ಅಡೆತಡೆಗಳನ್ನು ದಾಟಿ ಸವಾಲುಗಳನ್ನು ಮೆಟ್ಟಿ ನಿಂತಲ್ಲಿ: ಪ್ರಭಾಕರ ತಾಮ್ರಗೌರಿ

  ಇಂದು ದೇಶದಲ್ಲಿ ಎಷ್ಟೊಂದು ವಿಕಲಾಂಗ ಚೇತನರಿದ್ದಾರೆ. ಕಣ್ಣಿಲ್ಲ, ಮೂಗಿಲ್ಲ, ಮಾತನಾಡಬೇಕೆಂದರೆ ಬಾಯಿಇಲ್ಲ.ಎದ್ದು ನಡೆದಾಡಬೇಕೆಂದರೆ ಕಾಲು ಇಲ್ಲ. ಏನಾದರೂ ಕೆಲಸ ಮಾಡಬೇಕೆಂದರೆ ಕೈ ಇಲ್ಲ. ಇಂಥವರನ್ನ ನೋಡಿದರೆ ಪಾಪ ಅಯ್ಯೋ ಅನ್ನಿಸುತ್ತೆ. ಇವರನ್ನ ನೋಡಿದರೆ ಅಂತಃಕರಣ ಜುಂ ಎನ್ನುತ್ತದೆ. ಚಿಕ್ಕ ವಯಸ್ಸಿನಲ್ಲಿ ಅಂಗ ವೈಫಲ್ಯದಿಂದ ಬಳಲುತ್ತಿರುವ ಈ ಮಕ್ಕಳು ಆದಾರೋಪಕ್ಕೆ ಬಲಿಯಾದವೋ ಗೊತ್ತಿಲ್ಲ…? ಎಲ್ಲ ಮಕ್ಕಳಂತೆ  ಇವರು ಬಾಲ್ಯದ ಸುಮಧುರ ಜೀವನ ಕಳೆಯಬೇಕಾಗಿದ್ದ ಈ ಮಕ್ಕಳು ಎಲ್ಲವುಗಳಿಂದ ವಂಚಿತರಾಗಿ ಬದುಕು ಸಾಗಿಸುತ್ತಿದ್ದಾರೆ. ಅಂಗ ವೈಫಲ್ಯದಿಂದ ಬಳಲುತ್ತಿದ್ದಾರೆ. ಇದು … Read more

ಪಶ್ಚಿಮ ಘಟ್ಟಗಳ ಸ್ಥಿತಿ-ಗತಿ – ಅವಲೋಕನ: ಅಖಿಲೇಶ್ ಚಿಪ್ಪಳಿ

ಇತ್ತೀಚಿನ ದಿನಗಳಲ್ಲಿ ಪತ್ರಿಕೋಧ್ಯಮದಲ್ಲಿ ಹೊಸ ತಲೆಮಾರು ಸೃಷ್ಟಿಯಾಗುತ್ತಿದೆ. ಆದರೆ ಸಾರವುಳ್ಳ ಮಾಹಿತಿಗಳು ಲಭ್ಯವಾಗುತ್ತಿಲ್ಲ. ನವಂಬರ್ ಮತ್ತು ಡಿಸೆಂಬರ್ ೨೦೧೪ರ ತಿಂಗಳಲ್ಲಿ ಸಾಗರಕ್ಕೆ ಪತ್ರಿಕೋಧ್ಯಮದ ಹಿರಿಯ ದಿಗ್ಗಜರಿಬ್ಬರು ಆಗಮಿಸಿದ್ದರು. ನವಂಬರ್ ೩೦ರಂದು ಪ್ರಜಾವಾಣಿಯಲ್ಲಿ ಕಾರ್ಯನಿರ್ವಹಿಸಿದ ಶ್ರೀ ದಿನೇಶ್ ಅಮಿನ್‌ಮಟ್ಟು ಹಾಗೂ ಡಿಸೆಂಬರ್ ೧೧ರಂದು ಶ್ರೀ ನಾಗೇಶ ಹೆಗಡೆ. ಪ್ರಸ್ತುತ ಪತ್ರಿಕೋಧ್ಯಮದ ವಿಷಯದಲ್ಲಿ ಈರ್ವರ ಅಭಿಪ್ರಾಯವು ಹೆಚ್ಚು-ಕಡಿಮೆ ಹೋಲುತ್ತಿದ್ದವು. ದಿನೇಶ್ ಅಮಿನ್‌ಮಟ್ಟು ಹೇಳಿದ್ದು, ನಮ್ಮ ಕಾಲದಲ್ಲಿ ಪತ್ರಿಕೋಧ್ಯಮಕ್ಕೆ ಬೇಕಾದ ತಯಾರಿ ಇರುತ್ತಿತ್ತು ಆದರೆ ಆತ್ಮವಿಶ್ವಾಸದ ಕೊರತೆ ಕಾಡುತ್ತಿತ್ತು. ಈಗಿನ ಪತ್ರಿಕೋಧ್ಯಮದಲ್ಲಿ … Read more

ಸಾಮಾನ್ಯ ಜ್ಞಾನ (ವಾರ 58): ಮಹಾಂತೇಶ್ ಯರಗಟ್ಟಿ

ಪ್ರಶ್ನೆಗಳು: ೧.    ಬಿಎಮ್‌ಟಿಸಿ ಕೊಡುಮಾಡುವ ನೃಪತುಂಗ ಪ್ರಶಸ್ತಿಯನ್ನು ಇತ್ತೀಚೆಗೆ ಯಾರಿಗೆ ನೀಡಲಾಯಿತು? ೨.    ೧೨ನೇ ಅಖಿಲಭಾರತ ಶರಣ ಸಾಹಿತ್ಯ ಸಮ್ಮೇಳನ ಇತ್ತೀಚೆಗೆ ಎಲ್ಲಿ ನಡೆಯಿತು? ೩.    ಇತ್ತೀಚೆಗೆ ಅಮೇರಿಕಾ ವೈದ್ಯಕೀಯ ನಿರ್ದೇಶಕರಾಗಿ ಆಯ್ಕೆಯಾದ ಭಾರತದ ಪ್ರಥಮ ವ್ಯಕ್ತಿ ಯಾರು? ೪.    ಇಸ್ರೋ ಇತೀಚಿಗೆ ಯಾವ ಬಾಹ್ಯಾಕಾಶ ಕೇಂದ್ರದಿಂದ ಜಿ.ಎಸ್.ಎಲ್.ವಿ ಮಾರ್ಕ್ – ೩ ರಾಕೆಟ್‌ನ್ನು ಉಡಾವಣೆ ಮಾಡಲಾಯಿತು? ೫.    ಪೆರಿಯಾರ್ ಅಭಯಾರಣ್ಯ ಯಾವ ಪ್ರಾಣಿಗೆ ಹೆಸರಾಗಿದೆ? ೬.    ಐಶ್ವರ್ಯ ರೈ ಮೇಣದ ಪ್ರತಿಮೆ ಲಂಡನ್‌ನ ಯಾವ ಮ್ಯೂಸಿಯಂನಲ್ಲಿದೆ? … Read more

ಟೀ, ಕಾಫಿ ಮಾರುವ ಹುಡುಗ: ನಟರಾಜು ಎಸ್. ಎಂ.

ನಮ್ಮ ಕಥಾನಾಯಕ ರವಿ ಕಳೆದ ದೀಪಾವಳಿಯ ವೇಳೆ ತನ್ನವ್ವನಿಗೆ ಟೂರಿಗೆ ಹೋಗಿ ಬರುತ್ತೇನೆಂದು ಹೇಳಿ ನಾಲ್ಕೈದು ದಿನ ನಾಪತ್ತೆಯಾಗಿದ್ದ. ಮಧ್ಯೆ ಮಧ್ಯೆ ಮನೆಗೆ ಫೋನ್ ಮಾಡಿ ತಾನು ಎಲ್ಲಿದ್ದೇನೆ ಯಾವಾಗ ಮನೆಗೆ ಬರುತ್ತೇನೆ ಎಂಬುದನ್ನು ಅವನು ಹೇಳುತ್ತಿದ್ದ ಕಾರಣ ಮನೆಯವರಿಗೆ ಹಬ್ಬದ ಸಮಯದಲ್ಲಿನ ಅವನ ಟೂರಿನ ಉದ್ದೇಶದ ಅರಿವಾಗಿರಲಿಲ್ಲ. ಟೂರಿನಿಂದ ಮನೆಗೆ ವಾಪಸ್ಸು ಬಂದವನು ಒಂದು ದಿನ ರಾತ್ರಿ ಅವ್ವನ ಎದುರು ಬಿಕ್ಕಿ ಬಿಕ್ಕಿ ಅತ್ತುಬಿಟ್ಟಿದ್ದ. ಆತನ ದುಃಖದ ಹಿಂದಿನ ಸತ್ಯ ಮತ್ತು ಆ ಟೂರಿನ ಉದ್ದೇಶ ರವಿಯ … Read more

ವಿಮಾನಾಲಯ ಅಂದ್ರ ಏನ್ ಮೀನಿಂಗು?: ಗುರುಪ್ರಸಾದ ಕುರ್ತಕೋಟಿ

(ಇಲ್ಲಿಯವರೆಗೆ…) ವೆಂಕಣ್ಣನನ್ನು ಅವನ ಕಂಪನಿಯವರು ಅಮೆರಿಕಾಕ್ಕೆ ಕಳಿಸುವ ನಿರ್ಧಾರ ಮಾಡುತ್ತಾರೆ. ಹೆಂಡತಿ, ಮಗಳನ್ನೂ ಜೊತೆಗೆ ಕರೆದೊಯ್ಯುವ ನಿರ್ಧಾರ ಮಾಡಿ ಅವರಿಗೆ ವೀಸಾ ಮಾಡಿಸಲು ಚೆನ್ನೈಗೆ ಹೋಗುತ್ತಾನೆ. ವಿಸಾ ಕೊಡುವದಕ್ಕೆ ಅಮೇರಿಕದವರು ಕಾಡಿಸುವ ರೀತಿಗೆ ಬೇಸತ್ತು,  ಆ ದೇಶಕ್ಕೆ ಹೋಗುವುದೇ ಬೇಡ ಅನ್ನುವ ನಿರ್ಧಾರ ಮಾಡುತ್ತಾನಾದರೂ ಹೆಂಡತಿ ಮಗಳಿಗೋಸ್ಕರ ನಿರ್ಧಾರ ಬದಲಿಸುತ್ತಾನೆ.  ಮುಂದೆ ಓದಿ… ) ಮೊದಲೆಲ್ಲಾ ವಿದೇಶ ಪ್ರಯಾಣ ಮಾಡುವವರ ದೊಡ್ಡದೊಂದು ಫೋಟೊ ಪೇಪರಿನಲ್ಲಿ ಹಾಕಿಸಿ, ಅವರಿಗೆ ಬಂಧು ಮಿತ್ರರು ಶುಭ ಕೋರುತ್ತಿದ್ದರು. ಅದು ಯಾಕೆ ಹಾಗೆ … Read more

ಅರ್ಥವಿಲ್ಲ ತತ್ವವಿಲ್ಲ ಅಸಂಗತವೆ ಸತ್ವವೆಲ್ಲ: ಸಚೇತನ

ಅಸಂಗತವಾಗಿರುವ ಕಥೆ ಅಥವಾ ಸಿನಿಮಾಕ್ಕೆ  ಅದೃಶ್ಯವಾದ ಶಕ್ತಿಯೊಂದಿದೆ. ಅಸಂಗತ ಸಾಹಿತ್ಯಕ್ಕೆ ತಂತ್ರ, ಹೆಣೆದ ಬಲೆಯಂತ ಉದ್ದೇಶಪೂರಿತ ಕಥಾವಸ್ತು, ಕಥಾವಸ್ತುವಿಗೊಂದು ಕೊನೆ, ಕೊನೆಯಾಗುವದಕ್ಕೆ  ಒಂದು ತಿರುವು, ರೋಚಕತೆ, ಕೊನೆಯಾಗಿದ್ದಕ್ಕೆ ಒಂದು ನೀತಿ ಇವ್ಯಾವುದು ಇಲ್ಲ.  ಬಹುತೇಕ ಸಲ ಅಸಂಗತ ಕಥಾಲೋಕದಲ್ಲಿ  ನಮ್ಮ ಕಲ್ಪನೆಗೆ ನಿಲುಕಿರದ  ಘಟನೆಗಳು ನಡೆಯುವದು, ಮಾತುಗಳು ಕೇಳಲ್ಪಡುವದು ಸಾಮಾನ್ಯ.  ಅಸಂಗತತೆ ತನ್ನನ್ನು ತಾನು  ಓದುಗ ಅಥವಾ ಕೇಳುಗ ಅಥವಾ ನೋಡುಗನ ದೃಷ್ಟಿ, ಕಲ್ಪನೆ, ತೀರ್ಮಾನಕ್ಕೆ  ಒಪ್ಪಿಸಿಕೊಂಡಿರುತ್ತದೆ.  ಸ್ಪಷ್ಟವಾಗಿ ಹೇಳಿರದ, ಪ್ರಕಟವಾಗಿ ಬಿಚ್ಚಿಟ್ಟಿರದ ಅರ್ಥವೊಂದು ನಮ್ಮಲ್ಲಿ ಹುಟ್ಟುವಂತೆ … Read more

ಸಚಿನ್ ನಾಯ್ಕ ಅಂಕೋಲ: ಸಚಿನ್ ನಾಯ್ಕ ಅಂಕೋಲ

ನನ್ನ ಕನಸುಗಳೆಲ್ಲವ ತನ್ನದೇ ಎಂಬಂತೆ ಸಲಹುತ್ತಿರುವ ನಿನಗಾಗಿ….                                                                     ನಿನ್ನವನಿಂದ…. ಕಿಟಕಿಯಿಂದ ತೂರಿ ಬರುವ ತಂಗಾಳಿ ಕಿವಿಯಲ್ಲಿ ನೀನು ಪಿಸುಗುಟ್ಟಿದಂತಿದೆ….!! ಆಗಾಗ ಸಿಗುವ  ಹಗಲಲ್ಲೂ ಕತ್ತಲ ನೆನಪ ತರುವ ಅಷ್ಟೇ … Read more

ಬಂಟ ಮಲೆಯೆಂಬ ಬದುಕ ತಾಣ. . .: ಸ್ಮಿತಾ ಅಮೃತರಾಜ್

ಜನ ನಿಬಿಡ ಪ್ರದೇಶದಲ್ಲಿ, ಉಸಿರುಕಟ್ಟಿಸುವ ಪ್ಲಾಟ್ ಗಳಲ್ಲಿ ವೇಗದ ಬದುಕಿಗಂಟಿದ ಜನ ಅಷ್ಟೇ ಏದುಸಿರು ಬಿಟ್ಟುಕೊಂಡು ಓಡುತ್ತಿದ್ದಾರೆ. ಎಲ್ಲರೂ ಅವರವರ ಬದುಕಿಗಷ್ಟೇ ಸೀಮಿತವಾಗುತ್ತಿರುವ ಈ ಸಂಕುಚಿತ ಕಾಲಗಟ್ಟದಲ್ಲಿ ಎಲ್ಲರೂ ತಳಕು ಬಳುಕಿನ ಮೋಹಕ್ಕೊಳಗಾಗಿ ನಗರವಾಸಿಗಳಾಗುತ್ತಿದ್ದಾರೆ. ನಗರದ ಸೆಳೆತವೇ ಅಂತದ್ದು. ನಮ್ಮ ನರನಾಡಿಗಳಲ್ಲಿ ಅದಮ್ಯ ತೀರದ ಹುಚ್ಚು ಹತ್ತಿಸಿ, ಗಕ್ಕನೆ ಮಾಯಾವಿಯಂತೆ ನಮ್ಮನ್ನು ಅದರ ಕದಂಬ ಬಾಹುಗಳಲ್ಲಿ ಬಂಧಿಸಿಕೊಂಡು, ಬದುಕಿರುವವರೆಗೂ ವಿಲವಿಲನೇ ಒದ್ದಾಡಿಸಿ ಬಿಡುತ್ತದೆ. ಇಂತಹ ಹೊತ್ತಲ್ಲಿ ಹಳ್ಳಿಗಳೂ ನಗರಗಳಾಗುವ ಕನಸು ಹೊತ್ತು ಸಾಗುತ್ತಿವೆ. ಹಳ್ಳಿಯೆಂಬ ಕಲ್ಪಿತ ಚಿತ್ರಣವೇ … Read more

ಕಾಲೇಜು ದಿನಗಳ ವಾಕಿಂಗ್: ಅಕ್ಷಯ ಕಾಂತಬೈಲು

ನನ್ನ ಇಂಜಿನಿಯರಿಂಗ್ ಕಲಿಕೆಯ ದಿನಗಳವು; ಅಸೈನ್ಮೆಂಟ್ ಬರೆಯದ್ದರಿಂದ, ಕ್ಲಾಸಿಗೆ ತಡವಾಗಿ ಹಾಜರಾಗುತ್ತಿದ್ದ ಕಾರಣ, ಲ್ಯಾಬ್ ರೆಕಾರ್ಡ್ ಸಮಯಕ್ಕೆ ಸರಿಯಾಗಿ ಕೊಡದ್ದರಿಂದ ಲೆಕ್ಚರರ ಕೈಯಲ್ಲಿ ನಾನು ಸಿಕ್ಕಾಪಟ್ಟೆ ಉಗಿಸಿಕೊಳ್ಳುತ್ತಿದ್ದೆನು. ನನ್ನೀ ಉದಾಸೀನತೆ ಅತಿರೇಕ ತಲುಪಿ ಲೆಕ್ಚರುಗಳು ಕ್ಲಾಸಿನಿಂದ ಉಚ್ಚಾಟನೆ ಮಾಡಿದ ಪ್ರಸಂಗವೂ ಬೇಜಾನ್ ಇದೆ. ಕಾಲೇಜಿನಲ್ಲಿ ಚೆಂದಮಾಡಿ ಬೈಗುಳ ಉಂಡು ಸಂಜೆ ಹೊತ್ತು ರೂಂಗೆ ಹಿಂತಿರುಗಿದಾಗ ಆ ದಿನದ ನಿರ್ವಹಣೆಯ ಬಗೆಗೆ ನನ್ನ ಮೇಲೆ ನನಗೇ ಬೇಸರ ಮೂಡುತ್ತಿತ್ತು. ಮನಸಿಗೆ ಮೂಡಿದ ಬೇಸರವ ಕಳೆಯಲು ಮಿತ್ರ -ಶಿವಕುಮಾರನ ಜೊತೆ … Read more

ತಿರಸ್ಕಾರ (ಭಾಗ 4): ಜೆ.ವಿ.ಕಾರ್ಲೊ, ಹಾಸನ

’ರಾಕ್ಷಸರು. ಪಾಪ ಹುಡುಗಿ!’ ಅವಳು ಅನುಕಂಪ ವ್ಯಕ್ತಪಡಿಸಿದಳು. ಒಬ್ಬ ಮಿಡ್‌ವೈಫಳ ವಿಳಾಸವನ್ನು ಕೊಟ್ಟು ’ನಾನು ಕಳುಹಿಸಿದೆ ಎಂದು ಹೇಳಿ’ ಎಂದಳು. ಮಿಡ್‌ವೈಫ್ ಯಾವುದೋ ಔಷದವನ್ನು ಕೊಟ್ಟಳು. ಅದರಿಂದ ಏನೂ ಪ್ರಯೋಜನವಾಗಲಿಲ್ಲ. ಆನ್ನೆಟ್ ಮತ್ತೂ ಕಾಹಿಲೆ ಬಿದ್ದಳು. ಗರ್ಭ ಬೆಳೆಯುತ್ತಲೇ ಹೋಯ್ತು. ಮೇಡಮ್ ಪೆರಿಯೆರ್‌ಳ ವೃತ್ತಾಂತವನ್ನು ಕೇಳಿದ ಹ್ಯಾನ್ಸ್ ಅರೆಗಳಿಗೆ ಸ್ತಬ್ಧನಾದ. ನಂತರ, ’ನಾಳೆ ಭಾನುವಾರ. ನಾವು ಪುರುಸೊತ್ತಾಗಿ ಕುಳಿತು ಮಾತನಾಡುವ.’ ಎಂದ. ’ನಮ್ಮಲ್ಲಿ ಹೊಲಿಯಲು ಸೂಜಿಗಳಿಲ್ಲ! ಮತ್ತೆ ಬರುವಾಗ ತರುವೆಯಾ?’ ಮೇಡಮ್ ಪೆರಿಯೆರ್ ಕೇಳಿದಳು. ’ಪ್ರಯತ್ನ ಮಾಡುತ್ತೇನೆ … Read more

ಮೂವರ ಕವಿತೆಗಳು: ಶೋಭಾಶಂಕರ್, ವಿನಾಯಕ ಭಟ್, ಶ್ರೀಕಾಂತ ಧಾರವಾಡ.

ಜಿ ಎಸ್ ಎಸ್ ಎದೆ ತುಂಬಿ ಹಾಡಿದ ಕವಿ ನವೋದಯದ ಸಮನ್ವಯ ಋಷಿ ಕನ್ನಡಿಗರ ಮನಸ ಗೆದ್ದ ಭಾವಜೀವಿ     ಇರುವಷ್ಟು ಕಾಲದಿ ಎದೆ ತುಂಬಿ ಮನತುಂಬಿ ತನು ತುಂಬಿ ಹಾಡಿದಾ ಕವಿ ಇಲ್ಲದ ದೇವರ ಹುಡುಕದೆ ಕಲ್ಲು ಮಣ್ಣುಗಳ ಗುಡಿಯೊಳಗೆ ಇಲ್ಲೇ ಇರುವ ಪ್ರೀತಿ-ಸ್ನೇಹಗಳ ಹೊಸೆದು  ದೇವರ ದರ್ಶನ ತೋರಿದ ದಾರ್ಶನಿಕ ಕವಿ ಹಾಡು ಹಳೆಯದಾದರೇನು ಭಾವ ನವನವೀನ ಎನಿಸಿ ಎಂದೆಂದಿಗೂ ಮರೆಯದ ಕಾವ್ಯ ಸೃಷ್ಟಿಸಿ ತುಂಬಿದರು ಬತ್ತದ ಅನಂತ ಜೀವನೋತ್ಸಾಹ!! ಹೂವು ಅರಳೀತು ಹೇಗೆ ಪ್ರೀತಿ … Read more

ನಾಝ್ಕಾ ಗೆರೆಯ ವಿರೂಪ: ಅಖಿಲೇಶ್ ಚಿಪ್ಪಳಿ

ದಿನಾಂಕ:೧೧/೧೨/೨೦೧೪ರ ಗುರುವಾರ ಸಂಜೆ ಸಾಗರದಲ್ಲಿ ಒಟ್ಟು ಮೂರು ಪುಸ್ತಕಗಳು ಒಂದೇ ವೇದಿಕೆಯಲ್ಲಿ ಬಿಡುಗಡೆಗೊಂಡವು. ಶ್ರೀ ನಾಗೇಶ ಹೆಗಡೆಯವರ ನರಮಂಡಲ ಬ್ರಹ್ಮಾಂಡ, ಶ್ರೀ ಆನಂದ ತೀರ್ಥ ಪ್ಯಾಟಿಯವರ ಅಹಾ ಇಸ್ರೇಲಿ ಕೃಷಿ ಹಾಗೂ ನನ್ನದೇ ಆದ ಜೋಗದ ಸಿರಿ ಕತ್ತಲಲ್ಲಿ. ಇದೇ ಹೊತ್ತಿನಲ್ಲಿ ಪೆರು ದೇಶದ ಲಿಮಾದಲ್ಲಿ ೧೯೦ ದೇಶಗಳ ಧುರೀಣರು ಒಟ್ಟು ಸೇರಿ ಭೂಬಿಸಿಯನ್ನು ನಿಯಂತ್ರಿಸುವ ಕುರಿತು ೧೧ನೇ ದಿನದ ಗಂಭೀರ ಚರ್ಚೆ ನಡೆಸುತ್ತಿದ್ದರು, ಒಟ್ಟು ಹನ್ನೆರೆಡು ದಿನ ನಡೆದ ಈ ಜಾಗತಿಕ ಸಮಾವೇಶದಲ್ಲಿ ಭೂಬಿಸಿಗೆ ಕಾರಣವಾಗುವ … Read more

ಒಂದು ಕಾಗದದ ಕತೆ: ಪ್ರಶಸ್ತಿ

ನಮಸ್ಕಾರ. ನಾನ್ಯಾರು ಅಂದ್ರಾ ? ಚಿಗುರಾಗಿ, ಮರವಾಗಿ , ಬೊಡ್ಡೆಯಾಗಿ, ಕಾರ್ಖಾನೆಯ ಅಸಂಖ್ಯ ರಾಸಾಯನಿಕಗಳ ಸಾಗರದಿ ಈಜಾಡಿ ಕೊನೆಗೂ ಪೇಪರ್ರೆಂಬ ಹೆಸರು ಪಡೆದ ಜೀವ ನಾನು. ಹೊರಜಗತ್ತ ಕಾಣೋ ನನ್ನ ಕನಸ ದಿನ ಕೊನೆಗೂ ನನಸಾಗಲಿದೆ. ನನ್ನಂತೇ ಇರೋ ಅದೆಷ್ಟೋ ಜನರನ್ನು ಒಂದು ಕಟ್ಟು ಹಾಕಿ ಚೆಂದದ ಹೊದಿಕೆ ಹೊದಿಸಿ ಇಟ್ಟಿದ್ದಾರೆ. ಹೊರಜಗತ್ತಿನ ಕತೆ ಕೇಳುತ್ತಲೇ ಬದುಕ ಹಲಹಂತ ದಾಟಿದ ನಮ್ಮ ಮುಂದಿನ  ಗಮ್ಯವೆಲ್ಲಿಗೋ ಗೊತ್ತಿಲ್ಲ. ಕಾಗದವೆಂದ್ರೆ ಸರಸ್ವತಿಯ ರೂಪವೆಂದು ಪೂಜಿಸುತ್ತಿದ್ದ ದಿನಗಳಿದ್ದವಂತೆ. ಬರಹವೆಂದರೆ ಪಾಠಿ-ಬಳಪ, ಕಾಗದವೆಂದರೆ … Read more

ಗೊತ್ತಿಲ್ಲದ ನಿನ್ನ ಬಗೆಗೊಂದಿಷ್ಟು: ಪದ್ಮಾ ಭಟ್

ನಿನ್ನ ಬಗ್ಗೆ ಏನಾದರೂ ಬರೀಲೇಬೇಕು.. ಬರೀತಾನೇ ಇರ್ತೀನಿ. ತುಂಬಾತುಂಬಾ ಯೋಚಿಸ್ತೀನಿ.. ಸ್ನೇಹಿತೆಯರ ಗುಂಪಿನಲ್ಲಿ ಕನಸನ್ನು ಹಂಚಿಕೊಂಡು ಒಮ್ಮೆಲೇ ತಲೆಯನ್ನು ಕೆಳಗೆ ಮಾಡಿ ಮುಖ ಕೆಂಪಗೆ ಮಾಡಿಕೊಳ್ಳುತ್ತೀನಿ.. ಪ್ರೀತಿ ಪ್ರೇಮಗಳ ಬಗ್ಗೆ ಚಿಕ್ಕ ಚಿಕ್ಕ ಕವನಗಳನ್ನು ಬರೆದಾಗ ಎಷ್ಟೋ ಜನರು ಕೇಳಿದ್ದುಂಟು..ನಿಂಗೆ ಲವರ್ ಇಲ್ವಾ? ಅಂತ. .ಇಲ್ಲಾ ಎಂದು ನಿಜವನ್ನೇ ಹೇಳಿದ್ದೇನೆ.. ನೀನು ಯಾರೆಂದೇ ಗೊತ್ತಿಲ್ಲ ನೋಡು ನಂಗೆ..ಎಲ್ಲಿದ್ದೀಯೋ, ಹೇಗಿದ್ದೀಯೋ ಏನ್ ಮಾಡಾ ಇದ್ದೀಯೋ..ಒಂದೂ ಗೊತ್ತಿಲ್ಲ ನಿ॒ನ್ನ ಬಗ್ಗೆ ಸಾಸಿವೆಯಷ್ಟೂ ಗೊತ್ತಿಲ್ಲ ಮುಂದೆ ನೀನೆಂದೋ  ಬರುವೆಯಲ್ಲ..ನಿನ್ನ ಜೊತೆಗೆ ಬದುಕನ್ನು … Read more

ಸಾಮಾನ್ಯ ಜ್ಞಾನ (ವಾರ 57): ಮಹಾಂತೇಶ್ ಯರಗಟ್ಟಿ

ಪ್ರಶ್ನೆಗಳು: ೧.    ಇತ್ತೀಚಿಗೆ ಕರ್ನಾಟಕ ರಾಜ್ಯ ಲೇಖಕಿಯರ ಸಂಘಕ್ಕೆ ಅಧ್ಯಕ್ಷೆಯಾಗಿ ಆಯ್ಕೆಯಾದವರು ಯಾರು? ೨.    ಇತ್ತೀಚಿಗೆ ಚಿಕ್ಕಮಗಳೂರು ಜಿಲ್ಲಾಧಿಕಾರಿ ಸಮ್ಮುಖದಲ್ಲಿ ಶರಣಾದ ನಕ್ಸಲ್ ನಾಯಕರು ಯಾರು? ೩.    ವಿಧಿವಿಧಾನ ವೇದವೆಂದು ಯಾವ ವೇದವನ್ನು ಕರೆಯಲಾಗಿದೆ? ೪.    ಜಗತ್ತಿನ ಅತಿದೊಡ್ಡ ವಿಷ್ಣುದೇವಾಲಯ ಯಾವ ದೇಶದಲ್ಲಿದೆ? ೫.    ಜಲಾಂತರ್ಗಾಮಿ ಯೊಳಗಿನಿಂದ ಸಮುದ್ರ ಮೇಲ್ಮೈಯಲ್ಲಿರುವ ವಸ್ತುಗಳನ್ನು ನೋಡಲು ಬಳಸುವ ಉಪಕರಣ ಯಾವುದು? ೬.    ತೋಟಗಾರಿಕಾ ವಿಜ್ಞಾನಿಗಳ ವಿಶ್ವವಿದ್ಯಾನಿಲಯ  ಕರ್ನಾಟಕದ ಯಾವ ಜಿಲ್ಲೆಯಲ್ಲಿದೆ? ೭.    ಗೇಟ್ (gate) ನ ವಿಸ್ತೃತ ರೂಪವೇನು? ೮.   … Read more

ನಿಮ್ಮ ಗಮನಕ್ಕೆ

ಪ್ರಕಟಣೆ 1 ಜ್ಞಾನಡಮರು ಪ್ರಕಾಶನವು ದ್ವಿತೀಯ  ವರ್ಷ ಪೂರೈಸಿದ ಸವಿನೆನಪಿಗಾಗಿ ಸಹಕಾರ ತತ್ವದಡಿಯಲ್ಲಿ ರಾಜ್ಯಮಟ್ಟದ ಚೌಪದಿಗಳ ಅಪೂರ್ವ ಸಂಕಲನ ಹೊರತರಲು ಚಿಂತನೆ ನಡೆಸಿದ್ದು, ಆಸಕ್ತ  ಹಿರಿಯ-ಕಿರಿಯ ಕವಿಗಳು ಸ್ವರಚಿತ  ೬ ಚೌಪದಿಗಳನ್ನು ಮೊಗೇರಿ ಶೇಖರ ದೇವಾಡಿಗ ಸಂಪಾದಕರು ಜ್ಞಾನಡಮರು ಪ್ರಕಾಶನ, ಮೊಗೇರಿ ಕೆರ್ಗಾಲ್ (ಅಂಚೆ) ಕುಂದಾಪುರ ತಾಲೂಕು, ಉಡುಪಿ ಜಿಲ್ಲೆ-೫೭೬೨೧೯ ಮೊ: ೯೯೧೬೧೮೦೪೯೫ ಈ ವಿಳಾಸಕ್ಕೆ ಮಾರ್ಚ್ ೨೮ ೨೦೧೫ ರೊಳಗೆ ೨ ಸ್ವವಿಳಾಸ ಬರೆದ ಅಂಚೆ ಲಕೋಟೆಯನ್ನು ಲಗತ್ತಿಸಿ ಕಳುಹಿಸಲು ಕೋರಲಾಗಿದೆ. ಇ-ಅಂಚೆ ಮೂಲಕ  ಕಳುಹಿಸುವವರು … Read more

ಊಟಕ್ಕೇನು?: ಅನಿತಾ ನರೇಶ್ ಮಂಚಿ

’ನಾಯಿ ಮರಿ ನಾಯಿ ಮರಿ ತಿಂಡಿ ಬೇಕೇ?’ ಅನ್ನೋ ಪದ್ಯ ಎಲ್ಲರಿಗೂ ತಿಳಿದಿದೆ. ಅದರಲ್ಲಿ ನಾಯಿ ಮರಿಯನ್ನು ’ನಾಯಿ ಮರಿ ನಿನಗೆ ತಿಂಡಿ ಏಕೆ ಬೇಕು’  ಎಂದು ಕೇಳಿದಾಗ ಅದು ’ತಿಂದು ಗಟ್ಟಿಯಾಗಿ ಮನೆಯ ಕಾಯಬೇಕು’ ಎಂಬ ಉತ್ತರ ನೀಡುತ್ತದೆ ಅಲ್ವಾ..! ಅಂದರೆ ನಾಯಿ ಮರಿಗೂ ಆಹಾರ ಎಂದರೆ  ಹೊಟ್ಟೆ ತುಂಬಲು, ಶರೀರವನ್ನು ಪೋಷಿಸಲು ಇರುವಂತಹುದು ಎಂದು ತಿಳಿದಿದೆ ಎಂದಾಯಿತಲ್ಲ.  ಆದರೆ ನನ್ನಂತ ಹುಲು ಮಾನವಳ ದೃಷ್ಟಿಯಲ್ಲಿ ತಿಂಡಿ ಎಂಬುದು ’ಪ್ರೆಸ್ಟಿಜ್’ ಪ್ರಶ್ನೆಯಾಗಿದ್ದ ಕಾಲವೊಂದಿತ್ತು.  ಆಗಷ್ಟೇ ಹೈಸ್ಕೂಲಿಗೆ … Read more

ಮೆಸೇಜೆಂಬ ಅಂಚೆ: ಪ್ರಶಸ್ತಿ ಪಿ.

  ನಮ್ಮ ಗುಂಡಣ್ಣ ಏನೋ ಬರೀತ ಕುತ್ಕಂಡಿದ್ದಾಗ ಅವ್ನ ಗೆಳೆಯರೆಲ್ಲ ಒಬ್ಬೊಬ್ರಾಗಿ ಅಲ್ಲಿ ಬಂದು ಸೇರ್ಕಂಡ್ರು. ಅವ್ನ ಬರೆಯೋ ಪ್ಯಾಡೂ ಕಸ್ಕಂಡು ಅದ್ರ ತಲೆಬರಹ ಓದಿದ ಟಾಂಗ್ ತಿಪ್ಪ ಅಲಿಯಾಸ ತಿಪ್ಪೇಶಿ.. "ಮೆಸೇಜೆಂಬ ಅಂಚೆ" .. ಎಂತ ಮಾರಾಯ ಪಂಚೆ ಅಂದ್ಯ? ಅದು ನನ್ನ ಮೆಚ್ಚಿನ ಉಡುಪು ಗುತ್ತುಂಟಾ ಅಂತ ಬಂದ ಮಂಗಳೂರು ಮಂಜ ಅಲಿಯಾಸ್ ಮಂಜುನಾಥ. ಪಂಚೆ ಅಲ್ಲ ಮುಂಜು ಅವ್ರೆ ಅಂಚೆ.. ಪೋಸ್ಟು ಅಲ್ವಾ ಮಿಸ್ಟರ್ ರೌಂಡ್ ಅಂತ ಬಂದ್ಳು ಇಳಾ ಅಲಿಯಾಸ್ ಇಳಾದೇವಿ. … Read more

ನಿನ್ನೆಡೆಗೆ ನೆಟ್ಟ ನನ್ನ ದೃಷ್ಟಿ ಕದಲದಿರಲಿ: ಸಚಿನ್ ನಾಯ್ಕ ಅಂಕೋಲ

ನನ್ನ ಬದುಕಿನ ಹಾದಿಯಲ್ಲಿ ನಗುವಿನ ಹೂ ಚೆಲ್ಲಿನಿಂತ  ನಿನಗಾಗಿ…..                                             ನಿನ್ನವನಿಂದ…. ಡಿಸೆಂಬರ್ ತಿಂಗಳ ಚಮುಚುಮು ಚಳಿಗಾಳಿ….. ಮೆಲ್ಲನೆ, ಹರಿವ ಸದ್ದೂ ಕೇಳದಷ್ಟು ಶಾಂತತೆ ಕಾಪಾಡಿಕೊಂಡು ಈ ನದಿ ಚಂದ್ರನ ಹಾಲು ಬೆಳಂದಿಗಳು ಜೊತೆಗೊಂದಿಷ್ಟು ನಿನ್ನ ನೆನಪುಗಳು  ಎದೆಯಲ್ಲಿ ಮಲ್ಲಿಗೆ ಬಿರಿದಂತೆ ಉಲ್ಲಾಸ ಉತ್ಸಾಹ ಅಹಾ….! ನಾನೇ ಈ ಜಗದ  ಪರಮ ಸುಖಿ…. ನಂಗೊತ್ತು ನೀನು ನೆನಪಾಗ್ತ ಇದ್ದೆ ಎಂದ್ರೆ ನಿಂಗೆ ಕೆಟ್ಟ … Read more

ಕಪ್ಪು ಚಿಮಣಿಯ ಹಿಂದೆ ಕಳೆದು ಹೋದ ಗೆರೆಗಳು: ಸಚೇತನ

ಬರ್ಲಿನ್ ನಗರದ ಎಲ್ಲ ರಸ್ತೆಗಳಲ್ಲಿ 'ಬ್ರೂನೋ' ಎನ್ನುವ ಪುಟ್ಟ ಬಾಲಕ ಮತ್ತವನ ಗೆಳೆಯರ  ಗಾಡಿ ಹಾದು ಹೋಗುತ್ತದೆ. ಮಳೆ ಸುರಿದ ಬೀದಿಗಳಲ್ಲಿ, ಮಹಿಳೆಯರು ಮತ್ತವರ ಪುರುಷರು ಆರಾಮವಾಗಿ ಚಹಾ ಹೀರುತ್ತಿರುವ ಕೆಫೆಗಳ ಬಳಿ, ಹೊಸದಾಗಿ ತಂದ ಕೈ ಚೀಲದಂತ ಬಟ್ಟೆ ಧರಿಸಿದ ಸೈನಿಕರನ್ನು ಹೊತ್ತು ಕುಳಿತ ಮೋಟಾರಿನ ಬಳಿ,  ಬಟ್ಟೆ ಅಂಗಡಿಯ ಎದುರಿನಲ್ಲಿ ನಿಲ್ಲಿಸಿದ ಬೊಂಬೆಯಂತೆ ಒಂದೆ ಸಮನೆ ನಿಂತೆ ಇರುವ ದ್ವಾರಪಾಲಕರ ಬಳಿ  ಹಾದು ಮನೆಯ  ಎದುರು ಗೆಳೆಯರನ್ನು ಬೀಳ್ಕೊಟ್ಟು ಕೈ ತೋಟದ ಮೂಲಕ ಮನೆ … Read more

ದೇವರಿಗೆ ಮುಡಿಸಿ ತೆಗೆದ ಬಾಡಿದ ಹೂಗಳು: ಅಮರ್ ದೀಪ್ ಪಿ.ಎಸ್.

ದೇವರ ಮೇಲೆ ಭಕ್ತಿಗಿಂತ ಭಯ ಜಾಸ್ತಿ ಇರುತ್ತೇ ಮಕ್ಕಳಿಗೆ.  ದೊಡ್ಡವರೂ ಅಷ್ಟೇ. ಮಕ್ಕಳ ಶ್ರದ್ಧೆ, ಶಿಸ್ತು, ಒಳ್ಳೆಯ ನಡತೆ, ಕಲಿಕೆ ಎಲ್ಲದರ ನಿಯಂತ್ರಣಕ್ಕಾಗಿ ಮತ್ತು ಬೆಳವಣಿಗೆಗಾಗಿ ಪ್ರಸ್ತಾವನೆಗಳನ್ನು “ದೇವರು” ಅನ್ನುವ  ಅಗೋಚರನ ಮುಂದಿಟ್ಟೇ ಜೀವನ ನಡೆಸುತ್ತಿರುತ್ತಾರೆ.   ನಾವೂ ಅಷ್ಟೇ, ತಿಳುವಳಿಕೆ ಬರುವವರೆಗೂ ಅಥವಾ ಬಂದ ಮೇಲೂ “ದೇವ”ರೆನ್ನುವ ಫೋಟೋ ಮತ್ತು ಆತನ ಕೋಣೆಗೆ ಒಮ್ಮೆ ಭೇಟಿಯಾಗಿಯೇ ಮುಂದಿನ ಹೆಜ್ಜೆ ಇಡುತ್ತೇವೆ.   ತಪ್ಪು ಮಾಡಿದಾಗ, ಬರೆದ  ಉತ್ತರ ತಪ್ಪಾಗಿ ಒದೆ ಬೀಳುವಾಗ, ರಿಜಲ್ಟು ಶೀಟ್ ನೋಡುವಾಗ, … Read more

ಕವಿತೆಯ ಕನವರಿಕೆಗಳು: ಸಂಗೀತ ರವಿರಾಜ್

                ಸಾಹಿತ್ಯದ ಎಲ್ಲಾ ಪ್ರಕಾರಗಳಿಂದಲೂ ಕವಿತೆಯೆ ಹೆಚ್ಚು ಅನುಭೂತಿಯನ್ನು ನೀಡುವಂತದ್ದು. ಇದು ಸಾಹಿತ್ಯದ ಬಗೆಗೆ ಆಸಕ್ತಿಯಿರುವವರ ಅಂಬೋಣ. ಆದರೆ ಕವಿತೆ ಅಂದರೆ ಮಾರುದೂರ ಹೋಗುವ, ಮೂಗು ಮುರಿಯುವ ಜಾಯಮಾನದವರೆ ಹೆಚ್ಚಿರುವ ಈ ಕಾಲದಲ್ಲಿ ಕವಿತೆ ಬಗ್ಗೆ ಚೂರು ಪಾರು ಅಭಿಮಾನ ಹೊಂದಿರು ನಮ್ಮಂತವರ ಗತಿ ದೇವರಿಗೆ ಪ್ರೀತಿ! ಸಿನಿಮಾಗಳಲ್ಲಿ, ಹಾಸ್ಯ ಧಾರಾವಾಹಿಗಳಲ್ಲಿ ಬರಹಗಾರರನ್ನು ವಿದೂಷಕರನ್ನಾಗಿ ತೋರಿಸುವ ಪರಿಪಾಟಲು ಹಿಂದಿನಿಂದಲೇ ನಡೆದು ಬಂದಿದೆ. ವಾಸ್ತವವಾಗಿ ಏನಾಗುತ್ತದೆಯೆಂದರೆ ಓದುಗರ ಸಂಖ್ಯೆ … Read more

ತಿರಸ್ಕಾರ (ಭಾಗ 3): ಜೆ.ವಿ.ಕಾರ್ಲೊ, ಹಾಸನ

(ಇಲ್ಲಿಯವರೆಗೆ) ಉದ್ದೇಶ? ಅದು ಅವನಿಗೂ ಗೊತ್ತಿರಲಿಲ್ಲ. ಪ್ರೀತಿಯ ಹಸಿವು, ಕಾಡುತ್ತಿರುವ ತಬ್ಬಲಿತನ ಎಂದು ಹೇಳಲು ಅವನಿಗೆ ನಾಲಿಗೆ ಹೊರಳಲಿಲ್ಲ. ಊರ ಜನರ ತಿರಸ್ಕಾರ ಅವನನ್ನು ಉಸಿರುಗಟ್ಟಿಸಿತ್ತು. ಅವರ ಇರುವನ್ನೇ ಕಡೆಗಣಿಸಿ ಪಕ್ಕಕ್ಕೆ ಮುಖ ತಿರುಗಿಸಿ ನಡೆಯುವ ಫ್ರಾನ್ಸಿಗರ ಕತ್ತನ್ನು ಹಿಡಿದು ಮುರಿಯಬೇಕೆನ್ನಿಸುವಷ್ಟು ಕ್ರೋಧ ಅವನಲ್ಲಿ ಉಂಟಾಗುತ್ತಿತ್ತು. ಕೆಲವೊಮ್ಮೆ ಅಸಹಾಯಕತೆಯಿಂದ ಗಳಗಳನೆ ಅಳಬೇಕೆಂದು ಅವನಿಗೆ ಅನಿಸುತ್ತಿತ್ತು. ತನ್ನನ್ನು ಪ್ರೀತಿಯಿಂದ ಬರಮಾಡಿಕೊಂಡು ಸ್ವಾಗತಿಸುವ ಒಂದು ಮನೆಯಿದ್ದಿದ್ದರೆ! ಇದು ಅವನ ಗುಪ್ತ ಆಸೆಯಾಗಿತ್ತು. ಆನ್ನೆಟಳಂತ ಹುಡುಗಿ ತನ್ನ ಜಾಯಮಾನಕ್ಕೆ ತಕ್ಕ ಹುಡುಗಿ … Read more

ಚುಟುಕಗಳು: ನವೀನ್ ಮಧುಗಿರಿ, ನಗೆಮಲ್ಲಿಗೆ

ಕಿರು ಕವಿತೆಗಳು —————— ಅಪ್ಪನ ನೇಗಿಲ ಕಾವ್ಯಕೆ ಹೊಟ್ಟೆ ತುಂಬಿದವರ ತೇಗುಗಳೇ ಪ್ರಶಸ್ತಿ , ಪುರಸ್ಕಾರ ತಟ್ಟೆಯಲಿ ಬಿಟ್ಟ, ತಿಪ್ಪೆಗೆ ಚೆಲ್ಲಿದ ಅನ್ನ ಅಪ್ಪನ ಬೆವರಿಗೆ ನೀವು ಮಾಡಿದ ಅವಮಾನ — ಮೊನ್ನೆ ಮಹಾನ್ ದೈವಭಕ್ತ ಸಿದ್ರಾಮ ದೇವರಿಗೆ ಕೈ ಮುಗಿದು ಕಾಣಿಕೆ ಸಲ್ಲಿಸಿ ದೇವಸ್ಥಾನದಿಂದ ಹೊರ ಬರುವಷ್ಟರಲ್ಲಿ ಅವನ ಚಪ್ಪಲಿ ಕಳುವಾಗಿದ್ದವು! — ರೈತನ ಬೆವರ ಹನಿ ಹೊಳೆದಿದೆ ಎಳೆ ಬಿಸಿಲಿಗೆ ಪೈರಿನ ನೆತ್ತಿಯ ಮೇಲೆ ತೆನೆ — ಒಂದಷ್ಟು ಪ್ರೀತಿ ಮಣ್ಣಾದ ಮೇಲೆ ಈ … Read more

ಅಮರವಾಗಲಿ ನಮ್ಮ ಚೆಲುವ ಕನ್ನಡ ನುಡಿಯು: ಹೊರಾ.ಪರಮೇಶ್ ಹೊಡೇನೂರು

"ಜೇನಿನ ಹೊಳೆಯೋ ಹಾಲಿನ ಮಳೆಯೋ  ಸುಧೆಯೋ ಕನ್ನಡ ಸವಿ ನುಡಿಯೋ….  ವಾಣಿಯ ವೀಣೆಯೊ ಸ್ವರ ಮಾಧುರ್ಯವೋ  ಸುಮಧುರ ಸುಂದರ ನುಡಿಯೋ….ಆಹಾ!"         ಎಂಬ ಗೀತೆಯು ನಮ್ಮ ಕರುನಾಡಿನ ಕನ್ನಡಿಗರ ಎದೆಯಾಳದಲ್ಲಿ ಸದಾ ರಿಂಗಣಿಸುತ್ತಲೇ ಇರುತ್ತದೆ. ಕನ್ನಡದ ಮೇರು ನಟ ಡಾ.ರಾಜ್ ಕುಮಾರ್ ರವರ ಅಮೃತ ಕಂಠಸಿರಿಯಲ್ಲಿ ಅಜರಾಮರವಾಗಿರುವ ಈ ಗೀತೆಯು ಚಲನಚಿತ್ರಕ್ಕಾಗಿ ರಚಿಸಲ್ಪಟ್ಟರೂ ನಮ್ಮ "ಸವಿಗನ್ನಡ"ದ ಹಿರಿಮೆ-ಗರಿಮೆಗಳನ್ನು ಬಿಂಬಿಸುವಲ್ಲಿ ಯಶಸ್ವಿಯಾಗಿ ಕನ್ನಡ ಭಾಷಾ ಚಳುವಳಿಯಲ್ಲಿ ಪ್ರಮುಖವಾದ ಕನ್ನಡಪರ ಕಾಳಜಿಯ ಸಂದೇಶಗೀತೆಯಾಗಿದ್ದು ಇತಿಹಾಸದ ಪುಟ … Read more

ಕರುನಾಡಿನ ದಾಸಶ್ರೇಷ್ಟ ಕನಕಕದಾಸರು: ಹಿಪ್ಪರಗಿ ಸಿದ್ಧರಾಮ

ಕರುನಾಡಿನ ದಾಸ ಪರಂಪರೆಯಲ್ಲಿ ಭಕ್ತ ಕನಕದಾಸರು (1508-1606) ವಿಶಿಷ್ಟ ವ್ಯಕ್ತಿತ್ವದ ಸಮಾಜ ಸುಧಾರಕರು. ದಾಸ ಸಾಹಿತ್ಯದ ದಿಗ್ಗಜ ದಾಸಶ್ರೇಷ್ಟ ಕನಕದಾಸರ ಕರ್ಮಭೂಮಿ ಕಾಗಿನೆಲೆಯಾಗಿದ್ದರೂ ಅವರು ಜನಿಸಿದ್ದು ಹಾವೇರಿ ಜಿಲ್ಲೆಯ ಬಾಡ ಗ್ರಾಮದಲ್ಲಿ. ಇಲ್ಲಿ ಕನಕದಾಸರ ಅರಮನೆ ಇದ್ದ ಬಗ್ಗೆ ಇತ್ತೀಚಿನ ಉತ್ಖನನ ಮತ್ತು ದಾಖಲೆಗಳು ಖಚಿತಪಡಿಸಿವೆ. ತಂದೆ ಬೀರಪ್ಪ ಡಣ್ಣಾಯಕರ ಅಕಾಲ ಮರಣದಿಂದ ಕಿರಿಯ ವಯಸ್ಸಿನಲ್ಲಿಯೇ ವಿಜಯನಗರ ಆಡಳಿತಕ್ಕೊಳಪಟ್ಟ ಶಿಗ್ಗಾಂವ-ಬಂಕಾಪುರ ಪ್ರದೇಶಕ್ಕೆ ಡಣ್ಣಾಯಕರಾಗಿ, ತಾಯಿ ಬಚ್ಚಮ್ಮನ ಮಾರ್ಗದರ್ಶನದಲ್ಲಿ ಆಡಳಿತ ನಡೆಸುವ ಕನಕದಾಸರ ಮೂಲ ಹೆಸರು ತಿಮ್ಮಪ್ಪ. ಯಾವುದೋ … Read more

ಗಾಧಿಮಾಯಿ ಹತ್ಯಾಕಾಂಡ: ಅಖಿಲೇಶ್ ಚಿಪ್ಪಳಿ

ದಕ್ಷಿಣ ನೇಪಾಳದ ಕಠ್ಮಂಡುವಿನಿಂದ ಸುಮಾರು 160 ಕಿ.ಮಿ. ದೂರದಲ್ಲಿರುವ ಜಿಲ್ಲೆಯ ಹೆಸರು ಬಾರ. ಈ ಜಿಲ್ಲೆಯ ಭರಿಯಾರ್‍ಪುರ್‍ನಲ್ಲಿರುವ ಗಾಧಿಮಾಯಿ ದೇವಸ್ಥಾನ ಇವತ್ತು ಜಗತ್ ಖ್ಯಾತವಾಗಿದೆ. 5 ವರ್ಷಗಳಿಗೊಮ್ಮೆ ಇಲ್ಲಿ ಜಾತ್ರೆ ನಡೆಯುತ್ತದೆ. ನಮ್ಮಲ್ಲೂ ಹಳ್ಳಿ-ಹಳ್ಳಿಗಳಲ್ಲಿ ಜಾತ್ರೆಗಳು ನಡೆಯುತ್ತವೆ. ಇದರಲ್ಲೇನು ವಿಶೇಷವೆಂದು ಕೇಳಬಹುದು. ಎಲ್ಲಾ ಜಾತ್ರೆಗಳಲ್ಲೂ ಮಾರಿಯನ್ನು ಸಂತೃಪ್ತಿಗೊಳಿಸುವ ಸಲುವಾಗಿ ಪ್ರಾಣಿಬಲಿಯನ್ನು ನೀಡುತ್ತಾರೆ. ಕೆಲವು ಕಡೆ ಅಕ್ರಮವಾಗಿ ನರಬಲಿಯನ್ನು ನೀಡುವುದೂ ಇದೆ. ಭಾರತದಂತಹ ದೇಶದಲ್ಲಿ ಪ್ರಾಣಿಬಲಿ ತಡೆಯುವ ಕಟ್ಟುನಿಟ್ಟಾದ  ಕಾನೂನುಗಳಿವೆ. ಈ ಕಾನೂನು ಹಲವು ಬಾರಿ ವಿಫಲವಾಗುತ್ತದೆ. ಕಾನೂನು … Read more