ದೇವ್ರಾಟ..: ತಿರುಪತಿ ಭಂಗಿ

ಪ್ಯಾಟಿಗೆ ಹೋಗಿದ್ದ ಹನಮ್ಯಾ ಪೋಲಿಸರ ಕೈಯಾಗ ಸಿಕ್ಕಾಕ್ಕೊಂಡ ಬಲ್ಲಂಗ ಗಜ್ಜತಿಂದಿದ್ದ. ‘ಸತ್ನೋ ಯಪ್ಪಾ..’ ಅಂತ ನರಳ್ಯಾಡಕೋತ, ಕುಂಟಕೋತ, ಕುಂಡಿಮ್ಯಾಲ ಗಸಾಗಸಾ ತಿಕ್ಕೋತ ಮನಿಹಾದಿ ಹಿಡದಿದ್ದ. “ಈ ಪೋಲಸ್ರಿಗೆ ಮುಕಳಿ-ಮಾರಿ ಯಾವ್ದಂತ ಒಂದೂ ಗೊತ್ತಿಲ್ಲ, ದಬಾದಬಾ ದನಾ ಬಡ್ದಂಗ ಬಡಿತಾರ, ನಮ್ದ ಎಂತ ಸರಕಾರೋ,ಎಂತಾ ಕಾನೂನೋ..ಏನ್ ಆಡಳಿತಾನೋ..ನಮ್ಮ ದೇಶದಾಗ..! ಎಲ್ಲ ದೇವ್ರಾಟ. ಮೈತುಂಬ ಹಿಗ್ಗಾಮುಗ್ಗಾ ಪೋಲಿಸ್ರು ಥಳಸಿದ ಏಟಿಗೆ ಹನಿಮ್ಯಾನಿಗೆ ಎಂದೂ ನೆನಪಾಗದ ದೇಶದ ಸರಕಾರ, ಕಾನೂನು, ಆಡಳಿತಗಳೆಲ್ಲ ನೆನಪಾಗಿ ಮೈತುಂಬ ಪರಚಿದಂತಾದವು. ನಮಗ ರಕ್ಷಣಾ ಕೊಡವ್ರ ನಮಗ … Read more

ಕನ್ನಡದ ಬರಹಗಳನ್ನು ಹಂಚಿ ಹರಡಿ

ರಾಮಾಯಣದಲ್ಲಿ ಕಾಡುವ ಪಾತ್ರ ಉರ್ಮೀಳಾ: ಶ್ರೇಯ ಕೆ ಎಂ ಶಿವಮೊಗ್ಗ

ನಾವು ಹುಟ್ಟಿದಾಗಿನಿಂದಾನು ರಾಮಾಯಣ ಮಹಾಭಾರತಗಳೆರಡನ್ನು ನೋಡಿಕೊಂಡು ಕೇಳಿಕೊಂಡು ಓದಿಕೊಂಡು ಬೆಳೆದವರು.. ನಮ್ಮ ಅಜ್ಜಿ ದೊಡ್ಡಮ್ಮನ ಬಾಯಲ್ಲಿ ಎಲ್ಲಾ ಪಾತ್ರಗಳು ಕರತಲಾಮಲಕ ಆಗಿದ್ದವು, ಯಾವುದೇ ಸನ್ನಿವೇಶವನ್ನಾದರೂ ಲೀಲಾಜಾಲವಾಗಿ ಹೇಳುತ್ತಿದ್ದ ಪರಿ ಎಂಥವರನ್ನು ಭಾವಪರವಶ ಮಾಡುತ್ತಿತ್ತು. ಹಾಗೆಯೆ ನಾವೇನು ಇದರಿಂದ ಹೊರತಲ್ಲ, ಹೀಗೆ ಕೇಳುತ್ತ ಬೆಳೆದ ನಾವು ಅವರ ಬಾಯಲ್ಲಿ ರಾಮ ಲಕ್ಷ್ಮಣ ಸೀತೆ ಎಲ್ಲರೂ ದೇವರೇ, ಆದರೆ ಅ ಚಿಕ್ಕ ವಯಸ್ಸಲ್ಲೇ ನಂಗೆ ಕಾಡುತ್ತಿದ್ದ ಪಾತ್ರ ಊರ್ಮಿಳೆ, ದೊಡ್ಡವರು ಹೇಳುವ ಪ್ರಕಾರ ಊರ್ಮಿಳೆ ಆರಾಮಾಗಿ ರಾಜ್ಯದಲ್ಲಿ ಇದ್ದು ರಜಾ … Read more

ಕನ್ನಡದ ಬರಹಗಳನ್ನು ಹಂಚಿ ಹರಡಿ

ಕರೋನಾ ಕರ್ಫ್ಯೂ ಕಲಿಸುತ್ತಿರುವ ಪಾಠ: ಹೊ.ರಾ.ಪರಮೇಶ್ ಹೊಡೇನೂರು

ಅತ್ಯಾಧುನಿಕ ಕಾಲಘಟ್ಟದಲ್ಲಿ ಬದುಕುತ್ತಿರುವ ನಾವು ಇಂದು ವೈಜ್ಞಾನಿಕವಾಗಿ ಸಾಕಷ್ಟು ಸಾಧಿಸಿದ್ದೇವೆ, ವೈಚಾರಿಕ ಪ್ರಜ್ಞೆಯನ್ನು ಮೈಗೂಡಿಸಿಕೊಂಡು ಬುದ್ಧಿವಂತರೆಂದು ಬೀಗುತ್ತಿದ್ದೇವೆ, ಉನ್ನತ ಶಿಕ್ಷಣವನ್ನು ಪಡೆದು, ಲಕ್ಷಾಂತರ ರೂಪಾಯಿಗಳನ್ನು ಸಂಪಾದಿಸುವ ನೌಕರಿ ಹಿಡಿದುಕೊಂಡು ಐಷಾರಾಮಿ ಜೀವನವನ್ನು ನಡೆಸುತ್ತಿದ್ದೇವೆ. ತಾಂತ್ರಿಕವಾಗಿ ಮುಂದುವರೆದು ಇಡೀ ಪ್ರಪಂಚದ ಯಾವುದೇ ಮೂಲೆಯಲ್ಲಿ ಏನೇ ವಿದ್ಯಮಾನ ಘಟಿಸಿದರೂ ಕ್ಷಣಾರ್ಧದಲ್ಲಿ ವೀಕ್ಷಿಸುವ ಮಾಧ್ಯಮಗಳನ್ನು ಸೃಷ್ಟಿಸಿಕೊಂಡಿದ್ದೇವೆ. ಮಂಗಳನ ಅಂಗಳದಲ್ಲಿ ಆಟವಾಡುವಷ್ಟು ಸಾಮರ್ಥ್ಯವನ್ನು ಹೊಂದಿದ್ದೇವೆ, ಚಂದ್ರನ ಮೈಲ್ಮೈಯಲ್ಲಿ ತುಸುಹೊತ್ತು ವಿರಮಿಸುವಷ್ಟರ ಮಟ್ಟಿಗೆ ಸಂಶೋಧನಾ ಕಾರ್ಯಗಳನ್ನು ಕೈಗೊಂಡು ಯಶಸ್ಸು ಕಂಡಿದ್ದೇವೆ. ವೈದ್ಯಕೀಯ ಲೋಕದ ಅದ್ಭುತವಾದ … Read more

ಕನ್ನಡದ ಬರಹಗಳನ್ನು ಹಂಚಿ ಹರಡಿ

ಶೃತಿ ನೀ ಮಿಡಿದಾಗ: ವರದೇಂದ್ರ.ಕೆ ಮಸ್ಕಿ

ಸದಾ ಕಪ್ಪು ಕೂದಲ ಗಡ್ಡಧಾರಿ ಮಿಂಚು ಮಾತುಗಳ ರಾಯಭಾರಿ ನಗುವಿನ ಸಮಯಗಳಿಗೆ ಸೂತ್ರಧಾರಿ. ರಸವತ್ತಾದ ಹೃದಯ ಸಿಂಹಾಸನದಿ ನೆಲೆ ಊರುವ ಅಧಿಕಾರಿ, ಅಂಗಾರಕನ ಬಣ್ಣ ಗರುವಿನ ವಿಶಾಲ ಮನ, ಅವನಿಯ ತಾಳ್ಮೆ ಸುಗುಣಗಳ ಗಣಿ ಸುಶಾಂತ ಒಲವಿನ ಪುಷ್ಪ ಹಿಡಿದು ಬದುಕೆಲ್ಲ ನೀನೆ, ನೀನಿಲ್ಲದೆ ಮತ್ತೇನಿದೆ ನಿನ್ನ ಒಲವಿನ ಒಂದು ಬೊಗಸೆಯಲಿ ನನ್ನ ಹಿಡಿದುಬಿಡು ಗೆಳತಿ ಎಂದು ದೊಂಬಾಲು ಬಿದ್ದವನ ಅಸ್ತಿತ್ವ ಅವಳ ಒಲುಮೆ ಪಡೆಯಲು ಕಳೆದುಹೋದರೂ ಪರವಾಗಿಲ್ಲ ಎನ್ನುವಷ್ಟು ಹುಚ್ಚು ಪ್ರೇಮ ಹಚ್ಚಿಕೊಂಡವನು. ಸದಾ ಕಣ್ಗಳಲಿ … Read more

ಕನ್ನಡದ ಬರಹಗಳನ್ನು ಹಂಚಿ ಹರಡಿ

ಕೊನೆಗೂ ದುಷ್ಟ ಸಂಹಾರಕ್ಕೆ ಮುನ್ನುಡಿ: ಭಾರ್ಗವಿ ಜೋಶಿ.

ಬರಿ ಈ ಕೊರೊನ, ಕೊರೊನ ಅಂತ ಆ ಕೀಟದ ಹಾವಳಿಯ ಮಧ್ಯ ಬೇರೆ ಬದುಕನ್ನೆಲ್ಲ ಮರೆತು ಬಿಟ್ಟಿದ್ದೇವೆ. ಹೋದ ತಿಂಗಳು ಭಾರತದಲ್ಲಿ ನಡೆದ ಒಂದು ಘಟನೆ ಇಂದು ಇತಿಹಾಸವೇ ಸರಿ. ನಿರ್ಭಯ ಅನ್ನುವ ಹೆಣ್ಣುಮಗಳನ್ನು ಅಷ್ಟು ಅಮಾನುಷವಾಗಿ ಹಿಂಸಿಸಿ ಕೊಂದ ಪಾತಕಿಗಳನ್ನು ಗಲ್ಲಿಗೆ ಬಲಿಕೊಡಲಾಯಿತು. ಅಂದು ಗಲ್ಲಿನ ಕುಣಿಕೆಗೆ ಕತ್ತು ನೀಡುವಾಗ ಅವರ ಮನಸುಗಳು ಎಷ್ಟು ಒದ್ದಾಡಿರಬಹುದು. ಅಯ್ಯೋ ಸಾವು ಕಣ್ಣಮುಂದೆ ಇದೆ ಎಂದಾಗ ಎಷ್ಟು ಭಯಾನಕ. ನಮ್ಮನ್ನು ಬದುಕಿಸಿ, ಒಂದು ಅವಕಾಶ ಕೊಡಿ ಎಂದು ಕೊನೇ … Read more

ಕನ್ನಡದ ಬರಹಗಳನ್ನು ಹಂಚಿ ಹರಡಿ

ಶೇಕ್ಸಪಿಯರನ ‘ Measure for measure ’ – ಡಂಭ ಚಹರೆ ಮತ್ತು ಕಟು ವಾಸ್ತವಗಳು: ನಾಗರೇಖ ಗಾಂವಕರ

ಡಾರ್ಕ ಕಾಮೆಡಿ ಎಂದೇ ಪ್ರಸಿದ್ಧವಾದ ಶೇಕ್ಸಪಿಯರನ Measure for measure ನಾಟಕ ತಾತ್ವಿಕ ಮತ್ತು ನೈತಿಕ ಸಂಘರ್ಷಗಳನ್ನು ಆಳವಾಗಿ ವಿಶ್ಲೇಷಿಸುವ ಮೂಲಕ ಗಮನ ಸೆಳೆಯುತ್ತದೆ. ನಾಟಕದ ಮುಖ್ಯ ಪಾತ್ರ ಎಂಜೆಲ್ಲೋ ಹಾಗೂ ಮತ್ತೊಬ್ಬಳು ಇಸಾಬೆಲ್ಲಾ ಈ ಸಂಘರ್ಷದ ಅಡಕತ್ತರಿಯಲ್ಲಿ ಸಿಕ್ಕಿ ಬೀಳುತ್ತಾರೆ. ನಾಟಕದ ಕೇಂದ್ರ ವಸ್ತುವೇ ಅದಾಗಿದ್ದು ತನ್ನ ಶೀಲವನ್ನು ರಕ್ಷಿಸಿಕೊಂಡು ತನ್ನತನವನ್ನು ಉಳಿಸಿಕೊಳ್ಳುವ ಇಲ್ಲವೇ ಅಣ್ಣನ ಪ್ರಾಣ ಉಳಿಸಲು ನೈತಿಕತೆಯನ್ನು ಮಾರಿಕೊಳ್ಳುವ ಸಂದಿಗ್ಧತೆಯಲ್ಲಿ ಇಸಾಬೆಲ್ಲಾ ತೊಳಲಾಡುತ್ತಾಳೆ. ಮುಖವಾಡದ ಧರ್ಮನಿಷ್ಠೆಯನ್ನು, ಸೈದ್ಧಾಂತಿಕ ಪ್ರತಿಪಾದನೆಯನ್ನು ಮಾಡುವ ಎಂಜೆಲ್ಲೋ ವ್ಯಕ್ತಿಗತ … Read more

ಕನ್ನಡದ ಬರಹಗಳನ್ನು ಹಂಚಿ ಹರಡಿ

ಅಳಿವಿನ ಅಂಚಿನಲ್ಲಿ ಮಾನವ ಕುಲ…? !: ಶಶಿಧರ ರುಳಿ

ರಸ್ತೆಯಲ್ಲಿ ಹೋಗುವಾಗ ಗಿಡದಲ್ಲಿಯ ಹೂವೊಂದು ಕಮರಿ ಹೋಗಿದ್ದು ಕಂಡಿತು. ಮುದುಡಿದ ಆ ತಾವರೆ ಕದಡಿದ ನನ್ನ ಮನಸ್ಸಿಗೆ ಸಾಕ್ಷಿಯಾಗಿ ನಿಂತಂತೆ ತೋರುತ್ತಿತ್ತು. ರಣ ಬಿಸಿಲಿನ ಹೊಡೆತಕ್ಕೆ ಬಾಡಿಹೋದ ಅದರ ಸುಂದರ ಪಕಳೆಗಳು ಯಾವುದೋ ಒಂದು ಕಾಲದಲ್ಲಿ ವೈಭವೋಪಿತ ಕಟ್ಟಡವಾಗಿದ್ದು ಈಗ ಬಿದ್ದುಹೋದ ಗೋಡೆಗಳು ಅದರ ಪಳಿಯುಳಕೆಯಂತೆ ಕಂಡವು. ಬೆಳಗಿನ ಜಾವ ಅರಳಿ ಸಂಜೆಯಾಗುತ್ತಿದ್ದಂತೆ ನಿಸ್ತೇಜವಾದ ಹೂವಿನ ಸುಂದರ ತನು, ಜೀವನದ ಕ್ಷಣಿಕತೆಯ ನೀತಿ ಹೇಳುತ್ತಿರುವಂತೆ ಅನಿಸಿತು. ಈ ಮೂಲಕ ಬದುಕಿನ ಪಯಣ ರಭಸದ ಯಾತ್ರೆ ಎಂಬ ಸತ್ಯವನ್ನು … Read more

ಕನ್ನಡದ ಬರಹಗಳನ್ನು ಹಂಚಿ ಹರಡಿ

ಮೆಟ್ಟು ಹೇಳಿದ ಕಥಾ ಪ್ರಸಂಗ ಒಂದು ನೀಳ್ಗಾವ್ಯ (ಭಾಗ 13 & 14): ಎಂ. ಜವರಾಜ್

೧೩- ಬಿಸ್ಲು ಬಿಸ್ಲು ಏನಪ್ಪಾ ಬಿಸ್ಲು ಉಸ್ಸ್… ಅಲಲಲಾ ಏಯ್,  ಮಲ್ಗಿ ನಿದ್ರಾ ಮಾಡ್ತ ಇದ್ದಯ ಎದ್ರು ಮ್ಯಾಕ್ಕೆ.. ಬೆಚ್ಚಿ ಬೆರಗಾಗಿ ಒರಗಿದ ಕಂಬದಿಂದ ತಲೆ ಎತ್ತಿದೆ ಮಂಪರಿಡಿದ ಕಣ್ಣು ತೆರೆಯುತ್ತ ಎದುರು ದಿಟ್ಟಿಸಿದೆ ಫಳಾರ್ ಮಿಂಚಾಯ್ತಲ್ಲಾ.. ಅಯ್ನೋರ್ ಮಲ್ಗಿ ನಿದ್ರ ಮಾಡ್ತ ಒದ್ದಾಡ್ತ ನಾ ಬೆಂಕಿ ಬಿಸುಲ್ಲಿ ನರಳಾಡ್ತ ಇದ್ರ ನೀ ಸುಖವಾಗಿ ನಿದ್ರ ಮಾಡ್ತ ಇದ್ದಯ ನಾನೇನು ದೆವ್ವುಕ್ಕು ಭೂತುಕ್ಕು  ಹೇಳವ್ನು ಅನ್ಕಂಡಿದ್ದಯ.. ಇಲ್ಲ ಹೇಳು ಚೂರು ಮಂಪ್ರಾಯ್ತು.. ಅದೆ ಅಯ್ನೋರು ಮರದ ಕೆಳಗೆ … Read more

ಕನ್ನಡದ ಬರಹಗಳನ್ನು ಹಂಚಿ ಹರಡಿ

ಮೌನಯುದ್ಧದೊಂದಿಗೆ ನನ್ನ ಮಾತು: ಹೆಚ್. ಷೌಕತ್ ಆಲಿ

ಕವಿ ಸುರೇಶ ಎಲ್. ರಾಜಮಾನೆರವರು ಅಪ್ಪಟ ಕನ್ನಡಭಿಮಾನಿ, ವೃತ್ತಿಯಲ್ಲಿ ಶಿಕ್ಷಕನಾಗಿ ಪ್ರವೃತ್ತಿಯಲ್ಲಿ ಒಬ್ಬ ಕವಿಯಾಗಿ ಕನ್ನಡ ಸಾಹಿತ್ಯ ಲೋಕಕ್ಕೆ ತನ್ಮೂಲಕ ಪ್ರಕಾಶಿಸುವ ಬೆಳಗಲಿ ದೀಪ. ಹುಟ್ಟೂರು ಮಹಾಕವಿ ರನ್ನನ ಊರೇ ಆಗಿರುವಾಗ ಆ ಛಾಪು ಕವಿ ಸುರೇಶನಲ್ಲಿಯೂ ಕಾಣಬಹುದಾಗಿದೆ. ಆ ನಿಟ್ಟಿನಲ್ಲಿ ಕವಿಯ ದ್ವೀತಿಯ ಕೃತಿ ರತ್ನ ‘ಮೌನಯುದ್ಧ’ ಮತ್ತೆ ಮತ್ತೆ ಓದಿದ ನಂತರ ಈ ಒಂದು ವಿಮರ್ಶೆಗೆ ನಾನು ಕೈಹಾಕಿದೆ ಓದುಗರು ಇಷ್ಟ ಪಡುವಂತಹ ಅನೇಕ ಅಂಶಗಳು ಈ ಕೃತಿಯಲ್ಲಿ ಅಡಕವಾಗಿದೆ. ಸರಳ ಭಾಷೆಯ ಸುಂದರ … Read more

ಕನ್ನಡದ ಬರಹಗಳನ್ನು ಹಂಚಿ ಹರಡಿ

ಮಕ್ಕಳ ಕವಿತೆ

ಅಲ್ಲಿದ್ದವರೆಲ್ಲರೂ ರೈಲಿಗಾಗಿ ಕಾಯುತ್ತಿದ್ದವರೇ, ಆದರೆ ಅವರಲ್ಲಿ ಯಾರಿಗೂ ಕಛೇರಿಗೆ ತಡವಾಗುತ್ತೆ ಅನ್ನುವವರಿರಲಿಲ್ಲ, ಊರಿಗೆ ಹೋಗಲು ಸಮಯವಾಗುತ್ತೆ ಅನ್ನುವ ಛಾಯೆಯೂ ಅವರ ಮುಖದಮೇಲೆ ಕಾಣಲಿಲ್ಲ, ಆದರೂ ಅದು ರೈಲ್ವೆ ನಿಲ್ದಾಣ, ಅಲ್ಲಿದ್ದ ಪ್ರಯಾಣಿಕರಲ್ಲಿ ಮಕ್ಕಳ ಸಂಖ್ಯೆಯೇ ಹೆಚ್ಚು. ಚುಕು ಬುಕು ಚುಕು ಬುಕು ಅಂತ ಕೂಗುತ್ತಾ ಬಂದಿದ್ದು ಮಕ್ಕಳ ನೆಚ್ಚಿನ ಪುಟಾಣಿ ಎಕ್ಸಪ್ರೆಸ್ ಇದೆಲ್ಲಾ ಕಂಡು ಬಂದದ್ದು ಬೆಂಗಳೂರಿ ಕಬ್ಬನ್ ಪಾರ್ಕ ನಲ್ಲಿರುವ ಬಾಲಭವನದಲ್ಲಿ. ಇದು ಕೊರೊನಾಗಿಂತ ಮುಂಚೆ ಇದೀಗ ಬಾಲಭವನದಲ್ಲಿನ ಪುಟಾಣಿ ಎಕ್ಸಪ್ರೆಸ್ ಮಕ್ಕಳನ್ನು ಹೊತ್ತು ತಿರುಗಲು … Read more

ಕನ್ನಡದ ಬರಹಗಳನ್ನು ಹಂಚಿ ಹರಡಿ

ವಿಷಾದ-೧ (ಸಂಬಂಧಗಳಲ್ಲಿ): ಸಹನಾ ಪ್ರಸಾದ್‌

ಮ್ಯಾನೇಜುಮೆಂಟಿನಲ್ಲಿ “ಅಪರೇಷನ್ಸ್ ರಿಸರ್ಚ್” ಎಂಬ ವಿಷಯವುಂಟು. ಮೂಲತಃ ಅದು ಗಣಿತ ಹಾಗೂ ಸಂಖ್ಯಾಶಾಸ್ತ್ರದಲ್ಲಿ ಒಂದು ವಿಭಾಗ. ಇರುವ ಸಮಯ, ಸಾಮಾಗ್ರಿ, ಸಂಪನ್ಮೂಲಗಳು ಅತ್ಯುತ್ತಮವಾಗಿ ಬಳಸಿಕೊಳ್ಳುವುದು ಹೇಗೆ? ಎಂಬುದು ಇದರ ತಿರುಳು. ಇದರಲ್ಲಿರುವ ಬಹಳಷ್ಟು ತತ್ವಗಳನ್ನು ನಾವು ನಿಜ ಜೀವನದಲ್ಲಿ ಅಳವಡಿಸಿಕೊಂಡರೆ ನಮ್ಮ ಬದುಕು ಗಮನಾರ್ಹವಾಗಿ ಸುಧಾರಿಸುತ್ತದೆ. ಇದನ್ನು ಅಳವಡಿಸಿಕೊಳ್ಳಲು ನಾವು ಗಣಿತ ಮತ್ತಿತರ ವಿಷಯಗಳಲ್ಲಿ ನಿಪುಣರಾಗಬೇಕೆಂದಿಲ್ಲ. ಸಾಮಾನ್ಯ ಮಟ್ಟದಲ್ಲಿ ನಮ್ಮ ಬದುಕಿನಲ್ಲಿ ಅಳವಡಿಸಿಕೊಳ್ಳಲು ಸ್ವಲ್ಪ ವಿವೇಚನೆ, ಯೋಚನೆ, ವಿವೇಕ ಇರಬೇಕು ಅಷ್ಟೆ! ಇವತ್ತಿನ ಲೇಖನದ ವಿಷಯ ” … Read more

ಕನ್ನಡದ ಬರಹಗಳನ್ನು ಹಂಚಿ ಹರಡಿ

ಬದಲಾದ ಬದುಕು: ಜ್ಯೋತಿ ಬಾಳಿಗ

ದಿನವಿಡೀ ಒಂಟಿ ಪಿಶಾಚಿಯಂತೆ ಮನೆಯಲ್ಲೇ ಇರುತ್ತಿದ್ದ ಕೀರ್ತಿಗೆ ಈ ಲಾಕ್ಡೌನ್ ಪಿರಿಯಡ್ ನಲ್ಲಿ ಗಂಡ ,ಮಕ್ಕಳು ಮನೇಲಿ ಇರೋದು ಒಂದು ರೀತಿಯ ಸಂತಸಕೂಡ ಕೊಟ್ಟಿದೆ. ಎಲ್ಲರೂ ಒಟ್ಟಿಗೆ ಬೆಳಗಿನ ತಿಂಡಿ ತಿನ್ನೋದು, ಒಟ್ಟಿಗೆ ಮಾತಾಡುತ್ತಾ ಊಟ ಮಾಡೋದು, ಒಬ್ಬರಿಗೊಬ್ಬರು ತಮಾಷೆ ಮಾಡಿಕೊಂಡು ಸಂಜೆಯ ಸಮಯ‌ ಕಳೆಯೋದು‌, ಜೀವನಕ್ಕಾಗಿ ಗಂಡನ ವರ್ಕ್ ಫ್ರಂ ಹೋಂ ಕೆಲಸ ಇವೆಲ್ಲವೂ ಎಷ್ಟೋ ವರ್ಷಗಳ ನಂತರ ಕೀರ್ತಿಗೆ ನೆಮ್ಮದಿಯ ಜೀವನ ನೀಡಿದೆ. ಇದು ಕೀರ್ತಿಯ ಕಥೆ ದಿನಾ ಬೆಳಿಗ್ಗೆ ಬೇಗ ಎದ್ದು ‌ಗಡಿಬಿಡಿಯಲ್ಲಿ … Read more

ಕನ್ನಡದ ಬರಹಗಳನ್ನು ಹಂಚಿ ಹರಡಿ

ಕನಸುಗಳ ಪೈಪೋಟಿ: ಸುನಿತಾ. ಎಸ್. ಪಾಟೀಲ

“ಬೆಳೆಯುವ ಸಿರಿ ಮೊಳಕೆಯಲ್ಲಿ ನೋಡ” ಎಂಬ ಹಿತ ನುಡಿಯಂತೆ ಮನುಷ್ಯನಾದವನು ಜೀವನದಲ್ಲಿ ಹಾಗಿರಬೇಕು ಹೀಗಿರಬೇಕು ಎಂಬ ಕನಸು ಕಾಣುವುದು ಸಹಜ. ಮನುಷ್ಯನಾದವನಿಗೆ ತಿಳುವಳಿಕೆ ಬಂದಾಗಿನಿಂದ ತನ್ನ ಕನಸುಗಳನ್ನು ಪೂರೈಸಿಕೊಳ್ಳುವುದು ಒಬ್ಬ ಸಾಧಕನ ಸ್ವತ್ತು, ಹೊರತು ಸೋಮಾರಿಯ ಸ್ವತ್ತಲ್ಲ’ ಎಂಬುದನ್ನು ಮೊದಲು ಆತ ಅರಿತಿರಬೇಕು. ಅದನ್ನು ನೆರವೇರಿಸಲು ತನ್ನ ಜೀವನದಲ್ಲಿ ಹೆಣಗಾಡಬೇಕಾಗುತ್ತದೆ. ಕನಸು ಕಾಣುವುದು ತಪ್ಪಲ್ಲ! ಆದರೆ ಆ ಕನಸನ್ನು ನೆರವೇರಿಸಲು ಅವನು ಒಳ್ಳೆಯ ದಾರಿಯನ್ನು ಹಿಡಿದು ಮುಂದೆ ಸಾಗಬೇಕಾಗುತ್ತದೆ. ಒಂದೆಡೆ ಸಮೃದ್ಧಿ ಎಡೆಗೆ ಹೆಜ್ಜೆಯಿಟ್ಟರೆ ಮತ್ತೊಂದೆಡೆ ಭ್ರಷ್ಟಾಚಾರ, … Read more

ಕನ್ನಡದ ಬರಹಗಳನ್ನು ಹಂಚಿ ಹರಡಿ

ಕಲ್ಬುರ್ಗಿಯಲ್ಲೊಂದು ಬುದ್ಧವಿಹಾರ: ವೈ. ಬಿ. ಕಡಕೋಳ

ಬಿಸಿಲ ನಾಡು ಕಲ್ಬುರ್ಗಿ ಎಂದ ಕೂಡಲೇ ನಮಗೆ ನೆನಪಾಗುವುದು ಇಲ್ಲಿನ ಶರಣ ಬಸವೇಶ್ವರ ದೇಗುಲ ಮತ್ತು ವಿಶ್ವವಿದ್ಯಾಲಯ. ತೊಗರಿ ನಾಡೆಂದು ಪ್ರಸಿದ್ದವಾದ ಕಲ್ಬುರ್ಗಿಯಲ್ಲೊಂದು ವಿಶಿಷ್ಟ ಬುದ್ಧವಿಹಾರವಿದೆ. ಇದನ್ನು ನೋಡಲೇಬೇಕು. ಇದು ನಗರದಿಂದ ದೂರವಿರುವ ಕಾರಣ ಸ್ವಂತ ವಾಹವಿದ್ದರೆ ಅನುಕೂಲ ಇಲ್ಲವೇ ಅಟೋ ಅಥವ ಸೇಡಂ ಕಡೆಗೆ ಹೋಗುವ ಬಸ್ ಮೂಲಕ ಇಲ್ಲಿಗೆ ಬರಬಹುದು. ಅಥವ ನಗರ ಸಾರಿಗೆ ಬಸ್ ಮೂಲಕವೂ ಬರಬಹುದು. ಇದು ನಗರದಿಂದ 7 ಕಿ. ಮೀ ಅಂತರದಲ್ಲಿದೆ. ಸೇಡಂ ಕಡೆಗೆ ಸಂಚರಿಸುವ ಬಸ್ ರಸ್ತೆಯಲ್ಲಿ … Read more

ಕನ್ನಡದ ಬರಹಗಳನ್ನು ಹಂಚಿ ಹರಡಿ

ನಾ ಕಂಡಂತೆ ಹೆಣ್ಣು: ನಿಮ್ಮೊಳಗೊಬ್ಬ ನಾರಾಯಣ

ಒಂದು ಹೆಣ್ಣು ಮಗು ಹುಟ್ಟುತ್ತಾನೆ ಒಬ್ಬ ತಾಯಿ ಮತ್ತು ಮಗು ಎರಡು ಮನಸುಗಳು ಒಟ್ಟಿಗೆ ಹುಟ್ಟುತ್ತೆ. ಹೆಣ್ಣುಮಕ್ಕಳು ಮನೆಯ ಜೀವಾಳ ಒಂದು ಹೆಣ್ಣು ಮಗು ಜನಿಸಿದೆ ಎಂದರೆ. ಪ್ರತಿದಿನವೂ ಮನೆಯಲ್ಲಿ ಜೀವಂತಿಕೆ ತುಂಬಿದಂತೆ. ಪ್ರತಿ ಹಬ್ಬವು ಸಡಗರವೇ. ಪ್ರತಿ ಸಂಭ್ರಮವು ಸಡಗರವೇ. ಹೆಣ್ಣಿನ ಮನಸ್ಸು ಸುಂದರ ಮತ್ತು ಜೀವಂತ ಒಂದು ಕುಟುಂಬವನ್ನು ತನ್ನ ಹುಟ್ಟಿನಿಂದ ತನ್ನ ಜೀವಿತದ ಕೊನೆಯವರೆಗೂ ಪ್ರೀತಿಸುವ ಕಲೆ ಹೆಣ್ಣಿಗೆ ಮಾತ್ರ ಗೊತ್ತು. ಹೆಣ್ಣು ಎಂದರೆ ಆರೈಕೆ ಮತ್ತು ಒಡನಾಟ. ಅವಳ ಕಳಕಳಿ ಮತ್ತು … Read more

ಕನ್ನಡದ ಬರಹಗಳನ್ನು ಹಂಚಿ ಹರಡಿ

ಪಂಜು ಕಾವ್ಯಧಾರೆ

ಪ್ರಶ್ನೆ ನಾನು ಸತ್ತಿರುವೆನೆಂದು ಏಕೆ ಅಳುತ್ತಿರುವಿರಿ..? ನಿಮ್ಮ ರೋಧನ ನನಗೆ ಕೇಳುತ್ತಿದೆ ನಿಮ್ಮ ಮನದ ನೋವು ನನಗೆ ಅರ್ಥವಾಗುತ್ತಿದೆ ನಿಮ್ಮ ಕಣ್ಣೀರ ಹನಿಗಳನ್ನು ನಾನು ಬಾಚಿ ತಬ್ಬಿಕೊಳ್ಳುತ್ತಿರುವೆ ನಾನು ಸತ್ತಿರುವೆನೆಂದು ಏಕೆ ಅಳುತ್ತಿರುವಿರಿ..? ಗೋಡೆಗೆ ಭಾರವಾಗಿರುವ ಭಾವಚಿತ್ರದಲ್ಲಿ ನಾನಿರುವೆನೇನು? ಅಥವಾ ಆಗಸದೆತ್ತರದ ಕಲ್ಲು ಮನುಷ್ಯನೊಳಗೆ ಅಡಗಿ ಕುಳಿತಿರುವೆನೇನು ನಾನು..? ಅಥವಾ ನೀವೆ ಕಟ್ಟಿದ ಭಾರವಾದ ಸಮಾಧಿಯೊಳಗೆ ಕಣ್ಮುಚ್ಚಿ ಮಲಗಿರುವೆನೇನು ನಾನು..? ನಾನು ಸತ್ತಿರುವೆನೆಂದು ಏಕೆ ಅಳುತ್ತಿರುವಿರಿ..? ನನ್ನ ದೇಹದ ಕಣ ಕಣದ ಉಸಿರು ನಿರ್ಮಲ ವಾತಾವರಣ ಸೇರಿದೆ … Read more

ಕನ್ನಡದ ಬರಹಗಳನ್ನು ಹಂಚಿ ಹರಡಿ

ಕೊರೋನ ಕವಿತೆಗಳು

ಮನೆಯಲ್ಲೇ ಇರಿ ಬಂಧಿಯಾಗಿಬಿಡಿ.. ಚಂದದಿ, ಇಪ್ಪತ್ತೊಂದು ದಿನ ವ್ರತದಂದದಿ.. ಮನೆಯೊಳಗೆ ಮನಸೊಳಗೆ…. ನಿಮಗಾಗಿ, ನಮಗಾಗಿ, ಭಾರತಕ್ಕಾಗಿ ಮನೆಯಲ್ಲೇ ಇರಿ, ಮುದದಿ… ಇದ್ದು ಮಹಾನ್ ಆಗಿರಿ.. ಭಾರತೀಯರೇ ಅಂದು ಗಾಂಧಿ ಕರೆಗೆ ಬ್ರಿಟಿಷರ ಅಟ್ಟಲು ಮನೆ ಬಿಟ್ಟಿರಿ… ಇಂದು ಮಾರಿ ಕರೊನಾ ಅಟ್ಟಲು ದಯಮಾಡಿ ಮನೆಯಲ್ಲೇ ಇರಿ… ಇದ್ದು ಬಿಡಿ ಮನೆಯಲ್ಲೇ ವಿನಂತಿಸುವೆ… ವಿಷಕ್ರಿಮಿಯ ಮೆಟ್ಟಲು. ತುಸುದಿನ ನಿಮ್ಮ ಮನೆಗಳಲ್ಲಿ ನೀವೇ ರಾಜರಾಗಿರಿ, ಆಳಿರಿ, ಆಡಿರಿ, ಓದಿರಿ‌.. ತೊಳೆಯಿರಿ, ತೆರೆಯಿರಿ ಮನವ ಹೊಸ ಆಲೋಚನೆಗೆ…. ಆವಿಷ್ಕಾರಕೆ, ಸಾತ್ವಿಕ ಸಂಯಮಕೆ… … Read more

ಕನ್ನಡದ ಬರಹಗಳನ್ನು ಹಂಚಿ ಹರಡಿ

ಮಂಗಳ: ಗಿರಿಜಾ ಜ್ಞಾನಸುಂದರ್

ಮಧ್ಯರಾತ್ರಿಯ ಹೊತ್ತು, ಹೊರಗೆ ನಾಯಿಗಳ ಕೆಟ್ಟ ಕೂಗು. ಕೇಳಲು ಹಿಂಸೆ ಅನಿಸುತ್ತಿದೆ. ನರಳುತ್ತಿರುವ ಗಂಡ. ದಿನವೂ ಕುಡಿದು ಬಂದು ಹಿಂಸೆ ಮಾಡುತ್ತಿದ್ದ ಮನುಷ್ಯ. ಅವನನ್ನು ಉಳಿಸಿಕೊಳ್ಳುವುದು ಅಸಾಧ್ಯ ಅನ್ನಿಸುತ್ತಿದೆ. ಅವನು ಕುಡಿದುಬಂದಿರುವುದರಲ್ಲಿ ಏನಾದರು ಬೆರೆತಿತ್ತೋ ಏನೋ ತಿಳಿದಿಲ್ಲ. ಅಥವಾ ಡಾಕ್ಟರ್ ಹೇಳಿದಂತೆ ಅವನು ಕುಡಿತ ನಿಲ್ಲಿಸದ ಕಾರಣದಿಂದ ಅವನ ಅಂಗಾಂಗಗಳು ತೊಂದರೆ ಆಗಿವೆಯೇನೋ. ಏನು ಮಾಡಲೂ ತೋಚುತ್ತಿಲ್ಲ ಅವಳಿಗೆ. ಹೆಸರಲ್ಲಷ್ಟೇ ಮಂಗಳ ಎಂದು ಉಳಿದಿತ್ತು. ಬೇರೆಲ್ಲವೂ ಅವಳಿಗೆ ಜೀವನದಲ್ಲಿ ಅಮಂಗಳವೇ. ಅವಳ ಜೀವನ ಹೀಗೆಯೇ 22 ವರ್ಷದಿಂದ … Read more

ಕನ್ನಡದ ಬರಹಗಳನ್ನು ಹಂಚಿ ಹರಡಿ

ಒಡಲ ಕಿಚ್ಚಿನ ಹಿಲಾಲು ಹಿಡಿದ ಕವಿತೆಗಳು: ಅಶ್ಫಾಕ್ ಪೀರಜಾದೆ

ನಾಗೇಶ ಜೆ ನಾಯಕ ಒಬ್ಬ ಹೆಸರಾಂತ, ಕ್ರೀಯಾಶೀಲ, ಸೂಕ್ಷ್ಮಗ್ರಾಹಿ ಸಾಹಿತಿಯಾಗಿ ಕನ್ನಡ ಸಾರಸ್ವತ ಲೋಕವನ್ನು ತಮ್ಮ ಅನನ್ಯ ಅನುಭವಗಳನ್ನು ಅಕ್ಷರಗಳಲ್ಲಿ ಕಟ್ಟಿಕೊಡುವ ಮೂಲಕ ಶ್ರೀಮಂತಗೊಳಿಸುವಲ್ಲಿ ಅವಿರತವಾಗಿ ಶ್ರಮಿಸುತ್ತಿರುವಂಥವರು. ಆಡು ಮುಟ್ಟದ ಗಿಡವಿಲ್ಲ ಎಂಬ ಮಾತಿನಂತೆ ಅವರು ಸಾಹಿತ್ಯದ ವಿವಿಧ ಪ್ರಕಾರಗಳಲ್ಲಿ ಸಾಧನೆ ಮಾಡಿ ಸೈ ಎನಿಸಿಕೊಂಡವರು. ಅವರು ಬರೆದ ಅಂಕಣ ಬರಹ, ವ್ಯಕ್ತಿ ಚಿತ್ರಣ, ಲೇಖನ, ಕತೆ, ಕವಿತೆ, ವಿಮರ್ಶೆಗಳು ನಾಡಿನ ಪ್ರಕಟಗೊಂಡಿದಷ್ಟೆಯಲ್ಲದೆ ಅವರು ರಚಿಸಿ ಪ್ರಕಟಿಸಿರುವ ಗ್ರಂಥಗಳು ಪ್ರಸಿದ್ದಿ ಪ್ರಶಸ್ತಿಗಳನ್ನು ತಂದು ಕೊಟ್ಟಿವೆ. ಹೀಗಾಗಿ ಅವರು … Read more

ಕನ್ನಡದ ಬರಹಗಳನ್ನು ಹಂಚಿ ಹರಡಿ

ಪ್ರೀತಿಯೆ ದೇವರು: ನಂದಾದೀಪ

ಗೆಳೆಯಾ.. ಭೂಮಿಯಲ್ಲಿ ದೇವರು ಎಲ್ಲಾ ಕಡೆ ಇರೋಕಾಗಲ್ಲಾ ಅಂತ ಪ್ರೀತಿನ ಸೃಷ್ಠಿ ಮಾಡಿದನಂತೆ.. ಯಾಕೆಂದರೆ ನಿಜವಾದ ದೇವರು ನಮ್ಮ ಮುಂದೆ ಪ್ಯತ್ಯಕ್ಷ ಆದ್ರೆ ಅದನ್ನ ತಡೆದುಕೊಳ್ಳೋ ಶಕ್ತಿ ನಮಗಿರೋದಿಲ್ಲ ಅಂತ.. ಈ ಪ್ರೀತಿನ ದೇವರಿಗೆ ಯಾಕೆ ಹೋಲಿಸ್ತಾ ಇದೀನಿ ಅಂದ್ರೆ ನಿಜವಾದ ಪ್ರೀತಿನ ಪಡೆದುಕೊಳ್ಳೋಕು, ಅದರ ತೀವ್ರತೆಯನ್ನು ತಡೆದುಕೊಳ್ಳೋಕು, ಅದನ್ನ ಮತ್ತೆ ಮರಳಿ ನಿಡೋದಕ್ಕೂಅಂತಹದ್ದೊಂದು ಗಟ್ಠಿಯಾದ ಮನಸು ಇರಬೇಕಂತೆ..! ಇಲ್ಲವಾದಲ್ಲಿ ಆ ಪ್ರೀತಿಯೆಂಬ ದೇವರನ್ನ ಉಳಿಸಿಕೊಳ್ಳೋಕ್ಕೆ ಆಗೋದಿಲ್ಲ ನೋಡು..! ಅಂಹದೊಂದು ಮನ ನಿನ್ನಲ್ಲಿ ನಾ ಕಾಣಲೂ ಇಲ್ಲ..! … Read more

ಕನ್ನಡದ ಬರಹಗಳನ್ನು ಹಂಚಿ ಹರಡಿ

ಶೇಕ್ಸಪಿಯರ್‍ನ ಮ್ಯಾಕ್ ಬೆತ್ -ಮಹತ್ವಾಕಾಂಕ್ಷೆಯ ದುರಂತ: ನಾಗರೇಖ ಗಾಂವಕರ

ಸ್ಕಾಟ್‍ಲ್ಯಾಂಡಿನ ರಾಜ ಡಂಕನ್. ಆತನಿಗೆ ಇಬ್ಬರು ಪುತ್ರರು. (Malcolm and Donalbain)ಮಾಲ್‍ಕಮ್ ಮತ್ತು ಡೊನಾಲಬೇನ್. ವಯಸ್ಸಾದ ಡಂಕನ್ ರಾಜ್ಯಭಾರವನ್ನು ನಿಭಾಯಿಸಲಾಗದ ಸ್ಥಿತಿಯಲ್ಲಿ, ತನ್ನ ಉತ್ತರಾಧಿಕಾರಿಗಳನ್ನು ಪಟ್ಟಕ್ಕೆ ತರುವ ಸಮಯದಲ್ಲೇ ಆತನ ಥೇನ್ಸ್ ಆಫ್ ಕೌಡರ್ ಎಂಬ ಪ್ರಾಂತಾಧಿಕಾರಿ ನಾರ್ವೆಯ ರಾಜನ ಜೊತೆಗೂಡಿ ಸ್ಕಾಟ್‍ಲ್ಯಾಂಡಿನ ಮೇಲೆ ಆಕ್ರಮಣ ಮಾಡುತ್ತಾನೆ. [ಥೇನ್ಸ್ ಎಂದರೆ ಗವರ್ನರ ಎಂದರ್ಥ] ಆ ಸಮಯದಲ್ಲಿ ಡಂಕನ್ ತನ್ನ ಸಹೋದರ ಸಂಬಂಧಿಗಳಾದ ಮ್ಯಾಕಬೆತ್ ಮತ್ತು (Banquo) ಬ್ಯಾಂಕೊ ಸಹಾಯದಿಂದ ಆ ಸೈನ್ಯವನ್ನು ಸದೆಬಡಿದು ಕೌಡರನ್ನು ವಶಪಡಿಸಿಕೊಳ್ಳುತ್ತಾರೆ. ವಿಜಯಿಶಾಲಿಗಳಾದ … Read more

ಕನ್ನಡದ ಬರಹಗಳನ್ನು ಹಂಚಿ ಹರಡಿ

ಅಡುಗೆ ಮನೆ ಅವಾಂತರಗಳು: ಶ್ರೇಯ ಕೆ. ಎಂ.

ಅಡುಗೆ ಮನೆ ಎಂದರೆ ಹೆಣ್ಣುಮಕ್ಕಳ ಆವಾಸ ಸ್ಥಾನ ಅಂತಾನೆ ಹಿಂದಿನಿಂದಲೂ ಬಂದಂತಹ ನುಡಿ, ಎಷ್ಟೇ ಉದ್ಯೋಗಸ್ಥ ಮಹಿಳೆಯಾದರೂ ಅಡುಗೆ ಮನೆ ಅನ್ನುವುದು ಅವಳ ಇನ್ನೊಬ್ಬ ಸ್ನೇಹಿತೆ. ಮಹಿಳೆ ಎಷ್ಟೇ ಉನ್ನತ ಹಂತದಲ್ಲಿ ಇದ್ದರೂ ಆಕಾಶದೆತ್ತರಕ್ಕೆ ಹಾರಾಡುತ್ತಿದ್ದರೂ ಅಡುಗೆ ಮನೆ ಎಂಬ ಮಾಯೆಗೆ ಅವಳು ಬರಲೇ ಬೇಕು, ಇಂತಹ ಅಡುಗೆ ಮನೆಯಲ್ಲಿ ನಡೆಯುವ ಅವಾಂತರಗಳ ಬಗ್ಗೆ ನೋಡೋಣ ಬನ್ನಿ. ನಾನು ಈ ಹೆಸರಿನ ಬದಲಾಗಿ ಅಡುಗೆ ಮನೆಯ ಕಲರವ ಅಂತ ಹೇಳುತ್ತೇನೆ … ಯಾಕೆಂದರೆ ನಮ್ಮ ಅಡುಗೆ ಮನೆಯಲ್ಲಿ … Read more

ಕನ್ನಡದ ಬರಹಗಳನ್ನು ಹಂಚಿ ಹರಡಿ

ಪ್ರಥಮ್‌ ಬುಕ್ಸ್‌ ನ ಸ್ಟೋರಿವೀವರ್‌ ಸ್ಪರ್ಧೆ

ಪ್ರಥಮ್‌ ಬುಕ್ಸ್‌ ನ ಸ್ಟೋರಿವೀವರ್‌ ಈ ಸಲದ Retell, Remix, Rejoice ನಲ್ಲಿ ಆಸಕ್ತ ಮಕ್ಕಳ ಅನುವಾದಕರಿಗಾಗಿ ವಿಶೇಷ ಸ್ಪರ್ಧೆಯೊಂದನ್ನು ಏರ್ಪಡಿಸಿದೆ. ಸ್ಪರ್ಧೆಗೆ ನೋಂದಾಯಿಸಲು ಇಲ್ಲಿ ಕ್ಲಿಕ್ಕಿಸಿ. ವಿಜೇತರ ಅನುವಾದವನ್ನು ಪುಸ್ತಕ ರೂಪದಲ್ಲಿ ಪ್ರಕಟಿಸಿ, ನೀಡಲಾಗುವುದು. ಅಲ್ಲದೇ, ಸ್ಟೋರಿವೀವರ್‌ ಡಿಜಿಟಲ್‌ ತಾಣದಲ್ಲಿ ನಿಮ್ಮ ಕತೆ ಪ್ರಕಟಗೊಂಡು, ನೂರಾರು ಮಕ್ಕಳ ಮುಕ್ತ ಓದಿಗೆ ಸಿಗಲಿದೆ. ಹಾಗಾದರೆ, ಪಾಲ್ಗೊಳ್ಳಲು ಏನು ಮಾಡಬೇಕು? ನಿಯಮಗಳೇನು ಎಂದು ತಿಳಿಯಲು ಇಲ್ಲಿ ಕ್ಲಿಕ್‌ ಮಾಡಿ  ಕನ್ನಡದ ಬರಹಗಳನ್ನು ಹಂಚಿ ಹರಡಿ

ಕನ್ನಡದ ಬರಹಗಳನ್ನು ಹಂಚಿ ಹರಡಿ

ಪ್ರೀತಿಯಲ್ಲಿ ನಾ ಎಡವಿದೆ ಆದರೇ….. ನೀ…!: ಪಿ ಎಸ್ ಜೀವನ್ ಕುಮಾರ್ ಕಲ್ಲೇಗ

ಪ್ರೀತಿ ಎಂಬುವುದು ಯಾರ ಅನುಮತಿ ಕೇಳಿ ಹುಟ್ಟುವುದಿಲ್ಲ. ಪ್ರೇಮದ ಬಲೆಯಲ್ಲಿ ಸಿಲುಕಿ ಅದರಿಂದ ಹೊರಬರುವ ತಾಳ್ಮೆ ಒಂದಿದ್ದರೆ ಜೀವನದಲ್ಲಿ ಯಾವುದೇ ಕಷ್ಟಗಳು ಎದುರಾದರೆ ಅದು ಕಷ್ಟ ಎಂದು ಅನಿಸುವುದಿಲ್ಲ. ನಾನು ಪ್ರಾಣಕ್ಕಿಂತ ಹೆಚ್ಚಾಗಿ ಪ್ರೀತಿಸಿದವಳು ನನ್ನ ಹತ್ತಿರ ಬಂದು ಬ್ರೇಕ್ ಅಪ್ ಎಂದು ಹೇಳಿದಾಗ ಏನೂ ಅರ್ಥವಾಗುವುದಿಲ್ಲ. ಬದಲಿಗೆ ವಿಪರೀತವಾದ ಕೋಪ, ತಡೆಯಲಾರದಷ್ಟು ದುಃಖ, ಸಹಿಸಲಾರದಷ್ಟು ನೋವು ಶುರುವಾಗುತ್ತದೆ. ಆ ಕ್ಷಣ ಎಲ್ಲಿಗೆ ಹೋಗಬೇಕು, ಏನು ಮಾಡಬೇಕೆಂದು ಅರ್ಥವಾಗುವುದಿಲ್ಲ. ಆ ಕ್ಷಣ ಪ್ರಪಂಚದಲ್ಲಿ ಎಷ್ಟೋಜನ ಇದ್ದರೂ ಯಾರು … Read more

ಕನ್ನಡದ ಬರಹಗಳನ್ನು ಹಂಚಿ ಹರಡಿ

ನೆನಪಿನ ಗೂಡಿನಿಂದ: ದೀಪು

ಅವತ್ತು ಸ್ಕೂಲ್ ನಿಂದ ಬರತಿದ್ದಹಾಗೆ ಬ್ಯಾಗ್, ಶೂ, ಎಲ್ಲ ಎಸೆದು ಇನ್ನೇನು ಆಟ ಆಡೋಕೆ ಹೋಗ್ಬೇಕು, ಅಷ್ಟರೊಳಗೆ ಒಣ ಹುಲ್ಲು-ಕಡ್ಡಿ ಮನೆ ಮುಂದಿನ ಅಂಗಳದ ಹತ್ತಿರ ಬಿದ್ದಿದ್ದು ಗಮನಿಸಿದೆ… ಅಮ್ಮನ ಸಾಯಂಕಾಲದ ಕಸ ಗುಡಿಸಿ ನೀರು ಹಾಕಿ, ದೇವರ ಮುಂದೆ ದೀಪ ಹಚ್ಚುವ ಕಾರ್ಯಕ್ರಮ ಶುರುವಾಗಿತ್ತು ಹಾಗೆ ಆ ಹುಲ್ಲು-ಕಡ್ಡಿ ಕೂಡ ಕಸ ಸೇರಿತ್ತು. ನಾನು ಆಟ ಮುಗಿಸಿ ಮನೆಗೆ ಬಂದಾಗ ಮತ್ತಷ್ಟು ಹುಲ್ಲು-ಕಡ್ಡಿ ಜೊತೆಗೆ ಪಕ್ಷಿಯ ಒಂದೆರಡು ಪುಕ್ಕಗಳು ಕೂಡ! ನಾಜೂಕಾದ ಪುಕ್ಕಗಳನ್ನ ಹಾಗೆ ಎತ್ತಿಕೊಂಡು … Read more

ಕನ್ನಡದ ಬರಹಗಳನ್ನು ಹಂಚಿ ಹರಡಿ

ಮೆಟ್ಟು ಹೇಳಿದ ಕಥಾ ಪ್ರಸಂಗ ಒಂದು ನೀಳ್ಗಾವ್ಯ (ಭಾಗ 11 & 12): ಎಂ. ಜವರಾಜ್

೧೧- ಅಲಲಲಲೇ ಇದೇನ ಇದು ಗರಿಗರಿ ಪಿಲ್ಲ ಪಂಚ ಜಾರ್ತ ನನ್ನ ಮೈನ ಸೋಕ್ತ ಮಣಮಣನೆ ಮಾತಾಡ್ತ ಬೀದಿ ಧೂಳ ತಾರುಸ್ತ ಏಳುಸ್ತಲ್ಲೊ.. ‘ನೀ ಯಾವೂರ್ ಸೀಮೆನಪ್ಪ ನೀ ಯಾಕ ಈ ಅಯ್ನೋರ್ ಕಾಲ್ಗಾದೆ ನಾ ಈ ಅಯ್ನೋರ ಸೊಂಟ ಸೇರಿ ನೋಡಬಾರದ ನೋಡ್ದಿ ಕೇಳಬಾರದ ಕೇಳ್ದಿ ಶಿವಶಿವ ಆ ನೀಲವ್ವೋರ ನೋಡ್ದೆಯಲ್ಲೊ ನಾ ನೋಡ್ದೆ ಇರ ಜಿನ್ವೆ ಇಲ್ಲ ನಾ ಕೇಳ್ದೆ ಇರ ಜಿನ್ವೆ ಇಲ್ಲ’ ಅಂತಂತ ಮಾತಾಡ್ತಲ್ಲೊ… ನಾ ಕೇಳ್ತ ನೀಲವ್ವೋರು ಕಣ್ಮುಂದ ಬರ್ತಾ … Read more

ಕನ್ನಡದ ಬರಹಗಳನ್ನು ಹಂಚಿ ಹರಡಿ

ಮಿಂಚುತಾರೆಗಳ ಬೆಳದಿಂಗಳು: ಹೆಚ್. ಷೌಕತ್ ಆಲಿ

ಯುವ ಕವಿ ಗುರು ಹಿರೇಮಠರ ಬೆಳಂದಿಗಳು ಚುಟುಕು ಕವಿತೆಗಳ ಸುಂದರ ವಿಚಾರ ಲಹರಿ. ಕವಿಯ ಅಂತರಂಗದಲ್ಲಿ ಹೊಕ್ಕಿನೋಡಿದಾಗ ಒಬ್ಬ ಸತ್ಯ ಅನ್ವೇಷಕ, ಮಮತೆ ವಾತ್ಸಲ್ಯಮಯಿಯಾಗಿ, ಪ್ರೀತಿಯ ಚಿಲುಮೆಯ ನಲ್ಮೆಯ ಪ್ರೇಮಿಯಾಗಿ, ಪ್ರಕೃತಿಪುರುಷನಾಗಿ ಸಂತನಾಗಿ ಕಾವ್ಯಕುಸುರಿಯಲ್ಲಿ ಸಂಶೋಧನೆ ನಡೆಸಿದಂತೆ ನನಗೆ ಅರಿವಿಲ್ಲದೇ ನನಗೆ ಇಷ್ಟವಾದರು ಗುರು. ತನ್ನಷ್ಟಕ್ಕೆ ತೆರೆದುಕೊಳ್ಳುವ ಈ ಕೃತಿಯ ಒಂದೊಂದು ಕವಿತೆಯು ಹೊನ್ನಹೂವುಗಳಾಗಿ ಓದುಗರು ಯಾರೆ ಆಗಿರಲಿ ಮನಸ್ಸಿಗೆ ಮುದ ನೀಡುತ್ತ ಕಾವ್ಯದ ಪಾವಿತ್ರ್ಯತೆಯನ್ನು ಪರಿಚಯಿಸುವ ಪ್ರಯತ್ನ ಫಲಕಾರಿ ಎಂದೆನಿಸಿತು. ಈ ಕೃತಿಯ ಬಗ್ಗೆ ನಾಲ್ಕು … Read more

ಕನ್ನಡದ ಬರಹಗಳನ್ನು ಹಂಚಿ ಹರಡಿ

ಏಪ್ರಿಲ್ ಫೂಲ್ ಅಲ್ಲ ಏಪ್ರಿಲ್ ಕೂಲ್: ಎಂ.ಎಚ್.ಮೊಕಾಶಿ

ಏಪ್ರಿಲ್ ಒಂದು ಮೂರ್ಖರ ದಿನ ಈ ಮೂರ್ಖತನದ ಲೆಕ್ಕ ಒಂದು ದಿನಕ್ಕೆ ಮುಗಿದು ಹೋಗುವ ಹಾಗಿದ್ದರೆ ಎಷ್ಟೊಂದು ಚೆನ್ನಾಗಿರುತ್ತಿತು. ಆದರೆ ಹಾಗಿಲ್ಲ ಅದು ನಿತ್ಯೋತ್ಸವ. ಅದನ್ನು ನಿದರ್ಶಿಸಲು ಮತ್ತು ನಮ್ಮನ್ನು ಆತ್ಮವಿಮರ್ಶೆಗೆ ಒಡ್ಡಿಕೊಳ್ಳಲು ಮೂರ್ಖರ ದಿನದಂದು ಆರಂಭವಾಗುವ ಈ ತಿಂಗಳು ಸಕಾಲ ಎನ್ನಬಹುದು. ಇಡೀ ತಿಂಗಳು ನಾವು ಮೂರ್ಖರಾಗುವ ನಾನಾ ರೀತಿಗಳ ಬಗ್ಗೆ ಅರ್ಥಮಾಡಿಕೊಳ್ಳುವ ಸಮಯ. ಏಪ್ರಿಲ್ ಒಂದರಂದು ಕೆಲವರ ಕಾಲೆಳೆದು ಮೂರ್ಖರನ್ನಾಗಿ ಮಾಡಲು, ಕಾಲೆಳೆಸಿಕೊಂಡು ಮೂರ್ಖರಾದ ದಿನ. ನೀವೂ ಕೂಡ ಎಷ್ಟೋ ದಿನದಿಂದ ಯಾರನ್ನೋ ಬಕ್ರಾ … Read more

ಕನ್ನಡದ ಬರಹಗಳನ್ನು ಹಂಚಿ ಹರಡಿ

ಗುಲ್ಬರ್ಗ ವೈಷ್ಣೋದೇವಿ ಮಂದಿರ: ವೈ. ಬಿ. ಕಡಕೋಳ

ಗುಲ್ಬರ್ಗ ಕರ್ನಾಟಕದ ಹೈದ್ರಾಬಾದ್ ಕರ್ನಾಟಕ ಎಂದು ಕರೆಸಿಕೊಂಡ ಜಿಲ್ಲೆಗಳನ್ನೊಳಗೊಂಡ ಜಿಲ್ಲಾ ಪ್ರದೇಶ. ಇದು ಬೆಂಗಳೂರಿನಿಂದ 613 ಕಿ. ಮೀ ಅಂತರದಲ್ಲಿದ್ದು ಶರಣಬಸವೇಶ್ವರ ಅಪ್ಪ ಅವರಿಂದ ಪ್ರಸಿದ್ದಿ ಪಡೆದದ್ದು. ಬೀದರ ಶ್ರೀರಂಗಪಟ್ಟಣ ಹೆದ್ದಾರಿಯ ಫಲವಾಗಿ ಸಾಕಷ್ಟು ವಾಹನ ಸೌಕರ್ಯದ ಜೊತೆಗೆ ದಕ್ಷಿಣ ಭಾರತದಿಂದ ಉತ್ತರ ಭಾರತಕ್ಕೆ ಸಾಗುವ ರೈಲುಗಳು ಗುಲ್ಬರ್ಗ ಮೂಲಕ ಹಾಯ್ದು ಹೋಗುವ ಮೂಲಕ ಇದು ಸಾರಿಗೆ ಸೌಕರ್ಯಕ್ಕೆ ಹೇಳಿ ಮಾಡಿಸಿದ ಸ್ಥಳ. ಇಲ್ಲಿನ ಇಸ್ಲಾಮಿಕ್ ಶೈಲಿಯ ಗುಂಬಜ್ಗಳು. ಬುದ್ದ ವಿಹಾರ ಮಂದಿರ. ಶರಣ ಬಸವೇಶ್ವರ ಅಪ್ಪ … Read more

ಕನ್ನಡದ ಬರಹಗಳನ್ನು ಹಂಚಿ ಹರಡಿ

ಪ್ರಜೆಗಳ ಕೈಯಲ್ಲಿ ಕೊರೋನ ನಿಯಂತ್ರಣ!: ಕೆ ಟಿ ಸೋಮಶೇಖರ್ ಹೊಳಲ್ಕೆರೆ.

ಈ ಮೇಲಿನ ಬಸವಣ್ಣನವರ ಮಾತ ನೆನಪಿಸುವಂತೆ ಮಾಡಿದೆ ಇಟಲಿಯ ಇಂದಿನ ಪರಿಸ್ಥಿತಿ. ಕರೋನ ರೋಗಕ್ಕೆ ಚಿಕಿತ್ಸೆ ಕೊಡಲು ಆಗದಂತೆ ಇಟಲಿಯಲ್ಲಿ ರೋಗ ಹರಡಿದೆ. ದಿನ ದಿನಕ್ಕೂ ಹೆಚ್ಚು ಹರಡುತ್ತಾ ಹೆಚ್ಚು ಬಲಿಗಳ ಪಡೆಯುತ್ತಿದೆ. ಚಿಕಿತ್ಸೆ ದೊರೆಯದೆ ರೋಗಿಗಳು ಬೀದಿ ಬೀದಿಗಳಲ್ಲಿ ಓಡುವುದು ಬೀಳವುದು ಒಬ್ಬ ರೋಗಿಗಳ ಮೇಲೆ ಮತ್ತೊಬ್ಬರೋಗಿ ಬಿದ್ದು ಒದ್ದಾಡುವ ಕೆಲವರು ಬಿದ್ದು ಎದ್ದು ಓಡುವ, ಇನ್ನು ಕೆಲವರು ಮಿಸುಕಾಡದೆ ಮಲಗಿರುವ, ಚಿಕಿತ್ಸೆಗಾಗಿ ಅಂಗಲಾಚುವ, ಆರೋಗ್ಯವಂತರು ಇವರ ಕಂಡು ಓಡುವ ದೃಶ್ಯಗಳ ಕಂಡು ತನ್ನ ಪ್ರಜೆಗಳಿಗೆ … Read more

ಕನ್ನಡದ ಬರಹಗಳನ್ನು ಹಂಚಿ ಹರಡಿ