ಜಾತ್ರಿ ಜೊತಿಗಿನ ನೆನಪಿನ ಬುತ್ತಿ…: ನಾರಾಯಣ ಬಾಬಾನಗರ

ಜಾತ್ರೆ ಅಂದರ..ನಿಮಗೆ ಏನ ನೆನಪಾಗತೈತಿ?ಹಿಂಗ ನಿಮಗ ಯಾರರ ಕೇಳಿದರ..ಮಿಠಾಯಿ ಮಾರುವ ಅಂಗಡಿ,ಫುಗ್ಗಾ ಮಾರುವವನು ಬಲೂನಿಗೆ ಗಾಳಿ ತುಂಬುವ ಮುಖ,ಆಟಿಕಿ ಸಾಮಾನುಗಳನ್ನು ಹರಡಿಕೊಂಡು ಕುಳಿತ ಅಜ್ಜಿ,ಬಣ್ಣದ ಶರಬತ್ ಮಾರಕೋತ ನಿಂತವನ ಕೂಗು,ಎಣ್ಣಿಯೊಳಗ ಭಜಿ ಕರಕೋತ ಕುಂತವಳು ಒಂದ ಕೈಯಿಂದ ಕಡಾಯಿಯೊಳಗ ಭಜಿ ಕರೀತಿದ್ದರ ಇನ್ನೊಂದ ಕೈಯಿಂದ ಹಂಗ ಹಣೀ ಮ್ಯಾಲಿಂದ ಕೆಳಗ ಇಳೀತಿದ್ದ ಬೆವರನ್ನ ಒರಿಸಿಕೊಂತ ಕುಂತ ಚಿತ್ರಗಳು….ಅಬ್ಬಾ ಜನ ಜಂಗುಳಿ!! ಅಂಥಾದರಾಗ ಅವ್ವನ ಜೊತಿ ಜಾತ್ರಿಗಿ ಬಂದ ಪುಟ್ಟ ಪೋರಿ ತನ್ನ ಅವ್ವಳಿಂದ ತಪ್ಪಿಸಿಕೊಂಡು ರೊಯ್ಯನೆ ಅಳಕೋತ … Read more

ಕನ್ನಡದ ಬರಹಗಳನ್ನು ಹಂಚಿ ಹರಡಿ

ಮೂವರ ಕವಿತೆಗಳು: ವಿಲ್ಸನ್ ಕಟೀಲ್, ವಾಮನ ಕುಲಕರ್ಣಿ, ಅಕ್ಷಯ ಕಾಂತಬೈಲು

ಅಸ್ಪೃಶ್ಯರು ಎಲೆಗಳುದುರಿದ ಒಣ ಕೊಂಬೆಗೆ ಜೋಡಿ ಬಾವಲಿ ಜೋತು ಬಿದ್ದಂತೆ ಎದ್ದು ಕಾಣುವ ನಿನ್ನ ಪಕ್ಕೆಲುಬುಗಳಿಗೆ ಬತ್ತಿ ಹೋದ ಸ್ಥನಗಳು ನನ್ನ ಬೆರಳುಗಳೂ ಅಂತೆಯೇ ಎಲುಬಿನ ಚೂರುಗಳಿಗೆ ತೊಗಲುಡಿಸಿದಂತೆ  ಮಾಂಸಲವೇನಲ್ಲ ನಮ್ಮಿಬ್ಬರ ಮಿಲನ ರಮ್ಯವಲ್ಲ; ನವ್ಯ ಮಾಂಸಖಂಡಗಳ ಪ್ರಣಯದಾಟವಲ್ಲ ಅದು, ಮೂಳೆ-ತೊಗಲಿನ ಸಂಘರ್ಷ! *** ವಿದ್ಯುತ್ತಂತಿ ಸ್ಪರ್ಶಿಸಿ ಸತ್ತ  ಬಾವಲಿಯ ರೆಕ್ಕೆಯನ್ನು ತೆಂಗಿನ ಚಿಪ್ಪಿಗೆ ಬಿಗಿದು ಕಟ್ಟಿ ರಚಿಸಿದ ಪುಟ್ಟ ಡೋಲು ಬಾರಿಸುತ್ತಿದ್ದಾನೆ ನನ್ನ ಮುದ್ದು ಮಗ ಸವೆದ ಪಕ್ಕೆಲುಬುಗಳಂತಿರುವ ಚೋಟುದ್ದ ಬೆತ್ತಗಳಿಂದ ಬಾವಲಿಯ ರೆಕ್ಕೆಗೆ ಬಡಿಯುವಾಗ … Read more

ಕನ್ನಡದ ಬರಹಗಳನ್ನು ಹಂಚಿ ಹರಡಿ

ದೀಪಾವಳಿ – ೨೦೧೪ ವಿ(ಶೇ)ಷ: ಅಖಿಲೇಶ್ ಚಿಪ್ಪಳಿ

ದೀಪಾವಳಿಗೆ ಇನ್ನೆರೆಡು ದಿನವಿರಬೇಕಾದರೆ, ರಾತ್ರಿ ಜ್ವರ ಜೊತೆಗೆ ವಿಪರೀತ ನಡುಕ. ಬೆಳಗ್ಗೆ ವೈದ್ಯರಿಗೆ ತೋರಿಸಿದಾಗ ವೈರಾಣು ಸೋಂಕಿನಿಂದ ಜ್ವರ ಬಂದಿದೆ ಎಂದು ಪ್ಯಾರಾಸಿಟಮಲ್ ಮಾತ್ರೆ ಕೊಟ್ಟರು. ಮತ್ತೆ ರಾತ್ರಿ ಜ್ವರ ವಿಪರೀತ ನಡುಕ. ಬೆಳಗ್ಗೆ ಎದ್ದು ಮೂತ್ರಕ್ಕೆಂದು ನಿಂತರೆ ಅಸಾಧ್ಯ ಉರಿ. ಮೂತ್ರದ ಬಣ್ಣ ತಿಳಿಗೆಂಪು. ವಿಪರೀತ ಸುಸ್ತು. ಡ್ಯೂಟಿಗೆ ಹೋಗಲೇಬೇಕಾದ ಅನಿವಾರ್ಯತೆಯಿತ್ತು. ಬಹುಶ: ನೀರು ಕಡಿಮೆಯಾಗಿ ಹೀಗಾಗಿದೆ ಎಂದುಕೊಂಡು ಕೊತ್ತಂಬರಿ ಹಾಕಿ ಕುದಿಸಿದ ೨ ಲೀಟರ್ ನೀರು ಕುಡಿದಿದ್ದಾಯಿತು. ಮತ್ತೆ ವೈದ್ಯರಿಗೆ ಹೇಳಿದಾಗ ಮೂತ್ರಪರೀಕ್ಷೆ ಮಾಡುವ … Read more

ಕನ್ನಡದ ಬರಹಗಳನ್ನು ಹಂಚಿ ಹರಡಿ

ಮಣ್ಣಾದ ಶೂ ಮತ್ತು ಮೋಡಗಳ ಊಟಿ: ಪ್ರಶಸ್ತಿ ಅಂಕಣ

ಇದೇನಪ್ಪಾ ವಿಚಿತ್ರ ಶೀರ್ಷಿಕೆ ,ಶೂ ಮಣ್ಣಾಗೋಕೂ ಮತ್ತು ಊಟಿ ಮೋಡಕ್ಕೂ ಎಲ್ಲಿಂದೆಲ್ಲಿಯ ಸಂಬಂಧ ಅಂದ್ಕೊಂಡ್ರಾ ? ಊಟಿ ಅಂದ್ರೆ ಮಧುಚಂದ್ರದ ಜಾಗ. ಅದ್ರ ಬಗ್ಗೆ ಮದ್ವೆಯಾಗದ ಈ ಹುಡ್ಗ ಏನು ಬರಿಬೋದು ಅಂದ್ಕೊಂಡ್ರಾ ? ಹಿ.ಹಿ. ನಾ ಆ ವಿಷ್ಯದ ಬಗ್ಗೆ ಹೇಳ್ತಿರೋದಲ್ಲ.ಶೂ ಬೆಂಗ್ಳೂರಲ್ಲಿದ್ರೂ ಮಣ್ಣಾಗತ್ತೆ. ಅದಕ್ಕೆ ಊಟಿ ಮೋಡ ಸುರ್ಸೋ ಮಳೇನೇ ಆಗ್ಬೇಕಾ ಅಂದ್ರಾ ? ವಿಷ್ಯ ಅದೂ ಅಲ್ಲ. ಹೇಳೋಕೆ ಹೊರಟೊರೋದು ಎಲ್ಲಾ ಸಾಮಾನ್ಯವಾಗಿ ನೋಡೋ ದೊಡ್ಡಬೆಟ್ಟ, ಗುಲಾಬಿ ತೋಟ, ಊಟಿ ಕೆರೆಗಳನ್ನೊಳಗೊಂಡ ಊಟಿಯ … Read more

ಕನ್ನಡದ ಬರಹಗಳನ್ನು ಹಂಚಿ ಹರಡಿ

ಮತ್ತೆ ರಂಗದಲ್ಲಿ ಅಬ್ಬರಿಸಿದ ’ವೀರ ಸಿಂಧೂರ ಲಕ್ಷ್ಮಣ’: ಹಿಪ್ಪರಗಿ ಸಿದ್ಧರಾಮ್,

ಗಾಂಧಿಯವರ ಅಸಹಕಾರ ಚಳುವಳಿಯ ಕರೆಗೆ ಓಗೊಟ್ಟ ಫಲವಾಗಿ ಹಲವರು ಸ್ಥಳೀಯ ಮಟ್ಟದಲ್ಲಿ ಕರನಿರಾಕರಣೆ, ಸರಕಾರಿ ಖಜಾನೆಗಳ ಲೂಟಿ, ಶ್ರೀಮಂತರ ಸ್ವತ್ತನ್ನು ದೋಚಿಕೊಂಡು ಬಡವರಿಗೆ ಹಂಚುವುದು ಮುಂತಾದವುಗಳನ್ನು ಮಾಡುತ್ತಾ ಆಗಿನ ಸರಕಾರಗಳಿಗೆ ಸವಾಲಾಗಿರುವ ಸಂಗತಿ ಇತಿಹಾಸದಲ್ಲಿ ದಾಖಲಾಗಿದೆ. ದೇಶದ ಸ್ವಾತಂತ್ರ್ಯ ಸಮರದ ಇತಿಹಾಸವನ್ನು ಅವಲೋಕಿಸಿದಾಗ, ಜನನಾಯಕರ ಜನಾಂದೋಲನಗಳು, ಕಾನೂನುಬದ್ಧ ಚಳುವಳಿಗಳು ಒಂದೆಡೆಯಾದರೆ ಜಾಗೃತ ಯುವಮನಸ್ಸುಗಳು, ಆದಿವಾಸಿಗಳ ರಕ್ತಸಿಕ್ತ ಹೋರಾಟದಲ್ಲಿ ಸ್ವ್ವಾತಂತ್ರ ಸಮರದ ಗಂಗೆಯ ಪ್ರವಾಹಕ್ಕೆ ಸಾವಿರ ತೊರೆಗಳು ಸೇರಿಕೊಂಡು ಬಿಸಿನೆತ್ತಿರಿನ ತರ್ಪಣದಿಂದ ತಾಯ್ನೆಲದ ಮುಕ್ತಿಗಾಗಿ ಅನ್ಯಾಯದ ವಿರುದ್ಧ ಸಿಡಿದೆದ್ದು … Read more

ಕನ್ನಡದ ಬರಹಗಳನ್ನು ಹಂಚಿ ಹರಡಿ

ಸಾಮಾನ್ಯ ಜ್ಞಾನ (ವಾರ 51): ಮಹಾಂತೇಶ್ ಯರಗಟ್ಟಿ

ಪ್ರಶ್ನೆಗಳು: ೧.    ಹೋಮಿಯೋಪತಿ ವೈದ್ಯ ಪದ್ಧತಿಯ ಜನಕ ಯಾರು? ೨.    ಅಲ್ಯೂಮಿನಿಯಂ ಲೋಹದ ಅದಿರು ಯಾವುದು? ೩.    ರಾಷ್ಟ್ರೀಯ ಲಾಂಛನವನ್ನು ಭಾರತ ಸರ್ಕಾರವು ಅಳವಡಿಸಿಕೊಂಡ ವರ್ಷ ಯಾವುದು? ೪.    ರಘುಪತಿ ಇದು ಯಾರ ಅಂಕಿತನಾಮವಾಗಿದೆ? ೫.    ಮೇಣದ ಬತ್ತಿಯನ್ನು ತಯಾರಿಸಲು ಬಳಸುವ ಮೇಣ ಯಾವುದು? ೬.    ಮೈಸೂರು – ಕರ್ನಾಟಕ ಎಂದು ನಾಮಕರಣಗೊಂಡ ವರ್ಷ ಯಾವುದು? ೭.    ಜೀವಿಗಳ ಮೂಲಘಟಕವನ್ನು ಜೀವಕೋಶ ಎಂದು ಹೆಸರಿಸಿದ ವಿಜ್ಞಾನಿ ಯಾರು? ೮.    ಅಸ್ಸಾಮಿ ಲೇಖಕ ಬಿ.ಕೆ.ಭಟ್ಟಾಚಾರ್ಯರವರ ಯಾವ ಕೃತಿಗೆ ಜ್ಞಾನಪೀಠ … Read more

ಕನ್ನಡದ ಬರಹಗಳನ್ನು ಹಂಚಿ ಹರಡಿ

ಅಂಗೈ ರೇಖೆಗಳಲ್ಲಿ ನದಿಗಳನ್ನು ಹರಿಸುವ ಕಾವ್ಯ ಕಡಮೆ: ನಾಗರಾಜ್ ಹರಪನಹಳ್ಳಿ

ಯುವ ಪ್ರತಿಭೆ  ಕಾವ್ಯ ಕಡಮೆಗೆ ೨೦೧೪ನೇ ಸಾಲಿನ ಕೇಂದ್ರ  ಸಾಹಿತ್ಯ ಅಕಾಡೆಮಿ ಯುವಪುರಸ್ಕಾರ ದೊರೆತಿದೆ. ೫೦ ಸಾವಿರ ರೂ. ಬಹುಮಾನ ರೂಪದಲ್ಲಿ ಸಹ ಸಿಗಲಿದೆ. ಈ ಪುರಸ್ಕಾರಕ್ಕೆ ಕಾರಣವಾದುದು ಆಕೆಯ  ‘ಧ್ಯಾನಕೆ ತಾರೀಖಿನ ಹಂಗಿಲ್ಲ’ ಎಂಬ ಮೊದಲ ಕವಿತಾ ಸಂಕಲನ. ಕುತೂಹಲದಿಂದಲೇ ಆ ಕವಿತಾ ಸಂಕಲನವನ್ನು ಕೈಗೆತ್ತಿಕೊಂಡು ಓದಿದರೆ ಅಲ್ಲಿನ ಭಾವಲೋಕ ಮತ್ತು ಮನಸ್ಸೊಂದು ತನ್ನ ಸುತ್ತಲ ಜಗತ್ತಿಗೆ ತೆರೆದುಕೊಳ್ಳುವ ಬಗೆ ಒಡೆದು ಕಾಣಿಸುತ್ತದೆ. ಕವಿತೆಗಳನ್ನು ಕಟ್ಟುವ ಬಗೆಯಲ್ಲೂ ತಾಜಾತನ ಮತ್ತು ಪ್ರತಿಮೆಗಳನ್ನು ಕಟ್ಟುವ ಬಗೆ ಸೊಗಸಾಗಿದೆ. … Read more

ಕನ್ನಡದ ಬರಹಗಳನ್ನು ಹಂಚಿ ಹರಡಿ

ಕಾಣೆಯಾದ ಕೈನಿ: ವಾಸುಕಿ ರಾಘವನ್

ಮಂತ್ರಿ ಮಾಲ್ ಇಂದ ಹೊರಗೆ ಬಂದಾಗ ರಾತ್ರಿ ಎಂಟೂ ಇಪ್ಪತ್ತು ಆಗಿತ್ತು. ಹಿಂದಿನ ದಿನ ಆಲ್ಟರೇಶನ್ನಿಗೆ ಕೊಟ್ಟಿದ್ದ ಪ್ಯಾಂಟ್ ಇಸ್ಕೊಂಡು ಬರೋಕೆ ಕೇವಲ ಹದಿಮೂರು ನಿಮಿಷ ತೆಗೆದುಕೊಂಡಿತ್ತು. ಕೈಯಲ್ಲಿದ್ದ ಹೆಲ್ಮೆಟ್ಟನ್ನು ಗುರಾಣಿಯಂತೆ ಬಳಸಿ, ಸಂಪಿಗೆ ರೋಡಿನ ನಾನ್ ಸ್ಟಾಪ್ ವಾಹನಗಳೆಂಬ ಚಕ್ರವ್ಯೂಹವನ್ನು ಭೇದಿಸಿಕೊಂಡು ಗೋಕುಲ್ ಹೋಟೆಲ್ ಮುಂದೆ ಬಂದೆ. ಹಿತವಾದ ಬೆಂಗಳೂರಿನ ತಂಗಾಳಿ ಮುಖಕ್ಕೆ ಬಡಿದು ಆ ದಿನದ ಸುಸ್ತೆಲ್ಲಾ ಒಂದು ಕ್ಷಣ ಮಾಯವಾದಂತೆ ಅನಿಸಿತು. ನಾನು ಗಾಡಿ ನಿಲ್ಲಿಸಿದ್ದ ಜಾಗಕ್ಕೆ ಬಂದು ನಿಂತಾಗ ಅಲ್ಲಿನ ದೃಶ್ಯ … Read more

ಕನ್ನಡದ ಬರಹಗಳನ್ನು ಹಂಚಿ ಹರಡಿ

ಫಾರ್ ಎವ್ರಿಥಿ೦ಗ್ ಎಲ್ಸ್: ಆದರ್ಶ ಸದಾನ೦ದ ಅರ್ಕಸಾಲಿ

"ಪಕ್ಷಿವೀಕ್ಷಣೆ ಭಾಗ 3"  ಇಲ್ಲಿಯವರೆಗೆ ಬಣ್ಣ ಬಣ್ಣದ ಪಕ್ಷಿಗಳ ಅ೦ದ-ಚೆ೦ದ, ಮತ್ತು ಅವುಗಳ ದೇಹ-ಕೊಕ್ಕು-ರೆಕ್ಕೆ-ಕಾಲುಗಳ ರಚನೆ ಅಭ್ಯಸಿಸಲು 'DSLR ಕ್ಯಾಮೆರ' ಮತ್ತು 'ZOOM ಲೆನ್ಸ್' ಜೊತೆಗೆ ಪಕ್ಷಿಗಳ ವಿವರ ಹೊ೦ದಿರುವ 'ಮಾಹಿತಿ ಪುಸ್ತಕ' ಇವೆಲ್ಲ ಅತ್ಯಾವಶ್ಯಕವಾಗಿ ಬೇಕಾದ ಸಾಧನಗಳು. ಅದಲ್ಲದೆ ಪಕ್ಷಿಗಳನ್ನು ವೀಕ್ಷಿಸಲು 'ಆಸಕ್ತಿ' ಮತ್ತು 'ತಾಳ್ಮೆ' ಅನ್ನುವ ವಿರಳವಾದ ಗುಣಗಳು ನೋಡುಗನಲ್ಲಿ ಇರಬೇಕು. ಇವೆಲ್ಲಾ ಇದ್ದರೂ ಕೆಲವೊಮ್ಮೆ ಅದೃಷ್ಟವೂ ಜೊತೆಗಿರಬೇಕು, ಯಾಕೆ೦ದರೆ ಒ೦ದೊ೦ದು ಸಾರಿ, ನೀವೂ ಎಲ್ಲಾ ರೀತಿಯಿ೦ದಲೂ ತಯಾರಾಗಿ, ಪಕ್ಷಿವೀಕ್ಷಣೆಗೆ ಹುರುಪಾಗಿ ಹೋದರೂ ನಿಮಗೆ … Read more

ಕನ್ನಡದ ಬರಹಗಳನ್ನು ಹಂಚಿ ಹರಡಿ

ಅಲ್ಲಿರಲಾಗಲಿ​ಲ್ಲ ಇನ್ನೆಲ್ಲಿಗೂ ಹೋಗಲಿಲ್ಲ: ಅಮರ್ ದೀಪ್ ಪಿ.ಎಸ್.

ಹದಿನೈದಿಪ್ಪತ್ತು  ದಿನದ ಹಿಂದೆ ನನ್ನ ಸ್ನೇಹಿತರೊಬ್ಬರೊಂದಿಗೆ ಬಹಳ ದಿನದ ನಂತರ ಕಲೆತು ಹರಟುತ್ತಿದ್ದೆ.   ಅವನು  ತಾನು  ಕಂಡಂಥ ಕೆಲವರ ಅವಸರದ ನಡುವಳಿಕೆ ಬಗ್ಗೆ ಹೇಳುತ್ತಿದ್ದ;   "ಕೆಲವರನ್ನು ನಾವು ನೋಡಬಹುದು.  ಹುಳ ಹರಿದಾಡಿದಂತೆ ತಿರುಗುತ್ತಿರುತ್ತಾರೆ.  ಯಾವುದೇ ಸಭೆ,  ಸಮಾರಂಭ, ಕಾರ್ಯಕ್ರಮ,  ಉಪನ್ಯಾಸ ತಪ್ಪಿಸಿಕೊಳ್ಳುವುದಿಲ್ಲ.  ಆಯಾಯಾ ಕಾರ್ಯಕ್ರಮಗಳಲ್ಲಿ ತಮ್ಮ ಇರುವಿಕೆಯ ಛಾಪನ್ನು ಬಿಟ್ಟು ಬಂದಿರುತ್ತಾರೆ.  ಆ ಸಮಾರಂಭ ಪೂರ್ಣವಾಗುವವರೆಗೂ ಅಲ್ಲಿರುವುದಿಲ್ಲ. ತಮ್ಮ  ಹಾಜರಿ ಹಾಕಿ ಅವಕಾಶವಿದ್ದರೆ, ನಾಲ್ಕು ಮಾತಾಡಿ, ನೆರೆದಿದ್ದವರೊಂದಿಗೆ  ಆತ್ಮೀಯತೆಯಿಂದ  ಬೆರೆತು ಮತ್ತೊಂದು ಕಾರ್ಯಕ್ರಮದ, ಸಮಾರಂಭದ … Read more

ಕನ್ನಡದ ಬರಹಗಳನ್ನು ಹಂಚಿ ಹರಡಿ

ಏಟುತಿಂದ ಕೈಗಳಿಗೆ ಬಹುಮಾನ ಇಟ್ಟ ಕೈಗಳು: ತಿರುಪತಿ ಭಂಗಿ

        ಅಮ್ಮನಿಗೆ ಗೊತ್ತಾದ್ರೆ ಸತ್ತೆ ಹೋಗುತ್ತಾಳೆ ಅಂತ ಅಂಜಿ  ಹನುಮ ತಾನು ಸ್ಕೂಲಲ್ಲಿ ಗಣಿತ ಪೇಲಾದ ವಿಷಯವನ್ನು ಗೌಪ್ಯವಾಗಿಯೇ  ಕಾಯ್ದುಕೊಂಡಿದ್ದ. ಅಂದಿನಿಂದ ಯಾಕೋ ಅವನು ಸರಿಯಾಗಿ ಊಟಮಾಡುತಿರಲಿಲ್ಲ, ಕುಂತಲ್ಲಿ ಕೂಡುತಿರಲಿಲ್ಲ, ಪುಸ್ತಕದ ಸಹವಾಸವೇ ಸಾಕೆನಿಸದಂತಾಗಿ ಹನಿಗೆ ಕೈಹಚ್ಚಿಕೊಂಡು ಚಿಂತೆಯ ಮಡಿಲಿಗೆ ಜಾರಿದ್ದ. ಸುಳ್ಳು ಹೇಳಬಾರದೆಂದು  ಶಾಲೆಯಲ್ಲಿ ಕನ್ನಡಾ ಶಿಕ್ಷಕರು ಸಾವಿರ ಸಲ ಶಂಕಾ ಊದಿದ್ದು ಅರಿವಾಗಿ, ದೇವರಂತಾ ಅಮ್ಮನಿಗೆ ಸುಳ್ಳು ಹೇಳಿದಿನಲ್ಲ ಅಂತ ಮನಸಿಗೇಕೋ ನಾಚಿಕೆ ಅನಿಸಿತು.  ವಾರ್ಷಿಕ ಪರೀಕ್ಷೆಯಲ್ಲಿ ಕಂಡಿತಾ ಪಾಸಾಗೊದಿಲ್ಲ … Read more

ಕನ್ನಡದ ಬರಹಗಳನ್ನು ಹಂಚಿ ಹರಡಿ

ಒಂದು ಮುತ್ತಿನ ಕತೆ: ಪ್ರಶಸ್ತಿ

ನಿಮ್ಗೆಲ್ಲಾ ದೀಪಾವಳಿ ಶುಭಾಶಯಗಳು ಅಜ್ಜಿ. ಆರೋಗ್ಯ ಚೆನ್ನಾಗಿ ನೊಡ್ಕೋಳಿ. ಹೋಗ್ಬರ್ತೀವಿ. ಹೂಂ ಕಣಪ್ಪ. ಥ್ಯಾಂಕ್ಸು.ನಿಮ್ಗೂ ಶುಭಾಶಯಗಳು. ಸರಿ ಅಜ್ಜಿ ಬರ್ತೀವಿ. ನಮಸ್ಕಾರ ಮಾಡ್ತೀವಿ ತಡೀರಿ ಅಂತ ಕಾಲು ಮುಟ್ಟಿ ನಮಸ್ಕಾರ ಮಾಡಿದ್ರೆ ನೂರ್ಕಾಲ ಚೆನ್ನಾಗಿ ಬಾಳಿ ಅಂದ್ರು ಎಂಭತ್ನಾಲ್ಕರ ಹೊಸ್ತಿಲಲ್ಲಿದ್ದ ಅಜ್ಜಿ. ತಡಿ ಮೊಮ್ಮಗನೆ ಅಂತ ಸುಗುಣಜ್ಜಿ  ಹತ್ತಿರ ಬಂದಾಗ ಏನು ಹೇಳ್ಬೋದಪ್ಪಾ ಅನ್ನೋ ಕುತೂಹಲ ನನಗೆ. ಬಾಚಿ ತಪ್ಪಿದ ಅಜ್ಜಿ ಕೆನ್ನೆಗೊಂದು ಸಿಹಿಮುತ್ತಿನ ಮುದ್ರೆಯೊತ್ತಿಬಿಡೋದೇ ? ! ಅಲ್ಲಿದ್ದಿದ್ದು ಅವ್ರಿಬ್ರೇ ಅಲ್ಲ.  ಸಲೋನಿ ಅಜ್ಜಿ. ಆನೇಕಲ್ಲಿನಜ್ಜಿ, … Read more

ಕನ್ನಡದ ಬರಹಗಳನ್ನು ಹಂಚಿ ಹರಡಿ

ಮೂರು ಕವಿತೆಗಳು: ಶಿವರಾಂ ಎಚ್. ಆಶಾ ದೀಪ, ಅಕ್ಷತಾ ಕೃಷ್ಣಮೂರ್ತಿ

ನೀనిಲ್ಲದ ದಿನಗಳಲಿ ಮೌನವಾಗಿವೆ ಭಾವಗಳು ಮ್ಲಾನವಾಗಿವೆ ಕನಸಿನ ಬಣ್ಣಗಳು ಹೃದಯದ  ಸರಸಿಯಲ್ಲೇ ಅರಳಿದ ತಾವರೆಯ ಹೂಗಳು. ನೀನಿಲ್ಲದ ದಿನಗಳಲಿ ಇರುಳು ತಪ್ತವಾಗಿದೆ; ಪ್ರೀತಿಯ ಇನಿದನಿಗಳು ಸೊಂಪಾಗಿ ಹನಿಯಾಗಿ ತೊಟ್ಟಿಕ್ಕಲಾಗದೇ ಬತ್ತಿಹೋಗಿವೆ ಪಿಸು ಮಾತಿನ ಕುಸುಮಗಳು. ಹ್ಞಾಂ! ಹಾಗೂ ಪಿಸುಗುಟ್ಟಿ ನುಡಿಯಲಾಗದೆ ಹ್ಞುಂ, ಹೀಗೂ ಬಿಗುವಿಟ್ಟು ಸವಿ ಹೀರಲಾಗದೆ ಒಣಗಿವೆ ಚೆಂದುಟಿಗಳು; ಹೊರಗಿನ ನೋವಿನಲ್ಲೂ ಸುಖಿಸಿ ಇಹ ಮರೆಯಲೆಳೆಸುವ ಒಳಗಿನ ಅಂಗಗಳು  ತಟ್ಟನೆ ಕಾವೇರಿದರೂ ತಂಪಾಗದಿವೆ. ಗೆಳೆಯಾ, ಅಂದಿಗೆ ಬೆದೆ ಬಂದ ಸೊಕ್ಕಿನಲಿ ಹೆಡೆಯಾಡಿಸುತ್ತ ತಪ್ತವಾಗಿ ಹೋದ ಕಾಮನೆಗಳೆಲ್ಲ … Read more

ಕನ್ನಡದ ಬರಹಗಳನ್ನು ಹಂಚಿ ಹರಡಿ

ಕಾಡ ಹಕ್ಕಿ: ಅಖಿಲೇಶ್ ಚಿಪ್ಪಳಿ

ಒಂದಾನೊಂದು ಕಾಲದಲ್ಲಿ ದೊಡ್ಡ ಪಟ್ಟಣದಲ್ಲಿ ಒಬ್ಬ ಶ್ರೀಮಂತ ವ್ಯಾಪಾರಿಯಿದ್ದ. ಒಂದು ದಿನ ವ್ಯಾಪಾರ ನಿಮಿತ್ತ ಬೇರೆ ಊರಿಗೆ ಹೋಗಲು ಕಾಡಿನ ಮಾರ್ಗವಾಗಿ ಹೊರಟ. ಅಲ್ಲೊಂದು ದಟ್ಟ ಕಾಡು, ಹಕ್ಕಿಗಳ ಕಲರವ, ಮಂಗಗಳ ಕೂಗು, ಜಿಂಕೆಗಳ ನೆಗೆದಾಟ, ನವಿಲಿನ ಕೇಕೆ ಹೀಗೆ ಆ ಕಾಡೊಂದು ಸ್ವರ್ಗಸದೃಶವಾಗಿತ್ತು. ಕಾಡಿನ ಸೌಂದರ್ಯ ಆ ವ್ಯಾಪಾರಿಯನ್ನು ದಂಗುಗೊಳಿಸಿತ್ತು. ಆಗ ವ್ಯಾಪಾರಿಯ ಕಣ್ಣಿಗೊಂದು ಸುಂದರವಾದ ಪಕ್ಷಿ ಕಣ್ಣಿಗೆ ಬಿತ್ತು. ನಾನಾ ತರಹದ ಗಾಢ ಬಣ್ಣಗಳಿಂದ ಕೂಡಿದ ಹಕ್ಕಿಯನ್ನು ನೋಡಿದ ವ್ಯಾಪಾರಿ ಹಕ್ಕಿ ಎಲ್ಲೆಲ್ಲಿ ಹಾರುತ್ತಾ … Read more

ಕನ್ನಡದ ಬರಹಗಳನ್ನು ಹಂಚಿ ಹರಡಿ

ಈ ಬಂಧಗಳು..ಸಂಬಂಧಗಳು..: ಪದ್ಮಾ ಭಟ್, ಇಡಗುಂದಿ.

                  ನೀನಿಲ್ಲದೆಯೇ ನಾ ಹೇಗಿರಲಿ.. ನಿನ್ನೊಂದಿಗೇ ಎಂದಿಗೂ ಇರಬೇಕು ಅಂಥ ಅನಿಸುತ್ತೆ ಕಣೇ.. ನೀನಿಲ್ಲದ ಕ್ಷಣವನ್ನು ಊಹಿಸಿಕೊಳ್ಳಲೂ ಆಗುವುದಿಲ್ಲ.. ನಿನ್ನಂತಹ ಗೆಳತಿ ಈ ಜನ್ಮದಲ್ಲಿ ಮತ್ತೆ ಸಿಗಲಾರದೇನೋ ಎಂದು ಗೆಳತಿಯೊಬ್ಬಳು ಬೀಳ್ಕೊಡುವಾಗ ಹೇಳಿದ ನೆನಪು. ಆ ಸಮಯಕ್ಕೆ ಆ ದಿನ ಹಾಗೆ ಅನ್ನಿಸಿದ್ದೂ ಸುಳ್ಳಲ್ಲ.. ಒಂದಷ್ಟು ದಿವಸಗಳ ಕಾಲ, ಆತ್ಮೀಯತೆಯಿಚಿದ ಇದ್ದವರಿಗೆ ವಿದಾಯ ಹೇಳುವಾಗ ನೀನಿಲ್ಲದೇ ನಾನಿರಲು ಸಾಧ್ಯವೇ ಇಲ್ಲವೇನೋ ಎಂಬಷ್ಟು ಬೆಸೆದುಕೊಂಡಿರುತ್ತೇವೆ..ಆದರೆ ಈ ಕಾಲ ಅನ್ನೋದು … Read more

ಕನ್ನಡದ ಬರಹಗಳನ್ನು ಹಂಚಿ ಹರಡಿ

ಆಸ್ಪತ್ರೆಯಲ್ಲಿ ಕಂಡ ದೃಶ್ಯಗಳು: ಶರತ್ ಹೆಚ್.ಕೆ.

ಆಸ್ಪತ್ರೆಯಲ್ಲಿ ಕಂಡ ದೃಶ್ಯಗಳು ಆಸ್ಪತ್ರೆ ಎಂಬ ಜಗದೊಳಗಿನ ಮರಿಜಗತ್ತಿಗೆ ಇರುವ ಮುಖಗಳು ಹತ್ತು ಹಲವು. ನೋವು-ನಲಿವು, ಮಾನವೀಯ-ಅಮಾನವೀಯ ಬಣ್ಣಗಳು ಅಲ್ಲಿನ ಗೋಡೆಯ ತುಂಬ ಆವರಿಸಿಕೊಂಡಿವೆ. ಆಸ್ಪತ್ರೆಯ ಅಂಗಳದಲ್ಲಿ ನನ್ನ ಕಣ್ಣು ಚಿತ್ರಿಸಿಕೊಂಡ ಕೆಲ ಕಪ್ಪು ಬಿಳುಪಿನ ದೃಶ್ಯಗಳು ಇಲ್ಲಿವೆ. ದೃಶ್ಯ ೧: ಜಗತ್ತಿಗೆ ಹೊಸ ಜೀವವೊಂದರ ಆಗಮನವಾಗಿದೆ. ಅದ ಕಂಡು ಅಲ್ಲಿರುವವರ ಮನದಿಂದ ಹರ್ಷದ ಹೊನಲು ಹೊಮ್ಮುತ್ತಿದೆ. ಅಲ್ಲೇ ಸನಿಹದಲ್ಲಿ ಹಿಂದೆಂದೋ ಜಗತ್ತಿಗೆ ಬಂದು, ಹಲವರ ಮನದಲ್ಲಿ ಸಂಭ್ರಮದ ತೇರು ಎಳೆದಿದ್ದ ಜೀವ ಜಗದ ವ್ಯವಹಾರ ಮುಗಿಸಿ, … Read more

ಕನ್ನಡದ ಬರಹಗಳನ್ನು ಹಂಚಿ ಹರಡಿ

“ಜೀವನದಲ್ಲಿ ಗುರಿ ಇರಲಿ”: ಹೊರಾ.ಪರಮೇಶ್ ಹೊಡೇನೂರು

ಅಂದು ತರಗತಿಯಲ್ಲಿ ಜೀವನ ಮೌಲ್ಯಗಳ ಬಗ್ಗೆ ಮಕ್ಕಳಿಗೆ ಹೇಳುವಾಗ, ಮುಂದೆ ಯಾರ್ಯಾರು ಏನಾಗಲು ಬಯಸುತ್ತೀರಿ? ಎಂದು ಕೇಳಿದೆ.ಕೆಲವರು ಮಾಮೂಲಿಯಂತೆ ಡಾಕ್ಟರ್, ಇಂಜಿನಿಯರ್, ಪೊಲೀಸ್, ಲಾಯರ್, ಕವಿ, ಬರಹಗಾರ, ಮುಖ್ಯಮಂತ್ರಿ, ಶಿಕ್ಷಕ…ಹೀಗೆ ಅನೇಕ ಆಯ್ಕೆಗಳನ್ನು ತಮ್ಮ ಅಭಿಲಾಷೆಯಂತೆ ಹೇಳಿಕೊಂಡರು. ಶಹಬ್ಬಾಸ್ ಗಿರಿ ಕೊಟ್ಟು, ಅವೆಲ್ಲವನ್ನು ಆಗಬೇಕಾದರೆ ಏನು ಪೂರ್ವ ತಯಾರಿ ಮಾಡಿಕೊಳ್ಳಬೇಕೆಂಬುದು ನಿಮಗೇ ಗೊತ್ತೇ ಎಂಬ ನನ್ನ ಮರು ಪ್ರಶ್ನೆಗೆ ಅವರು ತಲೆಯಾಡಿಸಿದರು. ಅವರಿಗ ವಿಷಯ ಮನದಟ್ಟು ಮಾಡಿಕೊಡಲು ಈ ಉದಾಹರಣೆ ಹೇಳಿದೆ. ಪತ್ರಿಕೆಗಳಲ್ಲಿ ನನ್ನ ಕತೆ, ಚುಟುಕ, … Read more

ಕನ್ನಡದ ಬರಹಗಳನ್ನು ಹಂಚಿ ಹರಡಿ