ಲಾಟರಿ ಟಿಕೇಟು: ಜೆ.ವಿ.ಕಾರ್ಲೊ

ಲಾಟರಿ ಟಿಕೇಟು -ಆಂಟನ್ ಚೆಕೊವ್ ಅನುವಾದ: ಜೆ.ವಿ.ಕಾರ್ಲೊ ರಾತ್ರಿ ಊಟ ಮುಗಿಯುತ್ತಿದ್ದಂತೆಯೇ ಕೈಯಲ್ಲಿ ಪತ್ರಿಕೆಯನ್ನು ಹಿಡಿದು ಇವಾನ್ ಡಿಮಿಟ್ರಿಚ್ ಸೋಫಾದ ಮೇಲೆ ಮೈಚೆಲ್ಲಿದ. ವರ್ಷಕ್ಕೆ ಸಾವಿರದಿನ್ನೂರು ರೂಬಲುಗಳನ್ನು ದುಡಿಯುತ್ತಿದ್ದ ಅವನ ಸಂಸಾರ ನೌಕೆ ಯಾವುದೇ ವಿಘ್ನಗಳಿಲ್ಲದೆ ಸುಗಮವಾಗಿ ಸಾಗುತ್ತಿತ್ತು. “ನಾನಿವತ್ತು ಪತ್ರಿಕೆಯನ್ನು ನೋಡುವುದನ್ನೇ ಮರೆತು ಬಿಟ್ಟೆ..” ಊಟದ ಮೇಜನ್ನು ಸ್ವಚ್ಛಗೊಳಿಸಲು ಬಂದಿದ್ದ ಅವನ ಹೆಂಡತಿ ಹೇಳಿದಳು. “ಹಾಗೇ ಲಾಟರಿ ಫಲಿತಾಂಶ ಬಂದಿದೆಯಾ ನೋಡಿ.” ಎಂದಳು. ಡಿಮಿಟ್ರಿಚ್ ಪತ್ರಿಕೆಯ ಪುಟಗಳನ್ನು ತಿರುವುತ್ತಾ, “ಬಂದಿದೆ ಕಣೆ. ನೀನ್ಯಾವಾಗ ಲಾಟರಿ ಟಿಕೆಟ್ … Read more

ಬೆಂಗಳೂರಿನ ಬಸ್ಸಿನ ಸ್ವಗತಗಳು: ಶ್ರೀಕೊಯ

ಪ್ರಾರಂಭ. ನಾನು ಎಂದರೆ ? ಯಾರು ? ಇಗೋ ಈಗ ಹೇಳುತ್ತೇನೆ ಕೇಳಿ. ನಿಮ್ಮನ್ನು ಈ ಮಹಾ ನಗರಿಯಲ್ಲಿ ನಿಮಗೆ ಬೇಕಾದ ಸ್ಥಳಕ್ಕೆ ಹೊತ್ತೊಯ್ಯುವ ಬಸ್ಸು “ನಾನು” . ನನ್ನನ್ನು ನೀವು ’ ಬಸ್ಸಪ್ಪ’, ’ ಬಸ್ಸಣ್ಣ’ , ’ಬಂಧು’ ಎಂದೇ ಕರೆಯಬಹುದು. ನೀವು ಯಾವುದೇ ರೀತಿಯಲ್ಲಿ ಕರೆದರೊ ನನಗೆ ಬೇಸರವಿಲ್ಲ, ಏಕೆಂದರೆ ನೀವೆಲ್ಲರೊ ನನ್ನನ್ನು ದಿನವೂ ನಡೆಸಿಕೊಳ್ಳುವುದಕ್ಕಿಂತ ಅದೇ ವಾಸಿ ಎನಿಸುತ್ತದೆ. ನಾನು ಸಾಮಾನ್ಯನಲ್ಲ ಎಂಬುದು ನಿಮಗೆ ಈ ಬರಹದ ಕೊನೆಗೆ ತಿಳಿಯುತ್ತದೆ. ಬೆಂದಕಾಳೂರೆಂಬ ಒಂದು … Read more

ಸೋಲು: ಗಿರಿಜಾ ಜ್ಞಾನಸುಂದರ್

ಸಪ್ಪೆ ಮೊರೆ ಹಾಕಿಕೊಂಡು ಬರುತ್ತಿದ್ದ ಪ್ರೀತಿಯನ್ನು ಪಕ್ಕದ ಮನೆ ಆಂಟಿ “ಏನ್ ಪುಟ್ಟಿ! ರಿಸಲ್ಟ್ ಏನಾಯ್ತು? ಯಾವಾಗ್ಲೂ ಫಸ್ಟ್ ಬರ್ತಿದ್ದೆ ಅಲ್ವಾ. ಈಸಲ ಏನು? ಸ್ವೀಟು ಕೊಡ್ಲಿಲ್ಲ?” ಸುಮ್ಮನೆ ತಲೆ ತಗ್ಗಿಸಿ ಅಲ್ಲಿಂದ ಹೊರಟು ಬಂದಿದ್ದಳು. ಶಾಲೆಯಲ್ಲಿ ಎಲ್ಲದರಲ್ಲೂ ಮುಂದಿದ್ದ ಹುಡುಗಿ. ಇಡೀ ಶಾಲೆಗೆ ೧೦ನೇ ತರಗತಿಯಲ್ಲಿ ಎರಡನೇ ಸ್ಥಾನದಲ್ಲಿ ಪಾಸಾಗಿದ್ದವಳು. ಅವರಪ್ಪ ಅದಕ್ಕಾಗಿ ತಮ್ಮ ಸುತ್ತಮುತ್ತಲಿನ ಮನೆಗಳಿಗೆಲ್ಲ ಒಂದೊಂದು ಸ್ವೀಟ್ ಡಬ್ಬವನ್ನೇ ಹಂಚಿದ್ದರು. ತಮ್ಮ ಶಾಲೆಯಿಂದ ಬೇರೆ ಶಾಲಿಗಳಿಗೂ ಬಹಳಷ್ಟು ಸ್ಪರ್ಧೆಗಳಲ್ಲಿ ಭಾಗವಹಿಸಿ ಬಹುಮಾನ ತಂದುಕೊಟ್ಟವಳು. … Read more

ಬೇಸಿಗೆಯ ಸಂಡಿಗೆ ಹಪ್ಪಳವೆಂಬ ಮತ್ತೊಂದು ಸಂಭ್ರಮ..!!: ರಾಜೇಶ್ವರಿ ಲಕ್ಕಣ್ಣವರ

ಬೇಸಿಗೆಯ ಬಿಸಿಲು ನೆತ್ತಿಯನ್ನು ಕಾವಲಿಯಂತೆ ಕಾಯಿಸುತ್ತಿದೆ ನಿಜ. ಆದರೆ ಬೇಸಿಗೆಯ ಬಿಸಿಲು ಬಂದರೆ ಮಾತ್ರ ಅಜ್ಜಿಗೆ ಹಾಗೂ ಅಮ್ಮನಿಗೆ ಸಂಭ್ರಮ. ತರೇವಹಾರಿ ತಿಂಡಿಗಳನ್ನು ಬೇಸಿಗೆಯಲ್ಲಿ ತಯಾರಿಸಿ ವರ್ಷಪೂರ್ತಿ ಕಾಪಿಟ್ಟುಕೊಳ್ಳಬಹುದಲ್ಲ ಎಂಬ ಸಂತೋಷವೇ ಅವರ ಮೊಗದಲ್ಲಿ ಮನೆ ಮಾಡಿರುತ್ತದೆ. ಮಳೆಗಾಲದಲ್ಲಿ ಜೋರು ಮಳೆಗೆ, ಬೀಸುವ ಚಳಿಗೆ, ಹಬ್ಬದೂಟಗಳಿಗೆ ಹಪ್ಪಳ, ಸಂಡಿಗೆ, ಚಿಪ್ಸ್, ಮುಂತಾದವುಗಳು ಬೇಕೆ ಬೇಕೆಂಬುದು ಅವರಿಗಲ್ಲದೆ ಮತ್ಯಾರೂ ತಾನೇ ಅಷ್ಟೊಂದು ಚೆನ್ನಾಗಿ ಅರಿಯಲು ಸಾಧ್ಯ. ಇಂತಹ ತಿಂಡಿಗಳನ್ನು ತಯಾರಿಸಲು ಮಳೆಗಾಲ ಹಾಗೂ ಚಳಿಗಾಲ ಪ್ರಾಶಸ್ತ್ಯವಾದ ಸಮಯವಲ್ಲವೆಂದು ಗೊತ್ತಿರುವದರಿಂದ … Read more

ಬಂಧಗಳು, ಸಂಬಂಧಗಳು. ಸತ್ಯ… ಆದರೆ ಶಾಶ್ವತ ಅಲ್ಲ… : ಭಾರ್ಗವಿ ಜೋಶಿ

ಬದುಕಿನ ದೋಣಿಯ ಪಯಣದಲ್ಲಿ ಹಲವಾರು ರೀತಿಯ ಬಂಧಗಳು, ಸಂಬಂಧಗಳು ಬೆಸೆದಿರುತ್ತವೆ. ಕೆಲವು ಗಟ್ಟಿಯಾಗಿ ಬೇರೂರಿರುತ್ತವೆ ನಮ್ಮ ಮನಸಲ್ಲಿ ಮತ್ತು ಜೀವನದಲ್ಲಿ. ಕೆಲವು ಹೀಗೆ ಬಂದು ಹಾಗೆ ಹೋಗಿ ಬಿಡುತ್ತವೆ. ಹುಟ್ಟಿದಾಗ ಜೊತೆಯಲ್ಲಿ ಬಂದ ಸಂಬಂಧಗಳನ್ನು ರಕ್ತ ಸಂಬಂಧಗಳು ಎನ್ನುತ್ತೇವೆ. ಅವು ಎಂದಿಗೂ ಮಾಸದವು. ಬೇಕಾಗಲಿ, ಬೇಡವಾಗಲಿ ಮುಗಿಯದ ಅನುಬಂಧ ಅದು. ಯಾವುದೊ ಕೋಪ, ಬೇಜಾರು ಏನೇ ಬಂದ್ರು ಮತ್ತೆ ಸ್ವಲ್ಪ ಸಮಯಕ್ಕೆ ತಾನಾಗೇ ಎಲ್ಲ ಮರೆತು ಬೆಸೆವಂತೆ ಮಾಡುತ್ತದೆ. ಕೆಲವು ಸಂಬಂಧಗಳು ಎಂದೂ ಬೆಸೆಯದ ಹಾಗೆ ದ್ವೇಷ … Read more

ಕತ್ತಲು ಬೆಳಕಿನ ಹೊಯ್ದಾಟದಲ್ಲಿ ತೆರೆದ ಪತ್ರ ಪುಟಗಳು: ಪಿ.ಎಸ್. ಅಮರದೀಪ್.

ಮೂರು ದಿನದ ಹಿಂದೆ ಮನೆಯಲ್ಲಿ ಬೀಳುವ ಎಳೆ ಬಿಸಿಲಿಗೆ ಕುಳಿತ ಮಗನ ಮುಖದ ಮೇಲೆ ಕಿರಣಗಳು ಫಳಫಳಿಸುತ್ತಿದ್ದವು. ಅವನ ಮುಂದೆ ಫೈಬರ್ ಛೇರ್ ನೊಳಗೆ ಇಣುಕುವ ತುಂಡು ತುಂಡು ಚೌಕಾಕಾರದ ಕತ್ತಲು ಅವನ ಮುಖದ ಮೇಲಿತ್ತು. ತಕ್ಷಣವೇ ಕ್ಯಾಮೆರಾ ತೆಗೆದುಕೊಂಡು ಫೋಟೋ ಕ್ಲಿಕ್ಕಿಸಿದೆ. ಬ್ಯಾಕ್ ಟು ಬ್ಯಾಕ್ ನನಗೆ ಕತ್ತಲು ಬೆಳಕಿನ ಚಿತ್ರ ತೆಗೆವ ನನ್ನ ಕುತೂಹಲದ ಕಡೆ ಗಮನ ತೇಲಿತು. ಯಾಕೆ ನಾನು ಈ ಕತ್ತಲು ಬೆಳಕಿನ ಚಿತ್ರಗಳ ಸೆಳೆತಕ್ಕೆ ಬಿದ್ದೆ? ಯಾವಾಗಿನಿಂದ ಈ ಫೋಟೋ … Read more

ಕೈಯಲ್ಲಿ ಏಳು ಡಾಲರ್ ಹಿಡಿದು ಸ್ವಾಮೀಜಿ ಹೊರಟೇ ಬಿಟ್ಟರು : ಅಭಿಜಿತ್. ಎಮ್

ಇಸ್ಕಾನ್(ISKCON). ಈ ಸಂಸ್ಥೆಯ ಹೆಸರು ನೀವೆಲ್ಲರೂ ಕೇಳಿರಬಹುದು. ಇಂದು ಹೊರದೇಶಗಳಲ್ಲಿಯೂ ಹಿಂದೂ ಮಂದಿರಗಳಿವೆ ಎಂದರೆ, ಅದಕ್ಕೆ ಇಸ್ಕಾನ್ ಸಂಸ್ಥೆಯ ಕೊಡುಗೆ ಅಪಾರ. ಆದರೆ ಈ ಸಂಸ್ಥೆಯ ಸ್ಥಾಪಕರ ಬಗ್ಗೆ ಭಾರತದಲ್ಲಿಯೇ ತಿಳಿದಿರುವವರ ಸಂಖ್ಯೆ ಬಹಳ ಕಡಿಮೆ. ನೀವು ಯಾವುದಾದರೂ ದೇವಸ್ಥಾನಕ್ಕೆ ಹೋದಾಗಲೋ ಅಥವಾ ಜಾತ್ರೆಗಳಲ್ಲಿಯೋ ಅಥವಾ ಪುಸ್ತಕ ಮೇಳಗಳಲ್ಲಿಯೋ ಖಾದಿ ತೊಟ್ಟು, ತಲೆ ಹಿಂದೆ ಜುಟ್ಟು ಇರಿಸಿ, ಹಣೆ ಮೇಲೆ ಗಂಧದ ತಿಲಕವನ್ನು ಇಟ್ಟುಕೊಂಡು ಶ್ರೀಮದ್ ಭಗವದ್ಗೀತೆ ಗ್ರಂಥವನ್ನು ಮಾರಾಟ ಮಾಡುತ್ತಿರುವುದನ್ನು ನೀವು ಗಮನಿಸಿರಬಹುದು. ಇವರ ಎಲ್ಲಾ … Read more

ಉರಿಯುವ ಒಲೆಯೂ ಮತ್ತು ಹೊಳೆಯುವ ನಕ್ಷತ್ರವೂ ! : ಈರಮ್ಮ ಹಾವರಗಿ

ಈ ಬದುಕು ಕೇವಲ ಅನಿಶ್ಚಿತತೆಗಳ ನಡುವೆಯೇ ಕಳೆದು ಹೋಗಿ ಬಿಡುತ್ತದೆನೋ ಎಂಬ ಜಿಜ್ಞಾಸೆ ಮೂಡುತ್ತಿದೆ. ಏನನ್ನು ಸಾಧಿಸಲಾಗದೆ, ಅಂದುಕೊಂಡಂತೆ ಬದುಕಲಾಗದೆ ಜೀವನ ವ್ಯರ್ಥವಾದರೆ ಹೇಗೆ ? ಎಂಬ ನನ್ನ ಮನದ ದುಗುಡವನ್ನು ಹೇಳುವುದಕ್ಕೂ ಆಗದ ಪರಿಸ್ಥಿತಿ. ಹೆಣ್ಣಾಗಿ ಹುಟ್ಟಿದ್ದಕ್ಕೆ ಹೆಮ್ಮೆ ಪಡುತ್ತೇನೆ, ಜೊತೆಗೆ ಮದುವೆ,ಮಕ್ಕಳು, ಸಂಸಾರವೆಂಬ ಸಮಾಜದ ಕಟ್ಟು ಪಾಡುಗಳಿಗೆ ಹೆದರಿದ್ದೇನೆ. ಹಾಗಂತ ನಾನು ಅದನ್ನೆಲ್ಲ ವಿರೋಧಿಸುತ್ತಿಲ್ಲ. ನಮ್ಮ ಕನಸುಗಳಿಗೆ ಬೆಲೆ ಕೊಡದೆ ಹೆಣ್ಣನ್ನು ದ್ವಿತೀಯ ದರ್ಜೆಯ ಪ್ರಜೆಯನ್ನಾಗಿ ನೋಡಲಾಗುತ್ತಿದೆ, ಚಿಕ್ಕ ವಯಸ್ಸಿನಲ್ಲಿಯೆ ಮದುವೆ ಮಾಡಲಾಗುತ್ತಿದೆ. ನಮ್ಮ … Read more

ಸುಂದರ ಬದುಕಿನ ಸುಖಾಂತ ನಾಟಕ-As You Like It: ನಾಗರೇಖಾ ಗಾಂವಕರ

ಶೇಕ್ಸಪಿಯರ ರಿನೈಜಾನ್ಸ್ ಕಾಲದ ಶ್ರೇಷ್ಟ ನಾಟಕಕಾರ. ಇಂಗ್ಲೆಂಡಿನಲ್ಲಿ ಕ್ವೀನ ಎಲಿಜಬೆತ್ ಆಳ್ವಿಕೆಯ ಕಾಲ ಅದು. ಆತ ಬರೆದ As You Like It ರೋಮ್ಯಾಂಟಿಕ ಕಾಮೆಡಿ. ಗೊಲ್ಲ ಅಥವಾ ದನಗಾಯಿ ಸಂಪ್ರದಾಯದ ಕಾಲ್ಪನಿಕ ರಮಣೀಯ ಗ್ರಾಮೀಣ ಸೊಬಗನ್ನು ಕಟ್ಟಿಕೊಡುತ್ತ ಗೊಲ್ಲ ಜನಾಂಗದ ವೈಭವೀಕೃತ ಬದುಕನ್ನು ವಿಫುಲವಾಗಿ ತನ್ನ ಕಾವ್ಯದಲ್ಲಿ ವಿಜೃಂಬಿಸುತ್ತಾನೆ ಶೇಕ್ಸಪಿಯರ್. ರೋಮ್ಯಾಂಟಿಕ ಕಾಮೆಡಿಗಳಲ್ಲಿ ಪ್ರೇಮ ಪ್ರಮುಖವಾದ ಆಶಯ. ಇಟಲಿಯ ಡ್ಯೂಕ್ ಸಿನಿಯರ್ ತನ್ನ ಸ್ವಂತ ಸಹೋದರನ ಕರಾಮತ್ತಿಗೆ ಬಲಿಯಾಗಿ ರಾಜ್ಯಭ್ರಷ್ಟನಾಗಿ ಆರ್ಡನ್ ಕಾಡಿನಲ್ಲಿ ತನ್ನ ಸಂಗಡಿಗರೊಂದಿಗೆ … Read more

ನಾ..ನೀ.. ಕೇವಲ ಎರಡಕ್ಷರವಲ್ಲ: ಹೆಚ್. ಷೌಕತ್ ಆಲಿ, ಮದ್ದೂರು

ಯುವಕವಿ ಪ್ರಕಾಶ ಶಿವಲಿಂಗಪ್ಪ ಡೆಂಗಿಯವರು ವೃತ್ತಿಯಲ್ಲಿ ವೈದ್ಯರಾಗಿದ್ದು ಪ್ರವೃತ್ತಿಯಲ್ಲಿ ಒಬ್ಬ ಪ್ರಜ್ಞಾವಂತ ಕವಿಯಾಗಿ ತಮ್ಮಲ್ಲಿ ಅಡಗಿರುವ ಪ್ರತಿಭೆಯನ್ನು ಅನಾವರಣ ಮಾಡುತಲಿದ್ದಾರೆ. ಇವರ ಪ್ರತಿಭೆಗಳನ್ನು ಪೋಟೋಗ್ರಾಪಿಯಲ್ಲಿ, ಕಲಾಚಿತ್ರಗಳ ಸಂಗ್ರಹದಲ್ಲಿ, ನಿಸರ್ಗದ ಮಡಿಲಲ್ಲಿ ವಿಹರಿಸುವ ಪ್ರವಾಸಪ್ರಿಯರಾಗಿ, ಪುಸ್ತಕಗಳನ್ನು ಸಂಗ್ರಹಿಸುವುದರಲ್ಲಿ ಕಾವ್ಯವಾಚನ ಜತೆಯಲ್ಲಿ ಗಾಯನ ಪ್ರೀತಿಯಲ್ಲಿ ತಮ್ಮನ್ನೂ ತೊಡಗಿಸಿಕೊಂಡು ತಮ್ಮದೇ ಆದ ಲೋಕದಲ್ಲಿ ವಿಹರಿಸುವ ಮನೋವಿಕಾಸದ ಉತ್ತಮ ಸ್ನೇಹಿತ. ಪ್ರಸ್ತುತ ‘ನಾ..ನೀ’ ಕೇವಲ ಎರಡಕ್ಷರವಲ್ಲ ಕವಿತ ಸಂಕಲನ ಪ್ರಕಾರ ಡಂಗಿಯವರ ದ್ವೀತಿಯ ಕೃತಿಯಾಗಿದ್ದು ಅನುಭವಿಸಿದ ಅಥವಾ ಕಣ್ಣ ಮುಂದೆ ಹಾದು ಹೋಗುವ … Read more

ಕದಡುವ ನೆನಪುಗಳ ನಡುವೆಯೂ ಕಾಡುವ ಖಾಲಿತನ: ನಂದಾದೀಪ, ಮಂಡ್ಯ

ಕಿಟಕಯಿಂದಾಚೆ ಹೆಪ್ಪುಗಟ್ಟಿದ ಭಾನು, ಗೂಡು ಸೇರಿದ ಹಕ್ಕಿ, ಅಲ್ಲೊಂದು ಇಲ್ಲೊಂದು ಬೀಳುವ ಹನಿಗಳ ಕಂಡು ಖಾಲಿಯಾದ ಸಂತೆ, ನೀರವ ರಸ್ತೆ, ಇದೆಲ್ಲದರ ಜೊತೆಗೆ ಸಾವಿರ ನೆನಪುಗಳ ರಾಶಿ ಹಾಕಿಕೊಂಡು ಕೂತಿದ್ದರೂ ಮನದೊಳಗೆ ಆವರಿಸಿದ ಮೌನ, ಸಾವಿರ ಮಾತಿದ್ದರೂ ಮೌನದೊಂದಿಗೆ ಹೊಂದಿಕೊಂಡ ಖಾಲಿತನದ ಬದುಕು.. ಬದುಕು ಖಾಲಿತನ ಎನಿಸುವುದು ಒಂದು ಇಷ್ಟವಾದ ಬಾಂಧವ್ಯವೊಂದು ನಿರಾಶೆ ಮಾಡಿದಾಗ, ರಪರಪನೆ ಬಿದ್ದ ಮಳೆಗೆ ಎಲೆಗಳು ಉದುರಿದಂತೆ ಕನಸುಗಳು ಕಂಬನಿಯಲ್ಲಿ ಜಾರಿಹೋದಾಗ, ಆದರೆ ಹೇಳಿಕೊಳ್ಳಲು ಪದಗಳು ಇರುವುದಿಲ್ಲ.. ಅನುಭವಿಸಲು ಅಸಾಧ್ಯವೆನ್ನುವ ನೋವೊಂದು ಕಾಡುವಾಗ, … Read more

ನೈಸರ್ಗಿಕ ಸಂಪನ್ಮೂಲಗಳ ಬಳಕೆ: ಎಂ.ಎಚ್.ಮೊಕಾಶಿ

ಭೂಮಿಯು ಸೌರವ್ಯೂಹದ ನವಗ್ರಹಗಳಲ್ಲಿ ಒಂದು ವಿಶಿಷ್ಟ ಗ್ರಹವಾಗಿದೆ. ಇದರಲ್ಲಿ ಗಾಳಿ, ನೀರು, ಬೆಳಕು, ಮಣ್ಣು, ತೇವಾಂಶ ಮೊದಲಾದವುಗಳು ಜೀವಿಗಳು ವಾಸಿಸಲು ಅನುಕೂಲವಾದ ವಾತಾವರಣದ ಆವಾಸವನ್ನು ಸೃಷ್ಟಿಸಿವೆ. ಇದುವರೆಗಿನ ಸಂಶೋಧನೆಯಿಂದ ಸೌರವ್ಯೂಹದಲ್ಲಿ ಏಕಕೋಶ ಸೂಕ್ಷ್ಮ ಜೀವಿಯಾದ ಅಮೀಬಾದಿಂದ ಹಿಡಿದು ಜೀವವಿಕಾಸದ ಶೃಂಗದಲ್ಲಿರುವ ಮಾನವನವರೆಗಿನ ಜೀವಿಗಳಿರುವ ಏಕೈಕ ಗ್ರಹವೆಂದರೆ ಭೂಮಿಯೊಂದೇ ಆಗಿದೆ. ಭೂಮಿಯು ಅನೇಕ ನೈಸರ್ಗಿಕ ಸಂಪನ್ಮೂಲಗಳ ಆಗರ. ಸಾಮಾನ್ಯವಾಗಿ ಮಾನವನ ಅಭಿವೃದ್ಧಿಗಾಗಿ ಮಾನವರ ಉತ್ಪಾದನಾ ಕ್ರಿಯೆಗಳಲ್ಲಿ ಬಳಕೆಯಾಗುವ ನೈಸರ್ಗಿಕ ಪದಾರ್ಥಗಳನ್ನೆಲ್ಲಾ ನೈಸರ್ಗಿಕ ಸಂಪನ್ಮೂಲಗಳೆನ್ನುವರು. ಗಾಳಿ, ನೀರು, ಸೂರ್ಯನರಶ್ಮಿ, ಅರಣ್ಯ, … Read more

ಮುಗುಳ್ನಗೆಯ ಸರದಾರ: ಕೊಳ್ಳೇಗಾಲ ಶರ್ಮ

ಜಾಣಜಾಣೆಯರು ಮೋನಾಲಿಸಾ. ಈ ಹೆಸರು ಯಾರಿಗೆ ಗೊತ್ತಿಲ್ಲ? ಸೌಂದರ್ಯಕ್ಕೆ ಪ್ರತೀಕ ಎನ್ನುವ ಹೆಸರು ಇದು. ಸೌಂದರ್ಯಕ್ಕಿಂತಲೂ ಮುಗುಳ್ನಗೆಗೆ ಹೆಸರು. ಮೋನಾಲಿಸಾಳ ನಗು ಅತ್ಯಂತ ಸುಂದರವಾದದ್ದು ಎನ್ನುವ ಪ್ರತೀತಿ ಇದೆ. ಕವಿಗಳು ತಮ್ಮ ಮನದನ್ನೆಯರ ನಗುವನ್ನು ಈ ಇಟಲಿಯ ಹೆಣ್ಣಿನ ನಗುವಿಗೆ ಹೋಲಿಸುತ್ತಾರೆ. ಈಕೆ ಕ್ಲಿಯೋಪಾತ್ರಾಳಂತೆ ಯಾರೋ ರಾಣಿಯೂ ಅಲ್ಲ, ವೀನಸ್ಸಿನಂತೆ ಅಪ್ಸರೆಯೂ ಆಲ್ಲ. ವಾಸ್ತವವಾಗಿ ಮೊನಾಲೀಸಾ ಯಾರು ಎನ್ನುವುದೇ ಇನ್ನೂ ನಿಗೂಢ. ಆದರೆ ಅವಳ ಚಿತ್ರ ಮಾತ್ರ ಜಗತ್ಪ್ರಸಿದ್ಧ. ಹೀಗೆ ಸಾಮಾನ್ಯ ಹೆಣ್ಣೊಬ್ಬಳನ್ನು ಜಗತ್ಪ್ರಸಿದ್ದಳನ್ನಾಗಿ ಮಾಡಿ, ಮುಗುಳ್ನಗುವಿಗೆ … Read more

ಮೆಟ್ಟು ಹೇಳಿದ ಕಥಾ ಪ್ರಸಂಗ ಒಂದು ನೀಳ್ಗಾವ್ಯ (ಭಾಗ 17 & 18): ಎಂ. ಜವರಾಜ್

-೧೭- ಬಾಗಿಲು ಕಿರುಗುಟ್ಟಿತು ನನ್ನ ದಿಗಿಲು ಕಿರುಗುಟ್ಟಿದ‌ ಬಾಗಿಲ ಕಡೆಗೋಯ್ತು. ಅಯ್ನೋರು ಬಗ್ಗಿ ಹೊಸಿಲ ಮೇಲೆ ಕಾಲಿಟ್ಟು ಆಚೀಚೆ ನೋಡ್ತ ಬೀಡಿ ತಗ್ದು ತುಟಿಗಿಟ್ಟು ಕಡ್ಡಿ ಗೀರಿ ಬೀಡಿ ಮೊನೆಗೆ ಹಚ್ಚಿ ಅದೇ ಕಡ್ಡಿ ಬೆಳಕಲ್ಲಿ ನನ್ ಕಡೆ ತಿರುಗಿ ಆ ಬೆಳಕು ನನ್ ಮೇಲೂ ಬಿದ್ದು ಅಯ್ನೋರು ಹೊಸಿಲು ದಾಟಿ ನನ್ನ ಮೆಟ್ಟಿ ಬಲಗೈಲಿ ಸೂರು ಹಿಡಿದು ಎಡಗೈಲಿ ಬೀಡಿ ಹಿಡಿದು ಸೇದ್ತಾ ಹೊಗೆ ಬಿಡ್ತಾ ಇರೋವತ್ಲಿ ಒಳಗೆ ಸವ್ವಿ ಗುಕ್ಕಗುಕ್ಕನೆ ದುಮುಗುಡುತ ಅಳ್ತಾ ಇರೋದು … Read more

ಶೃತಿ ನೀ ಮಿಡಿದಾಗ (ಕೊನೆಯ ಭಾಗ): ವರದೇಂದ್ರ.ಕೆ ಮಸ್ಕಿ

ಇತ್ತ ಮನೆಯಲ್ಲಿ ಅಕ್ಕ ನಳಿನಿ ಕಡೆಯಿಂದ ಒಂದು ವಿಷಯ ಬಂತು. ಭಾವನ ತಮ್ಮ ನಿತಿನ್ ಅಮೇರಿಕಕ್ಕೆ ಹೋಗಿದ್ದ, ಇಂಜಿನಿಯರ್ ಕೆಲಸ, ಕೈತುಂಬಿ ಹಂಚಬಹುದಾದಷ್ಟು ಸಂಬಳ. ವಿದ್ಯಾವಂತ ಬುದ್ಧಿವಂತ. ನೋಡೋಕೆ ಸ್ಫುರದ್ರೂಪಿ, ಒಳ್ಳೆಯ ಮೈಕಟ್ಟು, ಸದಾ ಮುಗುಳ್ನಗೆಯ ಸರದಾರ, ನಿರಹಂಕಾರಿ, ಮಿತ ಮಾತುಗಾರ, ನಿಷ್ಕಲ್ಮಷ ಹೃದಯವಂತ, ಅಪ್ಪಟ ಬಂಗಾರದ ಗುಣವಂತ. ನಮ್ಮ ಶೃತಿಗೆ ತಕ್ಕುದಾದ ಜೋಡಿ; ಎಂದು ಅಕ್ಕ, ನಿತಿನ್ ಗೆ ಶೃತೀನ ತಂದುಕೊಳ್ಳೊ ವಿಚಾರ ಎತ್ತಿಬಿಟ್ಟಳು. ಇದ್ದಕ್ಕಿದ್ದ ಹಾಗೆ ಎರಗಿ ಬಂದ ವಿಷಯ ಶೃತಿ ಮನಸ್ಸಿಗೆ ತಳಮಳ … Read more

ಕರ್ನಾಟಕದ ಗಾಂಧಿ ಹರ್ಡೇಕರ್ ಮಂಜಪ್ಪ: ವೈ. ಬಿ. ಕಡಕೋಳ

ನಾವೆಲ್ಲ ಬಸವಜಯಂತಿ ಬಂದಾಗ ಬಸವಣ್ಣನವರ ಬದುಕಿನ ವ್ಯಕ್ತಿತ್ವ ಕುರಿತು ಮಾತನಾಡುತ್ತೇವೆ. ಹಾಗಾದರೆ ಈ ಬಸವ ಜಯಂತಿ ಆಚರಣೆ ಮೊದಲು ಮಾಡಿದವರ ನೆನಪನ್ನು ಈ ಸಂದರ್ಭದಲ್ಲಿ ನೆನೆಯುವುದು ಸೂಕ್ತವಲ್ಲವೇ. ? ಹರ್ಡೆಕರ ಮಂಜಪ್ಪನವರು ದಾವಣಗೇರೆಯಲ್ಲಿದ್ದಾಗ ಶ್ರೀಮನ್ ನಿರಂಜನ ಪ್ರಣವ ಸ್ವರೂಪಿ ಶ್ರೀ ಮೃತ್ಯುಂಜಯ ಮಹಾಸ್ವಾಮಿಗಳ ಒಡನಾಟ ಅಲ್ಲಿನ ಮಠದಲ್ಲಿ ಭಜನಾಸಂಘ ಮಾಡಿ ಪ್ರತಿ ಸೋಮವಾರ ಭಜನೆ ಮಾಡುವುದನ್ನು 26-6-1911 ರಲ್ಲಿ ಆರಂಭಿಸುತ್ತಾರೆ. ಹಾಗೆಯೇ ಶ್ರಾವಣ ಮಾಸೋಪನ್ಯಾಸಮಾಲಾ ಕಾರ್ಯಕ್ರಮ ಕೂಡ ಮಾಡುತ್ತಾರೆ. ನಂತರ 1913 ರಲ್ಲಿ ವೈಶಾಖ ಶುದ್ಧ ರೋಹಿಣಿ … Read more

ಮನೆಯೊಳಗೆ ಮನೆಯೊಡೆಯನಿದ್ದಾನೋ ಇಲ್ಲವೋ ..?: ಕೆ ಟಿ ಸೋಮಶೇಖರ್ ಹೊಳಲ್ಕೆರೆ.

ಭಕ್ತಿಯೇ ತುಂಬಿತುಳುಕಬೇಕಿರುವ ಭಗವಂತನ ಸನ್ನಿಧಿಯಲ್ಲಿ ಮಧ ಮತ್ಸರ ಲೋಬ ವಿಷಯಾದಿಗಳು ತುಂಬಿ ತುಳುಕುತ್ತಿರಬೇಕಾದರೆ ಅಲ್ಲಿ ಭಗವಂತ ನೆಲೆಸಲು ಹೇಗೆ ಸಾಧ್ಯ? ಸುಳ್ಳು ಕಪಟಗಳು ನನ್ನಲ್ಲಿ ನೆಲೆಸಲು ನಾನೇ ಆಶ್ರಯ ನೀಡಿ ಭಗವಂತ ನನ್ನಲ್ಲಿ ನೆಲೆಸಲು ಆಗದಂತೆ ನಾನೇ ಮಾಡಿದೆನಲ್ಲಾ ಎಂಬ ವಿಷಾದದ ದನಿಯೊಂದಿಗೆ ಕೆಳಗಿನ ಬಸವಣ್ಣನವರ ವಚನ ಕೊನೆಯಾಗುತ್ತದೆ. ಮನೆಯೊಳಗೆ ಮನೆಯೊಡೆಯನಿದ್ದಾನೋ ಇಲ್ಲವೋ ಹೊಸ್ತಿಲಲ್ಲಿ ಹುಲ್ಲು ಹುಟ್ಟಿ ಮನೆಯಲ್ಲಿ ರಜ ತುಂಬಿ ಮನೆಯೊಳಗೆ ಮನೆಯೊಡೆಯನಿದ್ದಾನೋ ಇಲ್ಲವೋ ತನುವಿನಲ್ಲಿ ಹುಸಿ ತುಂಬಿ, ಮನದೊಳಗೆ ವಿಷಯತುಂಬಿ ಮನೆಯೊಳಗೆ ಮನೆಯೊಡೆಯನಿಲ್ಲಾ ಕೂಡಲಸಂಗಮದೇವಾ … Read more

ಪಂಜು ಕಾವ್ಯಧಾರೆ

ಹೆದ್ದಾರಿ ಹೊದ್ದು ಮಲಗಿದವರು. ಬೆವತ ಚಂದಮಾಮನಂತ ಮೊಗದಿಂದ ಕಮಲೆಲೆಯಿಂದ ಜಾರುವ ಹನಿಯಂತೆ ಬೆವರಹನಿಗಳು ಸಾಲುಗಟ್ಟಿವೆ.! ಸಮನಾಂತರವಾಗಿ ಜೊಲ್ಲುರಸವೂ ತುಟಿಯಂಚಿಂದ ಜೋಗದಂತೆ ಸುರಿದು ತಲೆದಿಂಬಾಗಿ ಮಡಿಚಿಟ್ಟ ಮೆತ್ತನೆಯ ಅಮ್ಮನ ಸೀರೆ ಒದ್ದೆಯಾಗಿದೆ.!! ಗುಡಾರವು ನಾಲ್ದೆಸೆಯ ಗೂಟಗಳಿಗೆ ಬಿಗಿದಪ್ಪಿಕೊಂಡಿದೆ. ಬೀಸುವ ಗಾಳಿಯನ್ನು ನಿರ್ಭಂದಿಸಿ ಬೆರಗು ಮೂಡಿಸಿದೆ.! ಅಮ್ಮ ಕಣ್ಣುಬ್ಬುಗಳಿಗೆ ಕೈಯಡ್ಡಿ ಗುಡಾರದ ದ್ವಾರದಲ್ಲಿ ಸಿರಿವಂತರ ಸಿಂಗರಿಸಿ ಕಪಾಟಿನಲ್ಲಿಡುವ ಅಲಂಕಾರದ ವಸ್ತುಗಳ ಮಾರಾಟ ಮಾಡುತ್ತಿದ್ದಾಳೆ.!! ಅದು ರಾಜಪಥ ಇಬ್ಬದಿಯುದ್ದಕ್ಕೂ ಸುಂದರ ಮರಗಳ ಸಾಲು, ಪ್ರತಿ ಕ್ಷಣವೂ ರಾಜಾರಥಗಳ ಪಯಣ ನೋಡಲು ಇಕ್ಕಣ್ಣುಗಳು … Read more

ಕೆಂಪು ನೆರಳು!: ಎಸ್.ಜಿ.ಶಿವಶಂಕರ್

ವಾಸುದೇವರಿಗೆ ಗಾಢ ನಿದ್ರೆ. ಅಂತಾ ನಿದ್ರೆಯನ್ನು ಎಂದೂ ಮಾಡಿಲ್ಲ ಎನ್ನಿಸುವ ನಿದ್ರೆ. ಮೂರು ದಿನದಿಂದ ನಿದ್ರೆಯಿಲ್ಲದೆ ಹೈರಾಣಾಗಿದ್ದಕ್ಕೋ ಏನೋ..ಗಾಢ ನಿದ್ರೆ ಅವರಿಸಿತ್ತು! ಅಸ್ತಿತವನ್ನೇ ಮರೆಸಿದ ನಿದ್ರೆ! ದೇಹದ ಅರಿವಿಲ್ಲದ ನಿದ್ರೆ! ದೇಹದ ಭಾರವೇ ಇರಲಿಲ್ಲ! ತನಗೆ ಶರೀರವೇ ಇಲ್ಲ-ಎನ್ನುವಷ್ಟು ಹಗುರ, ನಿರಾಳ ಭಾವನೆ! ತಾನು ಬದುಕಿರುವೆನೋ? ಇಲ್ಲವೋ? ಜಾಗ, ಜಾವಗಳ ಅರಿವೇ ಇಲ್ಲದ ವಿಚಿತ್ರ ಹೊಚ್ಚ ಹೊಸ ಅನುಭವ! ಇಂತದು ಹಿಂದೆಂದೂ ಆಗಿರಲೇ ಇಲ್ಲ! ಎಲ್ಲಿರುವೆ? ಸಮಯ ಎಷ್ಟು? ಹಗಲೋ? ರಾತ್ರಿಯೋ? ಎಚ್ಚರವೇ ಇಲ್ಲ ಎಂದರೆ ಅದು … Read more

ಸಾಫಲ್ಯ: ಉಮೇಶ್‌ ದೇಸಾಯಿ

ಅದು ಅಖಿಲ ಭಾರತ ಮಟ್ಟದ ಸಂಗೀತದ ಅಂತಿಮ ಕಾರ್ಯಕ್ರಮ. ಕನ್ನಡದ ಆ ವಾಹಿನಿ ಅನೇಕ ವರ್ಷಗಳಿಂದ ಈ ಸ್ಫರ್ಧೆ ಏರ್ಪಡಿಸುತ್ತ ಬಂದಿದೆ. ಇಂದು ಅಂತಿಮ ಸುತ್ತು. ಎಲ್ಲ ಸ್ಫರ್ಧಿಗಳಲ್ಲೂ ವಿಚಿತ್ರ ತಳಮಳ ಈಗಾಗಲೇ ಈ ವಾಹಿನಿಯ ಈ ಅಂತಿಮಸ್ಫರ್ಧೆಯ ಕುರಿತಾಗಿ ಸಾಮಾಜಿಕ ಜಾಲತಾಣಗಳಲ್ಲಿ ಅಂತೆಯೇ ಇತರೇ ಸುದ್ದಿವಾಹಿನಿಗಳಲ್ಲಿ ಈ ಕುರಿತು ಅನೇಕ ಚರ್ಚೆಗಳಾಗಿವೆ…ಯಾರು ಗೆಲ್ಲಬಹುದು ಪ್ರಶಸ್ತಿಯನ್ನು ಈ ಕುರಿತಾಗಿ ಅಲ್ಲಲ್ಲಿ ಬೆಟಿಂಗ್ ಕೂಡ ನಡೆಯುತ್ತಿದೆ ಎಂಬ ಸುದ್ದಿಯೂ ಅನೇಕ ವಾಹಿನಿಗಳಲ್ಲಿ ಹರಿದಾಡುತ್ತಿತ್ತು. ಸ್ಫರ್ಧಿಗಳಲ್ಲಿ ತಳಮಳವಿತ್ತು ನಿಜ ಅಂತೆಯೇ … Read more

ತಲಾಖ್: ಸಿದ್ದರಾಮ ತಳವಾರ, ದಾಸ್ತಿಕೊಪ್ಪ.

ಊರಿನ ಮುಂಭಾಗದಲ್ಲೇ ಶತಮಾನಗಳಷ್ಟು ಹಳೆಯದಾದ ಹುಣಸೀಮರದ ಬುಡದಲ್ಲಿ ಪೇಚು ಮಾರಿ ಹಾಕಿಕೊಂಡು ತಲೆ ಮೇಲೆ ಕೈ ಹೊತ್ತು ಕೂತ ಕರವೀರನನ್ನು ಸಮಾಧಾನ ಮಾಡಲು ಯಾರೊಬ್ಬರೂ ಮುಂದೆ ಬರಲಿಲ್ಲ. ಅಷ್ಟಕ್ಕೂ ಅಲ್ಲೇನಾಗಿತ್ತು ಎಂದು ಅದಾರಿಗೂ ಸ್ಪಷ್ಟವಾಗಿ ಗೊತ್ತಾಗಿರಲಿಲ್ಲ. ಎಲ್ಲರ ಮುಖದಲ್ಲೂ ಭಯ, ಸಂಶಯ, ಆಶ್ಚರ್ಯ, ಸಂದೇಹವೇ ಮನೆ ಮಾಡಿದಂತಿತ್ತು. ಆಗಷ್ಟೇ ಕಚೇರಿಯಿಂದ ಬಂದ ಮಂಜನಿಗೆ ಇದಾವುದರ ಪರಿವೆಯೂ ಇರಲಿಲ್ಲವಾದರೂ ಅಲ್ಲಿ ಏನೋ ಒಂದು ದುರ್ಘಟನೆ ಜರುಗಿರಬಹುದೆಂಬ ಗುಮಾನಿಯಂತೂ ಮಂಜನ ತಲೆಯಲ್ಲಿ ಓಡುತ್ತಿತ್ತು. “ ಹಾಂ,, ನನ್ ಮಗಳು ಅಂಥಾದ್ದೇನು … Read more

ಭಾರತ ಭಾಗ್ಯವಿಧಾತನಿಗೊಂದು ಸಲಾಂ: ನಾಗರಾಜನಾಯಕ ಡಿ.ಡೊಳ್ಳಿನ

ಇತ್ತ ಧಾರವಾಡದ ಕೆ.ಸಿ.ಡಿ ಮೈದಾನದಲ್ಲಿ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಅವರ ಭಾರತ ಭಾಗ್ಯವಿಧಾತ ಕಾರ್ಯಕ್ರಮ ಧ್ವನಿ ಬೆಳಕು ಎಲ್ಲ ಕಲಾಪ್ರಕಾರಗಳನ್ನೊಳಗೊಂಡ ಕಾರ್ಯಕ್ರಮ ಉತ್ತಮವಾಗಿ ಮೂಡಿಬರುತ್ತಿತ್ತು. ಆ ಅದ್ಧೂರಿ ಸೆಟ್, ಝಗಮಗಿಸುವ ಬೆಳಕು, ಹಿನ್ನೆಲೆ ಧ್ವನಿ, ಗೊರವರ ಕುಣಿತ, ಪುರವಂತಿಕೆ, ಯಕ್ಷಗಾನ, ಗೀಗಿ ,ತಮಾಷಾ ,ಡೊಳ್ಳು ಇನ್ನಿತರ ಕಲಾಪ್ರಕಾರಗಳ ಕಾರ್ಯಕ್ರಮ ಅದ್ಭುತವಾಗಿದ್ದ ಈ ಕಾರ್ಯಕ್ರಮ ನೋಡುತ್ತಿದ್ದಂತೆಯೇ ನನ್ನ ಮನಸ್ಸು 2008 ರಲ್ಲಿ ಬುದ್ಧವಿಹಾರದಲ್ಲಿ ನಡೆದ ರಾಷ್ಟ್ರೀಯ ಸೇವಾ ಯೋಜನೆಯ ಅಂತರ ಮಹಾವಿದ್ಯಾಲಯದ ಶಿಬಿರದ ಘಟನೆಗಳತ್ತ ಮನಸ್ಸು … Read more

ಗೃಹ ಬಂಧನದ ಸದ್ಬಳಕೆ: ಸೂರಿ ಹಾರ್ದಳ್ಳಿ

ಕೊರೋನಾ ಮಾರಿಯಿಂದಾಗಿ ಭಾರತದಲ್ಲಿ ಲಾಕ್‍ಡೌನ್ ಅನುಭವಿಸಬೇಕಾಗಿ ಬಂದಿದೆ. ನಾಲ್ಕು ಗೋಡೆಗಳ ನಡುವೆ ಬಂಧಿಯಾಗಿರಬೇಕಾಧ ಇಂತಹ ಸಂದರ್ಭಗಳಲ್ಲಿಯೂ ನಮ್ಮ ಸಮಯವನ್ನು ಹೇಗೆ ಉಪಯೋಗಿಸಿಕೊಳ್ಳಬಹುದು ಎಂಬುದಕ್ಕೆ ಕೆಲ ಟಿಪ್ಸ್‍ಗಳು ಇಲ್ಲಿವೆ. ನಿಮ್ಮ ಸಂಬಂಧಿಕರ, ಗೆಳೆಯರ, ಶತ್ರುಗಳ ಹೆಸರಿನ ಪಟ್ಟಿ ಮಾಡಿ. ಅವರ ವಿಳಾಸಗಳು, ದೂರವಾಣಿ ಸಂಖ್ಯೆಗಳು, ಇ-ಮೈಲ್ ಐಡಿಗಳು, ಇವನ್ನೆಲ್ಲಾ ಸಂಗ್ರಹಿಸಿ ನಿಮ್ಮ ಕಂಪ್ಯೂಟರಿನಲ್ಲಿ ಅಥವಾ ಪುಸ್ತಕಗಳಲ್ಲಿ ಬರೆದಿಡಿ. ಅರೆರೆ, ಇವರ ಸಂಖ್ಯೆ ಇಷ್ಟೊಂದಿದೆಯೇ ಎಂಬ ಅಚ್ಚರಿ ನಿಮಗಾಗಿಯೇ ಆಗುತ್ತದೆ. ಈ ಪಟ್ಟಿಯಲ್ಲಿ ನಿಮ್ಮ ಅವಶ್ಯಕ ಕೆಲಸಗಳಿಗೆ ಬೇಕಾದವರ ಹೆಸರನ್ನು … Read more

ಇಳಾ ಕಾದಂಬರಿ: ಚಂದ್ರು ಪಿ ಹಾಸನ್

ಕರೋನಾದ ಹಿನ್ನೆಲೆಯಲ್ಲಿ ರಜೆಯೊಂದಿಗೆ ಮಜಾ ಮಾಡುತ್ತಿದ್ದ ಸಂದರ್ಭದಲ್ಲಿ , ದಿನದ ಕೆಲಕಾಲ ಸಾಹಿತ್ಯದಲ್ಲಿ ಒಲವು ಮೂಡುತ್ತಿತ್ತು. ಇಂದಿನ ಸಾಹಿತ್ಯಾಸಕ್ತಿಯ ಆ ಕಾಲದಲ್ಲಿ ನನ್ನ ಹಿತಚಿಂತಕರು, ಮಾರ್ಗದರ್ಶಕರು ಆದಂತಹ ಶ್ರೀಮತಿ ವಾಣಿ ಮಹೇಶ್ ರವರು ಒಮ್ಮೆ ಪರಿಚಯಿಸಿದ ಪುಸ್ತಕ ಶ್ರೀಮತಿ ಶೈಲಜಾ ಹಾಸನ ಇವರ ಇಳಾ ಕಾದಂಬರಿಯನ್ನು ಓದಿದೆ ಎಂದು ಹೇಳಲು ಹರ್ಷಿಸುತ್ತೇನೆ. ಸಕಲ ಸದ್ಗುಣಗಳನ್ನು ತನ್ನಲ್ಲಿ ತುಂಬಿಕೊಂಡಿರುವ ಭೂಮಿಯಂತೆ, ಒಂದು ಹೆಣ್ಣಿನ ಕಥೆ ಇಳಾ. ತನ್ನ ತಂದೆಯ ಸಾವಿನಿಂದ ಕೃಷಿ ಜಗತ್ತಿಗೆ ತಿಳಿಯಬೇಕಾದ ಇಳಾ ತಂದೆಯನ್ನು ದೂಷಿಸದೆ … Read more

ಮಲೆನಾಡಿನ ಸ್ಥಿತಿ-ಗತಿಯೂ ಕೊರೋನ-ಮಂಗನ ಖಾಯಿಲೆಯಂತಹ ಮಹಾಮಾರಿಯೂ. . . . : ವಿಜೇತ ಎಂ. ವಿ

ಮಲೆನಾಡು ಹಚ್ಚ ಹಸಿರು ಹೊದಿಕೆಯ ಮೇಲ್ಮೈ,ದಟ್ಟ ಕಾನನದ ನಡುವೆ ಅಲ್ಲಲ್ಲಿ ಒಂದೋ ಎರಡೋ ಮನೆಗಳು ಮತ್ತೆಲ್ಲೋ ಚಿಕ್ಕ ಹಳ್ಳಿ ಊರು ಕೇರಿ ಇತ್ಯಾದಿ. ಸ್ವರ್ಗಕ್ಕೆ ಮೂರೇ ಗೇಣು ಎಂಬಂತಿರುವ ಪ್ರಕೃತಿಯ ಮಡಿಲು . ಕೆರೆ ನದಿ ಹಳ್ಳ ಕೊಳ್ಳಗಳಿಂದ ಸಮೃದ್ಧ ಗಾಳಿ ಬೀಸುತ್ತಿದೆ. ಬೇಸಿಗೆಯಲ್ಲೂ ಮರದ ನೆರಳು ರಸ್ತೆಗಳನ್ನು ಮುಚ್ಚುವಷ್ಟು ತಂಪಾಗಿರುತ್ತದೆ. ಹಲವು ಹಣ್ಣು ಹೂಗಳು ಹಾಗೇ ಪ್ರಾಣಿ ಪಕ್ಷಿಗಳು ಹೀಗೆ ವೈವಿಧ್ಯಮಯವಾಗಿದೆ ಮಲೆನಾಡು. ಮಾನವರಿಗೆ ಮಾತ್ರವಲ್ಲ ಪ್ರಾಣಿ ಪಕ್ಷಿಗಳಿಗೂ ವಿವಿಧತೆಯ ತಾಣವಾಗಿದೆ. ಇಷ್ಟೆಲ್ಲಾ ಸಕಲ ಸಮೃದ್ಧ … Read more

ಒಡಲಾಳದ ಪದ್ಯಗಳು: ಎಚ್.‌ ಷೌಕತ್‌ ಅಲಿ, ಮದ್ದೂರು

ಕ್ರಿಯಾಶೀಲ ಬರಹಗಾರ ಕವಿ ವಿಮರ್ಶಕ ಕಥಾಸಂಕಲನಕಾರ ನಾಗೇಶ್ ನಾಯಕ್ ಬೆಳಗಾವಿ ಜಿಲ್ಲೆಯ ಸವದತ್ತಿ ಹುಟ್ಟೂರು. ಶಿಕ್ಷಕರಾಗಿ ಮಡಿಕೇರಿಯಲ್ಲಿ ಸೇವೆ. ಜೊತೆ ಜೊತೆಯಲ್ಲಿ ಕಥೆ-ಕವನಗಳನ್ನು ನಾಡಿನ ಪತ್ರಿಕೆಗಳಲ್ಲಿ ಪ್ರಕಟಿಸಿ ತೃಪ್ತಿಯಿಂದ ಸ್ಪೂರ್ತಿಗೊಂಡು ಹತ್ತು ಹಲವು ಪ್ರಕಾರಗಳಲ್ಲಿ ಕನ್ನಡ ಸಾಹಿತ್ಯ ಸೇವೆ ಮಾಡುತ್ತಿರುವ ಮತ್ತು ಪ್ರಮುಖ ಬರಹಗಾರರಲ್ಲಿ ಗುರುತಿಸಿಕೊಂಡ ಆತ್ಮೀಯ ಲೇಖಕ. ಅನೇಕ ಪ್ರಶಸ್ತಿಗಳನ್ನು ತಮ್ಮದಾಗಿಸಿಕೊಂಡು ಅನೇಕ ಸಮ್ಮೇಳನಗಳಲ್ಲಿ ಆಕಾಶವಾಣಿಯಲ್ಲಿ ಮತ್ತು ಚಂದನ ವಾಹಿನಿಯ ಸಂದರ್ಶನದ ಮೂಲಕ ಕನ್ನಡಿಗರಿಗೆ ಚಿರಪರಿಚಿತ ನಾಗೇಶ್ ನಾಯಕ್. ಪ್ರಸ್ತುತ ಇವರ ಕವನ ಸಂಕಲನ ‘ಒಡಲ … Read more

ವೈಷಮ್ಯ ಮತ್ತು ಒಪ್ಪಂದದ ಮೇಲಿನ ಕಥಾನಕ –The Merchant Of Venice : ನಾಗರೇಖ ಗಾಂವಕರ

ಆಂಟೋನಿಯೋ ಇಟಲಿಯ ವೆನಿಸ್‍ನ ನಿವಾಸಿ. ಪ್ರಸಿದ್ಧ ವ್ಯಾಪಾರಿ. ಆತ ವ್ಯಾಪಾರಿಯಾಗಿದ್ದರೂ ಸದಾಚಾರ ಸಂಪನ್ನ, ಸ್ನೇಹಜೀವಿ, ದಯಾಳುವಾದ ಆತನ ಸ್ನೇಹ ಬಳಗ ದೊಡ್ಡದಾಗಿತ್ತು. ಬಸ್ಸಾನಿಯೋ, ಗ್ರೇಸಿಯಾನೋ, ಲೊರೆಂಜೋ, ಸಲೆರಿಯೋ, ಸಲಾನಿಯೋ ಇವರೆಲ್ಲರ ಅಚ್ಚುಮೆಚ್ಚಿನ ಗೆಳೆಯನಾತ. ಅವರಿಗಾಗಿ ತನ್ನೆಲ್ಲ ಆಸ್ತಿ ಸಂಪತ್ತು, ಜೀವವನ್ನು ಕೊಡಲು ಸಿದ್ದನಿದ್ದ. ಆತನ ವ್ಯಕ್ತಿತ್ವ, ವೈಚಾರಿಕತೆ,ಕರುಣಾಪೂರಿತ ವ್ಯಕ್ತಿತ್ವ ಇತರರಿಗೆ ಮಾದರಿ. ಆತ ಮಮತೆ ಕರುಣೆಗಳ ಕ್ರೈಸ್ತ ತತ್ವಕ್ಕೆ ಮತ್ತೊಂದು ರೂಪಕವೆಂಬಂತೆ ಕಂಡುಬರುತ್ತಾನೆ. ಆದರೆ ಆತ ಅದೇನೋ ಉದ್ವಿಗ್ನತೆಯಲ್ಲಿ ಮಾನಸಿಕ ಕ್ಲೇಶದಿಂದ ನೋಯುತ್ತಿದ್ದಾನೆ. ಆಂಟೋನಿಯೋ ಅದಕ್ಕೆ ನಿರ್ದಿಷ್ಟ … Read more

ಶೃತಿ ನೀ ಮಿಡಿದಾಗ (ಭಾಗ ೨): ವರದೇಂದ್ರ.ಕೆ ಮಸ್ಕಿ

ಸುಶಾಂತನ ಪ್ರೇಮ ಪತ್ರ ಓದುತ್ತ ಓದುತ್ತ ಶೃತಿಯ ಅಂತರಂಗದಿ ಪ್ರೇಮದ ಬೀಜ ಮೊಳಕೆ ಒಡೆದು ಬಿಟ್ಪಿತು. ಇದು ಪ್ರೇಮವೋ, ಅಥವಾ ಪ್ರಥಮಬಾರಿಗೆ ಒಬ್ಬ ಹುಡುಗನ ಮನದ ಭಾವಕೆ ಸ್ಪಂದಿಸುವ ವಯೋಸಹಜ ಆಕಾಂಕ್ಷೆಯೋ ತಿಳಿಯದ ದ್ವಂದ್ವಕ್ಕೆ ಶೃತಿಯ ಮನಸು ಹೊಯ್ದಾಡಿ ವಯೋಸಹಜವಾಗಿ ಮೂಡುವ ಭಾವನೆಯೇ ಪ್ರೀತಿ ಅಲ್ಲವೆ? ಹೌದು ಎಂದುಕೊಂಡಳು. ಯವ್ವನ ದೇಹಕ್ಕೆ ಮಾತ್ರ ಆಗಿದ್ದ ಶೃತಿಯ ಮನಸಿಗೂ ಯವ್ವನ ಬಯಸುವ ಪ್ರೀತಿ, ಪ್ರೀತಿ ನೀಡುವ ಹೃದಯ ಒಂದಿದೆ ಎಂದು ತೋರಿಸಿದ ನಿಜ ಪ್ರೇಮಿ ಸುಶಾಂತ. ಅವನ ಪ್ರೇಮವನ್ನು … Read more

ಕನಸಿನ ಮಾಯಾಲೋಕಕ್ಕೆ ಡ್ರೀಮ್ ಕ್ಯಾಚರ್ ನ ಕೊಡುಗೆ..: ಚೈತ್ರಭೂಲಕ್ಷ್ಮಿ ಬೆಂಗಳೂರು

ಕೆಲವು ಸ್ಥಳೀಯ ಅಮೆರಿಕನ್ ಸಂಸ್ಕೃತಿಗಳಲ್ಲಿ, ಡ್ರೀಮ್‌ಕ್ಯಾಚರ್ ಗಳನ್ನು ಕೆಲವು ಗರಿಗಳು ಅಥವಾ ಮಣಿಗಳಂತಹ ಪವಿತ್ರ ವಸ್ತುಗಳನ್ನ ಬಳಸಿ ತಯಾರಿಸಲಾಗುತ್ತದೆ. ಸಾಂಪ್ರದಾಯಿಕವಾಗಿ ಅವುಗಳನ್ನು ಹೆಚ್ಚಾಗಿ ತೊಟ್ಟಿಲಿನ ಮೇಲೆ ರಕ್ಷಣೆಯಾಗಿ ನೇತುಹಾಕಲಾಗುತ್ತದೆ. ಇದು ಒಜಿಬ್ವೆ ಸಂಸ್ಕೃತಿಯಲ್ಲಿ ಬಹಳ ಶ್ರೇಷ್ಠವಾದ ತಾಯತರೂಪವಾಗಿದೆ. ಡ್ರೀಮ್ ಕ್ಯಾಚರ್ ರಾತ್ರಿಯ ದುಃಸ್ವಪ್ನಗಳನ್ನು ಗೊಂದಲಗೊಳಿಸುತ್ತದೆ ಮತ್ತು ಆಹ್ಲಾದಕರ ಕನಸುಗಳೊಂದಿಗೆ ಒಳ್ಳೆಯದನ್ನು ಆಕರ್ಷಿಸುತ್ತದೆ. ಒಂದು ಕಾಲದಲ್ಲಿ, ಕನಸಿನ ಕ್ಯಾಚರ್ ಅನ್ನು ಆಸಕ್ತಿ ಹೊಂದಿರುವ ಜನರ ಮನೆಗಳಲ್ಲಿ ಮಾತ್ರ ಕಾಣಬಹುದಾಗಿತ್ತು. ಇತ್ತೀಚಿನ ದಿನಗಳಲ್ಲಿ, ಸಂಪೂರ್ಣವಾಗಿ ವಿಭಿನ್ನ ಜನರು ಇದನ್ನು ಆಯ್ಕೆ … Read more

ಮೆಟ್ಟು ಹೇಳಿದ ಕಥಾ ಪ್ರಸಂಗ ಒಂದು ನೀಳ್ಗಾವ್ಯ (ಭಾಗ 15 & 16): ಎಂ. ಜವರಾಜ್

– ೧೫- ಇಲ್ಲಿ ಕತ್ಲು ಅಂದ್ರ ಕತ್ಲು ಅಲ್ಲಿ ಕಾಣ್ತ ಮಾರ್ದೂದಲ್ಲಿರ ಹೆಂಡದಂಗಡಿಲಿ ಲಾಟೀನ್ ಬೆಳಕು ಇಲ್ಲಿ, ಯಾರು ಹೋದ್ರು ಯಾರ್ ಬಂದ್ರು ಗೊತ್ತಾಗದ ಹೊತ್ತು ಈ ಅಯ್ನೋರು ಅತ್ತಿಂದಿತ್ತ ಇತ್ತಿಂದತ್ತ ತಿರುಗಾಡ್ತ ಬೀಡಿ ಸೇದ್ತ ಎಳೆಯೋ ದಮ್ಮು ದಮ್ಮಿಗೂ ಬೀಡಿ ಮೊನೆಲಿ ಬೆಂಕಿನುಂಡೆ ಕಾಣ್ತಿತ್ತು ಅರೆ ಹೆಂಡದಂಗಡಿಲಿ ಜಗಳ ಅಯ್ನೋರು ದಿಟ್ಟಿಸಿ ನೋಡ್ದಾಗಾಯ್ತು ನಂಗು ದಿಗಿಲು ಯಾರ ಈ ಜಗಳ ಮಾಡ್ತ ಇರದು? ಆ ದನಿಯ ಎಲ್ಲೊ ಕೇಳಿರ ನೆಪ್ಪು ಆ ದನಿ ಜೋರಾಯ್ತು ಅರೆ … Read more