ಸಾಂಪ್ರದಾಯಿಕವಾಗಿ ಆಚರಿಸುವ ಪ್ರಾಣಿ ಸ್ಪರ್ಧೆಗಳು, ಪ್ರಾಣಿ ಹಿಂಸೆ ಹಾಗು ಪ್ರಾಣಿ ಕಲ್ಯಾಣದ ಅಗತ್ಯತೆ: ಡಾ. ಕಾವ್ಯ ವಿ.

ಜಲ್ಲಿಕಟ್ಟುಗುಮ್ಮೋಗೂಳಿಯ ಸ್ಪರ್ಧೆ ಹಾಗು ಬುಲ್ ಟೇಮಿಂಗ್ ಎಂದು ಕರೆಯಲ್ಪಡುವ ಜಲ್ಲಿಕಟ್ಟು, ಇದು ತೆಮಿಳುನಾಡಿನ ಸಾಂಪ್ರದಾಯಿಕ ಪೊಂಗಲ್ ಹಬ್ಬದ ಕ್ರೀಡೆಯಾಗಿದೆ. ಈ ಕ್ರೀಡೆಯಲ್ಲಿ ಕಂಗಾಯಾಮ್ ತಳಿಯ ಗೂಳಿಯನ್ನು ಸ್ಪರ್ಧೆಯ ಗುಂಪಿನಲ್ಲಿ ಬಿಡಲಾಗುತ್ತದೆ ಹಾಗು ಓಡುವ ಗೂಳಿಯನ್ನು ನಿಲ್ಲಿಸಲು ಸ್ಪರ್ಧಾಳುಗಳು ಗೂಳಿಯ ಗೂನನ್ನು ಹಿಡಿದುಕೊಳ್ಳಲು ಪ್ರಯತ್ನಿಸುತ್ತಾರೆ. ಇದರ ಜೊತೆಗೆ ಗೂಳಿಯ ಕೊಂಬಿಗೆ ಕಟ್ಟಿದ ಬಾವುಟವನ್ನು ಹಿಡಿದು ಅಂತಿಮ ಗುರಿಯನ್ನು ತಲುಪಬೇಕಿರುತ್ತದೆ. ಕಂಬಳಇದು ದಕ್ಷಿಣ ಕರ್ನಾಟಕದ ತುಳುನಾಡಿನ ಒಂದು ಸಾಂಪ್ರದಾಯಿಕ ಆಟವಾಗಿದ್ದು, ಇದರಲ್ಲ್ಲಿ ದಷ್ಟ ಪುಷ್ಟವಾಗಿ ಸಾಕಿರುವ ಕೋಣಗಳನ್ನು ಕೆಸರು ಭತ್ತದ … Read more

ಕನ್ನಡದ ಬರಹಗಳನ್ನು ಹಂಚಿ ಹರಡಿ

ವೃದ್ಧೋಪನಿಷತ್ (೧-೫): ಡಾ ರಾಜೇಶ್ವರಿ ದಿವಾಕರ್ಲ

ತೆಲುಗು ಮೂಲ: ಡಾ ಎನ್ ಗೊಪಿ ರವರ ವೃದ್ಧೋ ಪನಿಷತ್ ಕನ್ನಡ ಅನುವಾದ: ಡಾ ರಾಜೇಶ್ವರಿ ದಿವಾಕರ್ಲ 1. ವೃದ್ಧನು ವೃದ್ಧನೆಂದರೆಮುದುಕ ನೆಂದಲ್ಲವೃದ್ಧಿಹೊಂದಿದವನೆಂದರ್ಥಅಂತಹ ವೃದ್ಧಿಕಾಲದ ಪುರೋಗಮನದಲಿ ಮಾತ್ರವೆ ಅಲ್ಲ,ಅನುಭವದ ಪರಿಣತಿ ಯಲ್ಲಿಯೂ ಸಹವಯಸು ಕಳೆದಿರುವುದರಲಿ ಮಾತ್ರ ವಲ್ಲಮನಸು ಬೆಳೆದಿರುವುದುರಲ್ಲಿಯೂ ಸಹ,ಶಿಥಿಲವಾಗಿತ್ತಿರುವುದು ಶರೀರವೇ !ಆದರೆಅದು ಸಾಧಿಸಿದ್ದುಕಡಿಮೆಯೇನೂ ಅಲ್ಲ,ಗಿಡ ಹೊಂದಿದಸಾಫಲ್ಯ ವಂತಹುದೇ ಇದೂ ಸಹ.ಇದೊಂದು ಜ್ಞಾನದ ಕುಂಡ.ಜೀವನ ಬಿಗಿಹಿಡಿದ ತತ್ವವೃದ್ಧಾಪ್ಯ ವೆಂದರೆಪೊದೆತುಂಬಿದಅರಣ್ಯ ಯಾನದಲ್ಲಿಹಸಿರು ಹಾದಿಗಳನ್ನುಕೆತ್ತಿದ ಕಂಕಣ ಬದ್ದರುಸಂಸಾರ ಮಹಾ ಸಾಗರದಲ್ಲಿನೆಂದ ಮಮತೆಯ ಮುದ್ದೆಗಳು.ಜೀವನದ ವೇದಿಕೆಯಲ್ಲಿತಂದೆ ತಾಯಿತಾತ, ಗುರುಗಳ ಪಾತ್ರಗಳನ್ನೂನಿರ್ವಹಿಸಿದ ಸಿದ್ಧರುಈದಿನ … Read more

ಕನ್ನಡದ ಬರಹಗಳನ್ನು ಹಂಚಿ ಹರಡಿ

ನಿರ್ಲಿಪ್ತತೆಯಲ್ಲಿ ಹರಿದುಬಂದ ಜೀವಭಾವ “ಬೊಗಸೆ ನೀರು”: ಬಿ.ಕೆ.ಮೀನಾಕ್ಷಿ, ಮೈಸೂರು.

ಪತ್ರಕರ್ತನ ಸತ್ಯಕಥೆ: ಬೊಗಸೆ ನೀರುಲೇಖಕರು: ಅರುಣಕುಮಾರ ಹಬ್ಬುಪ್ರಕಾಶನ: ಸುದರ್ಶನ ಪ್ರಕಾಶನ, ಬೆಂಗಳೂರು. ಬೊಗಸೆ ನೀರನ್ನು ಹೀರಿ ಮುಗಿಸುವಷ್ಟರಲ್ಲಿ ಗಂಗೆಯಲ್ಲಿ ಮಿಂದು ಮಡಿಯಾದಂತಾಯಿತು. ಪದ ಕುಸಿಯೆ ನೆಲವಿಹುದು ಮಂಕುತಿಮ್ಮ ಎಂದು ಡಿವಿಜಿಯವರು ಹೇಳಿದಂತೆ ಪ್ರತಿಸಾರಿ ಮನುಷ್ಯ, ತನ್ನ ಚೈತನ್ಯವನ್ನು ಆತ್ಮಸ್ಥೈರ್ಯವನ್ನು ಕಳೆದುಕೊಂಡಾಗೆಲ್ಲ ಯಾವುದೋ ಒಂದು ದಿವ್ಯಶಕ್ತಿ ಆಸರೆಯಾಗಿ ಒದಗಿಬರುತ್ತದೆ ಎಂಬುದು ಸತ್ಯವಾದ ಮಾತು. ಬದುಕೆಂಬ ಕತ್ತಿಯಲಗಿನ ಮೇಲೆ ನಡೆಯುತ್ತಾ, ಜೀವನವನ್ನು ಸರಿದೂಗಿಸಲು ಸಮತೋಲನಗೊಳಿಸುತ್ತಾ, ಇಡೀ ಜೀವನವನ್ನೇ ಸವೆಸುವುದಿದೆಯಲ್ಲ ಅದಕ್ಕಿಂತ ದೌರ್ಭಾಗ್ಯ ಇನ್ನೊಂದಿಲ್ಲ. ಆದರೆ ಆ ದುರದೃಷ್ಟವನ್ನೇ ತನ್ನ ಪಾಲಿನ … Read more

ಕನ್ನಡದ ಬರಹಗಳನ್ನು ಹಂಚಿ ಹರಡಿ

ಈ ಪ್ರಶ್ನೆಗೆ ಉತ್ತರವೇನು?: ಕೊಡೀಹಳ್ಳಿ ಮುರಳೀ ಮೋಹನ್

ತೆಲುಗು ಮೂಲ: ಸಂಘಮಿತ್ರಕನ್ನಡ ಅನುವಾದ: ಕೊಡೀಹಳ್ಳಿ ಮುರಳೀ ಮೋಹನ್ ದೇರೆಬೈಲು ಐ.ಟಿ. ಹಿಲ್ಸ್, ಟವರ್ ನಂಬರ್ 4, ಹತ್ತನೇ ಮಹಡಿ.ವಿವಿಧ ಕ್ಷೇತ್ರಗಳ ವಿಶ್ವಪ್ರಸಿದ್ಧ ವಿಜ್ಞಾನಿಗಳು ಮತ್ತು ಹಲವಾರು ದೇಶಗಳ ಸರ್ಕಾರಿ ಪ್ರತಿನಿಧಿಗಳಿಂದ ತುಂಬಿರುವ ಸಭಾಂಗಣ. ಇನ್ನೆಷ್ಟು ಹೊತ್ತು? ಇನ್ನು ಐದೇ ನಿಮಿಷ. ಇಡೀ ಜಗತ್ತು ಕಾತರದಿಂದ ಕಾಯುತ್ತಿರುವ ಅದ್ಭುತ ಆವಿಷ್ಕಾರವೊಂದು ಅಲ್ಲಿ ಸಂಭವಿಸಲಿದೆ. ನೋಡುತ್ತಿದ್ದಂತೆ, ವೇದಿಕೆಯ ಮೇಲೆ ತಿಳಿನೀಲಿ ಬಣ್ಣದ ತೆಳುವಾದ ಮಂಜು ಆವರಿಸಿತು. ಕುತೂಹಲಕ್ಕೆ ತೆರೆ ಎಳೆದಂತೆ, ಡಾ. ವಾಣಿ ಅವರ ಐದು ವರ್ಷಗಳ ಕಠಿಣ … Read more

ಕನ್ನಡದ ಬರಹಗಳನ್ನು ಹಂಚಿ ಹರಡಿ

ಹಕ್ಕರಕಿಯೂ, ಸಮೀಕ್ಷೆಯೂ: ಎಫ್.‌ ಎಂ. ನಂದಗಾವ

ʻʻನಾವ್, ಹಕ್ಕರಕಿ ಮಾರೂದಿಲ್ಲರಿ ಸಾವಕಾರರ.ʼʼ ʻʻಯಾಕವ್ವ, ಹಕ್ಕರಕಿ ನೀವ್ಯಾಕ ಮಾರೂದಿಲ್ಲ?ʼʼ ʻʻನಿಮಗ ಕಾಯಿಪಲ್ಲೆ ಬೇಕಲಾ? ಮೆಂತೆ ಪಲ್ಲೆ ಬೇಕೋ? ಪುಂಡಿಪಲ್ಲೆ ಬೇಕೋ, ಸಬ್ಬಸಗಿ ಬೇಕೋ, ರಾಜಗಿರಿ ಬೇಕೋ ತಗೊಳ್ರಿ. ಕೋತಂಬ್ರಿ ಬೇಕಾತು ತಗೊಳ್ರಿ. ಬರಿ ಕರಿಬೇವು ಕೊಡಾಂಗಿಲ್ಲ ನೋಡ್ರಿ.ʼʼ ಸಂತೆ ಮೈದಾನದ ಒಳಗೆ ಎತ್ತರದ ಕಟ್ಟೆಗಳಲ್ಲಿನ ಒಂದು ಕಟ್ಟೆಯಲ್ಲಿ ಕುಳಿತು ಕಾಯಿಪಲ್ಲೆ ಮಾರುತ್ತಿದ್ದ ಸಾಂವತ್ರಕ್ಕ ಹೇಳಾಕ್ಹತ್ತಿದ್ದಳು. ಸಾಂವತ್ರಕ್ಕನ ಹಣಿ ಮ್ಯಾಲ ಮೂರು ಬೆರಳಿನ ವಿಭೂತಿ ಇದ್ದರ, ಕೊರಳಾಗ ತಾಳಿ ಜೋಡಿ ಬೋರಮಾಳ ಮತ್ತು ಅವಲಕ್ಕಿ ಸರಗಳು ಇದ್ದವು. … Read more

ಕನ್ನಡದ ಬರಹಗಳನ್ನು ಹಂಚಿ ಹರಡಿ

ವಾಸು ಸಿಕ್ಕಿದ್ದು…. !!!!: ನಾಗಸಿಂಹ ಜಿ ರಾವ್

ಸಿಂಹಾವಲೋಕನ 5 ಸಮುದಾಯದ ಪುಲಪೇಡಿ ನಾಟಕದ ತಾಲೀಮಿನ ಸಮಯದಲ್ಲಿ ಒಂದು ಘಟನೆ ನಡೆಯಿತು. ನಾನು ಲಿಂಗದೇವರು ಹಳೆಮನೆಯವರ ಜೊತೆ ನನ್ನ ಪಾತ್ರದ ಬಗ್ಗೆ ಮಾಹಿತಿ ಕೇಳುತ್ತಾ ನಿಂತಿದ್ದೆ. ಆಗ ನನಗಿಂತ ಸ್ವಲ್ಪ ದೊಡ್ಡ ಹುಡುಗ ಬಂದು ” ನೀವು ನಾಗಸಿಂಹ ಅಲ್ವ ?? ” ಎಂದು ಕೇಳಿದ, ನನಗೆ ಆಶ್ಚರ್ಯ, ಮೈಸೂರಿಗೆ ಬಂದು ಇನ್ನೂ ನಾಲ್ಕು ತಿಂಗಳು ಆಗಿಲ್ಲ ಯಾರಪ್ಪ ಇವರು ? ನನ್ನ ಹೆಸರು ಇವರಿಗೆ ಹೇಗೆ ಗೊತ್ತು? ಹೌದು ನಾನೆ ನಾಗಸಿಂಹ, ನೀವು ಯಾರು … Read more

ಕನ್ನಡದ ಬರಹಗಳನ್ನು ಹಂಚಿ ಹರಡಿ

ಅವಲಕ್ಕಿ ಎಂಬ ಮಹಾ ಪುರಾಣ: ಡಾ. ವೃಂದಾ ಸಂಗಮ್

ಅವಲಕ್ಕಿಗೆ ಒಂದು ಪುರಾಣ ಅದ. ಅದು ಭವಿಷ್ಯೋತ್ತರ ಪುರಾಣದೊಳಗ ಬರತದ. ನಾವೆಲ್ಲ, ಅವಲಕ್ಕಿ ಪವಲಕ್ಕಿ ಕಾಂಚಣ ಮಿಣಮಿಣ ಎಂಬ ಹಾಡನ್ನ ಮಕ್ಕಳಿದ್ದಾಗಲೇ ಹಾಡತಿದ್ವಿ. ಈಗೀಗ, ಅದಕ್ಕೂ ರಾಮಾಯಣಕ್ಕೂ ನಂಟು ಜೋಡಿಸಿದ್ದೂ ಕೇಳತೇವಿ. ಆದರ, ಅವಲಕ್ಕಿ ಪ್ರಾಚೀನತೆ ಬರೋದು ಮಹಾಭಾರತದಾಗ. ಮತ್ತ ಮುಂದ ಭಾಗವತ ಪುರಾಣದಾಗ, ಅಲ್ಲದ ಹರಿವಂಶದಾಗ. ಊಟಂದ್ರ ಊಟ ಅಲ್ಲ, ತಿಂಡಿ ಅಂದ್ರ ತಿಂಡಿ ಅಲ್ಲ, ಊಟನೂ ಹೌದು, ತಿಂಡಿನೂ ಹೌದು, ಬಹುರೂಪಿ, ನಾನ್ಯಾರು. ಅಂತ ಯಾರರೇ ಕೇಳಿದರ ಅದು ಅವಲಕ್ಕಿ ಅಂತ ಎಲ್ಲಾರಿಗೂ ಗೊತ್ತು. … Read more

ಕನ್ನಡದ ಬರಹಗಳನ್ನು ಹಂಚಿ ಹರಡಿ

ಸುನೀಲರ ತನಗಗಳು: ಬೊಗಸೆಯಲಿ ತುಂ ತುಂಬಿಕೊಂಡ ನದಿ ನೀರ ನೀರವತೆ !: ಡಾ. ಹೆಚ್ ಎನ್ ಮಂಜುರಾಜ್

ಶ್ರೀಯುತ ಸುನೀಲ್ ಹಳೆಯೂರು ಮೂಲತಃ ಸಾಹಿತ್ಯ ಸಹೃದಯಿ. ಬರೀ ಸಹೃದಯಿ ಮಾತ್ರವಲ್ಲ; ಸ್ವತಃ ಕವಿ, ವಿಮರ್ಶಕರು, ವ್ಯಾಖ್ಯಾನಕಾರರು, ಕನ್ನಡ ಪುಸ್ತಕಗಳನ್ನು ಓದಿಸುವ ಸದ್ದಿಲ್ಲದ ಸುದ್ದಿ ಬೇಡದ ಪ್ರಸಾರಕರು, ಬೆಂಗಳೂರಿನ ಕಾರ್ಪೊರೇಟ್ ಮತ್ತು ಕಾರ್ಪೊರೇಟ್ ಅಲ್ಲದ ಎರಡೂ ಕ್ಷೇತ್ರಗಳಲ್ಲೂ ತಮ್ಮದೇ ಆದ ಬರೆಹಗಾರತನದ ಛಾಪನ್ನೊತ್ತಿದವರು. ಆಕಾಶವಾಣಿ, ದೂರದರ್ಶನ, ಪತ್ರಿಕೆಗಳ ಆನ್‌ಲೈನ್ ವಾಹಿನಿಗಳಲ್ಲಿ ತಮ್ಮ ಕಗ್ಗದ ವ್ಯಾಖ್ಯಾನಗಳ ಮೂಲಕ ಮನೆ ಮಾತಾದವರು. ಗೀತ ರಚನಾಕಾರರು. ಮುಖ್ಯವಾಗಿ ತಮ್ಮ ಸಾಹಿತ್ಯ, ಸಂಸ್ಕೃತಿ ಮತ್ತು ಕನ್ನಡತನದ ಕೆಲಸಗಳಿಗೆ ಸಾಮಾಜಿಕ ಮತ್ತು ಸಾಮುದಾಯಿಕ ಆಯಾಮ … Read more

ಕನ್ನಡದ ಬರಹಗಳನ್ನು ಹಂಚಿ ಹರಡಿ

ವಿಭಾವರಿ (ಕೊನೆಯ ಭಾಗ): ವರದೇಂದ್ರ ಕೆ ಮಸ್ಕಿ

ಇತ್ತ ಅನುಪಮಾಳ ಅಳು ನೋಡಲಾಗದೆ ತೇಜಸ್ ಕೂಡ ಬಿಕ್ಕಿ ಬಿಕ್ಕಿ ಅಳಲು ಪ್ರಾರಂಭಿಸಿದ್ದಾನೆ. ಇದನ್ನು ಕಂಡ ವಿಭಾಳ ಮನಸಲ್ಲಿ ತಲ್ಲಣವಾಗುತ್ತಿದೆ. ನಾನು ತಪ್ಪು ಮಾಡಿದೆ, ಮತ್ತೆ ಮತ್ತೆ ತಪ್ಪೇ ಮಾಡುತ್ತಿದ್ದೇನೆ. ಅಂದು ತೇಜಸ್ನನ್ನು ಬಿಟ್ಟು ಹೋಗಿ ತಪ್ಪು ಮಾಡಿದೆ, ಈಗ ಮತ್ತೆ ಅವನೊಂದಿಗೆ ಬಂದು ಮತ್ತೆ ತಪ್ಪು ಮಾಡಿದ್ದೇನೆ. ಆದರೆ ತೇಜಸ್ನ ಜೊತೆ ಬರದೇ ವಿಧಿ ಇರಲಿಲ್ಲ.. ಈಗ ಏನು ಮಾಡಲಿ.. ಏನು ಮಾಡಲಿ.. ಎಂದು ಚಿಂತೆಯಲ್ಲಿ ಮುಳುಗಿದವಳನ್ನು ಅವಳ ಗೆಳತಿ ವೇದಶ್ರೀ ಬಂದು ಕರೆದುಕೊಂಡು ಹೋಗುತ್ತಾಳೆ. … Read more

ಕನ್ನಡದ ಬರಹಗಳನ್ನು ಹಂಚಿ ಹರಡಿ

ದಿಕ್ಕುಗಳು (ಭಾಗ 6): ಹಟ್ಟಿ ಸಾವಿತ್ರಿ ಪ್ರಭಾಕರಗೌಡ

ಅಜ್ಜಿಯ ಒತ್ತಾಯಕ್ಕೆ ಮಣಿದು ಅನುಶ್ರೀ ಒಂದೆರಡು ತುತ್ತು ತಿಂದಳು. ಇಷ್ಟು ದಿನ ಸತ್ತು ಹೋಗಿರುವ ತಾಯಿಯ ನೆನಪುಗಳು ಬಾಧಿಸುತ್ತಿದ್ದರೂ ತಂದೆ ಇರುವನಲ್ಲ ಅಂತ ಧೈರ್ಯದಿಂದ ಇರಲು ಯತ್ನಿಸುತ್ತಿದ್ದವಳಿಗೆ ತಂದೆ ಇದ್ದೂ ಇಲ್ಲದಂತಾದ ಎಂಬ ಸತ್ಯವನ್ನು ಅರಗಿಸಿಕೊಳ್ಳಲಾಗದೇ ಉಣ್ಣುತ್ತಿದ್ದ ತುತ್ತು ನೆತ್ತಿಗೆ ಹತ್ತಿ ಕೆಮ್ಮತೊಡಗಿದಳು. ಆ ಹೊತ್ತಿಗೆ ಚೈತನ್‌ನ ಬೈಕ್ ಅನುಶ್ರೀಯ ಮನೆಯ ಮುಂದೆ ನಿಂತಿತು. ಸದ್ದು ಕೇಳಿ ಬಾಗಿಲಿಗೆ ಓಡಿದಳು ಜ್ಯೋತಿ. ಯಾರಾಗಿರಬಹುದೆಂದು ಅನು ಚಡಪಡಿಸಿದಳು. ಬೈಕ್ ನಿಲ್ಲಿಸಿ ಚೈತನ್ ಒಳ ಬಂದನು. ವೃದ್ಧಾಶ್ರಮಕ್ಕೆ ಹೋಗದೇ ಸೀದಾ … Read more

ಕನ್ನಡದ ಬರಹಗಳನ್ನು ಹಂಚಿ ಹರಡಿ

ಮಗು, ನೀ ನಗು (ಭಾಗ 5): ಸೂರಿ ಹಾರ್ದಳ್ಳಿ

ಗಾದೆಯೇ ಇದೆಯಲ್ಲ, ಅಜ್ಜಿಗೆ ಅರಿವೆ ಚಿಂತೆ, ಮಗಳಿಗೆ ಅದೇನೋ ಚಿಂತೆ, ಮೊಮ್ಮಗಳಿಗೆ ಕಜ್ಜಾಯ ಚಿಂತೆ, ಎಂದು! ಮೊದಲನೆಯದಂತೂ ಸತ್ಯಸ್ಯ ಸತ್ಯ ಎಂಬುದು ನನಗೆ ಈಗ ಅರಿವಾಗಿದೆ. ಈ ಮಗುವಿನ ಸೇವೆಗೆ ಎಷ್ಟೊಂದು ಬಟ್ಟೆ ಬೇಕಲ್ಲ, ಕಾಲಿಗೆ ಸಾಕ್ಸ್ಗಳು, ಕೈಗೆ ಗವಸುಗಳು, ತಲೆಗೆ ಟೊಪಿ, ಅಂಗಿ, ಸ್ವೆಟರ್, ಡಯಪರ್‌ಗಳು, ಹೀಗೆ ವಿವಿಧ ಗಾತ್ರದವುಗಳು. ದಿನಕ್ಕೆ ಆರೇಳು ಬಾರಿ ಅವನ್ನು ಬದಲಿಸಬೇಕು. ಹೀಗಾಗಿ ಡಜನ್ ಡಜನ್ ಬಟ್ಟೆಗಳು. ಉಚ್ಚೆ ಮಾಡಿದಾಗಲೆಲ್ಲಾ ಅವನ್ನು ತೊಳೆದು ಒಣಗಿಸಬೇಕು. ಹಳೆಯ ಪಂಚೆಗಳನ್ನೆಲ್ಲಾ ಕತ್ತರಿಸಿ ಇಟ್ಟುಕೊಂಡಿದ್ದೇನೆ, … Read more

ಕನ್ನಡದ ಬರಹಗಳನ್ನು ಹಂಚಿ ಹರಡಿ

“ಸಸ್ಯಶಾಸ್ತ್ರದ ಲೋಕದಲ್ಲಿ ಒಂದು ಪ್ರವಾಸ”: ರೋಹಿತ್ ವಿಜಯ್ ಜಿರೋಬೆ

ಮಾನವ ಜೀವನ, ಪ್ರಾಣಿ ಜೀವನ ಹಾಗೂ ಭೂಮಿಯ ಪರಿಸರ ವ್ಯವಸ್ಥೆಯ ಮೂಲವೇ ಸಸ್ಯಗಳು. ಸಸ್ಯವಿಲ್ಲದೆ ಜೀವವೇ ಅಸಾಧ್ಯ ಎಂಬ ಮಾತು ಅತಿಶಯೋಕ್ತಿಯಲ್ಲ. ಏಕೆಂದರೆ ಸಸ್ಯಗಳು ಆಹಾರ, ಆಮ್ಲಜನಕ, ಔಷಧಿ, ವಸ್ತ್ರ, ವಾಸಸ್ಥಾನ ಮತ್ತು ನೂರಾರು ನೈಸರ್ಗಿಕ ಸಂಪತ್ತುಗಳನ್ನು ಒದಗಿಸುತ್ತವೆ. ಈ ಸಸ್ಯಗಳ ಜೀವನ, ರಚನೆ, ವಿಕಾಸ, ಕ್ರಿಯಾಶೀಲತೆ ಹಾಗೂ ಅವುಗಳ ಪರಿಸರ ಸಂಬಂಧಗಳನ್ನು ಅಧ್ಯಯನ ಮಾಡುವ ಶಾಸ್ತ್ರವನ್ನು ಸಸ್ಯಶಾಸ್ತ್ರ ಅಥವಾ ಬೋಟನಿ (Botany) ಎಂದು ಕರೆಯಲಾಗುತ್ತದೆ. “ಬೋಟನಿ” ಎಂಬ ಪದವು ಗ್ರೀಕ್ ಭಾಷೆಯ Botane ಎಂಬ ಪದದಿಂದ … Read more

ಕನ್ನಡದ ಬರಹಗಳನ್ನು ಹಂಚಿ ಹರಡಿ

ಗಿಗ್ ಆರ್ಥಿಕತೆ ಹಾಗೂ ನಿರುದ್ಯೋಗ ನಿವಾರಣೆಗೆ ನವ ದಾರಿ: ನಿಂಗಪ್ಪ ಹುತಗಣ್ಣವರ

ಇಂದಿನ ಜಗತ್ತಿನಲ್ಲಿ ಉದ್ಯೋಗದ ಸ್ವರೂಪದಲ್ಲಿ ದೊಡ್ಡ ಬದಲಾವಣೆ ಸಂಭವಿಸಿದೆ. ಹಿಂದಿನ ದಿನಗಳಲ್ಲಿ ಜನರು ಒಂದು ಸಂಸ್ಥೆಯಲ್ಲಿ ದೀರ್ಘಕಾಲ ಸ್ಥಿರ ಉದ್ಯೋಗ ಮಾಡುವುದು ಸಾಮಾನ್ಯವಾಗಿತ್ತು. ಆದರೆ ಇತ್ತೀಚಿನ ತಂತ್ರಜ್ಞಾನ ಕ್ರಾಂತಿ, ಡಿಜಿಟಲ್ ಪ್ಲಾಟ್ಫಾರ್ಮ್ಗಳ ವಿಸ್ತರಣೆ ಮತ್ತು ಆನ್ಲೈನ್ ಜಗತ್ತಿನ ಪ್ರಭಾವದಿಂದ ಉದ್ಯೋಗದ ಮಾದರಿ ಸಂಪೂರ್ಣವಾಗಿ ಬದಲಾಗಿದೆ. ಈ ಹೊಸ ಉದ್ಯೋಗ ಮಾದರಿಯನ್ನು ಗಿಗ್ ಆರ್ಥಿಕತೆ ಎಂದು ಕರೆಯಲಾಗುತ್ತದೆ. “Gig” ಎಂಬ ಪದವು ಸಂಗೀತ ಕ್ಷೇತ್ರದಲ್ಲಿ ತಾತ್ಕಾಲಿಕ ಪ್ರದರ್ಶನವನ್ನು ಸೂಚಿಸಲು ಬಳಸಲಾಗುತ್ತಿತ್ತು. ಈಗ ಅದನ್ನು ತಾತ್ಕಾಲಿಕ, ಪ್ರಾಜೆಕ್ಟ್ ಆಧಾರಿತ ಅಥವಾ … Read more

ಕನ್ನಡದ ಬರಹಗಳನ್ನು ಹಂಚಿ ಹರಡಿ

ವಿಭಾವರಿ (ಭಾಗ 4): ವರದೇಂದ್ರ ಕೆ ಮಸ್ಕಿ

ಅನುಪಮಾಳ ಅನುರಾಗದಲೆಯಲ್ಲಿ ತೇಜಸ್ ಅನುಪಮಾ ಮಾಧವನ ಒಬ್ಬಳೇ ಮುದ್ದಿನ ತಂಗಿ. ವರ್ಣನಾತೀತ ರೂಪ, ಬೆಳ್ಳನೆಯ ಚರ್ಮ ಇಲ್ಲದೆ ತುಸು ಕಪ್ಪಾದ ಮೈ ಬಣ್ಣ ಹೊಂದಿದ ಕೃಷ್ಣ ಸುಂದರಿ. ಆ ಕಣ್ಣುಗಳನ್ನು ನೋಡುತ್ತಿದ್ದರೆ ನವಿಲೇ ನಾಚಬೇಕು, ತುಂಬಿಕೊ ಂಡ ಗಲ್ಲಗಳನ್ನು ಸ್ಪರ್ಶಿಸಿದರೆ ಕೈಯಲ್ಲಿ ಹೂ ಹಿಡಿದ ಅನುಭವ. ಸುಂದರ ರೂಪಲಾವಣ್ಯದ ಜೊತೆಗೆ ಗುಣವಂತೆ, ಸಂಸ್ಕಾರವ ಂತೆ, ಸಹೃದಯ ಮನಸಿನ ಭಾವನಾತ್ಮಕ ಜೀವಿ, ಒಬ್ಬಳನ್ನು ಪ್ರೇಮಿಸಿ ಅವಳಿಗಾಗಿ ಲಕ್ಷಗಟ್ಟಲೇ ಹಣ ಖರ್ಚು ಮಾಡಿ ಅವಳಿಂದ ಮೋಸಹೋಗಿ ಕುಗ್ಗಿಹೋದವನನ್ನು ಮದುವೆ ಆಗಲು … Read more

ಕನ್ನಡದ ಬರಹಗಳನ್ನು ಹಂಚಿ ಹರಡಿ

ಮಗು, ನೀ ನಗು (ಭಾಗ 4): ಸೂರಿ ಹಾರ್ದಳ್ಳಿ

ಬಂದವರಾರಾದರೂ ಮುಖಕ್ಕೆ ಸೆಂಟೋ, ಪೌಡರೋ ಹಾಕಿದರೆ ಮಗು ಅವರ ಕೈಯಲ್ಲಿ ಇದ್ದರೂ ಇತ್ತ ಮುಖ ತಿರುಗಿಸುತ್ತದೆ. ಅದರೆದುರು ನಾವು ಪರಿಮಳದ ವೆಜೆಟೇಬಲ್ ಪಲಾವೋ, ಬಿರ್ಯಾನಿಯೋ ತಿನ್ನುವಾಗ ಅದು ನಮ್ಮತ್ತ ನೋಡಿದರೆ ನಾವು ಅದಕ್ಕೆ ಕೊಡದೇ ಮೋಸ ಮಾಡುತ್ತಿದ್ದೇವೆ, ಎಂದು ದುಃಖವಾಗುತ್ತದೆ. ‘ನೀನು ದೊಡ್ಡವಳಾಗು ಪುಟ್ಟಿ, ನಂತರ ನಿನಗೆ ಪಲಾವ್, ಪಿಜ್ಜಾ, ಪಾಸ್ತಾ, ಏನು ಬೇಕೋ ಕೊಡಿಸುತ್ತೇವೆ,’ ಎಂದು ಮಾತು ಕೊಡುತ್ತೇನೆ. ನನ್ನ ಗಂಡ ಮಾತ್ರ ಮಗುವಿಗೆ ಈ ಗೊಬ್ಬರಗಳನ್ನೆಲ್ಲಾ ಕೊಡಬೇಡ, ಅವು ಜಂಕ್ ಫುಡ್‌ಗಳು. ಅವೆಲ್ಲಾ ಮೈದಾ … Read more

ಕನ್ನಡದ ಬರಹಗಳನ್ನು ಹಂಚಿ ಹರಡಿ

ದಿಕ್ಕುಗಳು (ಭಾಗ 5): ಹಟ್ಟಿ ಸಾವಿತ್ರಿ ಪ್ರಭಾಕರಗೌಡ

ಅನುಶ್ರೀಗೆ ಜ್ಯೋತಿಯ ಗೆಳೆತನ, ಜ್ಯೋತಿಯ ಮೂಲಕ ಲಲಿತಳ ಗೆಳೆತನ ಸಿಕ್ಕು ಬದುಕು ಒಂದು ರೀತಿ ನೆಮ್ಮದಿ ಕಾಣತೊಡಗಿತ್ತು. ಆಗಾಗ್ಗೇ ಮೂರು ಜನರು ಕೂಡಿ ಮಾತು ಹರಟೆ ಹೊಡೆಯುತ್ತಿದ್ದರು. ಜ್ಯೋತಿಗೆ ಅಜ್ಜಿ ಇದ್ದಾಳೆ. ಅನುಶ್ರೀಗೆ ತಂದೆ ಇದ್ದಾನೆ. ಲಲಿತಳಿಗೆ ಇದ್ದಾರೆ ಎಂದರೆ ಉಂಟು ಇಲ್ಲ ಅಂದರೆ ಯಾರೂ ಇಲ್ಲ. ಕದಂಪುರದ ಕರುಣೆಯ ಮನೆಯೊಂದರಲ್ಲಿ ಬೆಳೆದು, ತನ್ನ ಹದಿನಾರನೆ ವಯಸ್ಸಿನಲ್ಲೇ ಆಶ್ರಯ ಹುಡುಕಿಕೊಂಡು ಬೆಂಗಳೂರಿಗೆ ಬಂದು ನಿಂತವಳು. ಕೈತುಂಬ ಸಂಪಾದಿಸುವ ಹೊತ್ತಿಗಷ್ಟೇ ಮಲತಾಯಿಗೆ ಬೇಕಾದ ಮಗಳು. ಕೆಲಸ ಸಿಕ್ಕ ಮೇಲೆ … Read more

ಕನ್ನಡದ ಬರಹಗಳನ್ನು ಹಂಚಿ ಹರಡಿ

ಆರಿದ ದೀಪ: ಎಲ್.ಚಿನ್ನಪ್ಪ, ಬೆಂಗಳೂರು

“ಸ್ಮಿತಾ ಹಸ್ಬೆಂಡ್ ಯಾರು ಎನ್ನುತ್ತ, ಡಾಕ್ಟರ್ ಐಸಿಯು ವಾರ್ಡ್ನಿಂದ ಹೊರಕ್ಕೆ ಬಂರರು. “ನಾನೇ ಡಾಕ್ಟರ್” ಎನ್ನುತ್ತ ಮೋಹನ್, ಸೀನಿಯರ್ ಡಾಕ್ಟರ್ ಸೀತಾರಾಂರವರ ಕಂಚಿನ ಕಂಟದ ಕರೆಗೆ ಅವರ ಹತ್ತಿರಕ್ಕೆ ಹೋದ. ಎದುರಿಗೆ ಬಂದು ನಿಂತ ಮೋಹನ್ನ ಮುಖ ನೋಡಿದ ಡಾಕ್ಟರ್, “ನೋಡಿ ಮಿಸ್ಟರ್ ಮೋಹನ್, ನಾವು ನಮ್ಮ ಶಕ್ತಿಮೀರಿ ಪ್ರಯತ್ನಿಸಿದ್ದೇವೆ, ನಿಮ್ಮ ಪತ್ನಿಗೆ ಕೊಡಬೇಕಾದ ಚಿಕಿತ್ಸೆಯನ್ನೆಲ್ಲಾ ಕೊಟ್ಟಿದ್ದೇವೆ, ಮುಂದಿನದು ದೈವೇಚ್ಚೆ. ನಿಮ್ಮ ಪತ್ನಿ ಈಗ ಆಕ್ಸಿಜನ್ನಿಂದ ಉಸಿರಾಡುತ್ತಿದ್ದಾರೆ. ಆಕೆಯ ನಾಡಿ ಮಿಡಿತ ಕ್ಷಣ ಕ್ಷಣಕ್ಕು ಕ್ಷೀಣಿಸುತ್ತಿದೆ. ಇನ್ನು … Read more

ಕನ್ನಡದ ಬರಹಗಳನ್ನು ಹಂಚಿ ಹರಡಿ

‘ಎದೆ ತುಂಬಿ ಹಾಡಿದ ಕವಿ ಜಿ. ಎಸ್ ಶಿವರುದ್ರಪ್ಪ’: ಡಾ. ಸುಶ್ಮಿತಾ. ವೈ.

ನವೋದಯ ಕವಿ ದಿಗ್ಗಜರುಗಳ ಸಾಲಿನಲ್ಲಿ ‘ಬೆಳಕಿನ ಮನೆಯ ಕವಿ’ ಜಿ.ಎಸ್.ಎಸ್ ಅವರದ್ದೂ ಮಹತ್ವದ ಹೆಸರು. ಇವರು ತಮ್ಮ ಹೈಸ್ಕೂಲಿನ ದಿನಗಳಿಂದಲೇ ಚಿಕ್ಕ ಚಿಕ್ಕ ಕವಿತೆಗಳನ್ನು ಬರೆಯುತಿದ್ದರು. ಆನಂತರದಲ್ಲಿ ಗಳಗನಾಥ, ವೆಂಕಟಾಚಾರ್ಯ, ಕುವೆಂಪು, ಅನಕೃ, ಶಿವರಾಮ ಕಾರಂತರ ಬರಹಗಳು ಸಾಹಿತ್ಯದ ಬಗೆಗೆ ಅವರಲ್ಲಿ ಪ್ರೀತಿ, ಆಸಕ್ತಿಯನ್ನು ಹುಟ್ಟಿಸಲು ಕಾರಣವಾದವು. ಅವರು ಕಾಲೇಜಿನ ದಿನಗಳಲ್ಲಿ ಅನುವಾದಿಸಿದ ‘ಥಾಮಸ್ ಗ್ರೇ’ ಕವಿಯ ಕವಿತೆಗೆ ಅಧ್ಯಾಪಕರಾಗಿದ್ದ ಜಿ.ಪಿ ರಾಜರತ್ನಂ ಅವರಿಂದ ಪ್ರಶಂಸೆಯೂ ದೊರಕಿತ್ತು. ಅದು ಪ್ರಕಟವಾಗಿ ಕಾವ್ಯ ರಚನೆಗೆ ಹೊಸ ಹುಮ್ಮಸ್ಸು ದೊರೆಯಿತು. … Read more

ಕನ್ನಡದ ಬರಹಗಳನ್ನು ಹಂಚಿ ಹರಡಿ

ಮಳೆಯ ಜೋಕಾಲಿಯಲಿ ಜೋಗದಲಿ…..: ಬಿ.ಕೆ.ಮೀನಾಕ್ಷಿ, ಮೈಸೂರು.

ಜೋಗ್ನಲ್ಲಿ ಫಾಗ್ ನೋಡಬೇಕೆಂದು ಆಸೆಯಾಗಿ, ಆ ಆಸೆಯನ್ನು ದಮನಿಸಲಾಗದೆ ಮೈಸೂರಿನಿಂದ ಹೊರಟೇ ಬಿಟ್ಟೆವು. ತಾಳಗುಪ್ಪ ರೈಲು ಹತ್ತಿ ಹೊರಟಿದ್ದು. ರಾತ್ರಿ ಹೊತ್ತು, ಸ್ಲೀಪರ್ ಕೋಚು. ಬೇಜಾರು. ಹೊರಗಡೇದೇನೂ ನೋಡೋದಕ್ಕಾಗಲ್ಲ, ಕಣ್ತುಂಬಿಕೊಳ್ಳೋಕಾಗಲ್ಲ! ಅಲ್ಲಾರೀ ನನಗೇನನಿಸುತ್ತದೆ ಅಂದ್ರೆ ಈ ಜನ, ಕಿಟಕಿಯಿಂದ ಆಚೆ ನೋಡುತ್ತಾ ಕೂರದೆ ಅದು ಹೇಗಾದರೂ ನೆಮ್ಮದಿಯಾಗಿ ನಿದ್ರೆ ಮಾಡುತ್ತಾರೆ ಅಂತ?! ನಿಮಗೂ ಈ ತರ ಯೋಚನೆ ಬರುತ್ತದೆ ತಾನೇ? ಹ್ಞಾಂ! ಸರಿಯಾಗಿ ಯೋಚಿಸಿದ್ದೀರಿ. ಸುತ್ತ ಇರೋರೆಲ್ಲ ಗೊರಕೆ ಆಸಾಮಿಗಳೇ. ನಾನಿನ್ನೇನು ಮಾಡಲಿ? ನಾನೂ ಹಾಗೇ ಮುದುಡಿಕೊಂಡೆ … Read more

ಕನ್ನಡದ ಬರಹಗಳನ್ನು ಹಂಚಿ ಹರಡಿ

ನೂಕುನುಗ್ಗಲು – ಕಾಲ್ತುಳಿತ: ಚಂದಕಚರ್ಲ ರಮೇಶ ಬಾಬು

ಜೂನ್ ೩ ತಾರೀಕಿನ ರಾತ್ರಿ ೧೧ ಗಂಟೆ. ಬೆಂಗಳೂರಿನ ಕ್ರಿಕೆಟ್ ತಂಡವೆನಿಸಿದ ರಾಯಲ್ ಛಾಲೆಂಜರ್ಸ್ ಮತ್ತು ದೆಹಲಿಯ ಡಿಲ್ಲಿ ಕ್ಯಾಪಿಟಲ್ಸ್ ನಡುವಿನ ಐಪಿಎಲ್ ಫೈನಲ್ಸ್ ಪಂದ್ಯದ ಆಖರಿ ಕ್ಷಣಗಳು. ಅಹಮದಾಬಾದಿನಲ್ಲಿ ಕೂತ ಸುಮಾರು ೯೧ ಸಾವಿರ ಪ್ರೇಕ್ಷಕರು, ಟಿವಿ ತೆರೆಗಳಿಗ ಅಂಟಿಕೊಂಡು ಕೂತು ಕಾಯುತ್ತಿದ್ದ ಲಕ್ಷಗಟ್ಟಲೆ ವೀಕ್ಷಕರು ಕಾತರದಿಂದ ಪಂದ್ಯವನ್ನು ವೀಕ್ಷಿಸುತ್ತಿದ್ದಾರೆ. ಅಲ್ಲಿಯವರೆಗೆ ಮೂರು ಬಾರಿ ಫೈನಲ್ಸ್ ಗೆ ಬಂದರೂ ಟ್ರೋಫಿ ಗೆಲ್ಲದ ಬೆಂಗಳೂರಿನ ತಂಡ ಕೊನೆಗೂ ಐಪಿಲ್ ಟ್ರೋಫಿಯನ್ನು ಕೈ ವಶಮಾಡಿಕೊಂಡಿತು. ಕೆಲ ಆಟಗಾರರ ಆನಂದ … Read more

ಕನ್ನಡದ ಬರಹಗಳನ್ನು ಹಂಚಿ ಹರಡಿ