ಗಿಲಿಗಿಲಿ ಪುವ್ವಾ : ಕೃಷ್ಣ ಶ್ರೀಕಾಂತ ದೇವಾಂಗಮಠ

ಪಾತ್ರ ವರ್ಗ ಚಾರು – ಒಂದು ಕೈ ಮಾತ್ರ ಇರುವ ಕೇರಿಯ ಹುಡುಗ ಮಾನು – ಕೇರಿಯ ಹುಡುಗ ಮೀರಾ – ಕೇರಿಯ ಹುಡುಗಿ ಮಾದಪ್ಪ – ಮಾನುವನ ತಂದೆ ಅನಾಮಿಕ – ಧ್ವನಿ ಪುಟ್ಟಿ – ಲಂಬೋದರ & ಜಾನ್ನವಿಯ ಮಗಳು ಗೌರಿ – ಗೆಳತಿ ದೇವ್ರು – ಅಜ್ಜಿಯ ಮಮ್ಮಕ್ಕಳು ಅನಿ – ಅಜ್ಜಿಯ ಮಮ್ಮಕ್ಕಳು ಮಾಯಾ – ಅಕ್ಕನಂಥ ಗೆಳತಿ ಜಾನ್ನವಿ – ಪುಟ್ಟಿಯ ತಾಯಿ ಲಂಭೋದರ – ಪುಟ್ಟಿಯ ತಂದೆ ದೃಶ್ಯ … Read more

ಜೀವನದ ಅಂಚಿನಲ್ಲಿರುವ ಪುಟಗಳನ್ನು ಪ್ರೀತಿಯ ಬಣ್ಣದಿಂದ ತುಂಬೋಣ: ಜಯಶ್ರೀ. ಜೆ. ಅಬ್ಬಿಗೇರಿ

ಅದ್ಯಾಕೆ ಹೀಗೆ ಅಂತ ನನಗೂ ಗೊತ್ತಿಲ್ಲ. ಮೊದಲಿನಿಂದಲೂ ಹಾಗೆ ಗೆಳತಿಯರು ಅಂತ ಸಮೀಪವಿದ್ದವರೆಲ್ಲ ನನ್ನೊಂದಿಗೆ ಒಂದಿಷ್ಟು ಜಾಸ್ತಿನೇ ಅನ್ನುವಷ್ಟು ಆತ್ಮೀಯರಾಗ್ತಾರೆ. ತಮ್ಮ ಮನಸ್ಸಿನಲ್ಲಿರುವುದನ್ನು ನನ್ನ ಬಳಿ ಮುಕ್ತವಾಗಿ ಹೇಳಿಕೊಳ್ಳುತ್ತಾರೆ. ಬಹುಶಃ ನಾನು ನನ್ನದೇನೋ ಕೆಲಸವಿದೆ ಎಂದು ಅವರಿಗೆ ಬೆನ್ನು ಹಾಕಿ ಎದ್ದು ಹೋಗದೇ ಇರುವುದರಿಂದಲೋ, ಅವರು ಹೇಳಿದ್ದನ್ನೆಲ್ಲ ದೇವರ ಹಾಗೆ ಕೂತು ಕೇಳಿಸಿಕೊಳ್ಳುತ್ತೇನೆ ಎನ್ನುವುದಕ್ಕೋ ಅಥವಾ ಅವರು ಏನು ಹೇಳಿದರೂ ಅದನ್ನು ಪ್ರಶ್ನಿಸದೇ ಒಪ್ಪಿಕೊಳ್ಳುತ್ತೇನೆ ಎನ್ನುವ ಕಾರಣಕ್ಕೋ, ಏನೋ ಗೊತ್ತಿಲ್ಲ. ಒಟ್ಟಿನಲ್ಲಿ ವಯಸ್ಸಿನಲ್ಲಿ ಹೆಚ್ಚು ಕಡಿಮೆ ಹಿರಿಯರು … Read more

ಯುಗಾದಿ: ವೈ. ಬಿ. ಕಡಕೋಳ

ಯುಗ ಯುಗಾದಿ ಕಳೆದರೂ ಯುಗಾದಿ ಮರಳಿ ಬರುತಿದೆ ಹೊಸ ವರುಷಕೆ ಹೊಸ ಹರುಷವ ಹೊಸತು ಹೊಸತು ತರುತಿದೆ ಎಂಬ ಬೇಂದ್ರೆಯವರ ಗೀತೆಯ ಸಾಲುಗಳಲ್ಲಿ ಯುಗಾದಿಯ ಬರುವಿಕೆ, ಅದರಲ್ಲಿನ ಸಡಗರ ವರ್ಣನಾತೀತ. ಋತುಗಳ ರಾಜ ವಸಂತನ ಆಗಮನದ ಸೂಚನೆಯ ಜೊತೆಗೆ ಯುಗಾದಿಯು ಎಲ್ಲ ಹಬ್ಬಗಳಿಗೂ ನಾಂದಿಯಾಗಿ ಪ್ರತಿ ಸಂವತ್ಸರದ ಚೈತ್ರ ಮಾಸ ಶುಕ್ಲಪಕ್ಷದ ಪಾಡ್ಯಮಿ ತಿಥಿಯಂದು ಆಚರಿಸಲ್ಪಡುವ ಹಬ್ಬ ಯುಗಾದಿ. ರಾಮಾಯಣ ಕಾಲಕ್ಕಿಂತ ಮೊದಲು ಉತ್ತರಾಯಣದಿಂದ ಹೊಸ ವರ್ಷದ ಗಣನೆ ಪ್ರಾರಂಭವಾಗುತ್ತಿತ್ತು. ಶ್ರೀರಾಮನು ಆವತರಿಸಿದ ಮಾಸ ಹಾಗೂ ಪಟ್ಟಾಭಿಷೇಕವಾದ … Read more

ತನ್ನ ಅಹಂನ ಮುಂದೆ ದೇಶ ಕಾಯುವ ಯೋಧರ ತ್ಯಾಗ ಬಹು ದೊಡ್ಡದು: ನಾಗರಾಜ್.ಮುಕಾರಿ (ಚಿರಾಭಿ)

ಬೇಸಿಗೆ ಕಾಲ ಬಂದಾಗಲೆಲ್ಲಾ ಊಟಿ ಅಥವಾ ಮನಾಲಿಯ ನೆನಪಾಗುತ್ತಿತ್ತು ಕಾರಣ ನಿಮಗೆ ಗೊತ್ತೇ ಇದೆ. ಅಲ್ಲಿಯ ವಾತಾವರಣ ದೇಹ ತಂಪು ಮಾಡುವುದರ ಜೊತೆಗೆ ಕಣ್ಣುಗಳಲ್ಲಿ ಅಲ್ಲಿಯ ಸ್ವರ್ಗರಮಣೀಯ ದೃಷ್ಯಗಳನ್ನು ತುಂಬಿ ಆನಂದ ಪಡೆಸುತ್ತದೆ. ಹಾಗಾಗಿ ಈ ಬಾರಿ ಮನಾಲಿಗೆ ಹೋಗುವುದಾಗಿ ನಿರ್ಧರಿಸಿ ತಿರುವನಂತಪುರಂ-ಡೆಲ್ಲಿಗೆ ಹೊರಡುವ ರಾಜಧಾನಿ ಎಕ್ಸ್‍ಪ್ರೆಸ್‍ನಲ್ಲಿ ಟಿಕೆಟ್ ಬುಕ್ ಮಾಡಿ ಕುಟುಂಬ ಸಮೇತರಾಗಿ ಹೊರಟೇ ಬಿಟ್ಟೆವು. ರೈಲಿನ ಒಳಹೊಕ್ಕೊಡನೇ ತಂಪಾದ ಗಾಳಿ ಮೈಯಲ್ಲಾ ತಣ್ಣಗಾಗಿಸಿತು. ಮನಾಲಿಯ ಸುಖ ಇಲ್ಲಿಂದಲೇ ಸಿಗಲು ಶುರುವಾಯಿತು. ನಮಗೆ ನಿಗಧಿ ಪಡಿಸಿದ … Read more

ಧೈರ್ಯವೇ ಹಿಮಾಲಯ, ಗೆಲ್ಲು ನೀ ಅಧೈರ್ಯವಾ. . . . : ಸುನಂದಾ ಎಸ್ ಭರಮನಾಯ್ಕರ

ಧೈರ್ಯ ಎಂದರೆ ಛಾತಿ, ಕೆಚ್ಚು, ಎದೆಗಾರಿಕೆ. ಧೈರ್ಯವು ಭಯ, ನೋವು ಅಪಾಯ ಅನಿಶ್ಚಿತತೆ ಅಥವಾ ಬೆದರಿಕೆಯನ್ನು ಎದುರಿಸುವ ಸಾಮಥ್ರ್ಯ ಮತ್ತು ಇಚ್ಛೆಯಾಗಿದೆ. ಮನುಷ್ಯ ಯಾವುದೇ ಸಾಧನೆ ಮಾಡಬೇಕಾದರೂ ಆತನಲ್ಲಿ ಮೊದಲು ಇರಬೇಕಾದದ್ದು ಧೈರ್ಯ. “ಧೈರ್ಯಂ ಸರ್ವತ್ರ ಸಾಧನಂ”. ಮನುಷ್ಯನಲ್ಲಿ ಸಿಗುವ ಅತಿ ವಿರಳ ಹಾಗೂ ಅತಿ ಅಮೂಲ್ಯವಾದ ವಸ್ತುವೆಂದರೆ ಧೈರ್ಯವೇ ಆಗಿದೆ. ಅದನ್ನು ಪೇಟೆಯಲ್ಲಿ ಖರೀದಿ ಮಾಡಲಾಗುವುದಿಲ್ಲ. ಅದು ಮಾರಾಟದ ವಸ್ತುವಾಗಿದ್ದರೆ ಪುಕ್ಕಲರೂ, ಶ್ರೀಮಂತರಾದಿಯಾಗಿ ಎಲ್ಲರೂ ಅದನ್ನು ಕೊಂಡು ಕೊಂಡು ತಮ್ಮ ಬಳಿ ಇರಿಸಿಕೊಳ್ಳುತ್ತಿದ್ದರು. ಬದುಕು ಗೆಲ್ಲಲು … Read more

ಹೊಸ ಚೈತನ್ಯ ನೀಡುವ ಹಬ್ಬ ಯುಗಾದಿ: ಡಾ. ಶಿವಕುಮಾರ ಎಸ್‌. ಮಾದಗುಂಡಿ

ಪ್ರಾಚೀನ ರೋಮನ್ ಕವಿ ಓವಿಡ್ ಒಮ್ಮೆ ಜ್ಯೋತಿಷಿ ಜಾನುಸ್ನನ್ನು ಕೇಳಿದ: ‘ಹೊಸ ವಷ೯ ಜನವರಿಯಿಂದಲೇ ಏಕೆ ಆರಂಭವಾಗಬೇಕು’? ಎಂದು. ಅದಕ್ಕೆ ಜ್ಯೋತಿಷಿ ಹೇಳಿದರೂ ಜನವರಿ ತಿಂಗಳಿನಲ್ಲಿ ಸೂರ್ಯ ಮಕರ ರಾಶಿ ಪ್ರವೇಶಿಸುತ್ತಾನೆ. ಅಂದಿನವರೆಗೆ ಹಿಮದಿಂದ ಮಂಕಾಗಿದ್ದ ಜಗತ್ತು ಅಂದಿನಿಂದ ಸ್ವಚ್ಛವಾಗಿ ಜನತೆಯಲ್ಲಿ ಹೊಸ ಉತ್ಸಾಹ, ನವೋದಯ ಆರಂಭವಾಗುವುದರಿಂದ ಅಂದಿನಿಂದ ಹೊಸವರ್ಷದ ಆರಂಭ ಎಂದು ಹೇಳಿದರು. ಆದರೆ, ಸಾಮಾನ್ಯವಾಗಿ ಹೊಸ ವರ್ಷ ಎಂದರೆ ಜಗತ್ತಿನಲ್ಲಿ ಜನವರಿ ಒಂದು ಎಂದು ನಾವೆಲ್ಲರೂ ಭಾವಿಸುತ್ತೇವೆ. ಆದರೆ, ಆ ದಿನ ಮನೆಯ ಗೋಡೆಯ … Read more

ಮನದಲಿ ಮೂಡಿದ ಸಂಭ್ರಮದ ಯುಗಾದಿ: ಪಿ. ಕೆ. ಜೈನ್ ಚಪ್ಪರಿಕೆ.

ಭೂಮಿಯು ಸೂರ್ಯನ ಸುತ್ತ ಸುತ್ತುವಾಗ ಹವಮಾನದಲ್ಲಿ ಹಾಗೂ ನಿಸರ್ಗದಲ್ಲಿ ಉಂಟಾಗುವ ಬದಲಾವಣೆಗಳಿಗೆ ಋತುಗಳು ಎನ್ನುತ್ತೇವೆ. ಭಾರತೀಯರ ಪದ್ಧತಿಯಲ್ಲಿ 6 ಋತುಗಳಿದ್ದು ವಸಂತ ಋತುವು ಹಿಂದೂ ವರ್ಷದ ಆರಂಭದ ಋತುವಾಗಿದೆ. ಒಂದೊಂದು ಋತುವಿಗೂ ಎರಡು ಮಾಸಗಳಿದ್ದು ಚೈತ್ರ ಮತ್ತು ವೈಶಾಖ ಮಾಸಗಳು ವಸಂತ ಋತುವಿನಡಿಯಲ್ಲಿ ಬರುತ್ತವೆ. ಹೀಗೆ ಚೈತ್ರ ಮಾಸ ಶುಕ್ಲ ಪಕ್ಷದಲ್ಲಿ ಬರುವ ಯುಗಾದಿಯನ್ನು ಹೊಸ ವರ್ಷವೆಂದು ಆಚರಿಸುತ್ತೇವೆ. ಯುಗಾದಿಯು ದಕ್ಷಿಣ ಬಾರತದ ಜನರಿಗೆ ವರ್ಷದ ಮೊದಲ ಹಬ್ಬವಾಗಿ ಉತ್ತರ ಭಾರತದವರಿಗೆ ಇದು ಹೋಳಿಯ ನಂತರ ಬರುವ … Read more

ಹರಕೆ ಸಂದಾಯ: ಕೃಷ್ಣವೇಣಿ ಕಿದೂರು

ನಮ್ಮ ತುಳು ಭಾಷೆಯಲ್ಲಿ ಒಂದು ಮಾತಿದೆ. ಯಾರಿಗಾದರೂ ಒಂದು ಕೆಲಸ ಒಪ್ಪಿಸಿದಾಗ ಅಸಡ್ಡೆಯಿಂದ ಅಥವಾ ಉಡಾಫೆಯಿಂದ ಅರೆಬರೆ ಮಾಡಿದ್ದು ಕಂಡಾಗ ’ ಉಂದ್ ಎಂಚಿನ? ಪರಕೆ ಸಂದಾಯನಾ” (ಏನಿದು ? ಹರಕೆ ಸಂದಾಯವಾ ಅಂತ ಕೇಳುವುದು. ಕನ್ನಡದಲ್ಲಿಯೂ ಅದೇ ಅರ್ಥದ ಮಾತು ಉಂಟು. ಮಾಡುವ ಕಾರ್ಯವನ್ನು ಔದಾಸಿನ್ಯದಿಂದ ಅರ್ಧಮರ್ಧ ಮಾಡಿದಾಗ ಅದಕ್ಕೆ ಹೆಸರೇ’’ ಹರಕೆ ಸಂದಾಯವಾ” ಅಂತ ಸಣ್ಣಕ್ಕೆ ಗದರಿಸುವುದು. ಒಪ್ಪಿಸಿದ ಕೆಲಸ ಒಪ್ಪವಾಗಿ ಮಾಡಿದಾಗ ಅಂಥ ಮಾತಿಗಲ್ಲಿ ಎಡೆಯಿಲ್ಲ. ಬದಲಿಗೆ ಮೆಚ್ಚುಗೆ, ಪ್ರಶಂಸೆ , ಅಭಿಮಾನ … Read more

ಪ್ರಸವ ಕಾಲ….: ಆಶಾಜಗದೀಶ್

  ಮನೆ ಮುಂದಿನ ಮಲ್ಲಿಗೆ ತನ್ನ ಎಂದಿನ ತನ್ಮಯತೆಯಲ್ಲಿ ತಾರಸಿಯ ಮೇಲೆ ಧ್ಯಾನಸ್ಥವಾಗಿತ್ತು. ಮಿಸುಗಾಡುವ ಒಡಲು ಅದಕ್ಕೊಂದು ಗರ್ಭಿಣಿಯ ಕಳೆ ತಂದಿತ್ತಿತ್ತು. ಅದೂ ತೀರಾ ಇತ್ತೀಚಿನಿಂದ ಹೀಗೆ….. ಅದು ನವೆಂಬರ್ ಡಿಸೆಂಬರಿನ ಸಂದರ್ಭ… ಗುಬ್ಬಿಯೊಂದು ತನ್ನ ಸಂಗಾತಿಯೊಂದಿಗೆ ಬಾಣಂತನಕ್ಕಾಗಿ ಬಂದಿತ್ತು… ಹೀಗೆ ಹಕ್ಕಿಗಳು ಮೇಲಿಂದ ಮೇಲೆ ನಮ್ಮ ತೋಟವಲ್ಲದ ಪುಟ್ಟ ತೋಟಕ್ಕೆ ಬರುವುದು ಮಾಮೂಲೇ ಇತ್ತಾದರೂ ಪ್ರತಿ ಬಾರಿಯೂ ಹೋಸದೆಂಬಂತಹ ಉತ್ಸಾಹ ಮಾತ್ರ ನಮ್ಮನ್ನು ಅದೇಕೆ ತುಂಬುತ್ತಿತ್ತೋ ಗೊತ್ತಿಲ್ಲ… ಬಹುಶಃ ಹುಟ್ಟು ಎನ್ನುವುದು ಸಕಲ ಜೀವರಾಶಿಯೊಳಗೆ ಪ್ರವೇಶಿಸುವಾಗ … Read more

ಆಸೆಯೆಂಬ ಬಿಸಿಲು ಕುದುರೆ ಏಕೆ ಏರುವೆ…?: ರಮೇಶ್ ವಿ

ಆಸೆ ಯಾರಿಗಿರಲ್ಲ  ಹೇಳಿ! ಪ್ರತಿಯೊಬ್ಬ ಮನುಷ್ಯನಿಗೂ ಅವನೆದೆಯಾದಂತ ಆಸೆ ಆಕಾಂಕ್ಷೆ ಇರುತ್ತೆ, ಅವನ ಆಸೆಯೇ ನಾಳೆಗೆ ಪ್ರೇರಣೆ, ಭರವಸೆ ಹಾಗು ಮುನ್ನುಡಿ. ಆದ್ರೆ ಅದು ದುಃಖದ ಮೂಲವು ಹೌದು. ನನಗು ನನ್ನ ತಂದೆ ಉಳಿಸಿಕೋ ಬೇಕೆಂಬ ಮಹದಾಸೆ ಇತ್ತು ಆದ್ರೆ ಕಡೆಯಲ್ಲಿ ನಮ್ಮಾಸೆ ಜೊತೆ ಅಪ್ಪನಿಗೂ ಎಳ್ಳು ನೀರು ಬಿತ್ತಂತಾಯಿತು! ನನ್ನ ಅನುಭವದ ಮಾತು…! ಮಾರ್ಚ್ ೨೦೧೭ ಅಪ್ಪನಿಗೆ ೬೦ ವಸಂತ ತುಂಬಿದಾಗ ಷಷ್ಠಿಪೂರ್ತಿ ಪೂಜೆ ಮಾಡಲಾಗಲಿಲ್ಲ, ಈಗ ೭೦ ನೇ ಹುಟ್ಟುಹಬ್ಬದ ಪ್ರಯುಕ್ತ ವಿಶೇಷ ಷಷ್ಠಿಪೂರ್ತಿ … Read more

ಮೋಹಕ ತಿರುವು: ಕಮಲ ಬೆಲಗೂರ್.

ಪಾರ್ವತಿ ಒಲೆಯ ಮುಂದೆ  ಕುಳಿತು ರೊಟ್ಟಿ ಮಾಡ್ತಿದ್ದಾಳೆ. ಯಾಂತ್ರಿಕವಾಗಿ ಕೈ ಕೆಲಸಮಾಡುತ್ತಿದ್ದರೂ ಮನಸ್ಸು ಗಾಢವಾದ ಯೋಚನೆಯಲ್ಲಿ ಸಿಲುಕಿದೆ. ಕಣ್ಣು ಗಳು ಉರಿಯನ್ನೇ ದಿಟ್ಟಿಸಿ ನೋಡುತ್ತಿವೆ. ಮನಸ್ಸು ಮಗನ ಬಗ್ಗೆ ಯೋಚಿಸುತ್ತಾ ಕೊರಗುತ್ತಿದೆ. ಮಗನ ಸಂಸಾರವನ್ನು ನೋಡುತ್ತಾ ಕಣ್ತುಂಬಿಸಿಕೊಳ್ಳಬೇಕೆಂಬ ಆಸೆ ಆಸೆಯಾಗಿಯೇ ಉಳಿದುಬಿಟ್ಟಿದೆ. ಪಾರ್ವತಿ ವಿಧವೆ. ಮಗ ಸೋಮು ಪ್ರತಿಭಾವಂತ. ಚಿಕ್ಕಂದಿನಲ್ಲಿಯೇ ಅಪ್ಪನನ್ನು ಕಳೆದುಕೊಂಡು ಬೆಳೆದ ಅವನಿಗೆ ಅಮ್ಮನೇ ಸರ್ವಸ್ವ. ಅಪ್ಪನ ಕೊನೆಯ ಆಸೆಯಂತೆ ಅವರ ಸ್ನೇಹಿತರ ಮಗಳೊಂದಿಗೆ ಅವನ ಬಾಲ್ಯ ವಿವಾಹವಾಗಿರುತ್ತದೆ. ತಂದೆಯ ಮರಣಾನಂತರ ಎರಡೂ ಕುಟುಂಬಗಳು … Read more

ಯುಗಾದಿ ವಿಶೇಷಾಂಕಕ್ಕೆ ಲೇಖನ ಆಹ್ವಾನ

ಪ್ರಿಯ ಪಂಜುವಿನ ಓದುಗರೇ ಹಾಗು ಬರಹಗಾರರೇ, ನಿಮ್ಮೆಲ್ಲರ ಅಭಿಮಾನದಿಂದ ಪಂಜು ಕಳೆದ ತಿಂಗಳು ಜನವರಿ 21 ರಂದು ಐದು ವರ್ಷ ತುಂಬಿ ಆರನೇ ವರ್ಷಕ್ಕೆ ಕಾಲಿಟ್ಟಿದೆ. ಹತ್ತಾರು ವೆಬ್ ತಾಣಗಳ ನಡುವೆಯೂ ತನ್ನದೇ ಆದ ಓದುಗ ಬಳಗವನ್ನು ಹೊಂದಿರುವ ಪಂಜು, ತಿಂಗಳಿಗೆ ಕಡಿಮೆ ಎಂದರೂ ಎರಡೂವರೆ ಲಕ್ಷ ಹಿಟ್ಸ್ ಜೊತೆಗೆ ಸುಮಾರು ಏಳೂವರೆ ಸಾವಿರ ಓದುಗರು ಪಂಜುಗೆ ಭೇಟಿ ನೀಡುತ್ತಾರೆ ಎಂಬುದು 2017ರ ಹೈಲೈಟ್ಸ್.. ಪಂಜು ಆಗಾಗ ವಿಶೇಷ ಸಂಚಿಕೆಗಳನ್ನು ಹೊರ ತರುವುದು ವಾಡಿಕೆ. ಈ ವರ್ಷದ … Read more

ವರ್ಣಮಯ ಬದುಕು ಆನಂದಮಯ: ಜಯಶ್ರೀ.ಜೆ. ಅಬ್ಬಿಗೇರಿ

ಮುದ್ದು ಕಂದಮ್ಮ ರಚ್ಚೆ ಹಿಡಿದು ಅಳುವಾಗ ಅದರ ಕೈಯಲ್ಲಿ ಬಣ್ಣದ ಗೊಂಬೆಯನ್ನು ಕೊಟ್ಟರೆ ಸಾಕು ತಕ್ಷಣಕ್ಕೆ ಅಳು ನಿಲ್ಲಿಸಿ ನಗು ಚೆಲ್ಲುತ್ತದೆ. ಬಣ್ಣದ ಆಕರ್ಷಣೆಯೇ ಅಂಥದು. ಬಣ್ಣವಿಲ್ಲದ ಬದುಕನ್ನು ಊಹಿಸಲು ಸಾಧ್ಯವೇ ಇಲ್ಲ. ಎನ್ನುವಷ್ಟರ ಮಟ್ಟಿಗೆ ಬಣ್ಣ ನಮ್ಮ ಜೀವನದಲ್ಲಿ ಹಾಸು ಹೊಕ್ಕಾಗಿದೆ. ಬಣ್ಣಗಳು ತಮ್ಮ ಪ್ರಭಾವಲಯವನ್ನು ಅಷ್ಟೊಂದು ವ್ಯಾಪಕವಾಗಿ ವಿಸ್ತರಿಸಿಕೊಂಡಿವೆ. ದಿನಗಳೆದಂತೆ ನಾವೂ ಅವುಗಳ ಮೋಡಿಗೆ ಹೆಚ್ಚು ಹೆಚ್ಚು ಬೀಳಿತ್ತಲೇ ಇದ್ದೇವೆ.ನಮ್ಮಲ್ಲಿ ಬಣ್ಣಗಳಿಲ್ಲದೇ ಹಬ್ಬದ ರಂಗು ಹೆಚ್ಚುವುದೇ ಇಲ್ಲ. ನವರಾತ್ರಿಯಲ್ಲಿ ಶಕ್ತಿ ದೇವತೆಗೆ ಹಲವಾರು ರತ್ನ … Read more

ಪ್ರೇಮ ಪತ್ರ ತಂದ ಪೇಚು: ವೈ. ಬಿ. ಕಡಕೋಳ

ಆ ದಿನ ಎಂದಿನಂತಿರಲಿಲ್ಲ ವಿಜಯ್ ಗರಬಡಿದವನಂತೆ ಕುಳಿತಿದ್ದ. “ಯಾಕೋ ಹೀಗೆ ಕುಳಿತಿರುವೆ ಏನಾಗಿದೆ ನಿನಗೆ? “ಎಂದ ಅಮಿತ್. “ಮಾಡೋದೆಲ್ಲ ಮಾಡಿಬಿಟ್ಟು ಏನೂ ಗೊತ್ತಿಲ್ಲ ಅನ್ನುವಂತೆ ಇದ್ದೀಯಲ್ಲ ನೀನೂ ಒಬ್ಬ ಗೆಳೆಯನಾ? “ಎಂದ. “ಯಾಕಪ್ಪಾ ಅಂಥಾ ತಪ್ಪು ನನ್ನಿಂದ ಆಗಿದ್ದಾದರೂ ಏನು? ” ಎಂದು ಅಮಿತ್ ಕುತೂಹಲದಿಂದ ಪ್ರಶ್ನಿಸಲು “ನನ್ನ ಭಾವಿ ಪತ್ನಿಗೆ ಪತ್ರ ಬರೆದಿದ್ದು  ಎಡವಟ್ಟಾಗಿದೆ ಏನು ಮಾಡಲಿ? ” ಎಂದ ಸಪ್ಪೆ ಮೋರೆಯಿಂದ, “ಅದಕ್ಯ್ಕಾಕೋ ಬೇಜಾರು? ” ಎಂದ ಅಮಿತ್ . ಆಗ ವಿಜಯ್ “ನೀನು … Read more

ಯುವ ಜನತೆಗೆ ವಿವೇಕಾನಂದರ ಆದರ್ಶಗಳು: ವೈ. ಬಿ. ಕಡಕೋಳ

ಸ್ವಾಮಿ ವಿವೇಕಾನಂದ(ನರೇಂದನಾಥ ದತ್ತ)(ಜನೇವರಿ 12 1863 ಜನನ) ಭಾರತದ ಅತ್ಯಂತ ಪ್ರಸಿದ್ದ ಹಾಗೂ ಪ್ರಭಾವಶಾಲೀ ತತ್ವಜ್ಞಾನಿಗಳು. ನಿರ್ಭಯತೆ, ಆಶಾವಾದ, ಮತ್ತು ಸಾಮಾಜಿಕ ಸಮಸ್ಯೆಗಳ ಬಗೆಗಿನ  ವಿಶಾಲ ದೃಷ್ಟಿಯ ಸಂಕೇತವಾಗಿ ಇಡೀ ವಿಶ್ವಕ್ಕೆ ಮಾದರಿಯಾದ ಸನ್ಯಾಸಿ. ಸ್ವಾಮಿ ವಿವೇಕಾನಂದರ ಜನ್ಮದಿನವಾದ ಜನೇವರಿ 12 “ರಾಷ್ಟ್ರೀಯ ಯುವ ದಿನ”ವೆಂದು 1984 ರಿಂದ ಕೇಂದ್ರ ಸರಕಾರ ಸೂಚಿಸಿದ್ದು ಅಂದಿನಿಂದ ಇದನ್ನು ಆಚರಿಸಲಾಗುತ್ತಿದೆ. ಪ್ರತಿಯೊಬ್ಬರೂ ವಿವೇಕಾನಂದರ ಬದುಕಿನ ಆದರ್ಶಗಳ ಕುರಿತು ಈ ಸಂದರ್ಭದಲ್ಲಿ ಅರ್ಥೈಸಿಕೊಳ್ಳಬೇಕು. ವಿವೇಕಾನಂದರ ಪೂರ್ವಾಶ್ರಮದ ಹೆಸರು ನರೇಂದ್ರನಾಥ ದತ್ತ. ತಂದೆ … Read more

ವೃದ್ಧಾಪ್ಯ: ವೈ. ಬಿ. ಕಡಕೋಳ

ವೃದ್ಧಾಪ್ಯ ಮನುಷ್ಯನ ನಾಲ್ಕು ವಿಧದ ಅವಸ್ಥೆಗಳಲ್ಲಿ ಒಂದು. ಬಾಲ್ಯ, ಯೌವನ. ಗೃಹಸ್ಥ, ನಂತರ ಬರುವುದು ವೃದ್ಧಾಪ್ಯ. ಜೀವಿಯ ದೇಹವು ಬೆಳವಣಿಗೆಯ ಕೊನೆಯ ಹಂತದಲ್ಲಿರುವಾಗ ಬರುವ ಈ ವೃದ್ಧಾಪ್ಯ ಬದುಕಿನಲ್ಲಿ ಕೆಲವು ಕುಟುಂಬಗಳಲ್ಲಿ ಸಂತಸವನ್ನು ತಂದರೆ ಇನ್ನು ಕೆಲವು ಕುಟುಂಬಗಳಲ್ಲಿ ದುಃಖದ ಛಾಯೆಯನ್ನು ನೀಡುವ ಬದುಕಿನ ಕೊನೆಯ ಘಟ್ಟದ ಗಳಿಗೆಯನ್ನು ತಂದೊಡ್ಡುತ್ತಿದೆ. ನಾವು ಇತಿಹಾಸದಲ್ಲಿ ಶ್ರವಣಕುಮಾರನ ಕಥೆಯನ್ನು ಕೇಳುತ್ತೇವೆ. ಹಾಗೂ ಒದುತ್ತೇವೆ. ತನ್ನ ವೃದ್ದ ತಂದೆ-ತಾಯಿಯನ್ನು ಬುಟ್ಟಿಯಲ್ಲಿ ಕುಳ್ಳಿರಿಸಿ ತೀರ್ಥಯಾತ್ರೆ ಮಾಡಿಸಿದ್ದನ್ನು ಮತ್ತೊಬ್ಬರಿಗೆ ಆದರ್ಶಪ್ರಾಯವೆಂಬ ಉದಾಹರಣೆ ಕೊಡುತ್ತೇವಲ್ಲವೇ, ? … Read more

ಮಾತೋಶ್ರೀ ಗೌರಮ್ಮ ಸಾಹಿತ್ಯ ಪ್ರಶಸ್ತಿಗಾಗಿ ಕೃತಿಗಳ ಆಹ್ವಾನ

ಮಾತೋಶ್ರೀ ಗೌರಮ್ಮ ಸಾಹಿತ್ಯ ಪ್ರತಿಷ್ಠಾನವು 2016-17ರಲ್ಲಿ ಪ್ರಕಟವಾದ ಕಥೆ,ಕಾದಂಬರಿ,ಕವನ ಸಂಕಲನ,ವಿಮರ್ಶೆ ಮತ್ತು ಅನುವಾದ ಸಾಹಿತ್ಯ ಕೃತಿಗಳಿಗೆ ಪ್ರಶಸ್ತಿ ನೀಡಲು ಆಹ್ವಾನಿಸಿದೆ. ಕನ್ನಡದ ಕೃತಿಗಳನ್ನು ಪ್ರಶಸ್ತಿಗೆ ಪರಿಗಣಿಸಲಾಗುವುದು. ಸಾಹಿತ್ಯದ ಎರಡು ಪ್ರಕಾರದ ಉತ್ತಮ ಕೃತಿಗಳಿಗೆ ಈ ಪ್ರಶಸ್ತಿ ನೀಡಲು ಪ್ರತಿಷ್ಠಾನ ನಿರ್ಧರಿಸಿದೆ.  2500 ನಗದು ಮತ್ತು ಫಲಕವನ್ನು ಒಳಗೊಂಡಿರುವುದೆಂದು ಪ್ರತಿಷ್ಠಾನದ ಅಧ್ಯಕ್ಷರು ಶ್ರೀ ಭೀಮಣ್ಣ ಭಂಗಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.ಲೇಖಕರು ಕೃತಿಗಳನ್ನು 28 ಜನವರಿ 2018ರ ಒಳಗಾಗಿ ಈ ವಿಳಾಸಕ್ಕೆ ಕಳಿಸಬಹುದು. ತಿರುಪತಿ ಭಂಗಿ  ಕಾರ್ಯದರ್ಶಿಗಳು “ಮಾತೋಶ್ರೀ ಗೌರಮ್ಮ ಸಾಹಿತ್ಯ … Read more

ಫ್ರಾನ್ಜ್ ಕಾಫ್ಕನ ತಪೋಸ್ಥಲ: ಕೀರ್ತಿ. ಪಿ

ಜಗತ್ತಿನ ಪ್ರತಿಯೊಂದು ಕತೆ, ಕಾದಂಬರಿಯೂ ಏನೋ ಒಂದು ಸಾರಾಂಶವ ಹೇಳಲು ಹೊರಟಿರುತ್ತದೆ. ತನ್ನ ಕಾವ್ಯಾನುಶಕ್ತಿಯ ಮೀರಿ ಕವಿ ಬರೆಯಲು ಹೋದಾಗ ಕವಿಗೆ ಕಾವ್ಯ ಹೊಸತು, ನಿರ್ಧಾರ ಸ್ಪಷ್ಟವಾಗುತಾ ಹೋಗುತ್ತದೆ. ಕವಿ ಹೀಗೆಯಿರಬೇಕೆಂಬ ಇರಾದೆ, ತಗಾದೆಯೂ ಇಲ್ಲ, ತನ್ನ ಅರ್ಥಪೂರ್ಣ ಕತೆಯ ಚಿತ್ರಿಸಲು ಕವಿಗೆ ಹೊಳೆದದ್ದನ್ನು ಹೇಳಿ ಮುಗಿಸಿ ಬಿಡುತ್ತಾನೆ. ಕಾವ್ಯ ತಪಸ್ಸು, ತಪಸ್ಸಿಲ್ಲದ ವ್ಯಕ್ತಿಗೆ ಕಾವ್ಯ ದಕ್ಕುವುದು ಕಷ್ಟ. ಓದು, ಜ್ಞಾನ, ತಾಳ್ಮೆ, ಪ್ರೀತಿ, ಸಹನೆ, ತಪಸ್ಸು, ಏಕಾಂತ, ಧ್ಯಾನ, ವಿಭೂತಿಯ ವಿಭಾವ, ಭಾವನಾತ್ಮಕ ಮನೋಭಾವ ಬಹುಮುಖ್ಯ! … Read more

ಬದುಕಿನಲ್ಲಿ ಭರವಸೆ ಎಂಬುದು ಪುನರ್ಜನ್ಮದ ಅವಕಾಶವಿದ್ದಂತೆ: ನರಸಿಂಹಮೂರ್ತಿ. ಎಂ.ಎಲ್.

ನಿರೀಕ್ಷೆಗಳು ಹುಸಿಗೊಂಡಾಗ ಭರವಸೆಗಳೊಂದಿಗೆ ಬೆಸೆದುಕೊಂಡು ಮುನ್ನೆಡೆಯಬೇಕು. ಅಂದುಕೊಂಡಿದ್ದೆಲ್ಲ  ನಡೆಯಲ್ಲ, ಅಪೇಕ್ಷಿಸಿದ್ದೆಲ್ಲ ದೊರೆಯುವುದಿಲ್ಲ. ಇದು ಹೀಗೆ ಒಂದಂತರಂಗದ ಅಲೆಯಾಗಿ ಮೌನವನ್ನು ಪರಿಚಯಿಸಿ ಹೋಗಿಬಿಡುತ್ತದೆ.  ನಿರೀಕ್ಷೆಗಳಲ್ಲಿ ತೇಲಿಮುಳುಗುವಾಗ ಕುತೂಹಲಗಳು ಕನಸ್ಸಿನ ದೋಣಿಯನ್ನು ಅಲುಗಾಡದಂತೆ ಮುನ್ನೆಡಿಸಿದಂತೆ ಸೊಗಸಾದ ಅನುಭವದ ಹಿತವನ್ನು ಒಡ್ಡುತ್ತದೆ. ಅದೇ ನಿರೀಕ್ಷೆಗಳು ಹುಸಿಯಾಗುತ್ತಿದ್ದಂತೆ ಭರವಸೆಯ ಬೆಳಕು ಮೆಲ್ಲನೆ ಸರಿದು ಹೋಗಿ ಕತ್ತಲಾವರಿಸಲು ಆರಂಭಿಸಿ ಅತೀವ ಭಾವೋವೇದನೆಗೆ ಗುರಿ ಮಾಡುತ್ತಾ ಜಗತ್ತೆಲ್ಲ ಶೂನ್ಯವೆಂಬಂತಾಗಿ ಜಿಗುಪ್ಸೆ ಆವರಿಸಿಕೊಳ್ಳುತ್ತದೆ. ಏನೇನು ಹುಚ್ಚು ಮನಸ್ಸಿನ ಮಜಲುಗಳು ವಿವಿಧ ಆಯಾಮಗಳಲ್ಲಿ ಹಂಗಿಸಲು ಆರಂಭಿಸುತ್ತದೆ. ಈ ಪಯಣವೇ … Read more

ಮಕ್ಕಳಲ್ಲಿ ಹೆಚ್ಚುತ್ತಿರುವ ಒತ್ತಡ: ವೈ. ಬಿ. ಕಡಕೋಳ

"ಅಮ್ಮಾ ಇಂದು ನನಗೆ ಹೊಟ್ಟೆ ನೋಯುತಿದೆ. ಶಾಲೆಗೆ ಹೋಗಲಾರೆ”, ಮಹೇಶನಿಗೆ ಶಾಲೆಗೆ ಹೋಗದೇ ಇರಲು ಇಂಥ ನೆಪ ಹೊಸತೇನಲ್ಲ. ಆತ ಆಗಾಗ ತಲೆನೋವು, ಹೊಟ್ಟೆನೋವು, ಎನ್ನುತ್ತಲೇ ಇರುತ್ತಾನೆ. ಕೆಲ ಸಲ ವಾಂತಿಯಾಗುತ್ತದೆ ಎಂದು ಹೇಳಿ ವಾಂತಿ ಸಹ ಮಾಡುತ್ತಾನೆ. ಆತನ ತಂದೆ ತಾಯಿ ಇದು ಆತನ ಹಠಮಾರಿತನ ಎಂದು ಭಾವಿಸುತ್ತಾರೆ. ಆತನನ್ನು ಹೊಡೆದು ಬಡಿದು ಬೈದು ಹೇಗಾದರೂ ಮಾಡಿ ಆತನನ್ನು ಶಾಲೆಗೆ ಕಳುಹಿಸುತ್ತಾರೆ.     ಅವರೇನೋ ಆತನದು ಹಠಮಾರಿತನ ಎಂದು ಭಾವಿಸಿದ್ದಾರೆ ಆತ ನಿಜವಾಗಿಯೂ ಅನಾರೋಗ್ಯಕ್ಕೀಡಾಗಿದ್ದಾನೆ. ಆತನಿಗೆ ಶಾಲೆಯ … Read more

ದೇವರಂಥವರಿವರು: ಪ್ರೇಮಾ ಟಿ ಎಮ್ ಆರ್

"ನೀನು ದೇವರನ್ನು ನೋಡಿದ್ದೀಯಾ?" ಮುಸ್ಸಂಜೆ ಜಗುಲಿ ಕಟ್ಟೆಮೇಲೆ  ಕೂತು ಹರಟುವಾಗೆಲ್ಲ ಈ ಥರ ತರ್ಲೆ ಪ್ರಶ್ನೆಗಳನ್ನು ಎಸೆದು ನನ್ನೊಳಗಿನ ಗಡಿಬಿಡಿಯನ್ನ ನೋಡುತ್ತ ಕೂಡ್ರುವದು  ಗೆಳತಿ ವೀಣಾಳ ಅಭ್ಯಾಸ.  ನಾನು ತಡಮಾಡದೇ ಹೂಂ ಎಂದೆ.  ನನ್ನ ಹೂಂ ಎಂಬ ಉತ್ತರಕ್ಕೆ ನಾನೇ ಗಲಿಬಿಲಗೊಂಡಿದ್ದೆ. ನನ್ನ ಹೂಂ ಗೆ ಉತ್ತರ ಹುಡುಕುತ್ತ ನನ್ನೊಳಗೆ ನಾನೇ ಹಿಮ್ಮುಖವಾದೆ. ಈಗ ನಾನೋಡಿದ ದೇವರನ್ನು ಹುಡುಕಬೇಕಿತ್ತು ನನ್ನೊಳಗೆ.  ಕೆಲ ತಿಂಗಳುಗಳ ಹಿಂದೆ ಒಂದು ಸಾಂಸ್ಕ್ರತಿಕ ಕಾರ್ಯಕ್ರಮಕ್ಕೆ ನಿರೂಪಕಿಯಾಗಿ ಹೋಗಿದ್ದೆ. ಪ್ರತಿಷ್ಠಿತ ಶಿಕ್ಷಣಸಂಸ್ಥೆಯಲ್ಲಿ ಹಮ್ಮಿಕೊಂಡ ಕಾರ್ಯಕ್ರಮ. … Read more

ಕಿರು ಲೇಖನಗಳು: ನಿರ್ಮಲಾ ಹಿರೇಮಠ, ಸಹನಾ ಪ್ರಸಾದ್

ಯುವ ಪೀಳಿಗೆಯಲ್ಲಿ ಕನ್ನಾಡಾಭಿಮಾನ ಇಂದಿನ ಯುವಕರೆ ನಾಳಿನ ಸತ್ಪ್ರಜೆಗಳು ಎಂಬಂತೆ ಸ್ವಾಮಿ ವಿವೇಕಾನಂದರು ಯುವಶಕ್ತಿಯ ಮೇಲೆ ಅಗಾಧ ನಂಬಿಕೆ ಇಟ್ಟಿದ್ದರು. ಉಕ್ಕಿನ ನರಮಂಡಲ ಕಬ್ಬಿಣದಂತಹ ಮಾಂಸಖಂಡಗಳನ್ನು ಹೊಂದಿದಂತಹ ಯುವಕರು ಹಾಗೆ ಮನಸ್ಸಿನಲ್ಲಿ ದೃಢವಾದ ಆತ್ಮವಿಶ್ವಾಸ ನಂಬಿಕೆ ಹಾಗೂ ದೇಶಾಭಿಮಾನ ಭಾಷಾಭಿಮಾನ ಹೊಂದಿದ ಸಮರ್ಥ ಯುವಕರು ದೇಶಕ್ಕೆ ಬೇಕಾಗಿದೆ. ಮೊದಲು ತಾಯಿ ಹಾಲು ಕುಡಿದು ಲಲ್ಲೆಯಿಂದ ತೊದಲು ನುಡಿದು ಕೆಳೆಯರೊಡನೆ ಬೆಳೆದು ಬಂದ ಮಾತದಾವುದು ನಲ್ಲೆಯೊಲವ  ತೆರೆದು ತಂದ ಮಾತದಾವುದು ಎಂಬ ಬಿ ಎಂ ಶ್ರೀ ರವರ ಕಾಣಿಕೆ … Read more

ತಿಳುವಳಿಕೆ ವ್ಯರ್ಥ ಕಸರತ್ತಾಗದಿರಲಿ: ನರಸಿಂಹಮೂರ್ತಿ ಎಂ.ಎಲ್, ಮಾಡಪ್ಪಲ್ಲಿ

ನಾವೆಲ್ಲರೂ ಜಾಣರೇ ತಿಳುವಳಿಕೆಗಳಿಗೆ ಬರವಿಲ್ಲ . ಆದರೆ ಬದುಕುಗಳೇ ಬರದೆಡೆಗೆ ದಾಪುಗಾಲಿಡುತ್ತಿವೆ. ಅಂತರ್ಗ್ರಹ ಪರ್ಯಟನೆ ಮಾಡುತ್ತಿರುವ ನಾವುಗಳು ಜೀವಿಸುತ್ತಿರುವ ಗ್ರಹವನ್ನು ಪೀಡಿಸಿ ಪಿಪ್ಪೆ ಮಾಡುತ್ತಿದ್ದೇವೆ. ಪ್ರಪಂಚದ ನೋವು ನಲಿವುಗಳನ್ನು ದೊಡ್ಡ ಮಟ್ಟದಲ್ಲಿ ಚರ್ಚೆಗಳು ಮಾಡುತ್ತಾ ನಮ್ಮ ಅಕ್ಕಪಕ್ಕದ ಸಮಸ್ಯೆಗಳನ್ನೆ ಗಾಳಿಗೆ ತೂರುತ್ತೇವೆ. ಯಾವುದೇ ಕೆಲಸ ಮಾಡಲೀ ವೈಯಕ್ತಿಕ ಲಾಭವನ್ನೆ ನಿರೀಕ್ಷಿಸಿ ಮುನ್ಹ್ನೆಜ್ಜೆ ಹಾಕುತ್ತವೆ. ಇತ್ತೀಚೇಗೆ ತನುಮನಗಳನ್ನು ಮುಡಿಪಾಗಿಟ್ಟು ಸೇವೆಯ ಹೆಸರನ್ನು ವ್ಯಾಪಕವಾಗಿ ಬಳಸುತ್ತಾ ನ್ಯಾಯ, ಸತ್ಯಗಳ ಪರವಾದ ಕೆಲಸಕಾರ್ಯಗಳನ್ನು ಕೈಗೊಳ್ಳುತ್ತೇವೆ. ಅದರ ಹಿಂದೆ ಮಾತ್ರ ಸ್ವಹಿತವೂ ಕಡ್ಡಾಯವಾಗಿರುತ್ತದೆ. … Read more

ಗುಡವಿ ಪಕ್ಷಿಧಾಮ: ವಸಂತ ಬಿ ಈಶ್ವರಗೆರೆ

ಹಸಿರ ಹಾದಿಯ ಪಯಣ, ಮನ ತಣಿಸುವ ಕಾನನ. ಸವಿಯುತ್ತಾ ಸವಿಯುತ್ತಾ ಮುಂದೆ ಸಾಗಿದರೇ ಮಲೆನಾಡ ಹಬ್ಬಾಗಿಲಿನಲ್ಲಿ ಕೈ ಬೀಡಿ ಕರೆಯುವುದೇ ಗುಡವಿ ಎಂಬ ಪಕ್ಷಿಗಳ ಲೋಕ. ಈ ಪ್ರವಾಸಿ ತಾಣಕ್ಕೆ ಕಾಡಿನ ಮಧ್ಯದ ಹಾದಿಯ ಮೂಲಕ ಸಾಗುತ್ತಾ ಹೋದ ಹಾಗೆ, ಪ್ರವಾಸಿಗರ ಮನ ಮಿಡಿಯುತ್ತದೆ. ತಂಪಾದ ಹಾದಿಯ ಪಯಣ ನಿಮಗೆ ಮುಗಗೊಳಿಸುತ್ತದೆ.  ಶಿವಮೊಗ್ಗ ಜಿಲ್ಲೆಯ ಸೊರಬ ತಾಲ್ಲೂಕಿನಿಂದ 12 ಕಿಲೋಮೀಟರ್ ದೂರದಲ್ಲಿರುವ ಸುಮಾರು 23 ಬಗೆಯ ಹಕ್ಕಿಗಳ ಕಲರವದ ತಾಣ ಗುಡವಿ ಪಕ್ಷಿಧಾಮ. 1986 ರಲ್ಲಿ ಜೆ.ಎಚ್.ಪಟೇಲ್ … Read more

ಮರದ ಆಸರೆ ಬಯಸಿದ ಬಳ್ಳಿ: ನಾಗಭೂಷಣ ಬಿ ಕೆ, ಚಂದ್ರಶೇಖರಪುರ

ನಯನಮನೋಹರಿಯಾದ ಅವಳ ಅಂದ ಚಂದ ನೋಡಿದರೆ ನೋಡುತಲೇ ಇರಬೇಕು ಎನ್ನುವಷ್ಟು ಆಕರ್ಷಕ ಮೊಗದವಳು. ತಲೆಯ ಮದ್ಯಕ್ಕೆ ಬೈತಲೆ ತೆಗೆದ ಮಾರುದ್ದ ಜಡೆಯವಳು.ಕತ್ತು ಆಡಿಸುತ್ತ ಮುತ್ತಿನಂತ ಮಾತುಗಳ ಹಾಡುತಿದ್ದರೆ ಕಿವಿಯ ಓಲೆಗಳು ನರ್ತಿಸುತಲಿರುತ್ತವೆ. ಆ ನರ್ತನ ಕಾಣಲು ನಿಜಕ್ಕೂ ಕಣ್ಗಳ ಪುಣ್ಯವೆ ಸರಿ. ಕಪ್ಪು ಕಾಡಿಗೆ ಬಳಿದ ಆ ಕಣ್ಣುಗಳ ನೋಟದಲ್ಲೂ ಒಂದು ಆಕರ್ಷಣೆ. ನಕ್ಕರೆ ನಾಜೂಕು ಕೆನ್ನೆಯ ಮೇಲೆ ಗುಳಿಯೊಂದು ಮೂಡಿ ಅವಳ ಅಂದವನು ಹೆಚ್ಚಿಸಿ ಎತ್ತಿ ತೋರಿತಲಿತ್ತು. ಒಟ್ಟಾರೆಯಾಗಿ ಹೇಳುವುದಾದರೆ ಹೊಳೆವ ಹುಣ್ಣಿಮೆಯ ಪೂರ್ಣಚಂದಿರನಂತೆ ಇರುತಿತ್ತು … Read more

ಮುಖವಾಡ ಕಳಚಿದಾಗ: ಅಮುಭಾವಜೀವಿ

ವ್ಯಕ್ತಿ ಹಾಗೂ ವ್ಯಕ್ತಿತ್ವದ ಮುಖವಾಡಗಳು ಕಳಚುವ ಕಾಲದ ನಂಬಿಕೆಯ ಪರಿಸ್ಥಿತಿ ನಿಜಕ್ಕೂ ಕಳವಳಕಾರಿಯಾಗಿರುತ್ತದೆ. ನಾವು ನಮಗಿಂತಲೂ ಹೆಚ್ಚು ನಂಬಿಕೆಯಿಟ್ಟ ಮನುಷ್ಯ ನಮ್ಮ ನಂಬಿಕೆಗೆ ಅರ್ಹನಲ್ಲ ಎಂದು ತಿಳಿದಾಗ ನಮ್ಮ ಮೇಲೆ ನಮಗೆ ಜಿಗುಪ್ಸೆಯಾಗುತ್ತದೆ. ಮಾನವ ಸಂಘಜೀವಿ .ಇಲ್ಲಿ ಬದುಕುವ ಪ್ರತಿಯೊಬ್ಬರಿಗೂ ಇನ್ನೊಬ್ಬರ ಅವಶ್ಯಕತೆ  ಇದ್ದೇ ಇರುತ್ತದೆ. ಈ ಜಗತ್ತಿನಲ್ಲಿ ಒಂಟಿ ಬದುಕು ಅಷ್ಟು ಸುಲಭವಲ್ಲ. ನೀರು ಆಹಾರ ಬಟ್ಟೆ ಮೈಥುನ ಸುಖದುಃಖ ನೋವುನಲಿವುಗಳನ್ನು ಹಂಚಿಕೊಳ್ಳಲು ಇನ್ನೊಬ್ಬರ ಸಹಾಯವನ್ನು ನಾವು ಯಾಚಿಸಲೇಬೇಕು. ನೀರು ಸ್ವಾಭಾವಿಕ ಆದರೂ ಅದನ್ನು ತಂದುಕೊಡಲು … Read more

ನೆರೆಹೊರೆಯವರೊಂದಿಗೆ ಹೇಗಿರಬೇಕು?: ವೈ. ಬಿ. ಕಡಕೋಳ

ಇತ್ತೀಚಿಗೆ ಪಕ್ಕದ ಮನೆಗೆ ನೆಂಟರು ಬಂದಿದ್ದರು ಅವರು ತಮ್ಮ ಮೋಬೈಲ್ ಚಾರ್ಜರ್ ತಂದಿರಲಿಲ್ಲ. ಆಗ ಅವರಿಗೆ ಮೋಬೈಲ್ ಚಾರ್ಜರ್ ಬೇಕಾಯಿತು. ನಮ್ಮ ಮನೆಗೆ ಬಂದರು. ಮೋಬೈಲ್ ನೋಡಿದೆ ಅದರ ಚಾರ್ಜರ್ ನಮ್ಮ ಮನೆಯಲ್ಲಿತ್ತು ಅವರಿಗೆ ಕೊಟ್ಟು ನಿಮ್ಮ ಮೋಬೈಲ್ ಚಾರ್ಜ ಆದ ತಕ್ಷಣ ಮರಳಿಸಿ ಎಂದು ತಿಳಿಸಿದೆ. ತಗೆದುಕೊಂಡು ಹೋದರು. ಮರುದಿನ ಸಂಜೆಯಾದರೂ ಚಾರ್ಜರ ಮರಳಿಸಿರಲಿಲ್ಲ. ಆಫೀಸಿಂದ ಮನೆಗೆ ಬಂದು ಹೆಂಡತಿಯನ್ನು ಅವರ ಮನೆಗೆ ಕಳಿಸಿದೆ. ಅಯ್ಯೋ ಮರೆತೇ ಬಿಟ್ಟಿದ್ದೆವು. ತಗೊಳ್ಳಿ ಎಂದು ಚಾರ್ಜರ್ ಕೊಟ್ಟರಂತೆ. ಅಷ್ಟೇ … Read more

ಡಾ.ಬಸವಲಿಂಗ ಪಟ್ಟದೇವರ ಸಾಹಿತ್ಯಿಕ ಕೊಡುಗೆ: ಸಂಜೀವಕುಮಾರ ಶಿವಪುತ್ರಪ್ಪಾ ನಡುಕರ

ಕರ್ನಾಟಕದಲ್ಲಿ ಬಸವತತ್ವ ಚಿಂತನೆ ಧರ್ಮ ಪ್ರಚಾರದ ಜೊತೆಗೆ ಅನೇಕ ಮಠಾಧೀಶರು ಸಾಹಿತ್ಯದ ಬರವಣಿಗೆಯಲ್ಲಿ ಸಹ ತೊಡಗಿದ್ದಾರೆ. ಅವರಲ್ಲಿ ಡಾ.ಜಚನಿ, ಡಾ.ಮೂಜಗಂ, ಡಾ.ಅನ್ನದಾನೀಶ್ವರ ಸ್ವಾಮಿಗಳು, ಡಾ.ಮುರುಘ ಶರಣರು ಅವರಂತೆ ಡಾ. ಬಸವಲಿಂಗ ಪಟ್ಟದೇವರು ಕೂಡಾ ಒಬ್ಬರು. ಬಸವಲಿಂಗ ಪಟ್ಟದೇವರು ವೈಚಾರಿಕ ಕ್ರಾಂತಿಯ ಮೂಲಕ ಸಾಮಾಜಿಕ ಚಿಂತನೆಯ ಪ್ರಗತಿಪರ ಚಿಂತಕರು ಹೌದು. ಅವರು ಬಸವ ತತ್ವ ಚಿಂತನೆ ಸಾಹಿತ್ಯವನ್ನು ರಚಿಸಿದ್ದಾರೆ. ಶೈಕ್ಷಣಿಕ, ಸಾಮಾಜಿಕ, ಧಾರ್ಮಿಕ, ಸಾಂಸ್ಕøತಿಕ, ಜೊತೆಗೆ ಸಾಹಿತ್ಯದ ರಚನೆಗೂ ತೊಡಗಿದ್ದಾರೆ. ಬಸವಲಿಂಗ ಪಟ್ಟದೇವರು ಮೂಲತಃ ಕವಿಗಳು ಅವರು ವಿದ್ಯಾರ್ಥಿ … Read more