ಪುರಾಣಂ ಪರಾಭವಂ’ನ ಒಂದು ರಂಗ ನೋಟ: ಮಂಜುಳಾ ಎಸ್.

ಉತ್ತರ ಕರ್ನಾಟಕ, ದಕ್ಷಿಣ ಕನ್ನಡ ಜಿಲ್ಲೆ, ಮೈಸೂರು, ಕೋಲಾರ, ಬೆಂಗಳೂರು ನಗರ ಮತ್ತು ಗ್ರಾಮಾಂತರ, ದಾವಣಗೆರೆ ಹೀಗೆ ಕರ್ನಾಟಕದ ವಿವಿಧ ಭಾಗಗಳಿಂದ, ವಿವಿಧ ರೀತಿಯ ಸಂಸ್ಕøತಿ, ಸಾಮಾಜಿಕ ಹಿನ್ನಲೆಯನ್ನು ಹೊತ್ತು ಬಂದಿರುವ ನಮ್ಮ ತೆನೆ ಗುಂಪಿನಲ್ಲಿ, ಕೌರವರ ಜೊತೆ ಪಾಂಡವರು ಪಗಡೆಯಾಟದಲ್ಲಿ ಸೋತಾಗ ದ್ರೌಪದಿ ಬೆತ್ತಲಾಗಿದ್ಲು, ಪ್ರಸ್ತುತ ಕತ್ತಲಲ್ಲೂ, ಬೆಳಕಲ್ಲೂ ದೇವದಾಸಿ ವ್ಯವಸ್ಥೆಯಲ್ಲಿ, ಲೈಂಗಿಕ ಕಾರ್ಯಕರ್ತೆಯರಾಗಿ, ಬೇರೆ ಬೇರೆ ಕಾರಣಗಳಿಂದ, ಅನಿವಾರ್ಯತೆಗಳಿಂದ, ಬೆತ್ತಲಾದ ವ್ಯವಸ್ಥೆಯಿಂದ ಬಂದವರು, ನಮ್ಮ ಜೀವನದಲ್ಲಿ ಇನ್ಯಾರೋ ಬಂದು ನಿರ್ಧಾರದ ಅಧಿಕಾರ ಚಲಾಯಿಸುವ ವ್ಯವಸ್ಥೆಯನ್ನು … Read more

“ವಾರಿಸ್ ಡಿರೀ: ಮರುಭೂಮಿಯ ಒಂದು ಹೂವಿನ ಕಥೆ” (ಭಾಗ 2): ಪ್ರಸಾದ್ ಕೆ.

ಇಲ್ಲಿಯವರೆಗೆ ಈ ಮೊದಲೇ ಹೇಳಿದಂತೆ ಎಫ್. ಜಿ. ಎಮ್ ಮಾಡಿಸಿಕೊಂಡ ಹೆಣ್ಣುಮಕ್ಕಳಿಗೆ ವಿವಾಹಕ್ಕೆ ಸೊಮಾಲಿಯಾದಲ್ಲಿ ಭಾರೀ ಬೇಡಿಕೆ. ಓರ್ವ ವ್ಯಕ್ತಿ ಎಷ್ಟು ಒಂಟೆಯನ್ನು ಹೊಂದಿರುತ್ತಾನೆ ಎಂಬುದರ ಮೇಲೆ ಇಲ್ಲಿ ಶ್ರೀಮಂತಿಕೆಯನ್ನು ಅಳೆಯುತ್ತಾರಂತೆ. ವಧುದಕ್ಷಿಣೆಯೆಂಬ ಪದ್ಧತಿ ಜಾರಿಯಲ್ಲಿರುವುದರಿಂದ ಒಂಟೆಯನ್ನೇ ವಧುದಕ್ಷಿಣೆಯನ್ನಾಗಿ ಕೊಡುವುದು ಇಲ್ಲಿಯ ವಾಡಿಕೆ. ಹೀಗಾಗಿ ಎಫ್. ಜಿ. ಎಮ್ ಮಾಡಿಸಿಕೊಂಡ ಹೆಣ್ಣುಮಕ್ಕಳು ಇಲ್ಲಿನ ತಂದೆ-ತಾಯಂದಿರಿಗೆ ಶುದ್ಧ ಮಾರಾಟದ ಸರಕುಗಳು.      ************************ ವಾಪಾಸು ನಮ್ಮ ಕಥಾನಾಯಕಿ ವಾರಿಸ್ ಕಥನಕ್ಕೆ ಬರೋಣ. ತನ್ನ ಐದನೇ ವಯಸ್ಸಿಗೆ ಎಫ್. … Read more

ಪ್ರೊ. ಪ್ರಫುಲ್ಲ ಚಂದ್ರ ರೇ: ಗುರುರಾಜ್ ಜಯಪ್ರಕಾಶ್

ಪ್ರಫುಲ್ಲ ಚಂದ್ರರು ಆಗಸ್ಟ್ 2 1861, ಅವಿಭಜಿತ ಭಾರತದ ಬಂಗಾಳದ ಸುಶಿಕ್ಷಿತ ಮತ್ತು ಸುಸಂಸ್ಕೃತ ಕುಟುಂಬದಲ್ಲಿ ಜನಿಸಿದರು. ಇವರ ತಂದೆ ಹರೀಶ್ ಚಂದ್ರರು ಜಮೀನುದಾರರಾಗಿದ್ದರು ಗಳಿಕೆಯನ್ನೆಲ್ಲಾ ಒಂದು ಗ್ರಂಥಾಲಯ ಕಟ್ಟಲು ಬಳಸಿದರು. ಒಂಭತ್ತನೇ ವರ್ಷದ ವರೆಗೆ ಅವರು ತನ್ನ ತಂದೆಯ ಶಾಲೆಯಲ್ಲೇ ಕಲಿತರು, ಮುಂದಿನ ಅಭ್ಯಾಸಕ್ಕಾಗಿ ತಂದೆಯ ಪ್ರೋತ್ಸಾಹದೊಂದಿಗೆ ಕೋಲ್ಕತ್ತಾಗೆ ತೆರಳಬೇಕಾಯಿತು. ಅವರು ಶೇಕ್ಸ್‌ಪಿಯರ್‌ ಸಾಹಿತ್ಯ, ಇತಿಹಾಸ, ಭೂಗೋಳ, ಮತ್ತು ಪ್ರಸಿದ್ದ ಪುರುಷರಾ ಜೀವನಚರಿತ್ರೆಯನ್ನು ಪ್ರೀತಿಯಿಂದ ಓದಿದರು. ನಾಲ್ಕನೆಯ ತರಗತಿಯಲ್ಲಿ ತೀವ್ರ ಜೀರ್ಣಕಾರಿ ಅಸ್ವಸ್ಥತೆಯ ಕಾರಣದಿಂದ  ತಮ್ಮ … Read more

ಪ್ರೀತಿ ಜಗದ ರೀತಿ: ದಿವ್ಯಾಧರ ಶೆಟ್ಟಿ ಕೆರಾಡಿ

ನಿನ್ನ ಪ್ರೇಮದ ಪರಿಯ ನಾನರಿಯೇ ಕನಕಾಂಗಿ ನಿನ್ನೊಳಿದೆ ನನ್ನ ಮನಸ್ಸು  ಎನ್ನುವ ಹುಡುಗ ಮತ್ತು ಹಂಬಲಿಸೊ ನಿನ್ನ ಕಂಗಳಲಿ ಬೇರೇನೂ ಕಾಣದು ಹುಡುಗ ನನ್ನ ದೊರೆಯು ನೀನೆ ಆಸರೆಯು ನೀನೆ ಎನ್ನುವ ಹುಡುಗಿಯ ಎದೆ ಬಗೆದು ನೋಡಿದರೂ ಕಾಣುವುದು ನಿರ್ಮಲವಾದ  ಹಚ್ಚ ಹಸಿರಿನ ಸ್ವಚ್ಛ ಪ್ರೀತಿ ಮಾತ್ರ ಇದು ಈ ಜಗದ ನೀತಿ ಪ್ರೀತಿಯ ರೀತಿ. ಹೌದು 'ಪ್ರೀತಿ' ಎಂಬ ಎರಡಕ್ಷರ ಪದಗಳಲ್ಲಿ ಹಿಡಿದಿಡಲಾಗದ ಭಾವ ನೌಕೆ.. ಪ್ರಪಂಚದ ಯಾವಜೀವಿಯನ್ನು ಬಿಡದೆ ಕಾಡುವ ಮಾಯಾಜಿಂಕೆ. ಅಲ್ಲೆಲ್ಲೋ ಬಸ್ … Read more

ಡಾ.ಖಾದರ ಎನ್ನುವ ಆರೋಗ್ಯ ವಿಜ್ಞಾನದ ಸಂತ: ಗುಂಡುರಾವ್ ದೇಸಾಯಿ

•    ನೀವು ಕಕ್ಕಸಕ್ಕೆ ಹೋದಾಗ ನೀರು ಹಾಕಿದ ಕೂಡಲೆ ಕಕ್ಕಸು ಸ್ವಚ್ಛವಾದರೆ ನೀವು ಆರೋಗ್ಯವಂತರು, ಅದು ಅಲ್ಲೆ ಹಿಡಿದುಕೊಂಡರೆ ನಿಮಗೆ ಏನೋ ತೊಂದರೆ ಇದೆ ಎಂದೆ ಅರ್ಥ •    ನಿಮ್ಮ ಮಕ್ಕಳಿಗೆ 15-20 ವರ್ಷಕ್ಕೆ ಶುಗರ್ ಗೆ ಬಲಿಯಾಗಿಸಬೇಕೆಂದಿದ್ದರೆ ನೂಡಲ್ಸ್ ತಿನ್ನಿಸಿ •    ನಿಮ್ಮ ಮುಂದಿನ ಪೀಳಿಗೆ ಬೊಕ್ಕತಲೆಯವರಾಗಬೇಕಾದರೆ ನೀವು ಪ್ಲಾಸ್ಟಿಕ್ ಬಾಟಲ್ ನೀರನ್ನೆ ಕುಡಿಯಿರಿ •    ನೂರು ಗ್ರಾಂ ಚಾಕಲೇಟ್ ನಲ್ಲಿ  4% ಜಿರಲೆ, 6% ಇಲಿ ಪಿಚ್ಚಿಕೆ ಇದ್ದೆ ಇರುತ್ತವೆ. ಹಾಗಾಗಿ ಆರಾಮಾಗಿ ನಿಮ್ಮ … Read more

ಕಾಡು(ವ) ಕಟ್ಟುವ ಕತೆ!! ಭಾಗ-3: ಅಖಿಲೇಶ್ ಚಿಪ್ಪಳಿ

2013-14ರ ಸಾಲಿನಲ್ಲಿ ನೆಟ್ಟ ಗಿಡಗಳನ್ನು ದನಗಳು ಮೇಯ್ದುಕೊಂಡು ಹೋಗಿದ್ದವು ಎಂದು ಈ ಮೊದಲೇ ವಿವರಿಸಿಲಾಗಿದೆ. 2014-15ರ ಸಾಲಿಗೆ ಒಂದಿಷ್ಟು ಗಿಡಗಳನ್ನು ನೆಟ್ಟು ರಕ್ಷಿಸಲೇ ಬೇಕೆಂಬ ಪಣತೊಟ್ಟು ಕೆಲಸ ಶುರು ಮಾಡಿದೆವು. ತಂಪಿನ ಚಾವಣೆಯಿಲ್ಲದ ಖುಷ್ಕಿ ರೂಪದ ಆ ಪ್ರದೇಶದಲ್ಲಿ ಯುಪಟೋರಿಯಂ ಕಳೆಗಳು ಹೇರಳವಾಗಿ ಬೆಳೆದುಕೊಂಡಿದ್ದವು. ಮರಗಳ ಮೇಲ್ಚಾವಣಿ ದಟ್ಟವಾಗಿದ್ದಲ್ಲಿ ಯುಪಟೋರಿಯಂ ಹಾವಳಿ ಕಡಿಮೆ. ಬಿಸಿಲು ಬೀಳುವ ಜಾಗದಲ್ಲಿ ಹೇರಳವಾಗಿ ಬೆಳೆಯುತ್ತವೆ. ಈ ರಾಕ್ಷಸ ಕಳೆಗಳು ಬೆಳೆಯಲು ನೀರು-ಗೊಬ್ಬರಗಳ ಅಗತ್ಯವಿಲ್ಲ. ಅಷ್ಟೇನು ಗಟ್ಟಿಯಲ್ಲದ ಈ ಕಳೆಗಿಡವನ್ನು ಸಮರ್ಪಕವಾಗಿ ನಿರ್ವಹಣೆ … Read more

ಕಾವ್ಯ ಧಾರೆ: ಪ್ರವೀಣಕುಮಾರ್. ಗೋಣಿ, ಸಿಪಿಲೆನಂದಿನಿ, ಕ.ಲ.ರಘು.

-: ಅಂತರ್ಯದಾ ಯಾತ್ರೆ :- ಆಳದಿ ಸ್ತಬ್ದತೆಯದು  ಮನೆ ಮಾಡಿ ಕುಳಿತಿರಲು ಮನವಿದು ಅದ ಮರೆಯುತ್ತ  ಹೊರಟಿಹುದು ಹೊರಗಿನಾ ಜಾತ್ರೆಗೆ. ತನ್ನ ತಾ ಮರೆತು ಅಲೆಯುತಿಹುದು  ಏನೆನ್ನೋ ಅರಸುತ್ತ ಭಿನ್ನವಾಗಿರದ  ಸಾಕ್ಷಾತ್ಕಾರದ ಬೆಳಕ ಬದಿ ಸರಿಸುತ  ಸೋತು ಹೋಗುತಿದೆ ಮನ ಸತತ. ಏಳುವ ಸಾವಿರ ತಲ್ಲಣಗಳ  ಅಲೆಗಳ ಬೆನ್ನತ್ತುತ ಆಳದಿ  ಅಡಗಿಹ ಅರಿವೆನುವ ಮುತ್ತು ರತ್ನಗಳ  ತೊರೆದು ಸರಿಯುತಿದೆ ಮನ ವಿಷನ್ನಗೊಳ್ಳುತ್ತ. -ಪ್ರವೀಣಕುಮಾರ್. ಗೋಣಿ          ಮಹಾ ವಿಸ್ಮಯದ ಕತ್ತಲೆಯೇ  ಓ ಕತ್ತಲೆಯೇ … Read more

ಕರ್ಚೀಫ್ ಕಹಾನಿ: ಪ್ರಶಸ್ತಿ

ತಿಂಗಳ ಹಿಂದೆ ಕಳೆದೇಹೋಗಿದ್ದನೆಂದು ಹುಡುಕುಡುಕಿ ಬೇಸತ್ತು ಕೊನೆಗೆ ಹುಡುಕೋದನ್ನೇ ಮರೆಸಿಬಿಟ್ಟಂತ ಮಾಲೀಕನೆದುರು ಇವತ್ತು ಇದ್ದಕ್ಕಿದ್ದಂತೆ ಪ್ರತ್ಯಕ್ಷನಾಗಿದ್ದೆ ! ಒಗೆದು ಒಣಗಿಸಿ ಮಡಚದೇ ಬಿದ್ದಿದ್ದ ರಾಶಿಯಲ್ಲೊಂದು ಪ್ಯಾಂಟನ್ನು ಇಸ್ತ್ರಿ ಮಾಡಲು ತೆಗೆದ್ರೆ ಅದರೊಳಗಿಂದ ನನ್ನ ಇರುವಿಕೆಯ ಅರಿವಾಗಬೇಕೇ ? ನಾ ಯಾರು ಅಂತ ಇಷ್ಟ್ರಲ್ಲೇ ಗೊತ್ತಾಗಿರಬೇಕಲ್ಲಾ ? ಹೂಂ. ಅದೇ. ಕರವಸ್ತ್ರ ಎನ್ನಿ ಕರ್ಚೀಫು ಎನ್ನಿ, ಹ್ಯಾಂಕಿ ಎನ್ನಿ. ಏನೇ ಅಂದ್ರೂ ಥ್ಯಾಂಕ್ಸೆನ್ನುವವ ನಾನೇ ನಾನು. ಕರ್ಚೀಫ್ ಕಹಾನಿ ಅಂದಾಕ್ಷಣ ಕರುಣಾಜನಕ ಕಥೆ ಅಂತೆಲ್ಲಾ ಅಂದ್ಕೋಬೇಡಿ. ಅಷ್ಟಕ್ಕೂ ಹಂಗ್ಯಾಕೆ … Read more

ಭೂಸ್ವಾದೀನ ಕಾಯ್ದೆ: ಎನ್. ಗುರುರಾಜ್ ತೂಲಹಳ್ಳಿ

          ನಮ್ಮ ಭಾರತ ದೇಶ ಕೃಷಿ ಪ್ರಧಾನ ದೇಶವಾಗಿದ್ದು ಶೇಕಡ 70 ರಷ್ಠು ಜನತೆ ಕೃಷಿಯನ್ನೆ ಅವಲಂಬಿಸಿ ಬದುಕುತ್ತಿದ್ದಾರೆ ಎಂದು ನಮ್ಮ ಸರಕಾರಗಳು ಮತ್ತು ರಾಜಕೀಯ ಪಕ್ಷಗಳು ರೂಪಿಸುವ ಎಲ್ಲಾ ನೀತಿ ಯೋಜನೆಗಳ ಹಿಂದೆಯು ರೈತರ ಮತ್ತು ದಲಿತರ ಏಳಿಗೆಯ ಘನ ಉದ್ದೇಶವಿದೆ ಎಂದು ಮಾತ್ರ ಹೇಳಿಕೊಳ್ಳುತ್ತವೆ ಹೊರತು ಅಂತಹ ಯಾವ ಕಾರ್ಯಗಳನ್ನು ಮಾಡುವುದಿಲ್ಲ. ಇದಕ್ಕೆ ಪೂರಕವಾಗಿ ನಮ್ಮ ರಾಜಕೀಯ ಪಕ್ಷಗಳು ತಮ್ಮ ಎಲ್ಲಾ ಸಭೆ-ಸಮಾರಂಭಗಳಲ್ಲಿ ರೈತರ ಪರ, ಬಡವರ ಪರ, … Read more

ನಜ಼ರುದ್ದೀನ್‌ ಕತೆಗಳು: ಗೋವಿಂದ ರಾವ್ ವಿ. ಅಡಮನೆ

ನಜ಼ರುದ್ದೀನ್‌ ಕತೆಗಳು: ಗೋವಿಂದ ರಾವ್ ವಿ. ಅಡಮನೆ ೧. ದೈವೇಚ್ಛೆ ಮುಲ್ಲಾ ನಜ಼ರುದ್ದೀನನೂ ಇತರ ಇಬ್ಬರು ಸಂತರೂ ಮೆಕ್ಕಾಗೆ ಯಾತ್ರೆ ಹೋದರು. ಅವರ ಪ್ರಯಾಣದ ಅಂತಿಮ ಭಾಗದಲ್ಲಿ ಒಂದು ಹಳ್ಳಿಯ ಮೂಲಕ ಹೋಗುತ್ತಿದ್ದರು. ಅವರ ಹತ್ತಿರವಿದ್ದ ಹಣ ಹೆಚ್ಚುಕಮ್ಮಿ ಮುಗಿದಿತ್ತು; ಅರ್ಥಾತ್ ಬಹು ಸ್ವಲ್ಪ ಉಳಿದಿತ್ತು. ಆ ಹಳ್ಳಿಯಲ್ಲಿ ಅವರು ಸಿಹಿ ತಿನಿಸು ಹಲ್ವಾ ಕೊಂಡುಕೊಂಡರು. ಆದರೆ ಅದು ಮೂರು ಮಂದಿಗೆ ಸಾಲುವಷ್ಟು ಇರಲಿಲ್ಲ, ಮೂವರೂ ಬಹು ಹಸಿದಿದ್ದರು. ಮಾಡುವುದೇನು? – ಪಾಲು ಮಾಡಿದರೆ ಯಾರ ಹಸಿವನ್ನೂ … Read more

ಸಾಮಾನ್ಯ ಜ್ಞಾನ (ವಾರ 89): ಮಹಾಂತೇಶ್ ಯರಗಟ್ಟಿ

ಪ್ರಶ್ನೆಗಳು 1.    ಶಾಸ್ತ್ರೀಯ ಸಂಗೀತದ ಹಾಡುಗಾರಿಕೆಯಲ್ಲಿ ಅತಿಪುರಾತನ ಶೈಲಿ ಯಾವುದು? 2.    ಆರ್.ಐ.ಟಿ.ಇ.ಎಸ್ (RITES)ನ ವಿಸ್ತೃತ ರೂಪವೇನು? 3.    ಗಣಿತದ ಬಗ್ಗೆ ಮೊದಲು ಅಚ್ಚಾದ ಕೃತಿ ಯಾವುದು? 4.    ತ್ರಿಪದಿಯ ಲಕ್ಷಣವನ್ನು ಮೊಟ್ಟ ಮೊದಲಿಗೆ ಹೇಳಿದವರು ಯಾರು? 5.    ಕನ್ನಡದ ಪ್ರಥಮ ಮಹಿಳಾ ನಿರ್ಮಾಪಕಿ ಯಾರು? 6.    ಗೆಲಿಲಿಯೋನ ಮೊದಲ ವೈಜ್ಞಾನಿಕ ಸಂಶೋಧನೆ ಯಾವುದು? 7.    ಅಡಿಗೆ ಗ್ಯಾಸ್‍ನಲ್ಲಿರುವ ಅನಿಲ ಯಾವುದು? 8.    ಫಾಹಿಯಾನನು ಭಾರತಕ್ಕೆ ಯಾರ ಕಾಲದಲ್ಲಿ ಭೇಟಿ ನೀಡಿದನು? 9.    ರಿಕೆಟ್ಸ್ ಕಾಯಿಲೆ ಯಾವ … Read more

“ವಾರಿಸ್ ಡಿರೀ: ಮರುಭೂಮಿಯ ಒಂದು ಹೂವಿನ ಕಥೆ”: ಪ್ರಸಾದ್ ಕೆ.

ಆಗ ಹೆಚ್ಚೆಂದರೆ ನನಗೆ ಐದು ವರ್ಷ.  ಅಕ್ಕ ಅಮನ್ ಗೆ ‘ಅದನ್ನು’ ಮಾಡಿಸುವುದರ ಬಗ್ಗೆ ಮನೆಯೆಲ್ಲಾ ಗುಲ್ಲು. ‘ಅದನ್ನು’ ಮಾಡಿಸಿಕೊಂಡರೆ ನಮ್ಮಲ್ಲಿಯ ಹೆಣ್ಣುಮಕ್ಕಳಿಗೆ ಭಾರೀ ಬೇಡಿಕೆ. ಒಂದು ಪ್ರತಿಷ್ಠೆಯ ಸಂಕೇತ. ಅಧಿಕೃತವಾಗಿ ಹೆಂಗಸಿನ ಪಟ್ಟಕ್ಕೆ ಭಡ್ತಿ. ನನಗಂತೂ ಈ ಬಗ್ಗೆ ಭಾರೀ ಕುತೂಹಲ. ‘ಅದು’ ಎಂಬುದು ಏನೆಂದು ತಲೆಬುಡ ಗೊತ್ತಿಲ್ಲದಿದ್ದರೂ ಅಮ್ಮನ ಕೊರಳಿಗೆ ಜೋತುಬಿದ್ದು ‘ಅಕ್ಕನಿಗೆ ಮಾಡಿಸುತ್ತೀರಲ್ಲಾ. ನನಗೂ ಮಾಡಿಸಿ’ ಎಂದು ಗೋಳು ಹುಯ್ದುಕೊಳ್ಳುವಷ್ಟರ ಮಟ್ಟಿಗೆ. ‘ಥೂ ಹೋಗೇ’ ಎಂದು ತಳ್ಳಿಹಾಕುವ ಅಮ್ಮ. ಕಣ್ಣಲ್ಲೇ ತುಂಟನಗೆಯೊಂದಿಗೆ ಕೆಣಕುವ … Read more

ಕಾಡು(ವ) ಕಟ್ಟುವ ಕತೆ!! ಭಾಗ-೨: ಅಖಿಲೇಶ್ ಚಿಪ್ಪಳಿ

ಮಲೆನಾಡಿನ ಮಣ್ಣಿನ ಗುಣ ವಿಶಿಷ್ಠವಾದದು. ಒಂದು ಮಳೆಗಾಲ ಮುಗಿಯುವಷ್ಟರಲ್ಲೇ ನೈಸರ್ಗಿಕವಾಗಿ ಸಳ್ಳೆ, ಮತ್ತಿ, ಹುಣಾಲು ಗಿಡಗಳು ಚಿಗುರಿ ಮೇಲೆದ್ದು ಬರುತ್ತಿದ್ದವು. ಜೊತೆಗೆ ಮುಳ್ಳಿನಿಂದ ಕೂಡಿದ ಪರಿಗೆ ಕಂಟಿಗಳು ಹೇರಳವಾಗಿ ಎದ್ದು ಬಂದವು. ಹಸಿರು ಮರಳುಗಾಡಾಗಿದ್ದ ಜಾಗ ನಿಧಾನಕ್ಕೆ ವೈವಿಧ್ಯಮಯ ಹಸಿರಾಗಿ ಕಂಗೊಳಿಸಿತು. ಒಂದಷ್ಟು ಬಿದಿರು ಮೆಳ್ಳೆಗಳಿದ್ದವು. ಹೂ ಬಂದಾದ ಮೇಲೆ ಸತ್ತು ಹೋದವು. ನೈಸರ್ಗಿಕವಾಗಿ ಬಿದಿರು ಮೇಲೆದ್ದು ಬರಲು ಇನ್ನೂ ಸಮಯ ಬೇಕು. ಅಗಳದ ಪಕ್ಕದಲ್ಲಿ ಸುತ್ತಲೂ ರಸ್ತೆಯನ್ನು ನಿರ್ಮಾಣ ಮಾಡಲಾಯಿತು. ಈ ರಸ್ತೆಯಲ್ಲಿ ಒಂದು ಸುತ್ತು … Read more

ಇದೀಗ ನಮ್ಮದೇ ಕಥೆ .. : ಅನಿತಾ ನರೇಶ್ ಮಂಚಿ

                                   ಒಲೆಯ ಮೇಲೆ ಹಾಲು ಬಿಸಿಯಾಗುತ್ತಿತ್ತು. ಪಕ್ಕದ ಒಲೆಯಲ್ಲಿ ಸಿಡಿಯುತ್ತಿದ್ದ ಒಗ್ಗರಣೆಯಿಂದ  ಸಾಸಿವೆ ಕಾಳೊಂದು ಟಪ್ಪನೆ  ಸಿಡಿದು  ಹಾಲಿನ ಪಾತ್ರೆಯೊಳಗೆ ಬಿದ್ದಿತು..  ನೆಂಟರು ಬರುತ್ತಾರೆಂದೇ ಹೆಚ್ಚು ಹಾಲು ತರಿಸಿದ್ದೆ. ಒಗ್ಗರಣೆಯ ಸಾಸಿವೆಯಿಂದಾಗಿ ಬಿಸಿ ಹಾಲು ಒಡೆದರೆ..  ಚಮಚದಿಂದ ಮೆಲ್ಲನೆ ತೆಗೆಯೋಣ ಎಂದುಕೊಂಡೆ. ಸ್ವಲ್ಪ ಮೊದಲಷ್ಟೇ ಅದೇ ಚಮಚದಲ್ಲಿ ನಿಂಬೆಹಣ್ಣಿನ ಶರಬತ್ತಿನಲ್ಲಿದ್ದ ಬೀಜಗಳನ್ನು ಎತ್ತಿ ಬಿಸುಡಿದ್ದೆ.  … Read more

’ಕಪ್ಪು ಹಣ’ವೆಂಬ ಮಾಯಾಮೃಗದ ದರ್ಬಾರು…?: ವಿಜಯಕುಮಾರ ಎಮ್. ಕುಟಕನಕೇರಿ

ನಮ್ಮ ದೇಶದ ಆಡಳಿತ ವ್ಯವಸ್ಥೆಯು ಬೇಲಿಯೇ ಎದ್ದು ಹೊಲವನ್ನು ಮೇಯ್ದ ಹಾಗಿದೆ. ದೇಶದ ಪ್ರಜೆಗಳು ರಾಜಕೀಯ ಅಥವಾ ಯಾವುದೇ ಮೇಲ್ದರ್ಜೆಯ ಸರ್ಕಾರಿ ಹುದ್ದೆಯನ್ನು ಪಡೆದುಕೊಂಡ ತಕ್ಷಣ ಅಧಿಕಾರದ ಚುಕ್ಕಾಣಿ ಹಿಡಿದು, ಇಡಿ ಆಡಳಿತ ವ್ಯವಸ್ಥೆಯನ್ನೆ ತಮ್ಮ ಕಪಿ ಮುಷ್ಟಿಯಲ್ಲಿರಿಸಿಕೊಳ್ಳುವ ಸ್ವಾರ್ಥತೆ ಬೆಳೆಯುತ್ತಿದೆ. ಇದರ ಬೆನ್ನಲ್ಲೆ ಅಧಿಕಾರವನ್ನು ಹಿಡಿಯಲು ಕಾರಣೀಕರ್ತರಾದ ಜನತೆಗೆ ಕಡೆಗಣನೆಯ ಶಾಪ ತಟ್ಟುತ್ತಿದೆ. ಸಮಾಜದಲ್ಲಿ, ಭ್ರಷ್ಟ ಅಧಿಕಾರದ ದಬ್ಬಾಳಿಕೆಯಲ್ಲಿ ಭ್ರಷ್ಟಾಚಾರದ ಪರಮಾಧಿಕಾರ ತಲೆಯೆತ್ತಿ, ಅಭಿವೃದ್ಧಿಯ ಹೆಸರಿನಲ್ಲಿ ಪ್ರಜೆಗಳ ಹಿತಾಸಕ್ತಿಗೆ ಮುಸುಕು ಮೆತ್ತಿಕೊಳ್ಳುತ್ತಿದೆ. ದೇಶದ ಪ್ರಜೆಗಳಿಂದ ಅಕ್ರಮವಾಗಿ … Read more

ಅವನ ಪತ್ರ: ಪ್ರಾಣ್

ಹೇಗೆ ಕರೆಯಲಿ ಎಂದು ತಿಳಿಯದೆ ಹಾಗೆ ಶುರು ಮಾಡ್ತಾ ಇದ್ದೀನಿ. ಎಂದಿನಂತೆ 'ಮುದ್ದು' ಎಂದು ಕರೆಯೋಣ ಅಂದ್ಕೊಂಡೆ, ಅದ್ಯಾಕೋ ಹಾಗೆ ಕರೆಯಬೇಕು ಅನಿಸಲಿಲ್ಲ.  ಹೊರಡುವಿಕೆಯ ಹೊಸ್ತಿಲ ಬಳಿ  ನಿಂತು ಹಿಂತಿರುಗಿ ನಿನ್ನ ನೋಡಿ, ಹೇಳಲು ನಿಂತರೆ ಮತ್ತೆ ಹೋಗಬೇಕು ಅನಿಸೋದಿಲ್ಲ ! ಅದಕ್ಕೆ ಹಿಂದಕ್ಕೆ ತಿರುಗಿ ನೋಡದೆ ಹೊರಟಿದ್ದೀನಿ . ಆದರು ಹೊರಡುವ ಮುನ್ನ ನಿನಗೆ ಹೇಳದೆ ಹೋಗಬೇಕು ಅಂತ ಕೂಡ ಅನಿಸಲಿಲ್ಲ. ಬಹುಶಃ ಒಂದ್ಹತ್ತು ವರುಷವಾಗಿದೆಯಲ್ಲವೇ ನಮ್ಮಿಬ್ಬರ ಪರಿಚಯವಾಗಿ !? ಪರಿಚಯ ಗೆಳೆತನವಾಗಿ, ಗೆಳೆತನ ಅಭಿಮಾನವಾಗಿ, … Read more

ರಾಮಕುಂಜದಿಂದ ರಾಷ್ಟ್ರ ಪ್ರಶಸ್ತಿಯವರೆಗೆ: ಹೊರಾ.ಪರಮೇಶ್ ಹೊಡೇನೂರು

(ನಾರಾಯಣ ಭಟ್ ಶಿಕ್ಷಕರ ಯಶೋಗಾಥೆ) ************************* ಪ್ರತಿಯೊಬ್ಬರ ಬದುಕಿನಲ್ಲಿ ಪ್ರಭಾವ ಬೀರುವ ವ್ಯಕ್ತಿಗಳಲ್ಲಿ ತಾಯಿ ತಂದೆಯರದ್ದು ಒಂದು ರೀತಿಯದಾದರೆ, ಗುರುವಿನದ್ದು ಮತ್ತೊಂದು ಬಗೆಯದ್ದಾಗಿರುತ್ತದೆ. ಹೆತ್ತವರು ದೈಹಿಕ ಮತಾತು ಮಾನಸಿಕ ಸದೃಢತೆ ಸುರಕ್ಷತೆ ಮತ್ತು ಪೋಷಣೆಯ ಹೊಣೆ ನಿರ್ವಹಿಸಿದರೆ ಗುರುವು ಬೌದ್ಧಿಕ ಜ್ಞಾನ, ಅಕ್ಷರಾಭ್ಯಾಸದ ಜೊತೆಗೆ ಬದುಕಿಗೆ ಬೇಖಾದ ಮಾರ್ಗದರ್ಶನವನ್ನು ಒದಗಿಸುತ್ತಾರೆ. ಹಾಗಾಗಿಯೇ ಗುರುವಿನ ಸ್ಥಾನವು ಸಹಜವಾಗಿ ಸಮಾಜದಿಂದ ಗೌರವಕ್ಕೆ ಪಾತ್ರವಾಗುತ್ತದೆ. ಸ್ಥಾನ ಮಾತ್ರದಿಂದಲೇ ಗೌರವ ಪಡೆಯುವುದು ಒಂದು ರೀತಿಯದಾದರೆ, ವೃತ್ತಿ ನಿರ್ವಹಣಿಯ ವೈಖರಿಯಿಂದಲೂ ನಿಸ್ಪೃಹ ನಡತೆಯಿಂದಲೂ ಗುರುವಿಗೆ … Read more

ವರದಾಮೂಲ: ಪ್ರಶಸ್ತಿ

ಪ್ರೇಕ್ಷಣೀಯ ಸ್ಥಳಗಳ ಬಗ್ಗೆ ಹೆಚ್ಚಿನ ಮಾಹಿತಿ ಮತ್ತು ಚಿತ್ರಗಳ ಮಾಹಿತಿ ಕಲೆಹಾಕಿ ಅದನ್ನು ವಿಕಿಪೀಡಿಯಾದಲ್ಲಿ ಎಲ್ಲರಿಗೂ ತಲುಪುವಂತೆ ದಾಖಲಿಸೋ ಒಂದು ಕಾರ್ಯಕ್ರಮ ವಿಕಿಪೀಡಿಯಾ ಫೋಟೋವಾಕ್.ಸಾಗರದಲ್ಲಿ ಈ ಕಾರ್ಯಕ್ರಮವನ್ನು ಮಾಡಬೇಕೆಂದುಕೊಂಡಾಗ ನಾವು ಅದನ್ನು ಶುರುಮಾಡಿದ್ದು ವರದಾಮೂಲದಿಂದ. ವರದಾಮೂಲವೆನ್ನೋ ಸ್ಥಳದ ಬಗ್ಗೆ ಸಾಗರದ ಸುತ್ತಮುತ್ತಲಿನವರಿಗೆ ಹೊಸದಾಗಿ ಹೇಳೋ ಅವಶ್ಯಕತೆಯಿಲ್ಲದಿದ್ದರೂ ಈ ಭಾರಿಯ ಭೇಟಿಯಲ್ಲಿ ಸಿಕ್ಕ ಒಂದಿಷ್ಟು ಆಸಕ್ತಿಕರ ಮಾಹಿತಿಯನ್ನು ಹಂಚಿಕೊಳ್ಳಲೇಬೇಕೆಂಬ ಹಂಬಲ ಹುಟ್ಟಿದ್ದು ಸಹಜ. ಅದರ ಫಲವೇ ಈ ಲೇಖನ.  ಹೋಗೋದು ಹೇಗೆ ?  ವರದಾಮೂಲಕ್ಕೆ ಸಾಗರದಿಂದ ೬ ಕಿ.ಮೀ. … Read more