ವೈಭವದ ಕೂಟ-ಪ್ಯಾಶನ್ನಿನ ಊಟ ? :ಪಾ.ಮು.ಸುಬ್ರಮಣ್ಯ

ಹಾಗೇ ಸುಮ್ಮನೇ ಏನಾದರೊಂದು ಬರೆಯಬೇಕೆಂದು ಮನಸ್ಸು ತವಕಪಡುತ್ತಿತ್ತು. ವಿಷಯಕ್ಕಾಗಿ ಮನದ ಗಾಳಿಪಟವನ್ನು ಹರಿಯಬಿಟ್ಟೆ.  ಪಟ ನೇರವಾಗಿ ಒಂದು ಅದ್ದೂರಿ ಕಾರ್ಯಕ್ರಮವೊಂದರ ನಡುವೆ ನಿಂತಿತು.  ಸುತ್ತಲೂ ಕಣ್ಣಾಡಿಸಿದೆ.  ವೈಭವಪೂರ್ಣವಾದ ಕಾರ್ಯಕ್ರಮ. ಯಾರೋ ಹಣದಧಿಪತಿಗಳೇ ಈ ಕಾರ್ಯಕ್ರಮದ ಆಯೋಜಕರೆಂದು ಮೇಲ್ನೋಟಕ್ಕೆ ಅನ್ನಿಸಿತು.  ಯಾರಾದರೆ ನನಗೇನು?  ನನಗೆ ಬೇಕಾಗಿರುವ ವಿಷಯ ಸಿಕ್ಕರೆ ಸಾಕು, ಎಂದಂದುಕೊಂಡು ಹುಡುಕತೊಡಗಿದೆ.  ಪ್ರತಿಯೊಬ್ಬರೂ ತಮ್ಮದೇ ಆದ ವೈಯಕ್ತಿಕ ವಿಚಾರಗಳಲ್ಲಿ ತೊಡಗಿದ್ದಾರೆನ್ನಿಸಿತು.  ನನ್ನನ್ನಾರು ಗಮನಿಸಲಿಲ್ಲ.  ಮನದ ಪಟ ಅಲೆದಾಟಕ್ಕಿಳಿದಾಗ ಕೇಳಿಯೇಬಿಟ್ಟಿ.  ’ಇಲ್ಲಿ ನನಗೇನು ಕೆಲಸ? ನನ್ನನ್ನು ಇಲ್ಲಿಗೇಕೆ ಕರೆತಂದೆ? … Read more

ಸಾಹಿತ್ಯ ಮತ್ತು ಸಾಂಸ್ಕೃತಿಕ ಲೋಕದಲ್ಲಡಗಿರುವ ರಾಜಕೀಯ…! : ನಂದಿಕೇಶ್. ಬಾದಾಮಿ

         ಇಂದು ಕನ್ನಡ ಮತ್ತು ಸಂಸ್ಕೃತಿ ಇಲಾಖೆಯಿಂದ ಕಲಾವಿದರೆಂದು ಪಿಂಚಣಿ ಪಡೆಯುತ್ತಿರುವವರ ವಿವರವನ್ನು ಗಮನಿಸಿದರೆ, ಕಲೆಯ ಗಾಳಿ;ಗಂಧ ಗೊತ್ತಿರದವರೆ ಬಹುಪಾಲು ಆ ಪಟ್ಟಿಯಲ್ಲಿ ತುಂಬಿಕೊಂಡಿದ್ದಾರೆ. ಅದೇ ರೀತಿ ಶಿಕ್ಷಣ ಕ್ಷೇತ್ರದಲ್ಲಿ ತಾಲೂಕು, ಜಿಲ್ಲೆ, ರಾಜ್ಯ ಹಾಗೂ ರಾಷ್ಟ್ರ ಮಟ್ಟದ ಆದರ್ಶ ಶಿಕ್ಷಕ/ಕಿ ಪ್ರಶಸ್ತಿ ಪಡೆದವರ ವಿವರವನ್ನು ಪರಿಶೀಲಿಸಿದರೆ ಅದರಲ್ಲೂ ಕೂಡಾ ರಾಜಕೀಯ ದುರ್ವಾಸನೆಯ ಘಾಟು ಮೂಗಿಗೆ ಅಮರಿಕೊಳ್ಳುತ್ತದೆ. ಇನ್ನು ಬಹುತೇಕ ಪ್ರಶಸ್ತಿ ಪುರಸ್ಕಾರಗಳಂತೂ ರಾಜಕೀಯ ಕರಿನೆರಳಿನಲ್ಲಿಯೇ ವಿತರಣೆಯಾಗುತ್ತಿವೆ. ಮೊನ್ನೆಮೊನ್ನೆಯಷ್ಟೆ ಹಿರಿಯ ಸಾಹಿತಿ ಕುಂ. … Read more

ಒಂದಿಷ್ಟು ಪುಟ್ಟ ಕತೆಗಳು:ಸುಚಿತ್ರ ಕೆ. ಕಾವೂರು.

ಎರಡು ಕೋಮಿನ ಜನರ ನಡುವೆ ಜಗಳ ಆರಂಭವಾಗಿತ್ತು..  ಕಾರಣ ತಮ್ಮ ಧರ್ಮದ ಭಿತ್ತಿ ಪತ್ರ ಅಂಟಿಸಿ ಅಪ ಪ್ರಚಾರ ಮಾಡಿದರೆಂದು… ಒಂದು ಆಡು ಬಂದು ಆ ಭಿತ್ತಿಪತ್ರವನ್ನು ನಿಧಾನವಾಗಿ ಹರಿದು ಮೆಲ್ಲತೊಡಗಿತು..  ***** ಅಣ್ಣ ತನ್ನ ತಂಗಿಯ ಗಂಡನ ಮನೆಯ ಪರಿಸ್ಥಿತಿ ಬಗ್ಗೆ ಹೆಂಡತಿ ಜೊತೆ ಹೇಳಿ ವ್ಯಥೆ ಪಡುತ್ತಿದ್ದ…ಆದರೆ ಹೆಂಡತಿ ತನ್ನ ಮನೆಯಲ್ಲಿ ನರಕ ಅನುಭವಿಸುವುದ ಕಂಡೂ ಕಾಣದಂತೆ ನಟಿಸುತ್ತಿದ್ದ. ***** ಅಮ್ಮ ನಿನ್ನ ಸೊಸೆಯನ್ನು ಹದ್ದುಬಸ್ತಿನಲ್ಲಿಡು ಇಲ್ಲಾಂದ್ರೆ ನಿನ್ನ ಮೂಲೆಗೆ ಹಾಕಿಯಾಳು ಎಂದು ಅತ್ತೆಯನ್ನು … Read more

ನನ್ನ ಮೊದಲ ಲೇಖನ: ಶ್ರೀನಿಧಿ ಜೋಯ್ಸ್

ನನ್ನ ಹೆಸರು ಶ್ರೀನಿಧಿ. ನಾನು ಹುಟ್ಟಿದು ಶಿವಮೊಗ್ಗದಲ್ಲಿ. ಬಾಲ್ಯ, ವಿದ್ಯಾಭ್ಯಾಸ ಎಲ್ಲಾ ಶಿವಮೊಗ್ಗಾದಲ್ಲೇ. ಇಂಜಿನಿಯರಿಂಗ್ ಪದವೀಧರ.  ಕಳೆದ 4 ವರ್ಷಗಳಿಂದ ಒಂದು ಸಾಫ್ಟ್ ವೇರ್ ಸಂಸ್ಥೆಯಲ್ಲಿ ಉದ್ಯೋಗ. ತಂದೆ ತಾಯಿ ಹಾಗೂ ಒಬ್ಬ ಅವಳಿ ಸಹೋದರನಿದ್ದು ಸದ್ಯಕ್ಕೆ ಅವಿವಾಹಿತ. ನನ್ನ ಮೊದಲ ಲೇಖನಕ್ಕೆ ಈ ಕಿರು ಪರಿಚಯ ಸಾಕು ಎಂದು ನನ್ನ ಅನಿಸಿಕೆ.    ಕನ್ನಡ ಬ್ಲಾಗ್ ಬರೆಯುವ ಚಾಳಿ ಶುರುವಾದದ್ದು ಒಂದು ಸಣ್ಣ ಕಥೆ.    ಆಗ ನಾನಿದದ್ದು ಚನ್ನೈನಲ್ಲಿ. ಸ್ನೇಹಿತರೊಂದಿಗಿದ್ದ ನನಗೆ ಮನೆಯಲ್ಲಿ ಕನ್ನಡ ಬಳಕೆ ಇತ್ತೇ … Read more

ಮಿಂಚುಳ: ಪ್ರಜ್ವಲ್ ಕುಮಾರ್

  ನವೀನ್ ಸಾಗರ್ ಅವ್ರು ಬರ್ದಿರೋ 'ಣವಿಣ – ಅಂಗಾಲಲ್ಲಿ ಗುಳುಗುಳು' ಓದ್ತಾ ಇದ್ದೆ. ಅದ್ರಲ್ಲಿರೋ ರೇಷ್ಮೆ ಹುಳದ ಕಥೆ ಅಥವಾ ಘಟನೆ ಓದಿ ನಂ ಮಿಂಚುಳದ ಘಟನೆ ನೆನಪಾಯ್ತು! 'ಸಿಲ್ಲಿ-ಲಲ್ಲಿ' ಸೀರಿಯಲ್ಲಿನ ಡೈಲಾಗ್ ನೆನಪಿಸಿಕೊಂಡು 'ಜೇಡ ಕಟ್ಟಿರೋ ಮೂಲೆ ನೋಡ್ದೆ'. ನಾನವಾಗ ಎರಡೋ, ಮೂರೋ, ನಾಲ್ಕನೇದೋ ಕ್ಲಾಸು. ಒಟ್ನಲ್ಲಿ ಹಾಕ್ಕೊಳೋ ಚಡ್ಡಿ ಎಲಾಸ್ಟಿಕ್ಕಿಂದೇ ಆಗ್ಲಿ, ಗುಂಡೀದೇ ಆಗ್ಲಿ; ಜೇಬು ಮಾತ್ರ ಇರ್ಲೇ ಬೇಕು ಅಂತ ಹಟ ಮಾಡ್ತಿದ್ದ ವಯಸ್ಸು. ನಮ್ದು ಚಿಕ್ಕಮಗಳೂರು ಜಿಲ್ಲೆ, ಕೊಪ್ಪ ತಾಲೂಕಲ್ಲಿರೋ … Read more

ಕಿರು ಪ್ರಬಂಧಗಳು: ರುಕ್ಮಿಣಿ ಮಾಲ, ಸಿರಾ ಸೋಮಶೇಖರ್

    ಬೆನ್ನಚೀಲ ೧೯೭೫ರ ದಶಕದಲ್ಲಿ ಬೆನ್ನಿಗೆ ಹಾಕುವ ಚೀಲ ಅಷ್ಟಾಗಿ ದಕ್ಷಿಣಕನ್ನಡ ಜಿಲ್ಲೆಯಲ್ಲಿ ಚಾಲ್ತಿಯಲ್ಲಿರಲಿಲ್ಲ. ಶಾಲೆಗೆ ಮಕ್ಕಳು ಉದ್ದಕೈ ಇರುವ ಬಟ್ಟೆಚೀಲ ತೆಗೆದುಕೊಂಡು ಹೋಗುತ್ತಿದ್ದರು. ಕೆಲವೇ ಕೆಲವು ಮಂದಿ ಬಳಿ ಬೆನ್ನಚೀಲ ಇರುತ್ತಿದ್ದ ಕಾಲವದು. ನನಗೆ ಆಗ ಬೆನ್ನಿಗೆ ಹಾಕುವ ಚೀಲ ಬೇಕು ಎಂಬ ಆಸೆ ಪ್ರಬಲವಾಗಿ ಇತ್ತು. ಅದರಲ್ಲಿ ಪುಸ್ತಕ ಹಾಕಿ ಶಾಲೆಗೆ ತೆಗೆದುಕೊಂಡು ಹೋಗಬೇಕು ಎಂಬ ಕನಸು ಕಾಣುತ್ತಿದ್ದೆ. ಆದರೆ ನನ್ನಲ್ಲಿ ಆ ಚೀಲವೇ ಇರಲಿಲ್ಲ. ಉದ್ದ ಕೈ ಇರುವ ಬಟ್ಟೆ ಚೀಲವನ್ನೇ … Read more

ಭವಿಷ್ಯ ಭಾರತದಲ್ಲಿ ವಿಜ್ಞಾನದ ಏಳಿಗೆ: ಪ್ರಸನ್ನ ಗೌಡ

ಪ್ರೊ. ಸಿ. ಎನ್. ಆರ್. ರಾವ್ ಭಾಷಣ ಆಧಾರಿತ ಲೇಖನ  ವೈಜ್ಞಾನಿಕ ಕ್ಷೇತ್ರದಲ್ಲಿ ಉತ್ತಮ ನಾಯಕರನ್ನು ಸೃಷ್ಟಿಸುವ ಪ್ರಯತ್ನದಲ್ಲಿ ಶಿಕ್ಷಕರ ಪಾತ್ರ ಅತ್ಯಮೂಲ್ಯ ವಾದುದ್ದು. ಪ್ರಾಥಮಿಕ ಮತ್ತು ಪ್ರೌಢಶಾಲಾ ಮಕ್ಕಳಿಗೆ ವೈಜ್ಞಾನಿಕ ವಿಚಾರಗಳಲ್ಲಿ ಹೆಚ್ಚಿನ ಆಸಕ್ತಿ ಬೆಳೆಸುವ ನಿಟ್ಟಿನಲ್ಲಿ ದೇಶದ ಭವಿಷ್ಯ ನಿಂತಿದೆ. ನಮ್ಮ ನೆರೆಯ ರಾಷ್ಟ್ರ ಚೀನಾದ ಜೊತೆ ನಮ್ಮ ದೇಶವನ್ನು ಹೋಲಿಸಿ ನೋಡಿದರೆ ನಮ್ಮ ದೇಶದ ವೈಜ್ಞಾನಿಕ ಬೆಳವಣಿಗೆ ತುಂಬಾ ಕಡಿಮೆ ಇದೆ. ದಿನೆ ದಿನೆ ಮಕ್ಕಳಲ್ಲಿ ವೈಜ್ಞಾನಿಕ ಪ್ರಜ್ಞೆ ಹೆಚ್ಚಿದಂತೆಲ್ಲ ದೇಶದ ಅಭಿವೃದ್ದಿ ತನಗೆ … Read more

ನಮಸ್ಕಾರ….ನಮಸ್ಕಾರ: ಹೊರಾ.ಪರಮೇಶ್

'ನಮಸ್ಕಾರ' ಈ ಸಂಬೋಧನಾ ಶಬ್ದವನ್ನು ಬಳಸದಿರುವ ಅಥವಾ ಕೇಳದಿರುವ ಯಾವುದೇ ವ್ಯಕ್ತಿ ಅಥವಾ ಕನ್ನಡಿಗ ಇಲ್ಲವೆಂದೇ ಭಾವಿಸಿದ್ದೇನೆ.ಆಂಗ್ಲ ಭಾಷಾ ಪ್ರೇಮಿಗಳು ಗುಡ್ ಮಾರ್ನಿಂಗ್ ; ಆಫ್ಟರ್ ನೂನ್, ಗುಡ್ ನೈಟ್ ಎಂದು ಹೇಳಿದರೂ ಅದರ ಅಂತರಾರ್ಥದ ಭಾವ 'ನಮಸ್ಕಾರ'ವೇ ಆಗಿದೆ.ಈ ಶಬ್ದದ ಹರವು ಸಾಗರದಷ್ಟು ವಿಶಾಲವಾದುದಾಗಿದೆ.ವಿವಿಧ ಸಂದರ್ಭಗಳಲ್ಲಿ ವಿಧ ವಿಧ ಅರ್ಥವಂತಿಕೆಯನ್ನು ಹೇಗೆಯ ಪಡೆದುಕೊಂಡಿದೆ ಎಂಬುದರ ಸುತ್ತ ಮುತ್ತ ಸುತ್ತಾಡಿ ಬರುವ ಉದ್ದೇಶ ನನ್ನದು.ಅದಕ್ಕೂ ಮುಂಚೆ ನಮಸ್ಕಾರ ಎಂದರೇನು? ಎಂದು ನೋಡಿಬಿಡೋಣ. ಸಾಕು ಸುಮ್ನಿರ್ರಿ, 'ನಮಸ್ಕಾರ' ಅಂದ್ರೆ … Read more

ಮಳೆಯೆ೦ಬ ಮಧುರ ಆಲಾಪ: ಸ್ಮಿತಾ ಅಮೃತರಾಜ್.

ಒ೦ದು ಬರಸಿಡಿಲು, ಕಿವಿಗಡಚಿಕ್ಕುವ ಗುಡುಗು,ಕಣ್ಣು ಕೋರೈಸುವ ಮಿ೦ಚು. ಇವೆಲ್ಲ ಮಳೆ ಬರುವ ಮುನ್ನಿನ ಪೀಠಿಕೆಯಷ್ಟೆ. ಮತ್ತೆ ಇದ್ಯಾವುದೇ ತಾಳ ಮೇಳಗಳಿಲ್ಲದೆ, ಅ೦ಜಿಕೆ ಅಳುಕಿಲ್ಲದೆ ದಿನವಿಡೀ ಸುರಿಯುತ್ತಲೇ ಇರುತ್ತದೆ ಒ೦ದು ಧ್ಯಾನಸ್ಥ ಸ್ಥಿತಿಯ೦ತೆ. "ಮಳೆ" ಇದು ಬರೇ ನೀರ ಗೆರೆಯಲ್ಲ.ಕೂಡಿಟ್ಟ ಬಾನಿನ ಭಾವದ ಸೆಲೆ.ಬಾನ ಸ೦ಗೀತ ಸುಧೆ ಮಳೆಯಾಗಿ ಹಾಡುತ್ತಿದೆ.ಎ೦ಥ ಚೆ೦ದದ ಆಲಾಪವಿದು.. ಮಳೆ ಶುರುವಾದಾಗ ಒ೦ದು ತರಹ, ನಿಲ್ಲುವಾಗ ಮತ್ತೊ೦ದು,ಬಿರುಸಾಗಿ ಸುರಿಯುವಾಗ  ಇನ್ನೊ೦ದು, ಮಳೆ ಪೂರ್ತಿ ನಿ೦ತ ಮೇಲೂ ಕೊನೆಯದಾಗಿ ಉರುಳುವ ಟಪ್ ಟಪ್ ಹನಿಯ ರಾಗವೇ … Read more

ಕಿರು ಲೇಖನಗಳು: ಕಿರಣ್ ಕುಮಾರ್ ರೆಖ್ಯಾ, ಶರತ್ ಹೆಚ್. ಕೆ.

ಸದಾ ನೆನಪಿನಲ್ಲಿ ಉಳಿಯುವ ರಾಕೆಟ್.. ಪಿಯುಸಿ ವ್ಯಾಸಂಗದ ದಿನಗಳವು. ಮಧ್ಯಾಹ್ನದ ನಂತರ ಯಾವಾಗಲು ಒಂದು ತರಗತಿ ಪಠ್ಯೇತರ ಚಟುವಟಿಕೆಗೆ ಮೀಸಲು. ಕನ್ನಡ ಸರ್ ಬಿತ್ತಿಪತ್ರಿಕೆಗೆ ಲೇಖನ ಬರೆಯುದರ ಬಗ್ಗೆ ಮಾಹಿತಿ ನೀಡಿ ಎಲ್ಲರಿಗು ಒಂದೊಂದು ಲೇಖನವನ್ನು ಅಸೈನ್ ಮಾಡಿ ತೆರಳಿದರು. ಅ ದಿನಗಳಲ್ಲಿ ಹುಡುಗಿಯರ ಹೆಸರನ್ನು ಹುಡುಗರ ಹೆಸರಿನೊಂದಿಗೆ ಸೇರಿಸಿ ಹಾಸ್ಯ ಮಾಡುವ ಹುಚ್ಚು. ಲೇಖನ ಬರೆಯುತ್ತಿದ್ದ ನಾನು ತಕ್ಷಣ ನನ್ನ ನೋಟ್ಸ್‌ನ ಒಂದು ಕಾಗದ ಹರಿದು "ಐ ಲವ್ ಯೂ.." ಜೊತೆಗೆ ತರಗತಿಯ ಒಂದು ಹುಡುಗಿಯ … Read more

ಆಯ ತಪ್ಪಿದ್ರೆ ಅಪಾಯ (ಅಳಿದುಳಿದ ಭಾಗ): ಎಂ.ಎಸ್.ನಾರಾಯಣ.

(ಇಲ್ಲಿಯವರೆಗೆ…) ಕೆಲವರಿಗೆ ಇದೆಲ್ಲಾ ವಿವರಣೆ, ಸ್ಪಷ್ಟೀಕರಣಗಳು ರೇಜಿಗೆಯೆನಿಸಬಹುದು. ಹೀಗೆ ದ್ವಂದ್ವ, ಗೊಂದಲ ಹಾಗೂ ಸಂಕೀರ್ಣತೆಗಳಿಂದ ಕೂಡಿದ ಹಲವಾರು ಸಿದ್ಧಾಂತಗಳೇಕೆ ಬೇಕು? ಸರಳವಾದ ಒಂದು ಸಿದ್ಧಾಂತ ಸಾಲದೇ? ಎಂದೂ ಪ್ರಶ್ನಿಸಬಹುದು. ಆದರೆ, ಸತ್ಯದ ಸಮಗ್ರ ವಿವರಣೆಯು ಸತ್ಯದ ಎಲ್ಲ ಮಗ್ಗುಲುಗಳನ್ನೂ ಗಣನೆಗೆ ತೆಗೆದುಕೊಳ್ಳಲೇಬೇಕಾಗುತ್ತದೆ. ಅಲ್ಲದೆ, ಅಂತಹ ಅತಿ ಸರಳೀಕರಣಗಳಿಂದ ಆಗಬಹುದಾದ ಅಪಾಯಗಳನ್ನೂ ನಿರ್ಲಕ್ಷಿಸಲಾಗುವುದಿಲ್ಲ. ಈಗ ಉದಾಹರಣೆಗೆ ಬರೀ ಕರ್ಮವಾದವನ್ನು ಅಳವಡಿಸಿಕೊಂಡೆವೆಂದುಕೊಳ್ಳಿ. ಆಗ ಎಲ್ಲ ಹೊಣೆಗಾರಿಕೆಯೂ ನಮ್ಮದೇ ಎಂದಾಗುತ್ತದೆ. ಹಾಗಾದೊಡನೆ, ‘ಎಲ್ಲವೂ ನನ್ನಿಂದಲೇ,  ನಾನಿಲ್ಲದಿದ್ದರೇನೂ ಇಲ್ಲ, ನಾನೇ ಸರ್ವಸ್ವ’, ಎಂದು … Read more

ಮೊದಲ ಪಾಕ ಪ್ರಯೋಗ: ಶ್ರೀನಿಧಿ ರಾವ್

ನಾನೆಂತಾ ಧಿಗ್ಗಡ ಧಿಮ್ಮಿ ಅಂದ್ರೆ ಮದುವೆಗೆ ಮೊದಲು ಒಂದು ದಿನ ಅಡುಗೆ ಮನೆ ಹೊಕ್ಕು ಅಡುಗೆ ಮಾಡಿದವಳೇ ಅಲ್ಲ. ಒಂದು ಕಾಫಿ, ಟೀ, ಕೂಡಾ ಮಾಡಿ ಗೊತ್ತೇ ಇಲ್ಲ. ಅಮ್ಮ ಎಷ್ಟೇ ಹೇಳಿದರೂ ಅದು ನನಗಲ್ಲ ವೆಂದೇ ಹಾಯಾಗಿ ಇದ್ದವಳು. ಆದರೆ ಅದೊಂದು  ದಿನ ನನ್ನ ನಿಶ್ಚಿತಾರ್ಥ  ಅಂತ ನಿರ್ಧಾರವಾಯಿತಾ ನನ್ನ ಕತೆ ಶುರು. ಅಯ್ಯೋ ನಂಗೆ ಅಡುಗೆ ಮನೆ ಹೊಕ್ಕೆ ಗೊತ್ತಿಲ್ಲ ಏನು ಮಾಡಲಿ ? ಆದರೂ ವಿಶೇಷ ಬದಲಾವಣೆ ಏನೂ ಇಲ್ಲ. ಎಂಟು ಘಂಟೆಗೆ … Read more

ಮಕ್ಕಳ ಮೇಲಿನ ದೌರ್ಜನ್ಯಗಳ ಹಲವು ಮುಖಗಳು: ಕೆ.ಎಂ.ವಿಶ್ವನಾಥ (ಮಂಕವಿ)

ನಮ್ಮ ದೇಶದಲ್ಲಿ ಮಕ್ಕಳೆಂದರೆ  ಹಲವು ಯೋಚನೆಗಳು ಮನದ ಮೂಲೆಯೊಳಗೆ ಮೂಡಿ ಬರುತ್ತವೆ. ನಮ್ಮ ಮಕ್ಕಳು ಬರಿ ಮಕ್ಕಳಲ್ಲ ಅವರು ಸಂಪೂರ್ಣ ವ್ಯಕ್ತಿಗಳು ಎಂದು ಪರಿಗಣಿಸಿ, ಅವರನ್ನು ತುಂಬ ಜಾಗುರೂಕತೆಯಿಂದ ಬೆಳೆಸಿ, ಅವರೇ ನಮ್ಮ ಭಾರತದ ಭವ್ಯ ಭವಿಷ್ಯ, ನಮ್ಮ ನಾಡನ್ನು ಆಳುವ ರಾಜಕಾರಣಿಗಳು ಹೀಗೆ ಹಲವು ಮಾತುಗಳು ನಮ್ಮಲ್ಲಿ ಕೇಳಿ ಬರುತ್ತವೆ.  ಆದರೆ ಇತ್ತೀಚಿಗೆ ನಮ್ಮ ದೇಶದಲ್ಲಿ ನಮ್ಮ  ಮಕ್ಕಳ ಮೇಲೆ ನಡೆಯುತ್ತಿರುವ ಹಲವು ದೌರ್ಜನ್ಯಗಳು ಸಾಕಷ್ಟು ವಿಚಿತ್ರ ಯೋಚನೆಗಳು ಒಡಮೂಡಿ ಬರುತ್ತಿರುವುದು ಕೂಡ ಗಮನಿಸಬೇಕಾದ ಅಂಶವೇ … Read more

ಪ್ರಕಟಣೆಗಳು

ಉಚಿತ ಚಲನಚಿತ್ರ ಅಭಿನಯ ಮತ್ತು ನಿರ್ದೇಶನ ಕಾರ್ಯಾಗಾರ “ಸೃಷ್ಟಿ ದೃಶ್ಯ ಕಲಾಮಾಧ್ಯಮ ಅಕಾಡೆಮಿ’ಯು ಕಳೆದ 14 ವರ್ಷಗಳಿಂದ ದೃಶ್ಯಮಾಧ್ಯಮ ಕುರಿತು ತಾಂತ್ರಿಕ ತರಬೇತಿ ಶಿಬಿರಗಳನ್ನು ಆಸಕ್ತ ಯುವಜನರಿಗಾಗಿ ಆಯೋಜಿಸುತ್ತಿದೆ. ಪ್ರತಿ ವರ್ಷದಂತೆ ಈ ಸಲವೂ ಚಲನಚಿತ್ರ ಮತ್ತು ದೂರದರ್ಶನಕ್ಕೆ ಸಂಬಂಧಿಸಿದಂತೆ ಕಥೆ, ಚಿತ್ರಕಥೆ, ಸಂಭಾಷಣೆ, ಛಾಯಾಗ್ರಹಣ, ಸಂಕಲನ (ಎಡಿಟಿಂಗ್), ಕಿರುಚಿತ್ರ ನಿರ್ಮಾಣ, ನಿರ್ದೇಶನ ಮತ್ತು ಅಭಿನಯ ಕುರಿತು 5 ತಿಂಗಳ ಕಾರ್ಯಾಗಾರವನ್ನು ದಿನಾಂಕ 08-04-2014  ರಿಂದ ಪ್ರತಿ ಭಾನುವಾರಗಳಂದು ಹಮ್ಮಿಕೊಳ್ಳಲಾಗಿದೆ.   ಪ್ರತಿ ಭಾನುವಾರ “ಭಾರತ್ ಸ್ಕೌಟ್ಸ … Read more

ನಾನು ಏಕೆ, ಏಕೆ ಹೀಗೆ…?!!!: ಭರತೇಶ ಅಲಸಂಡೆಮಜಲು

                      ಮಾನವ ಜಗದ ಒಂದು ಹಗಳಿರುಳ ಜೀವನದಲ್ಲಿ ಅನೇಕ ಅನುಭವಗಳನ್ನು ಪಡೆಯುತ್ತಾನೆ. ಕೆಲವು ಒಳ್ಳೆಯ ಅನುಭವಗಳಾದರೆ, ಕೆಲವು ಕೆಟ್ಟ ಅನುಭವಗಳು. ಹಲವು ಸಲ ಅನುಮಾನ, ಅವಮಾನಗಳೇ ಅನುಭವವಾಗಿ ರೂಪಾಂತರವಾಗುತ್ತದೆ. ಕತ್ತಲ ಜೀವದ ಹೃದಯ ಕವಾಟಕ್ಕೆ ಇವುಗಳೇ ದಾರಿದೀಪವಾಗುತ್ತದೆ. ಜಗದಲ್ಲಿ ಉಚಿತವಾಗಿ ದೊರೆಯುವುದೆಂದರೆ ಅದು ಉಚಿತ ಸಲಹೆಗಳು, ಪರಪದೇಶಗಳು, ಹಿತೋಪದೇಶಗಳು ಎಲ್ಲರ ಮನದಲ್ಲೂ ಮನೆಯಲ್ಲೂ ಹರಿದಾಡುತ್ತವೆ, ಕೆಲವು ಮತ್ತೆ ಮತ್ತೆ ಪೀಡಿಸುತ್ತವೆ, ಮಾನಸವನ್ನು ಕಾಡುತ್ತವೆ, … Read more

ಮಾತು ಮುಕ್ಕಿದ ಮೌನ: ನಳಿನಾ ಡಿ.

  ಗೆಳತಿಯರು ಕಳೆದುಹೋಗುತ್ತಾರಾ?  ಆದರೆ ಗೆಳತಿಯರನ್ನು ಜತನದಿಂದ ಸಂಪಾದಿಸುವುದು ಹೇಗೆ?  ಇದು ನಾನು, ನಿನ್ನ ಏಕೈಕ ಗೆಳೆಯ ಎಂದು ಎದೆಯುಬ್ಬಿಸಿ ಹೇಳಿದಾಗಲೆಲ್ಲಾ ನನ್ನ ಸ್ನೇಹದ ಸವಿಯರಿತ ಅವಳ ಮನಸ್ಸು ಉಬ್ಬುವುದು, ಮತ್ತೆ ಜಗತ್ತಿನ ಅತ್ಯಂತ ಸುಖವಾದ ಗೆಳತಿ ನಾನೇ ಕಣೋ, ಅದು ನಿನ್ನಿಂದಾನೇ ಅಂತ ಅವಳ ಸಂಭ್ರಮಿಸಿ ಭತ್ತದ ಹೊಲಗಳ ಹಸಿರು ಬಯಲಿನಲ್ಲಿ ಕೂಗಿದಾಗ, ನನ್ನ ಮನಸ್ಸಿನೊಂದಿಗೆ ದೇಹವೂ ಊರಾಚೆಯಲ್ಲಿ ಗೋಚರಿಸುವ ಗುಡ್ಡದ ಮೇಲೇನೇ ಕೂತುಬಿಟ್ಟಿರತ್ತೆ.  ನನ್ನಷ್ಟು ಎತ್ತರ ಯಾರೂ ಇಲ್ಲ ಎಂಬ ಕೋಡು.    ಐದಾರನೇ … Read more

ಕೊಡಬಹುದ್ದಾದ್ದದ್ದು ದುಡ್ಡು ಒಂದನ್ನ?: ಹೇಮಲತಾ ಪುಟ್ಟನರಸಯ್ಯ

ಫೇಸ್ಬುಕ್ ನಲ್ಲಿ ಒಂದು ಫೋಟೋ ಚಿಂದಿ ಆಯುವ ಕೆಳಸ್ಥರದ  ಹೆಂಗಸು ತನಗೆ ದಕ್ಕಿದ ಒಂದು ಹೊತ್ತಿನ ಊಟವನ್ನು ಬೀದಿ ನಾಯಿಯೊಂದಿಗೆ ಹಂಚಿಕೊಂಡು ತಿನ್ನುತ್ತಿರುವುದು.  ಎಂತವರಿಗೂ ಕಾಡುವ ಚಿತ್ರ. ಈ ತರದ ಸನ್ನಿವೇಶವನ್ನು ಕಣ್ಣಾರೆ ಹಲವು ಬಾರಿ ನೋಡಿರ್ತಿವಿ.  ಜೊತೆಜೊತೆಗೆ ಮನೆಗೆ ಬಂದ ನೆಂಟರಿಗೆ ಬಾಯಿ ಮಾತ್ತಲ್ಲಾದರು  ಊಟ ಮಾಡಿ ಎನ್ನದ, ತಿಂಡಿ ಮನೆಯವರಿಗಷ್ಟೇ ಎಂದು ಎತ್ತಿಟ್ಟುಕೊಂಡ ಪೈಸೆ ಟು ಪೈಸೆ ಜನರನ್ನು ಅನುಭವ ಮಾಡಿಕೊಂಡಿರ್ತೀವಿ.  ಫೇಸ್ಬುಕ್ ನಲ್ಲಿ  ಫೋಟೋ ಶೇರ್ ಮಾಡಿದಾಕ್ಷಣ ನಾವು generous ಆಗಿಬಿಟ್ವಿ ಅಂತೇನು ಆಗಬೇಕಿಲ್ಲ … Read more

ಯಾದಗಿರಿ ಜಿಲ್ಲೆಯಲ್ಲಿ ಮಕ್ಕಳೋತ್ಸವ ಕಾರ್ಯಕ್ರಮ: ವಿಶ್ವನಾಥ ಕೆ.ಎಂ.

ಸಾರ್ವಜನಿಕ ಶಿಕ್ಷಣ ಶಿಕ್ಷಣ ಯಾದಗಿರಿ, ಕಲಿಕೆ ಸರ್ ರತನ್ ಟಾಟಾ ಟ್ರಸ್ಟ್‌ನ ಅಡಿಯಲ್ಲಿ ಯಾದಗಿರಿ  ತಾಲೂಕಿನ ಆಯ್ದ ಶಾಲೆಗಳಲ್ಲಿ ಇದೀಗ ಮಕ್ಕಳೋತ್ಸವ ಎನ್ನುವ  ವಿನೂತನ ಬೇಸಿಗೆ ಶಿಬಿರ ಕಾರ್ಯಕ್ರಮ ಹಮ್ಮಿಕೊಳ್ಳಾಗಿದೆ.  ಕಾರ್ಯಕ್ರಮದ ಹಿನ್ನಲೆ ಮಕ್ಕಳಿಗೆ ಶಾಲೆಯ ಬಗ್ಗೆ ಆಸಕ್ತಿ ಮೂಡಿಸುವುದು. ಶಾಲಾ ವಾತವರಣದಲ್ಲಿ ಮಕ್ಕಳಿಗೆ ಉತ್ತಮ ಶಾಲೆಯ ಕಲ್ಪನೆ ಕೊಡುವುದು. ಹೊರಗಿನ ಪ್ರಪಂಚಕ್ಕೆ ಮಕ್ಕಳ ಜ್ಞಾನವನ್ನು ಬೆಳೆಸುವುದು. ವಿವಿಧ ಸಾಮಾಜಿಕ ಸಮಸ್ಯೆಗಳ ಬಗ್ಗೆ ಮನವರಿಕೆ ಮಾಡುವುದು. ವಿವಿಧ ರೀತಿಯ ಹಬ್ಬಗಳ ಬಗ್ಗೆ ಮಾಹಿತಿ ನೀಡುವುದು. ದಿನ ವಿಶೇಷಗಳ … Read more

ನಿಮ್ಮ ಸಾಹಿತ್ಯಕ್ಕೆ ಆಡಿಯೋ ರೂಪ ಕೊಡಿ…

ಮೊನ್ನೆ ಓದಲು ಸಿಕ್ಕ ಗೆಳೆಯರೊಬ್ಬರ ಪುಸ್ತಕದಲ್ಲಿ ಇಂಗ್ಲೀಷ್ ಕವಿತೆಯೊಂದರ ಸಾಲಿತ್ತು. ಆ ಕವಿತೆಯ ಸಾಲು ತುಂಬಾ ಇಷ್ಟವಾದ ಕಾರಣ ಪೂರ್ಣ ಕವಿತೆಗಾಗಿ ಗೂಗಲ್ ಸರ್ಚ್ ಮಾಡಿದೆ. ಆ ಕವಿತೆ poetry foundation ಎಂಬ ವೆಬ್ ತಾಣದಲ್ಲಿ ಓದಲು ಸಿಕ್ಕಿತು. ಓದಲು ಸಿಕ್ಕಿದ ಕವಿತೆಯ ಜೊತೆಗೆ ಆಡಿಯೋ ಫೈಲ್ ಸಹ ಇತ್ತು. ಆ ಫೈಲ್ ಕ್ಲಿಕ್ ಮಾಡಿ ಕೇಳಿದೆ. ಇದೇ ತರಹದ ಪ್ರಯೋಗವನ್ನು ಪಂಜುವಿನಲ್ಲಿ ಯಾಕೆ ಮಾಡಬಾರದು ಎಂದುಕೊಂಡಿದ್ದೇ ನನ್ನ ಹತ್ತಿರವಿದ್ದ ಹಾಡೊಂದರ ಫೈಲ್ ಅನ್ನು ಪಂಜುವಿಗೆ ಅಪ್ … Read more

ಕ್ಲಬ್: ಎಚ್.ಕೆ.ಶರತ್

ಅದೊಂದು ಸಾದಸೀದಾ ಬಿಲ್ಡಿಂಗು. ಹಗಲಲ್ಲಿ ಹಾಗೆ ಸುಮ್ಮನಿರುತ್ತೆ. ಬೆಳಕು ತೆರೆಮರೆಗೆ ಸರಿದು ಕತ್ತಲ ಕಾರುಬಾರು ಶುರುವಾದರೆ, ಅದು ವಿಶಿಷ್ಟ ಬಣ್ಣ ಬಳಿದುಕೊಂಡು ಬಿಡುತ್ತೆ. ಆ ಬಣ್ಣ ಹಗಲಿಗೆ ಅಪರಿಚಿತ. ಆ ಬಿಲ್ಡಿಂಗಿನ ಕಾಂಪೌಂಡಿನೊಳಕ್ಕೆ ಕತ್ತಲು ಕವಿದಂತೆಲ್ಲಾ ವಾಹನಗಳು ಬಂದು ನಿಲ್ಲುತ್ತವೆ. ವಯಸ್ಸಾದರೂ ಮನೆಯಲ್ಲಿ ಮುದುರಿಕೊಂಡು ಕೂರಲು ಬಯಸದ ಅಥವಾ ಹಾಗೆ ತೆಪ್ಪಗಿರುವುದು ತಮ್ಮ ಜಾಯಮಾನಕ್ಕೆ ಒಗ್ಗುವುದಿಲ್ಲ ಎಂದು ತೀರ್ಮಾನಿಸಿದ ವಯೋವೃದ್ಧರು ವಾಹನಗಳ ಮೇಲೇರಿ ಅಲ್ಲಿಗೆ ಬರುತ್ತಾರೆ. ತುಂಬಾ ಗೌರವಾನ್ವಿತರಂತೆ ಕಾಣುವ ದಿರಿಸು ತೊಟ್ಟುಕೊಂಡು ಬಂದಿರುವ ಅವರು, ಹೊರಜಗತ್ತಿಗೆ … Read more

ತರಾವರೀ ತರ್ಕ ಮತ್ತು ಹಾಸ್ಯ (ಕೊನೆಯ ಭಾಗ): ಎಂ.ಎಸ್.ನಾರಾಯಣ.

ಇಲ್ಲಿಯವರೆಗೆ ಚಕ್ರ ತರ್ಕದ ಉದಾಹರಣೆಗಳು ನಿಜಕ್ಕೂ ಬಹಳ ಸ್ವಾರಸ್ಯಕರವಾಗಿರುತ್ತವೆ. ಕೆಲವು ಉದಾಹರಣೆಗಳನ್ನು ನೋಡೋಣ. ೧. ನನ್ನ ಮನೆಯಲ್ಲಿ ನಾನೇ ಯಜಮಾನ, ಹಾಗೆ ಹೇಳಲು ನನಗೆ ನನ್ನ ಹೆಂಡತಿಯ ಅನುಮತಿಯಿದೆ. ೨. ಬೈಬಲ್ಲಿನಲ್ಲಿರುವುದೆಲ್ಲಾ ಸತ್ಯ. ಹಾಗಂತ ಬೈಬಲ್ಲಿನಲ್ಲೇ ಹೇಳಿದೆ.                   ೩. ಈ ಮುಂದಿನ ಹೇಳಿಕೆ ಸುಳ್ಳು. ಹಿಂದಿನ ಹೇಳಿಕೆ ನಿಜ. ೪. ಸಿಗರೇಟು ಬಿಡುವುದು ಬಲು ಸುಲಭ, ನಾನು ಹಲವಾರು ಬಾರಿ ಬಿಟ್ಟಿದ್ದೇನೆ.  ೫. ವೆಂಕನಿಗೆ … Read more

ಈ ಪ್ರೀತಿಯ ಬಗ್ಗೆ ಒಂದಿಷ್ಟು,,,,,,,,!: ಶಿದ್ರಾಮ ತಳವಾರ

ಈ ಪ್ರೀತಿ ಅನ್ನೋದೆ ಹೀಗೆ ರಾಮಾಯಣದಲ್ಲಿ ಸೀತೆಗೆ ಮಾಯಾ ಜಿಂಕೆಯಾಗಿ ತತ್ ಕ್ಷಣದಲಿ ಸೀತೆ ಅದರಂದಕೆ ಸೋತು ಅದನ್ನು ಪಡೆದೇ ತೀರಬೇಕೆಂಬ ಹುಚ್ಚು ಆಸೆ ಹುಟ್ಟಿದ್ದರಿಂದ ದೊಡ್ಡ ರಾಮಾಯಣವೇ ನಡೆದು ಹೋಯಿತು ಎನ್ನಬಹುದು.  ಇಲ್ಲಿ ಮಾಯಾ ಜಿಂಕೆಯ ವಿಷಯ ಯಾಕೆ ಬಂತು ಅಂದರೆ ಈ ಪ್ರೀತಿಯೂ ಒಂದು ಮಾಯೆ ಇದ್ದಂತೆ. ಯಾವ ಸಂದರ್ಭದಲ್ಲಿ ಯಾರ ಜೊತೆ ಈ ಪ್ರೀತಿ ಅಂಕುರಿಸುವುದೋ ಹೇಳಲಾಗುವುದಿಲ್ಲ. ಸಹಜವಾಗಿ ಪ್ರೀತಿ ಹೆಣ್ಣು ಮತ್ತು ಗಂಡು ಈ ಎರಡು ಜೀವಗಳಲ್ಲಿ ಅಂಕುರಿಸುವುದು ಸಾಮಾನ್ಯ. ಮೊದ … Read more

ತರಾವರೀ ತರ್ಕ ಮತ್ತು ಹಾಸ್ಯ (ಭಾಗ 2): ಎಂ.ಎಸ್. ನಾರಾಯಣ

(ಇಲ್ಲಿಯವರೆಗೆ) ಯಾಕೋ ಏನೋ ಪುಟ್ಟಿಯನ್ನು ಬಿಡುಗಡೆಗೊಳಿಸಿದ ನಾನೇ ಯಾವುದೋ ಬಂಧನಕ್ಕೆ ಸಿಕ್ಕಿಕೊಂಡಿದ್ದ ಹಾಗೆ ಅನುಭವವಾಗಲಾರಂಭಿಸಿತು. ನನ್ನ ತಲೆಯನ್ನು ಹೊಕ್ಕಿದ್ದ ತರ್ಕವೆಂಬ ಹುಳದ ಗುಂಯ್ಗಾಟ ನಿಲ್ಲುವಂತೆಯೇ ಕಾಣಲಿಲ್ಲ. ನಿಜಕ್ಕೂ ತರ್ಕಶಾಸ್ತ್ರವೊಂದು ಮಹಾ ಸಾಗರ. ಆವರಣದ ಸತ್ಯಾಸತ್ಯತೆಯಲ್ಲಿ ತರ್ಕಶಾಸ್ತ್ರಕ್ಕೆ ಆಸಕ್ತಿ ಇಲ್ಲ. ತರ್ಕವು ಕೇವಲ ಸಾಕ್ಷೀ ಪ್ರಮಾಣ ಕೇಂದ್ರೀಕೃತವಾಗಿರುತ್ತದೆ. ಶುದ್ಧತರ್ಕವಲ್ಲದೆ, ತರ್ಕದೋಷಗಳೆನ್ನಬಹುದಾದ ಅತರ್ಕ, ವಿತರ್ಕ, ಕುತರ್ಕ, ಚಕ್ರತರ್ಕ, ವಕ್ರತರ್ಕ…..! ಎಂದು ಎಷ್ಟೆಲ್ಲಾ ವೈವಿಧ್ಯತೆ ಅನ್ನಿಸಿತು. ಪುಟ್ಟಿಯ ಲೆವೆಲ್ಲಿಗೆ ಇದೆಲ್ಲಾ ಟೂ ಮಚ್ಚೆಂದೂ ಅನಿಸಿತು. ತರ್ಕಶಾಸ್ತ್ರದಂಥಾ ಜಟಿಲವಾದ ವಿಷಯವನ್ನು ಕಠಿಣವಾದ ಭಾಷೆಯಲ್ಲಿ … Read more

ಒಮ್ಮೆ ಮಾತ್ರ ಕೇಳುತ್ತಿದ್ದ ಕಥೆಗಳು !: ಪ್ರಜ್ವಲ್ ಕುಮಾರ್

ನಾವು ಚಿಕ್ಕವರಿದ್ದಾಗ, ರಾತ್ರಿ ಮಲಗುವಾಗ 'ಕಥೆ ಹೇಳಿ' ಎಂದು ಪೀಡಿಸುತ್ತಿದ್ದ ನಮ್ಮಿಂದ ಮುಕ್ತಿ ಪಡೆಯಲು ನನ್ನ ತಂದೆಯಾದಿಯಾಗಿ ನಮ್ಮ ಹಿರಿಯರು ಹೇಳುತ್ತಿದ್ದ ಕೆಲವು ಕಥೆಗಳು. ಈ ಕಥೆಗಳ ವಿಶೇಷವೆಂದರೆ ಒಮ್ಮೆ ನಾವು ಈ ಕಥೇನ ಕೇಳಿದ್ರೆ, ಆ ಕಥೆ ಹೇಳಿದವರ ಹತ್ರ ಮತ್ಯಾವತ್ತೂ ಕಥೆ ಕೇಳೋಕೆ ಹೋಗ್ತಿರ್ಲಿಲ್ಲ! ಇನ್ನು ಮುಂದೆ ಒಂದಾದ ಮೇಲೊಂದರಂತೆ ನಾಲ್ಕು ಕಥೆಗಳು! ಕಥೆಯ ಘಟನೆ ಒಂದು : "ಗುಬ್ಬಚ್ಚಿ ಮತ್ತು ಭತ್ತದ ಕಾಳು" "ಒಂದೂರಲ್ಲಿ ಒಂದು ದೊಡ್ಡ ಕಣ (ಭತ್ತವನ್ನು ಅದರ ಗಿಡದಿಂದ … Read more

ತರಾವರೀ ತರ್ಕ ಮತ್ತು ಹಾಸ್ಯ: ಎಂ.ಎಸ್. ನಾರಾಯಣ

‘ತರ್ಕ ಅಂದ್ರೇನಪ್ಪಾ?’ ಎಂದು ಬೆಳಬೆಳಗ್ಗೇನೇ ರಾಗ ಎಳೆದಳು ಮೊದಲ ಪೀಯೂಸಿ ಕಲಿಯುತ್ತಿರುವ ನನ್ನ ಮಗಳು.  ಹಾಗೆಲ್ಲಾ ಅವಳು ಸುಮ್ಮ ಸುಮ್ಮನೆ ಏನನ್ನೂ ಕೇಳುವುದಿಲ್ಲವೆಂದರಿತಿದ್ದ ನಾನು ಓದುತ್ತಿದ್ದ ಪೇಪರಿನಿಂದ ತಲೆಯೆತ್ತದೆ ‘ಯಾಕೇ?’ ಅಂದೆ. ‘ಕನ್ನಡಾ ಮ್ಯಾಮ್ ಅಸೈನ್ಮೆಂಟ್ ಕೊಟ್ಟೀದಾರಪ್ಪ, ತರ್ಕದ ಬಗ್ಗೆ ಎಸ್ಸೆ ಬರ್ಕೊಂಡೋಗ್ಬೇಕು’ ಎಂದುಲಿಯಿತು ಕಾನ್ವೆಂಟಿನಲ್ಲಿ ಕಲಿತ ನನ್ನ ಕನ್ನಡದ ಕಂದ.  ‘ತರ್ಕ ಅಂದ್ರೆ ಲಾಜಿಕ್ಕು ಕಣಮ್ಮಾ’ ಎಂದೊಡನೆ ಅಸಡ್ಡೆಯಿಂದ ‘ಓ, ಲಾಜಿಕ್ಕಾ…?’ ಎಂದವಳೇ ಪ್ರಬಂಧ ಬರೆಯಲು ಸಿದ್ಧತೆ ನಡೆಸತೊಡಗಿದಳು. ಸೀದಾ ಲ್ಯಾಪ್ಟಾಪ್ ತೆಗೆದವಳೇ ಇಂಟೆರ್ನೆಟ್ಟಿನಲ್ಲಿ ‘ಎಸ್ಸೇಸ್ … Read more

ಬೆರಳಿಲ್ಲದ ಹಕ್ಕಿಯೂ. . ಹಕ್ಕಿಯಂತ ಕವಿತೆಯೂ. . :ಸ್ಮಿತಾ ಅಮೃತರಾಜ್

ಪ್ರತಿ ನಿತ್ಯವೂ ನಮ್ಮ ಮನೆಯ ಮುಂದಿನ ಅಂಗಳದಲ್ಲಿ ಕಪ್ಪು ಬಿಳಿ ಬಣ್ಣದ ಎರಡು ಹಕ್ಕಿಗಳು, ಮೇಲೆ ಕೆಳಗೆ ಬಾಲ ಕುಣಿಸುತ್ತಾ, ಅಂಗಳದ ತುಂಬೆಲ್ಲಾ ಅದೂ ಇದೂ ಹೆಕ್ಕುತ್ತಾ ಗಹನವಾಗಿ ಅದೇನೋ ಅಳೆಯುತ್ತಿರುವಂತೆ ತುಂಬಾ ಹೊತ್ತಿನವರೆಗೂ ಓಲಾಡುತ್ತಲೇ ಇರುತ್ತವೆ. ಅದಕ್ಕೇ ಇರಬೇಕು ಆ ಹಕ್ಕಿಗಳಿಗೆ ಭೂಮಿ ತೂಗುವ ಹಕ್ಕಿ ಅಂತ  ಕರೆಯೋದು. ಆ ಜೋಡಿ ಹಕ್ಕಿಗಳಲ್ಲಿ ಒಂದಕ್ಕೆ  ಒಂದು ಕಾಲಿನಲ್ಲಿ ಬೆರಳುಗಳೇ ಇಲ್ಲ. ಹೆಣ್ಣು ಹಕ್ಕಿಯೋ? ಗಂಡು ಹಕ್ಕಿಯೋ? ಗೊತ್ತಿಲ್ಲ. ಪಾಪ! ಅದಕ್ಕೆ ಅಂಗವಿಕಲತೆ. ಆದರೂ ಬರೇ ಪಾದ … Read more

ಲೇಖನಗಳ ಆಹ್ವಾನ

ಸಹೃದಯಿಗಳೇ,  "ಅಸ್ಪೃಶ್ಯತೆ" ಕುರಿತ ನಿಮ್ಮ ಅನುಭವಗಳನ್ನು, ಚಿಂತನೆಗಳನ್ನು, ಕತೆ, ಕವಿತೆ, ಲೇಖನಗಳ ರೂಪದಲ್ಲಿ ಪಂಜುವಿಗೆ ಕಳುಹಿಸಿಕೊಡಿ.. ನಿಮ್ಮ ಬರಹಗಳು ದಿನಾಂಕ 11.04.2014 ರ ಒಳಗೆ ನಮಗೆ ತಲುಪಲಿ. ನಮ್ಮ ಈ ಮೇಲ್ ವಿಳಾಸ editor.panju@gmail.com, smnattu@gmail.com ಪಂಜು ಬಳಗದ ಪರವಾಗಿ ನಟರಾಜು

ಹೊಟ್ಟೆ ಪಾಡು !!: ಸಂತೋಷ್ ಗುರುರಾಜ್

ಸುಮಾರು ವರ್ಷಗಳಿಂದಲೂ, ಎಂದರೆ ಭಾರತಕ್ಕೆ ಸ್ವತಂತ್ರ ಪೂರ್ವದಿಂದಲೂ ಮತ್ತು ಸ್ವತಂತ್ರ ಬಂದ ಮೇಲೆಯೂ ಸಹ ಆಗಿನ ಬಹುತೇಕ ಜನರು ತಮ್ಮ ಹೊಟ್ಟೆ ಪಾಡಿಗಾಗಿ ಪರೆದಾಡುವ ಪರಿಸ್ಥಿತಿ ಇತ್ತು ಎಂದು ನಾವು ಓದಿದ ಅಥವಾ ಕೇಳಿದ ಚರಿತ್ರೆ ಇಂದ ತಿಳಿಯುತ್ತದೆ. ಆದರೆ ಇಂದಿನ ಹೊಟ್ಟೆ ಪಾಡಿಗೂ ಮತ್ತು ಅಂದಿನ ಹೊಟ್ಟೆ ಪಾಡಿಗೂ ಬಹಳಷ್ಟು ವ್ಯತ್ಯಾಸವಿದೆ. ಆಗಿನ ಕಾಲದಲ್ಲಿ ಜನ ತಮ್ಮ ಹೊಟ್ಟೆಗೆ ಎರಡು ಹೊತ್ತು ಗಂಜಿ ಸಿಕ್ಕರೆ ಸಾಕು ಎನ್ನುವ ಹೊಟ್ಟೆಪಾಡು ಆದರೆ ಈಗಿನ ಜನ ಹೊಟ್ಟೆಯ ಸುತ್ತು … Read more

ಮೂಢನಂಬಿಕೆ: ಕೆ.ಟಿ.ರಘು

ಈ ಪ್ರಶ್ನೆಗೆ ಉತ್ತರ ನೀಡುವುದು ತುಸು ಶ್ರಮದಾಯಕ ಎನ್ನಿಸುವ ನಿಜ. ಮೂಢನಂಬಿಕೆ ಎನ್ನುವುದು ಮನುಷ್ಯನ ಹುಟ್ಟಿನೊಂದಿಗೆ ಬೆಳೆದು ಬಂದಿದೆ. ಇದು ಕಾಲದಿಂದ ಕಾಲಕ್ಕೆ ಬದಲಾಗುತ್ತಾ ತನ್ನ ಸ್ವರೂಪವನ್ನು ಬದಲಿಸುತ್ತಾ ಸಾಗುತ್ತಿದೆ. ಒಂದು ಕಾಲದ ನಂಬಿಕೆಗಳು ಇನ್ನೊಂದು ಕಾಲಕ್ಕೆ ಸುಳ್ಳೆಂಬುದು ಈ ವೈಜ್ಞಾನಿಕ ಯುಗದ ಜಗತ್ತು ಸಾಬೀತುಪಡಿಸಿದೆ. ಇಂದಿನ ಯುಗದಲ್ಲಿಯೂ ಸಹ ಹಿಂದಿನ ಕಾಲದ ಕೆಲವು ನಂಬಿಕೆಗಳನ್ನು ಅನುಸರಿಸುವುದನ್ನು ಮೂಢನಂಬಿಕೆ ಎನ್ನಬಹುದು. ಮೂಢನಂಬಿಕೆಗಳು ಸಾಮಾಜಿಕವಾಗಿ ಬೆಳೆದುಬಂದ ಅನಿಷ್ಟ ಪಿಡುಗುಗಳು. ದೇವರ ಮೇಲೆ ನಂಬಿಕೆ ಇಟ್ಟುಕೊಳ್ಳಿ, ಅವನ ಮುಂದೆ ಎಲ್ಲರೂ … Read more

ತುಂಬಿದ ಕೊಡ… (ಒಂದು ನೈಜಕಥೆಯ ಸುತ್ತ): ಸಂದೇಶ್ ಎಲ್.ಎಮ್.

ಬೆಂಗಳೂರು ಎಂಬ ಕಾಂಕ್ರಿಟ್ ಕಾಡಿನಲ್ಲಿ ಹೆಚ್ಚಿನ ಮಂದಿ ರಜೆ ಅಥವಾ ವಾರಾಂತ್ಯದಲ್ಲಿ  ಕಾಲ ಕಳೆಯಬೇಕೆಂದು ಬಯಸುವುದು ಮನೆಯಲ್ಲಷ್ಟೇ. ದೈನಂದಿನ ಚಟುವಟಿಕೆಗಳಲ್ಲಿ ಟ್ರಾಫಿಕ್, ತಲೆ ಬಿಸಿ, ಕೆಲಸದ ಗಡಿಬಿಡಿ ಇತ್ಯಾದಿ ಜಂಜಾಟಗಳಿಂದ ಬೇಸತ್ತವರಿಗೆ ರಜೆ ಎಂದರೆ ಹಬ್ಬದಷ್ಟೇ ಸಂಭ್ರಮ.  ರಜೆ ಸಿಕ್ಕಮೇಲೆ ಕೇಳಬೇಕೆ? ಹೆಂಡತಿ, ಮಕ್ಕಳು, ಸ್ನೇಹಿತರು, ಉಳಿದ ಕೆಲಸಗಳು, ಅಬ್ಬಾ ಪ್ಲಾನ್ ಮಾಡುವುದೇ ಬೇಡ, ನೀರು ಕುಡಿದಷ್ಟೇ ಸಲೀಸಾಗಿ ಮುಗಿದು ಹೋಗುವಂತದ್ದು. ಇಂತಹ ಸಂತೋಷದ ದಿನಗಳಲ್ಲಿ ನಮ್ಮ ಕವಿ ಮಹಾಶಯರು ತಮ್ಮ ಚೊಚ್ಚಲ ಕೃತಿಯ ಲೋಕಾರ್ಪಣೆ ಕಾರ್ಯಕ್ರಮವನ್ನು … Read more