ಆಡಿಯೋ ಸಹಿತ ಪಂಜು ಕಾವ್ಯಧಾರೆ

ಕನ್ನಡ ನಾಡಿನಲಿ  ಶ್ರೀಗಂಧದ ನಾಡಿನಲಿ ಸಹ್ಯಾದ್ರಿಯ ಗೂಡಿನಲಿ ಕಾವೇರಿಯ ಮಡಿಲಿನಲಿ ನನ್ನದೊಂದು ಪುಟ್ಟ ಗುಡಿಸಲು ಕನ್ನಡ ನುಡಿಯು ಮಿನುಗುವುದಲ್ಲಿ ಹಸಿರು ತೋರಣದೊಲು ಹಸಿರನುಟ್ಟ ಭುವನಗಿರಿ ಮುಡಿಯಲಿಟ್ಟು ನವಿಲುಗರಿ ಹಕ್ಕಿಗೊರಲ ತಬ್ಬಿ ಹಿಡಿದು ಚಂದಿರನ ಗಿಲಕಿ ಬಡಿದು ನನ್ನ ಹ್ರುದಯ ಕನ್ನಡವನೆ ಮಿಡಿಯುವುದು ನನ್ನ ಮಡದಿ ಮತ್ಸ್ಯಕನ್ಯೆ ಬಳೆಯ ಸದ್ದು ಗೆಜ್ಜೆನಾದ ಅಡಿಗಡಿಗೂ ಕನ್ನಡ ಸುತನ ಪ್ರವರ ತೊದಲು ನುಡಿಯಲಿ ಸವಿಜೇನು ಕನ್ನಡ ನಮ್ಮ ಮನೆಯ ಅಂಗಳದಿ ಪ್ರಜ್ವಲಿಪುದು ಕನ್ನಡ ರಾಷ್ಟ್ರನುಡಿ ರಾಜನುಡಿ ಯಾವುದಾದರೇನು ದಾಯಾದಿಗಳ ನುಡಿಯ ನಡೆಯು … Read more

ಪಂಜು ಕಾವ್ಯಧಾರೆ

ದೇವನೊಲಿದ ಮೊದಲು ಸಾರಿ ತೊದಲು ನುಡಿ ತುಟಿಗೆ ಬಂದಾಗ ಪವಿತ್ರ ಬೆಟ್ಟವನ್ನೇರಿ ಪ್ರಾರ್ಥಿಸಿದೆ ದೇವರಿಗೆ- 'ಪ್ರಭು, ನಾ ನಿನ್ನ ಸೇವಕ -ಅನ್ಯಥಾ ಶರಣಂ ನಾಸ್ತಿ, ತ್ವಮೇವ ಶರಣಂ ಮಮ' ಬಿರುಗಾಳಿಯಂತೆ ಬೀಸಿ ಹೋದ ದೇವನದೆಂದಿನಂತೆ ನಿರುತ್ತರ. ಸಾವಿರ ಯುಗಗಳಾನಂತರ ಮತ್ತೆ ಏರಿದೆ-ನಾ ಪವಿತ್ರ ಬೆಟ್ಟ ಪ್ರಾರ್ಥಿಸಿದೆ ದೇವರಿಗೆ-  'ನೀ ಕರ್ತ, ನಾ ನಿನ್ನ ಕೈ ಬೊಂಬೆ, ನನ್ನ ಅಣು ರೇಣು ತೃಣವೂ ನಿನ್ನದೆ' ಗರಿಗೆದರಿದ ರೆಕ್ಕೆಯಂದದಿ ಹಾರಿಹೋದ ದೇವನದೆಂದಿನಂತೆ ನಿರುತ್ತರ. ಸಾವಿರ ಯುಗಗಳಾನಂತರ ಮತ್ತೆ ಏರಿದೆ-ನಾ ಪವಿತ್ರ … Read more

ಮೂರು ಕವಿತೆಗಳು: ಶಿವಕುಮಾರ ಸಿ., ಕುಸುಮ ಆಯರಹಳ್ಳಿ, ನೇಮಿನಾಥ ತಪಕೀರೆ

ನಾ ಕಟ್ಟುವದಿಲ್ಲ ನಾ ಕಟ್ಟುವದಿಲ್ಲ….. ತಾಜ್ ಮಹಲ ನಿನ್ನ ಜಾತ್ರೆಯಲ್ಲಿ ತೂಗುವ ತೊಟ್ಟಿಲು ಹರಿದಾಡುವ ಬೊ೦ಬೆ  ಸದ್ದು, ಸಿಳ್ಳೆಗಳೆಲ್ಲಾ ನಾನಾಗಿದ್ದರೂ.. ಬದುಕ ಕಚ್ಚೆ ಸಿಗದ ತಿರುಕ ನಾ ಕಟ್ಟುವದಿಲ್ಲ….. ಚಾರ್ ಮಿನಾರ್ ಮನಕೆ ಕ೦ಬದ ಕೊರತೆ ಕೆಸರು ಹಾದಿ ಕಲ್ಲು ಮುಳ್ಳು ಬೆಚ್ಚಿ ಬಿದ್ದಾಗಲೊಮ್ಮೆ ಪ್ರೇರಣೆಯ ಹಣತೆ ನೀನು ದಾರಿಹೋಕ ನಾನು ನಾ ಕಟ್ಟುವದಿಲ್ಲ ಕವಿತೆ ಕೊಸರಾಡುವ ಕಲ್ಪನೆ ಹೆಸರಿಗೂ ಸಿಗದ ನಗು ಉಸಿರಾಟಕ್ಕು ಬಿಗಿದ ನೋವು ಕಟ್ಟಿದ್ದೇನೆ…… ಅಲ್ಲೊ೦ದು ಗೂಡ ನಿನ್ನ ಹೆಸರಿಗೊ೦ದು ನಗು ಕೊಸರಿಗೊ೦ದು … Read more

ಮೂರು ಕವಿತೆಗಳು: ಜೈಕುಮಾರ್ ಎಚ್.ಎಸ್., ಪ್ರಶಾಂತ್ ಭಟ್, ರಾಣಿ ಪಿ.ವಿ.

ತೇಪೆ ಚಡ್ಡಿ ಮತ್ತು ನಕ್ಷತ್ರ ಶನಿವಾರದ ಬೆಳ್ಳಂಬೆಳಗ್ಗೆ ಒಪ್ಪತ್ತಿನ ಶಾಲೆಗೆ ಹೊಂಟಿದ್ದೆ ಎದುರಿಗೆ ಸಿಕ್ಕ ಜಮೀನ್ದಾರನ ಸೊಕ್ಕಿನ ಹೈದ 'ನಿಂದು ಪೋಸ್ಟ್ ಆಗಿದೆ' ಎಂದ! ನನಗ್ಯಾವ ಲೋಕದವರು ಪತ್ರ ಬರೆವರೆಂದು ನೋಡಿದರೆ ಅವನ ಕಣ್ಣುಗಳು ನೆಟ್ಟಿದ್ದು ಒಡೆದುಹೋಗಿರುವ ನನ್ನ ಚಡ್ಡಿ ಮೇಲೆ! ಹೋದ್ವಾರ ಅವ್ವ ತವರಿಂದ ತಮ್ಮನ ಚಡ್ಡಿ ತಂದು ಇಕ್ಕಿಸಿದ್ದಳು, ಇದೇ ಹಲ್ಕಟ್ ಹೈದ, 'ದೊಗಳೆ ಚಡ್ಡಿ' ಎಂದು ಆಗಲೂ ಛೇಡಿಸಿದ್ದ. ಅಪ್ಪ ಗದ್ದೆಗೆ ಪಲಾಯನಗೈವ ಮೊದಲೇ ಹಿಡಿಯಲೆಂಬಂತೆ ಓಡಿದೆ ಮನೆ ಎದುರು ಏರು ಕಟ್ಟುತ್ತಿದ್ದ … Read more

ಮೂರು ಕವಿತೆಗಳು: ಶಿದ್ರಾಮ ತಳವಾರ್, ವೆಂಕಟೇಶ ನಾಯಕ್, ಲೋಕೇಶಗೌಡ ಜೋಳದರಾಶಿ

ನಾನೊಂದು ಖಾಲಿ ಸೀಸೆ ನಾನೊಂದು ಖಾಲಿ ಸೀಸೆ ಈಗ ನಾ 'ನೊಂದೆ', ಮತ್ತು ತರುವ ಮದಿರೆ ತುಂಬಿಹೆ ನನ್ನೊಳು ಪೂರ್ತಿ, ಬರೀ ಮೈಗಷ್ಟೇ ಮತ್ತು; ಮತ್ತೇನಿಲ್ಲ ದಾಹದಿ ಮದಿರೆಯ ದಾಸರು ಕೊಂಡು ಹೀರಿದರೆಲ್ಲ ನನ್ನೊಳ ಮತ್ತು ; ಮತ್ತೇನೂ ಅಷ್ಟೇ ಮತ್ತೇನಿಲ್ಲ, ದಾಹದಿ ಹೀರಿ ಮೋಹದಿ ಇವರು ಮುತ್ತಿಕ್ಕಿ ಮತ್ತೆಲ್ಲ ಹೀರಿ ಮತ್ತೂ ಮುತ್ತಿಕ್ಕಿ; ಕೊನೆಗೊಮ್ಮೆ ಬಿಸಾಕಿದರೆನ್ನ ಬೀದಿಯಲಿ ಅಷ್ಟೇ ನನ್ನೊಳು ಮತ್ತೇನಿಲ್ಲ, ತೂರಾಡುತಲಿ ಕೂಗಾಡುತಲಿ ಬೈಯುತಲಿ ನನ್ನನೂ; ಬೈಸಿಕೊಳುತಲಿ ತಮ್ಮನೂ ಕಕ್ಕುತಿಹರು ಮನದೊಳಗಣ ಕಿಚ್ಚನು ಇಷ್ಟೇ … Read more

ನಾಲ್ಕು ಕವಿತೆಗಳು: ವೈ.ಬಿ.ಹಾಲಬಾವಿ, ಮೌಲ್ಯ ಎಂ., ಸಾಬಯ್ಯ ಸಿ.ಕಲಾಲ್, ಶೀತಲ್ ವನ್ಸರಾಜ್

ಪ್ರೀತಿ ಬೆರೆಸೋಣ… ಹೇಳುವುದು ಬಹಳಷ್ಟಿದೆ ಏಳುತ್ತಿಲ್ಲ ನಾಲಿಗೆ ಸೀಳಲ್ಪಟ್ಟಿದೆ ಹೊಲಿಯಲ್ಪಟ್ಟಿವೆ ತುಟಿಗಳು ಆದರೂ; ಮಾತಾಡೋಣ ಬಾ ಗೆಳಯ ನಮ್ಮ ಎದೆಗಳಿಂದ ನೂತ ನೋವಿನ ಎಳೆಗಳಿಂದ… ಕೇಳುವುದು ಬಹಳಷ್ಟಿದೆ ಸುರಿದ ಸೀಸ ಇನ್ನೂ ಆರಿಲ್ಲ ಕಿವುಡಾಗಿವೆ ಕಿವಿಗಳು ಪಿಸುಗುಡುತ್ತಿವೆ ಸನಾತನ ಗೋಡೆಗಳು ಆದರೂ; ಆಲಿಸೋಣ ಬಾ ಗೆಳಯ ನಮ್ಮ ಎದೆಬಡಿತದ ಸದ್ದುಗಳಿಂದ… ನೋಡುವುದು ಬಹಳಷ್ಟಿದೆ ಕುರುಡಾಗಿವೆ ಕಣ್ಣುಗಳು ನೆಟ್ಟ ಅವರ ಕ್ರೂರ ನೋಟಗಳಿಂದ ಆದರೂ; ಬೆಸೆಯೋಣ ಬಾ ಗೆಳೆಯ ನಮ್ಮ ಅಂತರಂಗದ ನೋಟಗಳನ್ನು ಎದೆಗೂಡಿನಲ್ಲಿ ಬಚ್ಚಿಟ್ಟ ಕನಸುಗಳಿಂದ… ನಡೆಯುವುದು … Read more

ವಿಶ್ವ ಕವಿತಾ ದಿನದ ವಿಶೇಷ ಕಾವ್ಯಧಾರೆ

ಕನ್ನಡಿಯಲ್ಲಿ ಕಂಡದ್ದು ಕಾಲ ತದೇಕ ಚಿತ್ತದಿ ಕನ್ನಡಿಯನ್ನೆ ಯಾಕೋ ಮೈಮರೆತು ದಿಟ್ಟಿಸಿದ ಕ್ಷಣ ಕಂಡೊಂದು ನೆರಿಗೆಗೆ ಪಿಚ್ಚೆನಿಸಿತು ಬುನಾದಿ!  ನಾನು ಸುಳ್ಳೋ ಕನ್ನಡಿ ಸುಳ್ಳೋ ಕಾಯದ ಕಾಲಕ್ಕೆ ಒಡಂಬಡಿಕೆ ಪತ್ರ ಬಿಂಬಿಸುವೆ … ಅರ್ಧ ತೆರೆದ ಬಾಗಿಲ ಸಂಧಿಯಲಿ ಇಣುಕಿ ನಕ್ಕ ಬಾಲ್ಯ ಈಗ ತಾಳೆ ಹಾಕಿ ಗುಣಿಸಿದರೂ, ಗುನುಗಿದರೂ ಉತ್ತರವಿಲ್ಲದ ಲೆಕ್ಕಾಚಾರಕ್ಕೆ ನನ್ನ ನೋಡಿ ನಗುತ್ತದೆ ಕಂದ ಸವೆಸಿದ ಮಜಲುಗಳ ಮುಖದಲಿ ಬಿದ್ದರೆ ಮಾತ್ರನೇ ಚೂರಾಗುವ ಕನ್ನಡಿಯಲಿ ಕಾಣುವ ನೂರಾರು ಮುಖಗಳು! ಕಂಡ ಒಂದೇ ಒಂದು … Read more

ಮೂರು ಕವಿತೆಗಳು: ಅನಿಲ ತಾಳಿಕೋಟಿ, ಸ್ವರೂಪ್ ಕೆ., ಎಂ.ಎನ್. ನವೀನ್ ಕುಮಾರ್.

ಸಮಾನತೆಗಾಗಿ ರಾಮಕೃಷ್ಣ ಗರ್ಭದ ಕಲ್ಲಾದ ಬುದ್ದ ಬಸವಳಿದು ಬಿದ್ದ ಅಲ್ಲಮ ಮೆಲ್ಲನೆದ್ದು ಹೋದ ಮೋಹನದಾಸನಾಶಿಸುತ್ತ ಅಸುನೀಗಿದ ವಿವೇಕ ಬಾಬಾ ನಿಟ್ಟುಸಿರಿಟ್ಟು ನಡೆದ ಮಳೆ ಸುರಿಯಿತು ಮರುಭೂಮಿಯ ಮೇಲೆ  ಕೊಳೆ ಬೆಳೆಯಿತು ಮನುಜರರಿವಿನೊಳಗೆ ಬರಬೇಕಾದವರೆಲ್ಲಾ ಬಂದು ಹೋದರು ಕೊಡಬೇಕಾದದ್ದೆಲ್ಲಾ ಕೊಟ್ಟು ಕಂಗೆಟ್ಟರು ಎಲ್ಲರನ್ನಟ್ಟಿ ಇನ್ನೂ ನಿಂತಿಹರು ದಾರಿಗೆಟ್ಟವರು. ನ ಹನ್ಯತೆ ಅಸಮಾನತೆ  ಕೊಲ್ಲಬಂದವರೆಲ್ಲಾ ಕಾಲವಾದರೂ ಕಾಲೂರಿಕೊಂಡ ಕೊಳೆತದ ನಾತ ನೈನಂ ಛಿಂದಂತಿ ಶಸ್ತ್ರಾಣಿ ಈ ಜಾತಿಯತೆ ಬದಲಾಗಬೇಕಾದದ್ದು ಬೆಂಕಿ ಗಾಳಿ ಮಳೆಯಲ್ಲ ಮನೆ ಮನೆಗಳಲ್ಲಿ ಮುದುಡಿದ ಮನಗಳು ತೆರೆ … Read more

ಮೂರು ಕವಿತೆಗಳು: ಪ್ರಭಾಮಣಿ ನಾಗರಾಜ, ಸಹನಾ ಕಾಂತಬೈಲು, ಶ್ರೀದೇವಿ ಕೆರೆಮನೆ

ಹಬ್ಬದ ಕುರಿ ಕಟ್ಟಲಾಗಿದೆ ಕುರಿಯ ಪಡಸಾಲೆಯಲ್ಲಿ ಇದ್ದಲ್ಲೇ ದೊರೆವ ಸೊಪ್ಪುಸೆದೆ ಬಗೆಬಗೆಯ ಆಹಾರ ಏಕಿಷ್ಟು ಉಪಚಾರ? ಕ್ಷಣಗಣನೆಯಾಗುತಿದೆ ಎಂದರಿಯದ ಬಕರ   ಕಣ್ಣಲ್ಲೇ ಅಳೆವವರ ಅಭಿಮಾನದ ನೋಟ ಏನಿದು ಮನುಜರ  ವಿಕೃತ ಆಟ? ಅಪರಿಚಿತರ ಕಂಡು  ಬೆದರುತಿದೆ ಮುಗ್ದ ‘ಹಬ್ಬಕ್ಕೆ ತಂದ  ಹರಕೆಯ ಕುರಿ ತೋರಣಕ್ಕೆ ತಂದ ತಳಿರ ಮೇಯಿತ್ತಾ…’ ಎಂದೂ ಆರದ ಕಿಚ್ಚಿನ  ನಮ್ಮೀ ಒಡಲೊಳಗಿನ  ಬಡಬಾಗ್ನಿಯ ತಣಿಸಲು ಇನ್ನೆಷ್ಟು ಜೀವಿಗಳ  ಬಲಿಯೋ? ಅತೃಪ್ತ-ತೃಪ್ತತೆಯ  ಅವಿರತ ಓಟದಲಿ ಜಿಹ್ವೆಯದೇ ದರ್ಬಾರು ಬಾಹ್ಯ ಪ್ರೇರಿತ ಕ್ರಿಯೆಗಳಲ್ಲಿಯೇ  ತೊಡಗಿದ … Read more

ಮೂವರ ಕವಿತೆಗಳು: ರಾಘವೇಂದ್ರ ಹೆಗಡೆಕರ್, ಸಂಗೀತ ರವಿರಾಜ್, ಷಡಕ್ಷರಿ ತರಬೇನಹಳ್ಳಿ

— ಗೋಡೆ — ನನಗಾಗಿ   ಅಗೆದ ಯಾರದೋ ಭೂಮಿಯಲ್ಲಿ ಇನ್ನಾರೋ ಮಲಗಿದ್ದರಂತೆ ಪಾಪ.  ನೆಲದ ಮೇಲೆ ಎಲ್ಲ ಹಂಚಿಕೊಂಡವರು ನಾವು-  ಮಾಡಿ ಭಾಗ . ಗೊತ್ತೇ  ಇರಲಿಲ್ಲ ಇದ್ದರೂ ಇರಬಹುದು  ಇಂಥದೊಂದು ಜಾಗ. ಸಮಾಧಿ ಸ್ತಿತಿಯಲ್ಲಿ  ಅವಿತು ಕುಳಿತವನ  ಗಾಢ ಮೌನದ  ಸದ್ದುಗಳು . ಅರೆ  ಪಕ್ಕದಲ್ಲೇ  ಚಿರ ನಿದ್ರೆಯಲ್ಲಿದ್ದಾಳೆ ಚಿನ್ನದಂತ ಹುಡುಗಿ ಇವಳೇ ಬೆಳಿಗ್ಗೆ ಬೆರಳ ತೋರಿದವಳು  ಸ್ನೇಹದ ಹಸ್ತ ಚಾಚಿ . ಇಲ್ಲಿ ಮಣ್ಣಿನ ಒಳಗೆ ಗೋಡೆಗಳೇ ಇಲ್ಲ . -ರಾಘವೇಂದ್ರ  ಹೆಗಡೆಕರ್ … Read more

ಎರಡು ಕವಿತೆಗಳು: ಮಹಿ, ಅಕುವ

          ಭ್ರೂಣ ಆಗಷ್ಟೇ ಕಿತ್ತು ಬಿದ್ದ ಗಾಳಿಪಟ, ಹೊಟ್ಟೆಯೊಳಗೆ ನುಲಿವ ಸಂಕಟ  ಜೀವ ಪ್ರಕ್ರಿಯೆಗೆ ಅನುಗೊಳ್ಳುವ ದೇಹ  ರಕ್ತಮಯ  ತೊಡೆಗಳ ನಡುವೆ ಚಿಗುರುವ ಚಿಟ್ಟೆ ಮೊಟ್ಟೆ  ದಿನಕಳೆದಂತೆಲ್ಲಾ ಬಟ್ಟೆಯಂತೆ ದೇಹ  ಒಗೆದು ಹರಡುವ ಬಯಕೆ  ದಾರಿತಪ್ಪದೇ ಅಮ್ಮನ ಎದೆಗವಿತು ಆಶ್ರಯ  ಪ್ರತಿ ಹುಡುಗನಲ್ಲು ಕಾಡುವ ರೋಮಿಯೋ  ಥೇಟ್ ಕ್ಲಿಯೊಪಾತ್ರಳದ್ದೆ ನೃತ್ಯ ನಡಿಗೆಗೆ  ಜಂಬದ ಕೊಂಬು ಹಾರು ಕೂದಲ ಮೇಲೆ  ಮಿಗ್ ವಿಮಾನದ್ದೆ ವೇಗ  ಸ್ಕೊಟಿಗೆ  ಹಾದಿಗಳ ಹಾದು, ಹಳ್ಳ ಕೊಳ್ಳಗಳ  ದಾಟಿ … Read more

ಮೂವರ ಕವಿತೆಗಳು: ಮೇಗರವಳ್ಳಿ ರಮೇಶ್, ಮಹೇಶ್ ಕಲಾಲ್, ರಾಜ ಹಂಸ

          ತು೦ಬಿ ಹರಿದಿದ್ದಳ೦ದು ತು೦ಗೆ…..! (ಮಿ೦ಚಿ ಮಾಯವಾದವಳಿಗೊ೦ದು ನೆನಪಿನ ಒಸಗೆ)      ಅ೦ದು ಆಗಸದಲ್ಲಿ ಕರಿ ಮುಗಿಲುಗಳ ಜಾತ್ರೆ. ತಟ ಪಟನೆ ಸುರಿವ ಮಳೆಯ ಹನಿಗಳ ನಡುವೆ ತೂರಿ ಬ೦ದು ನನ್ನ ಕಣ್ಣ ಕೋರೈಸಿದ್ದು ಮುಗಿಲೊಡಲ ಮಿ೦ಚಲ್ಲ  ನಿನ್ನ ಕಣ್ಣ೦ಚು! ಮೌನ ಮೊಗ್ಗೆಯನೊಡೆದು ಅರಳದ ಮಾತು ಘಮ ಘಮಿಸಿತ್ತು ನಿನ್ನೊಳಗೆ. ಅದ ಹೊತ್ತು ತ೦ದ ಶ್ರಾವಣದ ತ೦ಗಾಳಿ ಹೊಸ ಪುಳಕಗಳನೆಬ್ಬಿಸಿತ್ತು ನನ್ನೊಳಗೆ! ಒದ್ದೆ ನೆಲವನು ಗೆಬರುತ್ತ ನಿ೦ತಿದ್ದೆ ನಿನ್ನ ಕಾಲ್ಬೆರಳ … Read more

ಎರಡು ಪ್ರೇಮ ಕವನಗಳು: ಸುಮಿತ ಮೇತ್ರಿ, ನವೀನ್ ಮಧುಗಿರಿ

ರಾಧೆ… ನನ್ನ ನೆನಪಿಗಾಗಿ ನವಿಲು ಗರಿಯನೊಂದನಿಟ್ಟುಕೊ ನಿಂಗೆ ಬೇಸರವಾದಾಗ ನಿನ್ನ ಮಡಿಲಾಗಿ ಮನದ ಮಿದುವಾಗಿ ನಿನಗೆ ಚೈತನ್ಯ ತಂದೇನು ರಾಧೆ… ನನ್ನ ನೆನಪಿಗಾಗಿ ಕೊಳಲನೊಂದಿಟ್ಟುಕೊ ನಿಂಗೆ ನೋವಾದಾಗ ನಿನ್ನ ಇನಿಯನಾಗಿ ಇನಿಯನ ಒಡಲಾಗಿ ನಿನಗೆ ನಲಿವು ತಂದೇನು ರಾಧೆ… ನನ್ನ ನೆನಪಿಗಾಗಿ ಮುಡಿಗೆ ಹೂವಂದನಿಟ್ಟುಕೊ ನಿಂಗೆ ಹಿತವಲ್ಲದ ಸಮಯದಿ ನಿನ್ನ ಗೆಳಯನಾಗಿ ಹಿತೈಸಿಯಾಗಿ ನಿನಗೆ ಆತ್ಮಸಖನಾದೆನು. –ಸುಮಿತ ಮೇತ್ರಿ, ಹಲಸಂಗಿ                         ಬಿಳಿಹಾಳೆಯ … Read more

ಮೂವರ ಕವಿತೆಗಳು: ನಾಗರಾಜ್ ಹರಪನಹಳ್ಳಿ, ವೀಣಾ ರಾಘವೇಂದ್ರ, ಮಂಜು ಹಿಚ್ಕಡ್

          ಕಾವ್ಯ ದಕ್ಕುವತನಕ  ಬೆಕ್ಕಿನಂತೆ ಹೆಜ್ಜೆ ಇಟ್ಟು ಬಂದವರು ಚಿಟ್ಟೆಯಂತೆ ಸುಳಿದು ಮಾಯವಾದವರು ಮನದ ಹಾಳಾದ ಭಾವನೆಗಳಿಗೆ ಅಕ್ಷರ ರೂಪದಲ್ಲಿ ಸಿಗದವರು ಹೇಗೆ ಬರೆಯುವುದು ಇದನೆಲ್ಲಾ ಕವಿತೆಯಲಿ   ಇದ್ದು ಇಲ್ಲದಂತೆ ಸುಳಿದು ಅಳಿದುಹೋಗುವ ಕನಸುಗಳಿಗೆ ಏನು ಹೇಳುವುದು ಕಾಡಿಬೇಡಿದ ಹೆಜ್ಜೆ ಗುರುತುಗಳೇ ಇಲ್ಲ ಅಲ್ಲಿಯ ಆ ಕ್ಷಣಗಳ ನೇವರಿಕೆಗಳ ಸಲ್ಲಾಪಗಳ  ಹಿಡಿದು ತಂದು ಬಿತ್ತಬೇಕೆಂದು ಕೊಂಡಿದ್ದೆ ಅವು ಕವಿತೆಯಾಗಿ ಮೊಳೆಯಲಿ ಅಂದು ಕೊಂಡಿದ್ದೆ ಆದರೆ………..   ಹಗಲುಗಳು ಜಾರಿ ಹೋಗುತ್ತಿವೆ … Read more

ಮೂವರ ಕವಿತೆಗಳು: ವೆಂಕಟೇಶ್ ನಾಯಕ್, ಜಯಾ ನಾಣಯ್ಯ, ದೇಶಾಂಶ ಹುಡಗಿ

ಭಿತ್ತಿ ಚಿ(ಪ)ತ್ರ ಹಚ್ಚುವವರು ರಾತ್ರಿಯಿಡಿ ಕೈಯಲ್ಲಿ ಮೈದಾ ಅಂಟು ಎಳೆದೆಳೆದು ಕಿತ್ತೆಸೆವ ಭಿತ್ತಿಯ ನಂಟು ಗಂಟು ಕಟ್ಟುವ ಸಾಮ್ರಾಜ್ಯ ದೊಳಗೆ ತೇಪೆ ಹಚ್ಚಿ ಹಳತಿನ ಎದುರಲಿ ಹೊಸ ತೇಪೆಯ ತೆರೆಯೊಳಗೆ ದ್ವಿಚಕ್ರ ಕಾಲ ಋತುಮಾನ ಕಾಲಿನಲಿ ತುಳಿದು ತರುವ ಹೊಸತನ ಭಿತ್ತಿ ಚಿ(ಪ)ತ್ರ ಹಚ್ಚುವವರು ಮಾಸಿದ ಭಿತ್ತಿಗೆ ಬಣ್ಣದ ಕಾಗದ ಹಚ್ಚುವವರು ಕಿತ್ತೆಸೆಯಲಾಗದು ಕೆಲವರಂಟಿಸಿದ ಕಾಗದ ಕಣ್ಣೀರಿನಲಿ ಅದ್ದರೂ ಬಿಡದ ಅಂಟು ಈ ವರೆಗೆ ತಿಳಿದಿಲ್ಲ ದೂರವಾದರೂ ಉಳಿದಿದೆ ಸ್ಮೃತಿ ಪಟಲದಲಿ ನೆಂಪು ಹಲವಾರು ಕಾಗದಗಳಂಟಿದೆ ಮನದ … Read more

ಮೂವರ ಕವಿತೆಗಳು: ಪ್ರಶಾಂತ್ ಭಟ್, ಶ್ರೀಧರ ನಾಯಕ, ಅನಂತ್ ಕಳಸಾಪುರ

          ಫ಼ೇಸ್ಬುಕ್ ಕತೆಗಳಾಗಬಹುದಾದ ಸಾಲುಗಳೂ ಚುಟುಕಗಳಾಗಿ, ಎರಡು ಕಮೆಂಟು ಮೂರು ಲೈಕಿಗೆ ಕಾತರಿಸಿ, ಒಳಗೊಳಗೇ ಒರತೆ ಚಿಮ್ಮುವ ಮೊದಲೇ, ಕಾರುವ ಆತುರ; ಅಗೋ ಬಂತಲ್ಲ ನಮ್ಮನ್ನೂ ಯಾರೋ ನೋಡುವವರಿದ್ದಾರೆ, ನಮ್ಮ ಕನ್ನಡಿಯಲ್ಲಿ ಯಾರನ್ನೂ ಕಾಣದು; ವಿವಿಧ ವೇಷಗಳು, ಅವತಾರಗಳು, ಪರದೂಷಣೆಗಳು, ಬರಿದೇ ಒತ್ತುವ ಕುಟ್ಟುವ ನಕಲಿ ಕಾಳಜಿಗಳು; ಕೊನೆಗೆ ಉಳಿಯುವ ಖಾಲಿತನಕ್ಕೂ ಪೊಳ್ಳು ಸಮಾಧಾನಗಳು; ಆವಿಯಾಗಿ ಮೋಡವಾಗಿ ಘನೀರ್ಭವಿಸಿ, ಮಳೆಯಾಗಿ ಹೊಯ್ದರೇ ಓಮ್ ಶಾಂತಿಃ ಶಾಂತಿಃ ಶಾಂತಿಃ ಯಾಕೆ ಸುಮ್ಮನೇ ಸ್ಖಲನದ … Read more

ಅಜ್ಞಾತ ಶಿಲ್ಪಿಗಳಿಗೆ ಕೃತಜ್ಞತೆ: ಎಸ್.ಪಿ. ಜಯಣ್ಣಾಚಾರ್ ಶಿಲ್ಪಿ

          ಕನ್ನಡ ನುಡಿನಾಡಿಗಾಗಿ ನೀರುನೆಲಗಳೆಲ್ಲಕಾಗಿ ದುಡಿದು ಮಡಿದ ಎನಿತೊಜನರ ಸರತಿ ನಿಂತ ಸಾಲಿನಲ್ಲಿ ಕಾಡಿನ ಕಗ್ಗಲ್ಲಿನಲ್ಲಿ ಶಿಲ್ಪಕಲೆಯ ಸೌಧಕಟ್ಟಿ ಆಳಿದ ಅರಸು ಕುಲದ ಹೆಸರ ಅನುಗಾಲವು ಸ್ಮರಿಸುವಂತೆ ಗುಡಿಗೋಪುರಗಳ ಎಮಗೆ ಇತ್ತು ತೆರೆಯ ಮರೆಗೆ ಸರಿದು ಹೋದ ಮಹಾಮಹಿಮ ಶಿಲ್ಪಿ ಜನರ ಕೊಡುಗೆ ಏನು ಅಲ್ಪವೇ? ಕವಿ ಸೌರ್ವಭೌಮರಿಗೂ ಎದಿರು ಸ್ಪರ್ಧೆ ನೀಡುವಂತ ಶಿಲ್ಪಕಲಾ ಪ್ರತಿಭೆ ಇದ್ದೂ ಇತಿಹಾಸದಿ ಮೆರೆಯಲಿಲ್ಲ ವೀಣೆವಾದ್ಯದೆದುರು ವೇಣು ಮಿಗಿಲಿದ್ದರೂ ಮಿಂಚದಲ್ಲ ಇಂದಿನ ಶೋದನೆಯೊಳಲ್ಲು ಜಕಣ ಡಕಣರಾರು … Read more

ಮೂವರ ಕವಿತೆಗಳು: ಅಕುವ, ಕೃಷ್ಣಮೂರ್ತಿ ನಾಯಕ್, ಶ್ರೀವಲ್ಲಭ ಕುಲಕರ್ಣಿ.

          ದಾನಿಗಳೇ…..   ಇಲ್ಲಿ ಎಲ್ಲರೂ ದಾನಿಗಳು ಹಲವರು ಅಲ್ಪದಾನಿಗಳು ಕೆಲವರು ಮಹಾದಾನಿಗಳು ಮತ್ತುಳಿದವರು ಅಗ್ರಮಾನ್ಯರು ಆದರೂ ಯಾರೂ ಕರ್ಣನಾಗಲ್ಲಿಲ್ಲ ಶಿಬಿಯ ಮೀರಲಿಲ್ಲ !!   ದೇವರ ಹೆಸರೆತ್ತಿದ್ದರೆ ಹೇಸದೆ ಕೊಡುವರು ಸಾರ್ಥಕತೆಯ ಮಂಕಿಗೆ ಬೆರಗಾಗಿರುವರು ದಟ್ಟನೆ ಸಭೆಯಲಿ ಸಾಲು ಹೊದಿಯುವರು ಬೆನ್ನಲ್ಲಿಯೇ ಮೆತ್ತನೆ ವಾಪಾಸು ಕೇಳುವರು !!   ನನ್ನೂರ ಹಾದಿಯ ಇಕ್ಕೆಲ್ಲದಲಿ ಬಸ್ಸು ತಂಗುದಾಣಗಳು ದೇಗುಲದ ರಸ್ತೆಗೆ ಮೇಲೆದ್ದ ಸ್ವಾಗತ ಗೋಪುರಗಳು ಬುಡದಲ್ಲಿ ಕೆತ್ತಿದ ದಾನಿಗಳ ನಾಮ ಫಲಕಗಳು … Read more

ಮೂವರ ಕವಿತೆಗಳು: ಅನುಪಮಾ ಎಸ್. ಗೌಡ, ಆಶಾದೀಪ, ಪವಿತ್ರ ಸತೀಶ್ ಕುಮಾರ್

ಬರೆಯುತ್ತೇನೆ ನಾನು  ಹೆತ್ತವರ ಕಂಬನಿಯ  ನೋವನು ಕುರಿತು   ಅತ್ಮಸಾಕ್ಷಿ ಇಲ್ಲದವರ ಮೇಲೆ  ಮಣ್ಣಿಗಾಗಿ ಬಡಿದಾಡುವ  ಬಂಧುಗಳ ಕುರಿತು ಬರೆಯುತ್ತೇನೆ ನಾನು  ಸನ್ಯಾಸತ್ವ ಪಡೆದವರ ಮೇಲೆ  ವ್ಯಾಮೋಹ ಬಿದಡಿರುವುದನು ಕುರಿತು  ಅವರಲ್ಲಿರುವ ಕ್ರೋದ  ನಯವಂಚನೆಯ ಕುರಿತು  ಬರೆಯುತ್ತೇನೆ ನಾನು  ಆತ್ಮನಾನು ಪರಮಾತ್ಮತಂದೆ   ಅನ್ನುವವರ ಮೇಲೆ  ತನ್ನದಲ್ಲದನ್ನು ತನ್ನದೆಂದು  ವಾದಿಸುವವರ ಕುರಿತು  ಮಣ್ಣಾಗುವಾಗ ಬಿಡಿಗಾಸಿರದೆ  ಬರಿಗೈಯಲ್ಲಿ ಹೋಗುವ  ಪ್ರತಿಯೊಬ್ಬರ ಎಣಿಸಿ -ನಗೆಮಲ್ಲಿಗೆ  ಅನುಪಮ ಎಸ್  ಗೌಡ            ನಿರೀಕ್ಷೆ ಕೊಡವದಿರಿ ನನ್ನ … Read more

ಮೂವರ ಕವಿತೆಗಳು: ಸಚಿನ್ ನಾಯ್ಕ್, ಪ್ರಶಾಂತ್ ಭಟ್, ಅನಂತ್ ಕಳಸಾಪುರ

ಕತ್ತಲೆಯೊಳಗೆ… ಕಾದು ನಿಂತಿದ್ದಾಳೆ ಆಕೆ ಇಳಿ ಸಂಜೆ ಜಾರಿ ಕತ್ತಲೆ ಕವಿಯುವ ಹೊತ್ತಲ್ಲಿ., ಬರಲೇಬೇಕು ಯಾರಾದರೂ ಸರಿ ತುಟಿಯ ಬಣ್ಣ ಕರಗುವುದರೊಳಗೆ, ಮುಡಿಯ ಮಲ್ಲಿಗೆ ಬಾಡುವುದರೊಳಗೆ…. ಖಂಡಿತವಾಗಿಯೂ ಅವನು ಅಪರಿಚಿತ; ಪರಿಚಯದ ಹಂಗೇಕೆ ವ್ಯವಹಾರದಲ್ಲಿ..!? ಅವನ ಹಿಂದೆಯೇ? ಹೊರಟವಳಿಗೆ ಭರವಸೆಗಳೇನಿರಲಿಲ್ಲ..! ಕತ್ತಲ ಕೋಣೆಯಲ್ಲಿ ಇದ್ದರೇನು ಬಟ್ಟೆ ಇರದಿದ್ದರೇನು…!? ಅವನ ಬಿಚ್ಚುವ ಹಂಬಲವಾದರೂ ಇಡೇರಲಿ… ಅವಳ ಮುಷ್ಠಿಯಲ್ಲಿ ಒಡಳಾಳದ ನೋವೆಲ್ಲಾ ಹಿಂಡಿ ಹಿಪ್ಪೆಯಾಗುವಷ್ಟು ಬಿಗಿತ…! ಹಾಸಿದ ಸೆರಗಿನಲ್ಲಿ ಒಂದಿಷ್ಟು ಪುಡಿಗಾಸು ಸಂತೃಪ್ತಿಯ ಆಧಾರದ ಮೇಲೇನೋ ಎಂಬಂತಿದೆ…!! ಹಣೆಯ ಬೊಟ್ಟು … Read more

ಕವಿತೆಗಳು:ಅಶೋಕ್ ಕುಮಾರ್ ವಳದೂರು, ಸ್ವರೂಪಾನಂದ ಕೆ., ಶಿದ್ರಾಮ ಸುರೇಶ ತಳವಾರ

ಸಂಘರ್ಷ ಇಂದು ನಿನ್ನೆಗಳದಲ್ಲ ಇದು ಹುಟ್ಟು ಸಾವೆಂಬ ಭವ -ಭಯ ಮೊಳಕೆಗೆ ಝರಿ ನೀರಲಿ ಕೊಳೆಯುವ ಕಳೆಯುವ ಅಂಜಿಕೆ   ಮೊಣಕಾಲೂರಿ ದೈನನಾಗಿ ಪ್ರಪಂಚ ನೋಡಿದಂದಿನಿಂದ ಸಾಧನೆಯ ಹುಚ್ಚು ಮೇಲೇರುವ ಕೆಚ್ಚು ಅಂದೇ ಶುರುವಾಯಿತು ನೋಡಿ ಸಂಘರ್ಷ !   ಬೀಸುತಿದ್ದ ಗಾಳಿ ಹರಡುತ್ತಿದ್ದ ಬೆಳಕು ಎಲ್ಲಾ ಸೀಳಿಕೊಂಡು ವೇಗ ಹಿಡಿದ ಕನಸು ಈ ಮಧ್ಯೆ ಹತೋಟಿ ಕಳಕೊಂಡ ಮನಸ್ಸು ಜರ್ಜರಿತ  ದೇಹಕ್ಕೆ ಮತ್ತೆ ವಾಪಾಸಾಗದ ಆಯಸ್ಸು !   ಬೇಸರಾಗಿ  ಬೇಡದ  ಜೀವಕ್ಕೆ ಸಮಾಜ ಕಟ್ಟಿದ್ದ … Read more

ಮೂವರ ಕವಿತೆಗಳು: ಮಂಜು ಹಿಚ್ಕಡ್, ಸುನೀತಾ ಮಂಜುನಾಥ್, ದಿಲೀಪ್ ರಾಥೋಡ್

ಮತ್ತೆ ಕಟ್ಟಲಾದಿತೇ ರಾಮರಾಜ್ಯ! ಹುಚ್ಚೆದ್ದು ಕುಣಿಯುತಿದೆ ನಾಡಿನ ಜನತೆ. ಮರೆಯಾಗಿ ಹೋಗುತಿದೆ ಒಲವಿನ ಒರತೆ.   ಇತ್ತ ರೋಡಲಿ ಕಾರು ಅತ್ತ ಬಾರಲಿ ಬೀರು ಎಲ್ಲಿ ನೋಡಿದರಲ್ಲಿ ಹಣದ ಕಾರುಬಾರು.   ಮಾನಕ್ಕೆ ಬೆಲೆಯಿಲ್ಲ ಮಾನವಂತರು ಇಲ್ಲ. ಆಗಿಹುದು ನಾಡು, ಸುಡುಗಾಡು ಎರಡು ಮಾತಿಲ್ಲ.   ಹಣಕಾಗಿ ಜನ ಮರಳು ಹಣಕಾಗಿ ಜಾತ್ರೆ ಮರಳು. ಮರೆತು ಹೋಗಿದೆ ಇಂದು ಮಾನವತೆಯ ತಿರುಳು.   ದ್ವೇಷದ ದಳ್ಳುರಿಯಲ್ಲಿ ಪ್ರೀತಿ ಹೋಗಿದೆ ಸೋತು. ಪ್ರೀತಿ-ಪ್ರೇಮ ಎನ್ನುವುದು ಮರೀಚಿಕೆಯ ಮಾತು.   … Read more

ಎರಡು ಕವಿತೆಗಳು: ಅನುರಾಧ ಪಿ. ಸಾಮಗ, ಅಶೋಕ್ ಕುಮಾರ್ ವಳದೂರು

ಒಮ್ಮೊಮ್ಮೆ.. ಜಾಗೃತಾವಸ್ಥೆಯೊಂದು ರಾಜ್ಯ, ನಂಬಿಕೆಯ ನಿರಂಕುಶಪ್ರಭುತ್ವ. ಅನಭಿಷಿಕ್ತ ದೊರೆ, ಸರಾಗ ಆಳ್ವಿಕೆ. ಎಲ್ಲೋ ಒಮ್ಮೊಮ್ಮೆ ಪರಿಸ್ಥಿತಿ ದಂಗೇಳುತ್ತವೆ, ಪಟ್ಟ ಅಲ್ಲಾಡುತದೆ, ಕಿರೀಟವುರುಳಿ ಮೀಸೆ ಮಣ್ಣುಮುಕ್ಕಾಗಿ…. ಹೊರಗಿಷ್ಟೆಲ್ಲ ಆದರೂ ಒಳಸುಳಿಯಲೆಲ್ಲೋ ಅದೇ ರಾಜನುಳಿಯುತಾನೆ, ಅಹಿತಕಾಲದ ಹೆಜ್ಜೆಗೆ ಯತ್ನದ ಗೆಜ್ಜೆ ತೊಡಿಸುತಲೇ ಸಕಾಲ ಪ್ರಕಟನಾಗುತ್ತಾನೆ.   ಸ್ವಪ್ನಸಾಮ್ರಾಜ್ಯದಲೆಲ್ಲ ಬುಡಮೇಲು ತಟ್ಟೆಯ ಕಾಳು ಬಿಟ್ಟು ಭ್ರಮನಿರಸನದ ಗೊಬ್ಬರಗುಂಡಿಯಲಿ ಅಪನಂಬಿಕೆಯ ಹುಳಕೆ ಕೆದಕುವ ಕೋಳಿಕನಸ ರಾಜ್ಯಭಾರ. ಒಮ್ಮೊಮ್ಮೆ ಸಂತೃಪ್ತ, ಒಮ್ಮೊಮ್ಮೆ ಅಲ್ಲ.   ಭಯಸಂಶಯ ಕೆಡುಕೆದುರು ನೋಡುತಾವೆ ಚಂದ್ರನೂ ಸೂರ್ಯನಂತುರಿಯುತಾ, ತಾರೆಸಾಲು ಮಿಂಚೆರಗಿದಂತೆರಗುತಾ, … Read more

ಮೂವರ ಕವಿತೆಗಳು: ಪ್ರವೀಣ, ನಳಿನಾ ಡಿ., ಶಶಿಕಿರಣ್

ಎದ್ದಾಗ ಸುತ್ತೆಲ್ಲ ಕತ್ತಲು ಸಾಯುವ ದಿನ ನಿಕ್ಕಿಯಿಲ್ಲವೆಂದು ನಾಳೆ ನಾಡಿದ್ದುಗಳ ಚಾಪೆಯ ಮೇಲೆ ಸುರಿದು ತಿಂದುಬಿಡುವ ಕಾತುರಕೆ ಹಸಿವು ಸಾಯುವುದಿಲ್ಲ.   ಇದ್ದ ಎಣ್ಣೆಯನೆಲ್ಲ ದೀಪಕೆ ಸುರುವಿ ಬೆಳಕನು ಹೊದ್ದು ಗಡದ್ದು ನಿದ್ದೆ ಎದ್ದಾಗ ಸುತ್ತೆಲ್ಲ ಕತ್ತಲು.   ನಿರ್ದಯ ದೈವದೆದುರು ಮುಗಿದ ಕೈಗಳು ನೈವೇದ್ಯದ ಸಕ್ಕರೆ ಇರುವೆ ತಿಂದು ಖಾಲಿ ಎದೆಯ ಬೇಗೆ ಶಬ್ದಗಳ ಮುಷ್ಠಿಗೆ ಸಿಗದೆ ಖಾಲಿ ಪುಟದ ತುಂಬೆಲ್ಲ ರಾಡಿ.   ಅತಿರಥ ಮಹಾರಥ ಭಗೀರಥ ಪ್ರಯತ್ನ ಆಗಸ ಮುಟ್ಟುವ ಹುತ್ತಿನ ಪರ್ವತದ … Read more

ಮೂವರ ಕವಿತೆಗಳು: ಮಂಜು ಹಿಚ್ಕಡ್, ಚೇತನ್ ಕೆ ಹೊನ್ನವಿಲೆ, ಕಾಜೂರು ಸತೀಶ್

ಹೂ-ದುಂಬಿ  ಹೂಬನದಿ ಆಗತಾನೇ ಅರಳಿದ ಹೂ ಕಾದಿಹುದು ದುಂಬಿ ತನ್ನ ಚುಂಬಿಸಲೆಂದು.   ಮುಂಜಾವಿನ ತಂಗಾಳಿಗೆ ಮೈಯೊಡ್ಡಿ ಕಾದಿಹುದು ಎಂದು ಸೂರ್ಯ, ಉದಯಿಸಿಹೆನೆಂದು.   ಪಕಳೆಗಳ ಅರಳಿಸಿ ಕಾದಿಹ ಸುಮವ ಕಂಡು ತಾ ಮೋಹಗೊಂಡು ಹಾರಿತು ದುಂಬಿ ಆಗತಾನೆ ಅರಳಿನಿಂತ ಆ ಸುಮದೆಡೆಗೆ.   ಝೇಂಕರಿಸಿ ತನ್ನೆಡೆಗೆ ಹಾರಿ ಬಂದ ದುಂಬಿಗೆ ತನ್ನ ಮೈ ಅಲುಗಿಸಿ ಸ್ವಲ್ಪ ಸತಾಯಿಸಿ ಸಹಕರಿಸಿತು ದುಂಬಿಗೆ ತನ್ನ ಮಕರಂದ ಹೀರಲು.   ಮಕರಂದ ಹೀರಿ ತನ್ನಾಸೆ ತೀರಿತೆಂದು ಹಾರಿತು ದುಂಬಿ ಇನ್ನೊಂದರ … Read more

ಮೂವರ ಕವಿತೆಗಳು: ಜಾನ್ ಸುಂಟಿಕೊಪ್ಪ, ಉಷಾಲತಾ, ಜೊ. ಸಿ. ಸಿದ್ದಕಟ್ಟೆ

ಬೇಡದ ಜೀವ ಹಸಿದ ಕತ್ತಲು ಲೊಚಗುಟ್ಟುತ್ತದೆ ಹೊಸೆದ ಬಿರುಸು ಬಂಧನಕ್ಕಾಗಿ,.. ಬಿಸಿಯುಸಿರು ಅಸ್ತವ್ಯಸ್ತವಾಗುತ್ತದೆ ಕ್ರೌರ್ಯ ಕಂಡ ಗೋಡೆಗಳಿಗಾಗಿ… ಏದುಸಿರು…ಅಸಹನೆ ಸಾಕ್ಷಿಯಾಗುತ್ತದೆ ನಿಗೂಢ ಮೌನವಾಗಿ…. ಬಗಲಲಿ ಮಲಗಿದ  ಮೊದಲ ಕೂಸಿಗೂ ಆಗಲೆ ಮೊಳಕೆಯೊಡೆದ ಮುಗ್ಧ ಪಿಂಡಕ್ಕೂ ಏನು ಅಂತರ,,!? ಉತ್ತರವಿಷ್ಟೇ- ಕೆಲವೊಮ್ಮೆ ತೊಟ್ಟಿಲು ತೂಗುತ್ತದೆ, ಕೆಲವೊಮ್ಮೆ…. ತೊಟ್ಟಿ ತುಂಬುತ್ತದೆ.,… ಮೊಳಕೆಯೊಡೆದ ಪಿಂಡ ಕೆಂಪು ಕೆಂಪಾಗಿ ತೊಟ್ಟಿಕ್ಕುತ್ತದೆ… ಕಾಣದ ಜೀವದ ಮೌನರೋಧನಕೆ ಹೊಸದೊಂದು ನ್ಯಾಪ್ಕಿನ್ ಕೆಂಪಾಗುತ್ತದೆ….  –ಜಾನ್ ಸುಂಟಿಕೊಪ್ಪ.             ಕೊನೆ ಎಂದು … Read more

ಮೂವರ ಕವಿತೆಗಳು: ಮಂಜುನಾಥ್ ಪಿ., ವಿಶ್ವನಾಥ್ ಎಂ., ಅನುಪಮಾ ಎಸ್. ಗೌಡ.

          ಹರಿಯುವ ನದಿ ಅದೆಲ್ಲೋ ಉಗಮ ಮೈದುಂಬಿಕೊಳ್ಳುತ್ತ  ಕೈ-ಕಾಲು ಮೂಡಿಸಿಕೊಳ್ಳುತ್ತ  ಸಾಗುವ ದಾರಿಯನ್ನು ಮಾಡಿಕೊಳ್ಳುತ್ತ ಸುಗಮ  ಹಠಕ್ಕೆ ಬಿದ್ದು ಅನುಸಂಧಾನವೊಂದನ್ನು ಉಳಿಸಿಕೊಳ್ಳುವಂತೆ….   ಸವೆಸುವ ದಾರಿ ಶಿಶುವಿನ ಹಾಡೆ? ಸಹಿಸಬೇಕು ಮಧ್ಯೆ ಮತ್ತೆ ಹಾಕಿದರೆ ಕಟ್ಟೆಯ ತಡೆಗೋಡೆ? ಆದರೂ ಹರಿಯಬೇಕೆನ್ನುವ ಧಾವಂತ ನಿರಂತರ ಒಳಗೊಳಗೆ ಅದುವೆ ಆದ್ಯಂತ….   ಕಟ್ಟೆಯಲ್ಲಾದರೂ ಎಷ್ಟೆಂದು ಇರಬಹುದು ಒಂದಿಲ್ಲ ಒಂದು ದಿನ ತುಂಬಿ ಧುಮ್ಮಿಕ್ಕಲೇಬೇಕು ನಿಧಾನಕ್ಕಾದರೂ ಗೋಡೆ ಒಡೆದಾದರೂ…   ಸತ್ಯ ಯಾವತ್ತೂ ಹೀಗೆಯಲ್ಲವೆ?!  ’ಸ್ಥಾವರ’ಕ್ಕೆ … Read more

ಎರಡು ಕವಿತೆಗಳು: ಸಂತೆಬೆನ್ನೂರು ಫೈಜ್ನಟ್ರಾಜ್, ಶ್ರೀಧರ ನಾಯಕ

          ನಾಳೆಯ ಕತೆ        ಸುಮ್ಮನಿರುವುದಕ್ಕಿಂತ  ಏನಾದರೂ ಹೇಳಿ ಬಿಡು ’ನಾಳೆ’ ಬಂದಿತೋ ಇಲ್ಲವೋ…. ಎದಯ ತಲ್ಲಣ ಕಣ್ಣ ನೀರು ಹೃದಯದ ಮಾತು ಗಳ ಮುಚ್ಚಿಡಬೇಡ ’ಇಂದೇ’ ಹೊರಹಾಕು ನಾಳೆ ಕಂಡವರ್‍ಯಾರು?   ಕಳೆದುದ ಹುಡುಕಿಯೇನು ಸುಖ ಗೆಳತಿ; ಎಲ್ಲರೂ ಏನಾದರೊಂದು ಕಳೆದು ಕೊಂಡೇ ಇರ್ತಾರೆ ನನ್ನಂತೆ, ನಿನ್ನಂತೆ! ಇರುವುದ ಕಂಡು ಸುಖಿಸು ’ನಾಳೆ’ ಗಳಿಗೆ ನಿಟ್ಟುಸಿರೇಕೆ? ಏನಾದರೂ ಮಾಡುತಿರು ಎಂಬ ಮಾತಂತೆ ಹಾಡು ಮನದ ಹಾಡು, ಕವಿತೆ … Read more

ಎರೆಡು ಕವಿತೆಗಳು:ಅನಿತಾ, ಶಾಂತಿ ಅಪ್ಪಣ್ಣ

ಸಣ್ಣ ತಪ್ಪಿಗಾಗಿ ಎದುರು ನಿಂತು ನೀ ನಿಂದಿಸುವಾಗ ಹೆದರಿದ ನನ್ನ ಮೊಗವ ಕಂಡು ಮೌನ ತಳೆವ ಆ ನಿನ್ನ ಒಲವಿನ ಪರಿ ಚಂದ…   ಮುಸ್ಸಂಜೆಯಲಿ ಮುತ್ತಿಟ್ಟು, ಮರು ಮುತ್ತಿಗಾಗಿ ಕಾಯುವಾಗ ಕೊಡದೆ ನಾ ಕಾಡುವಾಗ, ಹುಸಿಕೋಪಗೊಂಡ ಆ ನಿನ್ನ ಮುದ್ದು ಮೊಗ ಚೆಂದ….   ನಾ ಮಾಡಿದ ಚೇಷ್ಟೆಯನ್ನೆಲ್ಲಾ ಮರೆತು, ನೀ ನನ್ನ ಮಗುವಂತೆ ಎಂದು ಎದೆಗಪ್ಪಿ ಸಂತೈಸುವ ಆ ನಿನ್ನ ಸಹನೆಯ ಗುಣ ಚೆಂದ…   ನಿನ್ನ ಪ್ರೀತಿಯ ನನ್ನೆದುರು ನಿರೂಪಿಸಿ, ಕಾಯುವಾಗ ನನ್ನ ಸಮ್ಮತಿಗಾಗಿ, … Read more

ಮೂವರ ಕವಿತೆಗಳು: ವಿಲ್ಸನ್ ಕಟೀಲ್, ರಾಶೇಕ್ರ, ಶಶಿಕಿರಣ್

ವಿಷ ೧ ಮನುಜರನ್ನು ನಾನು ಬೆರಳುಗಳಿಗೆ ಹೋಲಿಸಿದೆ ಆದರೆ, ಕೆಲ ವರ್ಗಭೇದಿಗಳು "ಎಲ್ಲಾ ಬೆರಳುಗಳು ಸಮಾನವಾಗಿಲ್ಲ" ಎಂದು ಮುಷ್ಟಿ ಬಿಗಿದರು   ಮನುಜರನ್ನು ನಾನು ರೋಮಗಳಿಗೆ ಹೋಲಿಸಿದೆ ಆದರೆ, ಕೆಲವರು "ಇರುವ ಜಾಗಕ್ಕನುಗುಣವಾಗಿ ಅವುಗಳಲ್ಲಿಯೂ ಮೇಲು-ಕೀಳುಗಳಿವೆ" ಎಂದು ಮೀಸೆ ತಿರುವಿದರು   ಮನುಜರನ್ನು ನಾನು ರಕ್ತಕಣಗಳಿಗೆ ಹೋಲಿಸಿದೆ ಆದರೆ, ಕೆಲ ವರ್ಣಗೇಡಿಗಳು "ಅಲ್ಲಿಯೂ ಬಿಳಿಯರಿದ್ದಾರೆ" ಎಂದು ನಂಜು ಕಾರಿದರು   ಕೊನೆಗೆ ಮನುಜರನ್ನು ನಾನು ಕವಿತೆಯ ಪದಗಳಿಗೆ ಹೋಲಿಸಿದೆ ಆದರೆ, ಕೆಲ ಕಾವಿಯನ್ನು(ಕಾವ್ಯವನ್ನಲ್ಲ) ಉಟ್ಟವರು ಅಲ್ಲಿಯೂ ಪಂಕ್ತಿಭೇದವನ್ನು … Read more