ಈಗಷ್ಟೇ ತಮ್ಮ ಮೂರನೇಯ ವಿಭಿನ್ನ ಕಾದಂಬರಿ ಮೂಲಕ ಮತ್ತೊಮ್ಮೆ ಓದುಗರನ್ನು ತಲುಪಲು ಹೊರಡುತ್ತಿರುವ ಬರಹಗಾರ ಪ್ರಮೋದ ಕರಣಂ, ಕನ್ನಡದ ಭಾಷೆ ಮತ್ತು ಸೊಗಡುಗಳನ್ನು ಸೊಗಸಾಗಿ ದುಡಿಸಿಕೊಳ್ಳುವ ಕಲೆಗಾರರು. ಶಬ್ದಗಳ ಸಂಗ್ರಹವನ್ನು ದುಡಿಸಿಕೊಳ್ಳುವುದು ಅವರ ಸಾಹಿತ್ಯದಲ್ಲಿ ಎದ್ದು ಕಾಣುವ ಅಂಶ. ಪ್ರಸ್ತುತ “ಹುಟ್ಟು ಸಾವು ಎರಡರ ನಡುವೆ” ಎನ್ನುವ ತಲೆ ಬರಹದಿಂದಲೇ ಆಕರ್ಷಿಸುತ್ತಾ, ಮಧ್ಯದಲ್ಲಿ ಏನಿಲ್ಲಾ ಎಂದು ನಮ್ಮನೆಲ್ಲಾ ಕೇಳುವಂತೆ ಆಗಾಧವಾದ ವಸ್ತು ವಿನ್ಯಾಸದೊಂದಿಗೆ ಈ ಕಾದಂಬರಿ ಕಟ್ಟಿಕೊಟ್ಟಿದ್ದಾರೆ. ಮೂಲತಃ ಸಂಬಂಧಗಳ ಮತ್ತು ಸಾದೃಶ್ಯ ವರ್ಣಣೆಗಳ ಮಧ್ಯದಲ್ಲಿ ಹೆಚ್ಚಿನಂಶ ಸಂಪರ್ಕ ತಂತುವೇ ಕಾಣುವ ಬರಹಗಳ ಮಧ್ಯೆ ಪ್ರಮೋದ
ಕರಣಂ ಅವರ ನಿರಂತರವಾದ ಬರಹದ ಶೈಲಿ, ಸತತ ಓದಿಗೆ ನಮ್ಮನ್ನು ಪ್ರೇರೇಪಿಸುತ್ತದೆ. ಹಾಗಾಗಿ ಕಥಾ ಕಥಾ ವಸ್ತು, ನಿರೂಪಣೆ ಮತ್ತು ತಾಂತ್ರಿಕತೆಯ ಕಾರಣ ಓದು ಸರಾಗ.
ಇನ್ನಿಷ್ಟು ವೈಜ್ಞಾನಿಕ ಕಥಾ ಮಾದರಿಯ ಕುಸುರಿ ಕೆಲಸವನ್ನು ಮೈಗೂಡಿಸಿಕೊಂಡರೆ ಇನ್ನಿಷ್ಟು ಅದ್ಭುತವಾಗುವ ಅವಕಾಶವೂ ಇದ್ದ ಈ ಕಾದಂಬರಿ, ಓದಿಸುವಲ್ಲಿ ಹಿಂದುಳಿಯಲಾರದು ಎನ್ನುವುದೇ ಪ್ರಮುಖ ಅಂಶ. ಹಾಗಾಗಿ ಪ್ರಬುದ್ಧತೆ ಮತ್ತು ಮೌಲ್ಯದ ದೃಷ್ಟಿಯಿಂದಲೂ- “ಹುಟ್ಟು ಸಾವು ಎರಡರ ನಡುವೆ” ಕಾದಂಬರಿ ಸಹಜವಾಗಿ ಓದುಗರನ್ನು ಆಕರ್ಷಿಸುತ್ತದೆ. ವಿಭಿನ್ನ ಕಥಾ ವಸ್ತುವಿನೊಂದಿಗೆ ಅಧ್ಯಯನದ ಮಾಹಿತಿಯನ್ನೇ ಎದುರಿಗಿರಿಸಿರುವ ಲೇಖಕರು ಕನ್ನಡ ಸಾಹಿತ್ಯ ಲೋಕಕ್ಕೆ ಇನ್ನಿಷ್ಟು ಮಹತ್ವದ ಕೊಡುಗೆಗಳನ್ನು ನೀಡಲಿ ಎಂದು ಹಾರೈಸುವೆ…
–ಸಂತೋಷಕುಮಾರ ಮೆಹೆಂದಳೆ
ಲೇಖಕರು : ಪ್ರಮೋದ್ ಕರಣಂ
ಪ್ರಕಟಣೆ ವರ್ಷ : ಏಪ್ರಿಲ್ 2025
ಬೆಲೆ : ರೂ 200/- ಅಂಚೆ ವೆಚ್ಚ ಉಚಿತ
ಸಂಪರ್ಕ ಸಂಖ್ಯೆ: 9743224892