ಕಾಮೆಡಿಗಳಲ್ಲಿ ಅದ್ವಿತೀಯತೆ ಮರೆದ- Ben Jonson: ನಾಗರೇಖಾ ಗಾಂವಕರ

ಇಂಗ್ಲೀಷ ಸಾಹಿತ್ಯದಲ್ಲಿ ಅದ್ವಿತೀಯನೆಂದೇ ಹೆಸರು ಗಳಿಸಿದ ಶೇಕ್ಸಪಿಯರ್ ತನ್ನ ಟ್ರಾಜಡಿಗಳಿಂದ ಖ್ಯಾತನಾಗಿದ್ದರೆ ಆತನ ಸಮಕಾಲೀನನಾದ ಬೆನ್‍ಜಾನ್ಸನ್ [ಆದರೂ ಹತ್ತು ವರ್ಷಗಳಿಗೆ ಕಿರಿಯ] ಕಾಮೆಡಿಗಳಲ್ಲಿ ಅದ್ವಿತೀಯತೆ ಮೆರೆದಿದ್ದ. ಹಾಗೆಂದು ಇಬ್ಬರೂ ಬರಿಯ ಒಂದೇ ಪ್ರಕಾರಕ್ಕೆ ಸೀಮಿತಗೊಂಡಿರಲಿಲ್ಲ. ಟ್ರಾಜಡಿ ಕಾಮೆಡಿಗಳೆರಡೂ ಮನುಷ್ಯನ ಬದುಕಿನ ಎರಡು ದಾರಿಗಳೇ ಆಗಿದ್ದು, ಶೇಕ್ಸಪಿಯರ ಕಾಮೆಡಿಗಳಿಂದಲೂ ಪ್ರಸಿದ್ಧ. ಅದು 1598ರ ಸುಮಾರು. ಬೆನ್ ಜಾನಸನ್ ತನ್ನ ಮೊದಲ ಕಾಮೆಡಿಯ ‘Every Man in His Humour’ಮೂಲಕ ಹಾಗೂ ಶೇಕ್ಸಪಿಯರನ ತನ್ನ ಮೊದಲ ಕಾಮೆಡಿ ‘Love’s Labour”s … Read more

ಒಂದು ಆತ್ಮೀಯ ಆರೈಕೆ ಮರೆಯಾದಾಗ..: ವೃಶ್ಚಿಕ ಮುನಿ

ನೀನು ಮರೆಯಾದ ಹಾದಿಗುಂಟ.. ಸಾಲು ಮರದ ಹಾದಿಗುಂಟ ಮಳೆ ಬಿದ್ದ ನೆಲ, ಗಾಳಿಗೆ ಉದುರಿ ಬಿದ್ದ ಹಳದಿ ಹೂ, ಎಲೆ ಬಳುಕುಸುತ್ತಾ ಬಿಸುವ ತಂಪು ತಂಗಾಳಿ ಮೇಲೆ ಕವಿದ ಮೋಡ, ತೋಯ್ದ ಟಾರು ರಸ್ತೆಯ ಮೇಲೆ ಚೆಲ್ಲಿದ ಹಣ್ಣಲೆ ತೊಟ್ಟಿಕ್ಕುವ ಸಣ್ಣ ಹನಿಯ ಸಿಂಚನ. ದೂರದಲಿ ರವಿಯ ಹಳದಿ ಕಿರಣ, ಆ ಸಮಯಕ್ಕೆ ಒಂದು ರಮ್ಯತೆ ಇರಲು ಆತ್ಮೀಯ ಜೀವ ಜೊತೆಯಿರಲು ನಡಿಗೆ ದೀರ್ಘವಾಗಿರಲು ಇಟ್ಟ ಅಡಿಯ ಲೆಕ್ಕವಿಲ್ಲ ಒಂದು.. ಎರಡು.. ಮೂರು.. ಹೀಗೆ ಉಸಿರಿರೋವರೆಗೂ, ಸವಿದಷ್ಟು … Read more

ಮೆಟ್ಟು ಹೇಳಿದ ಕಥಾ ಪ್ರಸಂಗ ಒಂದು ನೀಳ್ಗಾವ್ಯ (ಭಾಗ 25 & 26): ಎಂ. ಜವರಾಜ್

-೨೫- ಮ್ಯಾಲ ತಿಂಗ್ಳು ಬೆಳುಗ್ತಾ ಇತ್ತು ಬೆಳ್ಕು ಹಾಲ್ ಚೆಲ್ಕಂಡಂಗೆ ಚೆಲ್ಕಂಡಿತ್ತು ನಾ ಮೂಲ ಸೇರಿ ಬಾಳ ಹೊತ್ತಾಗಿತ್ತು ಆಗ, ‘ಅಯ್ನೋರಾ ಇಳ್ಯ ಬಂದುದ ಕೆಳಗಿಂದ’ ಕುಲೊಸ್ತರ ಗುಂಪು ನೆರುದು ಹೇಳ್ತು. ‘ಊ್ಞ.. ಗೊತ್ತು’ ‘ಗೊತ್ತು ಅಂದ್ರ ಏನಾ ಅಯ್ನೋರಾ.. ಎಮ್ಮ ದನ ಕುಯ್ಯ ಬೀದಿಗ ಎಂಗೆ’ ‘ಊರಂದ್ಮೇಲ ಬ್ಯಲ ಕೊಡ್ಬೇಕು ಇಳ್ಯ ಕೊಟ್ಮೇಲ ಕುಲ ಮೀರಗಿದ್ದಾ.. ಕಾಲ್ದಿಂದು ನಡಕಾ ಬಂದಿರದು ಅಲ್ವ.. ಸತ್ಗ ಕೊಡ್ಬೇಕು. ಕೊಟ್ಟ ಸತ್ಗಗ ಹೂ ಸಿಂಗಾರ ಮಾಡಿ ಕುರುಬನ ಕಟ್ಟೆ ಕಂಡಾಯ … Read more

ವಿಷಾದ- ೩: ಸಹನಾ ಪ್ರಸಾದ್

ಚಿಕ್ಕವರಾದಾಗ ನಮ್ಮ ವಿಷಾದಗಳು ಕಡಿಮೆ. ಸಹಜವಾಗಿ. ಇನ್ನು ಬದುಕು ಬಹಳಷ್ಟು ಇದೆ, ಆದ ತಪ್ಪುಗಳನ್ನು ತಿದ್ದಿಕೊಳ್ಳುವ ಅವಕಾಶಗಳಿವೆ, ಮುಂದೆ ನಮ್ಮ ಕನಸುಗಳನ್ನು ಸಾಕಾರಗೊಳಿಸಲು ಬಹಳಷ್ಟು ಅವಕಾಶಗಳಿವೆ ಎಂದಾಗ ಮನಸ್ಸು ವಿಷಾದದೆಡೆ ಜಾರುವುದಿಲ್ಲ. ಹಾ, ಕೆಲವೊಮ್ಮೆ ನಮ್ಮ ವೃತ್ತಿಯಲ್ಲಿ ಅಥವಾ ನಮ್ಮ ವೈಯಕ್ತಿಕ ಜೀವನದಲ್ಲಿ ತೆಗೆದುಕೊಳ್ಳುವ ನಿರ್ಧಾರಗಳು ಜೀವನವಿಡೀ ನಮ್ಮನ್ನು ವಿಷಾದಕ್ಕೆ ದೂಡಬಲ್ಲದು. ಪೂರ್ತಿ ಅಳಿಸಲಾಗದಿದ್ದರೂ ಕಡಿಮೆ ಮಾಡಿಕೊಳ್ಳುವುದಕ್ಕೆ ತಜ್ಞರು ಕೆಲವು ಸಲಹೆಗಳು ನೀಡುತ್ತಾರೆ. “ಆಲಿಸ್ ಇನ್ ವಂಡರ್ಲ್ಯಾಂಡ್” ಎಲ್ಲರೂ ಚಿಕ್ಕ ವಯಸ್ಸಿನಲ್ಲಿ ಖಂಡಿತ ಓದಿರುತ್ತೀವಿ. “ಎಲ್ಲಿಗೆ ಹೋಗಬೇಕು, … Read more

ಜೀವ ಉಳಿದರೆ ಜೀವನಕ್ಕೆ ನೂರಾರು ದಾರಿಗಳಿವೆ: ಹೊ.ರಾ.ಪರಮೇಶ್ ಹೊಡೇನೂರು

“ಸಾಹೇಬ್ರೇ ನಮಸ್ಕಾರ್ರೀ…. ಹೆಂಗಾರ ಮಾಡಿ ನಮಗೊಂದೀಟು ಕುಡಿಯಾಕೆ ಅನುಕೂಲ ಮಾಡಿಕೊಡ್ರೀ….ಇಲ್ಲಾಂದ್ರ ಇದೇ ಕೊರಗಲ್ಲಿ ನಿದ್ರಿ, ಊಟ ಏನೂ ಸೇರದೆ ಸತ್ತೇ ಹೋಗಂಗಾಗದ್ರೀ… ನಮ್ಮ ನೋವು ಏಟಾಗಿದಿ ಅಂದ್ರಾ ಕರೋನ ಬಂದು ಸತ್ರೂ ಚಿಂತಿಲ್ಲ, ಏನೋ ಚಟ ಅಂಟಿಸ್ಕೊಂಬಿಟ್ಟೀವಿ, ಎಣ್ಣೀ ಕುಡ್ಕೊಂಡಾರೂ ಜೀವ ಬಿಡ್ತೀವ್ರಿ… ನಮಗೊಂದೀಟು ಉಪಕಾರ ಮಾಡ್ರೀ ಯಪ್ಪಾ…” ಟಿವಿ ಸುದ್ದಿ ವಾಹಿನಿಯ ವರದಿಗಾರರೊಬ್ಬರನ್ನು ಕುಡುಕ ಮಹಾಶಯನೊಬ್ಬ ಎಣ್ಣೆ ಅಂಗಡಿ ಬಾಗಿಲು ತೆಗೆಸಿ ಅಂತ ತನ್ನ ಬೇಡಿಕೆಯನ್ನು ಆಸೆಗಣ್ಣಿನಿಂದ ಮುಂದಿಟ್ಟ ರೀತಿ ಇದು.  “ಎಂತೆಂಥ ವೈರಸ್ ಬಂದಾವೂ … Read more

ಪಂಜು ಕಾವ್ಯಧಾರೆ

ಹರಿದ್ರ ಕುಂಕುಮ ಶೋಭಿತಳಾದವಳಿಗೆ ಅದಕ್ಕಿಂತ ಬೇರೆ ಐಶ್ವರ್ಯ ಇಲ್ಲ ಅವನು ಹಾಕುವ ಮೂರುಗಂಟಿಗೆ ತಾನು ಬೆಳದ ಪರಿಸರ ತೊರೆಯುವಳಲ್ಲ ತಾಂಬೂಲದ ಮೇಲೆ ಕಾಸಿಟ್ಟು ಧಾರೆಯೆರೆಯುವರಲ್ಲ ತಂದೆಯ ಪ್ರೀತಿ ತಾಯಿಯ ವಾತ್ಸಲ್ಯ, ಒಡಹುಟ್ಟಿದವರ ಮಮತೆಯ ಕುಡಿಯನ್ನು ಇನ್ನೂ ನಿನಗೆ ಸ್ವಂತವೆಂದು ದೈವಸಾಕ್ಷಿಯಾಗಿ ಒಪ್ಪಿಸಿದರಲ್ಲ…. ಸಪ್ತಪದಿಯ ತುಳಿದು ತವರು ಮನೆಯ ನೆನಪಿನೊಂದಿಗೆ ತನ್ನ ಮನೆ ಸೇರುವಳಲ್ಲ ಗಂಡನ ಮನೆಯ ಸುಖ ಶಾಂತಿ ನೆಮ್ಮದಿ ಬಯಸಿ ತನ್ನ ತನವನ್ನು ಬದಿಗಿರಿಸಿ ಮನೆಗಾಗಿ ದುಡಿಯುವಳಲ್ಲ ಅತ್ತೆ ಮಾವನಿಗೆ ಮಗಳಂತೆ ಸೇವೆಮಾಡಿ ಗಂಡ ಮಕ್ಕಳ … Read more

ಕುರಿಯ ಹಾಲಿನ ಐಸ್ ಕ್ರೀಮು (ಭಾಗ ೩): ಗುರುಪ್ರಸಾದ‌ ಕುರ್ತಕೋಟಿ

ಇಲ್ಲಿಯವರೆಗೆ ಬೆಳಗಾಗುವುದೇ ಕಾಯುತ್ತಿದ್ದೆ. ಅಯೋವಾದ ಕುರಿ ಸಾಕಾಣಿಕಾ ಕೇಂದ್ರಕ್ಕೆ ಹೋಗುವ ಯೋಜನೆ ಆಗಲೇ ಸಿದ್ಧವಾಗಿತ್ತು. ಅಮೇರಿಕಾದಲ್ಲಿ ಪರಿಚಯವಾಗಿ ಚಡ್ಡಿ ದೊಸ್ತನಾಗಿದ್ದ ಮಂಜು ಎಲ್ಲ ಸಿದ್ಧತೆ ಮಾಡಿಕೊಂಡಿದ್ದ. ಅಲ್ಲಿ ದೂರ ಪ್ರವಾಸ ಹೋಗಬೇಕೆಂದರೆ ನಮ್ಮದೇ ಕಾರ್ ಒಯ್ಯಬೇಕೆಂದಿಲ್ಲ. ಬಾಡಿಗೆಗೆ ತರ ತರಹದ ಕಾರುಗಳು, ವ್ಯಾನುಗಳು ಅಲ್ಲಿ ದೊರಕುತ್ತವೆ. ಎಷ್ಟು ಸೀಟಿನ ವಾಹನ ಬೇಕು ಅಂತ ನಿರ್ಧರಿಸಿ, ಗ್ಯಾಸ್ ಹಾಕಿಸಿಕೊಂಡು ಹೊರಟರೆ ಆಯ್ತು. ಹೌದು ಅಲ್ಲಿ ಪೆಟ್ರೋಲ್ ಗೆ ಗ್ಯಾಸು ಅಂತಾರೆ. ಅವರು ಹಂಗೆ… ನಾವೇ ಬೇರೆ ನಮ್ಮ ಸ್ಟೈಲೇ … Read more

ಬದಲಾವಣೆಯ ಆರಂಭ ನಮ್ಮಿಂದಲೇ ಸಾಧ್ಯ: ಪ್ರೀತಿ ಕಾಮತ್

ಮೊನ್ನೆ ನಾನು ಮತ್ತು ನನ್ನ ಫ್ರೆಂಡ್ಸ ಸೇರಿ ನಡುರಾತ್ರಿ ವಿಡಿಯೋಕಾಲ್‍ನಲ್ಲೇ ಒಂದು ಸಣ್ಣ ಚರ್ಚಾಕೂಟ ಏರ್ಪಡಿಸಿದ್ದೆವು. ಹೆಣ್ಮಕ್ಳು ಅಂದ್ರೆ ಮತ್ತೆ ಕೇಳಬೇಕಾ? ಮಾತನಾಡಲು ಅವಕಾಶ ಸಿಕ್ಕರೆ ಸಾಕು. ಆದರೆ ಸದಾ ವಟಗುಡುವ ಗೆಳತಿ ಮಾತ್ರ ಬಾಯಿಗೆ ಬೀಗ ಹಾಕಿ ಕೂತಿದ್ದು ನನಗೆ ಸಹಿಸಲಾಗಲಿಲ್ಲ. ಕಾರಣ ಕೇಳಿದಾಗ ಹುಡುಗಿಯರು ಇಲ್ಲಿ ಮಾತನಾಡುವುದಷ್ಟೇ ಬಂತು ಸಮಯ ಬಂದಾಗ ನಾವು ಬಾಯಿ ಬಿಡಲಾರೆವು ಅಲ್ವಾ? ಅಂದಳು. ಲೇ ಎಲ್ಲಾದರೂ ಭೋಧೀ ವೃಕ್ಷದ ಕೆಳಗೆ ಕೂತಿದ್ದಿಯಾ? ಯಾಕೋ ತತ್ವಜ್ಞಾನಿಯಂತೆ ಮಾತಾಡುತ್ತಿದ್ದಿ, ಏನ್ ಮ್ಯಾಟರ್ … Read more

ಪುಟ್ರಾಜು: ಅಭಿಜಿತ್. ಎಮ್

ಪುಟ್ರಾಜುಗೆ ಪರೀಕ್ಷೆ ಹತ್ತಿರ ಬಂದಿದೆ. ಪುಸ್ತಕ ಹಿಡಿದು ಓದಲು ಕುಳಿತರೆ ಭಯ ಮನಸ್ಸು, ಮೆದುಳನ್ನು ಆವರಿಸುತ್ತದೆ. ಐದನೇ ತರಗತಿಯಲ್ಲಿ ಓದುತ್ತಿರುವ ಪುಟ್ರಾಜು ಗೆ ಈ ಬಾರಿಯೂ ಪರೀಕ್ಷೆ ಯಲ್ಲಿ ಕಡಿಮೆ ಅಂಕ ಗಳಿಸಿದರೆ ಏನಪ್ಪಾ ಗತಿ ಅನ್ನುವುದೇ ಚಿಂತೆಯಾಗಿರುತ್ತದೆ. ಶಾಲೆಯಲ್ಲಿ ಟೀಚರ್ ಗಳು, ಮನೆಯಲ್ಲಿ ಹೆತ್ತವರ ಬೈಗುಳ ತಿಂದು. . ತಿಂದು. . . ಹೈರಾಣಾಗಿರುತ್ತಾನೆ. ಅದಕ್ಕೆ ಓದಲು ಕುಂತರೂ ಪುಟ್ರಾಜುಗೆ ಅದೇ ಚಿಂತೆ. ಜಾಸ್ತಿ ಅಂಕ ಹೇಗೆ ಗಳಿಸುವುದು ಎಂದು ಆಲೋಚಿಸುತ್ತಿರುತ್ತಾನೆ. ಅವನ ತಲೆಯಲ್ಲಿ ಹಲವಾರು … Read more

ಕಿರುಗತೆಗಳು: ಪುನೀತ್‌ ಕುಮಾರ್‌

ಸ್ವಯಂ ಮೌಲ್ಯಮಾಪನ ಒಮ್ಮೆ ಒಬ್ಬ ಹುಡುಗ, ಒಂದು ಅಂಗಡಿಯ ಫೋನ್ನಿಂದ ಯಾರಿಗೋ ಕರೆ ಮಾಡಿ “ಅಮ್ಮ, ದಯಮಾಡಿ ನನಗೆ ಒಂದು ಕೆಲಸ ಕೊಡಿ” ಎಂದು ಕೇಳಿಕೊಳ್ಳುತ್ತಿದ್ದನು. ಅಲ್ಲೇ ಪಕ್ಕದಲ್ಲೇ ಇದ್ದ ಅಂಗಡಿಯವ ಇವನ ಮೃದು ದನಿಯ ಮಾತುಗಳನ್ನು ಕೇಳಲು ಆರಂಭಿಸಿದ. ಹುಡುಗ ಮುಂದುವರೆಯುತ್ತಾ ” ಅಮ್ಮ, ನಾನು ತುಂಬ ಬಡವ, ಮನೆಯಲ್ಲಿ ಹಣಕ್ಕಾಗಿ ತೊಂದರೆ ಇದೆ, ದಯವಿಟ್ಟು ಬೇಡ ಎನ್ನಬೇಡಿ ” ಎಂದು ಬೇಡಿಕೊಳ್ಳಲಾರಂಭಿಸಿದ. ಆದರೆ ಆ ಕಡೆಯಿಂದ ಬೇಡ ಆಗಲೇ ನಮ್ಮಲ್ಲಿ ಒಬ್ಬ ಹುಡುಗ ಕೆಲಸದಲ್ಲಿದ್ದಾನೆ. … Read more

ಸ್ನೇಹ ಮತ್ತು ಪ್ರೇಮವನ್ನು ಅಮರಗೊಳಿಸುವ- Shakespearean Sonnets: ನಾಗರೇಖಾ ಗಾಂವಕರ

ಸ್ನೇಹ ಎನ್ನುವುದು ಮಾನವ ಜಗತ್ತಿನ ಪ್ರಬಲ ಆಕಾಂಕ್ಷೆ ಮತ್ತು ಅದೊಂದು ಬಲ. ಸ್ನೇಹದ ಜೇನಹನಿ ಸ್ವಾದ ಸವಿದ ಮನಸ್ಸುಗಳಿಗೆ ಅದರ ಕಂಪು ಕೂಡಾ ಚಿರಪರಿಚಿತ. ಸ್ನೇಹ ಸ್ವರ್ಗದ ವಿಶಿಷ್ಟ ಕಾಣಿಕೆ. ವೈಯಕ್ತಿಕ ಜೀವನದ ಅದೆಷ್ಟೋ ಭಿನ್ನತೆಗಳು, ನ್ಯೂನ್ಯತೆಗಳು ಸ್ನೇಹದ ಪಯಣಕ್ಕೆ ಅಡ್ಡಿಯಾಗುವುದಿಲ್ಲ. ಅದಕ್ಕೊಂದು ಅಪೂರ್ವ ಉದಾಹರಣೆಯಾಗಿ ಶೇಕ್ಸಪಿಯರ್ ತನ್ನ ಜೀವಿತಾವಧಿಯಲ್ಲಿ ರಚಿಸಿದ 154 ಸಾನೆಟ್‍ಗಳಲ್ಲಿ ಮೊದಲ ಭಾಗದ ಸುಮಾರು 126 ಸುನೀತಗಳನ್ನು ತನ್ನ ಆಪ್ತ ಹಾಗೂ ಸುರಸುಂದರಾಂಗ ಶ್ರೀಮಂತ ಗೆಳೆಯನೊಬ್ಬನ ಕುರಿತು ಬರೆದಿದ್ದಾನೆ. ಆತನೊಂದಿಗಿನ ತನ್ನ ಅನುಪಮ … Read more

ಮೆಟ್ಟು ಹೇಳಿದ ಕಥಾ ಪ್ರಸಂಗ ಒಂದು ನೀಳ್ಗಾವ್ಯ (ಭಾಗ 23 & 24): ಎಂ. ಜವರಾಜ್

-೨೩- ‘ಏಯ್, ಕೇಳಿಲ್ಲಿ..’ ಆ ಮೋರಿ ಅಂಚಿಂದ ಬೆಳಕಿನ ಜ್ವಾಲೆ ಎದ್ದು ಆ ಜ್ವಾಲೆಯೊಳಗಿಂದ ಗದರಿದಂಥ ಮಾತು. ಸಡನ್ ಎದ್ದೆ ನನಗೆ ಮಂಪರು ಆ ಬೆಳಕಿನ ಜ್ವಾಲೆ ಬೆಂಕಿ ತರ ಆಯ್ತು ಆ ಬೆಂಕಿ ಜ್ವಾಲೆಗೆ ನನ್ನ ಮಂಪರು ಅಳಿದು ಸೆಟೆದು ನಿಂತೆ. ಮೇಲೆ ಮಿಂಚು ಸೊಂಯ್ಯನೆ ಫಳಾರಂತ ಸಿಡಿಲು ಸಿಡಿಸಿಡಿ ಸಿಡಿತಾ ಗುಡುಗು ನಿಧಾನಕೆ ಗುಡುಗುಡುಗುಡುಕ್ತಾ ಇತ್ತು ‘ನನ್ ಮಾತ ನೀ ತಲಗಾಕತಿಲ್ಲ ಗಾಳಿ ಬೀಸ್ತ ಅದ ಆ ಮೋರಿಯಿಂದ ಈ ಮೋರಿಲಿ ಬಿದ್ದಿನಿ’ ‘ಅದೇನ … Read more

ರವಿಯು ಮಳೆಮೋಡವನು ಚುಂಬಿಸಿ ಆಗಸದಲಿ ರಂಗಿನ ರುಜು ಹಾಕಿದ: ಭಾರ್ಗವ್‌ ಹೆಚ್.‌ ಕೆ.

ಸಂಜೆ 4 ಗಂಟೆ. . ಹೈಸ್ಕೂಲಿನಲ್ಲಿ ವಿದ್ಯಾರ್ಥಿಗಳ ಸಂದಣಿ. 8ನೆಯ ತರಗತಿಯಲ್ಲಿ ಕಾಮನಬಿಲ್ಲಿನ ಬಗ್ಗೆ ಪೌರಾಣಿಕ ಕಥೆಯು ಅನುರಣಿಸುತ್ತಿತ್ತು. ಕಥಾಪ್ರಸ್ತುತಗಾರ ನಿಂಗಪ್ಪ ಮಾಸ್ಟರ್, ಲೇ. . ಆಟದ ಹೊತ್ತು ಆಯಿತು. . ಯಾವನಾದ್ರು ಹೋಗಿ ಗಂಟೆ ಹೊಡೀರಿ. ಇಷ್ಟು ಅಂದಿದ್ದೆ ತಡ. . . ಎಲ್ಲರೂ ಕೇ ಹೊ. . ಅಂತ ಮೈದಾನಕ್ಕೆ ತೆರಳಿದರು. ಮಾಳಿಂಗರಾಯನು ಮಾತ್ರ ಕದಲಲಿಲ್ಲ. ಸರ್. . ನಾವು ಏನು ಬೇಕಾದ್ರೂ ಕೇಳ್ತೀವಿ ಅಂತ ಕಾಮನಬಿಲ್ಲು ಬಗ್ಗೆ ಪೌರಾಣಿಕ ಕಥೆ ಹೇಳುತ್ತೀರಿ. ಶೃತಿ … Read more

ಪ್ರೀತಿಯು ಪ್ರೀತಿಯಾಗಬೇಕೇ ವಿನಃ ಹಿಂಸೆಯಾಗಬಾರದು: ನಾಗೇಶ್ ಪ್ರಸನ್ನ.ಎಸ್.

ಬಯಸಿದ್ದೆಲ್ಲಾ ಸಿಕ್ಕಿಬಿಡಬೇಕು – ಹುಟ್ಟಿದ ದಿವಸದಿಂದಲೂ ಇದು ಮನುಷ್ಯನಿಗೆ ಅಂಟಿಕೊಂಡಿರುವ ಒಂದು ತೆರನಾದ ವಿಚಿತ್ರ ಖಾಯಿಲೆ. ಈ ಖಾಯಿಲೆಯಿಂದ ಯಾರು ಹೊರಬರುತ್ತಾರೋ ಅವರೇ ಸುಖಜೀವಿಗಳು. ಇಲ್ಲದಿದ್ದರೆ, ಅವರಷ್ಟು ವಿಚಿತ್ರವಾಗಿ ನಡೆದುಕೊಳ್ಳುವವರೇ ಸಿಗುವುದಿಲ್ಲ. ಇದಕ್ಕೆ ಬುದ್ಧ ಹೇಳಿದ “ಆಸೆಯೇ ದುಃಖಕ್ಕೆ ಮೂಲ” ಎಂಬ ಮಾತು ಒಂದು ಉದಾಹರಣೆ. ಬದುಕಿನಲ್ಲಿ ಆಸೆಯನ್ನು ತ್ಯಜಿಸಿದವರು ಬಹಳಷ್ಟು ಮಂದಿ ಸಿಗುತ್ತಾರೆ. ಆದರೆ, ಪ್ರೀತಿಯಲ್ಲಿ ಆಸೆ ತ್ಯಜಿಸುವವರು ಅಥವಾ ಪ್ರೀತಿಯೆಂಬ ಆಸೆಯನ್ನೇ ತ್ಯಜಿಸುವವರು ಕೇವಲ ಬೆರಳೆಣಿಕೆಯ ಹೃದಯಗಳಷ್ಟೇ. ಈಗ ನಾನು ಆ ದಾರಿಯಲ್ಲಿ ಹೆಜ್ಜೆ … Read more

ಯುದ್ಧ ಗೆದ್ದ ಬಂದ ಪಾರ್ವತಿ: ಚಂದ್ರಿಕಾ ಆರ್ ಬಾಯಿರಿ

ಇದೇನಿದು ? ಯುದ್ಧ ಗೆದ್ದು ಬಂದ ಪಾರ್ವತಿ ಎಂದಾಕ್ಷಣ ಶಿವ ಪಾರ್ವತಿಯರ ಪುರಾಣ ಕಥೆ ಅಂದುಕೊಂಡಿರಾ? ಅಲ್ಲ, ಶಿವಪಾರ್ವತಿಯಂತಿರುವ ದಂಪತಿಗಳ ಕಥೆ. ಹೌದು ಮೊದಲನೆಯ ಮಗ ಸುಬ್ರಹ್ಮಣ್ಯ ಹುಟ್ಟಿ ಈಗಾಗಲೇ ಮೂರು ವರುಷ ಕಳೆದಿದೆ. ಮಗನ ಲಾಲನೆ ಪಾಲನೆ ಮಾಡಲು ಅಜ್ಜ ಅಜ್ಜಿ ಇರುವುದರಿಂದ ಮಗ ಬೆಳೆದು ದೊಡ್ಡವನಾದದ್ದೆ ಗೊತ್ತಾಗಲಿಲ್ಲ ಅವರಿಗೆ. ಕೆಲಸಕ್ಕೆ ಹೋಗಿ ಬಂದು ಮಗ ಅತ್ತೆ ಮಾವ ಗಂಡನನ್ನು ಬಹಳ ಅಕ್ಕರೆಯಿಂದಲೇ ನೋಡಿಕೊಂಡಳು ಪಾರ್ವತಿ. ಎರಡನೇ ಮಗುವಿಗಾಗಿ ಹಂಬಲಿಸುತ್ತಿದ್ದ ಗಂಡ ಈಗಲೇ ಇನ್ನೊಂದು ಮಗು … Read more

ಡಾ. ಹೆಚ್. ಶಾಂತಾರಾಮ್ ಪ್ರಶಸ್ತಿಗೆ ಕೃತಿ ಆಹ್ವಾನ

ಮಣಿಪಾಲ ಅಕಾಡೆಮಿ ಆಫ್ ಜನರಲ್ ಎಜುಕೇಷನ್ ನ ಆಡಳಿತಾಧಿಕಾರಿ ಡಾ. ಹೆಚ್. ಶಾಂತಾರಾಮ್ ಹೆಸರಿನಲ್ಲಿ ಕನ್ನಡದ ಅತ್ಯುತ್ತಮ ಸೃಜನಶೀಲ ಕೃತಿಗೆ ಪ್ರಶಸ್ತಿ ನೀಡಲಾಗುತ್ತಿದ್ದು ಈ ವರ್ಷ ಕಾದಂಬರಿಗಳನ್ನು ಮಾತ್ರ ಪರಿಗಣಿಸಲು ನಿರ್ಧರಿಸಲಾಗಿದೆ. 2018 ಜನವರಿಯಿಂದ 2019 ಡಿಸೆಂಬರ್ ಒಳಗೆ ಮೊದಲ ಆವೃತ್ತಿಯಾಗಿ ಪ್ರಕಟಗೊಂಡ ಕಾದಂಬರಿಗಳನ್ನು ಆಹ್ವಾನಿಸಲಾಗಿದೆ. ಕಾದಂಬರಿಗಳ ನಾಲ್ಕು ಪ್ರತಿಗಳನ್ನು ಜೂನ್ 5,2020ರ ಒಳಗೆ ( 5/6/2020) ಡಾ.ಹೆಚ್. ಶಾಂತಾರಾಮ್ ಸಾಹಿತ್ಯ ಪ್ರಶಸ್ತಿ ಸಮಿತಿ, ಭಂಡಾರ್ಕಾರ್ಸ್ ಕಾಲೇಜು, ಕುಂದಾಪುರ, ಉಡುಪಿ ಜಿಲ್ಲೆ 576201.ಈ ವಿಳಾಸಕ್ಕೆ ಕಳುಹಿಸಲು ಕೋರಲಾಗಿದೆ. … Read more

ರವಿವಾರದ ಸಂತೆ: ವೆಂಕಟೇಶ ಚಾಗಿ

ಇತ್ತೀಚಿನ ವರ್ಷಗಳಲ್ಲಿ ಸಂತೆಗೆ ಹೋಗುವುದೇ ತೀರ ಕಡಿಮೆ ಆಗಿದೆ. ದಿನಬೆಳಗಾದರೆ ತಾಜಾ ತಾಜಾ ತರಕಾರಿಗಳನ್ನು ತರಕಾರಿ ತಮ್ಮಣ್ಣ ತನ್ನ ತಳ್ಳುವ ಗಾಡಿಯಲ್ಲಿ ಮನೆ ಮುಂದೆ ತಂದು ನಿಲ್ಲಿಸ್ತಾನೆ. ಇನ್ನು ಕಿರಾಣಿ ಸಾಮಾನು ಬೇಕಾದ್ರೆ ರಸ್ತೆಯ ಕೊನೆಯಲ್ಲಿ ಇರುವ ಕಿರಾಣಿ ಅಂಗಡಿಯಲ್ಲಿ ಬೇಕಾದಾಗ ತಂದು ಬಿಡುತ್ತೇವೆ. ಡ್ಯೂಟಿಗೆ ಹೋದಾಗ ಹೆಂಡತಿ ಪೋನ್ ಮಾಡಿ “ರೀ , ವಾಟ್ಸ್ಯಾಪ್ ಲಿ ಲಿಸ್ಟ್ ಹಾಕಿದೀನಿ. ಕೆಲಸ ಮುಗಿಸಿ ಬರುವಾಗ ಅದರಲ್ಲಿನ ಸಾಮಾನೆಲ್ಲಾ ತಂದು ಬಿಡಿ.” ಎಂದು ಆದೇಶ ಮಾಡಿಬಿಡುತ್ತಾಳೆ. ಮನೆ ಯಜಮಾನಿ … Read more

ಹಕ್ಕಿ ಗೂಡು ಬಿಟ್ಟ ಮೇಲೆ ಗೂಡಿಗೇನು ಬೆಲೆಯಿದೆ . . ?: ಜಯಶ್ರೀ.ಜೆ. ಅಬ್ಬಿಗೇರಿ

ಬಾಳ ದಾರಿಯಲ್ಲಿ ಕೈ ಹಿಡಿದು ನಡೆಸುವ ಬಂಧಗಳ ಶಕ್ತಿ ಅಪರಮಿತವಾದದ್ದು. ಮಗ್ಗಲು ಮುಳ್ಳುಗಳಂತೆ ಚುಚ್ಚುವ ಸಮಸ್ಯೆಗಳು ಹಣಿಯುತ್ತಿರುವಾಗಲಂತೂ ಇವುಗಳು ಸಲುಹುವ ರೀತಿ ಪದಗಳಲ್ಲಿ ಹಿಡಿದಿಡಲಾಗದು. ಇತ್ತಿತ್ತಲಾಗಿ ಸಂಬಂಧಗಳೇ ಮಾಯವಾಗುತ್ತಿವೆ. ಅನ್ನುವ ಮಟ್ಟಿಗೆ ಬದುಕಿನ ಸವಾರಿ ನಡೆಸುತ್ತಿದ್ದೇವೆ. ದೂರ ದೂರ ಸರಿದು ನಿಂತು ಒಂದೊಂದು ಗೂಡಿನಲ್ಲಿ ಜೀವಿಸುತ್ತಿದ್ದೇವೆ. ಸಂಬಂಧಗಳ ಸವಿರುಚಿಯನ್ನು ಸವಿಯುವುದು ಕ್ವಚ್ಚಿತ್ತಾಗಿ ಬಿಟ್ಟಿದೆ. ಈ ಹಿಂದೆ ಸಂಬಂಧಗಳು ನಮ್ಮನ್ನು ಕೂಡು ಕುಟುಂಬದಲ್ಲಿ ಹತ್ತು ಹಲವು ರೀತಿಯಲ್ಲಿ ಆವರಿಸುತ್ತಿದ್ದವು. ಇನ್ನಿಲ್ಲದಂತೆ ಪೋಷಿಸುತ್ತಿದ್ದವು. ಅಜ್ಜ ಅಜ್ಜಿಯರಿಂದ ನೀತಿ ಕಥೆಗಳು ಹೇಳಲ್ಪಡುತ್ತಿದ್ದವು. … Read more