ಕನಸುಗಳ ಪೈಪೋಟಿ: ಸುನಿತಾ. ಎಸ್. ಪಾಟೀಲ

“ಬೆಳೆಯುವ ಸಿರಿ ಮೊಳಕೆಯಲ್ಲಿ ನೋಡ” ಎಂಬ ಹಿತ ನುಡಿಯಂತೆ ಮನುಷ್ಯನಾದವನು ಜೀವನದಲ್ಲಿ ಹಾಗಿರಬೇಕು ಹೀಗಿರಬೇಕು ಎಂಬ ಕನಸು ಕಾಣುವುದು ಸಹಜ. ಮನುಷ್ಯನಾದವನಿಗೆ ತಿಳುವಳಿಕೆ ಬಂದಾಗಿನಿಂದ ತನ್ನ ಕನಸುಗಳನ್ನು ಪೂರೈಸಿಕೊಳ್ಳುವುದು ಒಬ್ಬ ಸಾಧಕನ ಸ್ವತ್ತು, ಹೊರತು ಸೋಮಾರಿಯ ಸ್ವತ್ತಲ್ಲ’ ಎಂಬುದನ್ನು ಮೊದಲು ಆತ ಅರಿತಿರಬೇಕು. ಅದನ್ನು ನೆರವೇರಿಸಲು ತನ್ನ ಜೀವನದಲ್ಲಿ ಹೆಣಗಾಡಬೇಕಾಗುತ್ತದೆ. ಕನಸು ಕಾಣುವುದು ತಪ್ಪಲ್ಲ! ಆದರೆ ಆ ಕನಸನ್ನು ನೆರವೇರಿಸಲು ಅವನು ಒಳ್ಳೆಯ ದಾರಿಯನ್ನು ಹಿಡಿದು ಮುಂದೆ ಸಾಗಬೇಕಾಗುತ್ತದೆ. ಒಂದೆಡೆ ಸಮೃದ್ಧಿ ಎಡೆಗೆ ಹೆಜ್ಜೆಯಿಟ್ಟರೆ ಮತ್ತೊಂದೆಡೆ ಭ್ರಷ್ಟಾಚಾರ, … Read more

ನಾ ಕಂಡಂತೆ ಹೆಣ್ಣು: ನಿಮ್ಮೊಳಗೊಬ್ಬ ನಾರಾಯಣ

ಒಂದು ಹೆಣ್ಣು ಮಗು ಹುಟ್ಟುತ್ತಾನೆ ಒಬ್ಬ ತಾಯಿ ಮತ್ತು ಮಗು ಎರಡು ಮನಸುಗಳು ಒಟ್ಟಿಗೆ ಹುಟ್ಟುತ್ತೆ. ಹೆಣ್ಣುಮಕ್ಕಳು ಮನೆಯ ಜೀವಾಳ ಒಂದು ಹೆಣ್ಣು ಮಗು ಜನಿಸಿದೆ ಎಂದರೆ. ಪ್ರತಿದಿನವೂ ಮನೆಯಲ್ಲಿ ಜೀವಂತಿಕೆ ತುಂಬಿದಂತೆ. ಪ್ರತಿ ಹಬ್ಬವು ಸಡಗರವೇ. ಪ್ರತಿ ಸಂಭ್ರಮವು ಸಡಗರವೇ. ಹೆಣ್ಣಿನ ಮನಸ್ಸು ಸುಂದರ ಮತ್ತು ಜೀವಂತ ಒಂದು ಕುಟುಂಬವನ್ನು ತನ್ನ ಹುಟ್ಟಿನಿಂದ ತನ್ನ ಜೀವಿತದ ಕೊನೆಯವರೆಗೂ ಪ್ರೀತಿಸುವ ಕಲೆ ಹೆಣ್ಣಿಗೆ ಮಾತ್ರ ಗೊತ್ತು. ಹೆಣ್ಣು ಎಂದರೆ ಆರೈಕೆ ಮತ್ತು ಒಡನಾಟ. ಅವಳ ಕಳಕಳಿ ಮತ್ತು … Read more

ಅಡುಗೆ ಮನೆ ಅವಾಂತರಗಳು: ಶ್ರೇಯ ಕೆ. ಎಂ.

ಅಡುಗೆ ಮನೆ ಎಂದರೆ ಹೆಣ್ಣುಮಕ್ಕಳ ಆವಾಸ ಸ್ಥಾನ ಅಂತಾನೆ ಹಿಂದಿನಿಂದಲೂ ಬಂದಂತಹ ನುಡಿ, ಎಷ್ಟೇ ಉದ್ಯೋಗಸ್ಥ ಮಹಿಳೆಯಾದರೂ ಅಡುಗೆ ಮನೆ ಅನ್ನುವುದು ಅವಳ ಇನ್ನೊಬ್ಬ ಸ್ನೇಹಿತೆ. ಮಹಿಳೆ ಎಷ್ಟೇ ಉನ್ನತ ಹಂತದಲ್ಲಿ ಇದ್ದರೂ ಆಕಾಶದೆತ್ತರಕ್ಕೆ ಹಾರಾಡುತ್ತಿದ್ದರೂ ಅಡುಗೆ ಮನೆ ಎಂಬ ಮಾಯೆಗೆ ಅವಳು ಬರಲೇ ಬೇಕು, ಇಂತಹ ಅಡುಗೆ ಮನೆಯಲ್ಲಿ ನಡೆಯುವ ಅವಾಂತರಗಳ ಬಗ್ಗೆ ನೋಡೋಣ ಬನ್ನಿ. ನಾನು ಈ ಹೆಸರಿನ ಬದಲಾಗಿ ಅಡುಗೆ ಮನೆಯ ಕಲರವ ಅಂತ ಹೇಳುತ್ತೇನೆ … ಯಾಕೆಂದರೆ ನಮ್ಮ ಅಡುಗೆ ಮನೆಯಲ್ಲಿ … Read more

ನೆನಪಿನ ಗೂಡಿನಿಂದ: ದೀಪು

ಅವತ್ತು ಸ್ಕೂಲ್ ನಿಂದ ಬರತಿದ್ದಹಾಗೆ ಬ್ಯಾಗ್, ಶೂ, ಎಲ್ಲ ಎಸೆದು ಇನ್ನೇನು ಆಟ ಆಡೋಕೆ ಹೋಗ್ಬೇಕು, ಅಷ್ಟರೊಳಗೆ ಒಣ ಹುಲ್ಲು-ಕಡ್ಡಿ ಮನೆ ಮುಂದಿನ ಅಂಗಳದ ಹತ್ತಿರ ಬಿದ್ದಿದ್ದು ಗಮನಿಸಿದೆ… ಅಮ್ಮನ ಸಾಯಂಕಾಲದ ಕಸ ಗುಡಿಸಿ ನೀರು ಹಾಕಿ, ದೇವರ ಮುಂದೆ ದೀಪ ಹಚ್ಚುವ ಕಾರ್ಯಕ್ರಮ ಶುರುವಾಗಿತ್ತು ಹಾಗೆ ಆ ಹುಲ್ಲು-ಕಡ್ಡಿ ಕೂಡ ಕಸ ಸೇರಿತ್ತು. ನಾನು ಆಟ ಮುಗಿಸಿ ಮನೆಗೆ ಬಂದಾಗ ಮತ್ತಷ್ಟು ಹುಲ್ಲು-ಕಡ್ಡಿ ಜೊತೆಗೆ ಪಕ್ಷಿಯ ಒಂದೆರಡು ಪುಕ್ಕಗಳು ಕೂಡ! ನಾಜೂಕಾದ ಪುಕ್ಕಗಳನ್ನ ಹಾಗೆ ಎತ್ತಿಕೊಂಡು … Read more

ಏಪ್ರಿಲ್ ಫೂಲ್ ಅಲ್ಲ ಏಪ್ರಿಲ್ ಕೂಲ್: ಎಂ.ಎಚ್.ಮೊಕಾಶಿ

ಏಪ್ರಿಲ್ ಒಂದು ಮೂರ್ಖರ ದಿನ ಈ ಮೂರ್ಖತನದ ಲೆಕ್ಕ ಒಂದು ದಿನಕ್ಕೆ ಮುಗಿದು ಹೋಗುವ ಹಾಗಿದ್ದರೆ ಎಷ್ಟೊಂದು ಚೆನ್ನಾಗಿರುತ್ತಿತು. ಆದರೆ ಹಾಗಿಲ್ಲ ಅದು ನಿತ್ಯೋತ್ಸವ. ಅದನ್ನು ನಿದರ್ಶಿಸಲು ಮತ್ತು ನಮ್ಮನ್ನು ಆತ್ಮವಿಮರ್ಶೆಗೆ ಒಡ್ಡಿಕೊಳ್ಳಲು ಮೂರ್ಖರ ದಿನದಂದು ಆರಂಭವಾಗುವ ಈ ತಿಂಗಳು ಸಕಾಲ ಎನ್ನಬಹುದು. ಇಡೀ ತಿಂಗಳು ನಾವು ಮೂರ್ಖರಾಗುವ ನಾನಾ ರೀತಿಗಳ ಬಗ್ಗೆ ಅರ್ಥಮಾಡಿಕೊಳ್ಳುವ ಸಮಯ. ಏಪ್ರಿಲ್ ಒಂದರಂದು ಕೆಲವರ ಕಾಲೆಳೆದು ಮೂರ್ಖರನ್ನಾಗಿ ಮಾಡಲು, ಕಾಲೆಳೆಸಿಕೊಂಡು ಮೂರ್ಖರಾದ ದಿನ. ನೀವೂ ಕೂಡ ಎಷ್ಟೋ ದಿನದಿಂದ ಯಾರನ್ನೋ ಬಕ್ರಾ … Read more

ಮಲೆನಾಡಿನ ಅಡಿಕೆ ವ್ಯವಸಾಯ ಮತ್ತು ಪರಿಸ್ಥಿತಿ: ಗೀತಾ ಜಿ.ಹೆಗಡೆ, ಕಲ್ಮನೆ.

ಈ ಯುಗಾದಿ ಹಬ್ಬದ ಆಸು ಪಾಸು ನಮ್ಮ ಮಲೆನಾಡಿನ ಹಳ್ಳಿಗಳಲ್ಲಿ ಅಡಿಕೆ ಕೊಯ್ಲು ಬಲು ಜೋರು. ಎಲ್ಲರ ಮನೆ ಅಂಗಳದಲ್ಲಿ ದೊಡ್ಡ ದೊಡ್ಡ ಅಟ್ಟ ನಿರ್ಮಿಸಿ ಅದರ ತುಂಬಾ ಅಡಿಕೆಯ ಹರವು ಕಂಡರೆ ಇನ್ನು ಮನೆ ಒಳಗೆ, ಹೆಂಚಿನ ಮಾಡಿನ ಮೇಲೆ ಎಲ್ಲೆಂದರಲ್ಲಿ ಅಡಿಕೆಯದೇ ದರ್ಬಾರು. ಒಣಗಿಸಲು ಹಾಕಿದ ಗೋಟು ಬಿಸಿಲಿಗೆ ಬಾಡಿ ಮುತ್ತಜ್ಜಿ ಮುಖವಾದರೆ ಇತ್ತ ಹಸಿ ಅಡಿಕೆ ಸೊಲಿದು ಬೇಯಿಸಿ ಒಣಗಿಸಿ ತೊಗರು ಬಣ್ಣದಲ್ಲಿ ಮಿರಿ ಮಿರಿ ಮಿಂಚುತ್ತಾ ಕೆಂಪಡಿಕೆಯೆಂಬ ಹೆಸರು ಪಡೆಯುತ್ತದೆ. ಒಂದು … Read more

ಖುಷಿಗಳನ್ನ ಕಂಪೇರ್ ಮಾಡಬಾರದು: ಭಾರ್ಗವಿ ಜೋಶಿ

ಏನು ಮಾಡೋದು ಬದುಕಿನಲ್ಲಿ ಖುಷಿಗಿಂತ ಜಾಸ್ತಿ ನೋವು, ಕಷ್ಟಗಳೇ ಇವೆ. ಯಾರಾದ್ರೂ ಒಬ್ಬರಾದ್ರೂ ಪೂರ್ತಿ ಖುಷಿ ಇಂದ ಇರೋ ವ್ಯಕ್ತಿ ಇದ್ದಾರಾ? ಅನ್ನೋ ಪ್ರಶ್ನೆ ನಮ್ನನ್ನು ಕಾಡತ್ತೆ, ಆದ್ರೂ ಜಗತ್ತಲ್ಲಿ ಇರೋ ಎಲ್ರಿಗಿಂತಲೂ ಹೆಚ್ಚಿನ ಕಷ್ಟ ನಮಗೆ ಅಂತ ನಾವೆಲ್ಲ ಅಂದುಕೊಳ್ತೀವಿ. ಯಾಕೆಂದರೆ ನಮ್ಮ ಮುಂದೆ ಇರೋ ಖುಶಿಗಳನ್ನು ಅನುಭವಿಸೋ ಕಲೆ ನಮಗೆ ಗೊತ್ತಿರೋದಿಲ್ಲ. ಅದೇ ಸಮಸ್ಯೆ. ಆ ಕ್ಷಣವನ್ನು ಹಾಗೆ ಅನುಭವಿಸಿ ಬಿಡಬೇಕು. ಕಳೆದುಹೋದ ದಿನಗಳನ್ನು ಮೆಲುಕು ಹಾಕಬೇಕು, ಆದ್ರೆ ಕಂಪೇರೆ ಮಾಡಬಾರದು. ಚಿಕ್ಕವರಿದ್ದಾಗ ಎಷ್ಟು … Read more

ಕರೋನ ವಿರುದ್ಧ ಗೆದ್ದು ಮತ್ತೊಮ್ಮೆ ಚಪ್ಪಾಳೆ ತಟ್ಟೋಣ: ವೆಂಕಟೇಶ ಚಾಗಿ

ಇತ್ತೀಚಿನ ದಿನಗಳಲ್ಲಿ ಎಲ್ಲೆಡೆಯೂ ವ್ಯಾಪಕವಾಗಿ ಕೇಳಿಬರುತ್ತಿರುವ ವಿಷಯ ಕರೋನ ಕುರಿತು. ಕರೋನ ನಿಜವಾಗಿಯೂ ಒಂದು ಸಾಂಕ್ರಾಮಿಕ ಸೋಂಕಾಗಿ ಜಗತ್ತಿನ ತುಂಬಾ ಪಸರಿಸುತ್ತಿದೆ. ಚೀನಾದ ವುಹಾನ್ ನಲ್ಲಿ ಮೊಟ್ಟ ಮೊದಲು ಕಾಣಿಸಿಕೊಂಡ ಈ ವೈರಸ್, ತುಂಬಾ ಅಪಾಯಕಾರಿಯಾಗಿ ಕಂಡದ್ದು ರೋಗಕ್ಕೆ ತುತ್ತಾಗಿ ಸಾವಿಗೀಡಾಗಿರುವ ಜನರ ಸಂಖ್ಯೆಯಿಂದಲೇ. ಜಾಗತಿಕವಾಗಿ ಹಿಂದೆ ಅನೇಕ ವೈರಸ್ಗಳನ್ನು ಕಂಡಿದ್ದ ಚೀನಾ ಕರೋನಾದ ವಿಷಯದಲ್ಲಿ ಜಾಗೃತಿ ಹಾಗೂ ಅದರ ತೀವ್ರತೆಯ ಬಗ್ಗೆ ಜಗತ್ತಿಗೆ ಮನವರಿಕೆ ಮಾಡಲು ವಿಳಂಬ ಧೋರಣೆ ಅನುಸರಿಸಿದೆ ಎಂಬುದು ಸ್ಪಷ್ಟ. ಚೀನಾದಲ್ಲಿ ಸಾವಿನ … Read more

ಮಾನಸಿಕವಾಗಿ ಸಿದ್ದರಾಗಿ: ಸಿಂಧು ಭಾರ್ಗವ್ ಬೆಂಗಳೂರು

ಸನ್ನಿವೇಶ ೧: ಮಾಲತಿ ಮದುವೆಯಾಗಿ ಮೂರು ತಿಂಗಳೊಳಗೆ ಹೆತ್ತವರಿಗೆ ಸಿಹಿಸುದ್ದಿ ತಲುಪಿಸುವ ಬದಲು ತವರು ಮನೆಯವರು ಮದುವೆ ದಿನ ನೀಡಿದ ಬಳುವಳಿಯ ಸೂಟ್ ಕೇಸ್ ಅನ್ನು ಹಿಡಿದುಕೊಂಡು ತಾಯಿ ಎದುರು ನಿಂತಿದ್ದಳು‌. ದಿಗ್ಭ್ರಮೆಗೊಂಡ ತಾಯಿ, ಅವಳನ್ನು ಕೂರಿಸಿ ನಿಧಾನವಾಗಿ ವಿಚಾರಿಸಿ ಕೇಳಿದಾಗ, ಮಾಲತಿ ತನ್ನ ನೋವಿನ ಕಥೆಯನ್ನು ಒಂದೊಂದಾಗಿ ಬಿಡಿಸಿ ಹೇಳತೊಡಗಿದಳು‌ .ಮರುಗಟ್ಟಿದ್ದ ನೋವನ್ನೆಲ್ಲ ಜೋರಾಗಿ ಅತ್ತು ಕಣ್ಣೀರು ಸುರಿಸಿ ಮನಸ್ಸಿನ ಭಾರವನ್ನು ಕಡಿಮೆ ಮಾಡಿಕೊಂಡಳು. ಸಿಟ್ ಔಟ್ ನಲ್ಲಿ ಕೂತಿದ್ದ ತಂದೆಗೆ ತಲೆಯ ಮೇಲೆ ಬಂಡೆಕಲ್ಲು‌ … Read more

ಉತ್ತರ-ಅನುತ್ತರ-ನಿರುತ್ತರಗಳ ಜೊತೆಗೊಂದು ಪ್ರತ್ಯುತ್ತರ: ಹೆಚ್ ಎನ್ ಮಂಜುರಾಜ್, ಮೈಸೂರು

ಎಲ್ಲ ಪ್ರಶ್ನೆಗಳಿಗೂ ಉತ್ತರವಿಲ್ಲವೆಂಬುದು ಗೊತ್ತಿದ್ದರೂ ಪ್ರಶ್ನೆಗಳನ್ನು ಕೇಳುತ್ತಲೇ ಇರುತ್ತೇವೆ. ನನ್ನ ಮಟ್ಟಿಗೆ ಪ್ರಶ್ನೆಗಳನ್ನು ಇನ್ನೊಬ್ಬರಿಗೆ ಕೇಳುವುದಲ್ಲ; ನಮ್ಮಲ್ಲಿಯೇ ಕೇಳಿಕೊಳ್ಳುವುದು ಹೆಚ್ಚು ಸರಿ. ಆಗ ಪ್ರಶ್ನೋತ್ತರಗಳೆರಡೂ ನಮ್ಮವೇ ಆಗಿರುತ್ತವೆ. ಇದರಿಂದ ಮೊದಲಿಗಿಂತ ಹೆಚ್ಚು ‘ಎಚ್ಚರ’ದ ಸ್ಥಿತಿಯನ್ನು ಹೊಂದಬಹುದು. ಇರಲಿ. ಆಚಾರ್ಯ ರಜನೀಶರು ಚಾಂಗ್ ತ್ಸು ಕುರಿತು ಕೊಟ್ಟ ಡಿಸ್‍ಕೋರ್ಸ್- ಪುಸ್ತಕದ ಹೆಸರು ಶೂನ್ಯ ನಾವೆ-ಇದರಲ್ಲೊಂದು ಪ್ರಸಂಗ ಉಲ್ಲೇಖಿತವಾಗಿದೆ: ನಾವೆಯೊಂದರಲ್ಲಿ ಕುಳಿತು ಒಬ್ಬರೇ ವಿಹರಿಸುತ್ತಿರುವಾಗ, ಹಿಂದಿನಿಂದ ಇನ್ನೊಂದು ನಾವೆ ಏಕ್‍ದಂ ಡಿಕ್ಕಿ ಹೊಡೆದಾಗ ಮನದಲ್ಲುದಿಸುವ ಭಾವ: ವ್ಯಗ್ರತೆ ಮತ್ತು ಅಸಹನೆ. … Read more

ನಮ್ಮಲ್ಲಿರುವ ಮೌಢ್ಯತೆ: ಷೌಕತ್‌ ಅಲಿ, ಮದ್ದೂರು

ವಿಜ್ಞಾನಯುಗ, ಕಂಪ್ಯೂಟರ್‍ಯುಗ, ಹೊಸ ಹೊಸ ಆವಿಷ್ಕಾರಗಳ ಹೊಸ ಮಾಧ್ಯಮಗಳ ಪರಿಚಯ, ದಿನ ನಿತ್ಯ ಅನೇಕ ಸುದ್ದಿಗಳು ನಮ್ಮನ್ನು ನಮ್ಮ ಬುದ್ಧಿಶಕ್ತಿಯನ್ನು ಸೇರಿ, ಮಾನವ, ಯಂತ್ರ ಮಾನವನ್ನಾಗಿಸಿದ್ದೇವೆ. ನಾವು 21ನೇ ಶತಮಾನಕ್ಕೆ ಸಮೀಪಿಸುತ್ತಿದ್ದು ಈ ಯುಗ ಯುಗಾಂತರದಲ್ಲಿ ನಾವು ನಮ್ಮೊಡನೆ ಒಂದು ಗಂಟು ಉಳಿಸಿಕೊಂಡೇ ಬಂದಿದ್ದೇವೆ. ಆ ಗಂಟು ಬೇರೇನಲ್ಲ ನಮ್ಮಲ್ಲಿರುವ ಮೌಢ್ಯತೆ, ಮೂಢನಂಬಿಕೆಗಳಿಂದ ನಮ್ಮ ಬದುಕಿನ ಆಚಾರ ವಿಚಾರ ಅಳತೆ ಮಾಡುವುದು, ಭಯದ ವಾತಾವರಣ ಸೃಷ್ಟಿಕೊಳ್ಳುವುದು. ಬದುಕಿನ ವಿನಾಶಗೊಳಿಸುವುದು ಈ ಎಲ್ಲಾ ಅಂಶಗಳು ನಮ್ಮ ಕಲ್ಪನೆಯಿಂದ ಬಂದದ್ದು … Read more

ಜಗವನ್ನೆ ಒಂದು ತುರ್ತು ನಿಗಾ ಘಟಕವನ್ನಾಗಿಸಿದ ಧನದಾಹಿಗಳು: ಎಂ.ಎಲ್‌.ನರಸಿಂಹಮೂರ್ತಿ

ಪರಿಸರದ ಎಚ್ಚರಿಕೆ ಮಳೆಗಾಲದಲ್ಲಿ ಪ್ರವಾಹಗಳು, ಬೆಟ್ಟಗುಡ್ಡ ಕುಸಿತಗಳ ಮೂಲಕ ನೀಡಿತ್ತು. ಆ ಸಂದರ್ಭದಲ್ಲಿ ನಾವೆಲ್ಲ ಮಾನವೀಯತೆಯ ಮಹಾ ಸಾಗರವನ್ನೆ ಹರಿಸಿದೆವು. ನೆರೆ ಸಂತ್ರಸ್ತರಿಗೆ ಆಹಾರ,ಬಟ್ಟೆ, ವಸತಿ ಕೊಡಿಸುವಲ್ಲಿ ಕೈಯಲ್ಲಾದ ಮಟ್ಟಿಗೆ ಜೊತೆಯಾದೆವು. ಆದರೆ ಬುದ್ದಿ ಕಲಿಯದ ನಾವು ಮತ್ತೆ ಮತ್ತೆ ಅದೆ ಕೃತ್ಯಗಳನ್ನು ಮುಂದುವರೆಸುತ್ತಾ ಪರಿಸರದ ಮೇಲಿನ ಹಲ್ಲೆ ಮಾತ್ರ ನಿಲ್ಲಿಸಲಿಲ್ಲ. ಈಗ ಚಳಿಯಿಂದ ಬೇಸಿಗೆ‌ ಕಾಲಕ್ಕೆ ಬಂದೆವು. ಕೊರೋನಾದಂತಹ‌ ಮಾರಕ ಸೋಂಕುಗಳು ಬಂದಾಗಲೂ ಪರಿಸರದ ಬಗ್ಗೆ ಯಾವೊಬ್ಬನೂ‌ ಚಕಾರ ಎತ್ತುತ್ತಿಲ್ಲ. ಬದಲಾಗಿ ಕೈ ತೊಳಿ, ಬಾಯಿ … Read more

ಹೋಲಿಕೆಗಳು ಮಕ್ಕಳನ್ನೇ ಆಗಲಿ ಮನಸ್ಸುಗಳನ್ನೇ ಆಗಲಿ ಸೋಲಿಸಿ ಬಿಡುತ್ತವೆ.: ನಿಮ್ಮೊಳಗೊಬ್ಬ ನಾರಾಯಣ

ನೋಡು ಅವರು ಹೇಗಿದ್ದಾರೆ ಈ ಮಾತು ಉದಾಹರಣೆಗೆ ಆದರೆ ಸ್ವಲ್ಪ ಮಟ್ಟಿಗೆ ಸರಿ ಆದರೆ ಪದೇಪದೇ ಇದೆ ಒಂದು ಆಯುಧವಾದರೆ. ನಾವು ನಮ್ಮಲ್ಲಿರುವ ಬಲವನ್ನು ಗುರುತಿಸಿಕೊಳ್ಳಲು ಸಾಧ್ಯವಾಗುವುದಿಲ್ಲ. ಪ್ರತಿಯೊಂದು ಕಲ್ಲಿನಲ್ಲಿ ಒಂದು ವೈಶಿಷ್ಟ್ಯ ಇರುತ್ತದೆ. ಅದನ್ನು ಗುರುತಿಸುವ ಜಾಣ್ಮೆ ನಮಗಿರಬೇಕು. ಶಾಲೆಯಲ್ಲಿ ಓದಿ ಉತ್ತಮ ಅಂಕಗಳನ್ನು ಗಳಿಸುವುದು ಮಕ್ಕಳ ಕರ್ತವ್ಯ. ಹಾಗೆಯೇ ಕೆಲಸದಲ್ಲಿ ಉನ್ನತ ಮಟ್ಟ ತಲುಪಿ ಉತ್ತಮ ಸಂಪಾದನೆ ಮಾಡುವುದು ನಮ್ಮ ಕರ್ತವ್ಯ. ಆದರೆ ಆ ಕ್ಷೇತ್ರಗಳಲ್ಲಿ ಉತ್ತಮ ಮಟ್ಟ ತಲುಪಬೇಕೆಂಬ ನಿರೀಕ್ಷೆ ನಮ್ಮ ಒತ್ತಡಗಳಿಂದಾಗಿ … Read more

ಹಿರಿಯರು ಹೇಳಿಕೊಟ್ಟ ನಾವು ಬಿಟ್ಟ ಆಚರಣೆಗಳು: ಶೀಲಾ. ಎಸ್. ಕೆ.

ಅಜ್ಜಿ ಹೇಳಿಕೊಟ್ಟ ಮಾತದು, ನಾವು ಕಲಿಯಲಿಲ್ಲ. ನಮ್ಮ ಹಿರಿಯರ ಮಾತಿನಲ್ಲಿ ಉದ್ದೇಶ, ಪ್ರಯೋಜನ ಹುಡಿಕಿದ ನಾವು, ಹಿಂದೆ ಮುಂದೆ ನೋಡದೆ ಉದ್ದೇಶ, ಪ್ರಯೋಜನ ಕೇಳದೆ, ತಿಳಿಯದೆ ಹೊರಗಡೆ ಅಂತರ್ರಾಷ್ಟ್ರೀಯ ಆಚರಣೆಗಳನ್ನು ಅಪ್ಪಿಕೊಂಡೆವು . ನಿಜ, ನಮ್ಮ ಹಿರಿಯರು ಅವರ ಆಚರಣೆಗೆ ಪ್ರಯೋಜನ, ಉದ್ದೇಶಗಳನ್ನು ಬರೆದಿಡಲು ಅಥವಾ ಮುಂದಿನ ಪೀಳಿಗೆಗೆ ಹೇಳಲು ಸೋತರು ಆದ್ರೆ ತಪ್ಪಾಗಿರಲಿಲ್ಲ. ಈಗ ಕೊರೋನ ಎಂಬ ವೈರಸ್‌ ಪ್ರಪಂಚ ನುಂಗಲಾರಂಭಿಸಿದೆ. ಪ್ರಪಂಚ ನಮ್ಮ ಹಿರಿಯರ ಆಚರಣೆ, ಅನುಸರಣೆಗಳನ್ನು ಅಪ್ಪುತ್ತಿವೆ. ಈಗ ಬೇರೆಯವರು ಹಿಂದಿನ ಆಚರಣೆಗಳತ್ತ … Read more

ಬರವಣಿಗೆ: ಭಾರ್ಗವಿ ಜೋಶಿ

ಕಲ್ಪನೆ,  ವಾಸ್ತವ ಯಾವುದೇ ಇರಲಿ ಅದಕ್ಕೆ ಅಕ್ಷರ ರೂಪ ಕೊಡುವುದೇ ಬರಹ. ಮನದ ಗೂಡಲ್ಲಿ ಒಡಮೂಡಿ,  ರೆಕ್ಕೆ ಕಟ್ಟಿ ಹಾರ ಬಯಸುವ ಪ್ರತಿ ಭಾವನೆಗಳು ಒಂದು ಬರಹವೇ.  ಹಾಗಾದರೆ ಯಾರು ಏನಾದರು ಗೀಚಿದರು ಅದು ಬರಹ ಆಗುತ್ತದಾ ಅನ್ನುವ ಪ್ರಶ್ನೆ ಎಲ್ಲರನ್ನು ಕಾಡುತ್ತದೆ.  ನನ್ನ ಅನಿಸಿಕೆ  ಖಂಡಿತವಾಗಿಯೂ ಹೌದು.  ಯಾಕೆಂದರೆ ಬರಹಗಾರರ ಪ್ರೀತಿ,  ಶ್ರದ್ಧೆ ಅಲ್ಲಿ ಅಡಕವಾಗಿರುತ್ತದೆ.  ಎಲ್ಲರು ಒಮ್ಮೆಲೆ ಉತ್ತಮ ಬರಹಗಾರರು,  ಪ್ರಶಸ್ತಿ ವಿಜೇತರು ಆಗಲು ಸಾಧ್ಯವಿಲ್ಲ.  ಎಲ್ಲವು ಅ, ಆ, ಇ, ಈ ಇಂದಲೇ ಆರಂಭವಾಗಬೇಕು.  ಬರಹ … Read more

ವಾಹನದ ವೇಗ ಮತ್ತು ಮಿತಿ: ಗಾಯತ್ರಿ ನಾರಾಯಣ ಅಡಿಗ

‘ಅವಸರವೇ ಅಪಾಯಕ್ಕೆ ಕಾರಣ ‘ ಎಂಬ ಮಾತೊಂದಿದೆ. ಪ್ರತಿಯೊಂದು ವಿಷಯದಲ್ಲಿಯೂ ಈ ಮಾತು ನೂರಕ್ಕೆ ನೂರು ಸತ್ಯ. ಈ ಆಧುನಿಕ ಯುಗದಲ್ಲಿ ಪ್ರತಿಯೊಬ್ಬರೂ ಕನಿಷ್ಠ ಒಂದಾದರೂ ವಾಹನವನ್ನು ಹೊಂದಿರುತ್ತಾರೆ. ಒಂದೆಡೆ ವಾಹನಗಳಿಂದ ನಮಗೆ ಎಷ್ಟು ಅನುಕೂಲಗಳಿವೆಯೋ  ಇನ್ನೊಂದೆಡೆ ಆಷ್ಟೇ ಅನನುಕೂಲಗಳಿವೆ. ಅತಿಯಾದರೆ ಅಮೃತವೂ ವಿಷ ಎಂಬ ಮಾತೊಂದು ಇಲ್ಲಿ ನೆನಪಿಗೆ ಬರುತ್ತದೆ. ಪಟ್ಟಣ ಮತ್ತು ನಗರ ಪ್ರದೇಶಗಳಲ್ಲಿ ವಾಹನಗಳ ಸಂಖ್ಯೆ ಹೆಚ್ಚಾಗಿದ್ದು, ನಮ್ಮ ವಾಹನದ ವೇಗಕ್ಕೆ ಮಿತಿ ಇಲ್ಲದ ಕಾರಣ ಅಪಘಾತಗಳು ಹೆಚ್ಚು ಸಂಭವಿಸುತ್ತದೆ. ಇಂದಿನ ಯುವಕರಿಗಂತೂ ಇರುವ … Read more

ಆಧ್ಯಾತ್ಮಿಕತೆಯ ಆಧುನಿಕ ನೆಲೆ……: ಪ್ರವೀಣ್.ಪಿ

ಆಧುನಿಕತೆಯ ಸುಳಿಯಲ್ಲಿ ಸಿಲುಕಿರುವ ಇಂದಿನ ಸಮಾಜ ವಿಭಿನ್ನತೆಯೊಂದಿಗೆ ಹೊಸ ಬದುಕಿಗೆ ತೆರದುಕೊಳ್ಳಲು ಹವಣಿಸುತ್ತಿದೆ. ಬದಲಾದ ಸಾಮಾಜಿಕ ವ್ಯವಸ್ಥೆಯಲ್ಲಿ ಹೊಸತನದ ಅಲೆಯೊಂದು ಜನರನ್ನ ಬೇರೆ ದಿಕ್ಕಿಗೆ ಸೆಳೆಯುತ್ತಿದೆ. ಮಾರ್ಡನಿಟಿಗೆ ಮಾರುಹೋದ ಜನರು ತಮ್ಮ ಆಲೋಚನೆ ಹಾಗೂ ಜೀವನ ಶೈಲಿಯನ್ನು ಬದಲಾಯಿಸಿಕೊಳ್ಳಲು ಆರಂಭಿಸಿದ್ದಾರೆ. ಪ್ರೀತಿಯು ಆಧುನಿಕತೆಯ ನೆಲೆಯಲ್ಲಿ ನಡೆಯುತ್ತಿದೆ. ಇದರಲ್ಲಿ ಆಧ್ಯಾತ್ಮಿಕ ಕ್ಷೇತ್ರವು ಹೊರತಾಗಿಲ್ಲ. ಆಧ್ಯಾತ್ಮವು ಇಂದು ಉದ್ಯಮಶೀಲತೆಯ ತಳಹದಿಯಲ್ಲಿ ಸಾಗುತ್ತಿದೆ. ಆಚಾರ, ಸಂಪ್ರದಾಯ, ಪೂಜೆ, ಪುನಸ್ಕಾರ, ಸಂಸ್ಕೃತಿ ಎಲ್ಲವೂ ಆಧುನೀಕರಣದೊಂದಿಗೆ ಬೆರೆತು ಹೋಗಿದೆ. ಇದರ ಪರಿಣಾಮ ಹುಡುಗರಲ್ಲಿ ಬೇರೊಂದು … Read more

ನೆನಪಿನಂಗಳದಲ್ಲಿ ಒಂದು ಪುಟ್ಟ ವಾಕ್: ಭಾರ್ಗವಿ ಜೋಶಿ

ಜೀವನದಲ್ಲಿ ನೆನಪುಗಳು ಅಂದರೇನೇ ಸುಂದರ. ಆ ಕ್ಷಣಕ್ಕೆ ಅತಿಯಾದ ನೋವು ಕೊಟ್ಟ ವಿಷಯಗಳು ಸಹ ಇವತ್ತಿಗೆ ನಗು ತರಿಸುತ್ತವೆ. ಅದಕ್ಕೆ ನೆನಪುಗಳು ಅನ್ನೋದು. ಈ ರೀತಿಯ ನೆನಪುಗಳ ಆಗರವೇ ನಮ್ಮ ಬಾಲ್ಯ. ಆ ಬಾಲ್ಯದ ನೆನಪುಗಳೇ ನಮ್ಮ ಇಂದಿನ ಈ ಬಡಿದಾಟದ ಬದುಕಿಗೆ ಆಕ್ಸಿಜನ್ ಅಂದ್ರೆ ತಪ್ಪಾಗಲಾರದು. ಅಂತಹ ಬಾಲ್ಯದ ನೆನಪಿನಂಗಳದಲ್ಲಿ ಒಂದು ಪುಟ್ಟ ವಾಕ್ ಹೋಗೋಣ.. ಕಳೆದು ಹೋದ ದಿನವೇ ಬಾಲ್ಯ ಮರಳಿ ಬರದ ಬದುಕೇ ಬಾಲ್ಯ ಬಿದ್ದ ಗಾಯವು ಕಲೆಯಾಗಿ ನೋವುಗಳೆಲ್ಲ ನಲಿವಾಗಿ ಮಾಸದ … Read more

ನಾ ಕಂಡ ನಮ್ಮ ನಡುವಿನ ವಿಜ್ಞಾನದ ಸಂಪನ್ಮೂಲ ವ್ಯಕ್ತಿಗಳು: ಎಂ.ಎಲ್.ನರಸಿಂಹಮೂರ್ತಿ, ಮಾಡಪ್ಪಲ್ಲಿ

ಫೆ.೨೦.೨೦೧೬ ರಂದು ಬಾಗೇಪಲ್ಲಿಯ ಗಂಗಮ್ಮ ಗುಡಿ ರಸ್ತೆಯ ಶ್ರೀನಿವಾಸ್ ಮೆಸ್ ಹಿಂಭಾದಲ್ಲಿನ ಶ್ರೀ ವಾಸುದೇವ ಮೂರ್ತಿ ಎಂಬುವರ ಮನೆಗೆ ತೆರಳಿದ್ದೆ. ಏಕೆಂದರೆ 2013ರಲ್ಲಿ ನ್ಯಾಷನಲ್ ಕಾಲೇಜಿನ ನೆಚ್ಚಿನ ಗುರುಗಳಾದ ಬಿ.ಪಿ.ವಿ ಸರ್ ಅವರು ವಾಸುದೇವ ಸರ್ ಅವರ ಕುರಿತು ಒಂದಿಷ್ಟು ವಿಷಯ ತಿಳಿಸಿದ್ದರು. ನಂತರ ಅದೇವರ್ಷ ಜೂನ್ ತಿಂಗಳಲ್ಲಿ ಖುದ್ದಾಗಿ ಗಂಗಮ್ಮ ಗುಡಿ ರಸ್ತೆಯಲ್ಲಿನ ಅವರ ಮನೆಗೆ ಬೇಟಿ ನೀಡಿದಾಗ ಅವರು ಮನೆಯಲ್ಲಿರಲಿಲ್ಲ. ಕೆಲ ದಿನಗಳ ನಂತರ ಅವರ ಮನೆಗೆ ಹೋದಾಗ ಹಳೇ ತಾಮ್ರದ ತಂತಿಯಿಂದ ಯಾವುದೋ … Read more

ಅವ್ವ ಮತ್ತು ಅಂಗಿ: ಮಹಾಂತೇಶ್. ಯರಗಟ್ಟಿ

ಅಂಗಿ ಅಂದ್ರೇ ಮಾನ ಮುಚ್ಚುತ್ತೆ, ಅಂಗಿ ಅಂದ್ರೇ ನಮ್ಮ ಅಂದ ಹೆಚ್ಚೀಸುತ್ತೆ ,ಅಂಗಿಗೆ ಹಲವಾರು ಬಣ್ಣ, ಅಂಗಿಗೆ ಹಲವಾರು ಗುಣಧರ್ಮ ಇದು ಕೊಳ್ಳುವವನ ಆರ್ಥಿಕತೆಯ ಮೇಲಿನ ಅವಲಂಬನೆ. ಹೀಗೆ ಅಂಗಿಯ ವಿಚಾರ ಬಂದಾಗಲೆಲ್ಲಾ ಹೀಗೆಲ್ಲ ಹೇಳಬಹುದು. ಬಹುಶಃ ನಾನ ಚಿಕ್ಕವನಿದ್ದಾಗಿನಿಂದ ಕೇಳಿದ್ದು ‘ಅ’ ಅಂದ್ರೇ ಅವ್ವ ‘ಅಂ’ ಅಂದ್ರೇ ಅಂಗಿ, ಸರ್ಕಾರಿ ಕನ್ನಡ ಪಾಠ ಶಾಲೆಯ ಪಾಠ ನಿಜ ನೋಡಿ, ಯಾಕಂದ್ರೇ ಕನ್ನಡ ಶಾಲೆಗಳು ಬದುಕುವ ಕಲೆಗಳನ್ನೂ ಕಲಿಸುತ್ತವೆ. ಅವ್ವ ಮತ್ತು ಅಂಗಿ ಯಾವತ್ತು ನಮ್ಮ ಮಾನ … Read more