ಬೆನ್ ಜಾನಸನ್‍ನ ನಾಟಕ- Every Man In His Humour- ಅವಿವೇಕತನಕ್ಕೆ ಕನ್ನಡಿ: ನಾಗರೇಖಾ ಗಾಂವಕರ

ಇಂಗ್ಲೆಂಡಿನ ಹಳೆಯ ಉಪನಗರ ಹಾಗ್ಸ್‍ಡೆನ್‍ನ ನೋವೆಲ್ಲ್ ವಯೋವೃದ್ದ, ಆದರೆ ಧೀಮಂತ, ವ್ಯವಹಾರಿಕ ಕಲೆಯಲ್ಲಿ ನಿಪುಣ. ಆತನ ಮಗ ತರುಣ ಎಡ್ವರ್ಡ. ಮಗನ ಆಸಕ್ತಿಗಳು ಆತನ ಶ್ರೇಯಸ್ಸು ಇವುಗಳ ಬಗ್ಗೆಯೇ ತಂದೆಯ ಮೊದಲ ಆದ್ಯತೆ. ಮಗನಿಗೆ ಆಪ್ತವಾಗಿರುವ ಕಾವ್ಯ ಸಾಹಿತ್ಯಗಳೆಲ್ಲವೂ ಆತನಿಗೆ ಉಪಯೋಗಕ್ಕೆ ಬಾರದ ಸಂಗತಿಗಳು. ಲಾಭವಿಲ್ಲದ ವಿದ್ಯೆ. ಅದರೊಂದಿಗೆ ಆತನ ಇನ್ನೊಂದು ಚಿಂತೆ ಸದಾ ಗಿಡುಗಗಳ ಪಳಗಿಸುತ್ತ ಕಾಲಹರಣ ಮಾಡುವ ಆತನ ಅಣ್ಣನ ಮಗ ಹಳ್ಳಿ ಗಮಾರ ಸ್ಟೀಫನ್ ಬಗ್ಗೆ. ಒಬ್ಬ ವ್ಯಾವಹಾರಿಕ ಚಾತುರ್ಯವುಳ್ಳ ನೊವೆಲ್ಲ್ ತಂದೆಯಾಗಿ … Read more

ನೀವು ಬಡಿಸಿದ್ದು ಪಾಯಸವೋ ಅಥವಾ ಪ್ರೀತಿಯೋ???: ನಾಗೇಶ್‌ ಪ್ರಸನ್ನ

ನಲ್ಮೆಯ ಗೆಳತಿಯೇ, ನೆನಪಿರಲಿ, ಇದು ನಾನು ಬರೆಯುತ್ತಿರವ ಮೊಟ್ಟಮೊದಲ ಪ್ರೇಮಪತ್ರ. ಈ ಹಿಂದೆ ಯಾರಿಗೂ ಬರೆದಿಲ್ಲ, ಮಂದೆಯೂ ಬರೆಯುವುದಿಲ್ಲ – ನಿಮಗೆ ಹೊರತಾಗಿ. ನಂಬುವುದು, ಬಿಡುವುದು ನಿಮ್ಮ ಕ್ಷಮೆಗೆ ಬಿಟ್ಟಿದ್ದು. ನೀವು ಬಡಿಸಿದ್ದು ಪಾಯಸವೋ ಅಥವಾ ಪ್ರೀತಿಯೋ??? ಸುಮಾರು 5-6 ವರ್ಷಗಳಾಯಿತು ನಾನು ನಿಮ್ಮನ್ನು ಮೊದಲ ಬಾರಿ ನೋಡಿ. ಆ ದಿನದ ನೆನಪು ನನ್ನೆದೆಯಲ್ಲಿ ಇನ್ನೂ ಉಸಿರಾಡುತ್ತಲೇ ಇದೆ. ಅಂದು, ನಿಮ್ಮ ಮನೆಯಲ್ಲಿ ಯಾವುದೋ ಪೂಜಾ ಕಾರ್ಯಕ್ರಮವಿತ್ತು, ಎಷ್ಟೋ ಜನ ನೆರೆದಿದ್ದರು. ಆದರೆ, ಅಷ್ಟೂ ಜನಗಳಲ್ಲಿ ನನ್ನ … Read more

ಪಂಜು ಕಾವ್ಯಧಾರೆ

ಅಪ್ಪನು ಯಾಕೋ ಹಿಂದಿದ್ದಾರೆ! ಅಮ್ಮ ಒಂಬತ್ತು ತಿಂಗಳು ಹೊತ್ತರೆ, ಅಪ್ಪ ಇಪ್ಪತ್ತೈದು ವರ್ಷ ಹೊತ್ತರೂ, ಯಾಕೋ ಅಪ್ಪ ಅಮ್ಮನಿಗಿಂತ ಹಿಂದಿದ್ದಾರೆ. ಮನೆಯಲ್ಲಿ ವೇತನ ಪಡೆಯದೆ ಅಮ್ಮ, ತನ್ನ ಸಂಪಾದನೆಯೆಲ್ಲ ಮನೆಗೆ ಖರ್ಚು ಮಾಡುವ ಅಪ್ಪ. ಇಬ್ಬರ ಶ್ರಮವೂ ಸಮಾನವಾದರು ಅಪ್ಪ ಯಾಕೋ ಹಿಂದಿದ್ದಾರೆ. ಏನು ಬೇಕೋ ಅದು ಪಾಕ ಮಾಡುವ ಅಮ್ಮ , ಏನು ಬೇಕೋ ಅದು ಕೊಡಿಸುವ ಅಪ್ಪ, ಇಬ್ಬರ ಪ್ರೀತಿಯೂ ಸಮಾನವೆಯಾದರೂ ಅಮ್ಮನಿಗೆ ಬಂದ ಹೆಸರಿಗಿಂತ ಅಪ್ಪ ಯಾಕೋ ಹಿಂದಿದ್ದಾರೆ. ಎದೆ ಮೇಲಿನ ಅಚ್ಚೆಯಲ್ಲಿ … Read more

ಬೇಸಿಗೆಯ ಸಂಡಿಗೆ ಹಪ್ಪಳವೆಂಬ ಮತ್ತೊಂದು ಸಂಭ್ರಮ..!!: ರಾಜೇಶ್ವರಿ ಲಕ್ಕಣ್ಣವರ

ಬೇಸಿಗೆಯ ಬಿಸಿಲು ನೆತ್ತಿಯನ್ನು ಕಾವಲಿಯಂತೆ ಕಾಯಿಸುತ್ತಿದೆ ನಿಜ. ಆದರೆ ಬೇಸಿಗೆಯ ಬಿಸಿಲು ಬಂದರೆ ಮಾತ್ರ ಅಜ್ಜಿಗೆ ಹಾಗೂ ಅಮ್ಮನಿಗೆ ಸಂಭ್ರಮ. ತರೇವಹಾರಿ ತಿಂಡಿಗಳನ್ನು ಬೇಸಿಗೆಯಲ್ಲಿ ತಯಾರಿಸಿ ವರ್ಷಪೂರ್ತಿ ಕಾಪಿಟ್ಟುಕೊಳ್ಳಬಹುದಲ್ಲ ಎಂಬ ಸಂತೋಷವೇ ಅವರ ಮೊಗದಲ್ಲಿ ಮನೆ ಮಾಡಿರುತ್ತದೆ. ಮಳೆಗಾಲದಲ್ಲಿ ಜೋರು ಮಳೆಗೆ, ಬೀಸುವ ಚಳಿಗೆ, ಹಬ್ಬದೂಟಗಳಿಗೆ ಹಪ್ಪಳ, ಸಂಡಿಗೆ, ಚಿಪ್ಸ್, ಮುಂತಾದವುಗಳು ಬೇಕೆ ಬೇಕೆಂಬುದು ಅವರಿಗಲ್ಲದೆ ಮತ್ಯಾರೂ ತಾನೇ ಅಷ್ಟೊಂದು ಚೆನ್ನಾಗಿ ಅರಿಯಲು ಸಾಧ್ಯ. ಇಂತಹ ತಿಂಡಿಗಳನ್ನು ತಯಾರಿಸಲು ಮಳೆಗಾಲ ಹಾಗೂ ಚಳಿಗಾಲ ಪ್ರಾಶಸ್ತ್ಯವಾದ ಸಮಯವಲ್ಲವೆಂದು ಗೊತ್ತಿರುವದರಿಂದ … Read more

ಭಾರತ ಭಾಗ್ಯವಿಧಾತನಿಗೊಂದು ಸಲಾಂ: ನಾಗರಾಜನಾಯಕ ಡಿ.ಡೊಳ್ಳಿನ

ಇತ್ತ ಧಾರವಾಡದ ಕೆ.ಸಿ.ಡಿ ಮೈದಾನದಲ್ಲಿ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಅವರ ಭಾರತ ಭಾಗ್ಯವಿಧಾತ ಕಾರ್ಯಕ್ರಮ ಧ್ವನಿ ಬೆಳಕು ಎಲ್ಲ ಕಲಾಪ್ರಕಾರಗಳನ್ನೊಳಗೊಂಡ ಕಾರ್ಯಕ್ರಮ ಉತ್ತಮವಾಗಿ ಮೂಡಿಬರುತ್ತಿತ್ತು. ಆ ಅದ್ಧೂರಿ ಸೆಟ್, ಝಗಮಗಿಸುವ ಬೆಳಕು, ಹಿನ್ನೆಲೆ ಧ್ವನಿ, ಗೊರವರ ಕುಣಿತ, ಪುರವಂತಿಕೆ, ಯಕ್ಷಗಾನ, ಗೀಗಿ ,ತಮಾಷಾ ,ಡೊಳ್ಳು ಇನ್ನಿತರ ಕಲಾಪ್ರಕಾರಗಳ ಕಾರ್ಯಕ್ರಮ ಅದ್ಭುತವಾಗಿದ್ದ ಈ ಕಾರ್ಯಕ್ರಮ ನೋಡುತ್ತಿದ್ದಂತೆಯೇ ನನ್ನ ಮನಸ್ಸು 2008 ರಲ್ಲಿ ಬುದ್ಧವಿಹಾರದಲ್ಲಿ ನಡೆದ ರಾಷ್ಟ್ರೀಯ ಸೇವಾ ಯೋಜನೆಯ ಅಂತರ ಮಹಾವಿದ್ಯಾಲಯದ ಶಿಬಿರದ ಘಟನೆಗಳತ್ತ ಮನಸ್ಸು … Read more

ಕೊನೆಗೂ ದುಷ್ಟ ಸಂಹಾರಕ್ಕೆ ಮುನ್ನುಡಿ: ಭಾರ್ಗವಿ ಜೋಶಿ.

ಬರಿ ಈ ಕೊರೊನ, ಕೊರೊನ ಅಂತ ಆ ಕೀಟದ ಹಾವಳಿಯ ಮಧ್ಯ ಬೇರೆ ಬದುಕನ್ನೆಲ್ಲ ಮರೆತು ಬಿಟ್ಟಿದ್ದೇವೆ. ಹೋದ ತಿಂಗಳು ಭಾರತದಲ್ಲಿ ನಡೆದ ಒಂದು ಘಟನೆ ಇಂದು ಇತಿಹಾಸವೇ ಸರಿ. ನಿರ್ಭಯ ಅನ್ನುವ ಹೆಣ್ಣುಮಗಳನ್ನು ಅಷ್ಟು ಅಮಾನುಷವಾಗಿ ಹಿಂಸಿಸಿ ಕೊಂದ ಪಾತಕಿಗಳನ್ನು ಗಲ್ಲಿಗೆ ಬಲಿಕೊಡಲಾಯಿತು. ಅಂದು ಗಲ್ಲಿನ ಕುಣಿಕೆಗೆ ಕತ್ತು ನೀಡುವಾಗ ಅವರ ಮನಸುಗಳು ಎಷ್ಟು ಒದ್ದಾಡಿರಬಹುದು. ಅಯ್ಯೋ ಸಾವು ಕಣ್ಣಮುಂದೆ ಇದೆ ಎಂದಾಗ ಎಷ್ಟು ಭಯಾನಕ. ನಮ್ಮನ್ನು ಬದುಕಿಸಿ, ಒಂದು ಅವಕಾಶ ಕೊಡಿ ಎಂದು ಕೊನೇ … Read more

ಅವ್ವಣ್ಣಿ: ಗಿರಿಜಾ ಜ್ಞಾನಸುಂದರ್

“ಮಗಾ ಸ್ಕೋರ್ ಎಷ್ಟು?” ಗೇಟ್ ಇಂದ ಹುಡುಗರ ಜೋರಾದ ದನಿ.. “ಯಾರು? ಸ್ಲಿಪ್ಪರ್ ಆ? ನಮ್ ಹುಡ್ಗ ಇಲ್ಲ ಕಣಪ್ಪ” ಅಜ್ಜಿಯ ದನಿ. “ಅಜ್ಜಿ, ಸ್ಕೋರ್ ಎಷ್ಟಾಗಿದೆ?” ” ಚೆನ್ನಾಗಾಡ್ತಿದಾರೆ ನಮ್ಮವರು, ೨೩೮ ಆಗಿದೆ ಬರಿ ೩ ಜನ ಔಟ್… ತಂಡೂಲ್ಕರ್ ಇನ್ನು ಆಡ್ತಿದಾನೆ, ತುಂಬ ಚೆನ್ನಾಗಿದೆ ಆಟ.. ಬಾ ನೀನು ನೋಡಿವಂತೆ” “ಇಲ್ಲ ಅಜ್ಜಿ.. ಟ್ಯೂಷನ್ ಗೆ ಹೋಗ್ಬೇಕು. ಅಮ್ಮ ಬೈತಾರೆ, ಇಂಡಿಯಾ ವಿನ್ ಆಗುತ್ತೆ ಬಿಡಿ… ಖುಷಿ ಆಯಿತು” ಅಂತ ಹೇಳಿ ಸ್ಟೀಫೆನ್ ಹೊರಟ. … Read more

“ಯುಗಾದಿ: ನಿನ್ನೆ-ನಾಳೆಗಳೆಂಬ ಬೇವು-ಬೆಲ್ಲಗಳು”: ಪೂಜಾ ಗುಜರನ್, ಮಂಗಳೂರು

ಮನುಷ್ಯ ಪ್ರತಿದಿನ ಹುಟ್ಟಿ ಪ್ರತಿದಿನ ಸಾಯುತ್ತಾನೆ. ಅವನಿಗೆ ಪ್ರತಿದಿನವೂ ಹೊಸ ಹುಟ್ಟು. ಹಾಗೇ ಈ ಪ್ರಕೃತಿ ಕೂಡ ಪ್ರತಿವರ್ಷವೂ ಹೊಸತನದ ಹೊಸ್ತಿಲಲ್ಲಿ ಸಂಭ್ರಮಿಸುವ ಹೊಸ ಯುಗದ ಆರಂಭವನ್ನು ಯುಗಾದಿಯಾಗಿ ಸಂಭ್ರಮಿಸಿ ಸಿಹಿ ಕಹಿಯನ್ನು ಸಮವಾಗಿ ಸವಿಯಲು ಕಲಿಸುತ್ತದೆ. ಬದುಕೆಂದರೆ ಹಾಗೇ ತಾನೆ ಒಮ್ಮೆ ಸುಖ ಒಮ್ಮೆ ದುಃಖ, ಸುಂದರ ಸ್ನೇಹ ಅಸಹ್ಯ ದ್ವೇಷ, ಮುಗಿಯದ ಆಸೆ. ಕಾಡಿಸುವ ಹತಾಶೆ, ನಿರಂತರ ಭಕ್ತಿ. ಕಾಣದ ಭಯ. ಹುಟ್ಟು ಸಾವಿನ ನಡುವೆ ಹಾದು ಹೋಗುವ ಸಣ್ಣ ಗೆರೆಯಂತೆ ಈ ಬದುಕು. … Read more

ಆರು ವರ್ಷದ ಬಾಲ ಪ್ರತಿಭೆ ಕುಮಾರಿ ಮೈತ್ರಿ : ನಿಯಾಜ್ ಪಡೀಲ್

ವಯಸ್ಸು ಆರು ಸಾಧನೆ ನೂರಾರು ಮಾಡಿದ ಬೇಲೂರಿನ ನಾಟ್ಯ ಶಾಂತಲೆ, ನಾಟ್ಯ ಮಯೂರಿ ಕುಮಾರಿ ಮೈತ್ರಿ ಎಸ್ ಮಾದಗುಂಡಿ. ಬೆಳೆಯುವ ಸಿರಿ ಮೊಳಕೆಯಲ್ಲಿ ಎಂಬ ಮಾತು ಎಷ್ಟು ಸತ್ಯ. ಈ ಪದವನ್ನು ಕೇಳಲು ಹಿತ ಅನ್ನಿಸುತ್ತದೆ. ಸಾಧಕರಿಗೆ ಸಾಧನೆಯ ಹಾದಿಯಲ್ಲಿ ಇರುವವರಿಗೆ ಈ ಮಾತು ನಿಜಕ್ಕೂ ಅಕ್ಷರಶಃ ಹೇಳಿ ಮಾಡಿಸಿದಂತಿದೆ. ಇಂದಿನ ಬಾಲ ಪ್ರತಿಭೆಗಳಿಗೂ ಈ ಮಾತು ಹೊಂದಿಕೆಯಾಗುತ್ತದೆ. ಅದೆಷ್ಟೋ ಬಾಲ ಪ್ರತಿಭೆಗಳು ನಮ್ಮ ನಿಮ್ಮ ನಡುವೆ ಇದ್ದಾರೆ. ಅಂತಹ ಪ್ರತಿಭೆ ಬೇಲೂರಿನ ಆರು ವರ್ಷದ ಬಾಲ … Read more

ಯುಗಾದಿ ವಿಶೇಷಾಂಕಕ್ಕೆ ಬರಹ ಆಹ್ವಾನ

ಪ್ರಿಯ ಪಂಜುವಿನ ಓದುಗರೇ ಹಾಗು ಬರಹಗಾರರೇ, ನಿಮ್ಮೆಲ್ಲರ ಸಹಕಾರದಿಂದ ಪಂಜು ತನ್ನ ಎಂಟನೇ ವರ್ಷದ ಯುಗಾದಿಯ ಸಂಭ್ರಮದಲ್ಲಿದೆ. ಕಳೆದ ವರ್ಷಗಳಂತೆ ಈ ಬಾರಿಯೂ ಯುಗಾದಿ ವಿಶೇಷಾಂಕವನ್ನು ತರಲು ಪಂಜು ಬಯಸುತ್ತದೆ. ಆದ ಕಾರಣ ಈ ವಿಶೇಷಾಂಕಕ್ಕಾಗಿ ನಿಮ್ಮ ಲೇಖನ, ಪ್ರಬಂಧ, ಕವಿತೆ, ಕತೆ ಇತ್ಯಾದಿ ಸಾಹಿತ್ಯದ ಬರಹಗಳನ್ನು ಪಂಜುವಿಗಾಗಿ ಕಳಿಸಿಕೊಡಿ. ನಿಮ್ಮ ಲೇಖನಗಳು ಮಾರ್ಚ್ 23 ರ ಸಂಜೆಯೊಳಗೆ ನಮಗೆ ತಲುಪಲಿ… ನಿಮ್ಮ ಬರಹಗಳನ್ನು editor.panju@gmail.com ಮತ್ತು smnattu@gmail.com ಮೇಲ್ ಐಡಿಗಳಿಗೆ ಕಳುಹಿಸಿಕೊಡಿ. ನಿಮ್ಮ ಲೇಖನಗಳ ನಿರೀಕ್ಷೆಯಲ್ಲಿ… … Read more

ಪಂಜು ಕಾವ್ಯಧಾರೆ

ಒಂದು ಟೋಪಿಯ ಸುತ್ತ… ಊರ ಕೇರಿಯಿಂದ ಉದ್ದುದ್ದ ಹೆಜ್ಜೆಯನ್ನಿಟ್ಟು ಹೊರಟ ಊರಗೌಡ ಅಂದು ಕಂಡವರ ಕಣ್ಣಿಗೆ ಒಬ್ಬ ಬ್ರಿಟಿಷ ದಂಡನಾಯಕನಂತೆ ಕಾಣುತ್ತಿದ್ದ ಯಾವದೋ ವಸ್ತುಸಂಗ್ರಹಾಲಯದಿಂದ ಹೊತ್ತುತಂದಂತೆ ಬೆತ್ತದಿಂದ ಗೋಲಾಕಾರವಾಗಿ ಹೆಣೆದ ಹಳೆಯ ಟೋಪಿಯೊಂದು ಆತನ ತಲೆಯ ಮೇಲೆ ಕೂತು ಇಡೀ ಪ್ರಪಂಚವನ್ನೇ ಕೊಂದುಬಿಡಬೇಕೆನ್ನುವ ಅವಸರದಲ್ಲಿತ್ತು ಈಗಷ್ಟೇ ಉದಯಿಸಿದ ಆತನ ಕಣ್ಣಲ್ಲಿನ ಕೆಂಪು ಸೂರ್ಯ, ಸೆಟೆದುನಿಂತ ಮೈಮೇಲಿನ ರೋಮಗಳು, ಬಿಳಿಯ ಮೀಸೆ ಕಪ್ಪು ಬಣ್ಣಕ್ಕೆ ಪರಿವರ್ತನೆಯಾಗಿ ಆ ಮೀಸೆಯ ಬುಡದಲ್ಲಿ ಹುಟ್ಟಿಕೊಂಡ ಕೋರೆಹಲ್ಲಿನ ರಕ್ಕಸನಂತೆ ಒರಟು ಧ್ವನಿಯಲ್ಲಿ ನಕ್ಕ…. … Read more

ಶ್ರೇಷ್ಠ ಸಾಹಿತಿ ವಿಲಿಯಂ ಶೇಕ್ಸಪೀಯರ್ ಬದುಕು ಬರಹ ಮತ್ತು ಕಾಲ: ನಾಗರೇಖ ಗಾಂವಕರ

ಜಗತ್ತಿನ ಅತ್ಯಂತ ಶ್ರೇಷ್ಠ ಸಾಹಿತಿ ವಿಲಿಯಂ ಶೇಕ್ಸಪಿಯರ ಎಲ್ಲ ಕಾಲ ದೇಶಗಳಿಗೂ ಪ್ರಶ್ತುತ ಎನ್ನಿಸುವ ಸಾಹಿತ್ಯ ಕೃತಿಗಳ ರಚಿಸುವ ಮೂಲಕ ಸರ್ವಮಾನ್ಯ ಸಾಹಿತಿ ಎಂದೇ ಪ್ರಸಿದ್ಧ. ತನ್ನ ಜೀವನ ಮತ್ತು ಬರವಣಿಗೆಗಳಲ್ಲಿ ಪ್ರೌಢತೆಯನ್ನು ಬಿಂಬಿಸಿದ್ದ ಶೇಕ್ಸಪಿಯರ ಜ್ಞಾನ, ಔದಾರ್ಯ, ನಂಬಿಕೆ, ಯುವ ಪ್ರೇಮದ ತುಡಿತ, ಕ್ಷಮೆ ಹೀಗೆ ಮಾನವ ಸಂವೇದನೆಗಳ ಸುತ್ತ ಹೆಣೆದ ಆತನ ಕೃತಿಗಳು ಲೋಕ ಪ್ರಸಿದ್ಧವಾಗಿವೆ. ಇಂಗ್ಲೀಷ ಸಾಹಿತ್ಯ ಲೋಕದಲ್ಲಿ ಎಲಿಜಬೆತನ್ ಯುಗ ಸುವರ್ಣ ಕಾಲ. ಐತಿಹಾಸಿಕವಾಗಿ ಜ್ಞಾನಪುನರುಜ್ಜೀವನ, ಧಾರ್ಮಿಕ ಸುಧಾರಣೆ, ಭೌಗೋಲಿಕ ಅನ್ವೇಷಣೆಗಳ … Read more

ಪ್ರೇಮ ಕಾವ್ಯಧಾರೆ

ರಾಗ-ರತಿ ಸೋನೆಸೋನೆಯಾಗಿ ಸುರಿವ ಸಂಜೆಮಳೆಗೆ ಕಣ್ಮಿಂಚಿನಲೆ ರಂಗೇರಿದ ರಾಗ-ರತಿ. ಬಾಗಿತಬ್ಬಿ ಬೆಸೆವ ಬಂಧದ ತವಕ ನಸು ಬಾಗಿದ ಬಾನು ತುಸು ಸರಿದ ಭುವಿ ಪ್ರತಿಕ್ಷಣಗಳ ಲೆಕ್ಕವಿಟ್ಟ ವಿರಹದುರಿಯಲ್ಲಿ ಹುಸಿಮುನಿಸು ನಸುಗೋಪ ಕಾದುಕುದ್ದ ಕ್ಷಣಗಳನೆಲ್ಲ ಕಾರಿ ಬಿಡುವ ತವಕ ರಾಜಿಸೂತ್ರದ ಸಂಭ್ರಮ ಕಣ್ಣ ತುದಿಗೇ ಕುಳಿತ ಸಾಂತ್ವ ಕಾಲಜಾರುವ ಮೊದಲೇ ಲೆಕ್ಕ ಕೂಡಿಸುವಾಟ ಸೋಲಬಾರದ ಹಠಕೆ ಸೋತುಗೆಲ್ಲುವ ಪ್ರೀತಿ ತುಟಿಯೊಡೆಯದೆಲೆ ಎದೆಮುಟ್ಟಿದ ಮಾತು ಕಣ್ಣನೋಟದ ಕೂಡುಬೇಟವ ದಾಟಿಬರುವ ಮೈಮರೆತ ಮುಟ್ಟಲಾರದ ಬೇಗುದಿಗೆ ಬಾಗಿ ಸೇರುವ ಬಯಕೆ ಶೃತಿಹಿಡಿದು ಒರತೆಯೊಡೆದು … Read more

ಥ್ಯಾಂಕ್ ಯೂ ಪೋಸ್ಟ್ ಮನ್: ಅಮರದೀಪ್. ಪಿ.ಎಸ್.

ಬರೆಯದ‌ ಪ್ರೇಮದ‌ ಕವಿತೆ ಹಾಡಾಯಿತು… ಎದೆಯಲಿ ನೆನಪಿನ ನೋವು ಸುಖ‌ ತಂದಿತು….. ಪಂಕಜ್‌ ಉಧಾಸ್‌ ಮತ್ತು ಕವಿತಾ ಕೃಷ್ಣಮೂರ್ತಿ ಹಾಡುತ್ತಿದ್ದರು. ನಾನು ಖಾಲಿ‌ ಕೂತ ಸಮಯದಲ್ಲಿ ಹಾಡು ಕೇಳುವುದು ಬಿಟ್ಟರೆ ಯಾವುದಾದರೂ ಪುಸ್ತಕ ನೆನಪಾಗಿ ಹುಡುಕುತ್ತೇನೆ. ಇವತ್ತು ಪುಸ್ತಕ ತಡಕಾಡಲು ಮನಸಾಗಲಿಲ್ಲ… ಹಾಡಿನ ಗುನುಗು ನಾಲಗೆಗೆ ನೆನಪಾಗಿದ್ದೇ ತಡ ಕೇಳುತ್ತಾ ಕುಳಿತೆ. ನಾನು ಡಿಪ್ಲೋಮಾ ಓದುವ ಕಾಲದಲ್ಲೂ ಏನೋ ಗೊತ್ತಿಲ್ಲ. ನನ್ನ ರೂಮೇಟ್ ನಾಗರಾಜ್ (ಡಿಂಗ್ರಿ) ಒಂದು ವಾಕ್ಮನ್ ತಂದಿದ್ದ. ಒಂದಿಷ್ಟು ಕೆಸೆಟ್ ಗಳಿದ್ದವು. ಅದೆಂಥ ಅಡಿಕ್ಷನ್‌ … Read more

ಪ್ರೇಮಿಗಳಿಗೆ ದಿನವಿಲ್ಲ ! ದಿನವೆಲ್ಲಾ !!!!!: ಸತೀಶ್ ಶೆಟ್ಟಿ ವಕ್ವಾಡಿ

” ನಿನ್ನ ಬಿಟ್ಟು ಬದುಕುವ ಶಕ್ತಿ ನನಗಿಲ್ಲ ” ಆಕೆಯ ಬೆರಳಿಗೆ ತನ್ನ ಬೆರಳು ತೂರಿಸಿಕೊಂಡು, ಸಣ್ಣಗೆ ಕಂಪಿಸುತ್ತಿರುವ ಅದರದಿಂದ ಹೊರಬಿದ್ದ ಆತನ ಮಾತು, ಆಕೆಯ ಮೈಮನವನ್ನೆಲ್ಲ ರೋಮಾಂಚನಗೊಳಿಸಿತ್ತು.  “ಹೌದು ಕಾಣೋ ನೀನಿಲ್ಲದ ಬದುಕನ್ನು ನನಗೆ ಊಹಿಸಿಕೊಳ್ಳಲು ಆಗುತ್ತಿಲ್ಲ ” ಜೋರಾಗಿ ಬೀಸುತ್ತಿದ್ದ ಏರಿಕಂಡಿಷನಿನ ಗಾಳಿಯಲ್ಲಿ ಸಣ್ಣನೆ ಬೆವತ್ತಿದ್ದ ಆಕೆ ನುಡಿಯುತ್ತಾಳೆ. ಐಸ್ ಕ್ರೀಮ್ ಪಾರ್ಲರಿನ ಮೂಲೆಯ ಟೇಬಲಿನಲ್ಲಿ ಕುಳಿತ್ತಿದ್ದ ಅವರಿಬ್ಬರ  ಮುಂದಿದ್ದ ಅದೇ ಐಸ್ ಕ್ರೀಮ್ ಪಾರ್ಲರಿನ ಹೆಸರು ಹೊಂದಿರುವ ಸ್ಪೆಷಲ್ ಐಸ್ ಕ್ರೀಮನ್ನು ತನ್ನೊಡಲೊಗೆ … Read more

ಪ್ರೀತಿ…ಹಾಗೆಂದರೇನು!!: ಸಹನಾ ಪ್ರಸಾದ್

ಮಾನಸಳನ್ನು ವರಿಸಲು ಪ್ರಜ್ವಲನಿಗೆ ಸುತರಾಂ ಇಷ್ಟ ಇರಲಿಲ್ಲ. ಮೊದಲನೆಯದಾಗಿ, ಅವಳನ್ನು ನೋಡಿದ ತಕ್ಷಣ ಯಾವ ಭಾವನೆಯೂ ಉದಯಿಸಿರಲಿಲ್ಲ. ಅವನ ಆಫೀಸ್ನಲ್ಲಿ ಕೆಲಸ ಮಾಡುತ್ತಿದ್ದ ಅನೇಕ ಹೆಣ್ಣುಗಳ ಹಾಗೆ ಕಂಡಿದ್ದಳು. ಹೇಳಿಕೊಳ್ಳುವಂತಹ ವಿಶೇಷವೇನೂ ಅವಳಲ್ಲಿರಲಿಲ್ಲ. ವಯಸ್ಸು 28 ಆದರೂ ಮುಖದಲ್ಲಿ ಪ್ರೌಢ ಕಳೆ, ವಯಸ್ಸಿಗೆ ಮೀರಿದ ಗಾಂಭೀರ್ಯ..ಎರಡನೆಯದಾಗಿ ಅವನು ಪ್ರೀತಿಸಿದ್ದ ರಮ್ಯಳ ಚಿತ್ರ ಮನಸ್ಸಲ್ಲಿ ಇನ್ನು ಹಸಿಯಾಗಿತ್ತು. ಬೇರೊಬ್ಬನನ್ನು ವರಿಸಿ ಆಸ್ಟ್ರೇಲಿಯಾಗೆ ಹಾರಿದ ಅವಳ ನೆನಪಿನಿಂದ ಇನ್ನೂ ಹೊರಬರಲಾಗಿರಲಿಲ್ಲ. 34 ಹತ್ತಿರ ಬಂದ ವಯಸ್ಸು, ಆಗಲೇ ಬಿಳಿ ಆಗುತ್ತಿರುವ … Read more

ಪ್ರೇಮ: ಕೊಟ್ರೇಶ್ ಕೊಟ್ಟೂರು

ಈ ಪ್ರೀತಿ ಅನ್ನೋದು ಒಂಥರಾ ಹಾವು ಏಣಿಯ ಆಟ. ಮೊದಮೊದಲು ಪ್ರೀತಿ ನಮಗೆ ಗೊತ್ತಿಲ್ಲದೇ, ಪರಿಚಯ ಇಲ್ಲದೇ ಇರೋರ ಮೇಲೆ ಸಡನ್ ಆಗಿ ಹುಟ್ಕೊಳುತ್ತೆ. ನೋಡಿದ ಕೂಡಲೇ ಹುಟ್ಟುವ ಪ್ರೀತಿ ನಿಜವಾ ಅಥವಾ ಇನ್‍ಫ್ಯಾಚುಯೇಷನ್ನಾ ? ತೀವ್ರ ಗೊಂದಲದಲ್ಲೇ ಇರುತ್ತೇವೆ ಅದು ಮಾನಸಿಕವಾ ? ಅಥವಾ ದೇಹದಲ್ಲಾಗುವ ದೈಹಿಕ ಬದಲಾವಣೆಗಳಾ ? ಹಾಗಂತ ಕಂಡ ಕಂಡವರ ಮೇಲೆ ಪ್ರೀತಿ ಹುಟ್ಟುವುದು ನಿಜವಾದ ಪ್ರೀತಿ ಅಲ್ಲವೇ ಅಲ್ಲ. ಈ ಪ್ರೀತಿಯ ಬಗೆಗೆ ಒಂದಷ್ಟು ಗೊಂದಲ ನನ್ನನ್ನು ಈಗಲೂ ಕಾಡಿದೆ. … Read more

“ಪ್ರೀತಿಗೂ ಒಂದು ದಿನ…”: ಪೂಜಾ ಗುಜರನ್, ಮಂಗಳೂರು

ಪ್ರೇಮಿಗಳ ದಿನ ಅಂದ್ರೆ ಯಾರಿಗೆ ತಾನೇ ನೆನಪಿರಲ್ಲ. ಫೆಬ್ರವರಿ 14 ರಂದು ವಿಶ್ವದದ್ಯಾಂತ “ವ್ಯಾಲೆಂಟೈನ್ಸ್ ಡೇ” ಆಚರಿಸಲಾಗುತ್ತದೆ. ಪ್ರೀತಿ ಪ್ರೇಮ ಅಂದಾಗ ಪ್ರತಿಯೊಬ್ಬರೂ ಕೂಡ ಪ್ರೇಮಿಗಳಾಗುತ್ತಾರೆ. ಈ ದಿನದ ಬಗ್ಗೆ ಕೇಳಿದರೆ ಕೆಲವರು ಸಣ್ಣಗೆ ನಗುತ್ತಾರೆ ಕೆಲವರು ನಾಚುತ್ತಾರೆ ಇನ್ನೂ ಕೆಲವರು ವಿರೋಧಿಸುತ್ತಾರೆ. ವ್ಯಾಲೆಂಟೈನ್ಸ್ ಡೇ ಅಂದ್ರೆ ಇದು ಬರಿ ಪ್ರೇಮಿಗಳಿಗೆ ಮಾತ್ರ ಇರುವ ದಿನವಲ್ಲ. ಇಲ್ಲಿ ವಯಸ್ಸು ಲಿಂಗ ಭೇದ ಮರೆತು ತಮ್ಮ ಪ್ರೀತಿಯ ನಿವೇದನೆಯನ್ನು ಯಾರು ಬೇಕಾದರೂ ಮಾಡಬಹುದು.. ಅದು ಅವರವರ ಅಭಿಪ್ರಾಯಕ್ಕೆ ಬಿಟ್ಟಿದ್ದು. … Read more

”ತನ್ನದೇ ಎಳಸು ಹೃದಯಕ್ಕೊಂದು ಪತ್ರ”: ಪ್ರಸಾದ್ ಕೆ.

ಪ್ರಿಯ ಹರೆಯದ ಎಳಸು ಹೃದಯ… ಹೇಗಿದ್ದೀಯಾ? ಇಂದು ವ್ಯಾಲೆಂಟೈನ್ಸ್ ದಿನವು ಬಂದಿರುವ ನೆಪದಲ್ಲಿ ನಿನ್ನ ಈವರೆಗಿನ ವ್ಯಾಲೆಂಟೈನ್ ಪಯಣಕ್ಕೊಂದು ಸುಮ್ಮನೆ ಮೆಲುಕು ಹಾಕಿ ನೋಡಿದೆ. ಅಬ್ಬಬ್ಬಾ, ಅದೆಷ್ಟು ಬಣ್ಣಗಳು, ಅದೆಷ್ಟು ಏರಿಳಿತಗಳು, ಅದೆಷ್ಟು ರೂಪಾಂತರ? ಅದೇನೇ ಇರಲಿ. ನೀನು ನಡೆದು ಬಂದ ಹಾದಿಯ ಬಗ್ಗೆ ನಿನಗೆ ಹೆಮ್ಮೆಯಿರಲಿ ಎಂಬ ಕಳಕಳಿಯ ವಿನಂತಿ ನನ್ನದು. ನಿನ್ನ ಈ ಹಾದಿಯು ಕಲ್ಲುಮುಳ್ಳುಗಳದ್ದು ಎಂಬುದು ಸತ್ಯ. ಮೊದಲ ಬಾರಿಗೆ ಎಲ್ಲವೂ ಹೊಸತಾಗಿದ್ದರಿಂದ ಸುಮ್ಮನೆ ಬೇಸ್ತು ಬಿದ್ದೆ, ವೃಥಾ ಮೋಸ ಹೋದೆ. ಎರಡನೇ … Read more

ಪ್ರೀತಿಯ ದಿನದಂದು: ನಾಗರೇಖಾ ಗಾಂವಕರ

ಯಾವುದರಲ್ಲೂ ಆಸಕ್ತಿಯಿಲ್ಲ. ಗುರಿಯಿರದ ಶೂನ್ಯದೆಡೆ ದೃಷ್ಟಿ, ಚಂಚಲತೆ, ಮರೆವು, ನಾನು ಎನ್ನುವುದೇ ಮರೆತು ಹೋದ ಸ್ಥಿತಿ. ಹೌದು.. ಇದು ಪ್ರೀತಿಯ ಮೊದಲ ಕನವರಿಕೆಯ ದಿನಗಳ ಮಾನಸಿಕ ಸ್ಥಿತಿ. ಪ್ರೀತಿ ಎನ್ನುವದು ಅದೂ ಹೇಗೋ ಬೇಡ ಬೇಡವೆಂದರೂ ಬಂದು ಹೇಗಲೇರಿಕೊಂಡು ಆಡಬಾರದ ಆಟ, ನೋಟ, ಕಾಟಗಳ ಜೊತೆಗೆ ಬದುಕಿಗೆ ನೋವನ್ನು, ನಲಿವನ್ನು, ತೃಪ್ತಿಯನ್ನು, ಉನ್ಮತ್ತತೆಯನ್ನು ಕೆಲವು ಬಾರಿ ಅಧ್ವಾನವನ್ನೂ ಮಾಡಿಬಿಡುವ, ಆದರೂ ಜೀವ ಸಂಕುಲ ಜೀವ ಬಿಡುವ ಆಪ್ತ ಭಾವ. ಪ್ರೇಮ ಅನಿರ್ವಚನೀಯವಾದದ್ದು, ಪ್ರೀತಿ ಬಣ್ಣವಿಲ್ಲದ್ದು ಆದರೂ ಹಲವು … Read more