ಮೂರು ಕವನಗಳು: ತಿರುಪತಿ ಭಂಗಿ, ಪ್ರಕಾಶ್ ಬಿ. ಜಾಲಹಳ್ಳಿ, ಸಂದೇಶ್ ಎನ್.

ಹೇಗೆ ಹೇಳಲಿ ಗೆಳತಿ  ನಾನೀರವುದೇ ಹೀಗೆ  ಕತ್ತಲಲ್ಲಿ ಮಿರಮಿರನೇ ಮಿನುಗುವ ಮಿಂಚುಳ್ಳಿ ಹಾಗೆ  ಬೆಳಕಿನಲ್ಲಿ ನನಗಿಲ್ಲ ಒಂದಿಷ್ಟು ಬೆಲೆ. ಹೇಗೆ ಹೇಳಲಿ ಗೆಳತಿ  ನಾನೀರವುದೇ ಹೀಗೆ  ಗಂಗೆಯಲಿ ತೇಲಾಡುವ ಮೀನಿನ ಹಾಗೆ  ಮೋಸದಿಂದ ಎಸೆದ ಗಾಳ  ನನಗೆ ಸಾವು ತಂದರೂ ನಾನಂತು  ಅವರಿಗೆ 'ಅನ್ನದೇವಿ' ಯಾಗುತ್ತೇನೆ. ಹೇಗೆ ಹೇಳಲಿ ಗೆಳತಿ  ನಾನೀರವುದೇ ಹೀಗೆ ಬಾನೆತ್ತರಕೆ ಬೆಳೆದು ನಿಂತ  ತೆಂಗಿನ ಮರದ ಹಾಗೆ  ನೂರೆಂಟು ರೋಗಿಗಳಿಗೆ ಎಳೆನೀರ ಔಷಧಿ ಕೊಟ್ಟರೂ ನನ್ನ ಬುಡಕ್ಕೆ ನೀರು ಬಿಡುವವರಿಲ್ಲ  ಗೊಬ್ಬರದ ವಾಸನೆ … Read more

ಕವಿಮನೆ: ಶಂಕರಾನಂದ ಹೆಚ್. ಕೆ., ಶೋಭಾ ಶಂಕರಾನಂದ

ಮರೆಯಲು ಸಾಧ್ಯವೇ? ಆ ಕ್ಷಣ…… .. ’ಓ ನನ್ನ ಚೇತನ ಆಗು ನೀ ಅನಿಕೇತನ’  ’ನೂರು ದೇವರನೆಲ್ಲ ನೂಕಾಚೆ ದೂರ ಭಾರತಾಂಬೆಯೆ ದೇವಿ ನಮಗಿಂದು ಪೂಜಿಸುವ ಬಾರ’  ’ಸತ್ತಂತೆ ಬದುಕುವುದಕ್ಕಿಂತ ಸತ್ತು ಬದುಕುವುದು ಲೇಸು’ ಹೀಗೆ ಹತ್ತು ಹಲವು ಸಾಲುಗಳಿಗೆ ಜೀವ ತುಂಬಿರುವ ಕಲ್ಲುಗಳು ಹಾಗೂ ಫಲಕಗಳನ್ನು ನೋಡುವ ಭಾಗ್ಯ ಒಂದು ದಿನ ನನ್ನದಾಗುವುದು ಎಂದು ನಾನು ಊಹಿಸಿರಲಿಲ್ಲ. ನಮ್ಮ ನಾಡಿನ ಮಹಾನ್ ಕವಿ ಡಾ!! ಕುವೆಂಪು ರವರ ಜನ್ಮ ಸ್ಥಳ, ಕುಪ್ಪಳ್ಳಿಗೆ ಹೋಗಬೆಕೆನ್ನುವ ತುಡಿತ ನನ್ನನ್ನು … Read more

ಝೆನ್ ಕತೆಗಳು: ಗೋವಿಂದ ರಾವ್ ವಿ. ಅಡಮನೆ

೧. ನಿಜವಾದ ಸುಧಾರಣೆ ರ್ಯೋಕಾನ್‌ ಝೆನ್‌ ಅಧ್ಯಯನಕ್ಕಾಗಿ ತನ್ನ ಜೀವನವನ್ನು ಮೀಸಲಾಗಿಟ್ಟಿದ್ದವನು. ಬಂಧುಗಳು ಎಷ್ಟೇ ಎಚ್ಚರಿಕೆ ನೀಡಿದರೂ ತನ್ನ ಸಹೋದರನ ಮಗ ತನ್ನ ಹಣವನ್ನು ವೇಶ್ಯೆಯೊಬ್ಬಳಿಗಾಗಿ ವ್ಯಯಿಸುತ್ತಿದ್ದಾನೆ ಎಂಬ ವಿಷಯ ಅವನಿಗೆ ತಿಳಿಯಿತು. ಕುಟುಂಬದ ಆಸ್ತಿಯನ್ನು ನಿರ್ವಹಿಸುವ ಜವಾಬ್ದಾರಿಯನ್ನು ರ್ಯೋಕಾನ್‌ನ ಅನುಪಸ್ಥಿತಿಯಲ್ಲಿ ಅವನು ಹೊತ್ತುಕೊಂಡಿದ್ದನಾದ್ದರಿಂದ ಸೊತ್ತು ಸಂಪೂರ್ಣವಾಗಿ ಕರಗುವ ಅಪಾಯ ಎದುರಾಗಿತ್ತು. ಈ ಕುರಿತು ಏನಾದರೂ ಮಾಡುವಂತೆ ರ್ಯೋಕಾನ್‌ಅನ್ನು ಬಂಧುಗಳು ಕೋರಿದರು. ಅನೇಕ ವರ್ಷಗಳಿಂದ ನೋಡದೇ ಇದ್ದ ಸಹೋದರನ ಮಗನನ್ನು ಭೇಟಿ ಮಾಡಲು ರ್ಯೋಕಾನ್‌ ಬಹು ದೂರ … Read more

ನ್ಯಾನೋ ಕತೆಗಳು: ನವೀನ್ ಮಧುಗಿರಿ

ಪ್ರೇಮಿಗಳು ಇಬ್ಬರೂ ಮೌನವಾಗಿ ಕುಳಿತಿದ್ದರು. ಮುಂದೇನು ಮಾಡುವುದೆಂದು ಇಬ್ಬರಿಗೂ ತೋಚುತ್ತಿಲ್ಲ. ಜಾತಿಯ ನೆಪವೊಡ್ಡಿ ಎರಡೂ ಮನೆಯವರು ಪ್ರೇಮಿಗಳನ್ನು ದೂರ ಮಾಡಲು ಯತ್ನಿಸುತ್ತಿದ್ದರು. "ಮುಂದೇನು ಮಾಡುವುದು?" ಹುಡುಗಿ ಪ್ರಶ್ನಿಸಿದಳು. "ಗೊತ್ತಿಲ್ಲ, ಏನೊಂದು ತೋಚುತ್ತಿಲ್ಲ" ಹುಡುಗ ಉತ್ತರಿಸಿದ. "ಎಲ್ಲಾದರೂ ದೂರ ಹೋಗಿ ಜೊತೆಯಾಗಿ ಬದುಕೋಣ" "ಬದುಕು ಎರಡೂವರೆ ಗಂಟೆಯ ಸಿನಿಮಾವಲ್ಲ" "ಹಾಗಾದರೆ ನಾವು ಪ್ರೀತಿಸಿದ್ದಾದರೂ ಯಾಕೆ?" ಹುಡುಗಿಯ ಕಣ್ಣಲ್ಲಿ ನೀರು ತುಂಬಿತ್ತು. ಅವಳ ಕಣ್ಣಲ್ಲಿನ ನೋವು ಗುರುತಿಸಿದ. ಎದೆಗೆ ಕೊಳ್ಳಿಯಿಂದ ತಿವಿದಂತಾಯ್ತು, ನೋವಿನಿಂದಲೇ ನುಡಿದ "ಜೊತೆಯಾಗಿ ಬದುಕೋಣವೆಂದು, ಆದರೆ.." "ಆದರೆ … Read more

ಸಲ್ಲದ ಪ್ರೇಮ ಪತ್ರ: ಅಜ್ಜೀಮನೆ ಗಣೇಶ್

ನೀನು ಆಗಾಗ ಹೇಳುತ್ತಿದ್ದೆ ಗೊತ್ತಾ…ಒಂದೂರಿನ ರಾಜನ ಕಥೆ, ಅದೇ ಕಣೆ, ತಾಜ್‍ಮಹಲ್ ಕಟ್ಟಿದವನು..ಒಲವಿಗೆ ಅವನೇ ರಾಯಭಾರಿಯಂತೆ. ಆತ ಕಟ್ಟಿದ ಪ್ರೀತಿ ಸಂಕೇತವೇ ಇವತ್ತಿಗೂ ಜಗತ್ತಿನ ಲವ್ ಸಿಂಬಲ್ ಅಂತೆ. ಏನೇ ಆಗಲಿ, ಆ ರಾಜನ ಪ್ರೇಮಕ್ಕಿಂತ ನಮ್ಮಿಬ್ಬರ ಪ್ರೀತಿ ಒಂದು ಮೆಟ್ಟಿಲಾದರೂ ಎತ್ತರದಲ್ಲಿರಬೇಕು ಅಂತಿದ್ದೆ ನೋಡು. ಅದಕ್ಕಾಗಿ ವಾರಕೊಮ್ಮೆ ಒಪ್ಪತ್ತು ಮಾಡಿ, ನನ್ನನ್ನೂ ಉಪವಾಸ ಕೆಡವುತ್ತಿದ್ದೆ ನೋಡು..ವಿಷಯ ಗೊತ್ತಾ..ನಿನ್ನ ಉಪವಾಸ ಫಲನೀಡಿದೆ. ನಾನೀಗ ನಿನ್ನ ಆಸೆ ಈಡೇರಿಸುತ್ತಿದ್ದೇನೆ. ನಾಚಿಕೆ ಮುಳ್ಳಿನಂತ ನಮ್ಮಿಬ್ಬರ ಪ್ರೇಮವೀಗ ಇತಿಹಾಸದ ಸಾಕ್ಷಿ ಹೇಳುವ … Read more

ಆ ಮೂರು ದಿನಗಳು: ಗುಂಡುರಾವ್ ದೇಸಾಯಿ ಮಸ್ಕಿ

ಯಾವು ಆ ಮೂರು ದಿನಗಳು!  ವೈಶಾಖದ ದಿನಗಳಾ, ಆಷಾಢದಿನಗಳಾ ಅಂತ ಭಾವಿಸಿದ್ರಾ! ಅಲ್ಲ ಅಲ್ಲ. ಇಕಿ ಒಮ್ಮಿಂದೊಮ್ಮೆಲೆ ದೂರ ನಿಂತು ನೀರು  ಕೋಡ್ರಿ, ಹಾಸಿಗಿ ಕೊಡ್ರಿ ಅಂತ ಸ್ಟಾರ್ಟ ಮಾಡಿದ್ರ  ’ಎದಿ ಝಲ್’ ಅಂತದ. ಏನ್ರೀ ಹೊರಗಿದ್ದ ಮೂರುದಿನದ ಬಗ್ಗೆ ಸಿರಿಯಸ್ಸ ತೋಳೊದಾ! ಅಂತ ಮೂಗು ನೀವು ಮುರಿಬಹುದು. ಅದಕ್ಕಲ್ಲ ಸಂಕಟ ಪಡೋದು ಕೆಲಸ ಮಾಡಕ. ಅಯ್ಯೋ! ಇವರು ಎಂಥವರ್ರೀ ತಿಂಗಳಾನಗಟ್ಟಲೇ ಮಾಡಿ ಹಾಕೋರಿಗೆ ಕೂಡ್ರಿಸಿ ಮೂರು ದಿನ ಹಾಕಕ ಏನು ಧಾಡಿ ಅಂತ ಅಂದಕೊಂಡಿರಲೂ ಬಹುದು … Read more

೨೦೧೫ ಡಿಸೆಂಬರ್ ಪ್ಯಾರೀಸ್ ಶೃಂಗಸಭೆಯ ಮುನ್ನ ಒಂದಿಷ್ಟು!!: ಅಖಿಲೇಶ್ ಚಿಪ್ಪಳಿ

ಈ ಬಾರಿ ಶಿವರಾತ್ರಿ ಕಳೆದ ಮೇಲೂ ಚಳಿ ಮುಂದುವರೆದಿತ್ತು. ಮದುವೆ-ಮುಂಜಿ ಕಾರ್ಯಕ್ರಮಗಳಿಗೆ ಅಕಾಲಿಕ ಮಳೆ ಅಡಚಣೆಯಾಗಿ ಕಾಡಿತು. ಬಿಲ್ಲನ್ನು ಎಳೆದು ಬಿಟ್ಟಾಗ ಬಾಣ ನುಗ್ಗುವ ರೀತಿಯಲ್ಲಿ ಬೇಸಿಗೆ ದಾಪುಗಾಲಿಕ್ಕಿ ಬರುತ್ತಿದೆ. ಉಳ್ಳವರು ಸೆಖೆಯಿಂದ ಬಚಾವಾಗಲು ಹವಾನಿಯಂತ್ರಕದ ಮೊರೆ ಹೋಗುತ್ತಾರೆ. ಎಂದಿನಂತೆ ತಂಪುಪಾನೀಯಗಳ ಜಾಹಿರಾತು ಟಿ.ವಿಯಲ್ಲಿ ಧಾಂಗುಡಿಯಿಡುತ್ತಿವೆ. ಅಂಟಾರ್ಟಿಕಾವನ್ನು ನಾಚಿಸುವಂತೆ ತಣ್ಣಗೆ ಮಾಡುವ ರೆಪ್ರಿಜಿರೇಟರ್ ಭರಾಟೆಯೂ ವ್ಯೋಮಕ್ಕೆ ಜಿಗಿದಿದೆ. ಅತ್ತ ಪ್ಯಾರೀಸ್ ನಗರ ಡಿಸೆಂಬರ್ ತಿಂಗಳಿಗಾಗಿ ಕಾಯುತ್ತಿದೆ. ಡಿಸೆಂಬರ್ ತಿಂಗಳಲ್ಲಿ ೧೯೬ ದೇಶಗಳ ಸಾವಿರಾರು ಧುರೀಣರು, ವಿಜ್ಞಾನಿಗಳು, ಭಾಗಿದಾರರು, … Read more

ಅನನ್ಯ ವ್ಯಕ್ತಿಚಿತ್ರಕ, ಸುಹೃದ ವಿಶಾರದ: ಎಸ್. ಜಿ. ಸೀತಾರಾಮ್, ಮೈಸೂರು.

[ಕನ್ನಡ ಸಾಹಿತ್ಯಾಕಾಶದ ಕೃಷಿಋಷಿಮಂಡಲದಲ್ಲಿ ತಮ್ಮ ವಿದ್ವಚ್ಛಕ್ತಿಪ್ರಭೆಯಿಂದ ವಿರಾಜಮಾನರಾಗಿರುವ, ಮತ್ತು ವಾತ್ಸಲ್ಯಾದಿ ಗುಣೋಜ್ವಲತೆಗಳಿಂದ ತಮ್ಮ ಅಭಿಮಾನಿಗಳ ಹೃದಯಾಕಾಶದಲ್ಲಿಯೂ ಅಂತೆಯೇ ಶೋಭಿಸುತ್ತಿರುವ,  ಮೈಸೂರಿನ ಪ್ರೊ. ಟಿ.ವಿ. ವೆಂಕಟಾಚಲ ಶಾಸ್ತ್ರಿಯವರು ಈಗ ಸಹಸ್ರ  ಪೂರ್ಣಚಂದ್ರ ದರ್ಶನ ಪ್ರತಿಫಲನದಿಂದ ಮತ್ತಷ್ಟು ಕಾಂತಿಯುತರಾಗಿದ್ದಾರೆ.  ಮಾರ್ಚ್-೨೦೧೫ರಲ್ಲಿ ಜರುಗಿದ ಅವರ ಸಹಸ್ರ ಚಂದ್ರ ದರ್ಶನೋತ್ಸವ ಸಂದರ್ಭದಲ್ಲಿ ಅವರಿಗಿಲ್ಲೊಂದು ಬರಹಮಣಿಹ.]         ಪ್ರೊ. ಟಿ.ವಿ. ವೆಂಕಟಾಚಲ ಶಾಸ್ತ್ರಿಯವರು ಸಾಹಿತ್ಯಶಾಸ್ತ್ರಗಳಲ್ಲಿ ವೆಂಕಟಾಚಲಸದೃಶರೇ ಸರಿ. ಆ ದೊಡ್ಡಬೆಟ್ಟದ ದಾರಿಯಲ್ಲಿ ಸುಳಿಯುವ ಸಂಭವವೂ ಇಲ್ಲದ ನನಗೂ-ಅವರಿಗೂ ನಡುವೆ ಇರುವ ಒಡನಾಟವು, … Read more

ಸಾಮಾನ್ಯ ಜ್ಞಾನ (ವಾರ 70): ಮಹಾಂತೇಶ್ ಯರಗಟ್ಟಿ

ಪ್ರಶ್ನೆಗಳು: ೧.    ಪಂಪ ಪ್ರಶಸ್ತಿ ಪಡೆದ ಮೊದಲ ಕೃತಿ ಯಾವುದು? ೨.    ನಾಸಾ (NASA) ದ ವಿಸ್ರೃತ ರೂಪವೇನು? ೩.    ಹ್ವಾಂಗ್ ಹೈಡ್ರೋಪವರ್ ಗೋಲ್ಡನ್ ಸೋಲಾರ ಪಾರ್ಕ್ ಯಾವ ದೇಶದಲ್ಲಿದೆ? ೪.    ಕೂಡಲಸಂಗಮದೇವ ಇದು ಯಾರ ಅಂಕಿತನಾಮವಾಗಿದೆ? ೫.    ರಾಜ್ಯದಲ್ಲಿ ಅತೀ ಹೆಚ್ಚು ಬಿತ್ತನೆ ಪ್ರದೇಶವನ್ನು ಹೊಂದಿರುವ  ಜಿಲ್ಲೆ ಯಾವುದು? ೬.    ಗಾಂಧಿಜಿಯ ಸಬರಮತಿ ಅಶ್ರಮ ಯಾವ ರಾಜ್ಯದಲ್ಲಿದೆ? ೭.    ಇತಿಹಾಸ ಪ್ರಸಿದ್ಧ ಕೆಳದಿ ಈಗಿನ ಯಾವ ಜಿಲ್ಲೆಯಲ್ಲಿದೆ? ೮.    ಸಿಖ್ಖರ ಐದನೇ ಗುರು ಯಾರು? ೯.   … Read more

ವೀಣಾ: ಶ್ರೀಮಂತ್ ಎಮ್. ಯನಗುಂಟಿ

’ಏ ಮಾಮು ಏಳೋ ಇನ್ನು ಎಷ್ಟೊತ್ತು ಮಲಗ್ತೀಯಾ’ ರಾತ್ರಿಯೆಲ್ಲಾ ಸೀಟು ಸಿಗದೆ ನಿಂತುಕೊಡಿದ್ದವನಿಗೆ ನಸುಕಿನ ಮೂರು ಗಂಟೆಯಲ್ಲೊಂದು ಸೀಟು ಸಿಕ್ಕಿತ್ತು. ನಿದ್ದೆಬರುವುದಿಲ್ಲ ಅಂತ ಗೊತ್ತಿತ್ತು. ಆದರೂ ಸುಮ್ಮನೆ ಬೋರಲಾಗಿ ಮಲಗಿದ್ದೆ. ಯಾರೋ ಚಪ್ಪಾಳೆ ಹಾಕುತ್ತಾ ಮೈದಡವಿದಂತಾಯ್ತು. ಎದ್ದು ಸಮಯ ನೋಡಿದೆ ಇನ್ನೂ ಗಂಟೆಯ ಮುಳ್ಳು ಐದನ್ನೆ ದಾಟಿರಲಿಲ್ಲ. ಸ್ವಲ್ಪ ಹಿಂತಿರುಗಿ ನೋಡಿದೆ. ಮಂಗಳಮುಖಿಯೊಬ್ಬಳು ಬಹಳ ಸಹಜವೆಂಬಂತೆ ಮಾಮೂಲಿ ಕೇಳಲು ಬಂದಿದ್ದಳು.  "ರೀ ನಿಮಗೆ ಹೊತ್ತು ಗೊತ್ತು ಏನೂ ಇಲ್ವಾ. ಇಗಲಾದ್ರೂ ಮಲಗಿದ್ದಿನಿ ನಿಮ್ಮದೊಳ್ಳೆ ಸಹವಾಸ" ಎಂದು ನಿದ್ದೆಯಲ್ಲಿ ಗೊಣಗುತ್ತಲೇ … Read more

ಬದುಕು ಬಣ್ಣದ ಸಂತೆ: ಹೃದಯಶಿವ

ಹೋಳಿ ಹಬ್ಬದ ಸಂಭ್ರಮ, ಖುಷಿಗಳನ್ನು ನೀವೂ ಅನುಭವಿಸಿರುತ್ತೀರಿ.  ಹೋಳಿಹಬ್ಬ ಕೂಡ ದೀಪಾವಳಿಯಂತೆಯೇ ಭಾರತೀಯರ ಮನಸ್ಸಿನಲ್ಲಿ ವರ್ಣಮಯವಾಗಿ, ಮನರಂಜನಾತ್ಮಕವಾಗಿ ಆವರಿಸಿರುತ್ತದೆ. ವರ್ಷವೆಲ್ಲಾ ಅಪ್ಪಟ ಗಂಭೀರ ವ್ಯಕ್ತಿಗಳಂತೆ ಟಿಪ್ ಟಾಪ್ ಡ್ರೆಸ್ ಮಾಡಿಕೊಂಡು ಆಫೀಸಿಗೆ ಹೋಗಿ ಬರುವ ಸೀರಿಯಸ್ ಮನುಷ್ಯರೂ ಹೋಳಿ ಹೋಳಿಹಬ್ಬದಂದು ಮಕ್ಕಳಾಗಿಬಿಡುತ್ತಾರೆ. ಬಣ್ಣ ಎಚ್ಹರಿ ಖುಷಿ ಪಡುತ್ತಾರೆ. ಮುಖದಲ್ಲಿ ಗಂಭೀರ ಗೆರೆಗಳು ಮಾಯವಾಗಿ ಉಲ್ಲಾಸ ಮಡುಗಟ್ಟುತ್ತದೆ.  ಹೋಳಿಯ ಸಂದರ್ಭದಲ್ಲಿ ನನ್ನ ಗಮನಕ್ಕೆ ಬಂದ ಒಂದೆರಡು ಅಂಶಗಳನ್ನು ಹೇಳುತ್ತೇನೆ… ಮನುಷ್ಯನ ಮನಸ್ಸು ರಂಗುಮಯವಾದದ್ದು. ಬಹುತೇಕ ಜನ ಪರಸ್ಪರ ಬಣ್ಣ … Read more

“ಕಾರ್ಮೋಡ” ಮಳೆಯಾಗಿ ಸುರಿದ ನಂತರ ತಡರಾತ್ರಿಗೆ ಮುಕ್ತಿ: ಅಮರ್ ದೀಪ್ ಪಿ.ಎಸ್.

ಅಂದು ಸಂಜೆ ಹೊಸಪೇಟೆಯಿಂದ ರೈಲು ಹತ್ತಿದಾಗ ಸಂಜೆ ಏಳು ಗಂಟೆ.  ನನ್ನ ಜನ್ಮ ಜಾತಕದಲ್ಲಿ ಅಮವಾಸ್ಯೆ ದಿನ ಪ್ರಯಾಣದಲ್ಲಿ ಅಪಘಾತದ ಸೂಚನೆ ನೀಡಿದ್ದ ಜ್ಯೋತಿಷಿಯ ನೆನಪಾಯಿತು.  ಪ್ರತಿ ದಿನವೂ ಕತ್ತಲಂತೇ ದೂಡುತ್ತಿದ್ದ ಬದುಕಿನಲ್ಲಿ ಒಂದು ದಿನದ ಅಮವಾಸ್ಯೆಯು ತನಗೇನೂ ಕೇಡು ಬಗೆಯುವುದಿಲ್ಲವೆಂಬದು ನನ್ನ ದಿಟ್ಟ ನಂಬಿಕೆ.  ರೈಲು ಭೋಗಿಯಲ್ಲಿ ಹೆಜ್ಜೆಯಿಡಲೂ ಜಾಗವಿರದಂಥ ಜನರಲ್ ಕಂಪಾರ್ಟ್ ಮೆಂಟ್. ಅದರಲ್ಲೂ ಹೆಂಗಸರು ಮಕ್ಕಳು ಜಾಗ ಅಲ್ಲಲ್ಲಿ ಹುಡುಕಿ ಕೂಡುತ್ತಿದ್ದರು. ಪಾಸ್ ಮಾಡಿಸಿಕೊಂಡು ದಿನವೂ ಓಡಾಡುವ ಸಂಭಾವಿತ ಗಂಡಸರು ವಯಸ್ಸಾದವರಿಗೆ ಜಾಗ … Read more

ಗಿಣಿಶಾಸ್ತ್ರದ ಸ೦ಚು: ಆದರ್ಶ ಸದಾನ೦ದ ಅರ್ಕಸಾಲಿ

ಮೂರು ತಿ೦ಗಳ ಹಿ೦ದೆ ಮಾರಿಯಮ್ಮನ ಜಾತ್ರೆಯಲ್ಲಿ, ನನಗೆ ಆಸಕ್ತಿ ಇಲ್ಲದಿದ್ದರೂ, ವಯಸ್ಸಾದ ಗಿಣಿಶಾಸ್ತ್ರ ಹೇಳುವ ಅಜ್ಜಿಯೊ೦ದು ನನ್ನ ಹತ್ತಿರ ಕರೆದು, ನನ್ನ ಕಿವಿಯಲ್ಲಿ ನನಗೊ೦ದು ಒಳ್ಳೆಯ ಸುದ್ಧಿಯೊ೦ದು ಕಾದಿದೆಯೆ೦ದು, ಅದರಿ೦ದ ನನ್ನ ಏಳ್ಗೆಯಾಗುವುದೆ೦ದು ಹಿತವಚನ ನುಡಿದಾಗ, ನನಗೆ ಕುತೂಹಲ ತಡೆಯಲಾಗಲಿಲ್ಲ. ಯಾವ ಜೋತಿಷಿಯೇ ಆಗಲಿ, ಭವಿಷ್ಯ ಹೇಳುವ ಮುನ್ನ ಅವರ ಫೀಸನ್ನು ಮು೦ದುಗಡೆ ಇರುವ ದೇವರ ಫೋಟೋದಡಿ ಇಡಲು ಹೇಳುತ್ತಾರೆ. ಭವಿಷ್ಯ ಕೇಳಿ ಜನ ದುಡ್ಡು ಕೊಡದೆ ಓಡಿ ಬಿಟ್ಟರೆ? ದೇವರ ಫೋಟೋದ ಮು೦ದೆ ದುಡ್ಡಿಡುವಾಗ ಒ೦ದು … Read more

ವಿದ್ಯುತ್ ಅಪವ್ಯಯ ಬಿಟ್ಟುಬಿಡಿ , ಎಲ್.ಇ.ಡಿ ಬಂತು ದಾರಿ ಬಿಡಿ: ರೋಹಿತ್ ವಿ. ಸಾಗರ್

ವಿದ್ಯುತ್ ಅಥವಾ ಕರೆಂಟ್ ನಮಗೆ ತುಂಬಾ ಪರಿಚಿತವಾಗಿರುವ, ಅದಿಲ್ಲದೆ ಜೀವನವನ್ನು ಊಹಿಸಿಕೊಳ್ಳಲೂ ಆಗದಿರುವಂತಹ ಒಂದು ಮೂಲಭೂತ ಅಗತ್ಯತೆಯಾಗಿಬಿಟ್ಟಿದೆ. ಅದು ಹೇಗೆ ಎಂಬುದನ್ನ ಇಪ್ಪತ್ತೊಂದನೇ ಶತಮಾನದವರಾದ ನಮಗೆ ಬಿಡಿಸಿ ಹೇಳುವ ಅಗತ್ಯವಿಲ್ಲ ಎನಿಸುತ್ತದೆ. ನಿತ್ಯ ಜೀವನದ ಹೆಚ್ಚು ಕಡಿಮೆ ಎಲ್ಲಾ ಕ್ರಿಯೆಗಳಿಗೂ ನಾವೀಗ ವಿದ್ಯುತ್ತನ್ನೇ ಅವಲಂಬಿಸಿದ್ದೇವೆ. ಯಾವುದೇ ಶೋಕಿಗಳಿಲ್ಲದಿದ್ದರೂ ಕನಿಷ್ಟ ಬೆಳಕಿಗಾಗಿಯಾದರೂ ನಮಗೆ ವಿದ್ಯುತ್ ಬೇಕೇ ಬೇಕು. ಸುತ್ತಲಿನ ಪರಿಸರದ ಅಂದ-ಚೆಂದಗಳನ್ನು, ಆಗು ಹೋಗುಗಳನ್ನು ಕಣ್ತುಂಬಿಕೊಳ್ಳಲು ಬೆಳಕು ಬೇಕು. ಹಗಲಿನಲ್ಲಿ ಸೂರ್ಯ ಪುಗಸಟ್ಟೆಯಾಗಿ, ಧಾರಾಕಾರವಾಗಿ ಬೆಳಕನ್ನು ನೀಡಿಬಿಡುತ್ತಾನೆ. ಆದರೆ … Read more

ಕೆಂಗುಲಾಬಿಯೂ, ಊರ ಗುಬ್ಬಿಯೂ: ಪ್ರಶಸ್ತಿ

ಒಂದೂರಲ್ಲೊಂದು ಗುಬ್ಬಿಯಿತ್ತಂತೆ. ಆ ಗುಬ್ಬಿಗೆ ಸಿಕ್ಕಾಪಟ್ಟೆ ಗೆಳೆಯರು. ಗುಬ್ಬಿ ಪ್ರತೀ ಸಾರಿ ಚೀಂವ್ಗುಟ್ಟಿದಾಗಲೂ ಆಹಾ ಎಂತಾ ಮಧುರ ಗಾನ. ನಿನ್ನ ಚೀಂಗುಟ್ಟುವಿಕೆಯ ಮುಂದೆ ಕೋಗಿಲೆಯ ಗಾಯನವನ್ನೂ ನಿವಾಳಿಸಿ ಎಸೆಯಬೇಕೇನೋ ಎಂದು ಹೊಗಳುತ್ತಿದ್ದರಂತೆ. ಮೊದಮೊದಲು ಸುಮ್ಮನೇ ಹೊಗಳುತ್ತಿದ್ದಾರೆಂದುಕೊಂಡಿದ್ದ ಗುಬ್ಬಿಗೆ ನಿಧಾನಕ್ಕೆ ಅವರು ಹೇಳಿದ ಮಾತುಗಳೇ ಸತ್ಯವೆನಿಸಲಾರಂಭಿಸಿತು. ಅಷ್ಟೆಲ್ಲಾ ಜನ ಸುಳ್ಳು ಹೇಳುತ್ತಾರಾ ಅಂತ. ನಾನೆಂದ್ರೇನು ? ನಾ ಚೀಂಗುಟ್ಟುವುದೆಂದ್ರೇನು.. ಆಹಾ ಯಾರಾದ್ರೂ ನನಗೆ ಸಾಟಿಯುಂಟೆ ಅನ್ನೋ ಭಾವ ಅದಕ್ಕೇ ಅರಿವಿಲ್ಲದಂತೆ ಅದರೊಳಗೆ ಬೆಳೆಯಲಾರಂಭಿಸಿತು. ಒಂದಿನ ಹಿಂಗೇ ಆಹಾರ ಹುಡುಕುತ್ತುಡುಕುತ್ತಾ … Read more

ಕಪ್ಪು ಮಣ್ಣಿನಲಿ ಹೂತಿಟ್ಟ ಕರುಣೆ: ಸಚೇತನ

ಬಂದೂಕಿನಿಂದ ಹೊರಟ ಕಾಡತೂಸು ಕೊಲ್ಲುವದು ಕೇವಲ ಗುರಿಯಾಗಿ ನಿಂತ ಮನುಷ್ಯನನ್ನು ಮಾತ್ರವಲ್ಲ, ಒಂದು ಜನಾಂಗದ ಬದುಕನ್ನು. ಸತ್ತವರು ಬೂದಿಯಾದರು ಬದುಕಿ ಉಳಿದವರು ಸತ್ತವರ ಪ್ರೇತಗಳಾಗುವರು. ಹಿಂಸೆ ಕೋಣೆಯೊಳಗೆ ಕಿಟಕಿಗಳಿಲ್ಲ, ಒಳ ಹೊಕ್ಕರೆ ಹೊರಬರಲು ಬಾಗಿಲುಗಳಿಲ್ಲ.  "ನಿನ್ನ ಬಂದೂಕುಗಳನ್ನು ಗೌರವಿಸು, ಇವತ್ತಿನಿಂದ ಅವು ನಿನ್ನ ತಂದೆ ತಾಯಿ. "  ಆಟದ ಬಂದೂಕಿನಲ್ಲಿ, ಆಟದ ವಯಸ್ಸಿನಲ್ಲಿನ ಮಕ್ಕಳನ್ನುದ್ದೇಶಿಸಿ ಹೇಳಲಾಗುತ್ತಿದೆ. ಆಫ್ರಿಕಾದ ಯಾವುದೋ ಮೂಲೆಯ ಹಳ್ಳಿಯೊಂದರ ಪುಟ್ಟ  ಜೀವಗಳು ಥರಗುಟ್ಟುತ್ತ ಈ ಮಾತನ್ನು ಕೇಳುತ್ತಿವೆ. ಎದುರಿಗೆ ನಿಂತ, ಬಂದೂಕು ಹಿಡಿದ  ವ್ಯಕ್ತಿಗಳ … Read more

ಪಂಜು ಕಾವ್ಯ

ನೀ ಬಂದು ನಿಂತಾಗ ಎಂದಾದರೊಮ್ಮೆ  ಬಳಿ ನೀನು ಬಂದರೆ  ಕೊಡಲೇನ ನಿನಗಾಗಿ ಹೇಳು ಚಂದದ ಚೆಲುವಿನ   ಮನದಾಗಿನ ಭಾವನೆಗಳ ಸಾರುವ ಅಂದದ ಕಾಣಿಕೆಯು  ನಿನಗಾಗಿ ಕಾದಿಹುದು ಕೇಳು ಪ್ರತಿದಿನವು ಮೂಡಿಹುದು  ಒಲವಿನ ರಂಗವಲ್ಲಿ ನಿನ್ನ ಆಗಮನಕ್ಕಾಗಿ ಕಾದು ಪ್ರತಿಸಾಲು ಸಾರಿಹುದು ಅಭಿಮಾನವ ರಂಗುಚೆಲ್ಲಿ ನನ್ನೆಲ್ಲಾ ಗಮನವ ನಿನ್ನೆಡೆಗೆ ಸೆಳೆದು ತಂಪಾದ ತಂಗಾಳಿ ಚಾಮರವ ಬೀಸಲು ಅಣಿಯಾಗಿದೆ ಬಳಿ ನೀನು ಬರಲು ದಣಿದು ಮುಗಿಲಿನ ಮೋಡವು ಪನ್ನೀರ  ಎರಚಲು ಸುತ್ತೆಲ್ಲಾ ಕವಿದಿದೆ ಖುಷಿಯಿಂದ ಕುಣಿದು ಮತ್ತಷ್ಟು ಉಡುಗೊರೆಗಳು … Read more

ಮನಸ್ವಿನಿ: ಅಭಿಲಾಷ್ ಟಿ ಬಿ

ಕುರಿಗಾಹಿಯೊಬ್ಬನು ತನ್ನ ಎಲ್ಲಾ ಕುರಿಗಳನ್ನು ಒ೦ದೇ ಕಡೆ ಮೇಯಿಸಲು ಹೊರಟನೆ೦ದರೆ ಅದು ಬಯಲುಸೀಮೆಯೇ ಆಗಿರುತ್ತದೆ. ಬರ, ಕ್ಷಾಮ, ಅನಾವೃಷ್ಠಿ, ಅಭಾವ, ಇವರಿಗೆ ಸಾಮಾನ್ಯವಾಗಿ ಹೋಗಿದೆ. ಈ ಕಾರಣಕ್ಕಾಗಿ ಬಯಲುಸೀಮೆಯ ಕೆರೆಗಳಿಗೆ  ಸರ್ಕಾರ ಅಣೆಕಟ್ಟುಗಳಿ೦ದ ನಾಲೆಗಳ ಮುಖಾ೦ತರ ಜೀವಜಲವನ್ನು ಒದಗಿಸುತ್ತಿದೆ. ಕಲ್ಲೂರು, ಗ೦ಗರ, ಚ೦ದ್ರಾಪುರ, ಬೆಣ್ಣೆನಹಳ್ಳಿ,..ಒ೦ದೇ ಎರಡೇ, ಇ೦ತಹ ನೂರಾರು ಹಳ್ಳಿಯ ಜನರು, ಜಾನುವಾರುಗಳು ರಾಮನಿಗಾಗಿ ಶಬರಿ ಕಾಯುವ ಹಾಗೆ ನೀರಿಗಾಗಿ ಕಾಯುತ್ತಿರುತ್ತಾರೆ. ಈ ನೀರಿಗಾಗಿ ಕಾಯುತ್ತಿರುವ ಜನರು, ಎಮ್ಮೆಗಳೂ, ಹೋತಗಳು, ಬಸವಿಗಳು, ಟಗರುಗಳು, ಹಸುಗಳ ಪೈಕಿ ಸತ್ಯವೇ … Read more

ಝೆನ್ ಕತೆಗಳು: ಗೋವಿಂದ ರಾವ್ ವಿ. ಅಡಮನೆ

೧. ನಿಜವಾದ ಮಾರ್ಗ ನಿನಕಾವಾ ಸಾಯುವುದಕ್ಕೆ ತುಸು ಮುನ್ನ ಝೆನ್‌ ಗುರು ಇಕ್ಕ್ಯು ಅವನನ್ನು ಭೇಟಿ ಮಾಡಿದ. “ನಾನು ನಿನಗೆ ದಾರಿ ತೋರಿಸಲೇನು?” ಕೇಳಿದ ಇಕ್ಕ್ಯು. ನಿನಕಾವಾ ಉತ್ತರಿಸಿದ: “ನಾನು ಇಲ್ಲಿಗೆ ಒಬ್ಬನೇ ಬಂದೆ ಮತ್ತು ಒಬ್ಬನೇ ಹೋಗುತ್ತೇನೆ. ನೀನು ನನಗೆ ಏನು ಸಹಾಯ ಮಾಡಬಲ್ಲೆ?” ಇಕ್ಕ್ಯು ಉತ್ತರಿಸಿದ: “ ನಿಜವಾಗಿಯೂ ನೀನು ಬಂದಿದ್ದೇನೆ ಮತ್ತು ಹೋಗುತ್ತೇನೆ ಎಂಬುದಾಗಿ ಆಲೋಚಿಸುತ್ತಿರುವೆಯಾದರೆ ಅದು ನಿನ್ನ ಭ್ರಮೆ. ಬರುವಿಕೆ ಮತ್ತು ಹೋಗುವಿಕೆ ಇಲ್ಲದೇ ಇರುವ ದಾರಿಯನ್ನು ತೋರಿಸಲು ನನಗೆ ಅವಕಾಶ … Read more