ಚೈತ್ರದ ಯುಗಾದಿ ಸಂಭ್ರಮ: ಸುಮನ್ ದೇಸಾಯಿ

ಮಾಸಗಳೊಳಗ ಮೊದಲನೆ ಮಾಸ ಚೈತ್ರ ಮಾಸ, ಅದರೊಳಗ ಬರೊ ಸಂವತ್ಸರದ ಮೊದಲನೆ ಹಬ್ಬ ಯುಗಾದಿ. ಯುಗಾದಿ ಅಂದಕೂಡಲೆ ನೆನಪಾಗೊದು, ಬೇವು ಬೆಲ್ಲ. ಈ ಬೇವು ಬೆಲ್ಲದ ಸಂಪ್ರದಾಯ ಯಾವಾಗ ಶುರು ಆತೊ ಗೊತ್ತಿಲ್ಲಾ, ಆದ್ರ ಭಾಳ ಅರ್ಥಪೂರ್ಣ ಪದ್ಧತಿ ಅದ. ಜೀವನದಾಗ ಬರೋ ಸುಖ-ದುಖಃ ಸಮಾನಾಗಿ ತಗೊಂಡು, ಧೈರ್ಯಾದಿಂದ ಎನಬಂದ್ರುನು ಎದರಸಬೇಕು ಅನ್ನೊ ಸಂದೇಶವನ್ನ ಸಾರತದ.  ಚೈತ್ರ ಮಾಸ ಅಂದ್ರ ಫಕ್ಕನ ನೆನಪಾಗೊದು ಹಸಿರು, ಯಾಕಂದ್ರ ಚಳಿಗಾಲದಾಗ ಬರಡಾಗಿ ನಿಂತ್ತಿದ್ದ ಗಿಡಾ, ಮರಾ, ಬಳ್ಳಿಗೊಳು ಚಿಗುರೊ ಕಾಲಾ. ನಂಗಿನ್ನು … Read more

ಕನ್ನಡದ ಬರಹಗಳನ್ನು ಹಂಚಿ ಹರಡಿ

ಚುಟುಕಗಳು: ವಾಸುಕಿ ರಾಘವನ್

1  ರಾಯಲ್ ಫ್ಯಾಮಿಲಿಯಲ್ಲಿ ಹುಟ್ಟಿತು ಕಂದಮ್ಮ  ಇಟ್ಟರು ಮುದ್ದಾದ ಹೆಸರು ಸೀಮಾ ಅಂತ  ನೆಲೆಸಿದ್ದರೇನಂತೆ ತೆಲಂಗಾಣದಲ್ಲಿ  ಪ್ರಸಿದ್ಧಿಯಾಗಿದ್ದಾಳೆ ಇಂದು ರಾಯಲ್-ಸೀಮಾ ಅಂತ! 2  ಗಂಡ ಹೆಂಡತಿ ಇಬ್ಬರೇ ಖುಷಿಯಾಗಿದ್ರೆ  ನಮ್ಮ ಸಮಾಜಕ್ಕೇನು ಯೂಸು? ಅದಿಕ್ಕೆ ಮೂಗು ತೂರಿಸ್ಕೊಂಡ್ ಬರ್ತಾರೆ  ಯಾವಾಗ ಹ್ಯಾಪಿ ನ್ಯೂಸು? 3  ಅದೆಷ್ಟು ತಾರತಮ್ಯ ಹೆಂಗಸರೆಡೆಗೆ ನಮ್ಮ ಈ ಸಮಾಜದಲ್ಲಿ ಅಡುಗೆಯವರೆಲ್ಲ ಕೂಗುತ್ತಿದ್ದರು "ಸಾರ್ ಗೆ ಅನ್ನ? ಸಾರ್ ಗೆ ಅನ್ನ?" ಕೇಳುವುದಕೆ ಒಬ್ಬನೂ ಇರಲಿಲ್ಲ ನಿಮಗೇನು ಬಡಿಸಲಿ ಮೇಡಮ್ ಅಂತ! 4  ನಾನು … Read more

ಕನ್ನಡದ ಬರಹಗಳನ್ನು ಹಂಚಿ ಹರಡಿ

ಮೂಢನಂಬಿಕೆ: ಕೆ.ಟಿ.ರಘು

ಈ ಪ್ರಶ್ನೆಗೆ ಉತ್ತರ ನೀಡುವುದು ತುಸು ಶ್ರಮದಾಯಕ ಎನ್ನಿಸುವ ನಿಜ. ಮೂಢನಂಬಿಕೆ ಎನ್ನುವುದು ಮನುಷ್ಯನ ಹುಟ್ಟಿನೊಂದಿಗೆ ಬೆಳೆದು ಬಂದಿದೆ. ಇದು ಕಾಲದಿಂದ ಕಾಲಕ್ಕೆ ಬದಲಾಗುತ್ತಾ ತನ್ನ ಸ್ವರೂಪವನ್ನು ಬದಲಿಸುತ್ತಾ ಸಾಗುತ್ತಿದೆ. ಒಂದು ಕಾಲದ ನಂಬಿಕೆಗಳು ಇನ್ನೊಂದು ಕಾಲಕ್ಕೆ ಸುಳ್ಳೆಂಬುದು ಈ ವೈಜ್ಞಾನಿಕ ಯುಗದ ಜಗತ್ತು ಸಾಬೀತುಪಡಿಸಿದೆ. ಇಂದಿನ ಯುಗದಲ್ಲಿಯೂ ಸಹ ಹಿಂದಿನ ಕಾಲದ ಕೆಲವು ನಂಬಿಕೆಗಳನ್ನು ಅನುಸರಿಸುವುದನ್ನು ಮೂಢನಂಬಿಕೆ ಎನ್ನಬಹುದು. ಮೂಢನಂಬಿಕೆಗಳು ಸಾಮಾಜಿಕವಾಗಿ ಬೆಳೆದುಬಂದ ಅನಿಷ್ಟ ಪಿಡುಗುಗಳು. ದೇವರ ಮೇಲೆ ನಂಬಿಕೆ ಇಟ್ಟುಕೊಳ್ಳಿ, ಅವನ ಮುಂದೆ ಎಲ್ಲರೂ … Read more

ಕನ್ನಡದ ಬರಹಗಳನ್ನು ಹಂಚಿ ಹರಡಿ

ಹೆಸರಿಡದ ಕತೆಯೊಂದು (ಭಾಗ 3): ಪ್ರಶಸ್ತಿ ಪಿ.

(ಇಲ್ಲಿಯವರೆಗೆ) ಕಾಲೇಜು ದಿನಗಳಿಂದ್ಲೂ ಭಾಷಣ, ಚರ್ಚೆ ಅಂತೆಲ್ಲಾ ಸ್ಪರ್ಧೆಗಳಲ್ಲಿ ಭಾಗವಹಿಸುತ್ತಿದ್ದ ಶಾರುಗೆ ತನ್ನ ಡಿಗ್ರಿ ಮುಗಿದ ಮೇಲೆ ತಾನೂ ಒಂದು ಕೆಲಸ ಮಾಡ್ಬೇಕಾ ಅನ್ನೋ ಕಲ್ಪನೆಯೇ ಬೇಸರ ತರಿಸುತ್ತಿತ್ತು. ಕಾಲೇಜಲ್ಲಿ ಪ್ಲೇಸ್ಮೆಂಟಂತ ಬಂದು ತನ್ನ ಗೆಳತಿಯರೆಲ್ಲಾ ಒಬ್ಬೊಬ್ಬರಾಗಿ ಆಯ್ಕೆಯಾಗೋಕೆ ಶುರುವಾದಾಗ ತಾನೂ ಆಯ್ಕೆಯಾಗಿದ್ರೆ ಅನ್ನಿಸೋಕೆ ಶುರುವಾಗಿತ್ತು. ಆದ್ರೆ ಅನಿಸಿದ್ದೇ ಬಂತು. ಆ ಸೀಸನ್ನೇ ಮುಗಿದೋದ್ರೂ ಕೆಲಸ ಅನ್ನೋದು ಸಿಕ್ಕಿರಲಿಲ್ಲ.  ಯಾಕಾದ್ರೂ ಕೆಲ್ಸ ಕೆಲ್ಸ ಅಂತ ಹುಡುಕ್ತಾರೋ , ತಾನೆಂತೂ ಆರಾಮಾಗಿದ್ದುಬಿಟ್ತೀನಿ ಅಂತ ಹಿಂದಿನ ವರ್ಷ ಅಂದುಕೊಂಡಿದ್ದ ನಿರ್ಣಯಗಳೆಲ್ಲಾ … Read more

ಕನ್ನಡದ ಬರಹಗಳನ್ನು ಹಂಚಿ ಹರಡಿ

ಓಯಸಿಸ್: ನಿನಾದ (ಭಾಗ 4)

ಅಷ್ಟು ಹೊತ್ತಿಗೆ ನಿಶಾಂತ್ ಕರೆ ಮಾಡಿ ಹೇಳಿದ ತಡೆ  ಹಿಡಿದ ವೇತನ ಬಿಡುಗಡೆ ಆಗಿದೆ. ಯಾವ್ ಯಾವ್ದಕ್ಕೆ ಎಷ್ಟು ಎಂದು ವಿಲೇವಾರಿ  ಹೇಳು. ಮೊದಲು ಆ ಜೈನ್  ಗೆ ಫೋನ್ ಮಾಡಿ ಹೇಳು, ಹೇಳಿದ್ರೆ ಆವಾ ನಂಬೋಲ್ಲ ನಿನ್ನೆ ಅಕೌಂಟ್ ಗೆ  ಹಾಕಿದ ಹಣ ವಾಪಸು ಮಾಡಬೇಕು. ಸರಿ ಈಗಲೇ ಹೇಳುವೆ ನೀ ವಾಪಾಸು  ಮಾಡಿ ಬಿಡು. ಎಂದು ನಿಶಾಂತ್ ಹೇಳಿ ಕರೆಯನ್ನು ಮುಗಿಸಿದ. ಅಲ್ಲಿಗೆ ಒಂದು ವಿಲೇವಾರಿ ಆಯಿತು. ಅಂತೂ ಚಿಂತೆಯ ಮೂಟೆ ಹೊತ್ತು ಬಂದು ಎಲ್ಲ … Read more

ಕನ್ನಡದ ಬರಹಗಳನ್ನು ಹಂಚಿ ಹರಡಿ

ಸಾಮಾನ್ಯ ಜ್ಞಾನ (ವಾರ 21): ಮಹಾಂತೇಶ್ ಯರಗಟ್ಟಿ

ಪ್ರಶ್ನೆಗಳು: ೧.    ೨೦೧೪ ಮಾರ್ಚ್‌ನಲ್ಲಿ ವಿಶ್ವಸಂಸ್ಥೆಯು ವಿಶ್ವದ ಯಾವ ಭಾಗವನ್ನು ಪೋಲಿಯೋ ಮುಕ್ತವೆಂದು ಅಧೀಕೃತವಾಗಿ ಘೋಷಿಸಿತು? ೨.    ಭಾರತದ ಸುಪ್ರೀಂಕೋರ್ಟಿನ ಮುಖ್ಯ ನ್ಯಾಯಾಧೀಶರಾಗಿ ಕಾರ್ಯನಿರ್ವಹಿಸಿದ ಮೊದಲ ಕನ್ನಡಿಗ ಯಾರು? ೩.    ಸರ್ದಾರ್ ವಲ್ಲಭಬಾಯಿ ಪಟೇಲ್ ಅಂತರಾಷ್ಟ್ರೀಯ ವಿಮಾನ ನಿಲ್ದಾಣ ಎಲ್ಲಿದೆ? ೪.    ಚಂದ್ರನ ಮೇಲೆ ಹಾರಿಸಿದ ಮೊದಲ ರಾಕೆಟ್ ಯಾವುದು? ೫.    ಬೆಳಗಾವಿಯಲ್ಲಿ ಮೊದಲ ಕರ್ನಾಟಕ ಏಕೀಕರಣ ಸಭಾದ ಪ್ರಥಮ ಅಧ್ಯಕ್ಷತೆ ವಹಿಸಿದವರು ಯಾರು? ೬.    ಹೆಚ್.ಐ.ವಿ ಪೀಡಿತ ಗರ್ಭಿಣಿಗೆ ಆರೋಗ್ಯವಂತ ಮಗು ಹುಟ್ಟಬೇಕಾದರೆ ಆಕೆಗೆ ಯಾವ ಔಷಧ … Read more

ಕನ್ನಡದ ಬರಹಗಳನ್ನು ಹಂಚಿ ಹರಡಿ

ವಿಶ್ವ ಕವಿತಾ ದಿನದ ವಿಶೇಷ ಕಾವ್ಯಧಾರೆ

ಕನ್ನಡಿಯಲ್ಲಿ ಕಂಡದ್ದು ಕಾಲ ತದೇಕ ಚಿತ್ತದಿ ಕನ್ನಡಿಯನ್ನೆ ಯಾಕೋ ಮೈಮರೆತು ದಿಟ್ಟಿಸಿದ ಕ್ಷಣ ಕಂಡೊಂದು ನೆರಿಗೆಗೆ ಪಿಚ್ಚೆನಿಸಿತು ಬುನಾದಿ!  ನಾನು ಸುಳ್ಳೋ ಕನ್ನಡಿ ಸುಳ್ಳೋ ಕಾಯದ ಕಾಲಕ್ಕೆ ಒಡಂಬಡಿಕೆ ಪತ್ರ ಬಿಂಬಿಸುವೆ … ಅರ್ಧ ತೆರೆದ ಬಾಗಿಲ ಸಂಧಿಯಲಿ ಇಣುಕಿ ನಕ್ಕ ಬಾಲ್ಯ ಈಗ ತಾಳೆ ಹಾಕಿ ಗುಣಿಸಿದರೂ, ಗುನುಗಿದರೂ ಉತ್ತರವಿಲ್ಲದ ಲೆಕ್ಕಾಚಾರಕ್ಕೆ ನನ್ನ ನೋಡಿ ನಗುತ್ತದೆ ಕಂದ ಸವೆಸಿದ ಮಜಲುಗಳ ಮುಖದಲಿ ಬಿದ್ದರೆ ಮಾತ್ರನೇ ಚೂರಾಗುವ ಕನ್ನಡಿಯಲಿ ಕಾಣುವ ನೂರಾರು ಮುಖಗಳು! ಕಂಡ ಒಂದೇ ಒಂದು … Read more

ಕನ್ನಡದ ಬರಹಗಳನ್ನು ಹಂಚಿ ಹರಡಿ

ಕಾ೦ಗರುಗಳ ನಾಡಲ್ಲೊ೦ದು ಕಾ೦ಗರೂ ಐಲ್ಯಾ೦ಡ್: ಅರ್ಪಿತ ಮೇಗರವಳ್ಳಿ.

ಮೆಲ್ಬೋರ್ನ್‍ನಲ್ಲಿ ಪ್ರತಿವರ್ಷ  ನವೆ೦ಬರ್ ತಿ೦ಗಳ ಮೊದಲ ಮ೦ಗಳವಾರ ’ಮೆಲ್ಬೋರ್ನ್ ಕಪ್ ಡೆ’ ಇರುತ್ತದೆ. ಆಸ್ಟ್ರೇಲಿಯಾದ ಪ್ರತಿಷ್ಠಿತ ಕುದುರೆ ರೇಸ್ ನೆಡೆಯುವ ಈ ದಿನದ೦ದು ಮೆಲ್ಬೋರ್ನ್‍ನಲ್ಲಿ ಸಾರ್ವಜನಿಕ ರಜೆ ಇರುತ್ತದೆ. ಹೀಗಾಗಿ ಸೋಮವಾರ ರಜೆ ತೆಗೆದುಕೊ೦ಡು ನಾಲ್ಕು ದಿನ ದಕ್ಷಿಣ  ಆಸ್ಟ್ರೇಲಿಯಾದ ಕಡೆ ಪ್ರವಾಸ ಹೋಗಿಬರಲು ಯೋಜನೆ ರೂಪಿಸಿದೆವು. ಮೆಲ್ಬೋರ್ನ್‍ನಿ೦ದ ಸುಮಾರು ೭೨೫ ಕಿ.ಮಿ. ದೂರವಿರುವ ದಕ್ಷಿಣ ಆಸ್ಟ್ರೇಲಿಯಾದ ರಾಜಧಾನಿ ಆಡಿಲೇಡಿಗೆ ಆರು ಜನ ಕನ್ನಡಿಗರ ತ೦ಡದೊ೦ದಿಗೆ ಡ್ರೈವ್ ಮಾಡಿಕೊ೦ಡು ಹೊರಟೆವು. ದಕ್ಷಿಣ ಆಸ್ಟ್ರೇಲಿಯಾದಲ್ಲಿ ಇರುವ ನಾಲ್ಕು ದಿನದಲ್ಲಿ … Read more

ಕನ್ನಡದ ಬರಹಗಳನ್ನು ಹಂಚಿ ಹರಡಿ

ಚೈತ್ರಳೆಂಬ ಚಿಗುರೆ ಮರಿ ಚಿಗುರಿದ ಹೊತ್ತು: ಷಡಕ್ಷರಿ ತರಬೇನಹಳ್ಳಿ

ಕಳೆದ ಕೆಲವು ತಿಂಗಳುಗಳಿಂದ ನಮ್ಮ ಮನೆಯಲ್ಲಿ ಯಾರು ಮಾತನಾಡಿದರೂ ಅವಳು ಗರ್ಭದರಿಸಿದ ಬಗ್ಗೆಯೇ ಚರ್ಚೆ. ಅವಳು ನಮ್ಮ ಮನೆಗೆ ಬಂದು ಎಷ್ಟು ತಿಂಗಳುಗಳಾದವು? ಆದರೂ ಯಾಕೆ ಅವಳು ಇನ್ನೂ ಮರಿ ಹಾಕಲಿಲ್ಲ? ಎಂಬೆಲ್ಲ ಅನೇಕರ ತೀರದ ಕುತೂಹಲಗಳಿಗೆ ಉತ್ತರವೆಂಬಂತೆ ಅವಳು ಗರ್ಭದರಿಸಿದ ಸೂಚನೆ ನೀಡಿ ನಮ್ಮೆಲ್ಲರ  ಪ್ರಶ್ನೆಗಳಿಗೆ ಉತ್ತರಿಸಿದ್ದಳು. ಅವಳು ನಮ್ಮ ಮನೆಗೆ ಬಂದ ಮೊದಲ ದಿನಗಳ ನೆನಪು ಇನ್ನೂ ಹಸಿರಾಗಿದೆ. ಇವಳ ಅಕ್ಕ ನನ್ನವಳ ತವರೂರಿನಿಂದ ಬಂದ ಶ್ವೇತ ನಮ್ಮ ತೋಟದಲ್ಲಿ ಅಂಡಲೆದು ಹಸಿರುಕ್ಕುವ ಸೊಪ್ಪು … Read more

ಕನ್ನಡದ ಬರಹಗಳನ್ನು ಹಂಚಿ ಹರಡಿ

ಯಾರಪ್ಪನ ಮನೆ ಗಂಟು ಏನ್ ಹೋಗ್ಬೇಕಾಗೈತಿ: ಅಮರ್ ದೀಪ್ ಪಿ.ಎಸ್.

  ಹೈಸ್ಕೂಲ್ ದಿನಗಳಲ್ಲಿ ನಮ್ಮ ಮೇಷ್ಟ್ರು ಒಬ್ಬರಿದ್ದರು. ಬಿಡಿ, ಒಬ್ಬರಲ್ಲ ಬಹಳ ಮಂದಿ ಗುರುಗಳಿದ್ದಾರೆ. ಅವರಲ್ಲಿ ಒಬ್ಬರು ಸಂಕಪ್ಪ ಅಂತಿದ್ದರು. ಈಗ ನಿವೃತ್ತಿಯಾಗಿ ನಮ್ಮೂರಲ್ಲೇ ಇದ್ದಾರೋ ಅವರ ಸ್ವಗ್ರಾಮ ಹಡಗಲಿ ತಾಲೂಕಿನ ಉತ್ತಂಗಿಯಲ್ಲಿದ್ದಾರೋ ಗೊತ್ತಿಲ್ಲ. ಅವರು ನಮ್ಗೆ ಗಣಿತ ವಿಷಯ ತಗಳ್ಳೋರು.  ಆದರೆ ಅವರ ಇಂಗ್ಲೀಷು ಚೆನ್ನಾಗಿತ್ತು.  ಎತ್ತರದ, ಸ್ಥೂಲ ದೇಹವನ್ನು ಹೊತ್ತು ಕ್ಲಾಸ್ ರೂಮಿಗೆ  "ಎ ಸ್ಕ್ವೇರ್ ಪ್ಲಸ್ ಬಿ ಸ್ಕ್ವೇರ್ ಇಸ್ ಇಕ್ವಲ್  ಟು ………. " ಹೇಳುತ್ತಲೇ ಎಂಟ್ರಿ ಕೊಡುತ್ತಿದ್ರು. ಸುಮ್ನೆ ಕುಳಿತೆವೋ … Read more

ಕನ್ನಡದ ಬರಹಗಳನ್ನು ಹಂಚಿ ಹರಡಿ

ಸೀರೆಯ ಪರಿ: ಪದ್ಮಾ ಭಟ್॒

                                 ಅರೆ! ನಾನು ಸೀರೆಯನ್ನು ಉಟ್ಟುಕೊಳ್ಳುವಷ್ಟು ದೊಡ್ಡವಳಾಗಿಬಿಟ್ಟೆನಾ?  ಹೀಗಂತ ಮೊನ್ನೆ ಕಾಲೇಜಿನಲ್ಲಿ ನಡೆದ ನ್ಯಾಶನಲ್ ಸೆಮಿನರ್ ಗೆ ಎಲ್ಲರೂ ಕಂಪಲ್ಸರಿ ಸೀರೆಯನ್ನು ಉಡಲೇಬೇಕೆಂಬ ವಿಚಾರಕ್ಕೆ ಅನಿಸಿತ್ತು.. ಛೇ ನಾ ಸೀರೆ ಉಡಲ್ಲ ನಂಗೆ ಚನ್ನಾಗಿ ಕಾಣೋಲ್ಲ ಅಂತ ಎಷ್ಟೋ ಬಾರಿ sಕನ್ವಿನ್ಸ್ ಮಾಡಲು ಪ್ರಯತ್ನಿಸಿದ್ದೇನಾದ್ದರೂ ಫಲ ಕಂಡಿರಲಿಲ್ಲ. ಆದರೂ ಮನಸ್ಸಿನಲ್ಲಿ ಒಂದು ರೀತಿಯ ಸಂಭ್ರಮ ನನಗಂತ … Read more

ಕನ್ನಡದ ಬರಹಗಳನ್ನು ಹಂಚಿ ಹರಡಿ

ಹಳ್ಳಿಮೇಷ್ಟ್ರು: ಪತ್ರೇಶ್. ಹಿರೇಮಠ್

ಹಳ್ಳಿಮೇಷ್ಟ್ರು ಎಂದಾಕ್ಷಣ ಖ್ಯಾತ ನಟ ರವಿಚಂದ್ರನ್ ಚಲನಚಿತ್ರ ಕಥೆಯೆಂದು ಭಾವಿಸಿದರೆ ತಪ್ಪಾದೀತು. ಇದು ನಮ್ಮ  ಇಡೀ ಊರಿಗೇ ಊರೇ ಬಾಗಿ ಗೌರವಿಸುತ್ತಿದ್ದ ಹಳೆಯ ಪ್ರೀತಿಯ ಮೇಷ್ಟ್ರುಗಳ ವಿಷಯವಿದು. ಶಿಕ್ಷಕರಿಗೆ ದೇಗುಲ ನಿರ್ಮಿಸಿದ ನಾಡ ವಿದ್ಯಾವಂತರು ಮತ್ತೆ ಮತ್ತೆ ನೆನಪಿಸಿಕೊಳ್ಳಬೇಕಾದ ಹಳ್ಳಿಯ ಹಳೆಯ ಮೇಷ್ಟ್ರುಗಳ ಬದುಕಿನ ಕಥಾ ಸರಮಾಲೆಯಿದು.   ಈಗ ಶಿಕ್ಷಕ ವೃತ್ತಿಯೆಂದರೆ ಬೆಳಿಗ್ಗೆ ಹತ್ತಕ್ಕೆ ಶಾಲೆಗೆ ಹೊರಡುವುದು, ಪ್ರಾರ್ಥನೆ,ಪಾಠ, ಮಾಡುವುದು ಪುನಃ ಸಂಜೆ ಐದಕ್ಕೆ ಮನೆಗೆ ಮರಳುವುದು. ಇದು ಇಂದಿನ ಬಹುತೇಕ ಶಿಕ್ಷಕರ ದಿನಚರಿ. ಈಗಿನ … Read more

ಕನ್ನಡದ ಬರಹಗಳನ್ನು ಹಂಚಿ ಹರಡಿ

ಐ!!! ಇರುವೆ: ಅಖಿಲೇಶ್ ಚಿಪ್ಪಳಿ

ಎಲ್ಲಾ ಕಾಲದಲ್ಲೂ ಇರುವೆಗಳು ಮನುಷ್ಯನಿಗೆ ಉಪದ್ರವಕಾರಿಗಳೇ ಸೈ ಎಂದು ಸಾಮಾನ್ಯ ತಿಳುವಳಿಕೆ. ಸಂಜೆ ದೇವರ ಮುಂದೆ ಹಚ್ಚಿರುವ ದೀಪದ ಹಣತೆ (ಹಿತ್ತಾಳೆಯದ್ದು) ಬೆಳಿಗ್ಗೆ ನೋಡಿದರೆ ಬಣ್ಣ ಬದಲಾಯಿಸಿ ಕಪ್ಪಾಗಿದೆ, ದೀಪ ನಂದಿಹೋಗಿದೆ. ಹಣತೆಯ ಮೇಲೆ ಅಗಣಿತ ಸಂಖೈಯ ಇರುವೆಗಳು. ಬೆಳಿಗ್ಗೆ ಮತ್ತೆ ದೀಪ ಹಚ್ಚುವ ಮುಂಚೆ ಇರುವೆಗಳನ್ನೆಲ್ಲಾ ದೂರ ಓಡಿಸಬೇಕು. ಹಣತೆಯ ಒಳಗೆ ಎಣ್ಣೆಯಲ್ಲಿ ಬಿದ್ದು ಸತ್ತ ಮತ್ತಷ್ಟು ಅಸಂಖ್ಯ ಇರುವೆಗಳು. ಕೈ-ಕಾಲಿಗೆ ಕಚ್ಚುವ ಜೀವಂತ ಇರುವೆಗಳು ಇಷ್ಟಕ್ಕೇ ಮುಗಿಯಲಿಲ್ಲ, ಅಕ್ಕಿ ಡಬ್ಬದ ಬಾಯಿ ತೆಗೆದರೆ ಅಕ್ಕಿಯಲ್ಲೂ … Read more

ಕನ್ನಡದ ಬರಹಗಳನ್ನು ಹಂಚಿ ಹರಡಿ

ಮನೆಯೆ ಮೊದಲ ಪಾಠಶಾಲೆ: ಸುಮನ್ ದೇಸಾಯಿ

ಮೊನ್ನೆ ಗದಗ ಜಿಲ್ಲೆಯ ೬ನೇ ಸಾಹಿತ್ಯ ಸಮ್ಮೆಳನಕ್ಕ ಹೋಗಿದ್ದೆ. ಅಲ್ಲೆ ಮಕ್ಕಳ ಕಾವ್ಯವಿಹಾರ ಅನ್ನೊ ಒಂದು ಮಕ್ಕಳ ಕವಿಗೊಷ್ಠಿ ಎರ್ಪಡಿಸಿದ್ರು. ಮಕ್ಕಳು ಏನ ಕವಿತೆ ಬರಿಬಹುದು ಅಂತ ಕೂತುಹಲದಿಂದ ನೋಡ್ಲಿಕತ್ತಿದ್ದೆ. ವೇದಿಕೆ ಮ್ಯಾಲೆ ಒಂದ ಹತ್ತು ಮಕ್ಕಳಿದ್ರು. ಕವಿಗೊಷ್ಠಿ ಶುರುವಾದ ಮ್ಯಾಲೆ ಅ ಮಕ್ಕಳ ಪ್ರತಿಭೆ ನೋಡಿ ಆಶ್ಚರ್ಯ ಅನಿಸ್ತು. ಒಬ್ಬರಕಿಂತಾ ಒಬ್ಬರು ಸುಂದರವಾದ ಕವನಗಳನ್ನ ರಚಿಸಿದ್ರು. ಆ ಕವನಗಳಳೊಗ ಬೆರಗು, ಸೊಗಸು, ಮತ್ತ ಪ್ರಸ್ತುತ ಸಮಾಜದಲ್ಲಿಯ ಸಮಸ್ಯೆಗಳ ನೆರಳಿತ್ತು. ಮಕ್ಕಳ ಈ ಸೂಷ್ಮ ಗ್ರಹಣ ಶಕ್ತಿ … Read more

ಕನ್ನಡದ ಬರಹಗಳನ್ನು ಹಂಚಿ ಹರಡಿ

ಹೆಸರಿಡದ ಕಥೆಯೊಂದು (ಭಾಗ 2): ಪ್ರಶಸ್ತಿ ಪಿ.

ಇಲ್ಲಿಯವರೆಗೆ ಕೈಯಲ್ಲಿದ್ದ ಕರಗಿದ ಐಸ್ ಕ್ಯಾಂಡಿ ಪಟ್ಟಣಕ್ಕೆ ಬಂದು ಕಳೆದೇ ಹೋಗುತ್ತಿರುವ ಕಾಲದ ಬಗ್ಗೆ, ಇನ್ನೂ ದೊರಕದ ಭದ್ರ ಕೆಲಸದ ನೆನಪ ಹೊತ್ತು ತಂತು. ಬಂದೊಂದು ತಿಂಗಳಿನಲ್ಲೇ ಒಂದು ದಿನವೂ ಬಿಡದೆ ಇಂಟರ್ವ್ಯೂಗಳಿಗೆಂದು ಅಲೆದಿದ್ದರೆ ಏನಾದ್ರೂ ಕೆಲಸ ದಕ್ಕುತ್ತಿತ್ತೇನೋ. ಆದ್ರೆ ದಿನಾ ಅಲೆಯಲು ದುಡ್ಡೆಲ್ಲಿ ? ಕೆಲಸ ಹುಡುಕ್ತಿದಾನೆ ಬೇಕಾಗತ್ತೆ ಅಂತ ಅಪ್ಪ ತಿಳಿದು ಕೊಟ್ಟರೆ ತಾನೆ ಇವನಿಗೆ ದುಡ್ಡು ? ಸ್ನೇಹಿತರತ್ರ ಎಷ್ಟಂತ ಕೇಳೋದು ? ಕಂಡರೆ ಸಾಲ ಕೇಳ್ಬೋದು ಅಂತ ಇವನ ಕಾಲೇಜು ಗೆಳೆಯರೆಲ್ಲಾ … Read more

ಕನ್ನಡದ ಬರಹಗಳನ್ನು ಹಂಚಿ ಹರಡಿ

ಸಾಮಾನ್ಯ ಜ್ಞಾನ (ವಾರ 20): ಮಹಾಂತೇಶ್ ಯರಗಟ್ಟಿ

ಪ್ರಶ್ನೆಗಳು: ೧.    ೦೩.೦೨.೨೦೧೩ರಂದು ಬಿಡುಗಡೆಯಾದ ಖುಷ್ವಂತನಾಮ ದಿ ಲೆಸೆನ್ಸ್ ಆಫ್ ಮೈ ಲೈಫ್ ಈ ಕೃತಿಯ ಕರ್ತೃ ಯಾರು? ೨.    ವಾರಣಾಸಿ ಯಾವ ನದಿ ದಡದ ಮೇಲಿದೆ? ೩.    ಪ್ರಕೃತಿ ಚಿಕಿತ್ಸೆ ಕುರಿತು ಪುಸ್ತಕ ಬರೆದ ಭಾರತದ ಪ್ರಧಾನಿ ಯಾರು? ೪.    ಟೆನ್ನಿಸ್‌ನಲ್ಲಿ ಗ್ರಾಂಡ್ ಸ್ಲ್ಯಾಮ್ ಟೆನಿಸ್ ಪ್ರಶಸ್ತಿ ಪಡೆದ ಪ್ರಥಮ ಭಾರತೀಯ ಯಾರು? ೫.    ಕಿತ್ತೂರು ಚೆನ್ನಮ್ಮ ಚಿತ್ರದ ನಿರ್ದೇಶಕರು ಯಾರು? ೬.    ೭೪ನೇ ಸಂವಿಧಾನ ತಿದ್ದುಪಡಿಯ ಕಾಯ್ದೆ ಯಾವುದಕ್ಕೆ ಸಂಬಂಧಿಸಿದೆ? ೭.    ೨೦೧೨ ಡಿಸೆಂಬರ್ … Read more

ಕನ್ನಡದ ಬರಹಗಳನ್ನು ಹಂಚಿ ಹರಡಿ

ಓಯಸಿಸ್: ನಿನಾದ (ಭಾಗ 4)

ಇಲ್ಲಿಯವರೆಗೆ ಇತ್ತ ಟೀಂ ಲೀಡರ್ ಹಂಜ್ಹಾ.. ನಿಗೆ ಮೈ ಪರಚಿ ಕೊಳ್ಳುವಂತೆ ಆಯಿತು. ಒಂದು ದಿನ ಸಮಯ ನೋಡಿ ಹೇಳಿ ಬಿಟ್ಟೆ. ನೋಡು ನಾನು  ಎಲ್ಲಿಯೂ ಸಲ್ಲುವೆ. ಹೀಗಾಗಿ ಮಾತ್ರ ನನ್ನ ಇಲ್ಲಿ ವಾಪಸು ಕರೆದರು. ನಿನಗೆ ನೀನ್ ಹೇಳಿದ್ದು  ನೆನಪಿದೆಯ??? ನೀ ಮಾತ್ರ ಇಲ್ಲೇ ಇರು… ಅಂದಾಗ ಅವನ ಮುಖ ನೋಡಬೇಕಿತ್ತು. ಆಗ ನಿನಾದ ೪ ವರ್ಷದ ಕೆಳಗಿನ ಒಂದು ದಿನದ ಕಹಿ ಘಟನೆ ಹೇಳಿದಳು. ಒಂದು ದಿನ ಶುಕ್ರವಾರ, ಮದ್ಯನ್ನ ಸರಿ ಸುಮಾರು ೨ … Read more

ಕನ್ನಡದ ಬರಹಗಳನ್ನು ಹಂಚಿ ಹರಡಿ

ಹರಟೆ ಕಟ್ಟೆಯ ಪದ್ಮಜಾ: ನಾಗರತ್ನಾ ಗೋವಿಂದನ್ನವರ

ಸುಮಾ : ಏನ್ರಿ ಆಶಾ ಇಷ್ಟೊತ್ತಾಯಿತು ಇನ್ನು ಪದ್ಮಜಾರ ಸುದ್ದಿನೇ ಇಲ್ಲಾ.   ಆಶಾ : ಹೌದು ಯಾಕೊ ಏನೋ ಇಷ್ಟೊತ್ತಾಯಿತು ಇನ್ನು ಬಂದಿಲ್ಲ ಅವರಿಲ್ಲ ಅಂದ್ರ ನಮ್ಮ ಹರಟೆ ಕಟ್ಟೆಗೆ ಕಳಾನ ಇರುದುಲ್ಲ ನೋಡ್ರಿ. ಸುಮಾ : ನೀವು ಹೇಳುವುದು ಖರೇ ಅದ ಏನರ ಹೊಸ ಸುದ್ದಿ ಚರ್ಚಾ ಮಾಡಾಕ ಸಿಗ್ತದ ಅಂದ್ರ ಅದು ಅವರಿಂದಾನ ಸಿಗೋದು ಅದಕ ಮತ್ತ ನಾವೆಲ್ಲ ಅವರನ್ನ ಹರಟೆ ಕಟ್ಟೆ ಪದ್ಮಜಾ ಅಂತ ಕರೆಯುದು…. ಹಾ ಹಾ ಹಾ!  ಅಲ್ಲಿ … Read more

ಕನ್ನಡದ ಬರಹಗಳನ್ನು ಹಂಚಿ ಹರಡಿ

ಮರೆಯಾಗುತ್ತಿರುವ ಜಾನಪದ ಸೊಗಡು: ಸುಮನ್ ದೇಸಾಯಿ

  ಇಂದಿನ ದಿವಸಗಳೊಳಗ ನವ್ಯಕಾವ್ಯಗಳ ಆರ್ಭಟಗಳ ಅಡಿಯೊಳಗ ಜಾನಪದ ಕಾವ್ಯಗಳ ಸೊಗಡು ಮರಿಯಾಕ್ಕೊತ ಹೊಂಟದ. ಈ ಜನಪದ ಸಿರಿ ಹೆಚ್ಚಾಗಿ ಹಳ್ಳಿಗೊಳೊಳಗ ನೋಡಲಿಕ್ಕೆ ಸಿಗತದ. ಹಳ್ಳಿಗಳೊಳಗ ಜೀವನ ಶೂರುವಾಗೊದ ಈ ಜನಪದ ಸೊಗಡಿನ ಹಾಡುಗಳಿಂದ. ಹಳ್ಳಿ ಜನರಲ್ಲೆ ಅಕ್ಷರಜ್ಞಾನ ಇಲ್ಲಂದ್ರು ಜೀವನದ ಅನುಭವಗೊಳ ಲಾಲಿತ್ಯವನ್ನ ಪದಕಟ್ಟಿ ಹಾಡುವ ಕಲೆ ಇರ್‍ತದ. "ಮುಂಝಾನೆ ಎದ್ದು ನಾ ಯಾರನ್ನ ನೆನೆಯಲಿ" ಅಂತ ದೈವಿಕ ಭಾವನೆಯಿಂದ ದಿನ ನಿತ್ಯದ ಬದುಕಿನ ಬಂಡಿ ಎಳಿಲಿಕ್ಕೆ ಅನುವಾಗ್ತಾರ. ದೈನಂದಿನ ಕೆಲಸಗಳಿಗೆ ಜಾನಪದದ ಸಾಹಿತ್ಯದ ರೂಪ ಕೊಟ್ಟು … Read more

ಕನ್ನಡದ ಬರಹಗಳನ್ನು ಹಂಚಿ ಹರಡಿ

ಚದುರಂಗ: ಡಾ. ಗವಿಸ್ವಾಮಿ

ಇಂಟರ್ ಕಾಲೇಜ್ ಚೆಸ್ ಪಂದ್ಯಾವಳಿಯ ಅಂತಿಮ ಪಂದ್ಯ ಕೆಲವೇ ಕ್ಷಣಗಳಲ್ಲಿ ಆರಂಭವಾಗುವುದರಲ್ಲಿತ್ತು. ಆಗಲೇ ಆಸೀನನಾಗಿದ್ದ ಎದುರಾಳಿಯ ಕೈಕುಲುಕಿ ನನ್ನ ಛೇರಿನ ಮೇಲೆ ಕುಳಿತೆ. ಗಾಂಭೀರ್ಯದ ಉಳಿಯಿಂದ ಕೆತ್ತಿದಂತೆ ಕಾಣುತ್ತಿದ್ದ ಅವನ ಮುಖಚರ್ಯೆ ನನ್ನಲ್ಲಿ ದಿಗಿಲು ಹುಟ್ಟಿಸಿತು. ಸೋಲಿನ ಭಯ ಆವರಿಸಿತು. ನೀನು ಫೈನಲ್ಲಿಗೆ ತಲುಪಿರುವುದೇ ದೊಡ್ಡ ಸಾಧನೆ.. ಯುವ್ ಹ್ಯಾವ್ ನಥಿಂಗ್ ಟು ಲೂಸ್.. ಗೋ ಎಂಡ್ ಎಂಜಾಯ್ ಯುವರ್ ಗೇಮ್ ಎಂದು ನಮ್ಮ ಲೆಕ್ಚರರ್ ಹೇಳಿದ್ದು ಮನಸ್ಸಿನಲ್ಲಿತ್ತು. ಹೌದು.ನಾನು ಕಳೆದುಕೊಳ್ಳುವುದು ಏನೂ ಇರಲಿಲ್ಲ. ಇತರರನ್ನು ಮೆಚ್ಚಿಸುವುದಕ್ಕಾಗಿ … Read more

ಕನ್ನಡದ ಬರಹಗಳನ್ನು ಹಂಚಿ ಹರಡಿ

ಹೋಳಿ ಹಬ್ಬ: ಅಖಿಲೇಶ್ ಚಿಪ್ಪಳಿ

ಹೋಳಿ ಹಬ್ಬವನ್ನು ದೇಶಾದ್ಯಂತ ಸಂಭ್ರಮದಿಂದ ಆಚರಿಸುವ ಖುಷಿ ಯುವಕ-ಯುವತಿಯರಲ್ಲಿ ಕಂಡು ಬರುತ್ತಿದೆ. ಕಾಮಣ್ಣನನ್ನು ಸುಡಲು ತಯಾರಿಯಾಗಿದೆ. ಬಣ್ಣಗಳನ್ನು ತಟ್ಟೆಗಳಲ್ಲಿ ಪೇರಿಸಿಟ್ಟಾಗಿದೆ. ಹೋಳಿ ಹಬ್ಬದ ಧಾರ್ಮಿಕ ಆಯಾಮವೇನೇ ಇರಲಿ, ಸಾಂಸ್ಕ್ರತಿಕ ವೈವಿಧ್ಯವೂ ಬದಿಗಿರಲಿ. ಹೋಳಿ ಹಬ್ಬದಿಂದ ಪರಿಸರಕ್ಕೇನು ಪೆಟ್ಟು ಎಂಬುದನ್ನು ನೋಡುವುದಕ್ಕೂ ಮೊದಲು ನಕಾರಾತ್ಮಕ ಭಾವನೆಯನ್ನು ತೋರ್ಪಡಿಸುವಾಗ, ಅಹಂಕಾರವನ್ನು ಸೊಕ್ಕನ್ನು ಮುರಿಯುವ ಮನೋಗತವನ್ನು ವ್ಯಕ್ತಪಡಿಸುವಾಗ ನಾಳೆ ಇದೆ ಹೋಳಿ ಹಬ್ಬ ಎನ್ನುವುದು ರೂಡಿಯಲ್ಲಿದೆ. ಕೆಟ್ಟದ್ದನ್ನು ವೈಭವೀಕರಿಸುವ ಮನೋಭಾವವೂ ಈ ಮಾತಿನಲ್ಲಿದೆ. ಸರ್ಕಾರಗಳಿಗೆ ಭರಪೂರ ಹಣ ಬೇಕು. ಬಲ್ಲಿದರಿಂದ ಹಣ … Read more

ಕನ್ನಡದ ಬರಹಗಳನ್ನು ಹಂಚಿ ಹರಡಿ

ಪತ್ರ ಬರೆಯಲಾ: ಅನಿತಾ ನರೇಶ್ ಮಂಚಿ

ಅದೊಂದು ಕಾಲವಿತ್ತು.. ಅದನ್ನು ಕಾಯುವಿಕೆಯಲ್ಲಿನ ಪರಮ ಸುಖದ ಕಾಲ ಅಂತ ಕರೆದರೂ ಸರಿಯೇ. ಕಾಯುವಿಕೆ  ಅನಿವಾರ್ಯವಾದ ಕಾರಣ ’ತಾಳುವಿಕೆಗಿಂತನ್ಯ ತಪವು ಇಲ್ಲ’ ಎಂದುಕೊಂಡೇ ಎಲ್ಲರೂ ಆ ಸುಖವನ್ನು ಅನುಭವಿಸುತ್ತಿದ್ದರು. ಹೇಳಲಾರದ  ಚಡಪಡಿಕೆ, ಕಣ್ಣೋಟ ದೂರ ದಾರಿಯ ಕಡೆಗೇ.. ಕಾಲುಗಳು ನಿಂತಲ್ಲಿ ನಿಲಲರಿಯದೇ ಅತ್ತಿಂದಿತ್ತ ಇತ್ತಿಂದತ್ತ.. ಕಿವಿಗಳು ಅವನ ಹೆಜ್ಜೆಯ ಸಪ್ಪಳದ ಸದ್ದಿಗಾಗಿ ಹಾತೊರೆಯುತ್ತಾ.. ನಿಜಕ್ಕೂ ಅದು ರಾಮನ ಬರುವಿಕೆಗಾಗಿ ಕಾದಿರುವ  ಶಬರಿಯ ಧ್ಯಾನದಿಂದ ಕಡಿಮೆಯದ್ದೇನು ಅಗಿರಲಿಲ್ಲ.  ಏನಿರಬಹುದು ಇದು ಎಂಬ ಕುತೂಹಲವೇ..  ’ವಸಂತ ಬರೆದನು ಒಲವಿನ ಓಲೆ … Read more

ಕನ್ನಡದ ಬರಹಗಳನ್ನು ಹಂಚಿ ಹರಡಿ

ಮೂರು ಕವಿತೆಗಳು: ಅನಿಲ ತಾಳಿಕೋಟಿ, ಸ್ವರೂಪ್ ಕೆ., ಎಂ.ಎನ್. ನವೀನ್ ಕುಮಾರ್.

ಸಮಾನತೆಗಾಗಿ ರಾಮಕೃಷ್ಣ ಗರ್ಭದ ಕಲ್ಲಾದ ಬುದ್ದ ಬಸವಳಿದು ಬಿದ್ದ ಅಲ್ಲಮ ಮೆಲ್ಲನೆದ್ದು ಹೋದ ಮೋಹನದಾಸನಾಶಿಸುತ್ತ ಅಸುನೀಗಿದ ವಿವೇಕ ಬಾಬಾ ನಿಟ್ಟುಸಿರಿಟ್ಟು ನಡೆದ ಮಳೆ ಸುರಿಯಿತು ಮರುಭೂಮಿಯ ಮೇಲೆ  ಕೊಳೆ ಬೆಳೆಯಿತು ಮನುಜರರಿವಿನೊಳಗೆ ಬರಬೇಕಾದವರೆಲ್ಲಾ ಬಂದು ಹೋದರು ಕೊಡಬೇಕಾದದ್ದೆಲ್ಲಾ ಕೊಟ್ಟು ಕಂಗೆಟ್ಟರು ಎಲ್ಲರನ್ನಟ್ಟಿ ಇನ್ನೂ ನಿಂತಿಹರು ದಾರಿಗೆಟ್ಟವರು. ನ ಹನ್ಯತೆ ಅಸಮಾನತೆ  ಕೊಲ್ಲಬಂದವರೆಲ್ಲಾ ಕಾಲವಾದರೂ ಕಾಲೂರಿಕೊಂಡ ಕೊಳೆತದ ನಾತ ನೈನಂ ಛಿಂದಂತಿ ಶಸ್ತ್ರಾಣಿ ಈ ಜಾತಿಯತೆ ಬದಲಾಗಬೇಕಾದದ್ದು ಬೆಂಕಿ ಗಾಳಿ ಮಳೆಯಲ್ಲ ಮನೆ ಮನೆಗಳಲ್ಲಿ ಮುದುಡಿದ ಮನಗಳು ತೆರೆ … Read more

ಕನ್ನಡದ ಬರಹಗಳನ್ನು ಹಂಚಿ ಹರಡಿ

ತುಂಬಿದ ಕೊಡ… (ಒಂದು ನೈಜಕಥೆಯ ಸುತ್ತ): ಸಂದೇಶ್ ಎಲ್.ಎಮ್.

ಬೆಂಗಳೂರು ಎಂಬ ಕಾಂಕ್ರಿಟ್ ಕಾಡಿನಲ್ಲಿ ಹೆಚ್ಚಿನ ಮಂದಿ ರಜೆ ಅಥವಾ ವಾರಾಂತ್ಯದಲ್ಲಿ  ಕಾಲ ಕಳೆಯಬೇಕೆಂದು ಬಯಸುವುದು ಮನೆಯಲ್ಲಷ್ಟೇ. ದೈನಂದಿನ ಚಟುವಟಿಕೆಗಳಲ್ಲಿ ಟ್ರಾಫಿಕ್, ತಲೆ ಬಿಸಿ, ಕೆಲಸದ ಗಡಿಬಿಡಿ ಇತ್ಯಾದಿ ಜಂಜಾಟಗಳಿಂದ ಬೇಸತ್ತವರಿಗೆ ರಜೆ ಎಂದರೆ ಹಬ್ಬದಷ್ಟೇ ಸಂಭ್ರಮ.  ರಜೆ ಸಿಕ್ಕಮೇಲೆ ಕೇಳಬೇಕೆ? ಹೆಂಡತಿ, ಮಕ್ಕಳು, ಸ್ನೇಹಿತರು, ಉಳಿದ ಕೆಲಸಗಳು, ಅಬ್ಬಾ ಪ್ಲಾನ್ ಮಾಡುವುದೇ ಬೇಡ, ನೀರು ಕುಡಿದಷ್ಟೇ ಸಲೀಸಾಗಿ ಮುಗಿದು ಹೋಗುವಂತದ್ದು. ಇಂತಹ ಸಂತೋಷದ ದಿನಗಳಲ್ಲಿ ನಮ್ಮ ಕವಿ ಮಹಾಶಯರು ತಮ್ಮ ಚೊಚ್ಚಲ ಕೃತಿಯ ಲೋಕಾರ್ಪಣೆ ಕಾರ್ಯಕ್ರಮವನ್ನು … Read more

ಕನ್ನಡದ ಬರಹಗಳನ್ನು ಹಂಚಿ ಹರಡಿ

ಬೋಳು ತಲೆಯ ಅಪ್ಪ ಮತ್ತೆರಡು ಪ್ರಸಂಗಗಳು: ಅಮರ್ ದೀಪ್ ಪಿ.ಎಸ್.

ಆ  ಅಂಗಡಿ ತುಂಬಾ ಸಿನೆಮಾ ತಾರೆಯರ ಫೋಟೋಗಳು. ಬಗೆ ಬಗೆ ಸ್ಟೈಲ್ ನಲ್ಲಿ ನಿಂತ ಕಾರು, ಬೈಕು, ಕುದುರೆ ಹೀಗೆ ಒಂದೊಂದು ಸವಾರಿಯಲ್ಲಿ ನಿಂತ, ಓಡಿಸುವ  ಹೀರೋಗಳು. ಇನ್ನು ಹಿರೋಯಿನ್ನುಗಳ ಫೋಟೋಗಳಿಗೆ ಲೆಕ್ಕ ಇಲ್ಲ. ಅಲ್ಲಲ್ಲಿ ಹರಡಿ ಚೆಲ್ಲಾಪಿಲ್ಲಿಯಾದ ದಿನಪತ್ರಿಕೆಗಳ ತುಂಬಾ ಸಹ ಬರೀ ಸಿನೆಮಾಗಳ ಪೋಸ್ಟರ್.  ಕೆಲವೇ ಕೆಲವು ಪುಟಗಳು ಮಾತ್ರ ಪ್ರಾಪಂಚಿಕ ವಿದ್ಯಮಾನವುಳ್ಳದ್ದು ಆಗಿರುತ್ತಿದ್ದವು. ಸುತ್ತಲು ಕನ್ನಡಿಗಳ ಸಾಲು.  ಒಂದು ಮೂಲೆಯಲ್ಲಿ ಮೊದಲೆಲ್ಲ ರೇಡಿಯೋ ಟೇಪ್ ರೆಕಾರ್ಡರ್ ಇರುತ್ತಿದ್ದವು, ಇತ್ತೀಚೆಗೆ ಟಿ. ವಿ. ಗಳು. … Read more

ಕನ್ನಡದ ಬರಹಗಳನ್ನು ಹಂಚಿ ಹರಡಿ

ಹೆಸರಿಡದ ಕಥೆಯೊಂದು (ಭಾಗ 1): ಪ್ರಶಸ್ತಿ ಪಿ.

ಹೇ ಹೋಳಿಗೊಂದಿನ ರಜಾ ಹಾಕಕ್ಕೆ ಹೇಳೇ ಆ ಸೋಮು ಮತ್ತವನ ಗ್ಯಾಂಗಿಗೆ. ಅವ್ರನ್ನೆಲ್ಲಾ ನೋಡಿ ಸಿಕ್ಕಾಪಟ್ಟೆ ಸಮಯ ಆಯ್ತು. ಸಿಗೋಣಂತೆ ಬಣ್ಣದ ಹಬ್ಬದಲ್ಲಿ…ತಮ್ಮೆಂದಿನ ಪಾನಿ ಪುರಿ ಅಡ್ಡಾದಲ್ಲಿ ಫುಲ್ ಜೋಷಲ್ಲಿ ಮಾತಾಡ್ತಾ ಇದ್ಲು ಶ್ವೇತ ತನ್ನ ಗೆಳತಿ ಶಾರ್ವರಿಯೊಂದಿಗೆ. ಬೇರೆಯವ್ರು ರಜಾ ಹಾಕಿದ್ರು ಹಾಕ್ಬೋದೇನೋ ಆದ್ರೆ ಆ ಶ್ಯಾಮಂದೇ ಡೌಟು ಕಣೇ ಅಂದ್ಲು ಶಾರ್ವರಿ.ಡೌಟಾ ? ಯಾಕೆ ಅಂತ ಕಣ್ಣರಳಿಸಿದ್ಲು ಶ್ವೇತ  ಹೋಳಿಗಾ ? ಒಂದಿಡೀ ದಿನಾನಾ ಅಂತಾನೆ . ಒಂದಿನ ಕೆಲಸಕ್ಕೆ ಹೋಗ್ಬೇಡ ಅಂದ್ರೆ ಲಬೊ … Read more

ಕನ್ನಡದ ಬರಹಗಳನ್ನು ಹಂಚಿ ಹರಡಿ