ಮಂಗಳಗೌರಿಯೂ ಫಾರಿನ್ ಸೊಸೆಯೂ: ಪಾರ್ಥಸಾರಥಿ ಎನ್

ಗೆಳೆಯ ಶಿವರಾಜ್ ಮನೆಗೆ ಹೋಗಿ ತುಂಬಾ ದಿನಗಳೆ ಕಳೆದಿದ್ದವು. ಅವನು ಮೊದಲಾದರು ದಿನಾ ಅಂತ ನಮ್ಮ ಮನೆಗೆ ಬರುತ್ತಿದ್ದವರು ಈಗ ರಿಟೈರ್ಡ್ ಆದಮೇಲೆ ಕಾಣಿಸುತ್ತಲೇ ಇಲ್ಲ,  ’ನಾನು ರಿಟೈರ್ಡ್ ಆದ ಮೇಲೆ ತುಂಬ ಎಂಗೇಂಜ್ ಆಗಿ ಬಿಟ್ಟಿದ್ದೀನಿ ಯಾವುದಕ್ಕು ಸಮಯವಿಲ್ಲ ಅಂತ ಅವನ ಗೋಳಾಟ’  ಒಮ್ಮೆ ಮಾತನಾಡಿಸಿಯಾದರು ಬರೋಣ, ಇನ್ನು ನನ್ನ ಮುಖ ಮರೆತೀತು ಎಂದು ಬಾನುವಾರ ಅವರ ಮನೆಗೆ ಹೋದೆ. ಮುಂಬಾಗಿಲು ತೆರೆದಿತ್ತು, ಸೀದಾ ಒಳಗೆ ಹೋದೆ, ಯಾರು ಕಾಣಲಿಲ್ಲ ಅನ್ನುವಷ್ಟರಲ್ಲಿ, ರೂಮಿನಲ್ಲಿ ಸಣ್ಣ ಶಬ್ದ, … Read more

ಕನ್ನಡದ ಬರಹಗಳನ್ನು ಹಂಚಿ ಹರಡಿ

ಸಾಮಾನ್ಯ ಜ್ಞಾನ (ವಾರ 75): ಮಹಾಂತೇಶ್ ಯರಗಟ್ಟಿ

ಪ್ರಶ್ನೆಗಳು   1.    ಸುಕನ್ಯಾ ಸಮೃದ್ಧಿ ಯೋಜನೆ ಜಾರಿಗೆ ಬಂದ ವರ್ಷಯಾವುದು? 2.    ಇತ್ತೀಚಿಗೆ ಭಾರತ ಸರ್ಕಾರದ ಸಾಂಸ್ಕøತಿಕ ಸಲಹಾ ಮಂಡಲಿಯ ಕಾರ್ಯದರ್ಶಿಯಾಗಿ ಆಯ್ಕೆಗೊಂಡವರು ಯಾರು? 3.    ಎರಡು ಬಾರಿ ರಾಷ್ಟ್ರಪತಿಗಳ ಭಾವೈಕ್ಯತಾ ಪ್ರಸಸ್ತಿ ಪಡೆದ ಕನ್ನಡ ಚಲನಚಿತ್ರ ನಿರ್ದೇಶಕ ಯಾರು? 4.    ಅಗ್ನಿದೇವನ ಪತ್ನಿಯ ಹೆಸರೇನು? 5.    ವಿಶ್ವಸಂಸ್ಥೆಯು 2003-2012 ದಶಕವನ್ನು ಯಾವ ದಶಾಬ್ದಿ ಎಂದು ಪ್ರಕಟಿಸಿದೆ? 6.    ವಿಶ್ವದ ಅತ್ಯಂತ ಪುರಾತನ ವಿಶ್ವವಿದ್ಯಾನಿಲಯ ಆಕ್ಸ್‍ಫರ್ಡ್ ವಿಶ್ವವಿದ್ಯಾನಿಲಯದ ಮೊದಲ ಮಹಿಳಾ ಕುಲಪತಿ ಯಾರು? 7.    ‘ಕ್ಯೂ’ … Read more

ಕನ್ನಡದ ಬರಹಗಳನ್ನು ಹಂಚಿ ಹರಡಿ

ಗಣಪನೆಂಬ ಅದ್ಭುತ: ಪ್ರಸಾದ್ ಕೆ.

ಕತೆ, ಕವಿತೆ, ಕ್ರೈಮು, ಕಾರ್ಟೂನು, ಸಿನಿಮಾ, ಟೀಕೆ-ಟಿಪ್ಪಣಿ, ಸತ್ವವಿಲ್ಲದ ಸರ್ಕಾರಿ ಪತ್ರಗಳು, ಆಫೀಸಿನ ನೀರಸ ಮಣಭಾರದ ರಿಪೋರ್ಟುಗಳು ಹೀಗೆ ಹಿರಿ, ಕಿರಿ, ಕಿರಿಕಿರಿಯೆನ್ನಿಸುವ ಏನೇನೋ ವಿಷಯಗಳ ಬಗ್ಗೆ ಬರೀತಾ ಬರೀತಾ ಚೌತಿಯ ಗಣೇಶನ ಬಗ್ಗೆ ವಾರದ ವಿಶೇಷ ಪುರವಣಿಗೆ ಬರೆಯುವುದೇ ಒಂದು ಖುಷಿ. ಗಣಪತಿ ಎಂದರೆ ನನಗೆ ಹೊಸ ಜಗತ್ತು ತೆರೆದುಕೊಳ್ಳುತ್ತದೆ. ನನಗೆ ಗಣಪ ಎಂದರೆ ಏನೆಲ್ಲಾ, ಎಷ್ಟೆಲ್ಲಾ… ಅತಿಮಧುರ ಸಂಸ್ಕøತ ಶ್ಲೋಕಗಳನ್ನು ಬದಿಗಿಟ್ಟುಕೊಂಡರೂ ಗಣಪತಿಯೆಂದರೆ ನನ್ನದೇ ಹಲವು ವರ್ಷನ್ನುಗಳು ನನಗೆ. 'ಗಣೇಶ' ಎಂದರೆ ಗಣೇಶನ ಮದುವೆಯ … Read more

ಕನ್ನಡದ ಬರಹಗಳನ್ನು ಹಂಚಿ ಹರಡಿ

ಸೂಫಿ ಕತೆಗಳು: ಗೋವಿಂದ ರಾವ್ ವಿ. ಅಡಮನೆ

೧. ಹೊಸತಾಗಿ ಮತಾಂತರಗೊಂಡವನು ಒಂದು ಊರಿನಲ್ಲಿ ಒಬ್ಬ ಮುಸಲ್ಮಾನ ಹಾಗು ಒಬ್ಬ ಕ್ರೈಸ್ತಮತೀಯ ಸ್ನೇಹಿತರು ನೆರೆಹೊರೆವಾಸಿಗಳಾಗಿದ್ದರು. ಇವರೀರ್ವರಲ್ಲಿ ಪ್ರತಿಯೊಬ್ಬನಿಗೂ ಇನ್ನೊಬ್ಬನ ಯೋಗಕ್ಷೆಮದ ಕಾಳಜಿ ಇದ್ದದ್ದರಿಂದ ಆರೋಗ್ಯದ ಹಾಗು ಇನ್ನಿತರ ಖಾಸಗಿ ವಿಷಯಗಳ ಕುರಿತು ಆಗಾಗ್ಗೆ ವಿಚಾರವಿನಿಮಯ ಮಾಡಿಕೊಳ್ಳುತ್ತಿದ್ದರು. ಬಲು ಶ್ರದ್ಧೆಯಿಂದ ಇಸ್ಲಾಂ ಮತಾಚರಣೆಗಳನ್ನು ಮಾಡುತ್ತಿದ್ದ ಮುಸಲ್ಮಾನನು ತನ್ನ ಮತದ ಹಿರಿಮೆಯನ್ನು ಬಹುವಾಗಿ ಹೇಳುತ್ತಿದ್ದದ್ದರ ಪರಿಣಾಮವಾಗಿ ಕ್ರೈಸ್ತಮತೀಯನು ಇಸ್ಲಾಂ ಮತಕ್ಕೆ ಮಾತಾಂತರಗೊಂಡನು.  ಮತಾಂತರಗೊಂಡ ಮಾರನೆಯ ದಿನ ಬೆಳಗಿನ ಜಾವದಲ್ಲಿ ಅವನ ಮನೆಯ ಬಾಗಿಲನ್ನು ಯಾರೋ ಜೋರಾಗಿ ಬಡಿಯುತ್ತಿದ್ದದರಿಂದ ಅರೆನಿದ್ದೆಯಲ್ಲಿದ್ದ … Read more

ಕನ್ನಡದ ಬರಹಗಳನ್ನು ಹಂಚಿ ಹರಡಿ

ಒತ್ತಡ ರ(ಸ!)ಹಿತ ಶಿಕ್ಷಣ: ಗುರುಪ್ರಸಾದ್ ಕುರ್ತಕೋಟಿ

"ರೀ ನಿಮ್ಮ ಮಗಳು ಹೋಂ ವರ್ಕ್ ಮಾಡಿಲ್ಲ" ಮಗಳ ಅಮ್ಮ ಕೂಗುತ್ತಿದ್ದಳು! ಆ ದನಿ ನನಗೆ ಅಂತರಿಕ್ಷ ವಾಣಿ ಥರ ಕೇಳುತ್ತಿತ್ತು. ಯಾಕಂದ್ರೆ, ನಮ್ಮ ಕಂಪನಿಯವರು ಇವನು ಸಮಧಾನದಿಂದಿರಲೇ ಕೂಡದು ಅಂತ ನಿರ್ಧರಿಸಿ, ದಯಪಾಲಿಸಿದ್ದ ಬ್ಲ್ಯಾಕ್ ಬೆರ್ರಿ (ವರ್ರಿ ಅಂತಿದ್ರೆ ಇನ್ನೂ ಚೆನ್ನಾಗಿರುತ್ತಿತ್ತೇನೋ) ಎಂಬ ಮೊಬೈಲ್ ನಲ್ಲಿ ಇಮೇಲ್ ಗಳ ಮಧ್ಯೆ ನಾನು ಹುದುಗಿ ಹೋಗಿದ್ದೆ.  ಮೊದಲೆಲ್ಲಾ ನಮ್ಮ ಹಿರಿಯರು ಬೆಳಿಗ್ಗೆ ಎದ್ದ ಕೂಡಲೇ ಅಂಗೈ ನೋಡಿಕೊಂಡು "ಕರಾಗ್ರೆ ವಸತೇ ಲಕ್ಷ್ಮಿ…" ಹೇಳುತ್ತಿದ್ದರೆ ಕಲಿಯುಗದಲ್ಲಿ ನಾವು ಅಂಗೈಯಲ್ಲಿ … Read more

ಕನ್ನಡದ ಬರಹಗಳನ್ನು ಹಂಚಿ ಹರಡಿ

ಕೃಷ್ಣ ಪ್ರೇಮದಲ್ಲಿ ನಾವೆಲ್ಲರೂ….: ಅಭಿ ಸಾರಿಕೆ

ಅಚ್ಯುತಮ್, ಕೇಶವಂ ಕೃಷ್ಣ ದಾಮೋದರಂ ಜಾನಕಿವಲ್ಲಭಂ ವಾಸುದೇವಂ ಭಜೇ… ಕೃಷ್ಣ ಎಂಬ ಹೆಸರೇ ಮನಕ್ಕೆ ಒಂದು ರೀತಿಯ ಆನಂದ ತರುತ್ತದೆ, ಕೃಷ್ಣ ಸರ್ವಾಂತರ್ಯಾಮಿ ಅಂದರೆ ಸರ್ವರ ಅಂತರಂಗಗಳಲ್ಲೂ ಅಲೆವವನು, ಅವನಿಲ್ಲದ ಉಸಿರಿಲ್ಲ. 'ಕೃಷ್ಣಂ ವಂದೇ ಜಗದ್ಗುರು' ಕೃಷ್ಣನೇ ಜಗದ ಗುರು, ಜಗದ ಗುರುವಾದ ಕೃಷ್ಣನೇ ನಿನಗೆ ವಂದಿಸುವೆ.  ನಾವೆಷ್ಟೆ ದೇವರನ್ನು ಪೂಜಿಸಿದರು ಆ ಪೂಜೆಯಲ್ಲೊಂದು ಭಯವಿರುತ್ತದೆ. ಆದರೆ ಕೃಷ್ಣನ ವಿಷಯ ಹಾಗಲ್ಲ ಆತನ ಪೂಜಿಸಲು ಭಯ ಪಡಬೇಕಿಲ್ಲ ಪ್ರೇಮ ಮಿಳಿತವಾದ ಭಕ್ತಿಯೊಂದಿದ್ದರೆ ಸಾಕು, ಕೃಷ್ಣನನ್ನು  ನಮಗೆ ಬೇಕಾದ … Read more

ಕನ್ನಡದ ಬರಹಗಳನ್ನು ಹಂಚಿ ಹರಡಿ

ಕುಕ್ಕೆಯಲ್ಲೊಂದು ಪಂಕ್ಚರ್ ಕತೆ: ಪ್ರಶಸ್ತಿ

ಹಿಂದಿನ ಭಾಗದಲ್ಲಿ ಓದಿದಂತೆ ಟ್ರಿಪ್ಪಿನುದ್ದಕ್ಕೂ ಯೋಗಾಯೋಗಗಳೆಂಬ ನಾಣ್ಯದ ಮುಖಗಳು ಕ್ಷಣಕ್ಷಣಕ್ಕೂ ನಮಗೆ ಮುಖಾಮುಖಿಯಾಗುತ್ತಲೇ ಇದ್ದವು. ಬಿಸಿಲೆಯಲ್ಲಿ ಹಾಸನ ಸಂರಕ್ಷಿತ ಅರಣ್ಯ ಪ್ರದೇಶ ಅನ್ನೋ ಬೋರ್ಡು ಕಂಡಿದ್ದರೂ ಅದರ ಕೆಳಗೆ ಸಣ್ಣಕ್ಕಿದ್ದ ಬಿಸಿಲೆ ವೀವ್ ಪಾಯಿಂಟಿಗೆ ದಾರಿಯೆಂಬ ಬೋರ್ಡು ಕಾಣದೇ ಬಿಸಿಲೆಯ ಮೊದಲ ವೀವ್ ಪಾಯಿಂಟ್ ಮಿಸ್ಸಾಗಿತ್ತು. ಕುಕ್ಕೆಗೆ ಬಂದ ಬಹುತೇಕ ಮಂದಿ ಬಂದೇ ಹೋಗುವ ಗಡಿಮಾರಮ್ಮನ ದೇವಸ್ಥಾನ ಮಿಸ್ಸಾಗೇ ಹೋಗ್ತಿತ್ತೇನೋ ಅಲ್ಲಿನ ಗೇಟು ಹಾಕಿ, ಅದನ್ನ ತೆಗಿಯೋಕೆ ಅಂತ ನಾನು ಕೆಳಗಿಳಿಯದೇ ಹೋಗಿದ್ದರೆ. ಮೊದಲೆರಡು ಪಂಕ್ಚರ್ರುಗಳಾಗದೇ ಹೋಗಿದ್ದರೆ … Read more

ಕನ್ನಡದ ಬರಹಗಳನ್ನು ಹಂಚಿ ಹರಡಿ

ಭಾರತೀಯ ಸನ್ನಿವೇಶದಲ್ಲಿ ಹವಾಮಾನ ಬದಲಾವಣೆ – ಒಂದು ನೋಟ– 7: ಅಖಿಲೇಶ್ ಚಿಪ್ಪಳಿ

ಕೊನೆಯ ಕಂತು: ವಸ್ತುಗಳು ಇವತ್ತು ಜನರನ್ನು ಆಳುತ್ತಿವೆ. ಟಿ.ವಿ.ಯಲ್ಲಿ ಬರುವ ಪ್ರತಿಯೊಂದು ವಸ್ತುವೂ ಮನುಷ್ಯನಿಗೆ ಅತಿ ಅಗತ್ಯ ಎಂದು ಬಿಂಬಿಸಲಾಗುತ್ತಿದೆ. ಪ್ರತಿಯೊಂದಕ್ಕೂ ಯಂತ್ರಗಳ ಬಳಕೆ ಶುರುವಾಗಿದೆ. ನಿಮ್ಮಲ್ಲಿ ವಾಶಿಂಗ್ ಮಷಿನ್ ಇಲ್ಲ ಅಂದರೆ ನಿಮ್ಮ ಸಾಮಾಜಿಕ ಸ್ತರದಲ್ಲಿ ಒಂದು ಮೆಟ್ಟಿಲು ಕಡಿಮೆಯಾಗುತ್ತದೆ. ಯಂತ್ರಗಳ ಸಂಖ್ಯೆ ನಿಮ್ಮ ಮನೆಯಲ್ಲಿ ಹೆಚ್ಚು-ಹೆಚ್ಚು ಇದ್ದ ಹಾಗೆ ನಿಮ್ಮ ಸಾಮಾಜಿಕ ಸ್ತರ ಸದಾ ಮೇಲ್ಮುಖಿಯಾಗಿಯೇ ಇರುತ್ತದೆ. ಹವಾಮಾನ ಬದಲಾವಣೆಗೂ ಹಾಗೂ ವೈಯಕ್ತಿಕ ಬದುಕಿಗೂ ನೇರ ಸಂಬಂಧವಿದೆ. ನಿಮ್ಮ ಜೀವನಶೈಲಿಯ ಬದಲಾವಣೆಯಿಂದಾಗಿ ನೀವೊಬ್ಬ ಪರಿಸರಸ್ನೇಹಿ … Read more

ಕನ್ನಡದ ಬರಹಗಳನ್ನು ಹಂಚಿ ಹರಡಿ

ಮೂವರ ಕವನಗಳು: ಬಿದಲೋಟಿ ರಂಗನಾಥ್, ರಾಘವ ಹರಿವಾಣಂ, ಕು.ಸ.ಮಧುಸೂದನ್ ನಾಯರ್

ಏಕ ಶೀಲಾ ಬೆಟ್ಟ ನೋಡುತ್ತಲೇ ಇದ್ದೇನೆ ಬೆಳೆಯದೇ ಕೊರಗದೆ ಕರಗದೆ ಜುಮ್ಮನ್ನದೇ ಕೂತಿದೆ ಎದೆಯ ಭಾಗಕ್ಕೆ ಅಂಗಾಲೂರಿ ಸಾಗಿದರೆಷ್ಟೋ ಜನ ನಾನೂ ಕೂಡಿ. ಸಾಯದೆ ಹಿಗ್ಗುತ್ತಿದೆ ಸೊಗಸು ಬಿನ್ನಾಣ. ನನ್ನಿಂದೆ ಬಂದೋದವರ ಬಿಸಿಯುಸಿರ ಪಿಸುನುಡಿ ಏದುಸಿರ ಬಿಚ್ಚು ಮೆದೆ ಜೀವಂತ ಸದಾ… ನರ ಹೊತ್ತ ಬೆಳ್ಳಕ್ಕಿಗಳ ಕೋಮಲ ಪಾದಗಳ ಸ್ಪರ್ಶ ಸೋಕಿ ನಿರಂತರ ಎಚ್ಚರ ರಸಿಕತೆಯಲಿ ಒಳಗೊಳಗೆ ಖುಷಿಯ ಮೈದವಡುತ ಕೂತಿದೆ ಸುಮ್ಮನೆ ಬಿಮ್ಮನೆ ಯಾರು ಹತ್ತಿದರು ಅಪ್ಪಿದರು ಒದ್ದರು  ಬೇಸರವಿಲ್ಲ ಜಗಜಟ್ಟಿ ಮಲ್ಲನಿಗೆ ಬೆತ್ತಲ ಮನಸ … Read more

ಕನ್ನಡದ ಬರಹಗಳನ್ನು ಹಂಚಿ ಹರಡಿ

ಫ್ಲಾಪಿಬಾಯ್ ಮತ್ತು ಲಗೋರಿಬಾಬಾ-4

ಬೆಳಕಿನ ಮರಗಳ ರಹಸ್ಯ     “ಲಗೋರಿಬಾಬಾ ಫ್ರೀ ಇದೀರಾ ಈ ವಾರ? ಸಾಧ್ಯವಾದ್ರೆ ನನ್ನ ಜೊತೆ ಶ್ರೀಲಂಕಾಗೆ ಬನ್ನಿ. ಒಂದು ರಹಸ್ಯದ ಬಗ್ಗೆ ಅಧ್ಯಯನ ಮಾಡಲು ಡಾ.ಕೋವೂರ್ ಜೊತೆ ಹೋಗೋಣ.” ಫ್ಲಾಪಿಬಾಯ್ ಕೇಳಿದ ಲಗೋರಿಬಾಬಾನಿಗೆ.     “ಏನು ರಹಸ್ಯ? ಡಾ. ಕೋವೂರ್ ಅಂದ್ರೆ ಯಾರು? ಸಿಲೋನ್‍ಗೆ ಅವಶ್ಯವಾಗಿ ಹೋಗೋಣ. ನಾನು ಎಲ್ಲಿಗಾದರೂ ಸೈ” ಲಗೋರಿಬಾಬಾ ಪ್ರತ್ಯುತ್ತರಿಸಿದ.     “ಶ್ರೀಲಂಕಾದ ಉತ್ತರ ಭಾಗದಲ್ಲಿ ಮನ್‍ಕುಳಮ್ ಅಂತ ಊರಿದೆ. ಆ ಊರಿನ ಕಾಡಿನ ಬೇಟೆಗೆ ಬೇರೆ ಬೇರೆ ಕಡೆಯಿಂದ … Read more

ಕನ್ನಡದ ಬರಹಗಳನ್ನು ಹಂಚಿ ಹರಡಿ

ಭಾರತದಲ್ಲಿ ಜಾತಿವ್ಯವಸ್ಥೆ: ದ್ಯಾವನೂರ್ ಮಂಜುನಾಥ್

“ಮಳೆಯ ಭರದಿ ತಿಳಿಯ ಮಣ್ಣು ಒಳಗು ಹೊರಗೂ ಏಕವಾಗಿ ಸೋರುತಿಹುದು ಮನೆಯ ಮಾಳಗಿ ಅಜ್ಞಾನದಿಂದ…..” ಇದನ್ನು ಬಗೆಹರಿಸಲು ಬುದ್ಧ ಬಸವಣ್ಣನಂತಹ ಮಹಾತ್ಮರು ಎಲ್ಲಿ ಸೋತರು ಎನ್ನುವ ಪ್ರಶ್ನೆ ನನ್ನಲಿ ಸದಾ ಪ್ರಶ್ನಿಸುತ್ತಿರುವೆ. ಈ ಒಂದು ಪ್ರಶ್ನೆಗೆ ನಮ್ಮ ಬಳಿ ಸ್ಪಷ್ಟವಾದಂತಹ ಉತ್ತರವಿಲ್ಲ ಯಾಕೆಂದರೆ ಭಾರತದಲ್ಲಿ ಜಾತಿವ್ಯವಸ್ಥೆ ಇದೆಯೆ? ಎನ್ನು ಗೊಂದಲದ ಪ್ರಶ್ನೆ ಹುಟ್ಟುತ್ತದೆ. ಇಂದಿನ ನಮ್ಮ ಸಮಾಜ ವಿಜ್ಞಾನಗಳಲ್ಲಿ ನಡೆಯುವ ಪ್ರಭಕಾರಿಯಾದ ಸಂಶೋಧನೆಯಲ್ಲಿ ನೋಡುವಂತಹದ್ದು ಐಡಿಯಾಲಾಜಿಕಲ್ ಸ್ವರೂಪದ್ದೆ ವಿನಃ ಯಾವುದೇ ರೀತಿಯಲ್ಲಿ ವೈಜ್ಞಾನಿಕ ಸ್ವರೂಪದಲ್ಲ.     ಇತ್ತೀಚಿಗೆ … Read more

ಕನ್ನಡದ ಬರಹಗಳನ್ನು ಹಂಚಿ ಹರಡಿ

ಬಾಲ್ಕನಿ ವರ್ಸಸ್ ಗಾಂಧಿಕ್ಲಾಸ್: ಎಚ್.ಕೆ.ಶರತ್

ಬಾಲ್ಕನಿ 1 ಅಲ್ಲೊಂದಿಷ್ಟು ಮಂದಿ ಕುಂತಿದ್ದಾರೆ. ತಮ್ಮನ್ನು ತಾವು ಸುಸಂಸ್ಕøತರೆಂದು ಭಾವಿಸಿದವರು. ಹಾಗವರು ಅಂದುಕೊಳ್ಳಲು ಕಾರಣವೂ ಇದೆ. ಅವರ ಬಳಿ ಕಾಸಿದೆ. ಓದಿ ತಿಳಿದುಕೊಂಡವರು ಎಂಬ ಅಹಂ ಅವರನ್ನು ಅಮರಿಕೊಂಡಿದೆ. 2 ಅವರ ಮೈವಾಸನೆ, ಪೂಸಿಕೊಂಡ ಸೆಂಟಿನ ಸರಳಿನೊಳಗೆ ಬಂಧಿಯಾಗಿದೆ. ಸದ್ಯಕ್ಕೆ ಸೆಂಟು ಸ್ರವಿಸುವ ಸುವಾಸನೆಯೇ ಅವರ ಮೈವಾಸನೆ. 3 ರಂಗು ರಂಗಾದ ದಿರಿಸುಗಳು ಅವರೆಲ್ಲರ ಮೈಯನ್ನು ಆವರಿಸಿವೆ. ಫ್ಯಾನ್ಸಿ ಸೀರೆ ಉಟ್ಟ ಮಹಿಳೆಯರು, ಟೈಟ್ ಜೀನ್ಸ್, ಚೂಡಿದಾರ್ ಇತ್ಯಾದಿ ಇತ್ಯಾದಿ ತೊಟ್ಟುಕೊಂಡ ಹುಡುಗಿಯರು, ಅವರೊಂದಿಗೆ ಡೀಸೆಂಟಾಗಿ … Read more

ಕನ್ನಡದ ಬರಹಗಳನ್ನು ಹಂಚಿ ಹರಡಿ

ಪ್ರೊ. ಎಂ.ಎಂ. ಕಲ್ಬುರ್ಗಿ ನಾನು ಕಂಡಂತೆ.. : ಗಿರಿಜಾಶಾಸ್ತ್ರಿ, ಮುಂಬಯಿ.

ಸುಮಾರು 1990ರ ಆಸುಪಾಸು. ಪ್ರೊ. ಎಂ.ಎಂ. ಕಲ್ಬುರ್ಗಿ ಯವರು ಒಂದು ಉಪನ್ಯಾಸ ಮಾಡಲು ಮುಂಬಯಿ ವಿ.ವಿಯ ಕನ್ನಡ ವಿಭಾಗಕ್ಕೆ ಬಂದಿದ್ದರು. ಬಹುಶಃ ಅವರ “ಮಾರ್ಗ” ಸಂಪುಟಗಳ ಬಗ್ಗೆ ಮಾತನಾಡಿದರೆನಿಸುತ್ತೆ. ಅದರ ವಿವರಗಳು ಈಗ ಸರಿಯಾಗಿ ನೆನಪಿಲ್ಲದಿದ್ದರೂ, ನಮ್ಮನ್ನೆಲ್ಲಾ ಅಂದು ಬೆರಗುಗೊಳಿಸಿದ್ದ ಅವರ ಪಾಂಡಿತ್ಯದ ಆಳ ಅಗಲಗಳ ವರ್ಚಸ್ಸು, ಆ ಪ್ರಭಾವ ಇನ್ನೂ ಹಸಿಯಾಗಿಯೇ ಇದೆ. ಕಲ್ಬುರ್ಗಿಯವರನ್ನು ನಾನು ಮೊದಲ ಸಲ ನೋಡಿದ್ದು ಹೀಗೆ. ಆಗ ನಮ್ಮ ಮಾರ್ಗದರ್ಶಕರಾಗಿದ್ದ ಪ್ರೊ. ತಾಳ್ತಜೆ ವಸಂತ ಕುಮಾರ್ ಅವರು ಅಲ್ಲಿನ ಎಲ್ಲಾ … Read more

ಕನ್ನಡದ ಬರಹಗಳನ್ನು ಹಂಚಿ ಹರಡಿ

ಗಣಪನ ಚೌತಿಯೂ ರುಬ್ಬುವ ಕಲ್ಲೂ..: ಅನಿತಾ ನರೇಶ್ ಮಂಚಿ.

.  ಎಳ್ಳುಂಡೋಳಿಗೆ ಕಬ್ಬು ಮೆಲುವವಗೇ.. ಎಂದು ಅಪ್ಪ ಸುಶ್ರಾವ್ಯವಾಗಿ ಯಕ್ಷಗಾನೀಯ ಸ್ಟೈಲಿನಲ್ಲಿ ಬೆಳಗ್ಗೆಯೇ ಹಾಡಲು ಶುರು ಮಾಡಿದ್ದರು. ಹಿಮ್ಮೇಳವಾಗಿ ತೆಂಗಿನಕಾಯಿ ಹೆರೆಯುವ ಸದ್ದು ಜೊತೆಗೆ ಕೇಳಿ ಬರುತ್ತಿತ್ತು.  ಅಮ್ಮ ಮೂರ್ನಾಲ್ಕು ತೆಂಗಿನಕಾಯಿಗಳನ್ನು ಒಡೆದು ತಂದು ಅಪ್ಪನ ಮುಂದಿಟ್ಟು ಕ್ಲಿನಿಕ್ಕಿಗೆ ಹೋಗೋ ಮೊದಲು ಇದಿಷ್ಟು ತುರಿದುಕೊಟ್ಟು ಹೋಗಬೇಕು ಅಂತ ಫರ್ಮಾನ್ ಹೊರಡಿಸಿದ್ದಳಲ್ಲಾ.. ಅಪ್ಪನ ಆಲಾಪಕ್ಕೆ ಸರಿಯಾಗಿ ಕಾಯಿ ತುರಿಯುವ ವೇಗ ವೃದ್ಧಿಸುವುದು, ಕಡಿಮೆಯಾಗುವುದು ನಡೆಯುತ್ತಿತ್ತು.  ಈಗ ಅಡುಗೆ ಮನೆಗೆ ಹೋದರೆ ಅಮ್ಮ ಏನಾದರೂ ಕೆಲಸ ಅಂಟಿಸುತ್ತಾಳೆ ಎಂದು ನನಗೂ … Read more

ಕನ್ನಡದ ಬರಹಗಳನ್ನು ಹಂಚಿ ಹರಡಿ

ಹೀಗೊಂದಿಷ್ಟು ಕಥೆಗಳು (ಕಥೆಗಳಾ !!?) … : ಸುನೀತಾ ಮಂಜುನಾಥ್

ಹೀಗೊಂದಿಷ್ಟು ಕಥೆಗಳು ಪುಟ್ಟ ಪಾದಗಳಿಗೆ ಗೆಜ್ಜೆ ತೊಡಿಸಿದ್ದ ಅಪ್ಪ 'ಮಹಾಲಕ್ಷ್ಮಿಯ ಕಾಲು ಅಂತ ಮುತ್ತಿಟ್ಟಿದ್ದ  …  ಮದುವೆಯಾದ ವರ್ಷದೊಳಗೆ ಕುಡಿತ ಚಟವಾಗಿದ್ದ ಮಾವ ತೀರಿ ಹೋದ ಅತ್ತೆ ಮೈದುನಂದಿರು 'ಅದ್ಯಾವ ಘಳಿಗೆಯಲ್ಲಿ ಕಾಲಿಟ್ಟಳೋ ಮಾವನ್ನೇ ತಿಂದ್ಬಿಟ್ಲು' ಅಂತ ಮುಖ ಮುರಿದರು …  **** ಈವತ್ತು ಉಪವಾಸದ ಹಬ್ಬ (ಏಕಾದಶಿ )' ಅಂದ್ಲು ಅಮ್ಮ . ನಕ್ಕುಬಿಟ್ಟಳು   'ಅದೆಷ್ಟೋ ವರ್ಷಗಳಿಂದ  ದಿನಾ ಎರಡ್ಹೊತ್ತು ಉಪವಾಸ ಮಾಡ್ತಾನೆ ಇದ್ದೇವೆ . ಅದಕ್ಕೂ ಒಂದು ಹಬ್ಬ ಬೇಕೇ'   ಎಂಬಂತೆ … Read more

ಕನ್ನಡದ ಬರಹಗಳನ್ನು ಹಂಚಿ ಹರಡಿ

ಫ್ಲಾಪಿಬಾಯ್ ಮತ್ತು ಲಗೋರಿಬಾಬಾ-3: ಫ್ಲಾಪಿಬಾಯ್

ಗಣೇಶ ಬಂದ ಫ್ಲಾಪಿಬಾಯ್ ಮಾತಿಂದ ಕರೆಂಟ್ ಕಂಡುಹಿಡಿಯಬೇಕೆಂದು ಶತಾಯಗತಾಯ ಪ್ರಯೋಗನಿರತನಾಗಿದ್ದ. ಲಗೋರಿಬಾಬಾ ಎಲ್ಲಿಂದಲೋ ಒಂದಷ್ಟು ಬೂದಿ ತಂದ್ಕೊಂಡು ಮುಲ್ತಾನಿ ಮಿಟ್ಟಿ ತರಾ ಮೈಗೆಲ್ಲಾ ಹಚ್ಕೊಂಡು ಇಡೀ ಬಾಡಿನೇ ಫೇಷಿಯಲ್ ಮಾಡ್ಕೊಳ್ತಾ ಇದ್ದ. ಅದೇ ಟೈಮಿಗೆ ಬಂದ್ರು ನಾಲ್ಕಾರು ಜನರು- ಕೈಲಿ ರಶೀದಿ ಪುಸ್ತಕ ಹಿಡ್ಕಂಡು! “ಅಣಾ ಏರಿಯಾದಲ್ಲಿ ಗಣೇಶನ್ನ ಕೂರಿಸ್ತಾ ಇದೀವಿ ಚಂದಾ ಕೊಡಿ, ಏಯ್! ಫ್ಲಾಪಿ ಅಣ್ಣನ ಹೆಸ್ರಲ್ಲಿ ಬರ್ಕೊಳೋ ಎರಡು ಸಾವಿರ” ತಮ್ಮವರತ್ರಾನೆ ಹೇಳಿ ಬರ್ಕೊಳೊಕೆ ಅಣಿಯಾದ ಗಣೇಶ ಕೂರಿಸೋ ಕಬಳೇಶ. “ತಡ್ರಪಾ, ನನ್ನತ್ರ … Read more

ಕನ್ನಡದ ಬರಹಗಳನ್ನು ಹಂಚಿ ಹರಡಿ

ಮೂವರ ಕವನಗಳು: ಸಿಪಿಲೆ ನಂದಿನಿ, ಸಾವಿತ್ರಿ ವಿ. ಹಟ್ಟಿ, ಅನುರಾಧ ಪಿ. ಸಾಮಗ

ಮಲೆಗಳಲಿ ಮರೆಯಾದದ್ದು ಬೇಸಿಗೆ ಮಲೆಯ  ಕುಳಿರ್ಗಾಳಿ ಶ್ರೀಗಂಧ-ರಕ್ತಚಂದನ ಸುವಾಸನೆ ವನರಾಜಿಗಳಲಿ ಸುಯ್ಯಲು.. ಸೋನೆಗತ್ತಲೊಳಗೆ ಹಸಿರುತಂಗಾಳಿ  ಸಿರಿಗೆ ಕಾನನಗಳು ಶೃಂಗಾರ ಗೊಂಡಿರಲು.. ಎಳೆಬೆಳಕು ಮಲೆಯ ಮುಕುಟವ ತೆರೆಯಲು ಕವಳದ ಸೊಬಗೊಳಗೆ.. ಹಕ್ಕಿ ಇಂಚರ ಅಖಂಡ  ಐಕ್ಯತೆಯೊಳಗೆ ಮುಚ್ಚಲು.. ಮಿಂಚು ತುಂಬಿದ  ಮಹಾಬಯಲು ಅಗೋಚರ  ಮರೆಯಾಕೃತಿಯ ಕಾನನವೆಲ್ಲ ಸಂಚರಿಸಲು ಹರ್ಷಕವಳವೆ ಸುರಿಯಲು ಹಸಿರುಬೇಟೆಗೆ ಹೊಂಚು ಹಾಕುತ್ತಿದ್ದ  ಮುಸುಕಧಾರೆ ರೈಫಲ್‍ಗಳು ಮಲೆಯಸಿರಿಯ ಶೃಂಗಗಳ ಹೆದರಿಸಲು ಹಸಿರೆಲೆಮೇಲೆ ಅತ್ಯಾಚಾರ ಬೆಳಕ ಝರಿಒಡಲಲಿ ಹಸಿರುರಕ್ತದ ನೋವಿಗೊಂದು  ದೊರಕದ ನ್ಯಾಯ ಕಾಡು ಕೆಂಪು ನಕ್ಷತದೇವತೆ  ನರಳಿ … Read more

ಕನ್ನಡದ ಬರಹಗಳನ್ನು ಹಂಚಿ ಹರಡಿ

ಗೌರಿಯ ಕಂದ ಗಜಮುಖ ತಾಯಿಯ ಜೊತೆ ಬಂದ: ಅಭಿಸಾರಿಕೆ

ಸರ್ವ ಮಂಗಳ ಮಾಂಗಲ್ಯೇ  ಶಿವೇ ಸರ್ವಾರ್ಥ ಸಾಧಿಕೇ ತ್ರ್ಯಂಬಕೇ ದೇವಿ ನಾರಾಯಣಿ ನಮೋಸ್ತುತೇಃ ವಕ್ರತುಂಡ ಮಹಾಕಾಯ  ಕೋಟಿಸೂರ್ಯ ಸಮಪ್ರಭ ನಿರ್ವಿಘ್ನಂ ಕುರುಮೇ ದೇವ ಸರ್ವ ಕಾರ್ಯೇಶು ಸರ್ವದಾ….. ಗಣೇಶ, ಗೌರಿ ಹಬ್ಬ ಎಂದರೆ ಮಕ್ಕಳಿಂದ ದೊಡ್ಡವರೆಗೂ ತುಂಬಾ ಸಡಗರದಿಂದ ಹಬ್ಬ. ಗಣೇಶ ಗಂಡು ಮಕ್ಕಳ ಹಬ್ಬವಾದರೆ, ಗೌರಿ ಹೆಣ್ಣುಮಕ್ಕಳ ಹಬ್ಬ, ಗೌರಿ ವ್ರತ ಹೆಣ್ಣು ಮಕ್ಕಳಿಗೆ ಇರುವ ಮಹತ್ತರ ವ್ರತ,ಗೌರಿ ತನಗೆ ಶಿವನನ್ನು ಪಡೆಯಲು ಬಹು ಭಕ್ತಿ ಶ್ರದ್ದೆಯಿಂದ ಈ ಪೂಜೆ ಮಾಡಿದಳಂತೆ, ಇದರಿಂದಾಗಿಯೇ ಮದುವೆಯಾಗದ ಹೆಣ್ಣು … Read more

ಕನ್ನಡದ ಬರಹಗಳನ್ನು ಹಂಚಿ ಹರಡಿ