ಇನ್ನ ಒಂದೆರ್ಡ ದಿನ ಉಳಿಬಹುದ… ನಮ್ಮ ಕೈಯಿಂದ ಮಾಡು ಪ್ರಯತ್ನಾ ನಾಂವ ಮಾಡೀವಿ, ಇನ್ನ ಮಿಕ್ಕಿದ್ದ ಆ ದೇವ್ರರ್ಗೆ ಬಿಟ್ಟದ್ದ.” ಡಾಕ್ಟರ್ ಕಡ್ಡಿ ಮುರದ್ಹಂಗ ಮಾತಾಡಿದ್ದ ಕೇಳಿದ ಶಿವಕ್ಕನ ಎದಿ ಒಮ್ಮಿಗಿಲೆ ‘ದಸಕ್’ ಅಂದ ಕೈಕಾಲಾಗಿನ ನರಗೋಳಾಗಿದ್ದ ಸಕ್ತಿ ಪಟಕ್ನ ಹಿಂಡಿ ಹಿಪ್ಪಿ ಆದಾಂಗ ಆಗಿತ್ತು. ಎಷ್ಟೊತ್ತನಕಾ ದಂಗ್ ಬಡ್ದಾಂಗಾಗಿ ಪಿಕಿ ಪಿಕಿ ಕಣ್ಣ ಬಿಟಗೋತ, ಡಾಕ್ಟರಪ್ಪನ ನೋಡಕೋತ ನಿಂತ ಕೊಂಡ್ಳು. ಅದೆಲ್ಲಿತ್ತೋ ಎಲ್ಲಿಲ್ಲೋ ಅಕಿ ಎದಿಯಾಗಿನ ದುಕ್ಕದ ಶಳುವು ಒಮ್ಮಿಗಿಲೆ ಉಕ್ಕಿ ಬಂದದ್ದ ತಡಾ, … Read more

ಮತ್ತದೇ ಬೇಸರ: ಎನ್.ಎಚ್.ಕುಸುಗಲ್ಲ

ದೀರ್ಘಕಾಲದ ಎದೆನೋವು ತಾಳಲಾರದೆ ತತ್ತರಿಸಿ ಹೋಗಿದ್ದ ನೀಲಜ್ಜನಿಗೆ ಕಳೆಯುವ ಒಂದೊಂದು ನಿಮಿಷವೂ ಒಂದೊಂದು ಘಳಿಗೆಯಾಗುತ್ತಿದೆ. ಆಸರೆಯಾಗಬೇಕಾದ ಮಕ್ಕಳು ಹೊಟ್ಟೆಪಾಡಿನ ಕೆಲಸ ಅರಸಿ ಪಟ್ಟಣ ಸೇರಿದ್ದರು. ಊರುಗೋಲಾಗಬೇಕಾಗಿದ್ದ ಪತ್ನಿಯೂ ತೀರಿಹೋಗಿದ್ದಳು. ತಲತಲಾಂತರದಿಂದ ಬಂದಿದ್ದ ಕಂಬಳಿ ನೇಯುವ ಕಾಯಕವನ್ನು ಮಕ್ಕಳು ನೆಚ್ಚಿರಲಿಲ್ಲ. ಈ ಕೊರಗೂ ನೀಲಜ್ಜನಿಗಿತ್ತು. ಗಂಡು ಮಕ್ಕಳು ಪಟ್ಟಣ ಸೇರಿದರೇನಂತೆ ಮಗಳು ರುಕ್ಮಿಣಿ ಪಾದರಸದಂತೆ ಮನೆಯಲ್ಲಿ ಓಡಾಡಿಕೊಂಡು ಅಪ್ಪನ ಯೋಗಕ್ಷೇಮ ನೋಡಿಕೊಳ್ಳುತ್ತಿದ್ದಳು. ರುಕ್ಮಿಣಿ ಅಪ್ಪನ ಜೊತೆ ಇರುವುದರಿಂದ ಗಂಡು ಮಕ್ಕಳು ಅಪ್ಪನ ಬಗ್ಗೆ ಚಿಂತೆ ಮಾಡುತ್ತಿರಲಿಲ್ಲ. ಆದರೆ ಆರು … Read more

ಮಂಜಯ್ಯನ ಮಡಿಕೆ ಮಣ್ಣಾಗಲಿಲ್ಲ: ಜಗದೀಶ ಸಂ.ಗೊರೋಬಾಳ

ಬಹಳ ವರ್ಷಗಳಿಂದ ತಿರುಗದ ತಿಗರಿಯ ಶಬ್ದ ಕೇಳಿ ಮಂಜಯ್ಯನ ಮನಸ್ಸು ಕದಡಿತು. ಯಾವ ಶಬ್ದ ಕೇಳಿ ಮಂಜಯ್ಯ ತನ್ನ ಅರ್ಧಾಯುಷ್ಯ ಕಳೆದನೋ ಆ ಶಬ್ದ ಇಂದು ಮಂಜಯ್ಯನಿಗೆ ಅನಿಷ್ಟವಾಗಿದೆ. ಎದೆಬಡಿತ ಜಾಸ್ತಿಯಾಗಿ, “ಯಾರೇ ಅದು ಸುಗಂಧಿ ತಿಗರಿ ಸುತ್ತೋರು? ನಿಲ್ಸೆ ಅನಿಷ್ಟಾನಾ!” ಎಂದು ಕೂಗುತ್ತಾ ಕಿವಿ ಮುಚ್ಚಿಕೊಂಡನು ಮಂಜಯ್ಯ. ಸುಗಂಧಿ ತಿಗರಿ ಕಡೆ ಹೋಗುವಷ್ಟರಲ್ಲಿ ಶಬ್ದ ನಿಂತಿತ್ತು. ಪಕ್ಕದ ಮನೆಯ ಚಿಕ್ಕ ಹುಡುಗನೊಬ್ಬನು ತಿಗರಿಯನ್ನು ತಿರುಗಿಸಿ ಆಟವಾಡಿ ಸುಗಂಧಿ ಬರುವಷ್ಟರಲ್ಲಿ ಓಡಿ ಹೋಗಿದ್ದನು. ತಿಗರಿ ತಿರುಗಿಸುವುದೆಂದರೆ ಮಕ್ಕಳಿಗೆ … Read more

ಮುಚ್ಚಿದ ಕಿಟಕಿ: ಜೆ.ವಿ.ಕಾರ್ಲೊ

ಇಂಗ್ಲಿಷಿನಲ್ಲಿ: ಆಂಬ್ರೊಸ್ ಬಿಯರ್ಸ್ ಕನ್ನಡಕ್ಕೆ: ಜೆ.ವಿ.ಕಾರ್ಲೊ ಇದು 1830ರ ಮಾತು. ಅಮೆರಿಕಾದ ಒಹಾಯೊ ರಾಜ್ಯದ ಸಿನ್ಸಿನಾಟಿ ನಗರದಿಂದ ಕೊಂಚ ದೂರದಲ್ಲಿ ಅಂತ್ಯವೇ ಕಾಣದಂತ ವಿಸ್ತಾರವಾದ ದಟ್ಟ ಕಾಡು ಹಬ್ಬಿತ್ತು. ಈ ಕಾಡಿನ ಸರಹದ್ದಿನಲ್ಲಿ ನೆಲೆಸಿದ್ದ ಕುಟುಂಬಗಳಲ್ಲಿ ಬಹಳಷ್ಟು ಜನ ಹೊಸ ಬದುಕನ್ನು ಹುಡುಕಿಕೊಂಡು ಮತ್ತೂ ಮುಂದೆ ಹೋಗಿದ್ದರು. ಹಾಗೆ ಉಳಿದವರಲ್ಲಿ ಅವನೊಬ್ಬ ಕಾಡಿನ ಅಂಚಿನಲ್ಲೊಂದು ಮರದ ದಿಮ್ಮಿಗಳ ಗುಡಿಸಲೊಂದನ್ನು ಕಟ್ಟಿಕೊಂಡು ವಾಸಿಸುತ್ತಿದ್ದ. ನಾನು ನೋಡಿದಂತೆ ಎಂದೂ ನಗೆಯಾಡದ, ಯಾರೊಂದಿಗೂ ಬೆರೆತು ಮಾತನಾಡದ ಅವನು ಆ ನಿಶ್ಶಬ್ಧ ಕತ್ತಲ … Read more

ಪ್ರೇಮ ಷರತ್ತು: ಸುಜಾತ ಕೋಣೂರು

ಕುಶಲ ಶಿಲ್ಪಿಯ ಕಲೆಯ ಸಾಕಾರವೆಂಬಂತೆ ಅಲಂಕಾರಿಕ ಕಂಬಗಳು. ಈಗ ತಾನೆ ಗರಿಗೆದರಿ ನರ್ತಿಸುವುದೇನೋ ಎಂಬಂತೆ ನವಿಲು, ಹಂಸಗಳು ತೇಲುವ ಸುಂದರ ಸರೋವರ ನಿಜವಾದುದೇ ಎನಿಸುವಂತೆ, ಕಾಳಿದಾಸ ಕಾವ್ಯದ ಶೃಂಗಾರ ಜೋಡಿ ದು:ಶ್ಯಂತ ಶಕುಂತಲಾರ ಏಕಾಂತದ ಹೂವಿನ ಉಯ್ಯಾಲೆ, ಸುತ್ತಲೂ ಹಸಿರು ವನದ ದೃಶ್ಯಾವಳಿಗಳನ್ನು ಚಿತ್ರಿಸಲಾಗಿರುವ ಸುಂದರ ಭಿತ್ತಿಗಳು. ಕಾಲಡಿಗೆ ಮಕಮಲ್ಲಿನ ಮೆತ್ತನೆ ಹಾಸು. ಬಣ್ಣ ಬಣ್ಣದ ಹೂವಿನ ಅಲಂಕಾರ ತುಂಬಿಕೊಂಡಿರುವ ಚಿನ್ನ ಲೇಪನದ ಕಿಟಕಿ ಮತ್ತು ಬಾಗಿಲಿನ ಚೌಕಟ್ಟುಗಳು. ಹೊಸ್ತಿಲಿಗೆ ಸುಂದರ ರಂಗೋಲಿ.ಕುಸುರಿಯ ರೇಶಿಮೆಯ ಮೇಲುಹೊದಿಕೆಯ ಪಲ್ಲಂಗಕ್ಕೆ … Read more

ಸ್ವಗತ: ನಾಗರೇಖಾ ಗಾಂವಕರ

ಎರಡನೇಯ ಗರ್ಭವೂ ಹೆಣ್ಣೆಂದು ಗೊತ್ತಾಗಿದೆ. ಗಂಡ ಆತನ ಕುಟುಂಬ ಸುತಾರಂ ಮಗುವನ್ನು ಇಟ್ಟುಕೊಳ್ಳಲು ತಯಾರಿಲ್ಲ. ತಾಯಿಯೊಬ್ಬಳು ಒತ್ತಾಯದ ಗರ್ಭಪಾತಕ್ಕೆ ಸಿದ್ಧಳಾಗಿ ಕೂತಿದ್ದಾಗಿದೆ, ತಾಯಿಯ ಗರ್ಭದೊಳಗಿನ ಭ್ರೂಣ ಬಿಕ್ಕಳಿಸುತಿದೆ. ಅಯ್ಯೋ! ಅವರು ಬಂದೇ ಬರುತ್ತಾರೆ. ನನ್ನನ್ನು ಕತ್ತರಿಸಿ ಹೊರಗೆಸೆಯಲು. ಅವರಿಗೇನೂ ಅದು ಹೊಸತಲ್ಲ. ಆದರೆ ನನ್ನಮ್ಮನಿಗೆ ನಾನು ಏನೂ ಅಲ್ಲವೇ? ಅವಳ ರಕ್ತದ ರಕ್ತ ನಾನು. ಅವಳ ಮಾಂಸದ ಮುದ್ದೆ ನಾನು. ಅಮ್ಮ ದಯವಿಟ್ಟು ಹೇಳಮ್ಮ. ಅವಳಿಗೆ ನನ್ನ ದನಿ ಕೇಳುತ್ತಿಲ್ಲವೇ? ಅಮ್ಮನ್ಯಾಕೆ ಮೂಕಿಯಾಗಿದ್ದಾಳೆ.. ಸಪ್ಪಗಿದ್ದಾಳೆ.. ನನಗೆ ಗೊತ್ತು. … Read more

ದುರಂತ: ಗೀತಾ ಜಿ. ಹೆಗಡೆ, ಕಲ್ಮನೆ.

ಅದೊಂದು ಮಲೆನಾಡಿನ ಪುಟ್ಟ ಹಳ್ಳಿ.  ಅಲ್ಲಿ ಸುರೇಶನದು ಒಪ್ಪವಾದ ಸಂಸಾರ.  ಅವನಿಶ್ಚೆಯನರಿತ ಸತಿ, ಮುದ್ದಾದ ಒಬ್ಬಳೇ ಮಗಳು, ವಯಸ್ಸಾದ ಪ್ರೀತಿಯ ಅಮ್ಮ.  ಇವರೊಂದಿಗೆ ಬದುಕಿನ ಗತಿ ಸುಗಮವಾಗಿ ಸಾಗುತ್ತಿರುವಾಗ ಕೂಡಿಟ್ಟ ಅಲ್ಪ ಸ್ವಲ್ಪ ಹಣ ಸೇರಿಸಿ ಸರ್ಕಾರದ ಯೋಜನೆಯಡಿಯಲ್ಲಿ ಸಿಕ್ಕ ಒಂದೂವರೆ ಲಕ್ಷ ರೂಪಾಯಿ ಹಾಗೂ ಹೆಂಡತಿಯ ಒತ್ತಾಯದ ಮೇರೆಗೆ ಅವಳ ತವರಿನ ಒಡವೆ ಕೂಡಾ ಮಾರಿ ಎರಡು ರೂಮಿರುವ ಪುಟ್ಟದಾದ ಹೆಂಚಿನ ಮನೆ ಕಟ್ಟಿದ.  ಅದೇನೊ ಸಂಭ್ರಮ, ಸಂತೋಷ ಮನೆಯವರೆಲ್ಲರ ಮುಖದಲ್ಲಿ.  ತಮ್ಮದೇ ಆದ ಸ್ವಂತ … Read more

ಆತ್ಮ(ಮಿಯ)ಗೆಳೆಯ: ಜಯಂತ್ ದೇಸಾಯಿ

ಅದೊಂದು ದಿನ ಸುಬ್ಬರಾಯ ಆಟ ಆಡುತ್ತಾ ಆಡುತ್ತಾ ಮನೆಯಿಂದ ಎಷ್ಟೋ ದೂರ ಇರೋ ಮೊಬೈಲ್ ಟವರ್ ಹತ್ತಿರ ಹೋದ. ಅಲ್ಲಿ ಬಿದ್ದಿದ್ದ ಬಾಲ್ ತೆಗೆದುಕೊಂಡು ಯಾರ ಜೊತೆ ಮಾತಾಡುತ್ತಾ ಇದ್ದಂತೆ ಮಾಡಿ ತಿರುಗಿ ವಾಪಸ ಬಂದ. ಬಂದ ಮಗನನ್ನು ತಾಯಿ ರಾಧಾ ಯಾರ್ ಜೊತೆ ಮಾತಾಡುತ್ತಿದ್ದೆ ಅಲ್ಲಿ ಅಂದರೆ, ಅಮ್ಮ ಅವನು ಯಾರೋ ನನ್ನ ಸಹಾಯ ಬೇಕು ಅಂತಿದ್ದ ಅಮ್ಮ ಕಾಯುತ್ತಿದ್ದಾಳೆ ನಾಳೆ ನೋಡುವ ಅಂತ ಹೇಳಿ ಬಂದೆ ಅಂದ. ಆದ್ರೆ ತಾಯಿಗೆ ಏನೋ ಅನುಮಾನ ಬಂದು … Read more

ಕಾಮಣ್ಣ ಮಕ್ಕಳೊ: ರೇಣುಕಾ ಕೋಡಗುಂಟಿ

ಅಂದು ಹೋಳಿ ಹುಣ್ಣಿಮೆಯ ದಿನ ಬಳಿಗಾರ ಓಣಿಯ ಮಕ್ಕಳೆಲ್ಲ ಸೇರಿ ರಾಗಾ, ಶರಣಾ, ಮಲ್ಲಾ, ಮಂಜಾ ಇವರ ಮುಂದಾಳತ್ವದಲ್ಲಿ ಒಟ್ಟು 12 ಜನ ಮಕ್ಕಳು ಕಾಮಣ್ಣನ್ನ ಕೂರಿಸಾಕ ನಿರ್ಧಾರ ಮಾಡಿದ್ದರು. ಅಲ್ಲಿ ಇಲ್ಲಿ ಸ್ವಲ್ಪ ಪಟ್ಟಿ ಎತ್ತಿ ಒಂದು ಟೆಂಟ್ ಹೊಡೆದು ತಯಾರಿ ಮಾಡಿದ್ದರು. ಒಂದು ಹಳೆ ಅಂಗಿ ಪ್ಯಾಂಟು ತಂದು ಅದರಲ್ಲಿ ಹುಲ್ಲು ತುಂಬಿ, ಅಂಗಿನ್ನು ಪ್ಯಾಂಟನ್ನು ಸೂಜಿ ದಾರದಿಂದ ಹೊಲಿದು ಕಾಮಣ್ಣನ್ನ ರೆಡಿ ಮಾಡಿದ್ದರು. ಕಾಮಣ್ಣನ ಹೊಟ್ಟೆಯನ್ನು ದಪ್ಪವಾಗಿ ಕಾಣುವಂತೆ ಮಾಡಿದ್ದರು. ಕುಂಬಾರ ಮನಿಯಿಂದ … Read more

ಮಾಯಕಾರ: ತಿರುಪತಿ ಭಂಗಿ

ತಮ್ಮ ತಲೆಯಲ್ಲಿ ಅಲ್ಲಲ್ಲಿ ಹುಟ್ಟಿಕೊಂಡ ಬಿಳಿ ಕೂದಲು ನೋಡಿದೊಡನೆ ಅವತ್ತು, ತನ್ನ ವಯಸ್ಸು ದಿನೆದಿನೆ ಮಂಜುಗಡ್ಡೆಯಂತೆ ಕರಗುತ್ತಿದೆ ಎಂಬ ಅರಿವಾಗಿ ಸಾವಕಾರ ಸಿದ್ದಪ್ಪನ ಮನದಲ್ಲಿ ಶೂನ್ಯ ಆವರಿಸಿತು.“ನನಗೆ ಮಕ್ಕಳಾಗಲಿಲ್ಲ, ಆಗುವುದೂ ಇಲ್ಲ, ನಾನೊಬ್ಬ ಎಲ್ಲ ಇದ್ದು, ಏನೂ.. ಇಲ್ಲದ ನತದೃಷ್ಟ, ಕೈಲೆ ಆಗದವನು, ಮಕ್ಕಳನ್ನು ಹುಟ್ಟಿಸಲು ಆಗದ ಶಂಡ ನಾನು…..”ನೂರೆಂಟು ವಿಚಾರಗಳನ್ನು ಮನದಲ್ಲಿ ರಾಶಿ ಹಾಕಿಕೊಂಡು ನೆನೆ-ನೆನೆದು ವ್ಯಥೆಪಟ್ಟ. ಯಾರಿಗೂ ಗೊತ್ತಾಗದಂತೆ ಬೆಂಗಳೂರು, ಕಾರವಾರ, ಕೇರಳ, ಸುತ್ತಾಡಿ ನಾ..ನೀ.. ಅನ್ನುವ ನಂಬರ್ ಒನ್ ವೈದ್ಯರ ಮುಂದೆ ತಾವು … Read more