ಗಜಲ್ ಹಾದಿಯಲ್ಲಿ: ‘ನೇರಿಶಾ’ಳ ಹೊಂಬೆಳಕು: ಯಲ್ಲಪ್ಪ ಎಮ್ ಮರ್ಚೇಡ್

ಪುಸ್ತಕ : ‘ನೇರಿಶಾ’ (ಗಜಲ್ ಸಂಕಲನ)ಗಜಲ್ ಕವಿ: ನಂರುಶಿ ಕಡೂರುಬೆಲೆ : 180/-ಸಂಪರ್ಕಿಸಿ: 8073935296, 8277889529 ಗಜಲ್ ಸಂಕ್ಷಿಪ್ತ ಪರಿಚಯ : ಗಜಲ್‌ ಎಂದರೆ ಪ್ರೀತಿ–ಪ್ರೇಮ ಕುರಿತಾಗಿಯೇ ಬರೆಯಲಾಗಿರುವ ಮತ್ತು ಬರೆಯಬೇಕಾಗಿರುವ ಕಾವ್ಯ ಪ್ರಕಾರ ಎನ್ನುವುದು ಸರಿಯಲ್ಲ. ಸಾಂಪ್ರದಾಯಿಕ ವಸ್ತು ಮತ್ತು ವ್ಯಾಪ್ತಿ ಮೀರಿ ಗಜಲ್‌ ತುಂಬಾ ದೂರ ಕ್ರಮಿಸಿದೆ. ಇದರ ಗೇಯತೆ, ಲಯ, ಕೋಮಲ ವಿನ್ಯಾಸದಲ್ಲಿ ವರ್ತಮಾನಕ್ಕೆ ‘ಮುಖಾಮುಖಿ’ ಆಗುವುದಿಲ್ಲ ಎನ್ನುವ ಮತ್ತೊಂದು ಆಕ್ಷೇಪವಿದೆ. ಆದರೆ ಗಜಲ್‌ಗಳಲ್ಲಿ ಬಂಡಾಯ ಮತ್ತು ಸಾಮಾಜಿಕತೆಯ ಧ್ವನಿಯೂ ಇದೆ. ನವ್ಯಕಾವ್ಯದ … Read more

ತುಂಬಿದ ಮಡಿಲು: ಭಾರ್ಗವಿ ಜೋಶಿ…..

ಅಂದು ನಸುಕಿನಲ್ಲಿ ನಾಲ್ಕನೇ ದಿನದ ನೀರು ಹಾಕಿಕೊಂಡು ಅಡುಗೆ ಮನೆ ಹತ್ತಿರ ಬರುತ್ತಿದ್ದ ಪದ್ಮಾವತಿಗೆ ಒಳಗಡೆ ಅತ್ತೆ ರಮಾಬಾಯಿ ಒಲೆ ಮುಂದೆ ಕುಳಿತು ಕಾಫಿ ಮಾಡುತ್ತ ಹೇಳುತ್ತಿದ್ದರು ಮಾತು ಜೋರು ಜೋರಾಗಿ ಕೇಳಿಸುತ್ತಿತ್ತು. ತಾಯಿ ಮಾತಿಗೆ ಎದುರು ಕುಳಿತ ಶ್ರೀನಿವಾಸ ಹೂಂ ಗುಟ್ಟುತ್ತಿದ್ದ. “ಅಲ್ಲೋ ಶ್ರೀನಿ, ನಿನ್ ಮದುವೆ ಆಗಿ ಐದು ವರ್ಷ ಆತು, ಇನ್ನು ಮಕ್ಕಳು, ಮರಿ, ಸುದ್ದಿನೇ ಇಲ್ಲೆಲ್ಲೋ? ನೋಡು ಇನ್ನು ತಡ ಮಾಡಬೇಡ. ನನ್ ಮಾತು ಕೇಳು. ಇನ್ನೊಂದು ಮದುವೆ ಮಾಡಿಕೊಂಡು ಬಿಡು … Read more

ಸಮರ್ಥ ಜೀವನ ನಿರ್ವಹಣೆಗೆ ಬೇಕು ಜೀವನ ಕೌಶಲ್ಯಗಳು: ತೇಜಾವತಿ ಹುಳಿಯಾರ್

ಜೀವನವೆನ್ನುವುದು ಮನುಷ್ಯನ ಜನನದಿಂದ ಮರಣದವರೆಗಿನ ನಿರಂತರ ಪಯಣ. ನಮ್ಮ ಜೀವನವನ್ನು ನಾವೇ ಸುಂದರಗೊಳಿಸಿಕೊಳ್ಳದ ಹೊರತು ಮತ್ಯಾರೂ ಸುಂದರಗೊಳಿಸಲು ಸಾಧ್ಯವಿಲ್ಲ. ಸಾಗುವ ಮಾರ್ಗದಲ್ಲಿ ಹಲವು ಏರು -ತಗ್ಗುಗಳನ್ನು, ತಿರುವುಗಳನ್ನು ಕಾಣುತ್ತೇವೆ. ಇಂದಿನ ಯಾಂತ್ರಿಕ ಯುಗದಲ್ಲಿ ಜೀವನ ನಿರ್ವಹಣೆಯು ಕೂಡ ಒಂದು ಕಲೆಯೇ ಹೌದು. ಬರುಬರುತ್ತಾ ಮಾನವರ ಭಾವನೆಗಳು ಕೂಡ ಸನ್ನಿವೇಶಕ್ಕೆ ತಕ್ಕಂತೆ ಕೃತಕವಾಗಿ ಜನ್ಮ ತಳೆಯುತ್ತಿರುವ ಈ ಸಂದರ್ಭದಲ್ಲಿ ಅವುಗಳ ತೀವ್ರತೆಯೂ ಕಡಿಮೆಯೇ. ಹಿಂದಿನಂತೆ ಗಟ್ಟಿ ಬೇರುಗಳು ಪಳಗುವ ಕೈಗಳು ತೀರಾ ವಿರಳ. ಜನರು ಕ್ಷಣಿಕ ಲಾಲಸೆಗಳಿಗೆ ಒಳಗಾಗಿ … Read more

ಮರೆಯಲಾಗದ ಮದುವೆ (ಭಾಗ 10): ನಾರಾಯಣ ಎಮ್ ಎಸ್

-೧೦- ಬಹುಶಃ ಬದುಕಿನಲ್ಲಿ ಮೊದಲಬಾರಿಗೆ ಅಯ್ಯರಿಗೆ ತನಗೆ ವಯಸ್ಸಾಗುತ್ತಿರುವ ಅರಿವಾಯಿತು. ಕೊಮ್ಮರಕುಡಿಯಿಂದ ಗೂಡೂರಿಗೆ ಕಾಲ್ನಡಿಗೆಯಲ್ಲಿ ಹೊರಟಿದ್ದ ಅಯ್ಯರ್ ಒಂದೆರಡು ಮೈಲು ನಡೆಯುವಷ್ಟರಲ್ಲೇ ಹೈರಾಣಾಗಿ ಬಿಟ್ಟಿದ್ದರು. ಮೊದಲೇ ಅಯ್ಯರಿಗೆ ಒರಟು ರಸ್ತೆಯಮೇಲೆ ಚಪ್ಪಲಿಯೂ ಇಲ್ಲದೆ ಬರಿಗಾಲಲ್ಲಿ ನಡೆದು ಅಭ್ಯಾಸವಿರಲಿಲ್ಲ, ಸಾಲದ್ದಕ್ಕೆ ಏರುಬಿಸಿಲು ಬೇರೆ. ಅರೆಕ್ಷಣಕ್ಕೆ ಸುಮ್ಮನೆ ಕೊಮ್ಮರಕುಡಿ ರೈಲ್ವೇ ಸ್ಟೇಷನ್ನಿಗೆ ಮರಳಿ ಸಂಜೆ ನಾಲ್ಕೂಕಾಲಿನವರೆಗೂ ಕಾದು ವಿಜಯವಾಡಕ್ಕೆ ಹೋಗುವ ರೈಲಿನಲ್ಲಿ ನೆಲ್ಲೂರಿಗೆ ಹೋದರೆ ಹೇಗೆಂಬ ಯೋಚನೆ ಬಂತು. ಮರುಕ್ಷಣವೇ ಟಿಕೆಟ್ಟಿಗೆ ಹಣವಿಲ್ಲದ್ದು ನೆನಪಾಗಿ ಖೇದವಾಯಿತು. ಹಿಂದೆಯೇ ಆಪತ್ಕಾಲದಲ್ಲಿ ಅನಿವಾರ್ಯವಾಗಿ … Read more

ಮೆಟ್ಟು ಹೇಳಿದ ಕಥಾ ಪ್ರಸಂಗ ಒಂದು ನೀಳ್ಗಾವ್ಯ (ಭಾಗ 43 & 44): ಎಂ. ಜವರಾಜ್

-೪೩-ಮದ್ಯಾನ ಮೂರಾಗಿಬಿಸುಲ್ಲಿದ್ರ ಚುರ್ ಅನ್ತನೆಳ್ಗೋದ್ರ ಸಳಿಡ್ಯತರ ಆಗದುಈ ದನುರ್ಮಾಸ್ವೆ ಹಿಂಗೆಲ್ವ ಈ ಅಯ್ನೋರುತ್ವಾಟುದ್ ಮನಲಿಬಿಸುಲ್ಗೊಸಿ ನೆಳ್ಗೊಸಿಎದ್ದು ಬಂದು ಕುಂತ್ಗಳದುಹಿಂಗೆ ಎಡ್ತಾಕರು ಸುಗ್ಗಿ ಈಗಅರ್ಧ ಒಕ್ಣ ಆಗಿಇನ್ನರ್ಧ ಇತ್ತುಕಾಯಮ್ಮಾಗಿ ಚೆಲ್ವಿ ಬರವ ಹಿಂಗಬಿಸುಲ್ಗು ನೆಳ್ಗು ಎಡ್ತಾಕಅಯ್ನೋರ್ ಕಾಲ್ದೆಸಲಿಚೆಲ್ವಿ ಕುಂತ್ಕಂಡು,‘ಅಯ್ನೋರಾ ಸವ್ವಿ ಹೆಂಗಿದಳುಅಂವ ಚೆಂಗುಲಿ ನೋಡಿನಾ..’‘ನೋಡು ಸುಮ್ಗ ಇದ್ಬುಡುಮಾತಾಡಿ ಮಾತಾಡಿಊರ್ಗ ಆರ ಯಾಕಾದೈ’‘ಆರ್ತಿಂಗ ಆಗದ ಮಗಿಗನಂಗ ಜೀವ ಬಡ್ಕತ್ತ ಅಯ್ನೋರಾ’‘ಜೀವ ಬಡ್ಕಂಡುದಾ..ಹೆತ್ಕರ್ಳು ಬಡ್ಕಳ್ದೆ ಇದ್ದಾ..’‘ಅಯ್ನೋರಾ ಒಗ್ಟಾಗಿ ಆಡ್ಬೇಡಿಕರ್ಳು ಕರ್ಳೇ..’‘ಆ ಕರ್ಳ ನಿ ಹೆಂಗ್ ನೋಡ್ಕಬೇಕು,ಕರ್ಳನ್ತ ಕರ್ಳು..ಅವ್ಳ್ ಬಗ್ಗ ಸೊಲ್ಲತ್ಬೇಡಅಂವ ಇಲ್ವ … Read more

ಜಾನ್ ಕೀಟ್ಸ್- ಪ್ರೇಮ ಮತ್ತು ಸಾವು: ನಾಗರೇಖಾ ಗಾಂವಕರ

“If I die, said I to myself, I have left no immortal work behind me, nothing to make my friends proud of my memory- but I have loved the principles of beauty in all things, and if I had time I would have made myself remembered” ಇದು ಕೀಟ್ಸ್ ಫ್ಯಾನಿಗೆ ಬರೆದ ಪತ್ರದ ಸಾಲುಗಳು. ಮನುಷ್ಯನ ಬದುಕು ಕ್ಷಣಿಕ. … Read more

ಪಂಜು ಕಾವ್ಯಧಾರೆ

ಬೆನ್ನುಬಿದ್ದ ಕರಾಳರಾತ್ರಿಯ ದಿನಚರಿ ಅಂದು ಮಧ್ಯಾಹ್ನದ ಕಡು ಬಿಸಿಲಿನಲ್ಲಿ ಹಜ್ಜೆಗಳ ಪಕ್ಕ ಹೆಜ್ಜೆಗಳನ್ನು ಇರಿಸಿ ಎಲ್ಲ ಪ್ರೇಮಿಗಳ ಉದಾಹರಣೆಯೊಂದಿಗೆ ಊರ ಮಧ್ಯ ಹೋಗುತ್ತಿದ್ದರೆ; ಯಾರೋ ಬೊಗಳಿದಂತೆ ಅಂಜುವ ಮಾತಿಲ್ಲ, ಆದರೆ ಸ್ವಲ್ಪ ಕಸಿವಿಸಿ ಲೋಕದಲ್ಲಿ ನಾಯಿಗಳು ಬೊಗಳುವದು ಸಹಜ ಅಂಜುವದೇಕೆ…? ಮುಂದೆ ಮುಂದೆ ಹೆಜ್ಜೆ ಹಾಕಿ, ಹಿಂದೆ ಹಿಂದೆ ನೋಡಿದಷ್ಟು ಗಾಢವಾದ ಭಯವು ಬೆನ್ನು ಏರಿ ಕುಳಿತಿದೆ ಪಕ್ಕದಲ್ಲಿ ಪ್ರೇಮಜ್ವಾಲೆ ಉರಿಯುವಾಗ ಯಾವ ಭಯವು ಎಷ್ಟು ಗಟ್ಟಿಗೊಳ್ಳುವದು ಕಗ್ಗತ್ತಲು ಆವರಿಸಿದ ಈ ವರ್ತುಲದಲ್ಲಿ ಎಲ್ಲವೂ ಅಡಕವಾಗಿವೆ ಸಾಕ್ಷೀಕರಿಸಲು … Read more

ಕಲ್ಲರಳಿ… ಹೂವಾಗಿ…: ಪ್ರಸನ್ನ ಆಡುವಳ್ಳಿ

“ಕಲ್ಲರಳಿ ಹೂವಾಗಿ, ಎಲ್ಲರಿ ಗೂ ಬೇಕಾಗಿ, ಮಲ್ಲಿಕಾರ್ಜುನನ ಶಿಖರಕ್ಕೆ ಬೆಳಕಾಗಿ ಬಲ್ಲವರು ಹೇಳಿ ಸರ್ವಜ್ಞ” ಸರ್ವಜ್ಞನಿಂದ ಹಂಸಲೇಖಾವರೆಗೂ ಕಲ್ಲರಳಿ ಹೂವಾಗುವ ರೂಪಕ ಕನ್ನಡದ ಕವಿಗಳನ್ನು ಸದಾ ಕಾಡಿದಂತಿದೆ. ಸುಣ್ಣದ ಕಲ್ಲುಗಳು ನೀರಿನೊಂದಿಗೆ ಬೆರೆತು ಅರಳುವುದು ಸರ್ವಜ್ಞನಿಗೆ ಕಲ್ಲರಳಿ ಹೂವಾಗುವ ಹಾಗೆ ಕಂಡಿತು. ಕಾಡಿನ ಬಂಡೆಗಳ ಮೇಲೆ ಬೆಳೆಯುವ ಈ ಚಿತ್ರದಲ್ಲಿರುವ ಕಲ್ಲು ಹೂವಿನ ಗಿಡಗಳು ಸರ್ವಜ್ಞನ ಸಾಲುಗಳಿಗೆ ಸರಿಹೊಂದುವಂತಿವೆ. ಹಿಮಾಲಯದ ತಪ್ಪಲಿನಲ್ಲಿ, ಪೂರ್ವಾಂಚಲದ ಕಾಡುಗಳಲ್ಲಿ ಬೆಳೆಯುವ ಈ ಬಗೆಯ ಸಸ್ಯಗಳಿಗೆ ಕೆಲವೆಡೆ “ಪಥ್ಥರ್ ಪೋಡಿ” ಎನ್ನುತ್ತಾರೆ. ಸಂಸ್ಕೃತದಲ್ಲಿ … Read more

ಬೇಯದಿರು ಬೆಂಗಳೂರೇ..: ವಿನಾಯಕ ಅರಳಸುರಳಿ,

ಇದೆಂಥಹಾ ದಿನಗಳು ಬಂದುಬಿಟ್ಟವು? ಎಲ್ಲವೂ ಸರಿಯಾಗಿದ್ದರೆ ಅದೆಷ್ಟೋ ಲಕ್ಷ ಜನರೀಗ ಬೆಂಗಳೂರಿನಲ್ಲಿರುತ್ತಿದ್ದರು. ಬೀದಿ ಬದಿಯ ತಳ್ಳುಗಾಡಿಯಿಂದ ಹಿಡಿದು ಬಹುರಾಷ್ಟ್ರೀಯ ಕಂಪನಿಯ ತನಕ ನೂರಾರು ವಿಧದಲ್ಲಿ ಅಲ್ಲಿ ಜೀವನೋಪಾಯ ಸಾಗುತ್ತಿತ್ತು. ಅಲ್ಲಿ ಗಳಿಸಿದ ಸಂಬಳ ಕೇರಳದ ಆಳದಿಂದ ಹಿಡಿದು ಬಿಹಾರದ ತುದಿಯವರೆಗಿನ ಅದೆಷ್ಟೋ ಜನರ ಬದುಕ ಸಲಹುತ್ತಿತ್ತು. ಚಲನೆಯೇ ಬದುಕೆಂಬ ಮೂಲ ಮಂತ್ರವ ಜಪಿಸುತ್ತಾ ಕೋಟಿ ಜನಸಂಖ್ಯೆಯ ಆ ಪಟ್ಟಣ ಜಗತ್ತಿನ ಖ್ಯಾತ ನಗರಿಗಳ ಪಟ್ಟಿಯಲ್ಲಿ ತಾನೂ ಒಂದಾಗಿ ಮುನ್ನಡೆಯುತ್ತಿತ್ತು. ಬೆಂಗಳೂರೆಂದರೆ ಬರೀ ಕಾಯಕದ ಪಟ್ಟಣವೊಂದೇ ಆಗಿರಲಿಲ್ಲ. ಯಾಂತ್ರಿಕತೆಯ … Read more

ಆಕ್ರಮಣ (ಕೊನೆಯ ಭಾಗ): ಜೆ.ವಿ. ಕಾರ್ಲೊ

ಇಲ್ಲಿಯವರೆಗೆ ಲೆನಿಂಜೆನ್ನನಿಗೆ ಒಮ್ಮೆಲೇ ಸಿಡಿಲು ಹೊಡೆದಂತೆ ಜ್ಞಾಪಕಕ್ಕೆ ಬಂದಿತು: ಔಟ್ ಹೌಸಿನಲ್ಲಿ ಈ ವರೆಗೆ ಉಪಯೋಗಿಸದಿದ್ದ ಎರಡು ಫೈರ್ ಎಂಜಿನುಗಳು ಹಾಗೇ ತುಕ್ಕು ಹಿಡಿದು ಬಿದ್ದಿದ್ದವು. ಲೆನಿಂಜೆನ್ ಅವಗಳನ್ನು ಹೊರಗೆಳೆಸಿ ಪೆಟ್ರೊಲ್ ಟ್ಯಾಂಕಿಗೆ ಜೋಡಿಸಿದ. ಅಷ್ಟರಲ್ಲಿ ಕೆಲವು ಇರುವೆಗಳು ಮೇಲೆ ಹತ್ತಿದ್ದವು. ಫೈರ್ ಎಂಜಿನುಗಳು ಸ್ಟಾರ್ಟ್ ಆಗುತ್ತಲೇ ಪೆಟ್ರೊಲನ್ನು ಇರುವೆಗಳ ಮೇಲೆ ಹರಿಸಿ ಮತ್ತೆ ಅವುಗಳನ್ನು ಕಾಲುವೆಗೆ ದಬ್ಬಲಾಯಿತು ಮತ್ತು ಕಾಲುವೆಗೆ ಮೊದಲಿನಂತೆ ಪೆಟ್ರೋಲು ಹರಿಯಲಾಂಭಿಸಿತು. ಕೆಲ ಹೊತ್ತಿನ ಮಟ್ಟಿಗಾದರೂ ಲೆನಿಂಜೆನ್ ಇರುವೆಗಳನ್ನು ತಡೆಯುವುದರಲ್ಲಿ ಯಶಸ್ವಿಯಾಗಿದ್ದ. ಆದರೂ … Read more

ಆಚರಣೆಗೆ ಸಿಮೀತವಾಗದಿರಲಿ. . . . . : ಶಿವಲೀಲಾ ಹುಣಸಗಿ ಯಲ್ಲಾಪುರ

ಯಾರಿಗೆಲ್ಲ ಬೇಡ ಹೇಳಿ ಎರಡು ಹೊತ್ತಿನ ಊಟ, ಮೈ ಮುಚ್ಚಲು ಬಟ್ಟೆ, ನೆತ್ತಿಗೆ ಮಳೆ, ಗಾಳಿ, ಚಳಿಯಿಂದ ರಕ್ಷಣೆ, ಹರಿದ ಕಂಬಳಿ, ಕೌದಿ, ಚಾದರ, ಹರಕು ಚಾಪಿ, ಗೋಣಿಚೀಲ ಅಪರೂಪಕ್ಕೊಮ್ಮೆ ಮೈ ಸೋಪು, ತಲೆಗೆ ಎಣ್ಣೆ ಹಚ್ಚಿಕೊಂ ಡು ಬದುಕ ಕಳೆದ ಅದೆಷ್ಟೋ ಪ್ರತಿಮೆಗಳು ಕಣ್ಣಮುಂದೆ ಹಾದು ಹೋಗಿರುವುದನ್ನು ಅಥವಾ ಅನುಭವಿಸಿರುವುದ ನ್ನು ಎಂದಾದರೂ ಮರೆಯಲಾದಿತೇ?? ಅವನ್ನೆಲ್ಲ ಒದಗಿಸಲು ಕತ್ತಲೆಯಲಿ ಕರಗಿದವರಾರು?? ಕರಿಕಲ್ಲ ಪಾಠಿ ಬಳಪ ಬರೆದಿದ್ದಕ್ಕಿಂತ ತಿಂದಿದ್ದೆ ಜಾಸ್ತಿ. ಗಂಟಲಲ್ಲಿ ಸಿಕ್ಕ ಬಳಪದ ಚೂರ ಹೊರತೆಗೆದು … Read more

ಗುರುವೇ ಸರ್ವಸ್ವ: ಫರಜಾನಾ ಹಬುಗೋಳ

“ಶಿವಪಥವರಿವಡೆ ಗುರುಪಥ ಮೊದಲು” ಎಂದು ಶರಣರು ಹೇಳಿದ್ದಾರೆ. ಜೀವನದಲ್ಲಿ ಗುರಿ ಹಾಗೂ ಗುರು ಬಹುಮುಖ್ಯ. ಗುರುಗಳು ಬೀರಿದ ಪ್ರಭಾವದಿಂದ ಜೀವನದ. ದಿಕ್ಕನ್ನೇ ಬದಲಾಗಿ ಯಶಸ್ಸನ್ನು ಕಂಡು ಸಾಧನೆಯ ಹಾದಿ ತುಳಿದವರ ಸಂಖ್ಯೆ ಸಾಕಷ್ಟಿದೆ. ಗುರಿ ಮುಟ್ಟಲು ಸೋಪಾನ ಅಗತ್ಯ. ಗುರು ಸ್ಥಾನಕ್ಕೆ ತನ್ನದೇ ಆದ ಘನತೆ ಗೌರವಗಳೊಂದಿಗೆ ತನ್ನದೇ ಆದ ಔನ್ನತ್ಯವೂ ಇದೆ. ನಗುರೋರಧಿಕಂ ತತ್ವಂನ ಗುರೋರಧಿಕಂ ತಪಃ| ತತ್ವಜ್ಞಾನಾತ್ ಪರಂ ನಾಸ್ತಿ ತಸ್ಮೈಶ್ರೀ ಗುರುವೇ ನಮಃ°|| ಗುರುವಿಗಿಂತಲೂ ಅಧಿಕವಾದ ತತ್ವವಿಲ್ಲ; ಗುರುವಿಗಿಂತಲೂ ಅಧಿಕವಾದ ತಪಸ್ಸಿಲ್ಲ; ತತ್ವಜ್ಞಾನಕ್ಕಿಂತಲೂ … Read more

ರಾಧಾಕೃಷ್ಣ: ಆರಾ

“ನೀನೆ ನನ್ನಯ ಪ್ರಾಣ ನೀನೆ ತ್ರಾಣ. ನೀನೆ ಆಸರೆ ನೀನೇನೆ ನನ್ನ ಜೀವನ.. ಸನಿಹವೆ ನೀ ಇರದಿರಲು… ಹುಡುಕಿದೆ ನನ್ನ ಮನವನ್ನೆ!. ಕಣ್ಣೆದುರು ನೀನಿರದೆ, ಕಾಣದೆ ಹೋದೆ ನನ್ನೆ ನಾ ರಾಧೆ. ನಿನ್ನ ಬಿಟ್ಟು ಹೇಗೆ ಇರಲಿ ನಾನು ಒಬ್ಬಳೆ……” ಪ್ರಸ್ತುತ ಕೊರೋನಾ ಸಂಕಷ್ಟದಲ್ಲಿ ಹಿರಿಯ-ಕಿರಿಯ ಭೇದಭಾವವಿಲ್ಲದೆ ಎಲ್ಲರ ಮನಸೂರೆಗೊಂಡಿರುವ ಧಾರಾವಾಹಿ ರಾಧಾಕೃಷ್ಣ. ರಾಧಾಕೃಷ್ಣರ ಅಮರ ಪ್ರೇಮಕಥೆಯ ಸಾರಾಂಶವನ್ನೊಳಗೊಂಡಿದೆ. ಇದಾಗಲೇ ಹಿಂದಿಯಲ್ಲಿ 450 ಕ್ಕೂ ಅಧಿಕ ಎಪಿಸೋಡ್ ಗಳನ್ನು ದಾಟಿ ನೋಡುಗರ ಮನಗೆದ್ದಿದೆ. ಕನ್ನಡದಲ್ಲಿ 100ಕ್ಕೂ ಅಧಿಕ … Read more

ಧನದಾಹಕ್ಕೆ ದಿಕ್ಕೆಟ್ಟ ಬದುಕು ಆರ್ ಕೆ. ನಾರಾಯಣ್ ರ – The Financial Expert ನ ಮಾರ್ಗಯ್ಯ: ನಾಗರೇಖಾ ಗಾಂವಕರ

ಅದೊಂದು ಮುಂಜಾನೆ ಮಾರ್ಗಯ್ಯ ತನ್ನ ಕೆಂಪು ಬಣ್ಣದ ಅಕೌಂಟ್ ಪುಸ್ತಕದಲ್ಲಿ ಪೂರ್ಣ ತಲ್ಲೀನ. ತಂದೆ ತಾನು ಕೇಳಿದ ಆನೆ ಆಟಿಕೆ ಕೊಡಿಸಲಿಲ್ಲವೆಂದು ಕೋಪಗೊಂಡ ಬಾಲು ಕಾಲಿಂದ ಶಾಯಿ ಬಾಟಲಿಯ ಜೋರಾಗಿ ತೂರಿದ ರಭಸಕ್ಕೆ ಪುಸ್ತಕ ಬಣ್ಣಮಯವಾಗುತ್ತದೆ. ಸಿಟ್ಟಿಗೆದ್ದ ಮಾರ್ಗಯ್ಯ ಮಗನನ್ನು ದರದರ ಎಳೆದು ಕೋಣೆಯೊಳಗೆ ಕೂಡಿಹಾಕಲು ಯತ್ನಿಸುತ್ತಲೇ ತಪ್ಪಿಸಿಕೊಂಡ ಬಾಲು ಬಣ್ಣಮೆತ್ತಿದ ಪುಸ್ತಕ ಎತ್ತಿಕೊಂಡು ಹೊರಗೋಡಿ ತಟ್ಟನೆ ಗಟಾರಕ್ಕೆ ಚೆಲ್ಲಿ ಬಿಡುತ್ತಾನೆ. ಮಾರ್ಗಯ್ಯ ಹಣಕಾಸಿನ ಭಂಡಾರವೇ ಕೈತಪ್ಪಿದಂತೆ ಕಂಗಾಲಾಗುತ್ತಾನೆ. ಅದೇ ಬಾಲು ಪ್ರಾಯಕ್ಕೆ ಬರುತ್ತಲೂ ಇನ್ನಷ್ಟು ಅವಿವೇಕಿ … Read more

ಮರೆಯಲಾಗದ ಮದುವೆ (ಭಾಗ 9): ನಾರಾಯಣ ಎಮ್ ಎಸ್

   ಇಲ್ಲಿಯವರೆಗೆ      -೯- ಬೆಂಗಳೂರಿನಿಂದ ರೈಲಿನಲ್ಲಿ ಹೊರಟಿದ್ದ ಮುಕ್ತಾಳ ಕುಟುಂಬ ವಿಶಾಖಪಟ್ಟಣ ತಲುಪಿದಾಗ ಸಮಯ ಬೆಳಗ್ಗೆ ಹತ್ತೂವರೆಯಾಗಿತ್ತು. ರೈಲುನಿಲ್ದಾಣದಿಂದ ಹೋಟೆಲ್ ಗ್ರ್ಯಾಂಡ್ ರೆಸಿಡೆನ್ಸಿಗೆ ಹೊರಟ ಟ್ಯಾಕ್ಸಿಯ ಕಿಟಕಿಗಳ ಬಳಿ ಕುಳಿತಿದ್ದ ಯುಕ್ತಾ ಮತ್ತು ಶರತ್ ವಿಶಾಖಪಟ್ಟಣ ಸಿಟಿಯನ್ನು ಕುತೂಹಲದಿಂದ ನೋಡುತ್ತಿದ್ದರು. ಗ್ರ್ಯಾಂಡ್ ರೆಸಿಡೆನ್ಸಿ ಇನ್ನೂ ಸ್ವಲ್ಪದೂರವಿದ್ದಂತಯೇ ಬಹುಮಹಡಿ ಕಟ್ಟಡವನ್ನು ಗುರುತಿಸಿದ ಶರತ್ “ಅಮ್ಮಾ… ನೋಡಲ್ಲೀ… ಹೋಟ್ಲು ಬಂತು” ಎಂದು ಉತ್ಸಾಹದಿಂದ ಕೂಗಿದ. ಅಷ್ಟರಲ್ಲಿ ಹೋಟೆಲಿನ ಸೈನ್ಬೋರ್ಡಿದ್ದ ಸ್ವಾಗತಕಮಾನು ಪ್ರವೇಶಿಸಿ ಸುಮಾರು ನೂರುಮೀಟರಿದ್ದ ಪುಷ್ಪಾಲಂಕೃತ ಕಾರಿಡಾರನ್ನು ದಾಟಿದ ಟ್ಯಾಕ್ಸಿ … Read more

ಮೆಟ್ಟು ಹೇಳಿದ ಕಥಾ ಪ್ರಸಂಗ ಒಂದು ನೀಳ್ಗಾವ್ಯ (ಭಾಗ 41 & 42): ಎಂ. ಜವರಾಜ್

-೪೧- ಮೊಕ್ಕತ್ತಲ ಬೆನ್ನು ನಾ ಇಂಜದಿಂದ ಹಿಂಗೆ ಬೇವರ್ಸಿ ತರ ಆಗಿ ಜಾಗ ಬುಟ್ಟು ಕದ್ಲಿಲ್ಲ ಈ ಅಯ್ನೋರು ಯಾವ್ದೇಶುಕ್ಕೋದ್ರು ಅನ್ನದೆ ಗೊತ್ತಾಯ್ತಿಲ್ಲ ಈ ಕತ್ಲೊಳ್ಗ ಈ ದೊಡ್ಡವ್ವ ಮೆಲ್ ಮೆಲ್ಗ ತಡಕಾಡ್ತ ಬಾಗ್ಲ ತಳ್ಳಿ ‘ಕುಸೈ..’ ಅನ್ತ ಕೂಗ್ದ ನೀಲವ್ವೋರು ಬಂದ್ರು ಅನ್ಸುತ್ತ ಲಾಟೀನ್ ಬೆಳ್ಕು ಈಚ್ಗಂಟ ಕಾಣ್ತು. ‘ಕುಸೈ.. ನಿನ್ಗಂಡ ಬದ್ನಾ’ ‘ಇಲ್ಲ ಕಮ್ಮಾ..’ ‘ನಿಂಗೊತ್ತಾ… ಆ ಕಾಲ್ನೆಣ್ಣು ಸವ್ವಿ ಓಡಗಿದ್ದಂತ’ ಲಾಟೀನ್ ಬೆಳ್ಕು ಒಳಕ್ಕೇ ಹೋದಂಗಾಯ್ತು. ಸರೊತ್ತು. ಊರು ಗಕುಂ ಅನ್ತಿತ್ತು ನಾಯ್ಗಳು … Read more

ಪಂಜು ಕಾವ್ಯಧಾರೆ

ಹಸಿರುಬನದ ಹಬ್ಬ ಧರೆಯ ದಣಿವಿಗೆ ಮಳೆಯ ಹನಿಯ ಸಾಂತ್ವನ ಹಕ್ಕಿಗಳ ಕೊಳಲಧ್ವನಿಗೆ ಧರೆಯ ನರ್ತನ .. ಅರಳಿತೊ ಮೋಡಗಳ ಒಲವ ಸುರಿಯುವ ಮೈಮನ.. ವರ್ಷಧಾರೆಗೆ ಚಿಗುರಿನ ಕಂಪನ..! ಮಣ್ಣ ಆಳದಿ ಬೆಚ್ಚಗೆ ಮಲಗಿದ ಬೀಜಕೆ ಎಚ್ಚರವೀಗ ಕಣಕಣ ಮಣ್ಣ ಸರಿಸಿ ಚಿಗುರಿತು ನೋಡು ಅದೆಷ್ಟು ಚೆನ್ನ ಮುತ್ತಿಕ್ಕಿತು ಮಳೆಹನಿಯೊಂದು ಬೀಜದ ಗರ್ಭದಿಂದ ಚಿಗುರೆಲೆಯ ಆಗಮನ..! ಜಲಲ ಜಲಧಾರೆಗಳ ಕಾಲ್ಗೆಜ್ಜೆಗಳ ನಾದ ಜುಳು ಜುಳು ಹರಿಯುವ ನದಿ ಅಲೆಗಳ ಧ್ವನಿಯೆ ವೇದ.. ಧುಮ್ಮಿಕ್ಕುವ ಮಳೆಯಲಿ ಸಾಗರದೊಡಲಿಗೆ ನವವಧುವಿನಂತೆ ನದಿಗಳ … Read more

ಒಬ್ಬ ಅಡಿಕ್ಟ್ ಮಾತ್ರ ಮತ್ತೊಬ್ಬ ಅಡಿಕ್ಟ್ ನನ್ನು ಅರ್ಥಮಾಡಿಕೊಳ್ಳಬಲ್ಲ: ಡಾ. ಎಸ್ ಎಂ ನಟರಾಜು

ನಮ್ಮ ಲ್ಯಾಬಿಗೆ ನಾನು ಆಗಷ್ಟೇ ಸೇರಿದ್ದ ದಿನಗಳವು. ಆ ದಿನಗಳಲ್ಲಿ ಒಂದು ದಿನ ಮಧ್ಯ ವಯಸ್ಸಿನ ವ್ಯಕ್ತಿಯೊಬ್ಬ ನಮ್ಮ ಲ್ಯಾಬಿಗೆ ಬಂದಿದ್ದ. ಅವನು ಯಾರಿರಬಹುದು ಎಂದು ನನ್ನ ಮನಸ್ಸಿನಲ್ಲಿ ಪ್ರಶ್ನೆಗಳು ಮೂಡುತ್ತಿರುವಾಗಲೇ “ಈತ ನಮ್ಮ ಲ್ಯಾಬಿನ ಟೆಕ್ನಿಕಲ್ ಸ್ಟಾಫ್” ಎಂದು ನಮ್ಮ ಗೈಡ್ ನನಗೆ ಅವನನ್ನು ಪರಿಚಯಿಸಿದ್ದರು. “ಹಾಯ್” ಎಂದು ನಾನು ನಗು ಮುಖದಿಂದ ಆ ವ್ಯಕ್ತಿಯ ಕೈಕುಲುಕಿದ್ದೆ. ಆತನು ಸಹ ಮುಗುಳ್ನಗುತ್ತಾ ನನ್ನ ಕೈ ಕುಲುಕಿದ್ದ. ಅವತ್ತು ಲ್ಯಾಬಿನಲ್ಲಿ ಸ್ವಲ್ಪ ಜಾಸ್ತಿ ಕೆಲಸ ಇದ್ದ ಕಾರಣ … Read more