ಸಂಗಾತಿ ಬ್ಲಾಗ್‌ ನ ಸಂಪಾದಕರಾದ ಕು.ಸ.ಮಧುಸೂದನರವರ ಒಂದೆರಡು ನುಡಿ

‘ಸಂಗಾತಿ’ ಸಾಹಿತ್ಯದ ಬ್ಲಾಗ್ ಶುರುವಾಗಿ ಕೇವಲ ಎರಡು ತಿಂಗಳು ಮಾತ್ರ ಆಗಿರುವುದರಿಂದ ಈ ಕ್ಷೇತ್ರದಲ್ಲಿ ಹೆಚ್ಚು ಬರೆಯಲು ನಾನು ಅರ್ಹನೆಂದು ಭಾವಿಸಿಲ್ಲ.ಪತ್ರಿಕೋಧ್ಯಮ ನನ್ನ ಕಾಲೇಜು ದಿನಗಳ ಕನಸಾಗಿತ್ತು.ಆದರೆ ನನ್ನ ವೈಯುಕ್ತಿಕ ಬದುಕಿನ ಸಮಸ್ಯೆಗಳಿಂದ ಅನಿವಾರ್ಯವಾಗಿ ಸರಕಾರಿ ನೌಕರಿಗೆ ಸೇರಬೇಕಾಯಿತು. ಆಗೀಗ ಕತೆ ಕವಿತೆಗಳನ್ನು ಬರೆದು ಪತ್ರಿಕೆಗಳಿಗೆ ಕಳಿಸಿ ಕಾಯುವಷ್ಟಕ್ಕೆ ನನ್ನ ಸಾಹಿತ್ಯದ ಆಸಕ್ತಿ ಸೀಮಿತವಾಯಿತು. ನಾಲ್ಕು ವರ್ಷಗಳ ಹಿಂದೆ ಸ್ವಯಂನಿವೃತ್ತಿ ಪಡೆದ ನಂತರ ಪೂರ್ಣಪ್ರಮಾಣದಲ್ಲಿ ಬರವಣಿಗೆಯಲ್ಲಿ ತೊಡಗಿಕೊಂಡು ಒಂದು ಕವನಸಂಕಲನ ಒಂದು ಕಥಾ ಸಂಕಲನ ಎರಡು ರಾಜಕೀಯ … Read more

ಉದಯನ್ಮುಖ ಬರಹಗಾರ್ತಿ ವೀಣಾ ನಾಗರಾಜ್: ವೈ. ಬಿ. ಕಡಕೋಳ

ಶ್ರೀಮತಿ ವೀಣಾ ನಾಗರಾಜು ಉತ್ತಮ ಶಿಕ್ಷಕಿ, ಪ್ರತಿಭಾವಂತೆ, ಸಮಾಜಶಾಸ್ತ್ರ ವಿಷಯದಲ್ಲಿ ಎಂ. ಎ. ಪದವೀಧರೆ. ಇವರು ತುಮಕೂರು ಜಿಲ್ಲೆಯ ಶಿರಾ ತಾಲೂಕಿನ ಸರಕಾರಿ ಕಿರಿಯ ಪ್ರಾಥಮಿಕ ಶಾಲೆ ಕಾಳಜ್ಜಿ ಹಟ್ಟಿಯಲ್ಲಿ ಕಳೆದ 12 ವರ್ಷದಿಂದ ಸೇವೆ ಸಲ್ಲಿಸುತ್ತಿರುವ ಶಿಕ್ಷಕಿ. ಚನ್ನಬಸವಯ್ಯ ಸಾವಿತ್ರಮ್ಮ ದಂಪತಿಗಳ ನಾಲ್ಕು ಜನ ಮಕ್ಕಳಲ್ಲಿ ಹಿರಿಯ ಸುಪುತ್ರಿ. ಇವರ ಪತಿ ನಾಗರಾಜು ಕೂಡ ಪ್ರೌಢಶಾಲಾ ಶಿಕ್ಷಕ. ಎಂ. ಎ(ಸಮಾಜಶಾಸ್ತ್ರ) ಓದಿರುವ ಶಿಕ್ಷಕಿ ವೀಣಾ ನಾಗರಾಜು ವೃತ್ತಿಯೊಡನೆ ಬರವಣಿಗೆಯನ್ನು ಪ್ರವೃತ್ತಿಯನ್ನಾಗಿಸಿಕೊಂಡು 15 ಕ್ಕೂ ಹೆಚ್ಚು ಕತೆಗಳನ್ನು … Read more

ನನ್ನವಳ ನೆನಪು: ಶ್ರೀರಂಗ. ಕೆ. ಆರ್

ಅದೇನೋ ಅಂದು ಮನಸ್ಸು ತಳಮಳಗೊಂಡಿತ್ತು. ಮಲಗಿ ಮೂರು ಸುತ್ತು ಹೊರಳಾಡಿದರೂ ಕಣ್ಣಿಗೆ ನಿದ್ದೆ ಹತ್ತಲಿಲ್ಲ. ಆಗ ನಿನ್ನಪ್ಪನಿಂದ ಕರೆಬಂದದ್ದು. ನಿನಗೆ ಹೆರಿಗೆ ನೋವು, ಆಸ್ಪತ್ರೆಯಲ್ಲಿದ್ದೇವೆ ಎಂದು. ಆಗಲೇ ಓಡಿ ಬರಬೇಕೆಂದುಕೊಂಡೆ. ಪರವಾಗಿಲ್ಲ ನಾವೆಲ್ಲರೂ ಇದ್ದೇವೆ ತೊಂದರೆಯಿಲ್ಲ, ಬೆಳಗ್ಗೆ ಬಂದರಾಯಿತು ಎಂದರು ಮಾವ. ಆದರೂ ನನಗೆ ಸಮಾಧಾನವಿರಲಿಲ್ಲ. ನಿನ್ನ ಕನಸುಗಳಿಲ್ಲದೆ ಮಲಗಿದವನೇ ಅಲ್ಲ ನಾನು, ಅಂದೇಕೋ ಕಣ್ಣುಗಳು ಮುಚ್ಚಲೇ ಇಲ್ಲ. ಮಲಗಿದ್ದ ಕೋಣೆಯ ಮೇಲ್ಛಾವಣಿಯ ಪರದೆಯ ಮೇಲೆ ನಿನ್ನ ಜೊತೆ ಕಳೆದ ಕ್ಷಣಗಳ ನೆನಪುಗಳು ಮೂಡಿಬರುತ್ತಿದ್ದವು. ಅವನ್ನೇ ನೋಡುತ್ತ … Read more

ಪ್ರೇಮ ಪ್ರವಾದಿಯ ಪರಿಸರ ಪ್ರೇಮ: ಅಶ್ಫಾಕ್ ಪೀರಜಾದೆ

ತನ್ನ ಪ್ರಥಮ ಕೃತಿ ” ಮಮದಾಪೂರ ಚುಟುಕುಗಳು ” ಮೂಲಕ ಪ್ರೇಮ ಪ್ರವಾದಿ ಎಂದು ನಾಡಿನಾದ್ಯಂತ ಪ್ರಸಿದ್ದಿ ಪಡೆದಿರುವ ಈಶ್ವರ ಮಮದಾಪುರ ಅವರು ಇತ್ತೀಚೆಗೆ ಇನ್ನೊಂದು ಕೃತಿ “ಮಮದಾಪೂರ ಹನಿಗವಿತೆಗಳು” ಓದುಗರ ಕೈಗಿಟ್ಟಿದ್ದಾರೆ. ಚುಟುಕು, ಹನಿಗವಿತೆ, ಹಾಯ್ಕು, ಕಿರುಪದ್ಯ ಮುಂತಾದ ಹೆಸರುಗಳಿಂದ ಕರೆಯಲ್ಪಡುವ ಈ ಸಾಹಿತ್ಯ ಪ್ರಕಾರ ಕವಿಯ ಮನದ ಪರದೆಯ ಮೇಲೆ ಆ ಕ್ಷಣಕ್ಕೆ ಮಿಂಚಿ ಮಾಯವಾಗುವ ಭಾವ ಸ್ಪಂದನ.. ಅದೇ ಬರಹದ ರೂಪ ಪಡೆದುಕೊಂಡು ಓದುಗರ ಹೃದಯ ತಾಕುವ ತಂತುವಾಗಿ ಮಾರ್ಪಡುತ್ತದೆ. ಈಶ್ವರ ಮಮದಾಪುರ … Read more

ಹುಟ್ಟು ಹಬ್ಬದ ಶುಭಾಶಯಗಳು ಪಂಜು: ವರದೇಂದ್ರ ಕೆ.

ಪಂಜು ಸಾಹಿತ್ಯದ ಚಿಲುಮೆ, ಅಂತರ್ಜಾಲದಲ್ಲಿ ಹೆಸರು ಮಾಡಿದಕ್ಕಿಂತಲೂ ಅಂತರಂಗದಲ್ಲಿ ಸದ್ದಿಲ್ಲದೆ ಸೇರಿಕೊಂಡ ಸಿಹಿ ಪನ್ನೀರು. ಸಾಹಿತ್ಯ ರಚಿಸಿ ಮಸ್ತಕದಿಂದ ಪುಸ್ತಕಕ್ಕೆ ಇಳಿಸಿ ಕೂತವರಿಗೆ; ಪುಸ್ತಕದಿಂದ ಓದುಗರ ಮನೆಗೆ ಮನಸಿಗೆ ತಲುಪಿಸುವಂತಹ ಪರಿಪೂರ್ಣ ಕೆಲಸ ಪಂಜುವಿನಿಂದಾಗಿದೆ. ಪಂಜು ಎಂದರೆ ಬೆಳಕು, ಕತ್ತಲಲ್ಲಿದ್ದವರಿಗೆ ಪಂಜುಹಿಡಿದು ಸಾಹಿತ್ಯ ಬೆಳೆಸುವ ದಾರಿತೋರಿಸಿದೆ ನಾಡಿಗೆ ಪರಿಚಯಿಸಿ ಸಾಹಿತ್ಯ ಲೋಕದಲ್ಲಿ ಗುರುತಿಸಿಕೊಳ್ಳಲು ಸಹಾಯವಾಗಿ ನಿಂತಿದೆ. ಯುವ, ಎಲೆ ಮರೆ ಕಾಯಿಯಂತಹ ಸಾಹಿತಿಗಳಿಗೆ ಉತ್ತಮ ವೇದಿಕೆಯಾಗಿ ನಿಂತು ೭ ವಸಂತಗಳನ್ನು ಪೂರೈಸಿದೆ. ಈ ಸಪ್ತ ವರ್ಷದಲ್ಲಿ ಸಾಕಷ್ಟು … Read more

ಒಂಟಿತನ – ಪರಿಣಾಮ – ಮುಕ್ತಿ: ಗೀತಾ ಜಿ.ಹೆಗಡೆ, ಕಲ್ಮನೆ.

ಬದುಕನ್ನು ಒಂಟಿಯಾಗಿ ಎದುರಿಸುತ್ತಿದ್ದೇವಾ? ನಿಜಕ್ಕೂ ನಮಗೆ ಏನು ಬೇಕು ಜೀವಿಸಲು? ಯಾರ ಅಗತ್ಯ ನಮಗೆ ಹೆಚ್ಚು? ಒಂಟಿತನ ಕಾಡುವುದು ಯಾವಾಗ? ಅಥವಾ ಒಂಟಿತನ ಕಾಡಿದಾಗಲೆಲ್ಲ ನಮ್ಮ ಜೊತೆಗಿರುವವರು ಯಾರು ಗಂಡನಾ, ಮಕ್ಕಳಾ, ಸ್ನೇಹಿತರಾ ಬಂಧುಗಳಾ ಅಥವಾ ನೆರೆಹೊರೆಯವರಾ? ಇದರಿಂದ ಹೇಗೆ ಮುಕ್ತಿ ಹೊಂದಬೇಕು? ಇವೆಲ್ಲ ಆಗಾಗ ಕಾಡುವ ಪ್ರಶ್ನೆ. ಇವೆಲ್ಲವೂ ಸತ್ಯವಾಗಿ ಅರಿವಾಗಬೇಕು ಅಂದರೆ ಕೆಲವು ಸಂದರ್ಭದಲ್ಲಿ ಮಾತ್ರ ಸಾಧ್ಯ. ಅದು ಕಷ್ಟ ಕಾಲದಲ್ಲೂ ಅಲ್ಲ ಅಥವಾ ಕಾಯಿಲೆ ಬಿದ್ದು ನರಳುವಾಗಲೂ ಅಲ್ಲ. ಹಾಗಾದರೆ ಇನ್ಯಾವಾಗ? ; … Read more

ಮೆಟ್ಟು ಹೇಳಿದ ಕಥಾ ಪ್ರಸಂಗ ಒಂದು ನೀಳ್ಗಾವ್ಯ (ಭಾಗ ೪): ಎಂ. ಜವರಾಜ್

೪- ನನ್ನ ಮೆಟ್ಟಿ ಗಿರಿಕ್ಕು ಗಿರಿಕ್ಕನೆ ಆ ಸಂತ ಸಾಮ್ರಾಜ್ಯವ ಬುಟ್ಟು ಅಯ್ನೋರ್ ಪಾದ ಹೋಗ್ತಾ ಹೋಗ್ತಾ ಕತ್ತಲು ಆವರಿಸಿಕೊಳ್ತ ರಸ್ತೆ ಮಾರ್ಗ ಬುಟ್ಟು ಕಿರು ದಾರಿ ಕಾಣ್ತಲ್ಲೊ… ಆ ಕಿರು ದಾರೀಲಿ ಅಯ್ನೋರ್ ಮನೇನಾ? ಅಂತಂದರೆ ಅದು ಸುಳ್ಳಾಗಿ ಹೋಯ್ತಲ್ಲೋ.. ಆ ಕತ್ತಲ ಸಾಮ್ರಾಜ್ಯದಲಿ ಅಯ್ನೋರ್ ಉಟ್ಟ ಪಂಚೆ ಅಂಚು ನನ್ನ ಸುತ್ತ ಸುತ್ಕಂಡು ನಾಜೂಕಲ್ಲಿ ನಗ್ತಾ ನಗ್ತಾ ‘ನನ್ ಒಡಿಯನ ವೈಭೋಗ ನಿಂಗೊತ್ತಾ ಮೆಟ್ಟೇ..? ನಿಂಗೇನ್ ಗೊತ್ತು.. ನೀ ಹೊಸಿಲಾಚೆ ಬುಟ್ಟು ಒಂದಿಂಚು ಬರಗಿದ್ದುದಾ..? … Read more

“ಅಪ್ಪನಿಲ್ಲದ ಈ ಮೂರು ವರ್ಷದ ನಂತರ….. . . . . .”: ಧನರಾಜ್ ಪಾತ್ರೆ

ನಾನು ನೋಡಿದ ಮೊದಲ ವೀರ. ಬಾಳು ಕಲಿಸಿದ ಸಲಹೆಗಾರ ಬೆರಗು ಮೂಡಿಸುವ ಜಾದೂಗಾರ ಅಪ್ಪ, ಹಾಡು ಕೇಳಿದಾಗೆಲ್ಲಾ.. ಅಪ್ಪ ಕಣ್ಣೆದುರು ನಿಲ್ಲುತ್ತಾರೆ. ಸಾಲುಗಳು ಮಾತ್ರ ಒಂದು ಕುಟುಂಬದಲ್ಲಿ ತಂದೆಯ ಪಾತ್ರ ಪ್ರತಿಬಿಂಬಿಸುತ್ತದೆ. ನನ್ನ ತಂದೆಗೆ “ಬಾಬಾ” ಎಂತಲೇ ಕರೀತಿದ್ದೆ ನನ್ನ ಇಬ್ಬರು ಅಣ್ಣಂದಿರು (ಜಗನ್ನಾಥ, ದಶರಥ) “ದಾದಾ” ಅಂತ ಕರೀತಿದ್ದರು. ನನ್ನ ತಂದೆ ತಾಯಿ ಹೊಟ್ಟೆ ಪಾಡಿಗಾಗಿ ಕೂಲಿ ಹುಡುಕಿಕೊಂಡು ಸತಾರಕ್ಕೆ (ಮಹಾರಷ್ಟ್ರ) ಹೋದಾಗ ಅಲ್ಲಿ ನನ್ನ ಇಬ್ಬರು ಅಣ್ಣಂದಿರು ಹುಟ್ಟಿದ್ದು ಮಾಹಾರಾಷ್ಟ್ರದಲ್ಲಿ ತಂದೆಗೆ ದಾದಾ ಅಂತಾ … Read more

ಪಂಜುಗೆ ಶುಭಹಾರೈಕೆಗಳು: ಗಿರಿಜಾ ಜ್ಞಾನಸುಂದರ್

ಅದೊಂದು ದಿನ ಒಂದು ಕಾರ್ಯಕ್ರಮದಲ್ಲಿ ಬಹಳಷ್ಟು ಗಣ್ಯರನ್ನು ಭೇಟಿಮಾಡುವ ಸದವಕಾಶ ಸಿಕ್ಕಿತ್ತು ನನಗೆ. ತಮ್ಮ ಕ್ಷೇತ್ರದಲ್ಲಿ ಬಹಳಷ್ಟು ಸಾಧನೆಮಾಡಿದ್ದವರು. ಅವರ ಒಡನಾಟವೇ ಒಂದು ಆನಂದ. ನನ್ನ ಗುರುಗಳಾದ ಉದಯ ಶಂಕರ್ ಪುರಾಣಿಕ್ ರವರು, ಅವರ ಸಹೃದಯೀ ಸ್ನೇಹಿತರು, ಪಂಜು ಪತ್ರಿಕೆಯ ಸಂಪಾದಕರಾದ ನಟರಾಜ್ ಸೀಗೇಕೋಟೆಯವರು ಎಲ್ಲರನ್ನು ಭೇಟಿಯಾದ ಸಮಯ. ನಟರಾಜುರವರು ಮಾತನಾಡುತ್ತ “ನೀವೇಕೆ ಬರೆಯಬಾರದು?” ಎಂದರು. ಅಲ್ಲಿಯವರೆಗೂ ಅದರ ಬಗ್ಗೆ ಯೋಚನೆಯನ್ನು ಮಾಡದ ನನಗೆ ಅದು ಒಂದು ತಮಾಷೆ ಎನ್ನಿಸಿತು. ಕೇವಲ ಸಾಹಿತ್ಯವನ್ನು ಓದಲು ತಿಳಿದಿದ್ದ ನನಗೆ … Read more

ಆದರ್ಶ ಶಿಕ್ಷಕ, ವಿರಳ ಯುವ ಬರಹಗಾರ ವೈ. ಬಿ. ಕಡಕೋಳ: ಡಾ. ವ್ಹಿ. ಬಿ. ಸಣ್ಣಸಕ್ಕರಗೌಡರ

ಇದೇ ಜನೇವರಿ 21 ರಂದು ಹಾರೂಗೇರಿಯ ಅಜೂರ ಪ್ರತಿಷ್ಠಾನದವರು ಕೊಡಮಾಡುವ ಜಿಲ್ಲಾ ಮಟ್ಟದ ಸಾಹಿತ್ಯ ಕೃತಿಗೆ ವೈ. ಬಿ. ಕಡಕೋಳರ ಪಯಣಿಗ ಕೃತಿ ಆಯ್ಕೆಯಾಗಿದೆ. ಅಷ್ಟೇ ಅಲ್ಲ ಸೇಡಂ ತಾಲೂಕಿನ ಮೇದಕ ಗ್ರಾಮದ ಚನ್ನಕೇಶ್ವರ ಶಿಕ್ಷಣ ಮತ್ತು ಗ್ರಾಮೀಣ ಅಭಿವೃದ್ಧಿ ಟ್ರಸ್ಟ(ರಿ) ವತಿಯಿಂದ ಶ್ರೀ ಚನ್ನಕೇಶ್ವರ ಉತ್ಸವದ ಅಂಗವಾಗಿ ಪೆಬ್ರುವರಿ 1 ರಂದು ಜರಗುವ ಮಾತೋಶ್ರೀ ನಾಗಮ್ಮ ಆಶಪ್ಪ ಬೊಪ್ಪಾಲ್ ಸ್ಮರಣಾರ್ಥ ಕೊಡಮಾಡುವ ರಾಜ್ಯಮಟ್ಟದ 15ನೇ ವರ್ಷದ ಅಕ್ಷರ ಲೋಕದ ನಕ್ಷತ್ರ ಪ್ರಶಸ್ತಿಗೆ ವೈ. ಬಿ. ಕಡಕೋಳರ … Read more

ನಮ್ಮ ಪುಟ್ಟಿ: ವೆಂಕಟೇಶ ಚಾಗಿ

ನಮ್ಮ ಪುಟ್ಟಿ (ಮಕ್ಕಳ ಕವನ) ನಮ್ಮ ಪುಟ್ಟಿಯ ಚಂದದ ಆಟ ನೋಡಲು ಎಷ್ಟು ಸುಂದರ ಪುಟ್ಟಿ ಜೊತೆಗೆ ಆಟವನಾಡಲು ಬರುವನು ಬಾನಿಗೆ ಚಂದಿರ..!! ಪುಟ್ಟಿಯ ಕೈಯಲಿ ಗೊಂಬೆ ಇದ್ದರೆ ಆಡಿಸಿ ನಗುತ ನಲಿಯುವಳು ಗೊಂಬೆಗೆ ಬಣ್ಣದ ಅಂಗಿಯ ಹಾಕಿ ಲಾಲಿಸಿ ಅಳುವ ಮರೆಯುವಳು !! ಪುಟ್ಟ ಪುಟ್ಟ ಹೆಜ್ಜೆಗಳಿಡುತ ಓಟದ ಆಟವ ಆಡುವಳು ಓಡುವ ಅವಳ ಹಿಡಿದು ಬಿಟ್ಟರೆ ಖುಷಿಯಲಿ ಕೇಕೆ ಹಾಕುವಳು || ಪಾಠ ಓದಲು ಕುಳಿತರೆ ನಾನು ತನಗೂ ಪುಸ್ತಕ ಕೇಳುವಳು ಚಿತ್ರವ ನೋಡಿ … Read more

ಪಂಜು ಕಾವ್ಯಧಾರೆ

ಬದುಕ ನೇಯ್ದ ಅವ್ವ…!! ಕಾವ್ಯ ಪುರಾಣ ವೇದ ಉಪನಿಷತ್ತು ಕಟ್ಟಿ ತಿಳಿಸಿ ಓದಿದವಳಲ್ಲ ಹೊಲ ಗದ್ದೆ ಪೈರು ಮನೆಯನ್ನ ಜೇಡರ ಬಲೆಯಂತೆ ನೇಯ್ದು ಬಂಡೆಯಲ್ಲಿ ಮೊಳಕೆಯೊಡೆದು ಸೂರಿಗೆ ಚಂದ್ರನಾಗಿ ತಂಪ ನೀಡಿದವಳು ಕೋಳಿ ಕೂಗೋ ಮುಂಚೆ ಎದ್ದು ದನ ಕರು ಕಟ್ಟಿ, ಕಸ ಸುರಿದು ಬಂದು ಮಬ್ಬ ನೆಲದಾಗಸವ ಶುಚಿಗೊಳಿಸಿ ನೀರ-ನಿಡಿ ಹಿಡಿದು ಕಾಯಿಸಿ ಹಜಾರದಲ್ಲಿ ಮಕ್ಕಳಿಗೆ ಮಜ್ಜನ ಮಾಡಿಸಿ ಕೊಳಕಿಲ್ಲದ ಶ್ವೇತವಸ್ತ್ರ ತೊಡಿಸಿ ಲೋಕದ ಮಾನ ಮುಚ್ಚಿ ಬಾಚಣಿಗೆಯಲ್ಲೆ ವಿಶ್ವಪರ್ಯಟಿಸಿ ಚಿಂದಿ ಮನಗೂಡಿಸಿ ಸಮತೆ ಸಾರಿ … Read more

ಮೈತ್ರಿ ಪ್ರಕಾಶನ ಕಥಾ ಸ್ಫರ್ಧೆ

ಹೊಸ ವರ್ಷದ ಹೊಸಿಲಲ್ಲಿ ಮೈತ್ರಿ ಪ್ರಕಾಶನ ಹೊಸ ಯೋಜನೆಯೊಂದಿಗೆ ನಿಮ್ಮ ಮುಂದೆ ಬಂದಿದೆ…. ಒಂದು ಕಥಾ ಸ್ಫರ್ಧೆಯನ್ನು ಆಯೋಜಿಸಲಾಗುತ್ತಿದೆ. ಮೈತ್ರಿ ಪುಸ್ತಕ ಪ್ರಶಸ್ತಿ ಆರಂಭಿಸುತ್ತಿದ್ದೇವೆ..! ಆಸಕ್ತ ಲೇಖಕರು ೮-೧೦ ಕತೆಗಳ ಡಿಟಿಪಿ ಮಾಡಿಸಿ ಕತೆಗಳನ್ನು ಕಳಿಸಬಹುದು…. ಈ ಕೆಳಗಿನ ನಿಯಮಾವಳಿಗಳನ್ನು ಗಮನಿಸಿ… ೧) ಕತೆಗಳು ಸ್ವಂತದ್ದಾಗಿರಬೇಕು. ಅನುವಾದ, ಆಧಾರ ಸ್ಫೂರ್ತಿ ಪಡೆದ ಕತೆಗಳಿಗೆ ಅವಕಾಶವಿಲ್ಲ. ೨) ಇದುವರೆಗೂ ಒಂದೂ ಕಥಾಸಂಕಲನ ತರದ ಹೊಸಬರಿಗೆ ಮಾತ್ರ ಈ ಸ್ಫರ್ಧೆಯಲ್ಲಿ ಅವಕಾಶವಿದೆ. ೩) ಸುಮಾರು ೮-೧೦ ಕತೆಗಳನ್ನು ಡಿಟಿಪಿ ಮಾಡಿಸಿ … Read more

ಹೊಸ ಬೆಳಕು: ವೈ. ಬಿ. ಕಡಕೋಳ

ವಂದನಾಳ ಬಾಳಿನಲ್ಲಿ ಏನೋ ದುಗುಡ. ಮುಖ ಸಪ್ಪೆಯಿಂದ ಮನೆಗೆಲಸದಲ್ಲಿ ಆಸಕ್ತಿ ಇಲ್ಲದಂತೆ ಮೋಬೈಲ್‍ದಲ್ಲಿ ಏನನ್ನೋ ಟೈಪಿಸುತ್ತ ಕುಳಿತಿದ್ದಳು. ಅದೇ ಸಂದರ್ಭ ಆ ಕಡೆಯಿಂದ ಅವಳ ಗೆಳತಿಯ ಕರೆ ಬಂತು ”ಹಲೋ ವಂದನಾ ಏನು ಮಾಡುತ್ತಿರುವೆ. ”? ಪ್ರಶ್ನೆ ಬರುವುದಷ್ಟೇ ತಡ ದುಃಖ ಉಮ್ಮಳಿಸಿ ಬಂದು ಅಳತೊಡಗಿದಳು. ಆ ಕಡೆಯಿಂದ ಮಾತೇ ಬರದಾದಾಗ ಇವಳ ಅಳುವ ಧ್ವನಿಯನ್ನು ಕೇಳಿ ಸುಮ ”ಯಾಕೆ ಏನಾಯಿತೇ ನಿನಗೆ, ಯಾಕೆ ಈ ಅಳು. ”? ಎಂದೆಲ್ಲ ಪ್ರಶ್ನೆಗಳ ಸುರಿಮಳೆಯೇ ಸುಮಳಿಂದ ಬಂದಾಗ ವಂದನಾ … Read more

ಬದಲಾಗುತ್ತಿದೆ ಅಡುಗೆ ಕಾನ್ಸೆಪ್ಟ್: ವೇದಾವತಿ ಹೆಚ್.ಎಸ್.

ಸ್ನೇಹಿತೆಯೊಬ್ಬಳು ನನ್ನಲ್ಲಿ “ನೀನೇಕೆ ಕ್ಯಾರಿಯರ‍್ ಮೀಲ್ಸ್ ಕಾನ್ಸೆಪ್ಟ್ ಅನ್ನು ಪ್ರಾರಂಭ ಮಾಡಬಾರದು?ಹೇಗಿದ್ದರೂ ರುಚಿ ರುಚಿಯಾಗಿ ಅಡುಗೆ ಮಾಡುತ್ತಿಯಾ.”ಎಂದಾಗ ಅದುವರೆಗೂ ನನ್ನ ತಲೆಯಲ್ಲಿ ಯೋಚಿಸದ ವಿಷಯವೊಂದು ತಲೆಯಲ್ಲಿ ಹೊಕ್ಕಿತು.ಅದನ್ನೇ ಯೋಚಿಸುತ್ತಾ ಅಡುಗೆ ಮನೆಯಲ್ಲಿ ಅಡುಗೆ ಕೆಲಸ ಮಾಡುತ್ತಿದ್ದೆ.ನನ್ನ ಗೆಳತಿಯಂತೆ ನಮ್ಮ ಮನೆಯ ನೆರೆಮನೆಯಾಕೆಯೂ ಒಮ್ಮೆ ನನ್ನಲ್ಲಿ “ನೀವೇನಾದರೂ ಮನೆಯಲ್ಲೇ ಅಡುಗೆ ಮಾಡಿ ಕ್ಯಾರಿಯರ್ ಮೀಲ್ಸ್ ತಯಾರಿಸಿ ಕೊಡುವುದಾದರೆ ನಾನು ಮೊದಲು ನಿಮ್ಮ ಗಿರಾಕಿಯಾಗುತ್ತೇನೆ”ಎಂದಿದ್ದರು.ಅವರ ಮಾತಿಗೂ ನಾನೇನು ಹೇಳಿರಲಿಲ್ಲ.ಪುನಃ ಇನ್ನೊಬ್ಬ ಗೆಳತಿ ನನ್ನಲ್ಲಿ “ಈಗ ದೊಡ್ಡ ದೊಡ್ಡ ಅಪಾರ್ಟ್ಮೆಂಟ್ ಗಳಲ್ಲಿ … Read more

ಸೃಷ್ಟಿಯೆಂದರೆ ಸ್ತ್ರೀ ತಾನೆ….: ಸಿಂಧು ಭಾರ್ಗವ್. ಬೆಂಗಳೂರು

ಹೆಣ್ಣಿನ ವಿವಿಧ ರೂಪಗಳನ್ನು ನಾವು ಕಾಣಬಹುದು. ಅದರಲ್ಲಿ ತಾಯಿಗೆ ಮೊದಲ ಸ್ಥಾನ . ಕಾರಣ ಅವಳೇ ಜನನಿ. ಹಡೆದವ್ವ. ಅವಳು ಒಂದು ಮಗುವನ್ನು ಹೆತ್ತು ಈ ಜಗತ್ತಿಗೆ ಪರಿಚಯಿಸಿದರೆ ಮಾತ್ರವೇ ನಾವು ಲೋಕ ನೋಡಬಹುದು. ನಂತರ ಅಕ್ಕ, ತಂಗಿ, ಅತ್ತೆ, ಚಿಕ್ಕಮ್ಮ, ದೊಡ್ಡಮ್ಮ, ಅಜ್ಜಿ, ಮಡದಿ, ಮಗಳು, ಗೆಳತಿ. ಆದರೆ ಹೆಣ್ಣನ್ನು ಪ್ರತಿಯೊಬ್ಬರೂ ತಾಯಿಯಾಗಿ ನೋಡುತ್ತಾರೆಯೇ? ತಮ್ಮ ಮನೆಯ ಅಕ್ಕನೋ ಇಲ್ಲವೇ ತಂಗಿಯಂತೆ ಸ್ವೀಕರಿಸುತ್ತಾರೆಯೇ? ಅವಳಿಗೆ ಗೌರವದ ಸ್ಥಾನ ನೀಡಲಾಗುತ್ತಿದೆಯೇ? ಮೋಹ, ಮೋಸ, ಕಾಮ, ಕಾಸಿನ ವ್ಯಾಮೋಹ, … Read more

ಮೆಟ್ಟು ಹೇಳಿದ ಕಥಾ ಪ್ರಸಂಗ ಒಂದು ನೀಳ್ಗಾವ್ಯ (ಭಾಗ ೩): ಎಂ. ಜವರಾಜ್

ಇಲ್ಲಿಯವರೆಗೆ -೩- “ಏಯ್, ನಾನ್ ಹೇಳ ಕತ ಕೇಳ್ತ ಇದ್ದಯ ಕೇಳ್ತ ಇಲ್ವ.. ನಿದ್ಗಿದ್ದ ಮಾಡ್ತ ಕಾಟಾಚಾರ್ಕ ಕುಂತ್ಕಂಡು ಆಟ ಆಡ್ತ ಇದ್ದಯ ಬಂಚೊತ್” ಏರಿಸಿದ ದನಿಯಲ್ಲಿ ಮೆಟ್ಟು ಬೆದರಿಸಿತಲ್ಲಾ.. ನಾನು ಬೆಚ್ಚಿ ಬೆರಗಾಗಿ ದಡಕ್ಕನೆ ಮೇಲೆದ್ನಲ್ಲಾ.. “ಹೇಳ್ತ ಹೇಳ್ತ ನಿಂಗ್ಯಾಕ್ ಅನುಮಾನ ಬಂತೋ.. ನಾ ಕೇಳ್ತ ಕೇಳ್ತ ವಸಿ ತೂಕುಡ್ಕ ಬಂತಲ್ಲಾ.. ನೀ ಹೇಳ ಕತಾ ಇಂಟ್ರೆಸ್ಟಾಗಿದೆಯಲ್ಲಾ.. ನನ್ ವಂಶದ ಕರಾಮತ್ತು ಅಂದೆಲ್ಲಾ.. ಅದಕ್ಕಾದ್ರು ನೀ ಹೇಳ ಕತಾ ನಾ ಕೇಳ್ಬೇಕಲ್ಲಾ…” “ಏಯ್ ತಿರಿಕ ಮಾತಾಡ್ಬೇಡ..” … Read more

ಮುಗಿಯಿತೇ ಜವಾಬ್ದಾರಿ??: ಸಹನಾ ಪ್ರಸಾದ್

ಅಯ್ಯೋ, ನಿಮಗೇನ್ರೀ, ಮಗಳ ಮದುವೆ ಆಯ್ತು, ಮಗ ಕೈಗೆ ಬಂದ. ಇನ್ನು ನಿಮ್ಗೆ ಯೋಚನೆ ಇಲ್ಲ. ಆರಾಮವಾಗಿ ಓಡಾಡಿಕೊಂಡಿರಬಹುದು. ಅಸೂಯೆ, ಮೆಚ್ಚುಗೆ ತುಂಬಿದ ಈ ತರಹದ ಮಾತುಗಳು ನನಗೆ, ಮಗಳ ಮದುವೆ ಮಾಡಿ ನಾ ಅತ್ತೆಯಾದ ಮೇಲೆ ಮಾಮೂಲಾಗಿಬಿಟ್ಟಿದೆ. ಹೌದಲ್ವಾ, ಜನ ಸಾಮಾನ್ಯರ ಕನಸಿನ ಪ್ರಕಾರ ಬದುಕು ಸಾಗಿದಾಗ ಜನ ಯೋಚಿಸೋದು ಸರೀನೆ. ಆದರೆ ಇಷ್ಟಕ್ಕೆ ಹೆಣ್ಣುಮಕ್ಕಳ ಜವಾಬ್ದಾರಿ ಮುಗಿಯುತ್ತವೆಯೇ? ಹೆಣ್ಣು ಮಕ್ಕಳಿರಲಿ, ಗಂಡು ಮಕ್ಕಳಿಗೂ ಜವಾಬ್ದಾರಿ ಅನ್ನುವುದು ಮುಗೀತು, ಇನ್ನು ಮುಂದೆ ನಿರಾಳ ಅನ್ನುವುದು ಬಹಳ … Read more

ರಾಯರ ಕುದುರೆ ಕತ್ತೆ ಆಯ್ತು..!!?: ವೆಂಕಟೇಶ ಚಾಗಿ

ಅನಂತಪುರ ಎಂಬ ಊರಿನಲ್ಲಿ ಹಬ್ಬಿದ ನಾಥ ಎಂಬ ಶ್ರೀಮಂತ ವ್ಯಕ್ತಿ ವಾಸವಾಗಿದ್ದನು ಅವನು ತನ್ನ ಸುಂದರವಾದ ಸಂಸಾರದೊಂದಿಗೆ ಉತ್ತಮ ಜೀವನ ನಡೆಸುತ್ತಾ ಸಂತೋಷದಿಂದ ಬದುಕುತ್ತಿದ್ದರೂ ತನ್ನ ಸ್ನೇಹಿತರಿಗೆ ಹಾಗೂ ನಂಬಿಕಸ್ಥ ರಿಗೆ ಕಾಳು-ಕಡಿ ಅಥವಾ ಹಣವನ್ನು ನೀಡಿ ಅವರ ದುಡಿಮೆಗೆ ನೆರವಾಗುತ್ತಿದ್ದರು ಸಾಲ ಪಡೆದವರು ಕಾಲಕ್ಕೆ ಸರಿಯಾಗಿ ತಾವು ಪಡೆದ ವಸ್ತುಗಳನ್ನು ಅಥವಾ ಹಣವನ್ನು ತಿರುಗಿಸುತ್ತಿದ್ದರು . ಅಲ್ಪ ಪ್ರಮಾಣದ ಬಡ್ಡಿಯನ್ನು ಪಡೆಯುತ್ತಿದ್ದಾನೆ ಯಾರಿಗೂ ನೋಯಿಸದೆ ವ್ಯವಹಾರವನ್ನು ನಡೆಸುತ್ತಿದ್ದನು. ಅದ್ಭುತ ನಾಥನಿಗೆ ಸಾಲವನ್ನು ಮರಳಿ ಕೇಳಲು ಊರಿಂದ … Read more

ಶಾಲಾ ಕಾಲೇಜುಗಳಲ್ಲಿ ನಡೆಯುವ ಪರೀಕ್ಷೆ ಎಂಬ ಮಾನದಂಡದ ಪ್ರಸ್ತುತತೆ!: ಕೆ ಟಿ ಸೋಮಶೇಖರ ಹೊಳಲ್ಕೆರೆ

ಶಾಲಾ ಕಾಲೇಜುಗಳಲ್ಲಿ ವರ್ಷವೆಲ್ಲಾ ವಿದ್ಯಾರ್ಥಿಗಳು ಕಲಿತಿದ್ದನ್ನು, ಶಿಕ್ಷಕರು ಕಲಿಸಿದ್ದನ್ನು ಎಷ್ಟು ಕಲಿತ್ತಿದ್ದಾರೆ? ಹೇಗೆ ಕಲಿತ್ತಿದ್ದಾರೆ? ಹೇಗೆ ಉತ್ತರಿಸಿದ್ದಾರೆ? ಎಂಬುದನ್ನು ಅಳೆದು ತಿಳಿಯುವ ವಿಧಾನವೇ ಪರೀಕ್ಷೆ! ವರ್ಷವೆಲ್ಲಾ ಕಲಿತ್ತದ್ದನ್ನು, ಕಲಿಸಿದ್ದನ್ನು ಮೂರು ಗಂಟೆಯಲ್ಲಿ ಅಳೆಯುವ ವಿಧಾನ ನಮ್ಮಲ್ಲಿ ಪ್ರಸಿದ್ದವಾದ, ಬಹು ಮಾನ್ಯವಾದ, ಸಾಮೂಹಿಕವಾಗಿ, ಒಮ್ಮೆಗೆ ಬಹುಜನರ ಪರೀಕ್ಷಿಸುವ ವಿಧಾನವಾಗಿದೆ! ಸಾಮಾನ್ಯವಾಗಿ ಬರವಣಿಗೆ ಮೂಲಕ ಪರೀಕ್ಷಿಸಲಾಗುತ್ತದೆ. ಪ್ರಾಕ್ಟಿಕಲ್ ಕಾಮನ್ನಾಗಿ ಎಲ್ಲಾ ವಿದ್ಯಾರ್ಥಿಗಳಿಗೂ ಇರುವುದಿಲ್ಲ! ಕೆಲವರಿಗೆ ಪ್ರಾಕ್ಟಿಕಲ್ ಬಹು ಮುಖ್ಯವಾಗಿರುತ್ತದೆ. ಹಾಗೆ ಕೆಲವರಿಗೆ ಈ ಪರೀಕ್ಷೆಗಳ ಜತೆಗೆ ಮೌಕಿಖ ಪರೀಕ್ಷೆಯೂ ಇರುತ್ತದೆ! … Read more

ಮೆಟ್ಟು ಹೇಳಿದ ಕಥಾ ಪ್ರಸಂಗ (ಭಾಗ ೨): ಎಂ. ಜವರಾಜ್

ಇಲ್ಲಿಯವರೆಗೆ ಒಂದು ನೀಳ್ಗಥನ ಕಾವ್ಯ -೨- “ಏ ಕಾಲ ಬಲ ಇಲ್ಲಿ..” ಸೋಮಾರ ಸಂತಲಿ ಅಯ್ನೋರ್ ಕೂಗಿಗೆ ಒಡಿಯ ನನ್ ಕಾಲಯ್ಯ ಎದ್ದೊ ಬಿದ್ದೊ ಓಡ್ತಾ.. ಅರರೆ ಇದೇನ ಈ ಸಂತ ಸಾಮ್ರಾಜ್ಯಲಿ ನನ್ ಒಡೀನೆ ಕಂಡ್ನಾ ಅಯ್ನೋರ್ಗೆ? ನಾನು ನನ್ಜೊತೆಗಾರರು ಮಿಣ ಮಿಣ ಕಣ್ಬುಟ್ಟು ನೋಡ್ತಾ ನೋಡ್ತಾ ಅಯ್ನೋರ್ ಸುದ್ದಿನ ತುಂಬ್ಕೊಂಡು ಕುಂತ್ಕಂಡು. “ಏನ್ ಕಾಲೊ ನಿನ್ ನಸೀಪು..” ಟೀ ಕ್ಯಾಂಟೀನ್ ಸುಬ್ಬಕ್ಕನ ಗೇಲಿಗೆ ನನ್ ಒಡಿಯ ತಲೆ ಕೆರಿತಾ ಬೀಡಿ ಕಚ್ತಾ ಮುಖದ ತುಂಬ … Read more

ಮಹಿಳೆಯರ ಅಭ್ಯುದಯಕ್ಕಾಗಿ ದುಡಿದ ಅಕ್ಷರ ಮಾತೆ ಸಾವಿತ್ರಿ ಬಾಯಿ ಫುಲೆ: ಆದಿತ್ಯಾ ಮೈಸೂರು

ಭಾರತವು ಅಂದು ಸಾಮಾಜಿಕ ಅನಿಷ್ಟ ಪದ್ಧತಿಗಳಾದ ಅಸಮಾನತೆ, ಲಿಂಗ ತಾರತಮ್ಯ, ಸತಿ ಸಹಗಮನ, ಬಾಲ್ಯ ವಿವಾಹ ಅಸ್ಪೃಶ್ಯತೆ, ದೇವದಾಸಿ ಪದ್ಧತಿ, ಇನ್ನೂ ಮುಂತಾದ ಮೌಢ್ಯತೆ, ಕಂದಾಚಾರಗಳ ಬಿತ್ತುವ ಆಗರವಾಗಿತ್ತು. ಅಂದಿನ ಸಮಾಜ ಶೂದ್ರ ಅತಿಶೂದ್ರ ಮತ್ತು ಮಹಿಳೆಯರನ್ನು ನಿಕೃಷ್ಟವಾಗಿ ಕಾಣುತ್ತಿದ್ದ ಕಾಲವದು. ವರ್ಣಾಶ್ರಮದ ನೆಲೆಗಟ್ಟಿನಲ್ಲೆ ನಿಂತಿದ್ದವು. ಮೇಲ್ವರ್ಗದವರೆ ಸರ್ವಶ್ರೇಷ್ಠರೆನಿಸಿಕೊಂಡಿದ್ದರು. ಶಿಕ್ಷಣವೆಂಬುದು ಅವರಿಗೆ ಮಾತ್ರ ಸೀಮಿತವಾಗಿತ್ತು. ಶೂದ್ರರು ಅದರಿಂದ ದೂರವೇ ಉಳಿಯಬೇಕಾಗಿತ್ತು ಇದಕ್ಕೆ ಅರ್ಹರಾಗಿರಲಿಲ್ಲ. ಇನ್ನೂ ಮಹಿಳೆಯರ ಶಿಕ್ಷಣವೆಲ್ಲಿ ? ಧರ್ಮದ ಹೆಸರಿನಲ್ಲಿ ಇವರ ಶಿಕ್ಷಣವನ್ನು ಮೊಟಕುಗೊಳಿಸಲಾಗಿತ್ತು. ಮನುಸ್ಮೃತಿಯಲ್ಲಿ … Read more

ಝಕೀರ್ ನದಾಫ್ ಗೆ ರಂಗ ಪ್ರಶಸ್ತಿ: ವೈ. ಬಿ. ಕಡಕೋಳ

ಇತ್ತೀಚಿಗಷ್ಟೇ ರಂಗ ಸಾಹಿತ್ಯಕ್ಕಾಗಿ ಸವದತ್ತಿ ತಾಲೂಕಿನ ಹೂಲಿ ಶೇಖರ್ ಅವರಿಗೆ ಪ್ರಶಸ್ತಿ ಗೌರವವನ್ನು ರಾಜ್ಯೋತ್ಸವ ಸಂಭ್ರಮದಲ್ಲಿ ನೀಡಿರುವ ಬೆನ್ನಲ್ಲೇ ಹೊಸ ವರ್ಷದ ಮೊದಲ ವಾರ ಮತ್ತೊಂದು ಪ್ರತಿಭೆ ಝಕೀರ್ ನದಾಫ್ ರಿಗೆ ರಂಗ ಪ್ರಶಸ್ತಿ ಪ್ರಕಟವಾಗಿರುವುದು ಸವದತ್ತಿ ತಾಲೂಕಿನ ಹೆಮ್ಮೆ. ಏಣಗಿ ಬಾಳಪ್ಪನವರ ಮೂಲಕ ತಾಲೂಕು ತನ್ನದೇ ವಿಶೇಷತೆಯನ್ನು ರಂಗಪರಂಪರೆಯಲ್ಲಿ ಬೆಳಗಿದೆ. ಇಂತಹ ತಾಲೂಕಿನ ಹೂಲಿ ಶೇಖರ್ ಹುಟ್ಟೂರು ಹೂಲಿಯಾದರೆ ರಂಗ ಚಟುವಟಿಕೆಗಳಿಗೆ ಕರ್ಮ ಭೂಮಿಯಾಗಿದ್ದು ಉತ್ತರ ಕನ್ನಡ. ಬೆಂಗಳೂರು. ಆದರೆ ಏಣಗಿ ಬಾಳಪ್ಪನವರು ಸವದತ್ತಿ ತಾಲೂಕಿನಿಂದಲೇ … Read more

ಸಾವು ಮತ್ತು ನಾವು: ಸಹನಾ ಪ್ರಸಾದ್

“ಅಯ್ಯೋ, ಪದ್ದಮ್ಮ ಹೋಗಿಬಿಟ್ರು ಕಣ್ರೀ, ರಾತ್ರಿ ಮಲಗಿದವರು ಬೆಳಗ್ಗೆ ಏಳಲೇ ಇಲ್ಲವಂತೆ. ಪಾಪ “ ಒಬ್ಬಾಕೆಯ ಉವಾಚ. ಮತ್ತೊಬ್ಬರದು ಜೋಡಣೆ. “ಸುಖವಾದ ಸಾವು, ಬಿಡ್ರೀ. ಎಷ್ಟು ಜನಕ್ಕೆ ಲಭ್ಯ, ಹೇಳಿ? ಒಂದು ದಿನ ನರಳಲಿಲ್ಲ, ಹಾಸಿಗೆ ಹಿಡಿಯಲಿಲ್ಲ. ಒಬ್ಬರ ಕೈಲಿ ಸೇವೆ ಮಾಡಿಸಿಕೊಳ್ಳಲಿಲ್ಲ. ಹೀಗೆ ಅಚಾನಕವಾಗಿ ಹೋಗೋದು ಪುಣ್ಯ ಅಲ್ಲದಿದ್ರೆ ಮತ್ತೇನು?” ಮಾತು ಒಬ್ಬರಿಂದ ಒಬ್ಬರಿಗೆ ದಾಟಿ ಅನೇಕ ಭಾವಗಳನ್ನು ತೋರಿ ಎಲ್ಲೋ ಒಂದು ಕಡೆ “ ಹೋಗಲಿ ಬಿಡಿ, ಅವರು ಪಡೆದುಕೊಂಡು ಬಂದಿದ್ದಷ್ಟೇ, ಭೂಮಿಯ ಋಣ ಮುಗೀತು, ಹೋದ್ರು!” ಎನ್ನುವಲ್ಲಿಗೆ ಮುಕ್ತಾಯಗೊಂಡಿತು.

ಸಾವಿನ ಸುದ್ದಿಯನ್ನು ಮಾತಾಡುವುದು, ಚರ್ಚೆ ಮಾಡುವುದು ಕಷ್ಟ. ನಮ್ಮ ಮನೆಯಲ್ಲೇ ಆಗಲಿ, ನೆರೆಮನೆಯದ್ದೇ ಇರಲಿ, ಆಸುಪಾಸಿನಲ್ಲಿ, ದೂರದಲ್ಲಿ, ಎಲ್ಲೇ ಆಗಲಿ ಅದೊಂದು ಹಿಂಸೆಯ ವಿಷಯ. ಹೋದವರು ವಯಸ್ಸಾದವರಾಗಿದ್ದರೆ ಅಂದೊಂದು ಸ್ವಲ್ಪ ಸಹನೀಯ. “ಪಾಪ, ವಯಸ್ಸಾಗಿತ್ತು. ಇನ್ನೆಷ್ಟು ದಿನ ಆಯುಸ್ಸಿದ್ದೀತು?” ಎಲ್ಲೋ ಸಮಾಧಾನದ ಉಸಿರು. ಚಿಕ್ಕವರಾಗಿದ್ದರೆ ಹಲಬುವುದು ಜಾಸ್ತಿ “ಛೇ, ಇನ್ನು ಸಣ್ಣ ವಯಸ್ಸು. ಪಾಪ, ಬಾಳಿ ಬದುಕಬೇಕಾದ ಜೀವ. ದೇವರು ನಿಷ್ಕರುಣಿ. ಇವನಿಗೆ ಈ ಸಣ್ಣ ವಯಸ್ಸಿನವರ ಮೇಲೇಕೆ ಕಣ್ಣು. ಅವರು ನೋಡಿ, ವಯಸ್ಸಾಗಿದೆ, ನರಳುತ್ತಾ ಇದ್ದಾರೆ. ಅವರನ್ನು ಕರೆದೊಯ್ಯುವ ಬದಲು ಈ ಜೀವಕ್ಕೆ ಹೊಂಚು ಹಾಕಿತಲ್ಲ, ಸಾವು!”

ಇನ್ನು ಹೊಸದಾಗಿ ಮಾಡುವೆಯಾಗಿದ್ದರೆ, ಸಣ್ಣ ಸಣ್ಣ ಮಕ್ಕಳಿದ್ದಾರೆ, ಮನಸ್ಸು ಬಲು ಭಾರ. ಕೆಲವು ವರುಷದ ಮುನ್ನ ವಿಧವೆಯನ್ನು ಕಾಣುವ ದೃಷ್ಟಿಯೇ ಬೇರೆ. “ಇಷ್ಟು ಚಿಕ್ಕ ವಯಸ್ಸಿನಲ್ಲಿ ಗಂಡ ಹೋಗಿಬಿಟ್ಟನಲ್ಲ. ಇನ್ನು ಇವಳ ಗತಿಯೇನು. ಮಕ್ಕಳನ್ನು ನೋಡಿಕೊಂಡು,ಅವಳಾಸೆಯನ್ನೆಲ್ಲಾ ಅದುಮಿ ಬಾಳಬೇಕು” ಎಂದಾದರೆ, ಮಕ್ಕಳಿಲ್ಲದವರಿಗೆ “ ಒಂದು ಮಗುವಾದರೂ ಇದ್ದಿದ್ರೆ ಚೆನ್ನಾಗಿತ್ತು. ಅದರ ಮುಖ ನೋಡಿ ಬದುಕು ಸಾಗಿಸುತ್ತಿದ್ದಳು” ಎಂಬ ಉದ್ಗಾರ. ಇನ್ನು ವಿಧುರನಾದರೆ, “ ಅಯ್ಯೋ, ಈ ಚಿಕ್ಕ ಮಕ್ಕಳನ್ನು ಹೇಗೆ ಸುಧಾರಿಸುತ್ತಾನೋ, ಆದಷ್ಟು ಬೇಗ ಈ ಮಕ್ಕಳಿಗೆ ಇನ್ನೊಂದು ತಾಯಿ ಬಂದರೆ ವಾಸಿ. ಆಫೀಸು, ಮನೆ, ಮಕ್ಕಳು ಎಲ್ಲ ಈ ಗಂಡಸಿನ ಕೈಲಿ ಸುಧಾರಿಸಕ್ಕೆಆಗೋಲ್ಲ. ಆದರೆ ಬರುವಾಕೆ ಒಳ್ಳೆಯವಳಿರಬೇಕು, ಅಷ್ಟೇ. ಮಲತಾಯಿಯ ತರಹ ವರ್ತಿಸದೆ, ಮಕ್ಕಳನ್ನು ಪ್ರೀತಿ, ವಿಶ್ವಾಸದಿಂದ ಗಮನಿಸುವವಳು ಬೇಕು” ಇನ್ನು ಮಕ್ಕಲಿಲ್ಲದಿದ್ದರೆ, “ಅಯ್ಯೋ, ಚಿಕ್ಕ ವಯಸ್ಸು. ಒಂದು ಮಗುವಾಗಿದ್ದಿದ್ದರೆ ಅವಳ ನೆನಪಾದರೂ ಉಳಿಯುತ್ತಿತ್ತು. ಹೋಗಲಿ, ಒಂದು ತರಹ ಒಳ್ಳೆಯದೇ ಆಯಿತು. ಬರುವವಳು ಹೇಗಿರುತ್ತಾಳೋ ಏನೋ!”

ಈಗಿನ ಕಾಲದಲ್ಕಿ, ಹೆಣ್ಣಿಗೂ, ಗಂಡಿಗೂ ಜಾಸ್ತಿ ವ್ಯತ್ಯಾಸವೆನಿಲ್ಲ. ಅದರಲ್ಲೂ ಪೇಟೆಗಳಲ್ಲಿ. ಓದಿ, ಬದುಕನ್ನು ಅರ್ಥ ಮಾಡಿಕೊಂಡಿರುವವರಲ್ಲಿ. ಮದುವೆಯಾದ ಹೆಣ್ಣು ಹೋದರೆ ಒಂದು ರೀತಿ ವಿಧಾನಗಳು, ಮದುವೆಗಾಗದಿದ್ದರೆ ಬೇರೇನೋ.

ಇನ್ನು ಸಾವಾಗಿದ್ದ ರೀತಿ ಕೂಡ ವಿವಿಧ ಮಾತುಗಳಿಗೆ ಅನುವು ಮಾಡಿಕೊಡುತ್ತದೆ. ಪದ್ದಮ್ಮನ ರೀತಿ ಹೋದವರದೊಂದು ಕತೆಯಾದರೆ, ದೀರ್ಘಕಾಲ ನರಳಿದವರದೊಂದು ಕತೆ.” ಅಯ್ಯೋ, ಎಷ್ಟು ನರಳುತ್ತಿದ್ದರು. ಅವರಿಗೂ ಕಷ್ಟ, ಮನೆಯವರಿಗೂ ಸಹ. ಮಾಡಿಸಿಕೊಳ್ಳುವವರಿಗೆ ಒಂದು ರೀತಿಯಾದರೆ, ಮಾಡುವರಿಗೆ ಇನ್ನೊಂದು ರೀತಿ. ಇಬ್ಬರಿಗೂ ಮುಕ್ತಿ ಸಿಕ್ಕಿತು, ಬಿಡಿ” ಕೇಳಿಸಿಕೊಳ್ಳಲು ಹಿಂಸೆಯಾದರೂ, ಮನದ ಮೂಲೆಯಲ್ಲಿ ಹೌದಲ್ವಾ ಅನಿಸುವುದು ಸುಳ್ಳಲ್ಲ. ಕಷ್ಟ ಪಡುತ್ತಿದ್ದವರಿಗೆ ಏನೂ ಮಾಡಲಾಗದಂತಹ ಅಸಹಾಯಕ ಪರಿಸ್ಥಿತಿ ಮನೆಯವರದ್ದು. ನಾವು ಮಾಡುತ್ತಿದ್ದು ಸಾಕೋ, ಇನ್ನಷ್ಟು ಮಾಡಬೇಕಿತ್ತೋ ಏನೋ ಎನ್ನುವ ನೋವು ಬಾಧಿಸುತ್ತಲೇ ಇರುತ್ತದೆ. ಈ ರೀತಿಯ ಮಾತುಗಳು ಸ್ವಲ್ಪ ನೋವು, ಸ್ವಲ್ಪ ಸಾಂತ್ವಾನ ಸಿಗುವುದು ಸುಳ್ಳಲ್ಲ.
ಇನ್ನು ಅಪಘಾತಕ್ಕೆ ಈಡಾಗಿ ಮರಣ ಹೊಂದಿದವರು ಕೆಲವೂಮ್ಮೆ ಪುಣ್ಯವಂತರು (“ಹೋಗಲಿ ಬಿಡಿ, ಇಷ್ಟೊಂದು ಗಾಯವಾಗಿ ಬದುಕುಳಿದಿದ್ದರೆ ಎಷ್ಟು ತ್ರಾಸವಾಗುತ್ತಿತ್ತು. ಆ ರೀತಿ ಬಾಳುವುದಕ್ಕಿಂತ ಹೋಗಿದ್ದೇ ಒಳ್ಳೆಯದಾಯಿತು) ಕೆಲವೊಮ್ಮೆ ನತದೃಷ್ಟರು ( ಪಾಪ, ಸಾಯುವಂತಹುದ್ದೇನೂ ಆಗಿರಲಿಲ್ಲ, ಬಿಡಿ. ಇನ್ನು ಗಾಯಗೊಂಡಿರುವರು ಬದುಕುಳಿಯಲಿಲ್ಲವೇ).

ಒಟ್ಟಿನಲ್ಲಿ ಯಾವ ರೀತಿಯ ಸಾವಾಗಲಿ, ಮಾತು ಒಂದೊಂದು ರೀತಿ. ಇನ್ನು ಸಾಂತ್ವಾನ ಹೇಳುವವರಿಗೂ ಬಲು ಕಷ್ಟ. ಯಾವ ರೀತಿಯ ಸಾವಿರಲಿ, ಸತ್ತವರ ವಯಸ್ಸು, ಸ್ಥಿತಿ ಎಂತಹುದ್ದೇ ಇರಲಿ, ಅದು ಸಂಬಂಧಪಟ್ಟವರಿಗೆ ತುಂಬಲಾಗದ ನಷ್ಟ. “ದೇವರಿಚ್ಛೆ”, “ಅವರ ಭೂಮಿಯ ಋಣ ಇದ್ದಿದ್ದೇ ಇಷ್ಟು”, “ ದೇವರ ಪಾದದಲ್ಲಿ ನೆಮ್ಮದಿಯಾಗಿದ್ದಾರೆ ಬಿಡಿ”, “ಸದ್ಗತಿ ಸಿಗಲಿ”, “ಮುಕ್ತಿ ದೊರಕಲಿ” ಇತ್ಯಾದಿ ಪದಗಳು ಕೇವಲ ಬಾಯಿ ಮಾತಲ್ಲ. ಆ ನಿಮಿಷದಲ್ಲಿ ಮನಸ್ಸಿಗೆ ತೋಚಿದ್ದು, ಕೇಳುಗರಿಗೆ ನೆಮ್ಮದಿ ಕೊಡುವಂತಹುದ್ದು ಎಂಬುದು ಸುಳ್ಳಲ್ಲ.

ಕೊನೆಗೆ ಉಳಿಯುವುದು ಒಂದು ಸತ್ಯ- ಕಾಲನ ಕರೆಯ ಮುಂದೆ ಯಾರೂ ಇಲ್ಲ. ಈ ಪ್ರಪಂಚದಲ್ಲಿ ಅದನ್ನು ಮೀರಿದವರು, ಶಾಶ್ವತವಾಗಿ ಉಳಿದವರು ಒಬ್ಬರು ಸಹ ಇಲ್ಲ. ಉಳಿಯುವುದು ನಾವು ಮಾಡಿದ ಕೆಲಸಗಳು, ಆಡಿದ ಒಳ್ಳೆಯ ಮಾತುಗಳು, ಹಿತ ತಂದ ನಮ್ಮ ವರ್ತನೆಗಳು ಮಾತ್ರ!

ಸಹನಾ ಪ್ರಸಾದ್


Read more

ನ್ಯಾನೋ ಕಥೆಗಳು: ವೆಂಕಟೇಶ್‌ ಚಾಗಿ

೧) ಹೊಸ ವರ್ಷಹೊಸ ವರ್ಷ ಬಂದಿತೆಂದು ಅವನಿಗೆ ತುಂಬ ಖುಷಿ. ಹೊಸ ವರ್ಷದ ಸಡಗರ ಭರ್ಜರಿಯಾಗಬೇಕೆಂಬುದು ಅವನ ಅಭಿಲಾಷೆ. ಅದರಂತೆ ತನ್ನ ಸ್ನೇಹಿತರೊಂದಿಗೆ ಸೇರಿ ದೊಡ್ಡ ಔತಣಕೂಟವನ್ನೆ ಏರ್ಪಡಿಸಿದ.ಮೋಜು ಮಸ್ತಿಯೊಂದಿಗೆ ಪಾರ್ಟಿ ಜೋರಾಗಿಯೇ ಆಯ್ತು. ಹೊಸ ವರ್ಷಕ್ಕೆ ಹೊಸ ಕ್ಯಾಲೆಂಡರ್ ಖರೀದಿಸಿದ. ಹೊಸ ಡೈರಿಯೊಂದನ್ನು ಖರೀದಿ ಮಾಡಿದ. ಡೈರಿಯ ಮೊದಲ ಪುಟದಲ್ಲಿ ತಾನು ಈ ವರ್ಷದಲ್ಲಿ ಕೈಗೊಳ್ಳ ಲೇಬೇಕಾದ ಕಾರ್ಯಗಳನ್ನು ಪಟ್ಟಿ ಮಾಡಿದ. ಸನ್ನಡತೆ , ನೈತಿಕತೆ ,ಉತ್ತಮ ಹವ್ಯಾಸ , ಉಳಿತಾಯ ಮುಂತಾದ ಗುಣಗಳನ್ನು ರೂಢಿಸಿಕೊಳ್ಳಲೇಬೇಕೆಂದು … Read more

ಬಯಲು ಕಮ್ಮಾರರ ಬಯಲ ಬದುಕು!: ಕೆ ಟಿ ಸೋಮಶೇಖರ ಹೊಳಲ್ಕೆರೆ.

 ಬಡವರು ಬಡತನದಿಂದ ದೂರವಾಗಿ ಒಳ್ಳೆಯ ಬದುಕು ರೂಪಿಸಿಕೊಳ್ಳಲು ಭಾರತ ಸರಕಾರ ಲೆಕ್ಕವಿಲ್ಲದಷ್ಟು ಕಾರ್ಯಕ್ರಮಗಳ ಅನಷ್ಠಾನಕ್ಕೆ ತಂದಿರುವುದು ಮೀಸಲಾತಿ ಘೋಷಿಸಿರುವುದು ಸತ್ಯಸ್ಯಸತ್ಯ! ಬಡವರ ಉದ್ದಾರಕ್ಕೆಂದೇ ಅವು ಮೈದಳೆದದ್ದು. ರಾಜ್ಯ ಸರಕಾರಗಳೂ ತಾವೇನು ಕಡಿಮೆಯಿಲ್ಲದಂತೆ ಅವರಿಗಾಗಿ ಕಾರ್ಯಕ್ರಮಗಳ ರೂಪಿಸಿರುವುದು ಸಹ ಸತ್ಯ! ಆದರೂ ಅವು ಕಾರಣಾಂತರದಿಂದ ಕೆಲವರಿಗೆ ತಲುಪದೆ ಅವರು ಬದುಕು ಸಾಗಿಸಲು ತುತ್ತಿನ ಚೀಲ ತುಂಬಿಸಿಕೊಳ್ಳಲು ಹರಸಾಹಸಪಡುತ್ತಿರುವುದು ಸಹ ಸತ್ಯಸ್ಯಸತ್ಯ! ಈ ಗುಂಪಿಗೆ ಸೇರಿದವರಲ್ಲಿ ಬಯಲು ಕಮ್ಮಾರರು ಒಬ್ಬರು! ಬಡವರಿಗೆ ಕೊಡುವ ಪಡಿತರ, ನರೇಗದಂತಹ ಉದ್ಯೋಗ ಖಾತ್ರಿ ಕಾರ್ಯಕ್ರಮದಿಂದಲೂ … Read more

ಪಂಜು ಕಾವ್ಯಧಾರೆ

ನಗ್ನ ರಾತ್ರಿಗಳು ನನ್ನ ಆಸೆಗಳು ಮತ್ತು ನಿನ್ನ ಯೌವ್ವನ ನಿನ್ನ ದೇಹ ನನ್ನ ಸ್ಪರ್ಷ ಎಷ್ಟು ಹೊತ್ತಿ೦ದ ಅನ್ನುವುದನ್ನು ಡಿಮ್ ಲೈಟಿನ ನಾಲ್ಕು ಗೋ‌ಡೆಯ ಮದ್ಯ ಮರೆತಿರುವುದು ಒ೦ದು ಹುಚ್ಚುತನ ಅ೦ತ ನನಗನಿಸಲಿಲ್ಲ, ನಿನಗೂ ಕೂಡ! ನಿನ್ನ ಕೈ ಬೆರಳಿನ ಉಗುರಿನ ಗಾಯ ನನ್ನ ಬೆತ್ತಲೆಯ ಬೆನ್ನಿನ ಮೇಲೆ ತೇವಗೊ೦ಡಿರುವುದು ನಿನ್ನ ಸ್ತನದ ತೊಟ್ಟು ನನ್ನ ತುಟಿಯ ಚು೦ಬನದಲಿ ನರಳುತ್ತಿರುವುದು ನೋವು ನಲಿವಿನ ಸ್ವರ್ಗಸುಖದಲಿ ಯಾವುದೂ ಅರಿವಿಲ್ಲದೆಯೆ ತಿರುಗುವ ಸೀಲಿ೦ಗ್ ಫ್ಯಾನಿನ ಕೆಳಗೆ ನಾವಿಬ್ಬರು ಹೀಗೆ ಎಷ್ಟು … Read more