ಪಂಜು ಕಥಾ ಸ್ಪರ್ಧೆ-2025 ಫಲಿತಾಂಶ

ಪಂಜು ಅಂತರ್ಜಾಲ ಪತ್ರಿಕೆ ಏರ್ಪಡಿಸಿದ್ದ 2025ನೇ ಸಾಲಿನ ಕಥಾ ಸ್ಪರ್ಧೆಯಲ್ಲಿ ಒಟ್ಟು 152 ಕತೆಗಾರರು ಭಾಗವಹಿಸಿದ್ದರು. ವಿವಿಧ ಕ್ಷೇತ್ರಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಐವರು ಕನ್ನಡಿಗರು ಈ ಸ್ಪರ್ಧೆಯ ತೀರ್ಪುಗಾರರಾಗಿದ್ದರು. ಪಂಜು ಕಥಾ ಸ್ಪರ್ಧೆಯಲ್ಲಿ ವಿಜೇತರಾದವರು: ೧. ಪ್ರಥಮ ಬಹುಮಾನ: ಮೂಕಸಾಕ್ಷಿ (ಗಿರೀಶ್ ತಾಳಿಕಟ್ಟೆ) ೨. ದ್ವಿತೀಯ ಬಹುಮಾನ: ವ್ಯಾನ್ ಹುಸೇನ್ (ವೀರೇಂದ್ರ ರಾವಿಹಾಳ್‌) ೩. ತೃತೀಯ ಬಹುಮಾನ: ಜನುಮಕ್ಕೆ ಜೋಡಿಯಾದವರು (ಗೌರಿ ಚಂದ್ರಕೇಸರಿ) ಸಮಾಧಾನಕರ ಬಹುಮಾನ ವಿಜೇತರು: ೧. ಪಂಚಾಯತಿ ಕಟ್ಟೆ: ಎಂ.ಡಿ.ಚಿತ್ತರಗಿ ೨. ಗರ್ಭ-ಗುಡಿ: ಸಂಜಯ್.ಹೆಚ್.ಪಾಟೀಲ್ ೩. … Read more

“ರಾತ್ರಿ ಸುರಿದ ಮಲ್ಲಿಗೆಯಲ್ಲಿ ನಾನು ಕಂಡಿದ್ದು”: ಪ್ರಶಾಂತ್ ಬೆಳತೂರು

ಮೊನ್ನೆ ಮಂಡ್ಯದಲ್ಲಿ ನಡೆದ ಅಕ್ಷರ ಹೊಸ ಕಾವ್ಯ ಕಾರ್ಯಕ್ರಮದಲ್ಲಿ ಸಿಕ್ಕ ಕವಯಿತ್ರಿ ನಂದಾದೀಪ ಅವರು ಅಕ್ಕರೆಯಿಂದ ಅವರ ‘ ರಾತ್ರಿ ಸುರಿದ ಮಲ್ಲಿಗೆ ‘ ಎಂಬ ಚುಟುಕು ಸಂಕಲನವನ್ನು ನನ್ನ ಕೈಗಿತ್ತರು. ಕೆಲಸದ ಒತ್ತಡಗಳ ನಡುವೆ ಕಳೆದೆರಡು ದಿನಗಳಲ್ಲಿ ಅದನ್ನು ಓದಲಾಗಿರಲಿಲ್ಲ. ಆದರಿಂದು ಬಿಡುವು ಸಿಕ್ಕಿ ಒಂದೇ ಗುಕ್ಕಿಗೆ ಅದರ ಮುನ್ನುಡಿ, ಬೆನ್ನುಡಿಗಳೆಲ್ಲವನ್ನೂ ಓದಿ ತಿರುವು ಹಾಕಿ ಅವರ ಚುಟುಕುಗಳನ್ನು ಗಮನಿಸುತ್ತಾ ಹೋದೆ. ಇಂತಹ ಚುಟುಕುಗಳ ಪ್ರಯೋಗಗಳು ಕನ್ನಡ ಸಾಹಿತ್ಯದಲ್ಲಿ ಹೊಸತೇನಲ್ಲವಾದರೂ ಬರೆಯುವವರ ಭಿನ್ನತೆ, ದೃಷ್ಟಿಕೋನಗಳು, ಅವು … Read more

ವರಂಗ ಜೈನ ಕ್ಷೇತ್ರ: ಪ್ರವೀಣ ಶೆಟ್ಟಿ, ಕುಪ್ಕೊಡು

ವರಂಗ ಹೆಸರೇ ಒಂದು ಅದ್ಬುತ. ವರಂಗ ಇರುವುದು ಉಡುಪಿ ಜಿಲ್ಲೆಯ ಹೆಬ್ರಿಯಿಂದ ಕಾರ್ಕಳದ ಕಡೆಗೆ 5 ಕಿ.ಮೀ. ದೂರದಲ್ಲಿ. ಅದೊಂದು ಜೈನ ಕ್ಷೇತ್ರ, ವಿಶಾಲವಾದ ಕೆರೆಯ ಮಧ್ಯದಲ್ಲಿ ನೆಲೆನಿಂತ ಜೈನ ಬಸದಿಯನ್ನು ದೊಣಿಯ ಮೂಲಕ ನಿಧಾನವಾಗಿ ಸಾಗುವುದೇ ಒಂದು ರೋಮಾಂಚಕಾರಿ ಅನುಭವ. ನಾನು ಮದುವೆಯಾದ ಸಮಯದಲ್ಲಿ ಮೊದಲ ಬಾರಿ ಪತ್ನಿ ಶ್ರುತಿ ಜೊತೆ ಭೇಟಿ ನೀಡಿದ್ದೆ, ಆದರೆ ಅದು ನವರಾತ್ರಿಯ ಸಮಯವಾದ್ದರಿಂದ ಮಳೆ ತುಂಬಾ ಬರ್ತಾ ಇತ್ತು ಆದ್ದರಿಂದ ದೋಣಿಯನ್ನು ಬಿಡುತ್ತಿರಲಿಲ್ಲ. ಶ್ರುತಿಗೆ ತುಂಬಾ ಬೇಸರವಾಗಿತ್ತು. ಅವಳು … Read more

ಕರ್ಫ್ಯೂ ದಿನಗಳಲ್ಲಿನ ಒಂದು ಪಯಣದ ಹಾದಿ…: ಪಿ. ಎಸ್. ಅಮರದೀಪ್…

ತುಂಬಿದ ಹಾಸ್ಟಲ್ ನಲ್ಲಿದ್ದಾಗಿನ ಹುಡುಗರ ಕೇಕೆ, ನಗು, ತಣ್ಣನೇ ನೀರು ಮೈಮೇಲೆ ಸುರುವಿಕೊಳ್ಳಲೂ ಹಿಂದು ಮುಂದು ನೋಡುತ್ತಾ ದಬಾದಬಾಂತ ಚೊಂಬಿನಿಂದ ತಲೆ ಮೇಲೆ ಹಾಕಿಕೊಳ್ಳುವಾಗಿನ ಅಪಶೃತಿ ಹಾಡುಗಳು, ಅಷ್ಟರಮಟ್ಟಿಗೆ ತಮ್ಮಲ್ಲೇ ತಾವು ದೊಡ್ಡ ಸಿಂಗರ್ ಎಂಬ ಬಿಲ್ಡಪ್ಪು. ರೂಮಿಗೆ ಬಂದ ತಕ್ಷಣವೇ ಕಿಟಕಿಯಲ್ಲಿದ್ದ ಅಥವಾ ಪುಸ್ತಕ ಇಟ್ಟುಕೊಳ್ಳಲು ಇರುವ ಕಪಾಟಿನೊಳಗಿನ ದೇವರ ಚಿಕ್ಕ ಫೋಟೋಗೆ ಕೈಮುಗಿಯುವುದು. ತಲೆಒರೆಸಿಕೊಳ್ಳುವ ಗ್ಯಾಪ್ ನಲ್ಲೇ ಮೇಲ್ಮಹಡಿ ರೂಮಿನಿಂದ ಇಣುಕಿದರೆ ಪಕ್ಕದಲ್ಲೇ ಇದ್ದ ತರಳಬಾಳು ಸಂಸ್ಥೆಗೆ ಹೊರಡುವ ಬಿ.ಎಡ್. ಓದುವ ಹುಡುಗಿಯರ ದಂಡಿಗೆ … Read more

ಮಿಂಚು: ಶೇಖರಗೌಡ ವೀ ಸರನಾಡಗೌಡರ್

“ಮಿಂಚೂ, ಅವರು ನಿನಗೆ ತಕ್ಕ ಜೋಡಿ. ನಿಮ್ಮಿಬ್ಬರ ಜೋಡಿ ಶಿವ-ಪಾರ್ವತಿಯರಂಗೆ ಆಗುತ್ತೆ.”ತಾಯಿ, ಮಗಳಿಬ್ಬರೂ ಖುಷಿಖುಷಿಯಿಂದ ಮಾತು ಮುಗಿಸಿದ್ದರು.****ಮಿಂಚುವಿನ ಮದುವೆ ಅವಳ ಸೋದರತ್ತೆಯ ಮಗ ಪ್ರಶಾಂತನ ಜೊತೆ ನಿಶ್ಚಯವಾಗುವ ಸುದ್ದಿ ಸದ್ಭವನ ಕಿವಿಗೆ ಬಿದ್ದಾಗಿನಿಂದ ಅವನ ಮನಸ್ಸು ಗೊಂದಲದ ಗೂಡಾಯಿತು. ಎದೆಯಲ್ಲಿ ತಳಮಳ, ಅಲ್ಲೋಲಕಲ್ಲೋಲ ಶುರುವಾಯಿತು. ನಿಂತ ಭೂಮಿ ಕಂಪಿಸಿದ ಅನುಭವ. `ಹಾಗಾದರೆ ನಾನು ಮಿಂಚುವಿನ ಬಗ್ಗೆ ಕನಸು ಕಟ್ಟುವುದನ್ನು ಬಿಡಬೇಕು. ನಾನು ಭಗ್ಮಪ್ರೇಮಿಯಾವೆನೇ…? ನನ್ನ ಮೊದಲ ಪ್ರೀತಿ ಹಳ್ಳ ಹಿಡಿಯುವುದೇ…? ಆ ನೋವನ್ನು ನಾನು ಜೀರ್ಣಿಸಿಕೊಳ್ಳಬಲ್ಲೆನೇ…? ಅಂಥಹ … Read more

ಅವನು ಅವಳು ಮತ್ತು ಆತ: ಡಾ. ವಿಶ್ವನಾಥ ಎನ್ ನೇರಳಕಟ್ಟೆ

“ಯಾಕೆ ಮದುವೆ ಆಗಿದ್ದೇನೋ ಎನಿಸುತ್ತಿದೆ. ಇದಕ್ಕಿಂತ ಒಂಟಿಯಾಗಿರುವುದೇ ಒಳ್ಳೆಯದಿತ್ತು” ಶೂ ಕಳಚಿಡುತ್ತಾ ಅವನು ಹೇಳಿದ ಈ ಮಾತು ಮೊದಲೇ ಕೋಪದಿಂದಿದ್ದ ಅವಳನ್ನು ಕೆರಳಿಸಿತು.“ನನಗೂ ಈ ಸಂಬಂಧ ಬೇಕಿರಲಿಲ್ಲ. ನೀವು ಇಂಥವರು ಅಂತ ಮೊದಲೇ ಗೊತ್ತಿದ್ದರೆ ನಾನು ಮದುವೆಗೆ ಒಪ್ಪುತ್ತಿರಲಿಲ್ಲ” ಎಂದು ಅವಳು ಹೇಳಿದ ತಕ್ಷಣವೇ ಅವನು ಕಳಚಿದ್ದ ಶೂವನ್ನು ಬಲವಾಗಿ ನೆಲದ ಮೇಲೆ ಬಿಸಾಡಿದ. ಅವನ ವರ್ತನೆಯನ್ನು ಲೆಕ್ಕಕ್ಕೇ ತೆಗೆದುಕೊಳ್ಳದವಳಂತೆ ಅವಳು “ಬೇಕಿರುವುದನ್ನೆಲ್ಲಾ ತೆಗೆದುಕೊಳ್ಳುವಷ್ಟು ಪುರುಸೊತ್ತು ಇಲ್ಲವೆಂದ ಮೇಲೆ ಶಾಪಿಂಗ್‌ಗೆ ಬಂದದ್ದಾದರೂ ಯಾಕೆ? ನಾನೊಬ್ಬಳೇ ಹೋಗುತ್ತಿದ್ದೆ. ಆಫೀಸಿನ … Read more

ನಾ ಓದಿದ ಡಂಕಲ್ ಪೇಟೆ…: ಕವಿತಾ ವಿರೂಪಾಕ್ಷ

‘ಡಂಕಲ್ ಪೇಟೆ’.. ನಾನು ಇತ್ತೀಚೆಗೆ ಓದಿದ ಲೇಖಕ ವೀರೇಂದ್ರ ರಾವಿಹಾಳ್ ಸರ್ ಅವರ ಆರು ಕಥೆಗಳ ಅದ್ಭುತ ಕಥಾ ಸಂಕಲನ. ಇದನ್ನು ಓದಲೇಬೇಕು ಎಂದು ಕೈಗೆತ್ತಿಕೊಂಡುದುದರ ಉದ್ದೇಶ ನಾನು ಇದೇ ಭಾಗದ ನಿವಾಸಿಯೇ ಆಗಿರುವುದರಿಂದ, ರಾಯಲಸೀಮೆಗೆ ಅಂಟಿಕೊಂಡಂತಹ ಬಯಲು ಸೀಮೆಯ ಲೇಖಕರ ಬರಹ ,ಇತರ ಲೇಖಕರಿಗಿಂತ ಹೇಗೆ ಭಿನ್ನ ?ಹಾಗೂ ಇಲ್ಲಿನ ವಿಷಯ ವಸ್ತುವಿನ ಆಯ್ಕೆ ಹೇಗಿರುತ್ತದೆ? ಹಾಗೆ ಇಲ್ಲಿ ಪ್ರತಿ ಕಥೆಯನ್ನು ಪ್ರಾದೇಶಿಕ ಹಿನ್ನೆಲೆಯಲ್ಲಿ ಹೇಗೆ ಎಣಿದಿರುತ್ತಾರೆ ಎನ್ನುವ ಕುತೂಹಲದಿಂದ. ನಿಜಕ್ಕೂ ಪುಸ್ತಕವನ್ನು ಓದುತ್ತಾ ಹೋದಂತೆ … Read more

ಕರೆದರೆ ಬರಲಾರೆಯೇ ಗೆಳತಿ: ವಾಣಿ ಕಂಟ್ಲಿ

ತನ್ನದಲ್ಲದ ಮನೆಯಲ್ಲಿ ಹುಟ್ಟಿಮನೆಯ ಲಕ್ಷ್ಮಿ ಎನಿಸಿಕೊಂಡರು..ಆಸ್ತಿಯ ಭಾಗವಿಲ್ಲದ ಹೊರೆಯಾಗಿ,ಪ್ರೀತಿ ಚೆಲ್ಲಿ, ಬೆವರು ಸುರಿಸಿ,ಎಲ್ಲರ ಮಾನ ಮರ್ಯಾದೆ ಎತ್ತಿ ಹಿಡಿದುಇನ್ನೊಬ್ಬರ ಮನೆ ತುಂಬುವ ಹೆಣ್ಣು.. ಇನ್ಯಾವುದೋ ನೆಲೆಯಲ್ಲಿ ತನ್ನ ಒಲೆ ಉರಿಸಿ,ತಾನೇ ಬೆಳೆದ ಆಹಾರ ಆಯ್ದು ತಂದುಮತ್ತೆ ಮತ್ತೆ ತನ್ನ ಬುಡವನ್ನು ಕಿತ್ತಿ ಹಚ್ಚಿಮತ್ತೆ ಚಿಗುರುವ ಹೂವು ಹಣ್ಣುಕಾಯಿಯಾಗಿ ಆಸರೆಯಾಗುವ ಹೆಣ್ಣು..ಮಳೆ ಹನಿಯ ಕಲೆಹಾಕಿ, ಬೆಟ್ಟದ ತುದಿಯಿಂದ ಜಾರಿಎಲ್ಲರೊಂದಿಗೆ ಒಂದಾಗಿ ಇಳಿಯುವ ನದಿಯಂತೆ,ಗಂಡನ ಮನೆಯಲ್ಲಿ, ಸಮಾಜದಲ್ಲಿ ,ವೃತ್ತಿಯಲ್ಲಿ ನೆಲೆಯೂರಿ ಹರಿಯುವನದಿಯಿಂದ ಉಪ್ಪಿನ ಸಾಗರ ಸೇರುವ ಹೆಣ್ಣು.. ಹೆಣ್ಣೆಂದರೆ ಸೌಂದರ್ಯ, … Read more

ನಾಗೇಂದ್ರ ಪಿ ಅವರ ಎರಡು ಕವಿತೆಗಳು

ಪ್ರೇಮಿಗಳ ದಿನದ ಕವಿತೆ 1 ಇಂದು ಪ್ರೇಮಿಗಳ ದಿನದ ನೆಪದಲ್ಲಿಒಂದು ಮಾತು ಹೇಳ್ತೀನಿ ಸರಳವಾಗಿನಿನ್ನ ಜೊತೆ ಕಳೆದ ಕ್ಷಣಗಳೆಲ್ಲನಿನ್ನ ಹೃದಯದಲ್ಲಿ ಉಳಿದಿವೆ ಮೌನವಾಗಿ ನಿನ್ನ ಹೆಸರು ಕೇಳಿದರೆಹೃದಯ ತಡುಕುತ್ತದೆ ನಿಧಾನವಾಗಿನೀ ಹತ್ತಿರ ಇದ್ದರೆ ಬದುಕೆಅರಳುತ್ತದೆ ಸುಂದರವಾಗಿ ನಿನ್ನ ನಗು ತುಂಬಿದ ಆ ಕ್ಷಣಗಳುಇನ್ನೂ ನೆನಪಾಗುತ್ತಿವೆ ಸಿಹಿಯಾಗಿನಿನ್ನ ಮಾತು ತಾಕಿದ ಪ್ರತಿಸಾರಿಮನಸ್ಸು ಬದಲಾಗುತ್ತದೆ ಪ್ರೀತಿಯಾಗಿ ಸಣ್ಣ ಸಣ್ಣ ಜಗಳಗಳೂ ಕೂಡಇಂದಿಗೆ ಕಾಣುತ್ತದೆ ಮಧುರವಾಗಿಯಾಕಂದರೆ ನೀ ಇದ್ದರೆ ಸಾಕುಬದುಕು ಕಾಣುತ್ತದೆ ಸುಂದರವಾಗಿ ಈ ದಿನದ ನೆಪದಲ್ಲಿ ಮತ್ತೊಮ್ಮೆ ಹೇಳ್ತೀನಿನೀ ಇರುವುದೇ … Read more

ಈಸಬೇಕು ಇದ್ದು ಜಯಿಸಬೇಕು: ಪೂಜಾ ತೀರ್ಥಹಳ್ಳಿ

ಪ್ರಿಯ ಓದುಗರೇ, ನಾವೆಲ್ಲರು ಮನುಷ್ಯರು ಮನುಷ್ಯರಷ್ಟೇ.. ಹೀಗಾಗಿ ನಮ್ಮ ಬದುಕಿನಲ್ಲಿ ಏರಿಳಿತಗಳು ಸಹಜ. ಸೋಲು ಗೆಲುವುಗಳ ಲೆಕ್ಕಾಚಾರದಲ್ಲಿ ಹಲವು ಬಾರಿ ಎಡವುತ್ತೇವೆ. ಕೇವಲ ಗೆಲುವುಗಳನ್ನು ಸಂಭ್ರಮಿಸುವ ನಾವು ಸೋಲನ್ನು ಅಷ್ಟೇ ಸಲೀಸಾಗಿ ಸ್ವೀಕರಿಸಲಾರೆವು. ಪರರ ಗೆಲುವನ್ನು ಸೈರಿಸಿಕೊಳ್ಳದಷ್ಟು ಸಣ್ಣತನ ನಮ್ಮನ್ನಾಳುತ್ತಿದೆ. ಪರೀಕ್ಷೆಯಲ್ಲಿ ಫೇಲಾದೆ, ಸ್ಪರ್ಧೆಯಲ್ಲಿ ಸೋತೆ. ಪ್ರೀತಿಯಲ್ಲಿ ಮೋಸಹೋದೆ, ಅಮ್ಮ ಬೈದರು,ಅಪ್ಪ ಹೊಡೆದರು ಅಂತೆಲ್ಲಾ ತೀರ ಬಾಲಿಷ ಕಾರಣಕ್ಕಾಗಿ ಆತ್ಮಹತ್ಯೆ ಮಾಡಿಕೊಳ್ಳುವ ಅವಿವೇಕತನ ಹೆಚ್ಚುತ್ತಿದೆ. ಪರೀಕ್ಷೆಗಳಲ್ಲಿ ಪಾಸಾಗುವುದು ಅನಿವಾರ್ಯ ನಿಜ ಹಾಗಂತ ಅನುತ್ತೀರ್ಣರಾದರೆ ಅಲ್ಲಿಗೆ ಬದುಕೆ ಮುಗಿಯಿತೆಂದಲ್ಲ. … Read more

ಪುಟಾಣಿಗಳೊಂದಿಗಿನ ಚೈತನ್ಯ ಸಮೃದ್ಧಿಯ ಪ್ರವಾಸ: ಚಂದ್ರು ಪಿ ಹಾಸನ್

ಅಂದು ಶುಕ್ರವಾರ ಸಂಜೆ, ಶಾಲೆ ಮುಗಿಸಿ ಮನೆಗೆ ಬರುವಾಗ ಎಲ್ಲಾ ಮಕ್ಕಳು ಖುಷಿಯಿಂದ ಕುಣಿಯುತ್ತಿದ್ದರು. ಕಾರಣ ಕೇಳಿದರೆ ನಾಳೆ ಶನಿವಾರ ನಮಗೆಲ್ಲಾ ಆಫ್ ಡೇ ಕ್ಲಾಸ್ ಆಮೇಲೆ ಭಾನುವಾರ ಫುಲ್ ಡೇ ಮಜಾ ಅಂತ ಖುಷಿಯಿಂದ ಹೇಳುತ್ತಿದ್ದರು. ನಾನು ಒಂದು ಕ್ಷಣ ಯೋಚಿಸಿ ಅದರಲ್ಲೇನಿದೆ ವಿಶೇಷತೆ? ಪ್ರತಿವಾರ ಶನಿವಾರ ಭಾನುವಾರ ಬರ್ತಾ ಇರುತ್ತೆ ಅಲ್ವಾ . ಆದರೆ ಮಕ್ಕಳನ್ನು ಪ್ರಶ್ನಿಸಿದರೆ ಅವರ ಉತ್ತರ ಬೇರೆನೇ ಇತ್ತು. ಆಗ ಖುಷಿಯಿಂದ ನಾಳೆ ನಮ್ ಮಾವ ಬರ್ತಾರೆ , ಇನ್ನೊಬ್ಬ … Read more

ಕರಿಸಿದ್ಧ: ತಿರುಪತಿ ಭಂಗಿ

“ಹಣಿಮ್ಯಾಲ ಹಚ್ಚಿರಿ ಭಂಡಾರಅಕೈತಿ ನಿಮ್ಮ ಜೀವನ ಸಿಂಗಾರಗುಡಿಮುಂದ ಕೂಡಿದ ಜನಸಾಗರನೋಡಿ ಬರಗಾಗ್ಯಾನ ನಮ್ಮ ದೇವರ” ಗುಡಿಮ್ಯಾಲಿನ ಮೈಕ್ ಕೊಣ್ಣೂರ ಅಜ್ಜನ ಲೀಲಾ ಹೊಗಳಿ ಹೊಗಳಿ ಹಾಡಾಕತ್ತಿತ್ತು. ಭಂಡಾರದೊಡೆಯನ ಜಾತ್ರೆಗೆ ಟ್ರ್ಯಾಕ್ಟರ್, ಬೈಕ್, ಕಾರ್, ಬಸ್ಸು ಹತ್ತಿ, ಎತ್ತಿನ ಬಂಡಿ ಹೂಡಿಕೊಂಡು, ನಾಡಿನ ಜನರೆಲ್ಲರೂ ಬಾನ, ನೈವದ್ಯ, ಮಾಡಿಕೊಂಡು, ಕಾಯಿಕರ್ಪೂರ ತಗೆದುಕೊಂಡು, ಅಜ್ಜನ ದರುಶನಕ್ಕೆ ಸಜ್ಜಾಗಿ ಬಂದಿದ್ದರು. ಅಜ್ಜನ ಗುಡಿ ಮುಂದೆಲ್ಲಾ ಜನಜಾತ್ರಿಯೇ ಸೇರಿ ಗಿಜಿಗಿಜಿ ಗಿಜಗೂಡುತಿತ್ತು. ಗುಡಿಯ ಮುಂಬಾಗದಲ್ಲಿ ತೆಂಗನಿ ಕಾಯಿ ಮಾರುವವರು, ಕುಂಕುಮ ಭಂಡಾರ ಮಾರುವವರು, … Read more

ಹಿರಿಯಕ್ಕನ ಚಾಳಿ…: ಎಫ್.ಎಂ.ನಂದಗಾವ

“ಯಾರದು? ಏಳನೇ ಕ್ಲಾಸಿನ ಸಿರಿಲ್ ಸುಳ್ಳದ ಅಲ್ಲಾ?” `”ಹೌದು ಫಾದರ್. ನಾನು ಸಿರಿಲ್.’’ “ಹೂಂ, ಗೊತ್ತಾಯಿತು.’’ “ನಾನು, ಇಂದ ತಪ್ಪ ಮಾಡೀನಿ ಫಾದರ್. ನನ್ನ ಮೊಬೈಲ್‌ನ್ಯಾಗ, ನಮ್ಮ ಕ್ಲಾಸಿನ ಹುಡುಗಿ ಫೋಟೊ ತಗದೀನಿ.’’ “ಸರಿ ಸಿರಿಲ್, ಯಾವುದಪ್ಪಾ ಹುಡುಗಿ? ರಾಚೇಲ್ ಏನ್?” “ನಾನು ಹೇಳೋದಿಲ್ಲ ಫಾದರ್, ಅವಳ ಹೆಸರು ಹೇಳೂದು ಸರಿಯಲ್ಲ.” “ಸರಿ, ಜಾಣ ನೀನು, ಅವಳು ನಿತ್ಯಾರಾಣಿ ಅಲ್ಲವಾ?’’ “ನಾನು, ಹೇಳೋದಿಲ್ಲ ಫಾದರ್?’’ “ಹಂಗಾರ, ಮರಿಯವ್ವ ಏನ್?’’ “ಫಾದರ್, ನೀವು ನನ್ನ ಬಾಯಿ ಬಿಡಿಸಾಕ ಆಗೂದಿಲ್ಲ.’’ … Read more

ಬಾಡುತಿನಿ ಸಸ್ಯಗಳು ಮತ್ತು ಅವುಗಳ ಬೇಟೆಯೊಂದಿಗಿನ ಸಂಬಂಧ: ಗುಗ್ಗಳದ ಗೋವರ್ಧನ ಯಾದವ್‌, ರಮೇಶ ಪೂಜಾರ, ಬಸವರಾಜ ಸಾಲಿಯವರ್

ಪರಿಚಯಸಸ್ಯಗಳು ಇಂಗಾಲದ ಡೈ ಆಕ್ಸೈಡ್, ನೀರು ಮತ್ತು ಸೂರ್ಯನ ಬೆಳಕನ್ನು ಬಳಸಿಕೊಂಡುಎಲೆಗಳ ಪತ್ರಹರಿತ್ತಿನ ಸಹಾಯದಿಂದ ಆಹಾರವನ್ನು ತಯಾರಿಸುವ “ಬೆಳಕಿನಡುಗೆ” ಎಂಬ ವಿಶಿಶ್ಟ ಸಾಮರ್ಥ್ಯವನ್ನು ಹೊಂದಿವೆ. ಇದರ ಜೊತೆಗೆ ಬೇರಿನ ಏರ್ಪಾಡಿನ ಮೂಲಕ ನೀರು ಮತ್ತು ಖನಿಜಗಳನ್ನು ಹೀರಿಕೊಳ್ಳುತ್ತವೆ. ಆದರೆ, ಪರಾವಲಂಬಿ (Parasitic) ಮತ್ತು ಬಾಡುತಿನಿ ಸಸ್ಯಗಳಂತಹ (Carnivorous plants) ಕೆಲವು ಸಸ್ಯಗಳು ಈ ಮೂಲ ಗುಣಗಳಿಂದ ಬೇರ್ಪಟ್ಟು, ಆಹಾರ ಮತ್ತು ಖನಿಜಗಳಿಗೋಸ್ಕರ ಬೇರೆ ಜೀವಿಗಳ ಮೇಲೆ ಅವಲಂಬಿತವಾಗಿರುತ್ತವೆ. ಪರಾವಲಂಬಿ ಜೀವಿಗಳು ತಮ್ಮ ನೀರು, ಆಹಾರ ಅಥವಾ ಖನಿಜಗಳು … Read more

ಮೂರು ಕವಿತೆಗಳು: ಕವಿತಾ ವಿರುಪಾಕ್ಷ

ಮಗು ಮಾತಾಡಿದಾಗ ಕೈ ಬೆರಳ ನಡುವಿನ ಸೀಮೇಸುಣ್ಣಕರಗಿತು;ಅವಧಿ ಮುಗಿಯುವ ಸಮಯ… ಎಲ್ಲದರಂತೆಯೇ ಪಾಠ ಮುಗಿಯಿತೆಂದುಕೈಯೊರಸಿ ಹೊರಡಲಾದೀತೆ..?ಪುಟ್ಟ ಸಸಿಗಳು ಮಾತಾಡುವ ಸಮಯ’ಹೊರಡಲಿಟ್ಟ ಹೆಜ್ಜೆ ಥಟ್ಟನೆ ನಿಂತಿತು..ನೂರಾರು ಪ್ರಶ್ನೆಗಳು. ಅನತಿ ದೂರದ ಮೂಲೆಯಿಂದಕೂತೂಹಲ ತುಂಬಿದತಲೆಯ ಹೊತ್ತು,ಜೋಲಿ ಹೊಡೆಯುತ್ತಾ ಎದ್ದಿತೊಂದುಪುಟ್ಟ ಸಸಿ…. ಮಿಸ್..,ಧರ್ಮ ದೊಡ್ಡದಾ?ಜಾತಿ ದೊಡ್ಡದಾ?ಪಾಠಕ್ಕಂಟದ ಪ್ರಶ್ನೆ ತೂರಿ ಬಂದಿತ್ತು ಅಲ್ಲಿಂದ… ಆವಾಸ್ತವ ಬದುಕಿನಂತೆಅನಿರೀಕ್ಷಿತ ಪ್ರಶ್ನೆ;ಜ್ಯಾತ್ಯಾತೀತ ಮನದಲ್ಲಿ ಮೌನ ಸಂಕಟ. ಕ್ಷಣ ಸುಮ್ಮನಾದೆ;ಜ್ಯಾತ್ಯಾತೀತ ಪಾಠ ಮಾಡಿದವಳು ನಾನೇ ಅಲ್ಲವೇ ?ಪ್ರಶ್ನಿಸಿಕೊಂಡೆ.. ಕರುಳಿಗೇ ಕೊಡಲಿಪೆಟ್ಟುಕೊಡುವಷ್ಟು ಜಾತಿ ದೊಡ್ಡದಾದರೆಮತ್ತೆ ಧರ್ಮ ಇನ್ನೆಷ್ಟೋ..?ಮರ್ಯಾದೆಗೆ ಮನ ಮಸಣ … Read more

“ಎರಡೂವರೆ ದಶಕಗಳ ಹಿಂದಿನ ಹಳ್ಳಿಗಳೊಂದರ ಮುಗ್ಧ ನೈಜ ಪ್ರೇಮ ಕತೆಯೇ ಸಿರೈ”: ಪ್ರಶಾಂತ್ ಬೆಳತೂರು

ಸುರೇಶ್ ರಾಜಕುಮಾರಿ ತಮಿಳಿನ ಖ್ಯಾತ ಚಲನಚಿತ್ರ ನಿರ್ದೇಶಕ ವೆಟ್ರಿಮಾರನ್ ಅವರ ಗರಡಿಯಲ್ಲಿ ಸಹಾಯಕ ನಿರ್ದೇಶಕರಾಗಿ ಕೆಲಸ ಮಾಡುತ್ತಿದ್ದವರು, ಇದೇ ಮೊದಲ ಬಾರಿಗೆ ಸಿರೈ ಎಂಬ ತಮ್ಮ ಚೊಚ್ಚಲ ಚಿತ್ರದ ಮೂಲಕ ಸ್ವತಂತ್ರ ನಿರ್ದೇಶಕರಾಗಿ ಪಾದಾರ್ಪಣೆ ಮಾಡುತ್ತಿದ್ದಾರೆ ಎಂಬ ಕಾರಣಕ್ಕೆ ಈ ಚಿತ್ರವನ್ನು ಒಮ್ಮೆ ನೋಡಬೇಕೆಂಬ ಇಂಗಿತ ಅದು ಬಿಡುಗಡೆಯಾದ ದಿನಗಳಿಂದಲೂ ಇತ್ತು. ಹಾಗಾಗಿ ಈ ಸಿರೈ ಚಿತ್ರದ ಕುರಿತು ಯಾರಾದರೂ ವಿಮರ್ಶೆ ಬರೆಯುತ್ತಾರೋ ಅಥವಾ ಕನಿಷ್ಠ ಮುಖಪುಟದಲ್ಲಿ ಇದರ ಕುರಿತು ಅನಿಸಿಕೆ ಅಭಿಪ್ರಾಯಗಳನ್ನು ದಾಖಲಿಸಬಹುದೇನೊ ಎಂದು ಆಗಾಗ್ಗೆ … Read more

ಪಂಜು ಕಾವ್ಯಧಾರೆ

ಮಕರ ಸಂಕ್ರಾಂತಿ ಉತ್ತರಾಯಣದ ಪುಣ್ಯ ಕಾಲವಿದುದೀರ್ಘ ದಿನಗಳ ಆರಂಭವಿದುವಸಂತ ಋತುವಿನ ಸಮಯವಿದುಸುಖ ಸಮೃದ್ಧಿಯ ಸಂಕೇತವಿದು ಭೂರಮೆಗೆ ಚಿರ ಯವ್ವನದ ಆನಂದಅನುದಿನವೂ ನವ ಚೈತನ್ಯದ ನಿನಾದಬಾನೇರುವ ಬಾಲಂಗೋಚಿ ಸಂಭ್ರಮವುರಂಗೇರುವ ರಸದೌತಣ ಉತ್ಸವವು ಎಳ್ಳು – ಬೆಲ್ಲದ ಸಿಹಿ ಹೂರಣಮನ – ಮಾನಸದ ಸವಿ ಪೂರಣಬಾಂಧವ್ಯ ಬೆಸೆಯುವ ಈ ಹಬ್ಬಸೌಹಾರ್ದ ಸಾರುವ ಸುಗ್ಗಿಯ ಹಬ್ಬ ಕಹಿ ನೆನಪುಗಳು ಮರೆಯಾಗಲಿಸಿಹಿ ಮಧುರತೆ ಚಿರವಾಗಲಿದ್ವೇಷ ಅಸೂಯೆಗಳ ಮರೆಯೋಣಹಬ್ಬದ ಸಂಭ್ರಮ ಸಾರೋಣ -ಗಾಯತ್ರಿ ನಾರಾಯಣ ಅಡಿಗ “ಉರುಲು” ಹಾರು ಮಗಳೇ ಹಾರುಬೇಡವೆಂದವರಾರು ?ಆದರೆ…ಹಾರದಿರು ಹದ್ದು … Read more

ಆಡಿಸುವಾತ: ಪ್ರವೀಣ್‌ ಕುಮಾರ್‌ ಜಿ

ಮೂರು ನಾಳುಗಳಿಂದ(ದಿನ) ಬೆಂಗಳೂರಿನ ವಿಜಯನಗರದ ಮಾರೇನಹಳ್ಳಿಯ ಆರನೆಯ ಕ್ರಾಸು ಬಿಕೋ ಎನ್ನುತ್ತಿತ್ತು. ಅದಕ್ಕೆ ದೂಸರು(ಕಾರಣ) ಆಸ್ಟ್ರೇಲಿಯಾದಿಂದ ಬಂದ ಸುದ್ದಿ. ಹತ್ತು ಸಾಲುಗಳ ಸಿಡ್ನಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಕನ್ನಡದ ಉಸಿರನ್ನು ತುಂಬಿಕೊಂಡಿದ್ದ ಕಾರೊಂದಕ್ಕೆ, ಅಂತಹುದೇ ಹೊಸ ಕಾರುಗಳನ್ನು ಹೊತ್ತು ಫ್ಲ್ಯಾಕ್ಟರಿಯಿಂದ ಶೋ ರೂಮಿಗೆ ತಲುಪಿಸುವ ಬ್ರೇಕು ಫೇಲಾಗಿದ್ದ ದೊಡ್ಡ ಲಾರಿಯೊಂದು ಢಿಕ್ಕಿ ಹೊಡೆದು ಉರುಳಿಸಿತ್ತು. ನಿಂತ ಉಸಿರಿನ ಹೆಸರು ಸಂದೀಪ್. ಕೇವಲ ಇಪ್ಪತ್ತೇಳು ಏಡಿನ(ವರ್ಶ) ಸಂದೀಪ್ ಆಸ್ಟ್ರೇಲಿಯಾದಲ್ಲಿ ಸಾಫ್ಟ್ವೇರ್ ಇಂಜಿನಿಯರ್ ಆಗಿ ಕೆಲಸ ಮಾಡುತ್ತಿದ್ದ. ಕಳೆದ ತಿಂಗಳಶ್ಟೇ ಇಲ್ಲಿಗೆ … Read more

ಉಡುಗೊರೆ: ರಶ್ಮಿ ಪ್ರಶಾಂತ್

ಕಾಲೇಜಿನ ಸಾಂಸ್ಕೃತಿಕ ದಿನಕ್ಕಾಗಿ ಸೀರೆ ಬೇಕು ಎಂದು ಮಗಳು ಒಂದೇ ಸಮನೇ ಕೇಳುತ್ತಿದ್ದಳು, ಬಿಡುವು ಮಾಡಿಕೊಂಡು ಬೀರುವನ್ನು ತೆಗೆದು ಅವಳ ಆಯ್ಕೆಗೆ ಬಿಟ್ಟೆ. ಯಾವುದೂ ಅವಳಿಗೆ ಇಷ್ಟವಾಗಲಿಲ್ಲ. ಕೊನೆಗೆ ಬಾಕ್ಸ್ನಲ್ಲಿದ್ದ ಸೀರೆ ಕಣ್ಣಿಗೆ ಬಿತ್ತು. ಅದನ್ನು ಕೈಗೆತ್ತಿಕೊಂಡಳು.ಅದು ಸುಂದರವಾದ ಶ್ವೇತ ವರ್ಣದ ಜಾರ್ಜೆಟ್ ಸೀರೆ ಅದರ ಅಂಚಿಗೆ ಬಿಳಿ ಬಣ್ಣದ ಕಸೂತಿಯ ಬಾರ್ಡರ್! ಅವಳಿಗೆ ಹೇಳಿ ಮಾಡಿಸಿದಂತಿತ್ತು. ಇದನ್ನು ಉಟ್ಟಿದ್ದೇ ನೋಡಿಲ್ಲವಲ್ಲ ಎಂದಳು. ಅದನ್ನು ನೋಡಿದಾಕ್ಷಣ ಕಣ್ಣಾಲಿಗಳು ತುಂಬಿ ಬಂದವು. “ಇಲ್ಲಮ್ಮ ಈ ಸೀರೆಯನ್ನು ಜೀವನದಲ್ಲಿ ಎಂದಿಗೂ … Read more

ಹವಾ ನಿಯಂತ್ರಿತ ಕೋಣೆಯಲ್ಲಿ…: ಡಾ. ವಿಶ್ವನಾಥ ಎನ್ ನೇರಳಕಟ್ಟೆ

“ಇಲ್ಲಿ ಕುಳಿತುಕೊಳ್ಳಿ ಮೇಡಂ” ಎಂದು ನಗುವಿನಿಂದ ಮುಖವರಳಿಸಿದ ಕಾರ್ ಶೋರೂಮಿನ ಆ ಹುಡುಗಿ ವಿಸಿಟರ್ಸ್ ಕೊಠಡಿಯ ಬಾಗಿಲನ್ನು ಅವಳಾಗಿಯೇ ತೆರೆದುನಿಂತಳು. “ಥ್ಯಾಂಕ್ಸ್” ಎಂದು ಹೇಳುತ್ತಾ, ಒಳಹೋದ ತಕ್ಷಣವೇ ನನಗೆ ಕಾಣಿಸಿದ್ದು ಅಗಲ ಹಣೆ, ಚಿಕ್ಕ ಕಣ್ಣು, ಮಧ್ಯಮ ಕಿವಿ, ಬಿಳಿಯ ತಲೆಗೂದಲು, ಚೂಪು ಮೂಗು, ನಿರ್ದಾಕ್ಷಿಣ್ಯ ಭಂಗಿಯಲ್ಲಿ ಕುಳಿತ ಆ ವ್ಯಕ್ತಿ. ಹವಾ ನಿಯಂತ್ರಿತ ಕೋಣೆ ಎನ್ನುವುದನ್ನೂ ಮರೆತವನಂತೆ ಅಂಗಿಯ ಮೇಲಿನದೊಂದು ಗುಂಡಿಯನ್ನು ತೆರೆದು ಕುಳಿತಿದ್ದರು. ನೋಡಿ ಅದಾಗಲೇ ಏಳು ವರ್ಷ ಕಳೆದಿದೆ.ನೋಡಿಯೂ ನೋಡದಂತೆ ನಟಿಸುತ್ತಲೇ ಅವನ … Read more

ಕುಬೇರ ಮತ್ತು ಮನ್ಮಥ: ಜೆ.ವಿ.ಕಾರ್ಲೊ

ಮೂಲ: ಒ. ಹೆನ್ರಿ ಕನ್ನಡಕ್ಕೆ: ಜೆ.ವಿ.ಕಾರ್ಲೊ ‘ರೊಕ್ವಾಲ್’ ಬ್ರಾಯಂಡಿನ ಹೆಸರಿನಡಿಯಲ್ಲಿ ಸೋಪುಗಳನ್ನು ತಯಾರಿಸಿ ಮತ್ತು ಮಾರಾಟ ಮಾಡಿ ಮಿಲಿಯನ್ಗಟ್ಟಳೆ ಡಾಲರುಗಳನ್ನು ಸಂಪಾದಿಸಿದ್ದ ಹಿರಿಯ ತಲೆ ಅಂತೋಣಿ ರೊಕ್ವೆಲ್ ತನ್ನ ವಿಸ್ತಾರವಾದ ಫಿಫ್ತ್ ಅವೆನ್ಯೂ ಮನೆಯ ಕಿಟಕಿಯಬಳಿ ನಿಂತಿದ್ದ. ಅವನು ತನ್ನ ನೆರೆಯವನಾದ ಜಿ.ವ್ಯಾನ್ ಸಫೋಕ್ ಜೋನ್ಸ್ನನ್ನು ಗಮನಿಸುತ್ತಿದ್ದ. ಈ ನೆರೆಯವನು ಪ್ರತಿಷ್ಠಿತ ಹುಟ್ಟಾ ಶ್ರೀಮಂತ ನ್ಯೂಯೋರ್ಕ್ ಕುಟುಂಬವೊಂದರ ಹೆಮ್ಮೆಯ ಸದಸ್ಯನಾಗಿದ್ದ. ಅವನು ತನ್ನ ಮನೆಯಿಂದ ಹೊರಬಂದು ಬಾಡಿಗೆ ಬಂಡಿಯನ್ನೊಂದನ್ನು ಹತ್ತಿದ. ಅಭ್ಯಾಸಬಲದಿಂದೆಂಬಂತೆ ಒಮ್ಮೆ ಅಂತೋಣಿ ರೊಕ್ವೆಲ್ಲಾನ ಮನೆಯ … Read more

ಸಹೃದಯ: ಸಂತೋಷ್ ಟಿ

ಸಹೃದಯ ಎಂದರೆ ಒಳ್ಳೆಯ ಹೃದಯವಿರುವ ಮನುಷ್ಯ. ವೈದ್ಯಕೀಯ ಪರಿಭಾಷೆಯಲ್ಲಿ ಹೇಳುವುದಾದರೆ ಎದೆಯ ಮಧ್ಯ ಎಡ ಭಾಗದಲ್ಲಿರುವ ಕೈ ಮುಷ್ಟಿ ಗಾತ್ರದ ದೇಹದ ಅಂಗ. ಸ್ನಾಯುಗಳಿಂದ ಮಾಡಿರುವಂತ ಹೃದಯವು ನಿರಂತರವಾಗಿ ಹುಟ್ಟಿನಿಂದ ಸಾಯುವವರೆಗೂ ಕಾರ್ಯ ನಿರ್ವಹಿಸುತ್ತದೆ. ಇದನ್ನು ದಮನಿ ಎಂತಲೂ ಕರೆಯುವರು. ಇದರ ಕೆಲಸ ರಕ್ತ ಪರಿಶುದ್ಧತೆ ಮತ್ತು ಪರಿಚಲನೆ ಮಾಡಿ ಎಲ್ಲಾ ಅಂಗಗಳಿಗೂ ತಲುಪಿಸುವುದಾಗಿರುತ್ತದೆ. ಪ್ರತಿ ನಿಮಿಷಕ್ಕೆ ಎಪ್ಪತ್ತೇರಡು ಬಾರಿ ಲಬ್ ಡಬ್ ಲಬ್ ಡಬ್ ಎಂದು ಬಡಿದುಕೊಳ್ಳುತ್ತದೆ. ಅದು ನಿಂತುಬಿಟ್ಟರೆ ಮನುಷ್ಯ ಸತ್ತನೆಂದೆ ಅರ್ಥ. ಹೃದಯವು … Read more

ಕತ್ತಿಯಂಚ ಮೇಲಿನ ನಡಿಗೆ: ಗೌರಿ ಚಂದ್ರಕೇಸರಿ.

ಅವರು ತಟ್ಟುವ ಚಪ್ಪಾಳೆಗಳಲ್ಲಿ ವಿಭಿನ್ನವಾದ ಒಂದು ದನಿ ಇದೆ. ಆ ಚಪ್ಪಾಳೆಯ ಶಬ್ದ ಕಿವಿಗೆ ಬಿದ್ದೊಡನೆಯೇ ಇದು ಅವರದ್ದೇ ಚಪ್ಪಾಳೆ ಎಂದು ಮನಸು ನಿರ್ಧರಿಸಿ ಬಿಡುತ್ತದೆ. ತಟ್ಟನೆ ನಮ್ಮ ಕತ್ತು ಆ ಧ್ವನಿ ಬಂದತ್ತ ತಿರುಗುತ್ತದೆ. ಆ ಚಪ್ಪಾಳೆಗಳಲ್ಲಿ ರೋಷ, ಕೋಪ, ಉತ್ಸಾಹ, ಧೈರ್ಯ ಎಲ್ಲವೂ ಅಡಗಿರುತ್ತದೆ. ಕ್ರಿಯಾಶೀಲರಾಗಿ ಚಕ ಚಕನೆ ಅತ್ತಿಂದಿತ್ತ ಓಡಾಡುವ ಇವರಿಗೆ ಎಂಥವರ ಚಿತ್ತವನ್ನೂ ತಮ್ಮತ್ತ ಸೆಳೆದುಕೊಂಡು ಬಿಡುವ ಆಕರ್ಷಣೆ ಇದೆ. ಇವರ ಶೃಂಗಾರ, ಒನಪು, ವೈಯ್ಯಾರ ಸ್ತ್ರೀಯರನ್ನೇ ನಾಚಿಸುವಂತಿರುತ್ತದೆ. ಒಳ್ಳೆಯವರಿಗೆ ಒಳ್ಳೆಯವರು, … Read more

‘ಆರದಿರಲಿ ಬೆಳಕು ; ಮುಳುಗದಿರಲಿ ಬದುಕು ’: ಮಂಜು ರಾಜ್

‘ಈಗಾಗಲೇ ಎಲ್ಲವನ್ನೂ ಹೇಳಲಾಗಿದೆ; ಆಚರಿಸಬೇಕಷ್ಟೇ!’ ಎಂಬ ಮಾತಿಗೆ ಪೂರಕವಾಗಿ ಪ್ರಾಚೀನ ಗ್ರೀಕಿನತ್ತ ದೃಷ್ಟಿ ಹಾಯಿಸಿದರೆ ಅಪರೂಪದಲ್ಲಿ ನಿಜರೂಪವಾಗಿ ತೋರುವುದು ಎಪಿಕ್ಟೆಟಸ್ ಎಂಬ ತತ್ತ್ವಮೀಮಾಂಸಕ. ಪ್ರಾಚೀನ ಕಾಲದಲ್ಲಿ ನಿಸ್ಸಂಶಯವಾಗಿ ಎರಡು ದೇಶಗಳಲ್ಲಿ ನಾಗರಿಕ ಸಂಸ್ಕೃತಿ ಅತ್ಯುಚ್ಚ ಮಟ್ಟವನ್ನು ಮುಟ್ಟಿತ್ತು. ಒಂದು ಗ್ರೀಕ್ ಇನ್ನೊಂದು ಭಾರತ. ಭರತಖಂಡದಲ್ಲಿ ಸಂಸ್ಕೃತವೂ ಗ್ರೀಕಿನಲ್ಲಿ ಗ್ರೀಕ್ ಭಾಷೆಯೂ ಇದರ ವಾಹಕವಾಗಿತ್ತು. ನಮ್ಮಲ್ಲಿ ಋಷಿಮುನಿಗಳೂ ಸಂತರೂ ಕಾಣಿಸಿಕೊಂಡಂತೆ ಅಲ್ಲಿ ತತ್ತ್ವಜ್ಞಾನಿಗಳು ಅರಳಿದರು, ಹೊರಳಿದರು, ಪ್ರಾಣತ್ಯಾಗವನೂ ಮಾಡಿದರು. ಸಾಕ್ರಟೀಸನ ಶಿಷ್ಯ ಪ್ಲೇಟೊ, ಪ್ಲೇಟೊನ ಶಿಷ್ಯ ಅರಿಸ್ಟಾಟಲ್, ಅರಿಸ್ಟಾಟಲನ … Read more

ಬದುಕೆಂಬ ಅಚ್ಚರಿ: ಸುಮನಾ ರಮಾನಂದ,

“ಬದುಕು” ಈ ಮೂರಕ್ಷರದ ಪದ ಯಾವಾಗಲೂ ಒಂದು ಅಚ್ಚರಿಯೆನಿಸಿ ನನ್ನ ಮನಸಿಗೆ ಕಾಡುವುದುಂಟು.ಏಕೆಂದರೆ ಆ ಭಗವಂತ ನಮಗೆಲ್ಲ ಕೊಟ್ಟಿರುವುದು ಒಂದೇ ಒಂದು ಬದುಕು. ಬಯಸಿದರೂ ನಾವು ಇನ್ನೊಂದು ಮತ್ತೊಂದು ಅಂತ ಲೆಕ್ಕ ಹಾಕಿ ಬೇರೆ ಬದುಕನು ಪಡೆಯಲಾರೆವು.ಇರುವ ಒಂದು ಬದುಕನೇ ಸರಿಯಾಗಿ ಜೀವಿಸದೇ ಸುಮ್ಮನೆ ಮನಸಿಗೆ ಕಿರಿಕಿರಿ,ನೋವು ಮಾಡಿಕೊಂಡು ಬೇರೆಯವರಿಗೂ ನೆಮ್ಮದಿಯಿಂದ ಬದಕಲು ಬಿಡಲಾರದ ಮಂದಿ ಎಷ್ಟಿಲ್ಲ ಈ ಜಗದಲಿ.ಅವರಿಗೆಲ್ಲ ತಮ್ಮ ಬದುಕನು ತಮ್ಮದೇ ದೃಷ್ಟಿಕೋನದಿಂದ ನೋಡಿ ಗೊತ್ತಿರುವುದೇ ಹೊರತು ಬೇರೆಯವರ ದೃಷ್ಟಿಯಲಿ ಆ ಬದುಕನು ಹೇಗೆ … Read more

ನಿನ್ನ ಬಿಟ್ಟು…: ರಶ್ಮಿ ಕಬ್ಬಗಾರು

ಮಳೆ ಗಾಳಿ ಚಳಿ ಬಿಸಿಲ ಸಾರಾವಳಿಯಲ್ಲಿ ವರ್ಷ ಪೂರ ಬದುಕಿಯೇ ಇದ್ದೇನೆ… ಅದೂ ನಾನು ಮನಸಾರೆ ದ್ವೇಷಿಸುತ್ತಿದ್ದ ಬ್ರಿಟಿಷರ ನಾಡಲ್ಲಿ ಈ ಮುನ್ನೂರ ಅರವತ್ತೈದು ದಿನಗಳೂ ಒಂದಿಲ್ಲೊಂದು ರೀತಿಯಲ್ಲಿ ನನ್ನ ಐತಿಹಾಸಿಕ ದಾಸ್ಯದ ನೆನಪುಗಳ ಕಹಿಯನ್ನ ಒಂದಿಲ್ಲೊಂದು ರೀತಿಯಲ್ಲಿ ಕಮ್ಮಿ ಮಾಡುತ್ತಾ ಬಂದಿದ್ದವು ಖರೇ, ಅದರಲ್ಲಿ ಅಪೂರ್ವ ವಾದ ಒಂದು ವಾದವೆನ್ ದ್ರೆ, ಹೀತ್ರೂ ಲಂಡನ್ ಏರ್ ಪೋರ್ಟಿಂದ ನಮ್ಮನ್ನ ಗೆಳತಿ ನಿವೇದಿತ ಮನೆಗೆ ಕರೆದೊಯ್ಯುತ್ತಿದ್ದ ಬಿಳಿಯ ಟ್ಯಾಕ್ಸಿ ಡ್ರೈವರ್ ನ ಸಹಜ ಮಾತುಕತೆಯಲ್ಲಿ ಕಂಡಿದ್ದು. ಅಲ್ಲಿನ … Read more

ಆತಂಕ ಸೃಷ್ಟಿಸಿದ ಗೋವಾ ಪ್ರವಾಸ !: ಎಲ್. ಚಿನ್ನಪ್ಪ

ಪ್ರವಾಸ ಎಂದರೆ, ದೇಹಕ್ಕೆ ನವೋಲ್ಲಾಸ ಮತ್ತು ಮನಸ್ಸಿಗೆ ಮುದ ನೀಡುವ ಒಂದು ಮಾನಸಿಕ ಕ್ರಿಯೆ. ಪ್ರತಿದಿನ ಯಾಂತ್ರಿಕ ಬದುಕಿನಲ್ಲಿ ದುಡಿದು ಬಸವಳಿದವರು ಒಂದೆರಡು ದಿನಗಳು ಪ್ರವಾಸ ಮಾಡಿ ಬಂದರೆ, ಅವರಲ್ಲಿ ನವ ಚೈತನ್ಯ ತುಂಬುತ್ತದೆ, ಹುರುಪು ಹೆಚ್ಚಾಗುತ್ತದೆ, ಕದಡಿದ ಮನಸ್ಸು ಪ್ರಪುಲ್ಲಗೊಳ್ಳುತ್ತದೆ. ವರ್ಷಕ್ಕೊಮ್ಮೆ ಯಾವುದಾದರೊಂದು ಪ್ರವಾಸ ಮಾಡಿ ಬರುವುದು ದೈಹಿಕ ಹಾಗು ಮಾನಸಿಕ ದೃಷ್ಟಿಯಿಂದಲೂ ಒಳ್ಳೆಯದು. ಪ್ರವಾಸಕ್ಕೆ ಸ್ಥಳಗಳನ್ನು ಆಯ್ಕೆ ಮಾಡಿಕೊಳ್ಳುವುದು ಅವರವರ ಇಚ್ಛೆಗೆ ಬಿಟ್ಟದ್ದು. ಕೆಲವರು ಪ್ರವಾಸಕ್ಕೆ ಪುಣ್ಯ ಸ್ಥಳಗಳನ್ನು ಆಯ್ಕೆ ಮಾಡಿಕೊಂಡರೆ, ಕೆಲವರು ಐತಿಹಾಸಿಕ … Read more

ಪಂಜು ಕಾವ್ಯಧಾರೆ

ನೈಜ ಸಂಪತ್ತು ನಗುವಿರಲಿ ಮೊಗದ ತುಂಬಗೆಳೆಯರಿರಲಿ ಈ ಜಗದ ತುಂಬಮಾತು ಮಾತಿನ ಜೊತೆಗಿರಲಿಖುಷಿಯ ಹೆಚ್ಚಿಸೊ ನಗೆಯ ಬಿಂಬ ತೋರಬೇಕಿಲ್ಲ ಯಾರೂ ಸುಮ್ಮನೆಬೇಡದ ಅಹಂಕಾರದ ಒಣಜಂಬಮಕ್ಕಳ ನಗುವ ಕಲರವ ಹಿರಿಯರಅನುಭವದ ಮಾತು ತುಂಬಿರಲಿಪ್ರತಿಮನೆ ಮನಗಳ ಅಂಗಣದ ತುಂಬ ಒಳ್ಳೆಯ ಮಾತುಗಳು ಕೇಳಿಬರಲಿನಮ್ಮ ಸುತ್ತಲಿನ ಜನ ಮನದಿಂದಯಾರಿಗೂ ತೊಂದರೆ ಆಗದಿರಲಿತಿಳಿದೋ ತಿಳಿಯದೆಯೋ ನಮ್ಮಿಂದ ಯಾರಿಗೆ ಯಾರೋ ಯಾರಿಗೆ ಗೊತ್ತುಚಿಂತೆಯ ಕಳೆಯಲಿ ಈ ಅಲ್ಪ ಹೊತ್ತುಸತ್ತಂತೆ ಬದುಕಬಾರದು ನಾವ್ಯಾವತ್ತುಶಾಂತಿ ನೆಮ್ಮದಿಯೇ ನಮ್ಮ ನೈಜ ಸಂಪತ್ತು -ನಾಗರಾಜ ಜಿ.ಎನ್. ಓ ಕನಸೇ ಎಲ್ಲ … Read more

ಆಯಿ’ ನನಗೆ ತಾಯಿಯಂತಿದ್ದಳು !: ಡಾ. ಸದಾಶಿವ ದೊಡಮನಿ

” ‘ಆಯೀ’ನ ನೆನೆಯೋದು ಯಾ ಯಾಳಿ ಹೊತ್ತು?” ಸಮಯಾಸಮಯಗಳ ಗೊಡವೆ ಇಲ್ಲದೆ ತತಕ್ಷಣ ನೆನಪಾಗುವ ಸಂಜೀವಿ; ಅನುಗಾಲವೂ ದಿವ್ಯ ಸ್ಮರಣೆಯಲಿರುವ ಅಂತಃಕರಣದ ಮಹಾತಾಯಿ ಆಯಿ. ಆಯಿ ಎಂದರೆ ಬೇರೆ ಯಾರೂ ಅಲ್ಲ. ನನ್ನ ಅವ್ವನ ಅವ್ವ. ನಾನು ಎರಡನೆಯ ತರಗತಿಯನ್ನು ನಮ್ಮೂರಲ್ಲಿ (ವಿಜಯಪುರ ಜಿಲ್ಲೆ, ಇಂಡಿ ತಾಲೂಕು, ಬೂದಿಹಾಳ ) ಓದುತ್ತಿರುವ ಸಂದರ್ಭ, ಆಗ ಭೀಕರ ಬರಗಾಲ ತಲೆದೋರಿ, ಕುಡಿಯಲು ನೀರಿಗೂ ಬರ. ದನ-ಕರುಗಳಿಗೆ ಮೇವಿನ ಭವಣೆ. ಕೆಲಸವಿಲ್ಲದೆ ಉಪಜೀವನ ನಡೆಸುವುದೇ ಕಷ್ಟವಾದಾಗ ದಿಕ್ಕುಗಾಣದೆ ಅವ್ವ-ಅಪ್ಪ ಊರಿನ … Read more

“ಸಂಸ್ಕೃತಿ, ಸಂಪ್ರದಾಯ ಹಾಗೂ ಸಮೃದ್ಧಿಯ ಹಬ್ಬ -ಸಂಕ್ರಾಂತಿ”: ಚಲುವೇಗೌಡ ಡಿ ಎಸ್

ವರ್ಷದ ಮೊದಲ ಹಬ್ಬ:-ಭಾರತೀಯ ಹಬ್ಬಗಳ ಸಾಲಿನಲ್ಲಿ ಸಂಕ್ರಾಂತಿಯು ಒಂದು ಮಹತ್ವದ ಸ್ಥಾನವನ್ನು ಪಡೆದಿರುವ ಸಂಭ್ರಮ, ಸಡಗರದ ಹಬ್ಬ. ರವಿಯು ಧನು ರಾಶಿಯಿಂದ ಮಕರ ರಾಶಿಗೆ ಪ್ರವೇಶಿಸುವ ಸುದಿನವನ್ನು ಮಕರ ಸಂಕ್ರಾಂತಿ ದಿನ ಅಥವಾ ಮಕರ ಸಂಕ್ರಮಣ ದಿನವೆಂದು ಆಚರಿಸುತ್ತೇವೆ. ಈ ದಿನದಿಂದ ಉತ್ತರಾಯಣ ಆರಂಭವಾಗುತ್ತದೆ. ಅಂದರೆ ಸೂರ್ಯನು ದಕ್ಷಿಣನಿಂದ ಉತ್ತರಕ್ಕೆ ಚಲಿಸುವ ಆರು ತಿಂಗಳ ಅವಧಿಯು ಆರಂಭವಾಗುವ ಸಂಕೇತವನ್ನು ಈ ಹಬ್ಬವು ಸೂಚಿಸುತ್ತದೆ. ವರ್ಷದ ಮೊದಲ ಹಬ್ಬ ಮಕರ ಸಂಕ್ರಾಂತಿ. ಸಂಕ್ರಾಂತಿಯಂದೆ ಮಕರ ಜ್ಯೋತಿ ದರ್ಶನದ ಭಾಗ್ಯ … Read more