ಅಪ್ಪ ಸತ್ತಾಗ: ಅಖಿಲೇಶ್ ಚಿಪ್ಪಳಿ

80 ವರ್ಷಗಳ ಹಿಂದೆ ಅಳುತ್ತಲೇ ಭೂಮಿಗೆ ಬಂದ ಮಗುವಿಗೆ ತಿಳುವಳಿಕೆ ಬರುವ ಮೊದಲೇ ತನ್ನ ತಂದೆಯನ್ನು ಕಳೆದುಕೊಂಡಿತ್ತು. ತಂದೆಯನ್ನು ನೋಡಿದ ನೆನಪು ಅದಕ್ಕಿರಲಿಲ್ಲ. ಕಡುಬಡತನದ ಆ ಮನೆಯಲ್ಲಿ ಮನೆ ತುಂಬಾ ಮಕ್ಕಳು ಎಲ್ಲರೂ ಸೇರಿದರೆ ಬರೋಬ್ಬರಿ 8 ಮಕ್ಕಳು ಹಾಗೂ ಎರಡು ವಿಧವೆಯರು! ಊರಲ್ಲಿ ಶಾಲೆಯಿದೆ, ಓದಲಿಕ್ಕೆ ಕಷ್ಟವಿದೆ. ಅಂತೂ-ಇಂತೂ ಕಷ್ಟಪಟ್ಟು ಆ ಮಗು 7ನೇ ತರಗತಿಯವರೆಗೆ ಕಲಿಯಿತು. ಹೆಚ್ಚು ಕನ್ನಡ ಹಾಗೂ ಸ್ವಲ್ಪ ಇಂಗ್ಲೀಷು. ಮತ್ತೆ ಬೇಸಾಯಕ್ಕಿಳಿದ ಆ ಯುವಕ ನಿರಂತರವಾಗಿ ದುಡಿಯುತ್ತಲೇ ಇದ್ದ. ಮಧ್ಯದಲ್ಲಿ … Read more

ಲಂಕೇಶ್ ಮತ್ತು ಮನಶಾಸ್ತ್ರ: ಶ್ರೀಮಂತ್ ಯನಗುಂಟಿ

ಪಿ.ಲಂಕೇಶ್. ಕನ್ನಡ ಸಾಹಿತ್ಯದಲ್ಲಿ ತುಂಬಾ ಪರಿಚಿತ ಮತ್ತುಆತ್ಮಿಯ ಹೆಸರು. ಈಗಾಗಲೇ ಲಂಕೇಶ್‍ರ ಬದುಕು ಮತ್ತು ಬರಹದ ಬಗ್ಗೆ ಅನೇಕ ಬರಹಗಾರರು ಕೃತಿಗಳನ್ನು ರಚಿಸಿ ಬಿಡುಗಡೆ ಮಾಡಿದ್ದಾರೆ. ಅಷ್ಟೇ ಏಕೆ ಸ್ವತಃ ಲಂಕೇಶರೇ ತಮ್ಮ ಆತ್ಮಚರಿತ್ರೆ "ಹುಳಿಮಾವಿನ ಮರ"ವನ್ನು ನಮ್ಮಕೈಗಿಟ್ಟು ಹೋಗಿದ್ದಾರೆ. ಆದರೆ ಒಂದು ಮಾತ್ರ ನಿಜ. ಆ ಬರಹಗಳನ್ನೆಲ್ಲ ಮತ್ತೆ ಮತ್ತೆಓದಿದ ಹಾಗೆ ಮತ್ತೆ ಮತ್ತೆ ಲಂಕೇಶರ ವಿಭಿನ್ನ ಮನಸ್ಥಿತಿಗಳ ಅರಿವು ಗಾಢವಾಗುತ್ತಾ ಹೋಗುತ್ತದೆ. ಮೊದಲಿಗೆ ಓದಿದಾಗ ಲಂಕೇಶ ಒಬ್ಬ ಉತ್ತಮ ವಿಚಾರವಾದಿ ಹಾಗೂ ಸಮಾಜವಾದಿ ಎನಿಸಬಹುದು. … Read more

ಸಕಲ ಕುಲತಿಲಕ ಶ್ರೀಕನಕದಾಸರು!: ಹೊರಾ.ಪರಮೇಶ್ ಹೊಡೇನೂರು

ಶ್ರೀ ಕನಕದಾಸರ ಮೂಲ ಹೆಸರು ತಿಮ್ಮಪ್ಪ ನಾಯಕ. ಕರ್ನಾಟಕದಲ್ಲಿ ೧೫-೧೬ ನೆಯ ಶತಮಾನಗಳಲ್ಲಿ ಬಹಳ ಜನಪ್ರಿಯವಾದ ಭಕ್ತಿ ಪಂಥದ ಮುಖ್ಯ ಹರಿದಾಸರಲ್ಲಿ ಕನಕದಾಸರು ದಾಸ ಶ್ರೇಷ್ಠರೆಂದು ಇಂದಿಗೂ ಜನಮಾನಸದಲ್ಲಿ ಉಳಿದಿದ್ದಾರೆ. ದಾಸ ಪರಂಪರೆಯಲ್ಲಿ ಬರುವ 250ಕ್ಕೂ ಹೆಚ್ಚು ದಾಸರಲ್ಲಿ ಕನಕದಾಸರೊಬ್ಬರೇ ಶೂದ್ರದಾಸರು. ಹಾಗೆಯೇ ಕನ್ನಡ ಭಾಷೆಯ ಪ್ರಸಿದ್ಧ ಕೀರ್ತನಕಾರರು, ಮತ್ತು ಪುರಂದರದಾಸರೊ೦ದಿಗೆ ಕರ್ನಾಟಕ ಸಂಗೀತದ ಮೂಲಭೂತ ಸಿದ್ಧಾಂತಗಳಿಗೆ ಗಣನೀಯ ಕಾಣಿಕೆಯನ್ನಿತ್ತವರು. ಕನಕದಾಸರು ಮತ್ತು ಪುರಂದರದಾಸರನ್ನು ಕರ್ನಾಟಕ ಕೀರ್ತನ ಸಾಹಿತ್ಯದ "ಅಶ್ವಿನಿ ದೇವತೆ"ಗಳೆಂದು ಬಣ್ಣಿಸಲಾಗಿದೆ. ಕನಕದಾಸರು ಆರಂಭದಲ್ಲಿ ದಂಡನಾಯಕರಾಗಿದ್ದು … Read more

ಪಂಜು ಕಾವ್ಯಧಾರೆ

ಸಂಕೋಲೆಯೊಳಗಿನ ನೀನು! ನೀನು ಬಂದಾಗ ನಿಜವಾಗಿ ಬೆಳದಿಂಗಳು ಹಾಲಿನಂತೆ ಸುರಿದಿತ್ತು ನೋಡಿದ್ದಷ್ಟೇ ಭಾಗ್ಯ! ಅದನ್ನು ತುಂಬಿಡಲು ಯಾವ  ಬಟ್ಟಲಿಗೂ ಸಾದ್ಯವಾಗಿರಲಿಲ್ಲ ನಿನ್ನ ಕಣ್ಣುಗಳೊಳಗೆ ಅಂತಹುದೇ  ಬೆಳಕಿರಬಹುದೆಂದು ಕಾದಿದ್ದೇ ಬಂತು: ಒಂದು ತಣ್ಣನೆಯ ಸಂಜೆ ನಿನ್ನ ಕಣ್ಣುಗಳಲ್ಲಿ ಕಣ್ಣಿಟ್ಟು ನೋಡಿ ಬೆವೆತು ಹೋದೆ ನಿನ್ನ ಕಣ್ಣುಗಳ ತುಂಬ ಬೆಂಕಿ ಕೆನ್ನಾಲಿಗೆಗಳು ನಿನ್ನ ತುಟಿಗಳಿಗೆ ಬಂದೆ ಹೊರಬಂದದ್ದೆಲ್ಲ ನಿಗಿನಿಗಿ ಕೆಂಡದಂತ ಶಬ್ದಗಳು ನಿನ್ನ  ಎದೆಗೆ ಬಂದೆ ಕೊತಕೊತ ಕುದಿಯುವ ಲಾವಾರಸದ  ಕಡಲು ನಿನ್ನ ಸೊಂಟಕ್ಕೆ ಬಂದೆ ಮಿರಮಿರ ಮಿಂಚುವ ಬಿಳಿ … Read more

ಕನ್ನಡ ಭಾಷೆ ಮತ್ತು ಸಂಸ್ಕೃತಿ -ಮುಂದಿನ ದಿನಗಳಲ್ಲಿ!: ಎಸ್.ಜಿ.ಶಿವಶಂಕರ್

ಕನ್ನಡ ಭಾಷೆ ಮತ್ತು ಸಂಸ್ಕೃತಿಗೆ ಭಾರತದ್ದಲ್ಲೇ ಉಜ್ವಲವಾದ ಸ್ಥಾನವಿದೆ. ಕರ್ನಾಟಕದ ಹೆಸರು ವ್ಯಾಸ ಭಾರತದಲ್ಲೇ ಉಲ್ಲೇಖವಾಗಿದೆ. ಕನ್ನಡ ಭಾಷೆಗೆ ಎರಡು ಸಾವಿರ ವರ್ಷಕ್ಕೂ ಮಿಗಿಲಾದ ಇತಿಹಾಸವಿದೆ. ಈ ನಾಡು ಕಾವೇರಿಯಿಂದ ಗೋದಾವರಿಯವರೆಗೂ ವ್ಯಾಪಿಸಿತ್ತು ಎಂದು ಇತಿಹಾಸ ಹೇಳುತ್ತದೆ. ಈ ನಾಡಿಗೆ ಕರ್ನಾಟಕ ಎಂಬ ಹೆಸರು ಬಂದಿರುವ ಬಗೆಗೆ ವಿದ್ವಾಂಸರು ಹಲವು ರೀತಿಯ ಅಭಿಪ್ರಾಯಗಳನ್ನು ವ್ಯಕ್ತಪಡಿಸಿದ್ದಾರೆ. ಈ ಪ್ರದೇಶವನ್ನು ಮೊದಲಿಗೆ 'ಕರಿಯ ಮಣ್ಣಿನ ನಾಡು' ಎಂದೂ, 'ಕರುನಾಡು' ಎಂದರೆ ಎತ್ತರದ ಪ್ರದೇಶದಲ್ಲಿರುವ ನಾಡು ಎಂದೂ, 'ಕಮ್ಮಿತ್ತು ನಾಡು' ಎಂದರೆ … Read more

ಅಂಧಕಾರ ಅಳಿಸುವ ಬೆಳಕಿನ ಅರಿವು ದೀಪಾವಳಿ: ವೈ.ಬಿ.ಕಡಕೋಳ

ಕರುಣಾಳು ಬಾ ಬೆಳಕೆ, ಮುಸುಕಿದೀ ಮಬ್ಬಿನಲಿ ಕೈಹಿಡಿದು ನಡೆಸೆನ್ನನು ಇರುಳು ಕತ್ತಲೆಯ ಗವಿ:ಮನೆ ದೂರ; ಕನಿಕರಿಸಿ ಕೈಹಿಡಿದು ನಡೆಸೆನ್ನನು ಹೇಳಿ ನನ್ನಡಿಯಿಡಿಸು;ಬಲುದೂರ ನೋಟವನು ಕೇಳಿದೊಡನೆಯೇ ಸಾಕು ನನಗೊಂದು ಹೆಜ್ಜೆ   ಅಜ್ಞಾನದ ಕತ್ತಲೆಯನ್ನು ಕಳೆಯಲು ಜ್ಞಾನದ ದೀಪ ಅಗತ್ಯ. ದೀಪಾವಳಿ ದೀಪಗಳ ಬೆಳಕಿನ ಹಬ್ಬ. ನರಕಚತುರ್ದಶಿಯಿಂದ ಆರಂಭಿಸಿ ಮೂರು ದಿನಗಳವರೆಗೆ ಆಚರಿಸುವುದುಂಟು. ಭಾರತದ ಎಲ್ಲೆಡೆಯಲ್ಲಿಯೂ ದೀಪಾವಳಿಯನ್ನು ಆಚರಿಸುತ್ತಾರೆ.      ದೀಪಾವಳಿ ಹಬ್ಬದ ಸಂದರ್ಭದಲ್ಲಿ ಪ್ರಸ್ತಾಪಗೊಳ್ಳುವ ಎರಡು ಮುಖ್ಯ ಹೆಸರುಗಳು. ನರಕ ಹಾಗೂ ಬಲಿ. ನರಕನು ಭೂದೇವಿಯ … Read more

ಅವ್ವ: ಸಿದ್ದರಾಮ ತಳವಾರ, ದಾಸ್ತಿಕೊಪ್ಪ.

“ಅವ್ವ ಇದ್ದರೇ ಸಾಕು    ಅವಳಿರದ ಸಿರಿವಂತಿಕೆ ಯಾರಿಗೆ ಬೇಕು   ಅವಳಿರದ ಏಕಾಂತ ಯಾರಿಗೆ ಬೇಕು   ಅವಳಿರದ ಅರಮನೆಯದಾರಿಗೆ ಬೇಕು   ಅವಳಿರದ ಸಂತಸ, ಹಬ್ಬ, ಹರಿದಿನಗಳದಾರಿಗೆ ಬೇಕು   ಅವ್ವ ಇದ್ದರದೇ ಕ್ರಿಸ್‍ಮಸ್, ಅದೇ ಯುಗಾದಿ ಅದೇ ರಮ್ಜಾನ್   ಅವ್ವ ಇರಬೇಕು ಅವಳ ಜೊತೆ ನಾನೂ ಇರಬೇಕು”     ಅವ್ವನನ್ನು ಮಮ್ಮಿಯೆಂದು ಕರೆಯಲು ನನಗೆ ತುಂಬಾ ಮುಜುಗುರ ಯಾಕೆಂದರೆ ಮಮ್ಮಿ ಎಂದರೆ ಕೇವಲ ಶಬ್ದವಾದೀತು. ಅವ್ವ ಎಂದರೆ ಆಹಾ ಅದೇನೋ ಸೊಗಸು. … Read more

ಬಿಸಿಲ ನಾಡಿನಲ್ಲಿ ಸೋಂಪಾಗಿ ಬೆಳೆಯುತ್ತಿರುವ ಶಿಲ್ಪ ಅಂತರಗಂಗೆ: ವೀರೇಶ ಗೋನವಾರ

ಹೈದರಬಾದ್ ಕರ್ನಾಟಕ ಎಂದಾಕ್ಷಣವೇ ಮೂಗು ಮುರಿಯುವ ಇಂದಿನ ಜಾಯಮಾನದಲ್ಲಿಯೇ ರಾಯಚೂರು ಜಿಲ್ಲೆಯ ಭತ್ತದ ಕಣಜ ಎಂದೇ ಖ್ಯಾತಿಯನ್ನು ಪಡೆದಿರುವ ಸಿಂಧನೂರು ತನ್ನ ಒಡಲಲ್ಲಿ ಭತ್ತದ ಜೊತೆ-ಜೊತೆಗೆ ಅನೇಕ ಪ್ರತಿಭೆಗಳನ್ನು ಅಡಗಿಸಿಟ್ಟುಕೊಂಡಿದೆ. ಅಂತಹ ಪ್ರತಿಭೆಗಳ ಸಾಲಿಗೆ ನನ್ನೂರಿನ ಹೆಮ್ಮೆಯ ಯುವತಿ ಶಿಲ್ಪ ಅಂತರಗಂಗೆ ನಮ್ಮ ಇಂದಿನ ಯುವ ಸಮುದಾಯಕ್ಕೆ ಹೊಸ ಭರವಸೆಯ ಪ್ರತಿಭೆಯಾಗಿ ನಿಲ್ಲುತ್ತಾರೆ. ಇಂತಹ ಭರವಸೆಯ ಕಣ್ಮಣಿಗೆ ಪ್ರಸ್ತುತ ಕರ್ನಾಟಕ ಸರಕಾರದ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯಿಂದ ಕೊಡಮಾಡಲಾಗುವ 2014-15ನೇ ಸಾಲಿನ ರಾಜ್ಯ ಮಟ್ಟದ ‘ಸ್ವಾಮಿ … Read more

ಸರಸವಾಡದಿರಿ ಪುಟಾಣಿಗಳೇ ಪಟಾಕಿಗಳ ಜೊತೆ!: ಹೊರಾ.ಪರಮೇಶ್ ಹೊಡೇನೂರು

             ಮತ್ತೊಮ್ಮೆ ದೀಪಾವಳಿ ಹಬ್ಬ ಬರುತ್ತಿದೆ. ಈ ಸಂದರ್ಭದಲ್ಲಿ ಹಬ್ಬದ ಸಡಗರವನ್ನು ಹೆಚ್ಚಿಸುವುದು ವೈವಿಧ್ಯಮಯವಾದ ಪಟಾಕಿಗಳು ಎಂಬುದನ್ನು ಯಾರೂ ಅಲ್ಲಗಳೆಯಲಾರರು. ಮನೆಯಲ್ಲಿ ದೊಡ್ಡವರು ಪೂಜಾದಿ ಕಾರ್ಯಗಳು, ತಳಿರು ತೋರಣ, ಹೊಸ ಬಟ್ಟೆಗಳು, ದೇಗುಲ ದರ್ಶನ, ಮುಂತಾದ ವುಗಳ ಕಡೆ ಗಮನ ನೀಡಿದರೆ, ಪುಟಾಣಿ ಮಕ್ಕಳಿಗೆ ಪಟಾಕಿಗಳನ್ನು ಸುಟ್ಟು, ಸುರ್ ಸುರ್ ಬತ್ತಿ ಉರಿಸಿ, ಕೃಷ್ಣ ಚಕ್ರ ತಿರುಗಿಸಿ, ಹೂ ಕುಂಡ ಚಿಮ್ಮಿಸಿ, ಆಟಂಬಾಂಬ್ ಸಿಡಿಸಿ ಖುಷಿಪಡುತ್ತಾರೆ. ಮುಗ್ಧ ಮಕ್ಕಳು ಹಬ್ಬದ … Read more

ಆ ದೀಪಾವಳಿ: ದಿವ್ಯಾಧರ ಶೆಟ್ಟಿ ಕೆರಾಡಿ

ದೀಪಾವಳಿ ಮತ್ತೆ ಬಂದಿದೆ ಇಡೀ ಜಗತ್ತೇ ಸಂಭ್ರಮ ದಿಂದ ಆಚರಿಸುವ ಬೆಳಕಿನ ಹಬ್ಬದ ಗಮ್ಮತ್ತೆ ಬೇರೆ ತರಹದ್ದು. ಇಂದಿನ ಅಬ್ಬರದ ದೀಪಾವಳಿಯ ಜೋರು ಶಬ್ದಗಳ ನಡುವೆ ಚೈನಾಪಟಾಕಿಗಳ ಸದ್ದಿನ ಎದುರು ನಾವು ಬಾಲ್ಯದಲ್ಲಿ ಹೊಡೆಯುತ್ತಿದ್ದ ಲಕ್ಷ್ಮೀ ಪಟಾಕಿಯ ಸದ್ದೇ ಕೇಳಿಸುತ್ತಿಲ್ಲ ಈಗ.. ಏಲ್ಲೋ ಮರೆಯಾಗಿ ಹೋದ ಹಳೆಯ ನೆನಪುಗಳ ಹಣತೆಯನ್ನು ಒಂದಿಷ್ಟು ಸಾಲಾಗಿ ಜೋಡಿಸುವ ಆಸೆಯಾಗಿದೆ. ಒಮ್ಮೆ ನಮ್ಮ ಹಳ್ಳಿ ಬಾಲ್ಯದ ಕಡೆಗೆ, ಕಳೆದು ಹೋದ ಆ ಕಾಲದ ದೀಪಾವಳಿ ಯ ನೆನಪುಗಳ ಮನೆಯೊಳಗೊಮ್ಮೆ ಮೆಲ್ಲಗೆ  ಹೋಗಿ ಹಣತೆ … Read more

ದೀಪಾವಳಿ: ಸುನೀತಾ ಮಂಜುನಾಥ್

ದೀಪಾವಳಿ ಎಂದರೆ ಮನೆಯನ್ನ ಸಾವರಿಸಿ, ಹಂಡೆಗೆ ಪೂಜೆ ಮಾಡಿ ಇದ್ದ ಬದ್ದ ಹಂಡೆ, ಬಿಂದಿಗೆ, ಬಕೇಟುಗಳಿಗೆಲ್ಲ ನೀರು ತುಂಬಿಟ್ಟು , ನೀರು ತುಂಬುವ "ಹಬ್ಬ' ಮುಗಿವಷ್ಟರಲ್ಲಿ ಬೆಳಗಾಗಿ ಮನೆಯ ಬಾಗಿಲಿಗೆ ಸಗಣಿಯ ಸಾರಿಸಿ, ರಂಗೋಲಿ ಹಾಕಿ, ರಂಗೋಲಿಯ ನಡುವೆ ಸಗಣಿಯ ಉಂಡೆಯನ್ನಿಟ್ಟು ಮೇಲೊಂದು ಹುಚ್ಚೆಳ್ಳಿನ ಹಳದಿ ಹೂವಿನ್ನ ಸಿಕ್ಕಿಸಿದರೆ ಹಬ್ಬದ ಕಳೆ ಬಂತೆಂದೇ.. .ನೆತ್ತಿಗೆ ಎಣ್ಣೆಯಿಟ್ಟು ಹಂಡೆಯಿಂದ ಬಿಸಿ ನೀರು ಹಾಕಿಸಿಕೊಂಡು ಒಂದು ಸರ ಪಟಾಕಿ ಹೊಡೆದರೆ ನಮ್ಮ ಹಬ್ಬ ಶುರು ಎಂದೇ ಅರ್ಥ..  ಮತ್ತೆ ಮೂರು … Read more

ಕನ್ನಡ ರಂಗಭೂಮಿಯ ಇಳಯರಾಜ: ಪ್ರದೀಪ್ ಮಾಲ್ಗುಡಿ

ಇಸ್ಮಾಯಿಲ್ ಗೋನಾಳ್ ಕಾಲದ ಕರೆಗೆ ಓಗೊಟ್ಟಿದ್ದಾರೆ. ಆದ್ರೆ, ಅವರು ನಮ್ಮಂತವರೊಡನೆ ಬಿಟ್ಟು ಹೋಗಿರುವ ನೆನಪುಗಳು ಚಿರಂತನವಾಗಿರುತ್ತವೆ. ಅಲ್ದೇ, ಅವರು ನೀಡಿರುವ ರಂಗಸಂಗೀತ ಮತ್ತು ಕ್ಯಾಸೆಟ್ ಸಂಗೀತ ನಮ್ಮೊಡನೆ ಯಾವಾಗಲೂ ಇರುತ್ತವೆ. ಬಹುತೇಕ ಎಲ್ಲ ಸಂಗೀತ ಪರಿಕರಗಳನ್ನೂ ನುಡಿಸಬಲ್ಲವರಾಗಿದ್ದ ಇಸ್ಮಾಯಿಲ್, ಎಂದೂ ನನಗೆ ಇಷ್ಟು ಸಾಮಥ್ರ್ಯವಿದೆ ಅಂತ ಹೇಳಿಕೊಳ್ತಿರಲಿಲ್ಲ. ಕ್ಯಾಸೆಟ್ ಸಂಗೀತದ ಉತ್ತುಂಗದ ಶಿಖರದಲ್ಲಿದ್ದ ಅವಧಿಯಲ್ಲೇ ಅಲ್ಲಿಂದ ದಿಡೀರ್ ಅಂತ ಮಾಯವಾಗಿಬಿಟ್ಟು ಎಲ್ಲರಿಗೂ ಅಚ್ಚರಿ ಮೂಡಿಸಿದ್ರು. ಉತ್ತರ ಕರ್ನಾಟಕದ ಜಾನಪದ ಶೈಲಿಯ ಹಾಡುಗಳಿಂದ ಇವ್ರು ಸಂಗೀತ ಕ್ಷೇತ್ರದಲ್ಲಿ ಬಹಳ … Read more

ಸ್ನೇಹಲೋಕದಲ್ಲಿ ಹೊಸದಾದ ಭಾಷ್ಯ ಬರೆಯಬೇಕು…: ಸಿಂಧುಭಾರ್ಗವ್ ಬೆಂಗಳೂರು

ನಗುತಿರು ಪುಟ್ಟ ಮನವೇ ಬೆಳಂದಿಗಳಿನಂತೆ..! ನಾನಿರುವೆನು ಜೊತೆಗೆ ಎಂದಿನಂತೆ..!! ಈಗೀಗ ಎಲ್ಲವನೂ ಸ್ವೀಕರಿಸುವ ಧೈರ್ಯ ಬಂದಿದೆ..! ಮನದಲಿ ನೋವುನಲಿವು ಮಾಮೂಲಿಯಾಗಿದೆ..!! ~ ನಿಜವಾಗಿ ಹೇಳುವುದಾದರೆ ಈ ಜೀವನದ ಸಂತೆಯಲಿ ಸಿಕ್ಕಿದವನಾತ. ನನ್ನ ಮೊಗದಲ್ಲಿ ನಗುವ ಬಯಸಿದವನಾತ. "ಬಿಕ್ಕಿದ್ದು ಸಾಕು ನಿನ್ನ ನಗುಮೊಗವ ನಾ ನೋಡಬೇಕು" ಎಂದಾಗ ಮತ್ತಷ್ಟು ಬಿಕ್ಕಿಬಿಕ್ಕಿ ಅತ್ತಿದ್ದೆ. ಆ ಖುಷಿಯ ಯಾರಲ್ಲಿ ಹೇಳಲಿ.?! ಬೇಕಿತ್ತೇನೋ ಅವನೊಬ್ಬ ನನ್ನ ಕಣ್ಣೀರು ಒರೆಸಲೆಂದು. ಅದಕ್ಕೇ ಬಹಳ ಹತ್ತಿರಕ್ಕೆ ಸೇರಿಸಿಕೊಂಡೆ. ಸಮಸ್ಯೆಗಳನ್ನು ಮೈಮೇಲೆ ಎಳೆದುಕೊಂಡೆ. ಪರವಾಗಿಲ್ಲ. "ನಾ ನಿನ್ನ … Read more

ಮಾತಿಗೊಂದು ಎಲ್ಲೆ ಎಲ್ಲಿದೆ. .: ಸ್ಮಿತಾ ಅಮೃತರಾಜ್. ಸಂಪಾಜೆ.

ಮಾನವ ಜನ್ಮ ದೊಡ್ಡದು ಅಂತ ದಾಸರು ಇದಕ್ಕೇ ಹೇಳಿರಬೇಕು. ಯಾಕೆಂದರೆ ನಾವು ಪ್ರಾಣಿ ಪಕ್ಷಿಗಳಿಂದ, ಕ್ರಿಮಿಕೀಟಾದಿಗಳಿಂದ, ಹೆಚ್ಚೇಕೆ ಸಕಲ ಜೀವ ಸಂಕುಲಗಳಿಗಿಂತ ಅದೆಷ್ಟೋ ಭಿನ್ನವಾದರೂ, ಅವರಿಗಿಂತ ರೂಪು ಲಾವಣ್ಯದಲ್ಲಿ ಮಿಗಿಲಾದರೂ, ಅದೆಲ್ಲಕ್ಕಿಂತ ಹೆಚ್ಚಾಗಿ ನಮಗೆ ಆಲೋಚಿಸುವ, ಯೋಚಿಸಿದ್ದನ್ನು ಹಿಂದು ಮುಂದು ನೋಡದೆ ಒದರುವ , ಅಂದರೆ ಮಾತನಾಡುವ ವಿಶೇಷ ಶಕ್ತಿ ಇರುವುದರಿಂದಲೋ ಏನೋ ನಾವುಗಳು ಎಲ್ಲರ ದೃಷ್ಟಿಯಲ್ಲಿ ಕೃತಾರ್ಥರಾಗಿರುವುದು. ಇನ್ನು ಮನುಷ್ಯನಿಗೆ ಬಾಯಿ ತಿನ್ನಲು ಮಾತ್ರ ಅಲ್ಲ, ಅದು ಮಾತನಾಡುವ ಕೆಲಸ ಕೂಡ ಮಾಡುತ್ತದೆ ಅಂದರೆ ಇದಕ್ಕಿಂತ … Read more

ಪ್ರಕೃತಿ ಧರ್ಮ: ವೈ.ಬಿ.ಕಡಕೋಳ

  ಇಳೆ ನಿಮ್ಮ ದಾನ, ಬೆಳೆ ನಿಮ್ಮ ದಾನ ಸುಳಿದು ಬೀಸುವ ಗಾಳಿ ನಿಮ್ಮಯ ದಾನ ನಿಮ್ಮ ದಾನವನುಂಡು ಅನ್ಯರ ಪೊಗಳುವ ಕುಣ್ಣಿಗಳನೆನೆಂಬೆ ರಾಮನಾಥ ಐದು ನೂರು ಕೋಟಿ ವರ್ಷಗಳ ಹಿಂದೆ ಭೂಮಿಯ ಉದಯವಾಯಿತು ಎಂದು ವಿಜ್ಞಾನಿಗಳು ಹೇಳುತ್ತಾರೆ.30 ಲಕ್ಷ ವರ್ಷದ ಹಿಂದೆ ಮಾನವ ವಿಕಾಸ ಈ ಭೂಮಿಯ ಮೇಲಾಯಿತು ಎನ್ನುವರು. 300 ವರ್ಷಗಳಿಂದೀಚೆಗೆ ಅಭಿವೃದ್ದಿಯ ಹೆಸರಿನಲ್ಲಿ ಪರಿಸರ ನಾಶ ನಮ್ಮ ಸುತ್ತ ಮುತ್ತ ನಡೆಯುತ್ತಿದೆ. ಜೂನ್ 5 ವಿಶ್ವ ಪರಿಸರ ದಿನ.ನಮ್ಮ ಸುತ್ತ ಮುತ್ತಲಿನ ಪರಿಸರ … Read more

ಪಂಜು ಕಾವ್ಯಧಾರೆ

ನಕ್ಷತ್ರಗಳೆಂದರಿಷ್ಟ  ಹೊಸ್ತಿಲು ದಾಟಿ ಬಂದಂತೆ ಕಂಡದ್ದು ಅರ್ಧಚಂದ್ರ ಚೆಲ್ಲಿದ ಮುದ್ದು ಬೆಳದಿಂಗಳು. ಹೊನಲಿನಲ್ಲಿ ಗೋಚರವಾಗಿ  ಹಗಲಲ್ಲಿ ಕಣ್ಮರೆಯಾಗುವ ದಿಗಂತದ ಪರದೆಯಲ್ಲಿ ಬೆಚ್ಚಿ ಬೀಳಿಸುವ  ಶಶಿಯ ಇಂದ್ರಜಾಲ. ನಭೋಮಂಡಲವೇ ರಾತ್ರೋರಾತ್ರಿ ಬೆತ್ತಲಾದಾಗ ನಕ್ಷತ್ರಗಳು ಜಿನುಗುತ್ತವೆ. ಬರಿಗಣ್ಣಿಗೆ ನಂಬಲಾರದಷ್ಟು ಹೆಸರಿಲ್ಲದ ತಾರಾ ಪುಂಜಗಳು ಮೋಡಿಗಾರನ ಕೈಯ ಅಂಕುಶದ ಮಾಯಾಜಾಲದೊಳಗೆ. ಯಾರೋ ದೇವಕನ್ನೆ ರಾತ್ರಿ ಆಕಾಶದಲ್ಲಿ ಜೋಡಿಸದೇ ಹಾಗೇ ಬಿಟ್ಟ ರಂಗೋಲಿ ಚುಕ್ಕಿಯಂತೆ ನೀವು. ನಗರದಾಚೆ ಗಲ್ಲಿಯಲ್ಲಿ ಮಲಗದೇ ಹಠ ಹಿಡಿದು ಅಳುತ್ತಿರುವ ಕಂದಮ್ಮನ ಕಣ್ಣಿಗೆ ನೀವೆಲ್ಲಾ ಹೊಳೆಯುವ ಆಟಿಕೆಗಳು. ಕಂಡಾಗಲೆಲ್ಲಾ … Read more

ಬಿಸಿಲನಾಡಿನಲ್ಲೊಂದು ಕಾವ್ಯಮನೆಯ ಉದ್ಘಾಟನೆ: ಕೆ.ಎಂ.ವಿಶ್ವನಾಥ ಮರತೂರ.

ಕರ್ನಾಟಕ ರಾಜ್ಯ ಹಲವು ವಿಶೇಷಗಳನ್ನು ಹುಟ್ಟುಹಾಕಿದೆ. ಇಡಿ ದೇಶ ಹಾಗೂ ಪ್ರಪಂಚದಲ್ಲಿ ಹಲವು ಪ್ರಥಮಗಳನ್ನು ಸೃಷ್ಠಿಸಿದ ಕೀರ್ತಿ ಕರ್ನಾಟಕಕ್ಕೆ ಸಲ್ಲುತ್ತದೆ. ಸಾಹಿತ್ಯ ಲೋಕದಲ್ಲಿ ಎಂಟು ಜ್ಞಾನಪೀಠ ಪಡೆದು, ಕನ್ನಡವನ್ನು ಶಾಸ್ತ್ರೀಯ ಭಾಷೆಯಾಗಿ ಮಾಡಿರುವ ಸಾಧನೆ ನಮ್ಮದು. ಇದೆಲ್ಲವೂ ಕನ್ನಡದ ಹೆಸರಾಂತ ಕವಿಗಳ ಸಾಹಿತ್ಯ ಮತ್ತು ಹೋರಾಟದಿಂದ ಸಾಧ್ಯವಾಗಿದೆ. ಕನ್ನಡ ಇಂದು ಬಹು ಶ್ರೀಮಂತವಾಗಿ ಬೆಳೆಯಲು ಹಲವರ ಕೊಡುಗೆ ಅಪಾರವಾಗಿದೆ.      ಪ್ರಸ್ತುತ ದಿನಗಳಲ್ಲಿ ಕಾವ್ಯ, ಕಥೆ, ಕಾದಂಬರಿ ಅರ್ಥ ಕಳೆದುಕೊಂಡು “ಕವಿತೆ ಯಾರು ಕೊಳ್ಳತ್ತಾರೆ” ಎಂಬ … Read more

ಮದರ್ಸ್ ಡೇ: ಪಾರ್ಥಸಾರಥಿ ಎನ್

ಸರೋಜಮ್ಮನವರಿಗೆ ಏಳುವಾಗಲೆ ಎಂತದೋ ಇರುಸುಮುರುಸು. ಎದ್ದು ಮುಖ ತೊಳೆದು ಕಾಫಿ ಕುಡಿಯಬೇಕಾದವರು,  ಎದ್ದು ಹತ್ತು ನಿಮಿಶವಾದರು ಹಾಸಿಗೆ ಮೇಲೆ ಕುಳಿತಿದ್ದರು. ನಂತರ ಎದ್ದು ಮುಖತೊಳೆದು ಅಡುಗೆ ಮನೆಗೆ ಹೋಗಿ ಸೊಸೆ ಮಾಡಿಕೊಟ್ಟ ಕಾಫಿ ಪಡೆದು, ನಡುಮನೆಗೆ ಬಂದು ಸೋಪಾ ಮೇಲೆ ಕುಳಿತರು. ಕಾಫಿ ಕುಡಿಯುತ್ತಿದ್ದರೂ, ಅದೆಂತದೋ ಹಿಂಸೆ, ಬಲಗಡೆ ಪಕ್ಕೆಯಲ್ಲಿ ಸಣ್ಣ ನೋವು.  ಅಲ್ಲಿಯೆ ಮತ್ತೊಂದು ಸೋಪದಲ್ಲಿ ಅಂದಿನ ಪತ್ರಿಕೆ ಹಿಡಿದು ಅದರಲ್ಲೆ ಮುಳುಗಿದ್ದ ಮಗ ಗೋಕುಲ್ ಕಡೆ ನೋಡಿದರು. ಅವನ ಮುಖದಲ್ಲಿ ಗಂಭೀರತೆ. ಮಗನ ಕೈಲಿ … Read more

ಗಂಟೆಯ ನೆಂಟನೆ ಓ ಗಡಿಯಾರ: ಸ್ಮಿತಾ ಅಮೃತರಾಜ್. ಸಂಪಾಜೆ

ಬೆಳಗು, ಮಧ್ಯಾಹ್ನ, ಸಂಜೆ ಇವೆಲ್ಲಾ ಕಾಲದ ಅಣತಿಯಂತೆ ನಿಯಮಾನುಸಾರ ನಡೆಯುವ ಸಂಗತಿಗಳು, ಇದು ಯಾವೊತ್ತೂ ಏರು ಪೇರಾಗುವುದಿಲ್ಲ, ಒಂದು ದಿನವೂ ಶೀತ, ನೆಗಡಿ, ಜ್ವರ ಅಂತ ರಗಳೆಗಳನ್ನು ನೀಡಿ ನುಣುಚಿಕೊಂಡು ಗೈರು ಹಾಜಾರಾಗುವುದಿಲ್ಲ, ಅತೀ ಹೊಂದಾಣಿಕೆಯಿಂದ ಹಗಲು ಪಾಳಿ ರಾತ್ರೆ ಪಾಳಿಯನ್ನು ಯಾವೊತ್ತೂ ಅದಲು ಬದಲು ಮಾಡಿಕೊಳ್ಳುವುದಿಲ್ಲ, ಅಸಲಿಗೆ ಅವರಿಬ್ಬರೂ ಯಾವೊತ್ತೂ ಮುಖಾ ಮುಖಿ ಸಂಧಿಸಿಕೊಳ್ಳುವುದಿಲ್ಲವೆಂಬ ಸತ್ಯ ಎಳೆ ಮಕ್ಕಳಿಗೂ ಗೊತ್ತಿರಬಹುದಾದ ವಿಚಾರ.  ಕಾಲ ನಮಗೆ ಏನೆಲ್ಲಾ ಸಾವಕಾಶಗಳನ್ನು, ಅವಕಾಶಗಳನ್ನು, ಮಾನ ಮರ್ಯಾದೆಯನ್ನು, ಸೋಲು ಗೆಲುವುಗಳನ್ನು ತಂದು … Read more

ನೆನಪಾಗುವರು: ಶೈಲಜ ಮಂಚೇನಹಳ್ಳಿ

ಈ ಹಿಂದೆ ಸಂಕ್ರಾಂತಿಯ ಮುನ್ನಾದಿನ ನನ್ನ ಪುಟ್ಟ ಕಂಪ್ಯೂಟರ್ ಸೆಂಟರ್‍ಗೆ ಒಂದು ಪ್ರಿಂಟರನ್ನು ಕೊಂಡು ತರಲು ಎಸ್.ಪಿ. ರಸ್ತೆಗೆ ಹೋಗಿದ್ದೆ, ಜೊತೆಯಲ್ಲಿ ನನ್ನಕ್ಕನ ಕಿರಿ ಮಗನನ್ನು ಕರೆದುಕೊಂಡು ಹೋಗಿದ್ದೆ. ಹಲವಾರು ಅಂಗಡಿಗಳಲ್ಲಿ ಹಲವಾರು ಬಗೆಯ ಪ್ರಿಂಟರ್‍ಗಳನ್ನು ಅವುಗಳ ಗುಣ-ಲಕ್ಷಣಗಳನ್ನು, ಬೆಲೆಗಳನ್ನು ಕೇಳಿ ತಿಳಿದುಕೊಂಡು ಅಲ್ಲಿರುವ ಒಂದು ಕಾಂಪ್ಲೆಕ್ಸ್‍ನಲ್ಲಿದ್ದ ಕೆಲವು ಅಂಗಡಿಯಲ್ಲಿ ಕೆಲವು ಪ್ರಿಂಟರ್‍ಗಳನ್ನು ವಿಚಾರಿಸಿ ಕಡೆಗೆ ಒಂದು ಅಂಗಡಿಯಲ್ಲಿ, ನಾನು ತೆಗೆದುಕೊಳ್ಳಬೇಕೆಂದಿದ್ದ ಪ್ರಿಂಟರ್ ಮತ್ತು ಇನ್ನೂ ಹಲವಾರು ಬಗೆಯ ಪ್ರಿಂಟರ್‍ಗಳನ್ನು ಮಾಲೀಕ ಕುಳಿತುಕೊಳ್ಳುವ ಜಾಗವನ್ನು ಸುತ್ತುವರೆದು ಪಟ್ಟಿಯಂತಿದ್ದ, … Read more