ವಿವಾಹ ಎಂಬ ಅನುಬಂಧವು, ಲಿವಿಂಗ್ ಟುಗೆದರ್ ಎಂಬ ಸಂಬಂಧವು!:ಕೆ ಟಿ ಸೋಮಶೇಖರ ಹೊಳಲ್ಕೆರೆ

ಮಾಂಗಲ್ಯಂ ತಂತುನಾನೇನ ಮಮಜೀವನ ಹೇತುನಾ … ಎಂಬ ಮಂತ್ರೋಚ್ಛಾರಣೆಯೊಂದಿಗೆ ಸಾವಿರಾರು ಗುರು ಹಿರಿಯರು, ಬಂಧು ಮಿತ್ರರು ಆಶೀರ್ವಾದ ಮಾಡಿಕೊಟ್ಟ ಪವಿತ್ರ ಮಾಂಗಲ್ಯ ಧಾರಣೆ ಮಾಡುವ ವಿವಾಹ ಎಂಬ ಏಳೇಳು ಜನುಮದ ಸಂಬಂಧ ಎಂಬ ಧರ್ಮೇಚ ಅರ್ಥೇಚ ಕಾಮೇಚ ನಾತಿಚರಾಮಿ – ಎಂದು ಪತಿ ಪತ್ನಿಗೆ ಮಾತು ಕೊಟ್ಟು, ಅಗ್ನೀ ಸಾಕ್ಷಿಯಾಗಿಸಿ ಸಪ್ತಪದಿ ತುಳಿಯುವ ಮದುವೆಗಳು ಸ್ವರ್ಗದಲ್ಲಿ ನಿರ್ಣಯಾವಾಗಿರತ್ತವೆಂದು ಬಿಡಿಸಿಕೊಳ್ಳಲಾಗದಂತೆ ಬಿಗಿಯಾಗಿ ಸಂಬಂಧವನ್ನು ಬೆಸೆದು ಅಕ್ರಮ ಸಂಬಂಧಗಳ ತಡೆಯುವ, ಸಂಗಾತಿಯನ್ನು ಅರ್ಧ ನಾರೀಶ್ವರರಂತೆ ಬೆಸೆಯುವ ಅಧ್ಭತ ಕಲ್ಪನೆ, ಪತಿ … Read more

ಪಂಜು ಕಾವ್ಯಧಾರೆ

ಬೇಸರದ ಬಾವಲಿಗಳಿಗೆ ಕಣ್ಣಿಲ್ಲ. ಬೀಸುವ ಗಾಳಿಗೆ ಎದೆಯ ಕಾಗುಣಿತ ಅಪಥ್ಯ. ಇದ್ದಲ್ಲೇ ನುರಿಯುವ ಈ ನಿರುದ್ದೇಶಿ ಕುರ್ಚಿಗೆ ಕಾಲುಗಳು, ನೆಪಕ್ಕೆ ಮಾತ್ರ ಪೋಣಿಸಿದ್ದಾನೆ-ಬಡಗಿ, ಇದು ಹಳೆಯ ಗುಟ್ಟು. ಒಪ್ಪಿಕೊಂಡು ಎಷ್ಟೋ ಕಾಲವಾಗಿದೆ. ಕೆಲವು ಕಾರಾಗೃಹಗಳಿಗೆ ಗೋಡೆಗಳಿರುವುದಿಲ್ಲ. ಕೆಲವು ಮಾತುಗಳಿಗೆ ಪದಗಳೂ.. ನಿಟ್ಟುಸಿರಿಗೆ ಮಾತ್ರ ಬಣ್ಣಗಳು – ಬಿನ್ನ ಬಿನ್ನ. ಯಾರದೋ ಒಬ್ಬಂಟಿತನದ ಬೇಟೆಗೆ ಮರಳ ಮಯ್ಯ ಮೇಲೆ ಬರೆದ ಚಿತ್ರಗಳಂತೆ ಬದುಕು. ಆದಿ ಅಂತ್ಯಗಳ ವಿಧಿ ಲಿಖಿತಗಳ ಗೊಡವೆ ಮರೆವೆಗೆ ಕೊಟ್ಟು, ಅಲೆ ಕೊಚ್ಚಿಕೊಂಡು ಹೋಗಲೆಂದೇ ಕಾಯುತ್ತಾ … Read more

ಕಷ್ಟಕರವಾದ ಸಂಬಂಧಗಳು- ಏನು ಮಾಡುವುದು?: ಸಹನಾ ಪ್ರಸಾದ್

“ಅಯ್ಯೊ, ಇನ್ನೂ ಈ ಕೆಲಸದವಳ ಜತೆ ಹೆಣಗಾಡ್ತಾ ಇದೀಯ? ಇಷ್ಟು ಒದ್ದಾಡುತ್ತಾ ಇರೊ ಬದಲು ಬಿಡಿಸಿ ಬೇರೆಯವರನ್ನು ಇಟ್ಟುಕೊಳ್ಳಬಾರದಾ?” ಗೆಳತಿಯನ್ನು ತರಾಟೆಗೆ ತೆಗೆದುಕೊಂಡೆ. ಬಂದರೂ ನೂರು ಕುಂಟು ನೆಪ ತೆಗೆದು ಅರ್ಧಂಬರ್ಧ ಕೆಲಸ ಮಾಡಿ ಓಡಿಹೋಗುವುದು, ಸಣ್ಣಪುಟ್ಟ ಕಳ್ಳತನಗಳು, ಆಗಾಗ್ಗೆ ದುಡ್ಡು ಕೇಳುವುದು…ಇವಳ ಗುಣಗಾನ ಕೇಳಿ ನನಗೂ ತಲೆ ಚಿಟ್ಟು ಹಿಡಿದಿತ್ತು. ಈಗ ಸುಮಾರು ದಿನಗಳ ನಂತರ ಇವಳ ಮನೆಗೆ ಭೇಟಿ ಇತ್ತರೆ, ಮತ್ತೆ ಈ ಹೆಂಗಸು ಕಸ ಪರಿಕೆ ಹಿಡಿದಿದ್ದಾಳೆ. “ಏನಮ್ಮಾ, ನಿನ್ನ ಚಾಳಿ ಏನಾದರೂ … Read more

ವಿಜೀ : ವರದೇಂದ್ರ.ಕೆ

ನಿತ್ರಾಣನಾಗಿದ್ದ ಸೂರ್ಯ ವಿರಮಿಸಲು ಪಶ್ಚಿಮಕ್ಕೆ ಮಾಯವಾಗುತ್ತಿದ್ದ, ಇದನ್ನೇ ಕಾಯುತ್ತಿದ್ದವನಂತೆ ಚಂದಿರ ಮುಗುಳ್ನಗುತ್ತ ಹಾಲು ಬೆಳದಿಂಗಳ ಚೆಲ್ಲುತ್ತ ಚೆಲುವೆಯರ ಅಂದ ಪ್ರತಿಬಿಂಬಿಸುತ್ತ ಮೇಲೇರ ತೊಡಗಿದ. ಅವನ ಬೆಳಕೇ ಗತಿ ಎನ್ನುವ ಬಸ್ ನಿಲ್ದಾಣ, ಧೂಳು ತುಂಬಿಕೊಂಡಿತ್ತು. ಇಂದೋ ನಾಳೆಯೋ ನೆಲಕ್ಕೆ ಮುತ್ತಿಡುವಂತಹ ಸ್ಥಿತಿಯಲ್ಲಿದ್ದು, ವಿನಾಶದ ಅಂಚಿನಲ್ಲಿತ್ತು. ಅಂತಹ ನಿಲ್ದಾಣವೇ ನಮ್ಮ ಜನರಿಗೆ ಜೀವ ಎನ್ನುವಂತೆ; ಅದರಡಿಯಲ್ಲಿಯೇ ನಿಂತು ಧೂಳಿನೊಂದಿಗೆ, ಬೀಡಿ ಸಿಗರೇಟಿನ ವಾಸನೆಯೊಂದಿಗೆ ಒಡನಾಡಿಗಳಾಗಿ ನಿಂತಿದ್ದಾರೆ. ಅಲ್ಲಿ ಪೋಲಿ ಹುಡುಗರ ದಂಡು, ಊರಿಗೆ ಲೇಟಾಗಿ ಪರಿತಪಿಸುತ್ತಿರುವ ಹೆಂಗಳೆಯರು. ದೊಡ್ಡ … Read more

ಒಮ್ಮೆ ನನ್ನನ್ನೂ  ಕಣ್ತುಂಬಾ ಕಾಡುವಾಸೆ ನಿನ್ನಲ್ಲಿ: ಅಮರದೀಪ್ ಪಿ.ಎಸ್.

ರಾತ್ರಿ ಮಲಗುವ ಮುನ್ನ ಬೆಳಿಗ್ಗೆ ಕರೆಕ್ಟಾಗಿ ಐದುವರೆಗೆಲ್ಲಾ ಎದ್ದುಬಿಡಬೇಕು.. ಅಲಾರ್ಮ್ ಇಡಬೇಕು ಅಂದುಕೊಂಡವನು ಮರೆತೆ. ಆದರೆ ನಿದ್ದೆಗೆ ಜಾರುವ ಮುಂಚೆ ತಲೆಯಲ್ಲಿತ್ತಲ್ಲ, ಅಂದುಕೊಂಡದ್ದು ನಿಖರವಾಗಿತ್ತು.  ಸರಿಸುಮಾರು ಒಂಭತ್ತು ತಿಂಗಳ ನಂತರ ವಾಕಿಂಗ್ ಹೋಗಬೇಕು,   ಅವಳು ಹೇಳಿದ್ದಳಲ್ಲ? ಒಂದಷ್ಟು ಯೋಗಾಭ್ಯಾಸ ಮಾಡಬೇಕು… ಹೂಂ… ಅಂದದಷ್ಟೇ ನಿಜ.  ಎದ್ದೇಳಲು ಮತ್ತದೇ ಸೋಮಾರಿತನ. ಎದ್ದ ನಂತರದ ಹಳಹಳಿ. ಅದಕ್ಕೆ ಪ್ರಾಯಶ್ಚಿತ್ತವಿಲ್ಲ….  ಹಾಗೇ ನಿದ್ದೆಗೆ ಜಾರಿಯೂ ಬಿಟ್ಟೆ…   ಥಟ್ಟನೇ ಎಚ್ಚರಾಗಿ  ಮೊಬೈಲ್ ನೋಡಿದರೆ ಆಗಲೇ ಐದು ಗಂಟೆ ಮೂವತ್ತು ನಿಮಿಷ. ಎದ್ದವನೇ  ಕ್ರಿಯಾಕರ್ಮಗಳನ್ನು … Read more

ಅಸ್ಪೃಶ್ಯತೆಯ ಕರಾಳ ದರ್ಶನ: ಅಶ್ಫಾಕ್ ಪೀರಜಾದೆ

“ಇನ್ನು ದಾಹವಾಗುವದಿಲ್ಲ ಬಿಡು” ಆನಂದ ಲಕ್ಕೂರ ಅವರ ವಿಭಾ ಸಾಹಿತ್ಯ ಪುರಸ್ಕೃತ ಕವನ ಸಂಕಲನ “ಉರಿವ ಏಕಾಂತ ದೀಪ” ಓದಿ ಮುಗಿಸಿದಾಗ ಅದರಲ್ಲಿ ನನಗೆ ಎರಡು ಕವನಗಳು ಪ್ರಮುಖ ಅನಿಸಿದವು. ಒಂದನೇಯದು ‘ಅವ್ವ’ ಮತ್ತು ಎರಡನೇಯದು ‘ಇನ್ನು ದಾಹವಾಗುವದಿಲ್ಲ ಬಿಡು’. ಇವೆರಡರಲ್ಲಿ ಯಾವದನ್ನು ಅಭಿಪ್ರಾಯಕ್ಕಾಗಿ ಎತ್ಕೋಬೇಕು ಎಂದು ಯೋಚಿಸುವಾಗ ‘ಅವ್ವ’ಕ್ಕಿಂತ ದಾಹವಾಗುದಿಲ್ಲ ಕವಿತೆ ಪ್ರಸ್ತುತ ಸಾಮಾಜಿಕ ಅರಾಜಕತೆ, ಅಸಹಿಷ್ಣತೆಯ ಹಿನ್ನಲೆಯಲ್ಲಿ ಮುಖ್ಯವೆನಿಸುದರಿಂದ ಇದನ್ನು ಮೊದಲು ಪರಿಚಯಿಸುವುದು ಅಗತ್ಯವೆನಿಸಿತು. ಇದರ ಜೊತೆಗೆ ಕವಿ ಇದನ್ನು ಒಂದು ಸತ್ಯ ಘಟನೆ … Read more

ಅಂತರಾಗ್ನಿ (ಕೊನೆಯ ಭಾಗ): ಕಿರಣ್. ವ್ಹಿ

ಇಲ್ಲಿಯವರೆಗೆ ವಿಶಾಲವಾದ ಹಾಲ್. ಕಿಕ್ಕಿರಿದು ತುಂಬಿರುವ ಜನ, ಚಪ್ಪಾಳೆ ಹೊಡೆದಾಗಲೆಲ್ಲ ಸೀಲಿಂಗ್ ಸೀಳಿಹೋಗುವುದೇನೊ ಎಂಬಂತೆ ಭಾಸವಾಗುತ್ತಿತ್ತು. ಅದು ‘ Reflection ‘ ಎಂಬ ಅಂಧಮಕ್ಕಳ ಶಾಲೆಯ ಉದ್ಘಾಟನಾ ಸಮಾರಂಭವಾಗಿತ್ತು. ” ಈಗ ನಮ್ಮೆಲ್ಲರ ಅಕ್ಕರೆಯ ‘Reflection charitable trust’ ನ ಮುಖ್ಯಸ್ಥರಾದ ಶ್ರೀಯುತ ಹರಿಯುವರನ್ನು, ಈ ಸಂಸ್ಥೆಯ ಕುರಿತು ಒಂದೆರಡು ಮಾತನಾಡಬೇಕೆಂದು ಕೋರಿಕೊಳ್ಳುತ್ತೇನೆ.” ಎಂಬ ಆಹ್ವಾನಕ್ಕೆ ಎದ್ದುನಿಂತ ಹರಿ, ವೇದಿಕೆ ಮೇಲೆ ಹೊರಡಲು ಸಿದ್ಧನಾದ. ಚಪ್ಪಾಳೆಗಳ ಸುರಿಮಳೆಯೆ ಹರಿಯಿತು. ” ಎಲ್ಲರಿಗೂ ನಮಸ್ಕಾರ ನಮ್ಮ ಈ ‘Reflection … Read more

ಹಗರಣದಲ್ಲೇ ಅಂತ್ಯ: ದಯಾನಂದ ರಂಗಧಾಮಪ್ಪ

ಸುಮಾರು ಅರವತ್ತು ವರ್ಷದ ವೃದ್ಧ ಟೇಬಲ್ ಮೇಲಿದ್ದ ಖಾಲಿ ಕಾಗದದ ಮೇಲೆ “ದೇವರು ಇದಾನೆ , ಇಲ್ಲ …. ದೇವರು ಇದಾನೆ , ಇಲ್ಲ ” ಎಂದು ಬರೆಯುತ್ತಿದ್ದ ತನ್ನ ಗಂಡನನ್ನು ನೋಡಿ ‘ರೀ ಏನ್ರಿ ಇದು? ರಾಮ ರಾಮ ಬರೆಯೋ ವಯಸ್ಸಲ್ಲಿ ನೀವ್ಯಾಕೆ ಈ ರೀತಿ ಬರೆತ್ತಿದ್ದೀರಾ? ಎಂದು ಗದರಿದಳು. ನಿನ್ನ ಪ್ರಕಾರ ಇದಾನೆ ಅಂತೀಯಾ? ಅವಳು ಮೌನಿಯಾದಳು. ಬರೆಯೋದು ನಿಲ್ಲಿಸಿ ಮೆಲ್ಲಗೆ ನಿಟ್ಟುಸಿರು ಬಿಡುತ್ತಾ ಕುರ್ಚಿಗೆ ಹೊರಗಿ ” ಮಗ ನಮ್ಮ ಜೊತೆ ಮಾತು … Read more

ಲೇಖನ ಕಳುಹಿಸಿ

ಸಹೃದಯಿಗಳೇ, “ಪಂಜು” ಅಂತರ್ಜಾಲ ವಾರ ಪತ್ರಿಕೆಗೆ ನಿಮ್ಮ ಅಪ್ರಕಟಿತ ಕತೆ, ಕವನ, ಲೇಖನ, ಪುಸ್ತಕ ವಿಮರ್ಶೆ, ಹಾಸ್ಯ ಬರಹ, ಚುಟುಕ, ಪ್ರವಾಸ ಕಥನ, ವ್ಯಂಗ್ಯಚಿತ್ರ, ಛಾಯಾಚಿತ್ರ, ಸಿನಿಮಾ ಸುದ್ದಿ, ಇತ್ಯಾದಿ ಸಾಹಿತ್ಯ ಸಂಬಂಧಿತ ಬರಹಗಳನ್ನು ಕಳುಹಿಸಿಕೊಡಿ. ಜೊತೆಗೆ ನಾಟಕ ಪ್ರದರ್ಶನ, ಪುಸ್ತಕ ಬಿಡುಗಡೆ ಇತ್ಯಾದಿ ಸಾಹಿತ್ಯ ಮತ್ತು ಕಲೆ ಸಂಬಂಧಿತ ಪ್ರಕಟಣೆಗಳನ್ನು ನೀಡಲು ಸಹ ನಮ್ಮನ್ನು ಸಂಪರ್ಕಿಸಿ. ಹಾಗೆಯೇ ಪಂಜು ಪುಟಗಳಲ್ಲಿನ ಕತೆ, ಕವನ, ಲೇಖನಗಳಿಗೆ ನಿಮ್ಮ ಕುಂಚದ ಕೈಚಳಕದಿಂದ ಚಿತ್ರಗಳನ್ನು ರಚಿಸಿ ಪಂಜಿಗೆ ಮತ್ತಷ್ಟು ಮೆರಗು … Read more

ಪರಿಸರದ ಮೇಲೆ ಮಾನವ ಹಲ್ಲೆ ನಿಲ್ಲುವುದು ಯಾವಾಗ?: ನರಸಿಂಹ ಮೂರ್ತಿ ಎಂ. ಎಲ್.

ನಾವು ಪ್ರತಿದಿನ ಪತ್ರಿಕೆಗಳಲ್ಲಿ ಓದುವಾಗ ದೇಶ ರಾಜಧಾನಿಯು ವಾಯುಮಾಲಿನ್ಯದ ಹೊಡೆತಕ್ಕೆ ತತ್ತರಿಸುತ್ತಿರುವ ಬಗೆಯನ್ನು ಗಮನಿಸುತ್ತಿರಬಹುದು. ಶುದ್ಧಗಾಳಿಯನ್ನು ಖರೀದಿಸಿ ಉಸಿರಾಡುವ ಪರಿಸ್ಥಿತಿಗೆ ಈ ದೇಶವು ಬಂದು ತಲುಪಿದೆ ಎಂದರೆ ಮುಂದಿನ ದಿನಗಳಲ್ಲಿ ಜೀವ ಜಗತ್ತಿನ ಉಳಿವಿನ ಬಗ್ಗೆಯೇ ಸಂಶಯ ಮೂಡುತ್ತದೆ. ತಾಲ್ಲೂಕಿನ ಕೊತ್ತಕೋಟೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಮಾಡಪ್ಪಲ್ಲಿ, ಹೊನ್ನಂಪಲ್ಲಿ, ಮದಕವಾರಪಲ್ಲಿ ಸೇರಿದಂತೆ ಹತ್ತಾರು ಹಳ್ಳಿಗಳಿಗೆ ಆಶ್ರಯ ತಾಣವಾಗಿದ್ದ ಕೊರ್ಲಗುಡ್ಡಂ ಬೆಟ್ಟವನ್ನು ಅಕ್ರಮ ಕಲ್ಲು ಗಣಿಗಾರುಕೆಯವರು ನಾಶ ಮಾಡುತ್ತಿದ್ದಾರೆ. ಇದರ ಪರಿಣಾಮ ಬೃಹತ್ ಕಲ್ಲುಬಂಡೆಗಳು ರೈತರ ಜಮೀನುಗಳಿಗೆ ಉರುಳುತ್ತಿವೆ. … Read more

ಸಾವಿನ ಆಟ: ಜೆ.ವಿ.ಕಾರ್ಲೊ.

ಮೂಲ: ಇವಾನ್ ಹಂಟರ್ ಅನುವಾದ: ಜೆ.ವಿ.ಕಾರ್ಲೊ.   ಅವನ ಎದುರಿಗೆ ಕುಳಿತ್ತಿದ್ದ ಹುಡುಗ ಶತ್ರು ಪಾಳೆಯದವನಾಗಿದ್ದ. ಹೆಸರು ಟೀಗೊ. ಅವನು ಧರಿಸಿದ್ದ ಹಸಿರು ಬಣ್ಣದ ಜಾಕೆಟಿನ ಬಾಹುಗಳಿಗೆ ಕಿತ್ತಳೆ ಬಣ್ಣದ ಪಟ್ಟಿಯನ್ನು ಅಂಟಿಸಲಾಗಿತ್ತು. ಆ ಜಾಕೆಟ್ಟೇ ಅವನು ಶತ್ರು ಪಾಳೆಯದವನೆಂದು ಚೀರಿ ಚೀರಿ ಸಾರುತ್ತಿತ್ತು. “ಇದು ಚೆನ್ನಾಗಿದೆ!” ಮೇಜಿನ ಮಧ್ಯದಲ್ಲಿದ್ದ ರಿವಾಲ್ವರಿಗೆ ಬೊಟ್ಟು ಮಾಡಿ ಡೇವ್ ಹೇಳಿದ. “ಅಂಗಡಿಯಲ್ಲಿ ಕೊಳ್ಳುವುದಾದರೆ 45 ಡಾಲರುಗಳಿಗೆ ಕಡಿಮೆ ಇಲ್ಲ ಅಂತ ನನ್ನ ಅನಿಸಿಕೆ.” ಅದು ಸ್ಮಿತ್ ಅಂಡ್ ವೆಸ್ಸನ್ .38 … Read more

ಕಲೆಗೆ ರಾಜಕೀಯ ರಂಗು, ರಾಜಕೀಯಕ್ಕೆ ಕಲಾವಿದರ ಪ್ರವೇಶ ಸರಿಯೇ. . .?: ಕೆ.ಪಿ.ಎಮ್. ಗಣೇಶಯ್ಯ

ಚುನಾವಣಾ ಸಂದರ್ಭ ಕಲಾವಿದರ ಕಲೆಯ ಮಾನ ಮಾರಣ ಹೋಮ. ಇದು ಇತ್ತೀಚೆಗೆ ಚಿಂತನೆಗೀಡು ಮಾಡಿದ ವಿಷಯ. ಕಲಾವಿದ ಎಂದು ಗುರುತಿಸಿಕೊಂಡ ಮೇಲೆ ರಾಜಕೀಯಕ್ಕೆ ಬರಬಾರದು. ಇದು ನನ್ನ ಅಪೇಕ್ಷೆ. ಕಾರಣ ಇಷ್ಟೆ, ಹಲವಾರು ರಾಜಕೀಯ ಪಕ್ಷಗಳು ಭಿನ್ನ ವಿಭಿನ್ನವಾದ ಆಶೋತ್ತರಗಳನ್ನು ಇಟ್ಟುಕೊಂಡು ಗುಂಪುಗಾರಿಕೆಯ ಚಟುವಟಿಕೆ, ಹೀಯ್ಯಾಳಿಕೆ, ಕಾಲೆಳೆಯುವುದು, ತಮ್ಮತನವನ್ನು ತಾವು ಹೊಗಳಿಕೊಳ್ಳುವುದು, ಇತರರನ್ನು ತೆಗಳುವುದು. ಒಳಗಿಂದೊಳಗೆ ಆಮಿಷಕ್ಕೊಳಗಾಗುವುದು ಹೀಗೆ ರಾಜಕೀಯದಲ್ಲಿ ಎಲ್ಲವೂ ಸರಿ. ರಾಜಕೀಯ ಅಂದ್ರೆ ಹೀಗೇನೆ, ಒಪ್ಪೋಣ ಆದರೆ ರಾಜಕೀಯಕ್ಕೆ ಕಲಾವಿದರ ಪ್ರವೇಶ ಎಷ್ಟರ ಮಟ್ಟಿಗೆ … Read more

ಜೀವನಾಸ್ವಾದ!: ಕೆ ಟಿ ಸೋಮಶೇಖರ ಹೊಳಲ್ಕೆರೆ

ಜೀವನದಲ್ಲಿ ಮಾನವ ಅನೇಕ ಮುಖ್ಯ ಘಟ್ಟಗಳನ್ನು ದಾಟುತ್ತಾನೆ. ಆ ಸಂದರ್ಭದಲ್ಲಿ ಕೆಲವು ಸಂಪ್ರದಾಯ, ಪದ್ದತಿ, ಪರಂಪರೆ, ಆಚರಣೆಗಳನ್ನು ಭಾರತೀಯರು ಆಚರಿಸುತ್ತಾರೆ. ಅವು ಜೀವನದಲ್ಲಿನ ಏಕತಾನತೆಯನ್ನು ಹೋಗಲಾಡಿಸಿ ಬದುಕಿಗೆ ನವಚೈತನ್ಯವನ್ನು ತುಂಬುತ್ತವೆ! ಬದುಕಿನ ಮುಖ್ಯಘಟ್ಟದ ಕೆಲವು ಸಂದರ್ಭಗಳಲ್ಲಿ ಹುಡುಗಾಟಿಕೆ ಖುಷಿ ತಮಾಷೆಗಳಿರುವಂತೆ ಬದುಕ ರೂಪಿಸಿದ್ದರಿಂದ ಅವು ಆನಂದ ಉಂಟುಮಾಡುತ್ತಿದ್ದವು! ಹಿಂದೆ ಬದುಕು ಅಮೂಲ್ಯ ಎಂದು ಭಾವಿಸಿದ ಪ್ರಯುಕ್ತ ಜೀವಕ್ಕೆ ಬೆಲೆ ಇತ್ತು. ಬಹುದಿನ ಬೆಲೆಯುತವಾಗಿ ಬದುಕಲು ಪ್ರಯತ್ನಿಸುತ್ತಿದ್ದರು. ಜೀವನದ ಪ್ರತಿ ಹಂತವನ್ನೂ ಆಸ್ವಾದಿಸಿ ಸಂತೋಷವಾಗಿರುತ್ತಿದ್ದರು. ಬದುಕಿನ ಉದ್ದಕ್ಕೂ ಸಂತಸ … Read more

“ಕುವೆಂಪು ರಾಷ್ಟ್ರೀಯ ಪುರಸ್ಕಾರ-2019” ಘೋಷಣೆ

2019 ನೇ ಸಾಲಿನ “ಕುವೆಂಪು ರಾಷ್ಟ್ರೀಯ ಪುರಸ್ಕಾರ”ಕ್ಕೆ ಪಂಜಾಬಿ ಭಾಷೆಯ ಇಬ್ಬರು ಸುಪ್ರಸಿದ್ಧ ಸಾಹಿತಿಗಳು ಆಯ್ಕೆ ಆಗಿರುತ್ತಾರೆ. ಇದೇ ನವೆಂಬರ್ 16ನೆ ತಾರೀಕು‌ (16-11-2019) ಶನಿವಾರ ಬೆಂಗಳೂರಿನಲ್ಲಿ, ಕುವೆಂಪು ಪ್ರತಿಷ್ಠಾನದ ಅಧ್ಯಕ್ಷರಾದ ನಾಡೋಜ ಪ್ರೊ. ಹಂಪ. ನಾಗರಾಜಯ್ಯನವರ ಅಧ್ಯಕ್ಷತೆಯಲ್ಲಿ ಕುವೆಂಪು ರಾಷ್ಟ್ರೀಯ ಪುರಸ್ಕಾರ ಆಯ್ಕೆ ಸಮಿತಿಯ ಸಭೆ ನಡೆದಿತ್ತು. ಕರ್ನಾಟಕ ಸರ್ಕಾರದ ನಿವೃತ್ತ ಮುಖ್ಯ ಕಾರ್ಯದರ್ಶಿ‌ ಹಾಗೂ ಸಾಹಿತಿಗಳಾದ ಶ್ರೀ ಚಿರಂಜೀವಿ ಸಿಂಗ್, ಜೆ.ಎನ್.ಯು. (ನವದೆಹಲಿ) ವಿಶ್ವವಿದ್ಯಾಲಯದ ನಿವೃತ್ತ ಪ್ರಾದ್ಯಾಪಕರೂ ಪಂಜಾಬಿ ಲೇಖಕರೂ ಆದ ಪಟಿಯಾಲದ ಪ್ರೊ. … Read more

ಕನ್ನಡ ಉಳಿಯಲಿ, ಕನ್ನಡ ಸಾಹಿತ್ಯ ಬೆಳಗಲಿ, ಬೆಳೆಯಲಿ: ಚಂದ್ರಿಕಾ ಆರ್ ಬಾಯಿರಿ

“ಹಾಯ್! ಸುಶೀಲಾ ‘ಹವ್ ಆರ್ ಯೂ’?. ಎಲ್ಲಿಗೆ ಹೋಗ್ತಾ ಇದೀಯಾ?” “ಹಾಯ್! ಸಹನಾ ಟ್ಯೂಷನ್ ಕ್ಲಾಸ್ ಗೆ ಹೋಗ್ತಾ ಇದೀನಿ.” “ಟ್ಯೂಷನ್ ಕ್ಲಾಸ್ ಗೆ ಹೋಗ್ತಾ ಇದೀಯಾ. ಯಾಕೆ? ಯಾರಿಗೆ ಟ್ಯೂಷನ್?” “ಅಯ್ಯೋ! ನನ್ನ ಮಗನಿಗೆ ಇನ್ನೂ ಕನ್ನಡ ಓದೋದಕ್ಕೆ ಬರೆಯೋದಕ್ಕೆ  ಸರಿಯಾಗಿ ಬರಲ್ಲ ಕಣೇ. ಅದಕ್ಕೆ ಟ್ಯೂಷನ್ ಗೆ ಹಾಕೋಣ ಅಂತ.” “ಏನು? ಟ್ಯೂಷನ್ ಗೆ ಹಾಕ್ತೀಯಾ. ನಿನ್ನ ಮದರ್ ಟಂಗ್ ಯಾವುದು ಸುಶೀಲಾ?” “ಕನ್ನಡ” “ಮತ್ತೆ ನೀನೇ ಹೇಳಿ ಕೊಡಬಹುದಿತ್ತಲ್ವ.” “ಇಲ್ಲ ಕಣೇ. ನಾನು … Read more

ಒಳಿತು, ಕೆಡುಕು ಹಾಗು ಮನಸ್ಥಿತಿ: ಸಹನಾ ಪ್ರಸಾದ್

ಎಲ್ಲರಂತೆ ನನ್ನ ಬೆಳಗ್ಗಿನ ಕಾಫಿಗೆ ಜತೆಗೂಡುವುದು ಅಂದಿನ ಪತ್ರಿಕೆ. ಎದ್ದ ತಕ್ಷಣ ಅದರ ಮೇಲೆ ಕಣ್ಣಾಡಿಸಿಯೇ ಬ್ರಶ್ ಮಾಡಲು ಹೋಗುವುದು. ಅದರಲ್ಲಿಯ ಸುದ್ದಿಗಳಿಗೆ ಮನ ಬಹಳ ಬೇಗ ಅಂಟಿಕೊಂಡು ಅದರ ಬಗ್ಗೆಯೇ ಯೊಚಿಸಿ, ಚಿಂತನೆಗೆ ಶುರು ಆಗುತ್ತದೆ. ಅಚ್ಚಾಗಿರುವ ವಿವರಗಳ ಮೇಲೆ ಅಂದಿನ ಮನಸ್ಥಿತಿ ರೂಪಗೊಳ್ಳುವುದು. ಅದೇ ರೀತಿ ಒಳ್ಳೆ ಹಾಡು ಕೇಳಿದರೆ, ಏನಾದರು ಖುಶಿಯಾಗಿರುವುದನ್ನು ನೋಡಿದರೆ/ ಓದಿದರೆ ಮನಸ್ಸು ಪ್ರಫ಼ುಲ್ಲವಾಗುವುದು. ಆದುದರಿಂದ ನನ್ನ ಬೆಳಗ್ಗಿನ ” ಆಹಾರ” ನನಗೆ ಬಹಳ ಮುಖ್ಯ. ಅದೊಂದೇ ಅಲ್ಲ, ದಿನವಿಡೀ … Read more

ನ್ಯಾನೋ ಕತೆಗಳು: ವೆಂಕಟೇಶ ಚಾಗಿ

  ೧) ಸ್ವಚ್ಛ ಭಾರತ ಬಸ್ ನಿಲ್ದಾಣದ ಕಟ್ಟೆಯ ಮೇಲೆ ಇಬ್ಬರು ಸ್ನೇಹಿತರು ಸರಕಾರದ ಮಹತ್ತರ ಯೋಜನೆಯ ಸಾಧಕ-ಬಾಧಕಗಳ ಕುರಿತು ಮಾತನಾಡುತ್ತಾ ಕುಳಿತಿದ್ದರು. ಸಮಯ ಕಳೆಯಲು ಬಾಯಿ ಚಟಕ್ಕಾಗಿ ಶೇಂಗಾ, ಪ್ಯಾಕೆಟ್ ತಿಂಡಿ, ಬಾಳೆಹಣ್ಣು ಇನ್ನಿತರೆ ವಸ್ತುಗಳನ್ನು ತಿನ್ನುತ್ತಾ ಮಾತನಾಡುತ್ತಿದ್ದರು. “ಛೇ, ಈ  ಜನರಿಗೆ ಸರಕಾರದ ಈ ಮಹಾ ಯೋಜನೆ ಅರ್ಥವಾಗುವುದೇ ಇಲ್ಲ.  ಇವರಿಗೆ ಯಾವಾಗ ಬುದ್ಧಿ ಬರುತ್ತೋ ” ಎನ್ನುತ್ತಾ ಹೊರಟುಹೋದರು. ಅವರಿದ್ದ ಜಾಗದ ಸುತ್ತಮುತ್ತ ಶೇಂಗಾ ಸಿಪ್ಪೆ,  ಪ್ಲಾಸ್ಟಿಕ್ ಹಾಳೆಗಳು, ಬಾಳೆ ಸಿಪ್ಪೆ ಹರಡಿದ್ದವು. … Read more

ಅಂತರಾಗ್ನಿ (ಭಾಗ ೬): ಕಿರಣ್. ವ್ಹಿ

ಇಲ್ಲಿಯವರೆಗೆ ರೂಮಿಗೆ ಬಂದ ಹರಿ, ಹೊಸ ಅನುಭವದಲ್ಲಿ ತೇಲಾಡುತ್ತಿದ್ದ. ಒಂದು ಬಗೆಯ ಎಲ್ಲದರಿಂದ ವಿಮುಕ್ತನಾದಂತಹ ಭಾವನೆ ಅವನಲ್ಲಿ ಮೂಡಿತ್ತು. ಅದೇ ವೇಳೆಗೆ, ಗೋಪಾಲ ವರ್ಮಾರನ್ನು ಎಷ್ಟೊಂದು ಬೈಕೊಂಡು ಬಿಟ್ಟೆ ಅಂತ ಬೇಜಾರಾದ. ನಿಜವಾಗಿಯೂ, ವರ್ಮಾರವರು ಅವನ ಮೇಲೆ ಗಾಢವಾದ ಪ್ರಭಾವವನ್ನು ಬೀರಿದ್ದರು. ಅದು ಹೇಳಲಾಗದಷ್ಟು ಗಾಢವಾದ ಪರಿಣಾಮ. ಆದರೂ, ಒಂದು ಮೂಲೆಯಲ್ಲಿ ಹಳೆಯ ನೆನಪು ಅವನನ್ನು ಕಾಡುತ್ತಿತ್ತು. ಒಂದೇ ದಿನಕ್ಕೆ ಹೋಗುವುದಿಲ್ಲ ನೋಡಿ, ಮತ್ತೆ ಅದೇ ಮೂಡ್ ಗೆ ಹೋಗಿಬಿಟ್ಟರೆ ಕಷ್ಟ ಎಂದು, ಬಿಯರ್ ಬಾಟಲ್ ಕೈಗೆತ್ತಿಕೊಂಡು … Read more

ಮತ್ತೊಮ್ಮೆ ‘ವೀರ ಸಿಂಧೂರ ಲಕ್ಷ್ಮಣ’ ದರ್ಶನ: ಹಿಪ್ಪರಗಿ ಸಿದ್ಧರಾಮ

ಸಮೃದ್ಧ ಪರಂಪರೆಯುಳ್ಳ ಇಂಡಿಯಾ ದೇಶದ ಸಾಮಾಜಿಕ ಮತ್ತು ಸ್ವಾತಂತ್ರ್ಯ ಹೋರಾಟದ ಚರಿತ್ರೆಯನ್ನು ಅವಲೋಕಿಸಿದಾಗ, ಜನನಾಯಕರ ಜನಾಂದೋಲನಗಳು, ಕಾನೂನುಬದ್ಧ ಚಳುವಳಿಗಳು ಒಂದೇಡೆಯಾದರೆ ಜಾಗೃತ ಯುವಮನಸ್ಸುಗಳು, ಶೋಷಿತರ ಮತ್ತು ಆದಿವಾಸಿಗಳ ರಕ್ತಸಿಕ್ತ ಹೋರಾಟದಲ್ಲಿ ಸ್ವತಂತ್ರ ಸಮರದ ಗಂಗೆಯ ಪ್ರವಾಹಕ್ಕೆ ಸಾವಿರ ತೊರೆಗಳು ಸೇರಿಕೊಂಡು ಬಿಸಿನೆತ್ತಿರಿನ ತರ್ಪಣದಿಂದ ನಾಡ ಮುಕ್ತಿಗಾಗಿ ಅನ್ಯಾಯದ ವಿರುದ್ಧ ಸಿಡಿದೆದ್ದು ಪ್ರಾಣಾರ್ಪಣೆಗೈದಿದ್ದು ಇನ್ನೊಂದೆಡೆ. ಸುರಪುರ ವೆಂಕಟಪ್ಪ ನಾಯಕ, ನರಗುಂದದ ಬಾಬಾಸಾಹೇಬ, ಮುಂಡರಗಿ ಭೀಮರಾಯ, ಮೈಲಾರ ಮಹಾದೇವ, ಹಲಗಲಿಯ ಬೇಡರು, ಸಂಗೊಳ್ಳಿ ರಾಯಣ್ಣ ಹೀಗೆ ಇನ್ನೂ ಅನೇಕ ಅನಾಮಿಕರ … Read more