ಪಂಜು ಕಾವ್ಯಧಾರೆ

ಮಕರ ಸಂಕ್ರಾಂತಿ ಉತ್ತರಾಯಣದ ಪುಣ್ಯ ಕಾಲವಿದುದೀರ್ಘ ದಿನಗಳ ಆರಂಭವಿದುವಸಂತ ಋತುವಿನ ಸಮಯವಿದುಸುಖ ಸಮೃದ್ಧಿಯ ಸಂಕೇತವಿದು ಭೂರಮೆಗೆ ಚಿರ ಯವ್ವನದ ಆನಂದಅನುದಿನವೂ ನವ ಚೈತನ್ಯದ ನಿನಾದಬಾನೇರುವ ಬಾಲಂಗೋಚಿ ಸಂಭ್ರಮವುರಂಗೇರುವ ರಸದೌತಣ ಉತ್ಸವವು ಎಳ್ಳು – ಬೆಲ್ಲದ ಸಿಹಿ ಹೂರಣಮನ – ಮಾನಸದ ಸವಿ ಪೂರಣಬಾಂಧವ್ಯ ಬೆಸೆಯುವ ಈ ಹಬ್ಬಸೌಹಾರ್ದ ಸಾರುವ ಸುಗ್ಗಿಯ ಹಬ್ಬ ಕಹಿ ನೆನಪುಗಳು ಮರೆಯಾಗಲಿಸಿಹಿ ಮಧುರತೆ ಚಿರವಾಗಲಿದ್ವೇಷ ಅಸೂಯೆಗಳ ಮರೆಯೋಣಹಬ್ಬದ ಸಂಭ್ರಮ ಸಾರೋಣ -ಗಾಯತ್ರಿ ನಾರಾಯಣ ಅಡಿಗ “ಉರುಲು” ಹಾರು ಮಗಳೇ ಹಾರುಬೇಡವೆಂದವರಾರು ?ಆದರೆ…ಹಾರದಿರು ಹದ್ದು … Read more

ಕನ್ನಡದ ಬರಹಗಳನ್ನು ಹಂಚಿ ಹರಡಿ

ಆಡಿಸುವಾತ: ಪ್ರವೀಣ್‌ ಕುಮಾರ್‌ ಜಿ

ಮೂರು ನಾಳುಗಳಿಂದ(ದಿನ) ಬೆಂಗಳೂರಿನ ವಿಜಯನಗರದ ಮಾರೇನಹಳ್ಳಿಯ ಆರನೆಯ ಕ್ರಾಸು ಬಿಕೋ ಎನ್ನುತ್ತಿತ್ತು. ಅದಕ್ಕೆ ದೂಸರು(ಕಾರಣ) ಆಸ್ಟ್ರೇಲಿಯಾದಿಂದ ಬಂದ ಸುದ್ದಿ. ಹತ್ತು ಸಾಲುಗಳ ಸಿಡ್ನಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಕನ್ನಡದ ಉಸಿರನ್ನು ತುಂಬಿಕೊಂಡಿದ್ದ ಕಾರೊಂದಕ್ಕೆ, ಅಂತಹುದೇ ಹೊಸ ಕಾರುಗಳನ್ನು ಹೊತ್ತು ಫ್ಲ್ಯಾಕ್ಟರಿಯಿಂದ ಶೋ ರೂಮಿಗೆ ತಲುಪಿಸುವ ಬ್ರೇಕು ಫೇಲಾಗಿದ್ದ ದೊಡ್ಡ ಲಾರಿಯೊಂದು ಢಿಕ್ಕಿ ಹೊಡೆದು ಉರುಳಿಸಿತ್ತು. ನಿಂತ ಉಸಿರಿನ ಹೆಸರು ಸಂದೀಪ್. ಕೇವಲ ಇಪ್ಪತ್ತೇಳು ಏಡಿನ(ವರ್ಶ) ಸಂದೀಪ್ ಆಸ್ಟ್ರೇಲಿಯಾದಲ್ಲಿ ಸಾಫ್ಟ್ವೇರ್ ಇಂಜಿನಿಯರ್ ಆಗಿ ಕೆಲಸ ಮಾಡುತ್ತಿದ್ದ. ಕಳೆದ ತಿಂಗಳಶ್ಟೇ ಇಲ್ಲಿಗೆ … Read more

ಕನ್ನಡದ ಬರಹಗಳನ್ನು ಹಂಚಿ ಹರಡಿ

ಉಡುಗೊರೆ: ರಶ್ಮಿ ಪ್ರಶಾಂತ್

ಕಾಲೇಜಿನ ಸಾಂಸ್ಕೃತಿಕ ದಿನಕ್ಕಾಗಿ ಸೀರೆ ಬೇಕು ಎಂದು ಮಗಳು ಒಂದೇ ಸಮನೇ ಕೇಳುತ್ತಿದ್ದಳು, ಬಿಡುವು ಮಾಡಿಕೊಂಡು ಬೀರುವನ್ನು ತೆಗೆದು ಅವಳ ಆಯ್ಕೆಗೆ ಬಿಟ್ಟೆ. ಯಾವುದೂ ಅವಳಿಗೆ ಇಷ್ಟವಾಗಲಿಲ್ಲ. ಕೊನೆಗೆ ಬಾಕ್ಸ್ನಲ್ಲಿದ್ದ ಸೀರೆ ಕಣ್ಣಿಗೆ ಬಿತ್ತು. ಅದನ್ನು ಕೈಗೆತ್ತಿಕೊಂಡಳು.ಅದು ಸುಂದರವಾದ ಶ್ವೇತ ವರ್ಣದ ಜಾರ್ಜೆಟ್ ಸೀರೆ ಅದರ ಅಂಚಿಗೆ ಬಿಳಿ ಬಣ್ಣದ ಕಸೂತಿಯ ಬಾರ್ಡರ್! ಅವಳಿಗೆ ಹೇಳಿ ಮಾಡಿಸಿದಂತಿತ್ತು. ಇದನ್ನು ಉಟ್ಟಿದ್ದೇ ನೋಡಿಲ್ಲವಲ್ಲ ಎಂದಳು. ಅದನ್ನು ನೋಡಿದಾಕ್ಷಣ ಕಣ್ಣಾಲಿಗಳು ತುಂಬಿ ಬಂದವು. “ಇಲ್ಲಮ್ಮ ಈ ಸೀರೆಯನ್ನು ಜೀವನದಲ್ಲಿ ಎಂದಿಗೂ … Read more

ಕನ್ನಡದ ಬರಹಗಳನ್ನು ಹಂಚಿ ಹರಡಿ

ಹವಾ ನಿಯಂತ್ರಿತ ಕೋಣೆಯಲ್ಲಿ…: ಡಾ. ವಿಶ್ವನಾಥ ಎನ್ ನೇರಳಕಟ್ಟೆ

“ಇಲ್ಲಿ ಕುಳಿತುಕೊಳ್ಳಿ ಮೇಡಂ” ಎಂದು ನಗುವಿನಿಂದ ಮುಖವರಳಿಸಿದ ಕಾರ್ ಶೋರೂಮಿನ ಆ ಹುಡುಗಿ ವಿಸಿಟರ್ಸ್ ಕೊಠಡಿಯ ಬಾಗಿಲನ್ನು ಅವಳಾಗಿಯೇ ತೆರೆದುನಿಂತಳು. “ಥ್ಯಾಂಕ್ಸ್” ಎಂದು ಹೇಳುತ್ತಾ, ಒಳಹೋದ ತಕ್ಷಣವೇ ನನಗೆ ಕಾಣಿಸಿದ್ದು ಅಗಲ ಹಣೆ, ಚಿಕ್ಕ ಕಣ್ಣು, ಮಧ್ಯಮ ಕಿವಿ, ಬಿಳಿಯ ತಲೆಗೂದಲು, ಚೂಪು ಮೂಗು, ನಿರ್ದಾಕ್ಷಿಣ್ಯ ಭಂಗಿಯಲ್ಲಿ ಕುಳಿತ ಆ ವ್ಯಕ್ತಿ. ಹವಾ ನಿಯಂತ್ರಿತ ಕೋಣೆ ಎನ್ನುವುದನ್ನೂ ಮರೆತವನಂತೆ ಅಂಗಿಯ ಮೇಲಿನದೊಂದು ಗುಂಡಿಯನ್ನು ತೆರೆದು ಕುಳಿತಿದ್ದರು. ನೋಡಿ ಅದಾಗಲೇ ಏಳು ವರ್ಷ ಕಳೆದಿದೆ.ನೋಡಿಯೂ ನೋಡದಂತೆ ನಟಿಸುತ್ತಲೇ ಅವನ … Read more

ಕನ್ನಡದ ಬರಹಗಳನ್ನು ಹಂಚಿ ಹರಡಿ

ಕುಬೇರ ಮತ್ತು ಮನ್ಮಥ: ಜೆ.ವಿ.ಕಾರ್ಲೊ

ಮೂಲ: ಒ. ಹೆನ್ರಿ ಕನ್ನಡಕ್ಕೆ: ಜೆ.ವಿ.ಕಾರ್ಲೊ ‘ರೊಕ್ವಾಲ್’ ಬ್ರಾಯಂಡಿನ ಹೆಸರಿನಡಿಯಲ್ಲಿ ಸೋಪುಗಳನ್ನು ತಯಾರಿಸಿ ಮತ್ತು ಮಾರಾಟ ಮಾಡಿ ಮಿಲಿಯನ್ಗಟ್ಟಳೆ ಡಾಲರುಗಳನ್ನು ಸಂಪಾದಿಸಿದ್ದ ಹಿರಿಯ ತಲೆ ಅಂತೋಣಿ ರೊಕ್ವೆಲ್ ತನ್ನ ವಿಸ್ತಾರವಾದ ಫಿಫ್ತ್ ಅವೆನ್ಯೂ ಮನೆಯ ಕಿಟಕಿಯಬಳಿ ನಿಂತಿದ್ದ. ಅವನು ತನ್ನ ನೆರೆಯವನಾದ ಜಿ.ವ್ಯಾನ್ ಸಫೋಕ್ ಜೋನ್ಸ್ನನ್ನು ಗಮನಿಸುತ್ತಿದ್ದ. ಈ ನೆರೆಯವನು ಪ್ರತಿಷ್ಠಿತ ಹುಟ್ಟಾ ಶ್ರೀಮಂತ ನ್ಯೂಯೋರ್ಕ್ ಕುಟುಂಬವೊಂದರ ಹೆಮ್ಮೆಯ ಸದಸ್ಯನಾಗಿದ್ದ. ಅವನು ತನ್ನ ಮನೆಯಿಂದ ಹೊರಬಂದು ಬಾಡಿಗೆ ಬಂಡಿಯನ್ನೊಂದನ್ನು ಹತ್ತಿದ. ಅಭ್ಯಾಸಬಲದಿಂದೆಂಬಂತೆ ಒಮ್ಮೆ ಅಂತೋಣಿ ರೊಕ್ವೆಲ್ಲಾನ ಮನೆಯ … Read more

ಕನ್ನಡದ ಬರಹಗಳನ್ನು ಹಂಚಿ ಹರಡಿ

ಸಹೃದಯ: ಸಂತೋಷ್ ಟಿ

ಸಹೃದಯ ಎಂದರೆ ಒಳ್ಳೆಯ ಹೃದಯವಿರುವ ಮನುಷ್ಯ. ವೈದ್ಯಕೀಯ ಪರಿಭಾಷೆಯಲ್ಲಿ ಹೇಳುವುದಾದರೆ ಎದೆಯ ಮಧ್ಯ ಎಡ ಭಾಗದಲ್ಲಿರುವ ಕೈ ಮುಷ್ಟಿ ಗಾತ್ರದ ದೇಹದ ಅಂಗ. ಸ್ನಾಯುಗಳಿಂದ ಮಾಡಿರುವಂತ ಹೃದಯವು ನಿರಂತರವಾಗಿ ಹುಟ್ಟಿನಿಂದ ಸಾಯುವವರೆಗೂ ಕಾರ್ಯ ನಿರ್ವಹಿಸುತ್ತದೆ. ಇದನ್ನು ದಮನಿ ಎಂತಲೂ ಕರೆಯುವರು. ಇದರ ಕೆಲಸ ರಕ್ತ ಪರಿಶುದ್ಧತೆ ಮತ್ತು ಪರಿಚಲನೆ ಮಾಡಿ ಎಲ್ಲಾ ಅಂಗಗಳಿಗೂ ತಲುಪಿಸುವುದಾಗಿರುತ್ತದೆ. ಪ್ರತಿ ನಿಮಿಷಕ್ಕೆ ಎಪ್ಪತ್ತೇರಡು ಬಾರಿ ಲಬ್ ಡಬ್ ಲಬ್ ಡಬ್ ಎಂದು ಬಡಿದುಕೊಳ್ಳುತ್ತದೆ. ಅದು ನಿಂತುಬಿಟ್ಟರೆ ಮನುಷ್ಯ ಸತ್ತನೆಂದೆ ಅರ್ಥ. ಹೃದಯವು … Read more

ಕನ್ನಡದ ಬರಹಗಳನ್ನು ಹಂಚಿ ಹರಡಿ

ಕತ್ತಿಯಂಚ ಮೇಲಿನ ನಡಿಗೆ: ಗೌರಿ ಚಂದ್ರಕೇಸರಿ.

ಅವರು ತಟ್ಟುವ ಚಪ್ಪಾಳೆಗಳಲ್ಲಿ ವಿಭಿನ್ನವಾದ ಒಂದು ದನಿ ಇದೆ. ಆ ಚಪ್ಪಾಳೆಯ ಶಬ್ದ ಕಿವಿಗೆ ಬಿದ್ದೊಡನೆಯೇ ಇದು ಅವರದ್ದೇ ಚಪ್ಪಾಳೆ ಎಂದು ಮನಸು ನಿರ್ಧರಿಸಿ ಬಿಡುತ್ತದೆ. ತಟ್ಟನೆ ನಮ್ಮ ಕತ್ತು ಆ ಧ್ವನಿ ಬಂದತ್ತ ತಿರುಗುತ್ತದೆ. ಆ ಚಪ್ಪಾಳೆಗಳಲ್ಲಿ ರೋಷ, ಕೋಪ, ಉತ್ಸಾಹ, ಧೈರ್ಯ ಎಲ್ಲವೂ ಅಡಗಿರುತ್ತದೆ. ಕ್ರಿಯಾಶೀಲರಾಗಿ ಚಕ ಚಕನೆ ಅತ್ತಿಂದಿತ್ತ ಓಡಾಡುವ ಇವರಿಗೆ ಎಂಥವರ ಚಿತ್ತವನ್ನೂ ತಮ್ಮತ್ತ ಸೆಳೆದುಕೊಂಡು ಬಿಡುವ ಆಕರ್ಷಣೆ ಇದೆ. ಇವರ ಶೃಂಗಾರ, ಒನಪು, ವೈಯ್ಯಾರ ಸ್ತ್ರೀಯರನ್ನೇ ನಾಚಿಸುವಂತಿರುತ್ತದೆ. ಒಳ್ಳೆಯವರಿಗೆ ಒಳ್ಳೆಯವರು, … Read more

ಕನ್ನಡದ ಬರಹಗಳನ್ನು ಹಂಚಿ ಹರಡಿ

‘ಆರದಿರಲಿ ಬೆಳಕು ; ಮುಳುಗದಿರಲಿ ಬದುಕು ’: ಮಂಜು ರಾಜ್

‘ಈಗಾಗಲೇ ಎಲ್ಲವನ್ನೂ ಹೇಳಲಾಗಿದೆ; ಆಚರಿಸಬೇಕಷ್ಟೇ!’ ಎಂಬ ಮಾತಿಗೆ ಪೂರಕವಾಗಿ ಪ್ರಾಚೀನ ಗ್ರೀಕಿನತ್ತ ದೃಷ್ಟಿ ಹಾಯಿಸಿದರೆ ಅಪರೂಪದಲ್ಲಿ ನಿಜರೂಪವಾಗಿ ತೋರುವುದು ಎಪಿಕ್ಟೆಟಸ್ ಎಂಬ ತತ್ತ್ವಮೀಮಾಂಸಕ. ಪ್ರಾಚೀನ ಕಾಲದಲ್ಲಿ ನಿಸ್ಸಂಶಯವಾಗಿ ಎರಡು ದೇಶಗಳಲ್ಲಿ ನಾಗರಿಕ ಸಂಸ್ಕೃತಿ ಅತ್ಯುಚ್ಚ ಮಟ್ಟವನ್ನು ಮುಟ್ಟಿತ್ತು. ಒಂದು ಗ್ರೀಕ್ ಇನ್ನೊಂದು ಭಾರತ. ಭರತಖಂಡದಲ್ಲಿ ಸಂಸ್ಕೃತವೂ ಗ್ರೀಕಿನಲ್ಲಿ ಗ್ರೀಕ್ ಭಾಷೆಯೂ ಇದರ ವಾಹಕವಾಗಿತ್ತು. ನಮ್ಮಲ್ಲಿ ಋಷಿಮುನಿಗಳೂ ಸಂತರೂ ಕಾಣಿಸಿಕೊಂಡಂತೆ ಅಲ್ಲಿ ತತ್ತ್ವಜ್ಞಾನಿಗಳು ಅರಳಿದರು, ಹೊರಳಿದರು, ಪ್ರಾಣತ್ಯಾಗವನೂ ಮಾಡಿದರು. ಸಾಕ್ರಟೀಸನ ಶಿಷ್ಯ ಪ್ಲೇಟೊ, ಪ್ಲೇಟೊನ ಶಿಷ್ಯ ಅರಿಸ್ಟಾಟಲ್, ಅರಿಸ್ಟಾಟಲನ … Read more

ಕನ್ನಡದ ಬರಹಗಳನ್ನು ಹಂಚಿ ಹರಡಿ

ಬದುಕೆಂಬ ಅಚ್ಚರಿ: ಸುಮನಾ ರಮಾನಂದ,

“ಬದುಕು” ಈ ಮೂರಕ್ಷರದ ಪದ ಯಾವಾಗಲೂ ಒಂದು ಅಚ್ಚರಿಯೆನಿಸಿ ನನ್ನ ಮನಸಿಗೆ ಕಾಡುವುದುಂಟು.ಏಕೆಂದರೆ ಆ ಭಗವಂತ ನಮಗೆಲ್ಲ ಕೊಟ್ಟಿರುವುದು ಒಂದೇ ಒಂದು ಬದುಕು. ಬಯಸಿದರೂ ನಾವು ಇನ್ನೊಂದು ಮತ್ತೊಂದು ಅಂತ ಲೆಕ್ಕ ಹಾಕಿ ಬೇರೆ ಬದುಕನು ಪಡೆಯಲಾರೆವು.ಇರುವ ಒಂದು ಬದುಕನೇ ಸರಿಯಾಗಿ ಜೀವಿಸದೇ ಸುಮ್ಮನೆ ಮನಸಿಗೆ ಕಿರಿಕಿರಿ,ನೋವು ಮಾಡಿಕೊಂಡು ಬೇರೆಯವರಿಗೂ ನೆಮ್ಮದಿಯಿಂದ ಬದಕಲು ಬಿಡಲಾರದ ಮಂದಿ ಎಷ್ಟಿಲ್ಲ ಈ ಜಗದಲಿ.ಅವರಿಗೆಲ್ಲ ತಮ್ಮ ಬದುಕನು ತಮ್ಮದೇ ದೃಷ್ಟಿಕೋನದಿಂದ ನೋಡಿ ಗೊತ್ತಿರುವುದೇ ಹೊರತು ಬೇರೆಯವರ ದೃಷ್ಟಿಯಲಿ ಆ ಬದುಕನು ಹೇಗೆ … Read more

ಕನ್ನಡದ ಬರಹಗಳನ್ನು ಹಂಚಿ ಹರಡಿ

ನಿನ್ನ ಬಿಟ್ಟು…: ರಶ್ಮಿ ಕಬ್ಬಗಾರು

ಮಳೆ ಗಾಳಿ ಚಳಿ ಬಿಸಿಲ ಸಾರಾವಳಿಯಲ್ಲಿ ವರ್ಷ ಪೂರ ಬದುಕಿಯೇ ಇದ್ದೇನೆ… ಅದೂ ನಾನು ಮನಸಾರೆ ದ್ವೇಷಿಸುತ್ತಿದ್ದ ಬ್ರಿಟಿಷರ ನಾಡಲ್ಲಿ ಈ ಮುನ್ನೂರ ಅರವತ್ತೈದು ದಿನಗಳೂ ಒಂದಿಲ್ಲೊಂದು ರೀತಿಯಲ್ಲಿ ನನ್ನ ಐತಿಹಾಸಿಕ ದಾಸ್ಯದ ನೆನಪುಗಳ ಕಹಿಯನ್ನ ಒಂದಿಲ್ಲೊಂದು ರೀತಿಯಲ್ಲಿ ಕಮ್ಮಿ ಮಾಡುತ್ತಾ ಬಂದಿದ್ದವು ಖರೇ, ಅದರಲ್ಲಿ ಅಪೂರ್ವ ವಾದ ಒಂದು ವಾದವೆನ್ ದ್ರೆ, ಹೀತ್ರೂ ಲಂಡನ್ ಏರ್ ಪೋರ್ಟಿಂದ ನಮ್ಮನ್ನ ಗೆಳತಿ ನಿವೇದಿತ ಮನೆಗೆ ಕರೆದೊಯ್ಯುತ್ತಿದ್ದ ಬಿಳಿಯ ಟ್ಯಾಕ್ಸಿ ಡ್ರೈವರ್ ನ ಸಹಜ ಮಾತುಕತೆಯಲ್ಲಿ ಕಂಡಿದ್ದು. ಅಲ್ಲಿನ … Read more

ಕನ್ನಡದ ಬರಹಗಳನ್ನು ಹಂಚಿ ಹರಡಿ

ಆತಂಕ ಸೃಷ್ಟಿಸಿದ ಗೋವಾ ಪ್ರವಾಸ !: ಎಲ್. ಚಿನ್ನಪ್ಪ

ಪ್ರವಾಸ ಎಂದರೆ, ದೇಹಕ್ಕೆ ನವೋಲ್ಲಾಸ ಮತ್ತು ಮನಸ್ಸಿಗೆ ಮುದ ನೀಡುವ ಒಂದು ಮಾನಸಿಕ ಕ್ರಿಯೆ. ಪ್ರತಿದಿನ ಯಾಂತ್ರಿಕ ಬದುಕಿನಲ್ಲಿ ದುಡಿದು ಬಸವಳಿದವರು ಒಂದೆರಡು ದಿನಗಳು ಪ್ರವಾಸ ಮಾಡಿ ಬಂದರೆ, ಅವರಲ್ಲಿ ನವ ಚೈತನ್ಯ ತುಂಬುತ್ತದೆ, ಹುರುಪು ಹೆಚ್ಚಾಗುತ್ತದೆ, ಕದಡಿದ ಮನಸ್ಸು ಪ್ರಪುಲ್ಲಗೊಳ್ಳುತ್ತದೆ. ವರ್ಷಕ್ಕೊಮ್ಮೆ ಯಾವುದಾದರೊಂದು ಪ್ರವಾಸ ಮಾಡಿ ಬರುವುದು ದೈಹಿಕ ಹಾಗು ಮಾನಸಿಕ ದೃಷ್ಟಿಯಿಂದಲೂ ಒಳ್ಳೆಯದು. ಪ್ರವಾಸಕ್ಕೆ ಸ್ಥಳಗಳನ್ನು ಆಯ್ಕೆ ಮಾಡಿಕೊಳ್ಳುವುದು ಅವರವರ ಇಚ್ಛೆಗೆ ಬಿಟ್ಟದ್ದು. ಕೆಲವರು ಪ್ರವಾಸಕ್ಕೆ ಪುಣ್ಯ ಸ್ಥಳಗಳನ್ನು ಆಯ್ಕೆ ಮಾಡಿಕೊಂಡರೆ, ಕೆಲವರು ಐತಿಹಾಸಿಕ … Read more

ಕನ್ನಡದ ಬರಹಗಳನ್ನು ಹಂಚಿ ಹರಡಿ

ಪಂಜು ಕಾವ್ಯಧಾರೆ

ನೈಜ ಸಂಪತ್ತು ನಗುವಿರಲಿ ಮೊಗದ ತುಂಬಗೆಳೆಯರಿರಲಿ ಈ ಜಗದ ತುಂಬಮಾತು ಮಾತಿನ ಜೊತೆಗಿರಲಿಖುಷಿಯ ಹೆಚ್ಚಿಸೊ ನಗೆಯ ಬಿಂಬ ತೋರಬೇಕಿಲ್ಲ ಯಾರೂ ಸುಮ್ಮನೆಬೇಡದ ಅಹಂಕಾರದ ಒಣಜಂಬಮಕ್ಕಳ ನಗುವ ಕಲರವ ಹಿರಿಯರಅನುಭವದ ಮಾತು ತುಂಬಿರಲಿಪ್ರತಿಮನೆ ಮನಗಳ ಅಂಗಣದ ತುಂಬ ಒಳ್ಳೆಯ ಮಾತುಗಳು ಕೇಳಿಬರಲಿನಮ್ಮ ಸುತ್ತಲಿನ ಜನ ಮನದಿಂದಯಾರಿಗೂ ತೊಂದರೆ ಆಗದಿರಲಿತಿಳಿದೋ ತಿಳಿಯದೆಯೋ ನಮ್ಮಿಂದ ಯಾರಿಗೆ ಯಾರೋ ಯಾರಿಗೆ ಗೊತ್ತುಚಿಂತೆಯ ಕಳೆಯಲಿ ಈ ಅಲ್ಪ ಹೊತ್ತುಸತ್ತಂತೆ ಬದುಕಬಾರದು ನಾವ್ಯಾವತ್ತುಶಾಂತಿ ನೆಮ್ಮದಿಯೇ ನಮ್ಮ ನೈಜ ಸಂಪತ್ತು -ನಾಗರಾಜ ಜಿ.ಎನ್. ಓ ಕನಸೇ ಎಲ್ಲ … Read more

ಕನ್ನಡದ ಬರಹಗಳನ್ನು ಹಂಚಿ ಹರಡಿ

ಆಯಿ’ ನನಗೆ ತಾಯಿಯಂತಿದ್ದಳು !: ಡಾ. ಸದಾಶಿವ ದೊಡಮನಿ

” ‘ಆಯೀ’ನ ನೆನೆಯೋದು ಯಾ ಯಾಳಿ ಹೊತ್ತು?” ಸಮಯಾಸಮಯಗಳ ಗೊಡವೆ ಇಲ್ಲದೆ ತತಕ್ಷಣ ನೆನಪಾಗುವ ಸಂಜೀವಿ; ಅನುಗಾಲವೂ ದಿವ್ಯ ಸ್ಮರಣೆಯಲಿರುವ ಅಂತಃಕರಣದ ಮಹಾತಾಯಿ ಆಯಿ. ಆಯಿ ಎಂದರೆ ಬೇರೆ ಯಾರೂ ಅಲ್ಲ. ನನ್ನ ಅವ್ವನ ಅವ್ವ. ನಾನು ಎರಡನೆಯ ತರಗತಿಯನ್ನು ನಮ್ಮೂರಲ್ಲಿ (ವಿಜಯಪುರ ಜಿಲ್ಲೆ, ಇಂಡಿ ತಾಲೂಕು, ಬೂದಿಹಾಳ ) ಓದುತ್ತಿರುವ ಸಂದರ್ಭ, ಆಗ ಭೀಕರ ಬರಗಾಲ ತಲೆದೋರಿ, ಕುಡಿಯಲು ನೀರಿಗೂ ಬರ. ದನ-ಕರುಗಳಿಗೆ ಮೇವಿನ ಭವಣೆ. ಕೆಲಸವಿಲ್ಲದೆ ಉಪಜೀವನ ನಡೆಸುವುದೇ ಕಷ್ಟವಾದಾಗ ದಿಕ್ಕುಗಾಣದೆ ಅವ್ವ-ಅಪ್ಪ ಊರಿನ … Read more

ಕನ್ನಡದ ಬರಹಗಳನ್ನು ಹಂಚಿ ಹರಡಿ

“ಸಂಸ್ಕೃತಿ, ಸಂಪ್ರದಾಯ ಹಾಗೂ ಸಮೃದ್ಧಿಯ ಹಬ್ಬ -ಸಂಕ್ರಾಂತಿ”: ಚಲುವೇಗೌಡ ಡಿ ಎಸ್

ವರ್ಷದ ಮೊದಲ ಹಬ್ಬ:-ಭಾರತೀಯ ಹಬ್ಬಗಳ ಸಾಲಿನಲ್ಲಿ ಸಂಕ್ರಾಂತಿಯು ಒಂದು ಮಹತ್ವದ ಸ್ಥಾನವನ್ನು ಪಡೆದಿರುವ ಸಂಭ್ರಮ, ಸಡಗರದ ಹಬ್ಬ. ರವಿಯು ಧನು ರಾಶಿಯಿಂದ ಮಕರ ರಾಶಿಗೆ ಪ್ರವೇಶಿಸುವ ಸುದಿನವನ್ನು ಮಕರ ಸಂಕ್ರಾಂತಿ ದಿನ ಅಥವಾ ಮಕರ ಸಂಕ್ರಮಣ ದಿನವೆಂದು ಆಚರಿಸುತ್ತೇವೆ. ಈ ದಿನದಿಂದ ಉತ್ತರಾಯಣ ಆರಂಭವಾಗುತ್ತದೆ. ಅಂದರೆ ಸೂರ್ಯನು ದಕ್ಷಿಣನಿಂದ ಉತ್ತರಕ್ಕೆ ಚಲಿಸುವ ಆರು ತಿಂಗಳ ಅವಧಿಯು ಆರಂಭವಾಗುವ ಸಂಕೇತವನ್ನು ಈ ಹಬ್ಬವು ಸೂಚಿಸುತ್ತದೆ. ವರ್ಷದ ಮೊದಲ ಹಬ್ಬ ಮಕರ ಸಂಕ್ರಾಂತಿ. ಸಂಕ್ರಾಂತಿಯಂದೆ ಮಕರ ಜ್ಯೋತಿ ದರ್ಶನದ ಭಾಗ್ಯ … Read more

ಕನ್ನಡದ ಬರಹಗಳನ್ನು ಹಂಚಿ ಹರಡಿ

ಪ್ಲಾಸ್ಟಿಕ್‌ನ ಛಾಯೆ: ಪರಿಸರ ಮತ್ತು ಆರೋಗ್ಯದ ಮೇಲಿನ ದುಷ್ಪರಿಣಾಮಗಳು: ಅಶ್ವಜೀತ ದಂಡಿನ

ಈ ಭೂಮಿಯ ಮೇಲೆ ಇರುವ ಪ್ರತಿಯೊಂದು ಜೀವಿಗಳಿಗೆ ಪ್ರಕೃತಿಯು ನೈಸರ್ಗಿಕವಾಗಿ ಬೇಕು ಬೇಡಗಳನ್ನೆಲ್ಲಾ ಪೂರೈಸುತ್ತಾ ಬಂದಿದೆ. ಆದಿ ಕಾಲದಿಂದಲೂ ಮಾನವ ಪ್ರಕೃತಿಯಲ್ಲಿ ದೊರೆಯುವ ನೈಸರ್ಗಿಕ ವಸ್ತುಗಳನ್ನೇ ಬಳಸಿಕೊಳ್ಳುತ್ತಾ ತನ್ನ ಬೇಕು ಬೇಡಗಳನ್ನು ಪೂರೈಸಿಕೊಂಡು ಆರೋಗ್ಯದಿಂದ ಸುಖವಾಗಿ ಜೀವನ ಸಾಗಿಸುತ್ತ ಬಂದಿದ. ಮನುಷ್ಯನಿಗೆ ಬುದ್ಧಿಶಕ್ತಿ ಬೆಳೆದಂತೆಲ್ಲ ನೈಸರ್ಗಿಕ ವಸ್ತುಗಳೊಂದಿಗೆ ಕೃತಕ ವಸ್ತುಗಳನ್ನು ತಯಾರಿಸಿ ಬಳಸಲು ಪ್ರಾರಂಭಿಸಿದನು. ಅವುಗಳಲ್ಲಿ ಪ್ಲಾಸ್ಟಿಕ್ ಸಹ ಒಂದು. ಕ್ರಿ.ಶ ೧೮೬೨ ರಲ್ಲಿ ಅಲೆಕ್ಸಾಂಡರ್ ಪಾರ್ಕೆಸ್ ಎಂಬ ವಿಜ್ಞಾನಿಯು ಪಾರ್ಕೆಸಿನ್ (ಮೊದಲ ಅರೆ-ಕೃತಕ ಪ್ಲಾಸ್ಟಿಕ್) ಅನ್ನು … Read more

ಕನ್ನಡದ ಬರಹಗಳನ್ನು ಹಂಚಿ ಹರಡಿ

ನಿಗೂಢ ರಾತ್ರಿ: ಜಾನ್ ಸುಂಟಿಕೊಪ್ಪ

ಬಾಲ್ತು ಬೆಳಗ್ಗೆ ಎದ್ದವನೇ ತೀರಾ ಕಂಗಾಲಾಗಿ ಬಿಟ್ಟಿದ್ದ. ಮಾತೇ ಮರೆತು ಹೋದವನಂತಾಗಿ ಆಕಾಶವೇ ಕಳಚಿ ತಲೆ ಮೇಲೆ ಬಿದ್ದವನಂತೆ ಪಿಳಿ ಪಿಳಿ ನೋಡುತ್ತಾ ಕುಳಿತುಬಿಟ್ಟಿದ್ದ. ಅಷ್ಟು ಮಾತ್ರ ಆಗಿದ್ದರೆ ಪರವಾಗಿಲ್ಲ ಅವನ ಅಮ್ಮ ಬಾಯಮ್ಮ, ಹೆಂಡತಿ ಪೊಮ್ಮಿ ಮತ್ತು ಇಬ್ಬರು ಮಕ್ಕಳು ತೀರಾ ತಲೆಕೆಡಿಸಿಕೊಳ್ಳಲು ಭಯಾನಕ ಕಾರಣವೊಂದಿತ್ತು. ಬಾಲ್ತು ಘಳಿಗೆಗೊಮ್ಮೆ ಅಲ್ತಾರಿನ ಬಳಿ ಬಂದು ಆ ಶಿಲುಬೆಯನ್ನೂ, ಆ ಬಾಲಯೇಸುವಿನ ಫೋಟೋವನ್ನೂ ಸಿಕ್ಕಾಪಟ್ಟೆ ಭಕ್ತಿಯಿಂದ ಮುಟ್ಟಿ ಮುಟ್ಟಿ ಚುಂಬಿಸುತ್ತಿದ್ದ. ಸಂಜೆಯ ಪ್ರಾರ್ಥನೆ ಸಮಯ ಹೊರತುಪಡಿಸಿ ನಿಗೂಢವಾಗಿ ಕಾಣೆಯಾಗುತ್ತಿದ್ದ … Read more

ಕನ್ನಡದ ಬರಹಗಳನ್ನು ಹಂಚಿ ಹರಡಿ

ಕೆಲವು ಜಾನಪದ ಒಗಟುಗಳು ಮತ್ತು ಅವುಗಳ ವಿವರಣೆ: ಕೆ ಟಿ ಸೋಮಶೇಖರ ಹೊಳಲ್ಕೆರೆ.

ಒಗಟುಗಳ ಅರ್ಥ ವಿವರಣೆಯ ಅವಶ್ಯಕತೆ : ಉತ್ತರ : ತಂದೆ ಶೆಟ್ಟಿ ‘ ಹಂಡೆ ‘ಮಗ ಸಂಸಾರಿ ‘ ಕೊಡ ‘ಮೊಮ್ಮಗ ಪೋಲಿ ‘ ಚಂಬು ‘ ಒಗಟು ೨ ” ಅಗಟಕ ಬುಗಟಕ ನಿನ್ನ ನೋಡಿ ನನ್ನ ಜೀವ ಟಕಟಕ “ ಇದು ಒಗಟಾ ? ಇದು ಕನ್ನಡ ಭಾಷೆಯ ಒಗಟಾ ? ಇದು ಕೇವಲ ಸಜಾತಿ ಅಕ್ಷರಗಳ ಕುಣಿತವಾ ? ಬರಿ ಒಂದೇ ರೀತಿಯ ಶಬ್ದಗಳ ರಿಂಗಣವಾ? ಎಂದು ತಲೆ ಕೆರೆದುಕೊಳ್ಳುವಂತೆ ಈ ಒಗಟನ್ನು … Read more

ಕನ್ನಡದ ಬರಹಗಳನ್ನು ಹಂಚಿ ಹರಡಿ

ಅಂಬಾಸಿಡರ್ ಕಾರು: ದಿಲೀಪ್ ಎನ್ಕೆ

ಹೌದು, ನಾನು ಹೀಗೇನೆ. ತಿಳಿದೋ ತಿಳಿಯದೆಯೋ ನನ್ನಿಂದಾದ ಸಣ್ಣ ಪುಟ್ಟ ತಪ್ಪನ್ನೂ ಬೆಟ್ಟದಷ್ಟೆಂದು ಭಾವಿಸಿ ಭಯಭೀತನಾಗುತ್ತೇನೆ. ಅದೆಷ್ಟೋ ಕಾಲ ಒಳಗೊಳಗೇ ನರಳುತ್ತೇನೆ, ನಲುಗುತ್ತೇನೆ. ಇನ್ನೇನಿಲ್ಲ, ತಲೆಯೇ ಹೋಗುತ್ತದೇನೋ ಎನ್ನುವಷ್ಟರ ಮಟ್ಟಿಗೆ ಅದನ್ನೇ ಆಡಿ ಆಡಿ ಎಳೆದಾಡಿ ಹೈರಾಣಾಗುತ್ತೇನೆ. ಆ ಕ್ಷಣಕ್ಕೆ ನನಗೆ ಸರಿತೋರುವ ಅವರಿವರಿಗೆ ಶೃಂಗರಿಸಿ ಶೃಂಗರಿಸಿ ಎಳೆಎಳೆಯಾಗಿ ಈಜಿ ಈಜಿ ಹಂಚಿಕೊಳ್ಳುತ್ತೇನೆ. ಹಂಚಿಕೊಂಡು ಅಲ್ಪ ಸ್ವಲ್ಪ ಉಸಿರೂಯ್ದು ಕೊಳ್ಳುತ್ತೇನೆ. ಮತ್ತೆ ಮತ್ತದೇ ಬೆಂಕಿಯಲ್ಲಿ ಬಿದ್ದು ಒದ್ದಾಡುತ್ತೇನೆ. ಇದು ನನ್ನ ಬಲಹೀನತೆಯೇ ? ಈ ಕಾರಣಕ್ಕೆ ಆಗಾಗ್ಗೆ … Read more

ಕನ್ನಡದ ಬರಹಗಳನ್ನು ಹಂಚಿ ಹರಡಿ

ಮನಸು ಸರೋವರ: ವೀಣಾ ರಮೇಶ್, ಮರವಂತೆ

ಅದ್ಯಾಕೋ. ಪ್ರಿಯಾ ಈ ನಡುವೆ ತುಂಬಾ ಮೌನವಾಗಿರುತ್ತಿದ್ದಳು. ಹತ್ತು ಸಲ ಕರೆದರೆ ಒಮ್ಮೆ ಮಾತ್ರ ಮಾತಾಡುವಳು. ಕಾರಣ ಏನಿರಬಹುದು, ? ಸದಾ ಮಂಕಾಗಿರುತ್ತಾಳೆ, ಏನಾದರೂ ಕೇಳಲು ಹೋದರೆ ಅಳುತ್ತಾ ಕುಳಿತಿರುತ್ತಾಳೆ. ಇದನ್ನು ಹಲವು ದಿನಗಳಿಂದ ಗಮನಿಸುತ್ತಿದ್ದ ಮೃದುಲಾಗೆ ಯಾಕೋ ಪ್ರಿಯಾಳ ಈ ವರ್ತನೆ ಚಿಂತೆ ಗಿಟ್ಟುಕೊಂಡಿತ್ತು. ಸದಾ ಲವಲವಿಕೆಯಿಂದ ಇರುತ್ತಿದ್ದ ಪ್ರಿಯಾ. ಈ ನಡುವೆ ಮೂಕಿಯಾಗಿರುತ್ತಿದ್ದಳು. ಫೋನ್ ಮಾಡಿದರೂ ಉತ್ತರ ನೀಡದ ಪ್ರಿಯಾ ಸದಾ ಮೌನವಾಗಿರುತ್ತಿದ್ದಳು. ಪ್ರಿಯಾ ಇಲ್ಲದ ಕಾಲೇಜಿನ ದಿನಗಳು ತುಂಬಾ ಬೋರು ಹೊಡೆಸುತಿತ್ತು ಮೃದುಲಾಗೆ. … Read more

ಕನ್ನಡದ ಬರಹಗಳನ್ನು ಹಂಚಿ ಹರಡಿ

ಟಿಕೆಟ್ಟಾಯಣ. . . : ಶಂಕರಾನಂದ ಹೆಬ್ಬಾಳ

ಏನಿದು ಟಿಕೆಟ್ ಎಂದು ಕೇಳಬೇಡಿ. ? ಎಲ್ಲರಿಗೂ ಗೊತ್ತಿರುವ ವಿಚಾರವಿದು, ಟಿಕೆಟ್ ಎಂದರೆ ಬೇರೇನೂ ಅಲ್ಲ ಕನ್ನಡದಲ್ಲಿ ಇದರರ್ಥ ಅನುಮತಿ ಚೀಟಿ, ಪರವಾನಿಗೆ ಚೀಟಿ ಎಂದರ್ಥವಾಗುತ್ತದೆ. ಕೆಲವೊಂದು ಜಾಗದಲ್ಲಿ ಇದಿಲ್ಲದೆ ಪ್ರವೇಶವೆ ಸಿಗುವುದಿಲ್ಲ ಅದಕ್ಕಾಗಿ ಪರದಾಡಬೇಕಾಗುತ್ತದೆ.ಟಿಕೆಟ್ ಇಲ್ಲದೆ ಕೆಲವೊಂದು ನಿರ್ದಿಷ್ಟ ಪ್ರದೇಶಗಳಲ್ಲಿ ತಿರುಗಾಡಲು ಸಾಧ್ಯವೆ ಇಲ್ಲ, ಎನ್ನುವಷ್ಟರ ಮಟ್ಟಿಗೆ ಟಿಕೆಟ್ ತನ್ನ ಅಸ್ತಿತ್ವವನ್ನು ಉಳಿಸಿಕೊಂಡು ರಾಜವೈಭವದಲ್ಲಿ‌ ಮೆರೆಯುತ್ತಿದೆ. ಯಾವುದೆ ಸಿನಿಮಾ ಥಿಯೇಟರನಲ್ಲಿ‌ ಸಿನಿಮಾ ವಿಕ್ಷಿಸಲು ಈ ಟಿಕೇಟ್ ಅತಿ ಅವಶ್ಯಕ ಹೇಗೆ ಎಕ್ಸಾಂ ಹಾಲ್ ನಲ್ಲಿ ಹಾಲಟಿಕೆಟ್ … Read more

ಕನ್ನಡದ ಬರಹಗಳನ್ನು ಹಂಚಿ ಹರಡಿ

ಮಾತೃಸ್ವಾಮ್ಯ ವ್ಯವಸ್ಥೆ: ಚಂದಕಚರ್ಲ ರಮೇಶಬಾಬು

“ರೀ ಇವತ್ತು ರಾತ್ರಿ ನಿಮಗೆ ಚಪಾತಿ ಮಾಡ್ಲಾ?” ಎನ್ನುವ ಪಶ್ನೆ ಮಡದಿಯಿಂದ ಬಂದಾಗ ಗಂಡನಿಗಾಗುವ ಫಜೀತಿ ಹೇಳಲಾಗದು. ಒಳಗೇನೋ ತನ್ನ ಸಕ್ಕರೆ ಕಾಯಿಲೆಯ ಸಲುವಾಗಿ ಮಾಡಿದರೆ ಒಳಿತು ಎಂದಿದ್ದರೂ “ಮಾಡು” ಎಂದು ಹೇಳಲಾರದ ಸ್ಥಿತಿ. ಯಾಕೆ ಅಂದರೆ ಆ ಪ್ರಶ್ನೆಯ ಒಳದನಿ “ನಾನು ಮಾಡುವುದಿಲ್ಲ ನೀವು ಊ ಅನ್ನಿ” ಅಂತಲೇ ಇರುತ್ತದೆ. ಗಂಡಸು ಹೊರಗೆ ದುಡಿದು ಮನೆಗೆ ಬೇಕಾದ ಸಾಮಾನೆಲ್ಲವನ್ನೂ ತಂದರೂ ತನಗೆ ಇಂಥದೇ ತಿಂಡಿ ಅಥವಾ ಅಡುಗೆ ಬೇಕು ಎನ್ನುವಷ್ಟು ಸ್ವಾತಂತ್ರ್ಯವಿರುವುದಿಲ್ಲ. ಯಾಕೆ ಅಂದರೆ ಅಡುಗೆಮನೆ … Read more

ಕನ್ನಡದ ಬರಹಗಳನ್ನು ಹಂಚಿ ಹರಡಿ

ಹೊಟ್ಟೆ ನಿನ್ನಿಂದ ನಾ ಕೆಟ್ಟೆ: ಪ್ರೇಮಾ ಆರ್ ಶೆಟ್ಟಿ

ಹೌದು ಮಾರ್ರೆ, ಎಂತಂತ ಹೇಳ್ಲಿ ಈ ಹೊಟ್ಟೆಯ ಬಗ್ಗೆ? ಒಂದೆರಡು ಹೊತ್ತು ಊಟ ಇಲ್ಲದೆ ಇರಬಹುದು ಆದರೆ ಗಾಳಿ ಇಲ್ಲದೆ ಬದುಕೋಕೆ ಸಾಧ್ಯಾನಾ? ನಮ್ ಬದುಕಿನಲ್ಲಿ ಮೂಗು, ಗಾಳಿ, ಶ್ವಾಸಕೋಶಗಳೇ ಮುಖ್ಯ ಅಂತ ನೀವು ಹೇಳೋದನ್ನು ಒಪ್ಪಿಕೊಳ್ಳುತ್ತೇನೆ. ಆದರೆ ಎಲ್ಲರೂ ಮಾಡುವುದು ಹೊಟ್ಟೆಗಾಗಿ, ಗೇಣು ಬಟ್ಟೆಗಾಗಿ ಅಲ್ವೇ? ಇತ್ತೀಚೆಗಂತೂ ಜನ ಕಂಡ ಕಂಡಲ್ಲಿ ಹೃದಯ ಒಡೆದು, ರಕ್ತನಾಳ ಒಡೆದು, ಹಾರ್ಟ್ಗೆ ಅಟ್ಯಾಕ್ ಆಗಿ ಸಾಯಲು ಕಾರಣ ಹೊಟ್ಟೆ ತಾನೇ? ಇದನ್ನು ನೀವು ನಂಬಲೇ ಬೇಕು. ಕಾರಣ? ಹೊಟ್ಟೆಗೆ … Read more

ಕನ್ನಡದ ಬರಹಗಳನ್ನು ಹಂಚಿ ಹರಡಿ

ಪುಟ್ಟಿಯ ಪಟ್ಟ: ಡಾ. ನೀತಾ ಕಲಗೊಂಡ

ತಲೆ ಭಾರ , ಸುಡುವ ಮೈ ಎದ್ದುಕೂರಲೂ ಆಗದಷ್ಟು ಸುಸ್ತು ಪುಟ್ಟಿಯ ದಿನ ಶುರುವಾಗಿದ್ದೆ ಬೇರೆ ರೀತಿ ಇಂದು. ಕಷ್ಟಪಟ್ಟು ಕಣ್ಣು ತೆರೆದು ನೋಡಿದಾಗ ಹೊರಗೆ ಬಿಸಿಲು ಮೈ ಚಾಚಿತ್ತು. ಮನೆಯಲ್ಲಿ ಎಂದೂ ಇರದ ನಿಶಬ್ದ ಕಸಿವಿಸಿ ತಂದಿತು ಪುಟ್ಟಿಯ ಮನಸ್ಸಿಗೆ. ಹತ್ತು ಜನರು ಸದಾ ಸುತ್ತಾಡೋ ಮನೆಯಲ್ಲಿ ಈ ತರದ ಸ್ತಬ್ಧತೆ, ಶಾಂತಿ ಅರ್ಥವೇ ಆಗಲಿಲ್ಲ ಅವಳಿಗೆ. ಇವತ್ತೇನಾದರೂ ರವಿವಾರವೇ? ಅಮ್ಮ ಕಿವಿ ತೂತಾಗುವಷ್ಟು ಕಿರಿಚಿ ಬೆನ್ನಿಗೆ ಎರಡು ಕೊಟ್ಟು ಎಬ್ಬಿಸಿರಲಿಲ್ಲ ಅಂದ್ರೆ ಇದು ಖಂಡಿತ … Read more

ಕನ್ನಡದ ಬರಹಗಳನ್ನು ಹಂಚಿ ಹರಡಿ

ಶ್ರೇಷ್ಠ ನಡೆ: ಬಿ.ಟಿ.ನಾಯಕ್

ಅದೊಂದು ಶಾಲೆಯ ತರಗತಿಯಲ್ಲಿ ಮೇಷ್ಟ್ರು ಹಾಜರಾತಿ ತೆಗೆದುಕೊಳ್ಳುವಾಗ ‘ಅಕ್ಕ ನಾಗಮ್ಮ’ ನ ಹೆಸರು ಕೂಗಿದರು. ಆದರೆ, ಅದಕ್ಕೆ ಯಾವುದೇ ಪ್ರತಿಕ್ರೀಯೆ ಬರಲಿಲ್ಲ. ಆನಂತರ ಮೇಷ್ಟ್ರು ತಲೆ ಎತ್ತಿ ಆಕೆ ಕುಳಿದುಕೊಳ್ಳುವ ಬೆಂಚಿನ ಕಡೆಗೆ ನೋಡಿದರು. ಆಕೆ ನಿಜವಾಗಿಯೂ ಅಲ್ಲಿ ಕಾಣಲಿಲ್ಲ!.ತಕ್ಷಣಕ್ಕೆ ಶಿವ ಬಸಮ್ಮ ಮತ್ತು ನಾಗವೇಣಿ, ಅವರ ಕಡೆಗೆ ಮೇಷ್ಟ್ರ ಲಕ್ಷ್ಯ ಹೋಗಿ, ಅವರಿಬ್ಬರಿಗೆ ಆಕೆಯ ಬಗ್ಗೆ ಕೇಳಿದರು. ;‘ಏನದು ಅಕ್ಕ ನಾಗಮ್ಮ ಏಕೆ ಬಂದಿಲ್ಲ ?’‘ಅವಳ ಅಮ್ಮಗೆ ಹುಷ್ಯಾರು ಇಲ್ಲವಂತೆ ಮೇಷ್ಟ್ರೇ ‘ ಎಂದಳು ನಾಗವೇಣಿ.‘ಹೌದಾ.. … Read more

ಕನ್ನಡದ ಬರಹಗಳನ್ನು ಹಂಚಿ ಹರಡಿ

ನಾನೂ ನಾಟಕ ಮಾಡಿದ್ದೆ…!!: ಜಗದೀಶ ಬ ಹಾದಿಮನಿ

ನಾಟಕ ಅನ್ನೋದ ಒಂದು ದೃಶ್ಯಕಾವ್ಯ. ಗ್ರೀಕ್ ದೇಶದ ಪ್ರಾಚೀನ ನಾಟಕ್ಕಾರಾದ ಯುರಿಪಿಡ್ಸ್, ಅರಿಸ್ಟೋಫೇನ್ಸ್, ಈಸ್ಕಿಲಸರಿಗಿಂತ ಮುಂಚೆನ ಆರಂಭಾದ ಈ ಪರಂಪರೆ, ಹೆಮ್ಮರಾಗಿ ನೂರುಸಾವ್ರ ರೆಂಬೆಕೊಂಬೆಗಳನ್ನ ಚಾಚಿ, ಲಕ್ಷಕೋಟಿ ಬಿಳಿಲುಗಳನ್ನ ಮೈದುಂಬ್ಕೊಂಡು ಸಮೃದ್ಧಾಗಿ ಬೆಳುದು, ಕಡಲಿಗುನೂ ಹಿರಿದಾಗಿ, ಆಗಸಕನೂ ಮಿಗಿಲಾಗಿ ಬಿತ್ತರಿಸ್ಕೊಂಡು ನಿಂತೈತಿ. ಮುಂದ, ಅದು ರೋಮಿನ ಗಡಿ ದಾಟಿ ಇಡೀ ಯುರೋಪ್‌ನ ಬಾಚಿಕೊಂಡ್ತು. ಇಲ್ಲಿ ಷೇಕ್ಸಪೀಯರ್ ಹೆಸರಿಸ್ಬೋದಾದ ಮತ್ತೊಂದು ಹೆಸರು. ನಾರದ, ಕೃಷ್ಣ, ಶಕುನಿ, ರಾವಣ, ಮಂಥರೆ, ಕೈಕೆಯರಂಥ ಮಾನ್ಮಾನ್ ನಾಟಕ್ಕಾರರ ಇರೋ ನಮ್‌ತಾಯ್ನೆಲಕ್ಕ ಬಂದ್ರ ವೇದ, … Read more

ಕನ್ನಡದ ಬರಹಗಳನ್ನು ಹಂಚಿ ಹರಡಿ

ಮೌನದ ಮಿತಿ: ಸುಷ್ಮಾ ಹೆಳವಗೋಳ

ದೊಡ್ಡದೊಂದು ಭೂಪ್ರದೇಶದಲ್ಲಿ ಪೌರಾಣಿಕೆ ಎಂಬ ನದಿ ಹರಿಯುತ್ತಿತ್ತು. ಇದು ಅತ್ಯಂತ ಆಳವಾದ ಮತ್ತು ಉದ್ದವಾದ ನದಿಯಾಗಿತ್ತು. ಒಂದು ಕಾಲದಲ್ಲಿ ಈ ನದಿಯನ್ನು ಜಲದೇವಿ ಎಂದು ಕುಗ್ಗೇರಿ ಎಂಬ ಗ್ರಾಮದಲ್ಲಿ ತುಂಬಾ ಭಯ ಭಕ್ತಿಯಿಂದ ಪೂಜಿಸುತ್ತಿದ್ದರು. ನೀರು ಕುಡಿಯಲು ಬಳಸುತ್ತಿದ್ದರು. ಈ ನದಿಗೆ ಪೃಥ್ವಿ,ಪವನ ಮತ್ತು ಕಾಂತಾರ ಎಂಬ ಸ್ನೇಹಿತರಿದ್ದರು ಇವರೆಲ್ಲರೂ ಯಾವಾಗಲೋ ಒಂದು ದಿನ ಒಟ್ಟಾರೆ ಸೇರಿ ತುಂಬಾ ಖುಷಿಯಿಂದ ತಮ್ಮ ಜೀವನವನ್ನು ನಡೆಸುತ್ತಿದ್ದರು. ಹೀಗೆ ಇರುವಾಗ ಒಂದು ದಿನ ಹರಿಯುತ್ತಾ ಕಾಂತಾರದ ನೆನಪಾಗಿ ಕಾಂತಾರದ ಬಳಿ … Read more

ಕನ್ನಡದ ಬರಹಗಳನ್ನು ಹಂಚಿ ಹರಡಿ

ದಿಕ್ಕುಗಳು (ಭಾಗ 12): ಹಟ್ಟಿ ಸಾವಿತ್ರಿ ಪ್ರಭಾಕರಗೌಡ

ಕೆಲವು ನಿಮಿಷ ನಿದ್ರಿಸುತ್ತ, ಒಮ್ಮೊಮ್ಮೆ ಬೆಚ್ಚಿ ಬೀಳುತ್ತಾ ಬಡಬಡಿಸಿ, “ಲೇಯ್ ನಿಂಗೆಷ್ಟೇ ಕಾಯ್ಬೇಕೂ…” ಅಂತ ಏನೇನೋ ಕನವರಿಸುತ್ತಾ ಅಜಿಯ ನಿದ್ರೆಯನ್ನೂ ಕೊಂದು ಹಾಕಿದ್ದಳು ಜ್ಯೋತಿ. ಹೊರಗೆ ಹಕ್ಕಿಗಳ ಚಿಲಿಪಿಲಿ ಇನಿಧ್ವನಿ, ಗಾಡಿ ಮೋಟಾರುಗಳ ಸದ್ದು ಜ್ಯೋತಿಗೆ ಸಂಪೂರ್ಣ ಎಚ್ಚರವಾಗುವಂತೆ ಮಾಡಿದ್ದವು. ಎಚ್ಚರವಾದರೂ ರಾತ್ರಿಯೆಲ್ಲಾ ಅರೆಬರೆ ನಿದ್ರಿಸಿದ್ದರಿಂದ ಮೈ ಜಡವಾಗಿತ್ತು. ಮನಸು ಭಾರವಾಗಿತ್ತು. ಊರಿಗೆ ಹೋಗಿರುವ ಶಂಕರನಿಂದ ಇನ್ನೂ ಯಾವುದೇ ವಿಷಯ ತಿಳಿದಿಲ್ಲ. ತಲೆ ಚಿಟಿ ಚಿಟಿ ಅನ್ನುತ್ತಿದೆ. ಎದ್ದು ಸೀದಾ ಬಚ್ಚಲು ಮನೆಗೆ ಸಾಗಿದಳು. ಹಂಡೆಯ ನೀರನ್ನು … Read more

ಕನ್ನಡದ ಬರಹಗಳನ್ನು ಹಂಚಿ ಹರಡಿ

ಶರಣಾಗತಿ: ರವೀಂದ್ರ ಬಾಕಳೆ, ಕುಷ್ಟಗಿ

ಇಬ್ಬರೂ ಪರಸ್ಪರ ಪ್ರೀಸುತ್ತಿದ್ದರು. ಸುಮಾರು, ಮೂರು ವರ್ಷಗಳಿಂದಾ ಅವರಿಬ್ಬರ ಪ್ರೀತಿ, ಪ್ರೇಮ, ಪ್ರಣಯ ಸಾಗಿತ್ತು! ಮುಖೇಶ ನೋಡಲು ಸುಂದರವಾಗಿದ್ದ. ಅವನ ಪ್ರೀತಿಯ ಬಲೆಗೆ ಬಿದ್ದಿದ್ದ, ಸವಿತಾ ಕೂಡಾ ನೋಡಲು ಸುಂದರಿಯಾಗಿದ್ದಳು.ಬಿಕಾಂ ಓದುತ್ತಿದ್ದ ಈ ಜೋಡಿಗಳು ಒಬ್ಬರನೊಬ್ಬರು ಪರಿಚಿತರಾಗಲು ಆರು ತಿಂಗಳು ಬೇಕಾಯಿತು. ಅದೇ ತಾನೇ ಪಿಯುಸಿ ಪೂರ್ಣ ಮಾಡಿ ಪದವಿ ಕಾಲೇಜಿಗೋಸ್ಕರ ಆ ಊರನ್ನು ಬಿಟ್ಟು ಸಾತನೂರಿಗೆ ಹೋಗುವ ಅನಿವಾರ್ಯತೆ ಇತ್ತು! ಹೆಣ್ಣು ಮಗಳನ್ನು ಹೆಚ್ಚಿನ ವಿದ್ಯಾಬ್ಯಾಸ ಮಾಡಿಸಲು ಒಪ್ಪದ ಸವಿತಾಳ ಅಮ್ಮ ರಾಜೇಶ್ವರಿ ಮಗಳನ್ನು ಮನೆಯಲ್ಲಿ … Read more

ಕನ್ನಡದ ಬರಹಗಳನ್ನು ಹಂಚಿ ಹರಡಿ

ಮಕ್ಕಳ ಕಾವ್ಯ: ವಿನಯ್ ಕುಮಾರ್

ಸುಂದರ ಮುಸ್ಸಂಜೆ ಪಶ್ಚಿಮದಲಿ ಮುಳುಗುವ ಆ ನೇಸರಆ ದೇವರೇ ಸೃಷ್ಟಿಸಿದ ಹಾಗಿದೆ ಸುಂದರನಿಶ್ಯಬ್ಧತೆ ತುಂಬಿದ ಈ ಸಮಯಮಾಡುತಿದೆ ನನ್ನ ದುಃಖಗಳ ಮಾಯ ನದಿಯೆಂಬ ಕನ್ನಡಿಯಲಿಮೂಡಿದೆ ಮುಸ್ಸಂಜೆಯ ಪ್ರತಿಬಿಂಬಸೌಂದರ್ಯವು ಬೀರುತಲಿತುಂಬಿ ಹೋಗಿದೆ ನನ್ನ ಕಣ್ಣತುಂಬಾ ಪ್ರಕೃತಿ ಎಂಬ ಕಲೆಗಾರ್ತಿಯ ಹತ್ರಬಿಡಿಸಿದ ಸುಂದರ ಮುಸ್ಸಂಜೆಯ ಚಿತ್ರಹಳದಿ ಮಿಶ್ರಿತ ಕೆಂಪು ಬಣ್ಣತುಂಬಿ ಸುಂದರಗೊಳಿಸಿದೆಯಣ್ಣಾ ಮುಸ್ಸಂಜೆಯಲಿ ಹಾರುವ ಹಕ್ಕಿಗಳ ಸಾಲುನೋಡುತ್ತಿದ್ದರೆ ಮನಸಲಿ ನೆಮ್ಮದಿಗರಿ ಬಿಚ್ಚಿ ನಾಟ್ಯಮಯಿಯಾಗಿ ಕೂಗುವ ನವಿಲುಕೇಳಲು ಸುಂದರ ಗೋಧೂಳಿ ಅವಧಿ ಮುಸ್ಸಂಜೆಯ ಕೋಗಿಲೆ ದ್ವನಿ ಇಂಪುಕೇಳಲು ಮನಸಿಗೆ ಬಲು ತಂಪುತಂಗಾಳಿ … Read more

ಕನ್ನಡದ ಬರಹಗಳನ್ನು ಹಂಚಿ ಹರಡಿ

ಪಂಜುವಿನ ವಿಶೇಷಾಂಕಕ್ಕೆ ಬರಹಗಳ ಆಹ್ವಾನ

ಸಹೃದಯಿಗಳೇ, ಇದೇ ಜನವರಿ ೨೧ನೇ ತಾರೀಖಿಗೆ ಪಂಜುವಿಗೆ ಹದಿಮೂರು ವರ್ಷ ತುಂಬುತ್ತಿದೆ. ಪಂಜುವಿನ ಹುಟ್ಟು ಹಬ್ಬದ ಆಚರಣೆಗಾಗಿ ವಿಶೇಷ ಸಂಚಿಕೆಯೊಂದನು ತರಲು ಬಯಸುತ್ತಿದ್ದೇವೆ. ಈ ವಿಶೇಷ ಸಂಚಿಕೆಗೆ ನಿಮ್ಮ ಅಪ್ರಕಟಿತ ಕತೆ, ಕವನ, ಲೇಖನ, ಪುಸ್ತಕ ವಿಮರ್ಶೆ, ಹಾಸ್ಯ ಬರಹ, ಚುಟುಕ, ಪ್ರವಾಸ ಕಥನ, ವ್ಯಂಗ್ಯಚಿತ್ರ, ಛಾಯಾಚಿತ್ರ, ಸಿನಿಮಾ ಸುದ್ದಿ, ಇತ್ಯಾದಿ ಸಾಹಿತ್ಯ ಸಂಬಂಧಿತ ಬರಹಗಳನ್ನು ಕಳುಹಿಸಿಕೊಡಿ. ನಮ್ಮ ಇ ಮೇಲ್ ವಿಳಾಸ editor.panju@gmail.comsmnattu@gmail.com ಮಿಂಚಂಚೆಯ ಸಬ್ಜೆಕ್ಟ್ ನಲ್ಲಿ “ಪಂಜು ವಿಶೇಷ ಸಂಚಿಕೆಗಾಗಿ” ಎಂದು ತಿಳಿಸಲು ಮರೆಯದಿರಿ. … Read more

ಕನ್ನಡದ ಬರಹಗಳನ್ನು ಹಂಚಿ ಹರಡಿ