ಅಚ್ಯುತನ ಅರಸುತ್ತಾ: ಪ್ರಶಸ್ತಿ

ಅಚ್ಯುತರಾಯ ದೇವಾಲಯ, ವಿಠಲ ದೇವಾಲಯ, ಮಾತಂಗಪರ್ವತಕ್ಕೆ ದಾರಿ ತೋರೋ ಮಾರ್ಗದರ್ಶಿ ಫಲಕ ಏಕಶಿಲಾ ನಂದಿಯ ಬುಡದಲ್ಲಿ ಕಾಣುತ್ತಿತ್ತು. ರಾಮಾಯಣದಲ್ಲಿ ಬರೋ ಮಾತಂಗಪರ್ವತ(ಹಂಪಿ ಕಥಾನಕದ ಮೊದಲಭಾಗದಲ್ಲಿ ಹೇಳಿದಂತೆ)ಇದೇ ಎಂದು ಓದಿದ್ದ ನಾವು ಅದಕ್ಕೆ ಭೇಟಿ ನೀಡಬೇಕೆಂಬ ಆಸೆಯಿಂದ ಅತ್ತ ಹೆಜ್ಜೆ ಹಾಕಿದೆವು.ಮೂರು ದಿನವಾದ್ರೂ ಇಲ್ಲಿರೋ ಜಾಗಗಳನ್ನೆಲ್ಲಾ ಸುತ್ತೇ ಹೋಗಬೇಕೆಂದು ಬಂದಿದ್ದ ನಮಗೆದುರಾಗಿದ್ದೊಂದು ಪ್ರವೇಶದ್ವಾರ.ಕ್ರೇನುಗಳಿಲ್ಲದ ಕಾಲದಲ್ಲಿ ಆ ಪಾಟಿ ಭಾರದ ಕಲ್ಲುಗಳನ್ನು ಅಷ್ಟು ಮೇಲಕ್ಕೆ ಸಾಗಿಸಿ ಎರಡಂಸ್ತಿನ ಪ್ರವೇಶದ್ವಾರಗಳನ್ನು, ಹಜಾರಗಳನ್ನು ಕರಾರುವಕ್ಕಾಗಿ ಕಟ್ಟಿದ್ದಾದರೂ ಹೇಗೆಂದು ಕುತೂಹಲ ಮೂಡಿಸೋ ಇಂಥಾ ದ್ವಾರಗಳು, … Read more

ಕಾವ್ಯಧಾರೆ: ಸಿಪಿಲೆನಂದಿನಿ, ಎಸ್ ಕಲಾಲ್, ಕು.ಸ.ಮಧುಸೂದನ್ ರಂಗೇನಹಳ್ಳಿ

ಅವನು ಕಾಡುಗಳ್ಳರಲ್ಲಿ ಬಬ್ಬನು  ಮಳೆತಂಪಿಗೆ ನಳ-ನಳಸುತ್ತ ಚಿಗುರೊಡೆಯುತ್ತಿದೆ ವನರಾಶಿ ತುಂಬಿದೆ ಶಿಖೆಯಾದ್ರಿಗಳು ಅವನ ಮೈತುಂಬಿದ  ಹಸಿರು ಎಲೆಗಳ ಉಡುಪುಲಿ  ಎಂತಹ ಸುವಾಸನೆ  ಮಣ್ಣಿನ ಬೇರಿನೊಳಗೂ  ಸೂಸುವ ತಾಜಾತನ ಅವನ ಎದೆಯೊಳಗೆ ಜೀವನಿರೋದಕ  ಮೌನಕವಿದ ರುದ್ರ ತೊರೆಯಂತಹ ಮುಖ ಸಿಡಿಲಿನಂತಹ ಬಾಹುಗಳಲ್ಲಿ ಬಂದಿಯಾಗುವ ಸಾರಂಗ, ಚಿತ್ತಾಕರ್ಷಕ ಗುಂಡಿಗೆ  ದಮನಿಯ ಮೇಲೆ ಚಿನ್ನದಕಾಂತಿ ಹುಲಿಪಟ್ಟೆ  ನಡುವಲ್ಲಿ ನೀಲಿ ವರ್ಣದ ಗುಂಡುಗಳ ಬತ್ತಳಿಕೆ ಕಂಗಳ ಹಂಚಿನಲಿ  ಬೆಳ್ಳಿಮುಗಿಲ ಹೊಳಯುವ ಚಿತ್ತಾರ ಹಾಲ್ದಿಂಗಳ ಬೆಳಕ ನೆರಳಿನಲಿ ನೆಡೆವಾಗ  ಕಣಿವೆಗಳಲಿ ಕಂಪನ  ಕಾನನದೆದೆಯ ಆಳದೊಳಗೆ … Read more

ನಾವು- ನಮ್ಮ ಕನ್ನಡ: ನಾಗೇಶ್ ಟಿ. ಕೆ.

ನನ್ನ ಹೆಸರು ನಾಗೇಶ್ ಟಿ ಕೆ. ಮೂಲತಃ ಹಾಸನ ಜಿಲ್ಲೆಯವ, ಪ್ರಸ್ತುತ ಗೌರಿಬಿದನೂರು ತಾಲ್ಲೋಕಿನಲ್ಲಿ ವಾಸ. ನಾನೊಬ್ಬ ಕನ್ನಡ ಪ್ರೇಮಿ, ಹುಚ್ಚು ಅಭಿಮಾನಿಯಲ್ಲ ಕೇವಲ ಭಾಷಾಭಿಮಾನಿಯಷ್ಟೆ.     1956ರಲ್ಲಿ ಅಸ್ಥಿತ್ವಕ್ಕೆ ಬಂದ ‘ಮೈಸೂರು ರಾಜ್ಯ’ ಇಂದು ಶ್ರೀಗಂಧದ ಬೀಡು, ಶಿಲ್ಪಕಲೆಗಳ ತವರೂರು ಎಂದು ಕರೆಯಲ್ಪಡುವ ‘ಕರ್ನಾಟಕ’ 60ನೇ ಕನ್ನಡ ರಾಜ್ಯೋತ್ಸವ ಆಚರಿಸಿಕೊಳ್ಳುತ್ತಿರುವ ಸಂದರ್ಭದಲ್ಲಿ ಕನ್ನಡ ನಾಡು, ಕನ್ನಡ ರಾಜ್ಯೋತ್ಸವದ ವಿಶೇಷತೆ, ಕನ್ನಡಿಗರ ಭಾಷಾಭಿಮಾನದ ಬಗ್ಗೆ ಬರೆಯಲು ಇಚ್ಛಿಸುತ್ತೇನೆ.    ಕನ್ನಡ ನಾಡಿನ ಇತಿಹಾಸ ಎರಡು ಸಾವಿರ ವರ್ಷಕ್ಕು … Read more

ಸೂಫಿ ಕತೆಗಳು: ಗೋವಿಂದ ರಾವ್ ವಿ. ಅಡಮನೆ

೧. ಭರವಸೆ, ಭಯ, ಜ್ಞಾನ ಸೂಫಿ ಮುಮುಕ್ಷು ಹಸನ್‌ ಮರಣಶಯ್ಯೆಯಲ್ಲಿದ್ದಾಗ ಯಾರೋ ಒಬ್ಬ ಕೇಳಿದ, “ಹಸನ್‌ ನಿನ್ನ ಗುರು ಯಾರು?” “ನೀನು ತುಂಬ ತಡಮಾಡಿ ಈ ಪ್ರಶ್ನೆ ಕೇಳಿರುವೆ. ಈಗ ಸಮಯವಿಲ್ಲ, ನಾನು ಸಾಯುತ್ತಿದ್ದೇನೆ.” “ನೀನೊಂದು ಹೆಸರು ಮಾತ್ರ ಹೇಳಬೇಕಷ್ಟೆ. ನೀನಿನ್ನೂ ಬದುಕಿರುವೆ, ನೀನಿನ್ನೂ ಉಸಿರಾಡುತ್ತಿರುವೆ, ಆದ್ದರಿಂದ ಸುಲಭವಾಗಿ ನನಗೆ ನಿನ್ನ ಗುರುವಿನ ಹೆಸರು ಹೇಳಬಹುದು.” “ಅದು ಅಷ್ಟು ಸುಲಭವಲ್ಲ. ಏಕೆಂದರೆ ನನಗೆ ಸಹಸ್ರಾರು ಗುರುಗಳಿದ್ದರು. ಅವರ ಹೆಸರುಗಳನ್ನು ಹೇಳಲು ನನಗೆ ಅನೇಕ ತಿಂಗಳುಗಳು, ಅಲ್ಲ, ವರ್ಷಗಳು … Read more

ಸಾಮಾನ್ಯ ಜ್ಞಾನ (ವಾರ 79): ಮಹಾಂತೇಶ್ ಯರಗಟ್ಟಿ

ಪ್ರಶ್ನೆಗಳು: 1.    ಗಾಂಧಿ ಶಾಂತಿ ಪುರಸ್ಕಾರ ಪಡೆದ ಪ್ರಥಮ ಭಾರತೀಯ ಯಾರು? 2.    ಬಾಬು ಕೃಷ್ಣಮೂರ್ತಿ ಇದು ಯಾರ ಕಾವ್ಯ ನಾಮವಾಗಿದೆ? 3.    ಕನ್ನಡದ ದಾಸಯ್ಯ ಎಂದು ಯಾವ ಕವಿಯನ್ನು ಕರೆಯುತ್ತಾರೆ? 4.    ಶಿವಾಜಿಯ ರಾಜ್ಯದ ರಾಜಧಾನಿ ಯಾವುದಾಗಿತ್ತು? 5.    ಭಾರತೀಯ ಜೇನು ಸಂಶೋಧನಾ ಸಂಸ್ಥೆ ಎಲ್ಲಿದೆ? 6.    ಅಂಬರ ಅರಮನೆ ಎಲ್ಲಿದೆ? 7.    ಉಕ್ಕು ತಯಾರಿಕೆಯಲ್ಲಿ ಬಳಸುವ ಮುಖ್ಯ ಲೋಹ ಯಾವುದು? 8.    1986ರಲ್ಲಿ ಬೆಂಗಳೂರಿನಲ್ಲಿ ಸಾರ್ಕ್ ಸಮ್ಮೇಳನ ನಡೆದಾಗ ಭಾರತದ ಪ್ರಧಾನಿ ಯಾರಾಗಿದ್ದರು? 9.   … Read more

ಕನ್ನಡ ಕಣ್ಮಣಿ “ಅನ್ನದಾನಯ್ಯ ಪುರಾಣಿಕ”: ಉದಯ ಪುರಾಣಿಕ

ಭಾರತ ಸ್ವಾತಂತ್ರ್ಯ ಹೋರಾಟದಲ್ಲಿ ಬ್ರಿಟೀಷರ ದೌರ್ಜನ್ಯಕ್ಕೆ ಹೆದರದೆ, ಹೈದರಾಬಾದು ಸಂಸ್ಥಾನ ವಿಮೋಚನಾ ಹೋರಾಟದಲ್ಲಿ ನಿಜಾಮ್ ಸೇನೆಯ ಗುಂಡಿಗೆ ಬೆದರದೆ ಮತ್ತು ಕರ್ನಾಟಕ ಏಕೀಕರಣ ಹೋರಾಟದಲ್ಲಿ ಪೋಲಿಸರ ಮತ್ತು ಕನ್ನಡ ಮತ್ತು ಏಕೀಕರಣ ವಿರೋಧಿಗಳ ಹಿಂಸೆಗೆ ಜಗ್ಗದೆ, ನಾಡು-ನುಡಿಗಾಗಿ ಕಳೆದ 67 ವರ್ಷಗಳಿಗಿಂತ ಹೆಚ್ಚು ಕಾಲ ನಿಸ್ವಾರ್ಥ, ನಿರಂತರ, ಅಪ್ರತಿಮ ಸೇವೆ ಸಲ್ಲಿಸಿದವರು. ಗಾಂಧಿವಾದಿ, ಕನ್ನಡ ಕಣ್ಮಣಿ 87 ವರ್ಷದ ಸಾಹಿತ್ಯರತ್ನ ಅನ್ನದಾನಯ್ಯ ಪುರಾಣಿಕರು. ಪ್ರೀತಿ ನನ್ನ ಮತ, ಸೇವೆ ನನ್ನ ವ್ರತ ಎಂದು ಬಾಳಿದ ಈ ಸಜ್ಜನರ … Read more

ಕನಸು ಚಿವುಟಿದ ವಿಧಿ ಎದುರು ಕುಳಿತು…: ಕಾವೇರಿ ಎಸ್.ಎಸ್.

ಮನದ ತುಂಬ ದಿಗಿಲು, ಮನಸ್ಸು ಮೂಕ ಕಡಲು. ಕನಸು ಸೊರಗಿದೆ. ಸುತ್ತೆಲ್ಲ ನೀರವ ಮೌನ ಮನೆ ಮಾಡಿ ಕಾರ್ಗತ್ತಲ ಕಾರ್ಮೋಡ ಕವಿದು ಬೆಳದಿಂಗಳೂ ಕಪ್ಪಾದಂತೆ ಭಾಸವಾಗುತ್ತಿದೆ. ಮನದಿ ಕಟ್ಟಿದ ಕನಸು ನುಚ್ಚುನೂರಾಗಿ ಕಣ್ಣು ತುಂಬಿ ಭಾವುಕತೆಯ ಹೊದ್ದು ನಲುಗಿದೆ. ಹೆಪ್ಪುಗಟ್ಟಿದ ನೋವಿನ ಮಡಿಲಲ್ಲಿ ಮಿಂದು ಮಡಿಯಾಗಬೇಕು ಎಂದುಕೊಂಡರೂ ಆಗದೇ ವಿಧಿಯ ಆಟಕ್ಕೆ ತಲೆ ಬಾಗಿ, ಅದರ ಮುಂದೆ ಶರಣಾಗಿ ಮಂಡಿಯೂರಿ ಕುಳಿತು ಬಿಕ್ಕುತ್ತಿದ್ದೇನೆ. ನನ್ನ ಆಲೋಚನೆ ಖಾಲಿ ಹಾಳೆಯಾಗಿದೆ. ಅದರಲ್ಲಿ ಏನೂ ಬರೆಯಲು ತೋಚದೇ ಒಂಟಿಯಾಗಿರುವ ನನ್ನನ್ನು … Read more

ಸೂಫಿ ಕತೆಗಳು: ಗೋವಿಂದ ರಾವ್ ವಿ. ಅಡಮನೆ

೧. ಡ್ರ್ಯಾಗನ್‌  ಕೊಲ್ಲುವವ ಅಂದುಕೊಳ್ಳುತ್ತಿದ್ದವನ ಕತೆ ತಾನೊಬ್ಬ ಡ್ರ್ಯಾಗನ್‌ ಬೇಟೆಗಾರ ಎಂಬುದಾಗಿ ಹೇಳಿಕೊಳ್ಳುತ್ತಿದ್ದವನೊಬ್ಬ ಡ್ರ್ಯಾಗನ್‌ ಹಿಡಿಯಲೋಸುಗ ಪರ್ವತ ಪ್ರದೇಶಕ್ಕೆ ಹೋದನು. ಪರ್ವತ ಶ್ರೇಣಿಯಲ್ಲೆಲ್ಲ ಡ್ರ್ಯಾಗನ್‌ಗಾಗಿ ಹುಡುಕಾಡತೊಡಗಿದ. ಕೊನೆಗೆ ಅತ್ಯಂತ ಎತ್ತರದ ಪರ್ವತವೊಂದರಲ್ಲಿ ಅತೀ ಎತ್ತರದಲ್ಲಿದ್ದ ಗುಹೆಯೊಂದರಲ್ಲಿ ಬೃಹತ್ ಗಾತ್ರದ ಡ್ರ್ಯಾಗನ್‌ನ ಘನೀಕೃತ ದೇಹವೊಂದನ್ನು ಆವಿಷ್ಕರಿಸಿದ. ಅದನ್ನು ಆತ ಬಾಗ್ದಾದ್‌ಗೆ ತಂದನು. ಅದನ್ನು ತಾನು ಕೊಂದದ್ದಾಗಿ ಘೋಷಿಸಿ ಅಲ್ಲಿನ ನದಿಯ ದಡದಲ್ಲಿ ಪ್ರದರ್ಶನಕ್ಕೆ ಇಟ್ಟನು. ಡ್ರ್ಯಾಗನ್‌ ಅನ್ನು ನೋಡಲು ನೂರುಗಟ್ಟಲೆ ಸಂಖ್ಯೆಯಲ್ಲಿ ಜನ ಬಂದರು.  ಬಾಗ್ದಾದ್‌ನ ಬಿಸಿ ವಾತಾವರಣ … Read more

ನಮ್ಮೂರ ದಸರಾ: ಪ್ರಶಸ್ತಿ

ಹಬ್ಬಗಳೆಂದ್ರೆ ಅದೇನೋ ಖುಷಿ.ಅದು ನಮ್ಮನ್ನೆಲ್ಲಾ ಸ್ವಂತಂತ್ರ್ಯರನ್ನಾಗಿಸಿದ ಆಗಸ್ಟ್ ಹಬ್ಬವಾಗಿರಬಹುದು. ಗಣತಂತ್ರರನ್ನಾಗಿಸಿದ ಜನವರಿ ಹಬ್ಬವೂ ಆಗಿರಬಹುದು. ನಾಡಹಬ್ಬ ದಸರಾವಾಗಿರಬಹುದು, ಬೆಳಕಹಬ್ಬ ದೀಪಾವಳಿಯಾಗಿರಬಹುದು. ಯಾವಾಗ ಬರುತ್ತಪ್ಪಾ ರಜಾ ಎಂದನಿಸೋ ಬಕ್ರೀದು, ರಂಜಾನ್, ಕ್ರಿಸ್ಮಸ್ಸುಗಳಾದ್ರೂ ಸರಿಯೇ.ಹಬ್ಬವೆಂದ್ರೆ, ಆ ರಜೆಗಳೆಂದ್ರೆ ಅದೆಂತದೋ ಖುಷಿ ಬಾಲ್ಯದಿಂದಲೂ. ಕೆಲವೆಡೆಯೆಲ್ಲಾ ಶಾರದಾಪೂಜೆ, ಲಕ್ಷ್ಮೀ ಪೂಜೆ, ಆಯುಧಪೂಜೆ, ಗೂಪೂಜೆ ಅಂತ ಹಲವಾರು ಪೂಜೆಯಿರೋ ದಸರಾ ದೊಡ್ಡ ಹಬ್ಬವಾದರೆ ನಮ್ಮೆಡೆ ಅದರ ಹೆಚ್ಚಿನವೆಲ್ಲಾ ಬರೋ ದೀಪಾವಳಿಯೇ ದೊಡ್ಡಬ್ಬ. ದಸರಾವೆಂದರೆ  ದೊಡ್ಡವರಿಗೆ ಶಮೀ ಪತ್ರೆ ಕೊಟ್ಟು, ಬನ್ನಿ ಕಡಿಯೋದು , ಬಾಳೆಮರ … Read more

ಕರಿಸುಂದರಿಯ ಕಿರಿಗೂಡು-2: ಅಖಿಲೇಶ್ ಚಿಪ್ಪಳಿ

ಕರಿಸುಂದರಿಯ ಕಿರಿಗೂಡು-1 [ಎರಡು ವಾರದ ಹಿಂದೆ ಬರೆದಿದ್ದ ಈ ಸತ್ಯಕಥೆಯನ್ನು ಪೂರ್ಣಗೊಳಿಸುವ ಹೊಣೆಗಾರಿಕೆ ಇದ್ದುದ್ದರಿಂದ, ನಂತರದಲ್ಲಿ ನಡೆದ ಘಟನೆಗಳನ್ನು ಕಟ್ಟಿಕೊಡುವ ಪ್ರಯತ್ನ ಇಲ್ಲಿ ಮಾಡಲಾಗಿದೆ. ನಾವಂದುಕೊಂಡಂತೆ ಎಲ್ಲವೂ ನಡೆಯುವುದಿದ್ದರೆ, ಪ್ರಪಂಚ ಸುಲಲಿತವಾಗಿಯೇ ಇರುತ್ತಿತ್ತೇನೋ. ಇಲ್ಲಿ ಪುಟ್ಟ ಕಣಜವೊಂದು ತನ್ನ ವಂಶಾಭಿವೃದ್ಧಿಯ ಪ್ರಯತ್ನದಲ್ಲಿದ್ದಾಗಲೇ, ದೂರದ ಅಸ್ಸಾಂನಲ್ಲಿ ಮಾನವನ ಶೋಕಿಗಾಗಿ ಒಂದು ಅಪ್ರಿಯ ಘಟನೆ ನಡೆಯಿತು. ಜೀವಜಾಲದಲ್ಲಿ ನಡೆದ ಎರಡು ಘಟನೆಗಳನ್ನು ಇಲ್ಲಿ ಪೋಣಿಸಲಾಗಿದೆ]    ತನ್ನ ಗೂಡಿಗೆ ಲಪ್ಪ ಹಾಕಿ ಮೆತ್ತಿದಂತೆ, ಜೇಡಿ ಮಣ್ಣನ್ನು ಮೆತ್ತಿ ಹೋದ ಕಪ್ಪು … Read more

ಕಾವ್ಯಧಾರೆ: ವಸಂತ ಬಿ ಈಶ್ವರಗೆರೆ, ನೂರುಲ್ಲಾ ತ್ಯಾಮಗೊಂಡ್ಲು, ಸತೀಶ್ ಪಾಳೇಗಾರ್

ಮಳೆರಾಯ ಬರಡು ಭೂಮಿಗೆ, ಮುತ್ತಿನ ಹನಿಗಳ ಸುರಿಸಿ,  ಹಸಿರ ಚಿಗುರಿಸು ಮಳೆರಾಯ.  ಕಾದು ಬಾಯ್ದೆರೆದಿದೆ,  ನಿನ್ನ ಆಗಮನದ ನಿರೀಕ್ಷೆಯಲಿದೆ, ಸುರಿಯಲು ಬಾರೆಯ ಮಹರಾಯ..? ರೈತ ಮುಗಿಲತ್ತ ನೋಡುತ,  ಪಶು ಪಕ್ಷಿಗಳೆಲ್ಲ ನಿನಗಾಗಿ ಹುಯ್ಯಲಿಡುತ,  ಕರುಣೆ ತೋರಲಾರೆಯ ಮುನಿದ ಮಾಯ…?  ಬೆಟ್ಟದಲಿ ಹಸಿರಿಲ್ಲ,  ಭುವಿಯಲಿ ತಂಪಿನ ಕಂಪಿಲ್ಲ, ತೋರಲಾರೆಯ ಹೊಸ ಚೇತನ ರಾಯ…?  ನೀರಿಗಾಗಿ ಆಹಕಾರ ಏಳುವ ಮುನ್ನ,  ಜಾನುವಾರುಗಳು ಹಸಿವಿನಿಂದ ಸಾಯುವ ಮುನ್ನ,  ಈ ಧರೆ ಬಾಯಿ ಬಿಟ್ಟು ಎಲ್ಲರನು ಮಣ್ಣಾಗಿಸುವ ಮುನ್ನ,  ನಿನ್ನ ಸಿಂಚನ ಸುರಿಸು,  … Read more

ಹೊಟ್ಟೆ ತುಂಬಾ ನಗು ಕಣ್ಣ ತುಂಬಾ ನೀರು ಉಕ್ಕಿಸಿದ ನಾಟಕ ಕಿಲಾಡಿ ರಂಗಣ್ಣ: ಹಿಪ್ಪರಗಿ ಸಿದ್ಧರಾಮ

ನವರಸಗಳಿಂದಾದ ಕಲಾರಂಗವು ಜನಸಮುದಾಯದ ಸಮಸ್ಯೆಗಳನ್ನು ವಿವಿಧ ಕಾನ್ವಾಸಗಳ ಮೂಲಕ ಹೊರಹೊಮ್ಮಿಸುತ್ತಾ ಸಮಕಾಲೀನ ಸಮಸ್ಯೆಗಳನ್ನು ಎತ್ತಿ ತೋರಿಸಿ ಜಾಗೃತಿಯ ನಿನಾದವನ್ನು ನಿರಂತರವಾಗಿಸುವ ಶಕ್ತಿ ಹೊಂದಿದೆ. ಇಂತಹ ಪ್ರಖರ ಶಕ್ತಿಯನ್ನು ಹೊಂದಿರುವ ಕಪಾಪ್ರಕಾರಗಳಲ್ಲಿ ಒಂದಾದ ರಂಗಭೂಮಿಯು ಶತಮಾನದಿಂದಲೂ ಇಂಥಹ ಸಾಮಾಜಿಕ ಜಾಗೃತಿಯನ್ನು ಮೂಡಿಸುತ್ತಾ ಕೆಲವೊಂದು ಬಗೆಹರಿಸಲಾಗದ ಸಮಸ್ಯೆಗಳನ್ನು ನವರಸಗಳಲ್ಲಿಯೇ ಹೆಚ್ಚು ಇಷ್ಟವಾಗುವ ಹಾಸ್ಯರಸದ ಮೂಲಕ ಹೇಳಲು ಪ್ರಯತ್ನಿಸುತ್ತಿದೆ. ಈ ಪ್ರಯತ್ನದಲ್ಲಿ ಹಲವಾರು ನಾಟಕಕಾರರು ಆಗಾಗ ಪ್ರಯತ್ನ-ಪ್ರಯೋಗ ಮಾಡುತ್ತಲೇ ಬಂದಿದ್ದಾರೆ. ಯಾಕಂದರೆ ರಂಗಭೂಮಿಯೆಂಬುದು ನಾಗರಿಕ ಚಿಕಿತ್ಸಕ ಶಕ್ತಿಯೊಂದಿಗೆ ಅನುದಿನವೂ ನಿತ್ಯನಿರಂತರ ಪ್ರವಹಿಸುವ … Read more

ಬೀದಿ ನಾಯಿಗಳ ವ್ಯಥೆ: ಎಚ್.ಕೆ.ಶರತ್

ಬೀದಿ ನಾಯಿಗಳಾದ ನಮಗೆ ಮನುಷ್ಯರೆಂದು ಕರೆಸಿಕೊಳ್ಳುವ ನಿಮ್ಮ ಮೇಲೆ ಮುನಿಸಿದೆ. ನಾವೇನು ನಮಗೆ ವಸತಿ ಸೌಲಭ್ಯ ಕಲ್ಪಿಸಿ ಎಂದು ಎಂದಾದರೂ ಬೇಡಿಕೆ ಮುಂದಿಟ್ಟಿದ್ದೇವೆಯೇ? ಬೀದಿಯನ್ನೇ ಸರ್ವಸ್ವವೆಂದು ಭಾವಿಸಿ ನಮ್ಮ ಮುತ್ತಾತನ ಕಾಲದಿಂದಲೂ ಅಲ್ಲೇ ಜೀವಿಸುತ್ತಿದ್ದೇವೆ. ಇತ್ತೀಚಿನ ದಿನಗಳಲ್ಲಿ ನಮ್ಮ ಮೇಲೆ ನೀವು ಹೊರಿಸುತ್ತಿರುವ ಗಂಭೀರ ಆಪಾದನೆ ಎಂದರೆ, ನಾವು ಮನುಷ್ಯರ ಮೇಲೆ ದಾಳಿ ಮಾಡುತ್ತೇವೆನ್ನುವುದು. ಯಾರೋ ನಮ್ಮ ಕಡೆಯ ಕೆಲವರು ಮಾಡುವ ದುಷ್ಕøತ್ಯಕ್ಕೆ ನಮ್ಮೆಲ್ಲರನ್ನೂ ಬಲಿಪಶುಗಳನ್ನಾಗಿ ಮಾಡುವುದು ಎಷ್ಟು ಸರಿ? ಈಗ ನೀವೆ ಆಲೋಚಿಸಿ, ನಿಮ್ಮ ಕುಲಕ್ಕೆ … Read more

‘ಕೊರಿಯೋ’ಗ್ರಾಫರ್: ಗುರುಪ್ರಸಾದ ಕುರ್ತಕೋಟಿ

’ಸುರದು ಊಟ ಮಾಡಬೇಕು ಗೊರದು ನಿದ್ದೆ ಮಾಡಬೇಕು’ ಅಂತ  ಹಳ್ಳಿ ಕಡೆ ಹೇಳತಾರೆ. ಅದರರ್ಥ ’ಸೊರ ಸೊರ’ ಅಂತ ಸದ್ದು ಮಾಡುತ್ತ, ಅದು ಹುಳಿಯೋ, ಸಾರೋ ಅದೇನೇ ಇದ್ದರೂ ಅದನ್ನು ಸೊರ ಸೊರನೆ ಸವಿದು ಊಟ ಮಾಡಬೇಕು. ಹಾಗೂ ಗೊರಕೆ ಹೊಡೆಯುತ್ತ ನಿದ್ದೆ ಮಾಡಬೇಕು, ಅದೇ ಗಡದ್ದಾದ ನಿದ್ದೆ ಅನ್ನೋದು ಈ ಹೇಳಿಕೆಯ ಹಿಂದಿರುವ ಅರ್ಥ. ಸುರದು ಹೊಟ್ಟೆ ಬಿರಿಯುವಂತೆ ಊಟ ಮಾಡಿದ ಮೇಲೆ ಗೊರಕೆ ಹೊಡೆಯುವಂತಹ ನಿದ್ದೆ ಬರದೇ ಇನ್ನೇನು? ಆದರೆ ಆ ಎರಡೂ ಕ್ರಿಯೆಗಳಿಂದ … Read more

ಫ್ಲಾಪಿಬಾಯ್ ಮತ್ತು ಲಗೋರಿಬಾಬಾ 8

ಕಾಲೇಜಿನ ಉಪನ್ಯಾಸ ಫ್ಲಾಪಿಬಾಯ್ ಮತ್ತು ಲಗೋರಿಬಾಬಾ ಖ್ಯಾತಿ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿತ್ತು. ಇವರ ಅಪರಿಮಿತ ಬುದ್ಧಿವಂತಿಕೆ, ಜ್ಞಾನಕ್ಕೆ ಮೆಚ್ಚಿದ ನಗರದ ನಾಗರಿಕರು ಬೆರೆ ಬೇರೆ ಕಡೆ ಉಪನ್ಯಾಸಕ್ಕೆ ಕರೆಯುತ್ತಿದ್ದರು. ಹೊಸ ಕೆಲಸ ಹೊಸ ಉತ್ಸಾಹ ಇಬ್ರೂ ಕರೆದಲ್ಲೆಲ್ಲಾ ಹೋಗಿ ಭಾಷಣ ಬಿಗಿದು ಸಿಳ್ಳೆ ಗಿಟ್ಟಿಸಿ ಬರುತ್ತಿದ್ದರು. ಹೀಗೆ ಒಮ್ಮೆ ಅವರಿಬ್ಬರನ್ನ ಉಪನ್ಯಾಸ ಕೊಡಲು ನಗರದ ಒಂದು ಕಾಲೇಜಿನಿಂದ ಕರೆ ಬಂತು. ಆಯ್ತು ಅಂತ ಇಬ್ರೂ ಹೊರಟ್ರು.  ಫ್ಲಾಪಿಬಾಯ್ ಇರಲಿ, ಲಗೋರಿಬಾಬಾನೆ ಆಗಿರಲಿ ಜನರನ್ನ ನೋಡಿ ಮಾತಾಡೋವಂತವ್ರು. ಮೊದಲೇ … Read more

ನಿ. ರಾಜಶೇಖರ ಅವರ ಜೀವನ ದರ್ಶನ ಹಾಗೂ ಅವರ ‘ಶ್ರೀರಾಮಾಯಣ ದರ್ಶನಂ’ ಗದ್ಯಾನುವಾದ: ಶ್ರೀನಿವಾಸ ಕೃ. ದೇಸಾಯಿ

ಕೃಪೆಗೆಯ್, ತಾಯೆ, ಪುಟ್ಟನಂ!  ಕನ್ನಡದ ಪೊಸಸುಗ್ಗಿ ಬನದ ಈ ಪರಪುಟ್ಟನಂ (ಶ್ರೀ.ರಾ.ದ. ಆಯೋದ್ಯಾ ಸಂಪುಟಂ – ಸಂಚಿಕೆ 1; 139-140) ಪುಟ್ಟನನ್ನು, ಕನ್ನಡದ ಹೊಸ ಸುಗ್ಗಿವನದ ಈ ಕೋಗಿಲೆಯನ್ನು ಹರಸು ತಾಯಿ! (ಗದ್ಯಾನುವಾದ – ನಿ. ರಾಜಶೇಖರ) ಹೊಸಗನ್ನಡದ ಸಾಹಿತ್ಯದ ಮೊಟ್ಟಮೊದಲ ಮಹಾಕಾವ್ಯವೆಂದು ಮಹಾಕವಿ ಕುವೆಂಪುರವರ ಮಹಾಛಂದಸ್ಸಿನ ‘ಶ್ರೀರಾಮಾಯನ ದರ್ಶನಂ’ ಪ್ರಸಿದ್ಧಿ ಪಡೆದಿದೆ. ಇದನ್ನು ಪುಷ್ಟೀಕರಿಸುವಂತೆ, ಕನ್ನಡ ಭಾಷೆಯ ಮೊದಲ ‘ಜ್ಞಾನಪೀಠ ಪ್ರಶಸ್ತಿ’ಯನ್ನು, ಈ ಮಹಾಕಾವ್ಯ ತನ್ನದಾಗಿಸಿತು. ಅದರಂತೆಯೇ ಕರ್ನಾಟಕ ರಾಜ್ಯ ಸರ್ಕಾರವು ಪ್ರಾರಂಬಿಸಿದ ‘ಪಂಪ’ ಪ್ರಶಸ್ತಿಯು … Read more

ಕಾವ್ಯಧಾರೆ: ಸುಷ್ಮಾ ರಾಘವೇಂದ್ರ, ಶೋಭಾ ಕೆ., ಕು.ಸ.ಮಧುಸೂದನ್ ರಂಗೇನಹಳ್ಳಿ, ಎಸ್.ಕಲಾಲ್

ಹಚ್ಚೆಯ ಹಸಿರು ಅವಳು, ಒಡಕು ಕನ್ನಡಕದೊಳಗಿನಿಂದ ಇಣುಕಿ ನನ್ನ ಕರೆದಾಗ ನನಗಿನ್ನು ಎಳಸು ಬೆರೆಯಲಿಲ್ಲ ಬೆಳೆಯಲಿಲ್ಲ ಅವಳೊಳಗೆ ಅವಳ ಕೈ ತುಂಬಿದ ಹಚ್ಚೆಯ ಹಸಿರೊಳಗೆ, ಎಲ್ಲರಂತೆ ತೊಡೆಯೇರಿ ಕಥೆಯಾಗಿ ಹಂಬಲಿಸಲಿಲ್ಲ ಅದಕ್ಕೇ ಕಾಡುತ್ತಾಳವಳು ಕಣ್ಣಂಚಿನಲ್ಲಿ ಹನಿಗಳಾಗಿ, ಬೀಳಲೊಲ್ಲೆ ನೆಲಕ್ಕೆ  ಬಾಗುತ್ತೇನೆ ಅವಳೆದುರಿಗೆ, ಯಾವ ಕಥೆಯ ನಾಯಕಿಯಂತಲ್ಲ ಉತ್ತಿದಳು ಬಿತ್ತಿದಳು ನನ್ನವರ ಹಸುರ, ಕೂತು ತಿನ್ನುವ ಮಂದಿಗೆ ಕುಡಿಕೆ ಹೊನ್ನು ತುಂಬಿಸಿ ಹರಿದ ನೆತ್ತರ,  ಕರಗಿದ ಖಂಡವನ್ನು ಸವೆದ ಬೆನ್ನ ಮೂಳೆಯ ತಿರುಗಿ ನೋಡದೇ ಬೆತ್ತಳಾದಳು ಶೂನ್ಯದೊಳಗೆ ನೆನಪಾಗದ … Read more