ಎಲ್ಲಿದೆ ನಮ್ಮ ಮನೆ?!: ಎಸ್.ಜಿ.ಶಿವಶಂಕರ್

ಸಮಯ ರಾತ್ರಿ ಏಳೂವರೆ ಸಮೀಪ. ಬಡಾವಣೆಯ ನಡುವಿನ ಆ ಪಾರ್ಕು ನಿರ್ಜನವಾಗುತ್ತಿತ್ತು. ಕತ್ತಲಾಗುವವರೆಗೂ ಅಲ್ಲಿ ಮಕ್ಕಳು, ಮಹಿಳೆಯರು ತುಂಬಿರುತ್ತಾರೆ. ಕತ್ತಲು ಕವಿಯುವ ಹೊತ್ತಿನ ನಂತರವೂ ಅಲ್ಲಿ ಉಳಿಯುತ್ತಿದ್ದವರೆಂದರೆ ಕೆಲವು ಹಿರಿತಲೆಗಳು. ಆರು ಜನರ ಆ ಹಿರಿಯರ ಗುಂಪು ಕಳೆದೈದು ವರ್ಷಗಳಿಂದ ಆ ಪಾರ್ಕಿನ ಅವಿಭಾಜ್ಯ ಅಂಗವಾಗಿದ್ದರು. ಅವರೆಲ್ಲ ಸರ್ವಿಸಿನಲ್ಲಿದ್ದು ರಿಟೈರ್ ಆದವರು. ಬೆಳಕಿರುವವರೆಗೂ ವಾಕಿಂಗ್ ಮಾಡಿ ನಂತರ ಪಕ್ಕಪಕ್ಕದಲ್ಲಿರುವ ಎರಡು ಕಲ್ಲು ಬೆಂಚುಗಳಲ್ಲಿ ಆಸೀನರಾಗುತ್ತಿದ್ದರು. ಏಳೂವರೆಯವರೆಗೂ ಅವರ ಹರಟೆ ಸಾಗುತ್ತಿತ್ತು. ನಂತರ ನಿಧಾನಕ್ಕೆ ಎಲ್ಲರೂ ತಂತಮ್ಮ ಮನೆಗಳತ್ತ … Read more

ಕವಡಿ ಈರಯ್ಯ..: ತಿರುಪತಿ ಭಂಗಿ

ನಮ್ಮೂರಲ್ಲಿ ದೇವರನ್ನ ನಂಬತಾರೋ ಬಿಡ್ತಾರೋ ಗೊತ್ತಿಲ್ಲ ಆದ್ರ ಕವಡಿ ಈರಯ್ಯನ ಮಾತಂತೂ ಯಾರೂ ಉಗಳ ಹಾಕಿ ದಾಟೂದಿಲ್ಲ. ಒಂದ ಲೆಕ್ಕದಾಗ ಹೇಳ್ಬೇಕಂದ್ರ ಕಣ್ಣಿಗೆ ಕಾಣುವ ದೇವ್ರಂದ್ರ ಅಂವ್ನ ಅಂತ ನಂಬಿದ ದಡ್ಡರೇನು ನಮ್ಮೂರಾಗ ಕಡಿಮಿಲ್ಲ. ಪಕ್ಕದ ರಾಜಗಳಾದ ಆಂದ್ರಪ್ರದೇಶ, ತಮೀಳನಾಡು, ಮಹರಾಷ್ಟದಿಂದ ಕಿಕ್ಕಿರದು ಮಂದಿ ಬರುದನ್ನು ಕಂಡು ಕೆಲವು ಪತ್ರಿಕೆಯವರು, ಟಿವಿ ಚಾನಲ್‍ದವರು ಈ ಕವಡಿ ಈರಯ್ಯನ ಸಂದರ್ಶನೂ ಮಾಡಿದ್ರು. “ನೀವ ಜನರ ದಿಕ್ಕ ತಪ್ಪಸಾಕತ್ತಿರೀ, ಮೂಢನಂಬಕೀನ ಜನರ ಮನಸನ್ಯಾಗ ಬಿತ್ತಾಕತ್ತಿರಿ” ಎಂದು ಅಬ್ಬರಸಿ ಬಂದು ದಡಕ್ಕ … Read more

ಗೆಳೆಯನಲ್ಲ (ಭಾಗ 1): ವರದೇಂದ್ರ ಕೆ.

ಕಮಲ ಬುದ್ಧಿವಂತೆ, ದಿಟ್ಟೆ ಜೊತೆಗೆ ಬಾಲ ವಿಧವೆ, ವಿವಾಹದ ಪರಿಕಲ್ಪನೆಯೂ ಇರದ ವಯಸ್ಸಲ್ಲಿ ಬಾಲ್ಯ ವಿವಾಹವಾಗಿ ಗಂಡನ ಉಸಿರನ್ನೂ ಸೋಕಿಸಿಕೊಳ್ಳದೆ, ತನ್ನ ಸೌಭಾಗ್ಯವನ್ನು ಅದರ ಮಹತ್ವ ಅರಿಯುವ ಮುನ್ನ ಕಳೆದುಕೊಂಡಾಕೆ. ತವರು ಮನೆಯೆಲ್ಲ ಸಂಪ್ರದಾಯಕ್ಕೆ ಕಟ್ಟು ಬಿದ್ದಿದ್ದರೂ ಓದಿಗೆ ಅಡ್ಡಿ ಆಗದ ಕಾರಣ, ಪದವೀಧರೆ ಆಗಿದ್ದಾಳೆ. ಪ್ರಾಯ ಬಂತು, ಪರಕಾಯ ಪ್ರವೇಶದಿಂದ ವಂಚಿತಳಾಗಿ; ಮನದ, ದೇಹದ ಭಾವನೆಗಳನ್ನು ಗಂಟು ಕಟ್ಟಿ ಎದೆಯೊಳಗೆ ಅಡಗಿಸಿಟ್ಟುಕೊಂಡಿದ್ದಾಳೆ. ಯಾರೂ ಅರಿಯದ ಕಮಲಳ ಭಾವನೆ, ತಂದೆ ತಾಯಿಯರ ಅರಿವಿಗೆ ಬರದಿರಲು ಸಾಧ್ಯವೇ? ತಂದೆಯ … Read more

ಅನುಭೂತಿಗೊಲ್ಲದ ಬಂಧ: ರೇವತಿ ಶೆಟ್ಟಿ

ಆರ್ದ ಮಳೆಯ ಆರ್ಭಟಕ್ಕೆ, ಅಂಗಳದ ತುಂಬೆಲ್ಲಾ ಹರಡಿ ಹಿಪ್ಪೆಯಾದ ಪಾರಿಜಾತ,ಹೆಂಚಿನ ಛಾವಣಿಯಿಂದ ಬೆಳ್ಳಿ ತಂತಿಯಂತೆ ಧೋ ಬೀಳೋ ಮಳೆಸಾಲು, ಪಡಸಾಲೆಯ ಮಧ್ಯದಲ್ಲಿ ನೀಲಾಂಜನ,ಅಲ್ಲೇ ಪಕ್ಕದಲ್ಲಿ ಉಸಿರು ಮರೆತು ಮಲಗಿದ ದೇಹ, ಗುಸುಗುಸು ಮಾತಿನೊಂದಿಗೆ ಅತ್ತಿಂದಿತ್ತ ಸುಳಿದಾಡುತ್ತಾ ಶವ ಸಂಸ್ಕಾರಕ್ಕೆ ತಯಾರಿಯಲ್ಲಿರುವ ಮನೆಯವರು. ಅಷ್ಟರಲ್ಲಿ ಮನೆಯ ಹಿರಿಯರೊಬ್ಬರು ನಿರ್ಧಾರದ ದನಿಯಲ್ಲಿ, ಏನೇ ಆಗಲಿ, ಶಂಕರಪ್ಪ ಕೊನೆಗಾಲದಲ್ಲಿ ಅಂತ ಖರೀದಿ ಮಾಡಿದ್ದ ಜಮೀನಲ್ಲೆ ಶವ ಸಂಸ್ಕಾರ ಮಾಡೋಣ, ಅವನ ಆತ್ಮಕ್ಕೂ ಶಾಂತಿ ಸಿಗತ್ತೆ ಅಂತ ಅನ್ನಿಸತ್ತೆ, ಏನಂತೀರಿ? ಅಂತ ಶಂಕರಪ್ಪನ … Read more

ಸಮಾಧಾನ: ಗಿರಿಜಾ ಜ್ಞಾನಸುಂದರ್

ಘಂಟೆ ರಾತ್ರಿ 8.30 ಆಗಿತ್ತು. ಕುಮುದಳ ಶಿಫ್ಟ್ ಮುಗಿದು ಅವಳು ತನ್ನ ಕಂಪ್ಯೂಟರ್ ಮುಚ್ಚುತ್ತಿದ್ದಳು. ಅಷ್ಟರಲ್ಲಿ ಮೂರ್ತಿ ಅಂಕಲ್ ನ ಕರೆ. ಅವಳಿಗೆ ಅವರ ಕರೆಯನ್ನು ಸ್ವೀಕರಿಸಲು ಮನಸ್ಸಿಲ್ಲ. ಹಾಗೆ ಸುಮ್ಮನೆ ಮೊಬೈಲ್ ಕಂಪಿಸುತ್ತಿತ್ತು. ತನ್ನ ಆಫೀಸ್ ನ ಕ್ಯಾಬ್ ಗಳು ನಿಲ್ಲುವ ಜಾಗಕ್ಕೆ ಬೇಗ ಬೇಗ ಹೆಜ್ಜೆ ಹಾಕುತ್ತಿದ್ದಳು. 15 ನಿಮಿಷದಲ್ಲಿ ಅವಳಿಗೆ ಅವಳ ಕ್ಯಾಬ್ ಹಿಡಿದು ಕೂರಬೇಕಿತ್ತು. ಮತ್ತೊಮ್ಮೆ ಮೂರ್ತಿ ಅಂಕಲ್ ನ ಕರೆ. ಅವಳಿಗೆ ಇಷ್ಟವೇ ಇಲ್ಲದ ಕರೆ. ಸುಮ್ಮನಾದಳು. ಕ್ಯಾಬ್ ಹಿಡಿದು … Read more

ನಾನು ಅವನಲ್ಲ!: ಜೆ.ವಿ.ಕಾರ್ಲೊ

ಹಿಂದಿ ಮೂಲ: ಮುನ್ಶಿ ಪ್ರೇಮಚಂದ್ ಇಂಗ್ಲಿಶಿನಿಂದ: ಜೆ.ವಿ.ಕಾರ್ಲೊ ಇದು, ಹಿಂದಿನ ದಿನ ನಾನು ಕುದುರೆ ಗಾಡಿಯಲ್ಲಿ ಪೇಟೆಗೆ ಹೋಗುತ್ತಿದ್ದಾಗ ನಡೆದ ಘಟನೆ. ಗಾಡಿ ಸ್ವಲ್ಪ ಮುಂದೆ ಹೋಗಿತ್ತಷ್ಟೇ. ಯಾರೋ ಕೈ ಅಡ್ಡ ಹಾಕಿ ಗಾಡಿಯನ್ನು ಹತ್ತಿಕೊಂಡ. ಅವನನ್ನು ಹತ್ತಿಸಿಕೊಳ್ಳಲು ಗಾಡಿಯವನಿಗೆ ಸ್ವಲ್ಪವೂ ಇಷ್ಟವಿರಲಿಲ್ಲವಾದರೂ ಬೇರೆ ದಾರಿ ಇರಲಿಲ್ಲ. ಹತ್ತಿದವನು ಒಬ್ಬ ಪೊಲೀಸ್ ಆಫೀಸರನಾಗಿದ್ದ. ಕೆಲವು ಖಾಸಗಿ ಕಾರಣಗಳಿಂದಾಗಿ ಖಾಕಿ ಧರಿಸಿದವರೆಂದರೆ ನನಗೆ ಮೊದಲಿನಿಂದಲೂ ಅಷ್ಟಕಷ್ಟೇ. ಅವರ ನೆರಳು ಕಂಡರೂ ದೂರ ಓಡಿಹೋಗುತ್ತೇನೆ! ಗಾಡಿಯ ಒಂದು ತುದಿಗೆ ಕುಳಿತು … Read more

ಕೊರೋನಾ ಕಾಲುಗಳು!: ಎಸ್.ಜಿ.ಶಿವಶಂಕರ್

ಏನು? ಕೊರೊನಾಕ್ಕೂ ಕಾಲುಗಳಿವೆಯೆ ಎಂದು ಹುಬ್ಬೇರಿಸಬೇಡಿ. ನಾನೀಗ ಹೇಳುತ್ತಿರುವುದು ಕೊರೋನಾ ಲಾಕ್ಡೌನ್ ಸಮಯದಲ್ಲಿ ಬರುತ್ತಿದ್ದ ಫೋನ್ ಕಾಲುಗಳ ಬಗೆಗೆ! ಕೊರೋನಾ ಮಾರಿ ಇಡೀ ವಿಶ್ವವನ್ನೇ ನಡುಗಿಸಿ, ಸಾವಿನ ಗಾಣದಲ್ಲಿ ಹಾಕಿ ಅರೆಯುತ್ತಿರೋವಾಗ ಅನಿವಾರ್ಯವಾಗಿ ಲಾಕ್‍ಡೌನ್ ಅಮರಿಕೊಂಡಿದೆ! ಎಲ್ಲೆಲ್ಲೂ ಲಾಕ್‍ಡೌನ್!! ಅಲ್ಲೂ ಲಾಕ್ಡೌನ್! ಇಲ್ಲೂ ಲಾಕ್‍ಡೌನ್, ಎಲ್ಲಾ ಕಡೆಯೂ ಲಾಕ್‍ಡೌನ್! ವಾರವೊ, ಹದಿನೈದು ದಿನವೊ ಆಗಿದ್ದರೆ ಹೇಗೋ ಜನ ತಡ್ಕೋಬಹುದು. ಅದು ತಿಂಗಳುಗಳನ್ನೂ ಮೀರಿ, ವಿಸ್ತರಿಸುತ್ತಾ..ವಿಸ್ತರಿಸುತ್ತಾ..ಮನೆಯೊಳಗೆ ಧಿಗ್ಭಂದಿಯಾದ ಜನ ಹೇಗೆ ಕಾಲ ಕಳೀಬೇಕೂಂತ ಪರಿತಪಿಸೋ ಹಾಗಾಗಿಬಿಡ್ತು. ಟಿ.ವಿ ವಾಹಿನಿಗಳೂ … Read more

ಅಳಿಯದ ಸಂಬಂಧ: ಶೀಲಾ ಎಸ್. ಕೆ.

“ಅಂಜು, ಅಂಜು‌” ಎಂದು ಹೊರಗಡೆಯಿಂದ ಬಂದ ಕೂಗಿಗೆ, “ಅಮ್ಮಾ ಸಂತು ಬಂದ ನಾನ್ ಶಾಲೆಗೆ ಹೊರಟೆ ಬಾಯ್” ಎಂದು ಒಳಗಿನಿಂದ ತುಂಟ ಹುಡುಗಿ ಓಡಿ ಬಂದಳು. ತಿಂಡಿ ತಿಂದು ಹೋಗು ಎಂದು ಕೂಗಿದ ಅಮ್ಮನ ದನಿ ಕಿವಿಯ ಮೇಲೆ ಬೀಳಲೇ ಇಲ್ಲ. “ಇವತ್ತು ತಿಂಡಿ ತಿನ್ನದೆ ಬಂದ್ಯ ? ನನ್ನ ಬೈಸೋಕೆ ಹೀಗೆ ಮಾಡ್ತೀಯ” ಎಂದು ದಿನದ ಮಾತು ಆರಂಭಿಸಿದ ಸಂತು. ಯಥಾಪ್ರಕಾರ ಇದಕ್ಕೆ ಕಿವಿಕೊಡದ ಪೋರಿ “ಫಸ್ಟ್‌ ಪೀರಿಯಡ್ ಗಣಿತ ಇದೆ ಹೋಮ್ ವರ್ಕ್ ಮಾಡಿದ್ಯ” … Read more

ಪುಟ್ರಾಜು: ಅಭಿಜಿತ್. ಎಮ್

ಪುಟ್ರಾಜುಗೆ ಪರೀಕ್ಷೆ ಹತ್ತಿರ ಬಂದಿದೆ. ಪುಸ್ತಕ ಹಿಡಿದು ಓದಲು ಕುಳಿತರೆ ಭಯ ಮನಸ್ಸು, ಮೆದುಳನ್ನು ಆವರಿಸುತ್ತದೆ. ಐದನೇ ತರಗತಿಯಲ್ಲಿ ಓದುತ್ತಿರುವ ಪುಟ್ರಾಜು ಗೆ ಈ ಬಾರಿಯೂ ಪರೀಕ್ಷೆ ಯಲ್ಲಿ ಕಡಿಮೆ ಅಂಕ ಗಳಿಸಿದರೆ ಏನಪ್ಪಾ ಗತಿ ಅನ್ನುವುದೇ ಚಿಂತೆಯಾಗಿರುತ್ತದೆ. ಶಾಲೆಯಲ್ಲಿ ಟೀಚರ್ ಗಳು, ಮನೆಯಲ್ಲಿ ಹೆತ್ತವರ ಬೈಗುಳ ತಿಂದು. . ತಿಂದು. . . ಹೈರಾಣಾಗಿರುತ್ತಾನೆ. ಅದಕ್ಕೆ ಓದಲು ಕುಂತರೂ ಪುಟ್ರಾಜುಗೆ ಅದೇ ಚಿಂತೆ. ಜಾಸ್ತಿ ಅಂಕ ಹೇಗೆ ಗಳಿಸುವುದು ಎಂದು ಆಲೋಚಿಸುತ್ತಿರುತ್ತಾನೆ. ಅವನ ತಲೆಯಲ್ಲಿ ಹಲವಾರು … Read more

ಕಿರುಗತೆಗಳು: ಪುನೀತ್‌ ಕುಮಾರ್‌

ಸ್ವಯಂ ಮೌಲ್ಯಮಾಪನ ಒಮ್ಮೆ ಒಬ್ಬ ಹುಡುಗ, ಒಂದು ಅಂಗಡಿಯ ಫೋನ್ನಿಂದ ಯಾರಿಗೋ ಕರೆ ಮಾಡಿ “ಅಮ್ಮ, ದಯಮಾಡಿ ನನಗೆ ಒಂದು ಕೆಲಸ ಕೊಡಿ” ಎಂದು ಕೇಳಿಕೊಳ್ಳುತ್ತಿದ್ದನು. ಅಲ್ಲೇ ಪಕ್ಕದಲ್ಲೇ ಇದ್ದ ಅಂಗಡಿಯವ ಇವನ ಮೃದು ದನಿಯ ಮಾತುಗಳನ್ನು ಕೇಳಲು ಆರಂಭಿಸಿದ. ಹುಡುಗ ಮುಂದುವರೆಯುತ್ತಾ ” ಅಮ್ಮ, ನಾನು ತುಂಬ ಬಡವ, ಮನೆಯಲ್ಲಿ ಹಣಕ್ಕಾಗಿ ತೊಂದರೆ ಇದೆ, ದಯವಿಟ್ಟು ಬೇಡ ಎನ್ನಬೇಡಿ ” ಎಂದು ಬೇಡಿಕೊಳ್ಳಲಾರಂಭಿಸಿದ. ಆದರೆ ಆ ಕಡೆಯಿಂದ ಬೇಡ ಆಗಲೇ ನಮ್ಮಲ್ಲಿ ಒಬ್ಬ ಹುಡುಗ ಕೆಲಸದಲ್ಲಿದ್ದಾನೆ. … Read more

ಯುದ್ಧ ಗೆದ್ದ ಬಂದ ಪಾರ್ವತಿ: ಚಂದ್ರಿಕಾ ಆರ್ ಬಾಯಿರಿ

ಇದೇನಿದು ? ಯುದ್ಧ ಗೆದ್ದು ಬಂದ ಪಾರ್ವತಿ ಎಂದಾಕ್ಷಣ ಶಿವ ಪಾರ್ವತಿಯರ ಪುರಾಣ ಕಥೆ ಅಂದುಕೊಂಡಿರಾ? ಅಲ್ಲ, ಶಿವಪಾರ್ವತಿಯಂತಿರುವ ದಂಪತಿಗಳ ಕಥೆ. ಹೌದು ಮೊದಲನೆಯ ಮಗ ಸುಬ್ರಹ್ಮಣ್ಯ ಹುಟ್ಟಿ ಈಗಾಗಲೇ ಮೂರು ವರುಷ ಕಳೆದಿದೆ. ಮಗನ ಲಾಲನೆ ಪಾಲನೆ ಮಾಡಲು ಅಜ್ಜ ಅಜ್ಜಿ ಇರುವುದರಿಂದ ಮಗ ಬೆಳೆದು ದೊಡ್ಡವನಾದದ್ದೆ ಗೊತ್ತಾಗಲಿಲ್ಲ ಅವರಿಗೆ. ಕೆಲಸಕ್ಕೆ ಹೋಗಿ ಬಂದು ಮಗ ಅತ್ತೆ ಮಾವ ಗಂಡನನ್ನು ಬಹಳ ಅಕ್ಕರೆಯಿಂದಲೇ ನೋಡಿಕೊಂಡಳು ಪಾರ್ವತಿ. ಎರಡನೇ ಮಗುವಿಗಾಗಿ ಹಂಬಲಿಸುತ್ತಿದ್ದ ಗಂಡ ಈಗಲೇ ಇನ್ನೊಂದು ಮಗು … Read more

ನುಣುಪುಗಲ್ಲು: ತಿರುಪತಿ ಭಂಗಿ

“ಆದದ್ದು ಆಗೇತಿ ಹ್ವಾದುದ್ದು ಹೋಗೈತಿ, ಇನ್ನ ಏನಮಾಡಿದ್ರ ಹೊಡಮರಳಿ ಬರಾಕ, ಹೆಂಗ ಸಾದ್ಯ ಆದಿತವ್ವಾ..? ನಿನ್ನ ಹಣಿಬರ್ದಾಗ ಏನ್ ಬರದಿದ್ದೋ ಆ ಹಾಟ್ಯಾನ ದೇವ್ರಾ, ಅದನೇನಾರ ತಪ್ಪಸಾಕ ಬರತೈತೇನವ್ವಾ.. ಸಮಾಧಾನ ತಗೋ ತಂಗಿ, ನಿಂದರ ಏನ್ ದೊಡ್ಡ ವಯಸ್ಸಲ್ಲಾ ಈಗ ಬಲೆಬಾರ ಆದ್ರ ಇಪ್ಪತೈದ ಇರ್ಬೇಕ, ಇಷ್ಟ ಸಣ್ಣ ವಯ್ಯಸ್ದಾಗ ಗಂಡನ ಕಳಕೊಂಡ, ಮನಿಮೂಳಿಯಾಗಿ ಕುಂದ್ರೂದಂದ್ರ ನಿನ್ನ ಹಣಿಬರಾ ಎಷ್ಟಾರ ಸುಮಾರ ಇರ್ಬಾರ್ದ, ಸತ್ತಾರ ಜೋಡಿ ನಾಂವೂ ಸಾಯಾಕ ಹೆಂಗ ಸಾದ್ಯ ಆದೀತವ್ವಾ..? ನಾಂವ ನಮಗೋಸ್ಕರಾ ಇರ್ಬೇಕ, … Read more

ಬೆಂಬಿಡದ ಭೂತ: ರಾಜೇಂದ್ರ ಬಿ. ಶೆಟ್ಟಿ

ಸುಮಾರು ಅರುವತ್ತು ವರ್ಷಗಳ ಹಿಂದೆ * ಅಪ್ಪ ಇನ್ನೂ ಮನೆಗೆ ಬಂದಿಲ್ಲ. ಅವರು ಮಂಗಳೂರಿನಿಂದ ಬರಬೇಕು. ಅದು ನಮ್ಮ ಊರಿನಿಂದ ಹತ್ತೊಂಬತ್ತು ಮೈಲು ದೂರವಂತೆ. ನಾನು, ಅಣ್ಣ ಮತ್ತು ಅಮ್ಮ ಅಪ್ಪನಿಗಾಗಿ ಕಾದು ಕುಳಿತಿದ್ದೇವೆ. ಯಾವಾಗಲೂ ರಾತ್ರಿ ಆಗುವ ಮೊದಲೇ ಬರುವ ಅಪ್ಪ ಇವತ್ತು ಇನ್ನೂ ಬಂದಿಲ್ಲ. “ಅಪ್ಪ ಕೊನೆಯ ಬಸ್ಸಿನಲ್ಲಿ ಬರಬಹುದು. ನೀವು ಊಟ ಮಾಡಿ ಮಲಗಿ” ಎಂದು ಅಮ್ಮ ನಮಗೆ ಗಂಜಿ ಬಡಿಸಿದರು. ಊಟ ಮಾಡಿ, ನಿದ್ದೆ ತಡೆಯಲಾರದೆ ನಾನು ಮಲಗಿದೆ. ನಡುವೆ ಎಚ್ಚರ … Read more

ಸುಖಾಂತ: ಅಶ್ಫಾಕ್ ಪೀರಜಾದೆ

-೧- ಮೊದಮೊದಲು ಕ್ಷೇಮವಾಗಿಯೇ ಇತ್ತು ಜೀವನ, ಹೂವಿನಹಾಸಿಗೆಯಾಗಿತ್ತು. ಯಾರಿಗೆ ಗೊತ್ತಿತ್ತು? ಹೀಗೆ ಮುಳ್ಳಿನದಾರಿಯಾಗುವುದೆಂದು?, ಬದುಕು ಕಣ್ಣೀರ ಕಡಲಾಗುವದೆಂದು. ಮನೆಗೆನಾನೊಬ್ಬಳೆ ಮಗಳು, ಅರಮನೆಯಂಥ ಮನೆಗೆ ನಾನೇ ಒಡತಿ. ಅವ್ವನನ್ನನ್ನು ಅಪ್ಪನ ಕೈಗಿಟ್ಟು ಶಿವನ ಪಾದಾ ಸೇರಿದ್ದಳು. ಅವ್ವ ಹೋದಮ್ಯಾಗ ಊರ ಜನ ಅಪ್ಪನಿಗೆ ಇನ್ನೊಂದು ಮದುವೆ ಆಗುವ ಸಲಹೆನೀಡಿದ್ದರೂ, ಹೊಸದಾಗಿ ಬರುವ ಹೆಂಗಸು ಹೆಂಗಿರತಾಳೋ?. ತಾಯಿ ಇಲ್ಲದ ತಬ್ಬಲಿಗೆ ಮಲತಾಯಿ ಹಿಂಸೆ ಬೇರೆ ಬೇಡ ಅಂತಾ ಕಣ್ಣಲ್ಲಿ ಕಣ್ಣಿಟ್ಟು, ಅಂಗೈಯಲಿ ಅರಗಿಣಿ ಸಾಕಿದಾಂಗ ನನ್ನ ಸಾಕಿದ್ದ. ನಾ ಬೆಳದ … Read more

ಲಾಟರಿ ಟಿಕೇಟು: ಜೆ.ವಿ.ಕಾರ್ಲೊ

ಲಾಟರಿ ಟಿಕೇಟು -ಆಂಟನ್ ಚೆಕೊವ್ ಅನುವಾದ: ಜೆ.ವಿ.ಕಾರ್ಲೊ ರಾತ್ರಿ ಊಟ ಮುಗಿಯುತ್ತಿದ್ದಂತೆಯೇ ಕೈಯಲ್ಲಿ ಪತ್ರಿಕೆಯನ್ನು ಹಿಡಿದು ಇವಾನ್ ಡಿಮಿಟ್ರಿಚ್ ಸೋಫಾದ ಮೇಲೆ ಮೈಚೆಲ್ಲಿದ. ವರ್ಷಕ್ಕೆ ಸಾವಿರದಿನ್ನೂರು ರೂಬಲುಗಳನ್ನು ದುಡಿಯುತ್ತಿದ್ದ ಅವನ ಸಂಸಾರ ನೌಕೆ ಯಾವುದೇ ವಿಘ್ನಗಳಿಲ್ಲದೆ ಸುಗಮವಾಗಿ ಸಾಗುತ್ತಿತ್ತು. “ನಾನಿವತ್ತು ಪತ್ರಿಕೆಯನ್ನು ನೋಡುವುದನ್ನೇ ಮರೆತು ಬಿಟ್ಟೆ..” ಊಟದ ಮೇಜನ್ನು ಸ್ವಚ್ಛಗೊಳಿಸಲು ಬಂದಿದ್ದ ಅವನ ಹೆಂಡತಿ ಹೇಳಿದಳು. “ಹಾಗೇ ಲಾಟರಿ ಫಲಿತಾಂಶ ಬಂದಿದೆಯಾ ನೋಡಿ.” ಎಂದಳು. ಡಿಮಿಟ್ರಿಚ್ ಪತ್ರಿಕೆಯ ಪುಟಗಳನ್ನು ತಿರುವುತ್ತಾ, “ಬಂದಿದೆ ಕಣೆ. ನೀನ್ಯಾವಾಗ ಲಾಟರಿ ಟಿಕೆಟ್ … Read more

ಸೋಲು: ಗಿರಿಜಾ ಜ್ಞಾನಸುಂದರ್

ಸಪ್ಪೆ ಮೊರೆ ಹಾಕಿಕೊಂಡು ಬರುತ್ತಿದ್ದ ಪ್ರೀತಿಯನ್ನು ಪಕ್ಕದ ಮನೆ ಆಂಟಿ “ಏನ್ ಪುಟ್ಟಿ! ರಿಸಲ್ಟ್ ಏನಾಯ್ತು? ಯಾವಾಗ್ಲೂ ಫಸ್ಟ್ ಬರ್ತಿದ್ದೆ ಅಲ್ವಾ. ಈಸಲ ಏನು? ಸ್ವೀಟು ಕೊಡ್ಲಿಲ್ಲ?” ಸುಮ್ಮನೆ ತಲೆ ತಗ್ಗಿಸಿ ಅಲ್ಲಿಂದ ಹೊರಟು ಬಂದಿದ್ದಳು. ಶಾಲೆಯಲ್ಲಿ ಎಲ್ಲದರಲ್ಲೂ ಮುಂದಿದ್ದ ಹುಡುಗಿ. ಇಡೀ ಶಾಲೆಗೆ ೧೦ನೇ ತರಗತಿಯಲ್ಲಿ ಎರಡನೇ ಸ್ಥಾನದಲ್ಲಿ ಪಾಸಾಗಿದ್ದವಳು. ಅವರಪ್ಪ ಅದಕ್ಕಾಗಿ ತಮ್ಮ ಸುತ್ತಮುತ್ತಲಿನ ಮನೆಗಳಿಗೆಲ್ಲ ಒಂದೊಂದು ಸ್ವೀಟ್ ಡಬ್ಬವನ್ನೇ ಹಂಚಿದ್ದರು. ತಮ್ಮ ಶಾಲೆಯಿಂದ ಬೇರೆ ಶಾಲಿಗಳಿಗೂ ಬಹಳಷ್ಟು ಸ್ಪರ್ಧೆಗಳಲ್ಲಿ ಭಾಗವಹಿಸಿ ಬಹುಮಾನ ತಂದುಕೊಟ್ಟವಳು. … Read more

ಶೃತಿ ನೀ ಮಿಡಿದಾಗ (ಕೊನೆಯ ಭಾಗ): ವರದೇಂದ್ರ.ಕೆ ಮಸ್ಕಿ

ಇತ್ತ ಮನೆಯಲ್ಲಿ ಅಕ್ಕ ನಳಿನಿ ಕಡೆಯಿಂದ ಒಂದು ವಿಷಯ ಬಂತು. ಭಾವನ ತಮ್ಮ ನಿತಿನ್ ಅಮೇರಿಕಕ್ಕೆ ಹೋಗಿದ್ದ, ಇಂಜಿನಿಯರ್ ಕೆಲಸ, ಕೈತುಂಬಿ ಹಂಚಬಹುದಾದಷ್ಟು ಸಂಬಳ. ವಿದ್ಯಾವಂತ ಬುದ್ಧಿವಂತ. ನೋಡೋಕೆ ಸ್ಫುರದ್ರೂಪಿ, ಒಳ್ಳೆಯ ಮೈಕಟ್ಟು, ಸದಾ ಮುಗುಳ್ನಗೆಯ ಸರದಾರ, ನಿರಹಂಕಾರಿ, ಮಿತ ಮಾತುಗಾರ, ನಿಷ್ಕಲ್ಮಷ ಹೃದಯವಂತ, ಅಪ್ಪಟ ಬಂಗಾರದ ಗುಣವಂತ. ನಮ್ಮ ಶೃತಿಗೆ ತಕ್ಕುದಾದ ಜೋಡಿ; ಎಂದು ಅಕ್ಕ, ನಿತಿನ್ ಗೆ ಶೃತೀನ ತಂದುಕೊಳ್ಳೊ ವಿಚಾರ ಎತ್ತಿಬಿಟ್ಟಳು. ಇದ್ದಕ್ಕಿದ್ದ ಹಾಗೆ ಎರಗಿ ಬಂದ ವಿಷಯ ಶೃತಿ ಮನಸ್ಸಿಗೆ ತಳಮಳ … Read more

ಕೆಂಪು ನೆರಳು!: ಎಸ್.ಜಿ.ಶಿವಶಂಕರ್

ವಾಸುದೇವರಿಗೆ ಗಾಢ ನಿದ್ರೆ. ಅಂತಾ ನಿದ್ರೆಯನ್ನು ಎಂದೂ ಮಾಡಿಲ್ಲ ಎನ್ನಿಸುವ ನಿದ್ರೆ. ಮೂರು ದಿನದಿಂದ ನಿದ್ರೆಯಿಲ್ಲದೆ ಹೈರಾಣಾಗಿದ್ದಕ್ಕೋ ಏನೋ..ಗಾಢ ನಿದ್ರೆ ಅವರಿಸಿತ್ತು! ಅಸ್ತಿತವನ್ನೇ ಮರೆಸಿದ ನಿದ್ರೆ! ದೇಹದ ಅರಿವಿಲ್ಲದ ನಿದ್ರೆ! ದೇಹದ ಭಾರವೇ ಇರಲಿಲ್ಲ! ತನಗೆ ಶರೀರವೇ ಇಲ್ಲ-ಎನ್ನುವಷ್ಟು ಹಗುರ, ನಿರಾಳ ಭಾವನೆ! ತಾನು ಬದುಕಿರುವೆನೋ? ಇಲ್ಲವೋ? ಜಾಗ, ಜಾವಗಳ ಅರಿವೇ ಇಲ್ಲದ ವಿಚಿತ್ರ ಹೊಚ್ಚ ಹೊಸ ಅನುಭವ! ಇಂತದು ಹಿಂದೆಂದೂ ಆಗಿರಲೇ ಇಲ್ಲ! ಎಲ್ಲಿರುವೆ? ಸಮಯ ಎಷ್ಟು? ಹಗಲೋ? ರಾತ್ರಿಯೋ? ಎಚ್ಚರವೇ ಇಲ್ಲ ಎಂದರೆ ಅದು … Read more

ಸಾಫಲ್ಯ: ಉಮೇಶ್‌ ದೇಸಾಯಿ

ಅದು ಅಖಿಲ ಭಾರತ ಮಟ್ಟದ ಸಂಗೀತದ ಅಂತಿಮ ಕಾರ್ಯಕ್ರಮ. ಕನ್ನಡದ ಆ ವಾಹಿನಿ ಅನೇಕ ವರ್ಷಗಳಿಂದ ಈ ಸ್ಫರ್ಧೆ ಏರ್ಪಡಿಸುತ್ತ ಬಂದಿದೆ. ಇಂದು ಅಂತಿಮ ಸುತ್ತು. ಎಲ್ಲ ಸ್ಫರ್ಧಿಗಳಲ್ಲೂ ವಿಚಿತ್ರ ತಳಮಳ ಈಗಾಗಲೇ ಈ ವಾಹಿನಿಯ ಈ ಅಂತಿಮಸ್ಫರ್ಧೆಯ ಕುರಿತಾಗಿ ಸಾಮಾಜಿಕ ಜಾಲತಾಣಗಳಲ್ಲಿ ಅಂತೆಯೇ ಇತರೇ ಸುದ್ದಿವಾಹಿನಿಗಳಲ್ಲಿ ಈ ಕುರಿತು ಅನೇಕ ಚರ್ಚೆಗಳಾಗಿವೆ…ಯಾರು ಗೆಲ್ಲಬಹುದು ಪ್ರಶಸ್ತಿಯನ್ನು ಈ ಕುರಿತಾಗಿ ಅಲ್ಲಲ್ಲಿ ಬೆಟಿಂಗ್ ಕೂಡ ನಡೆಯುತ್ತಿದೆ ಎಂಬ ಸುದ್ದಿಯೂ ಅನೇಕ ವಾಹಿನಿಗಳಲ್ಲಿ ಹರಿದಾಡುತ್ತಿತ್ತು. ಸ್ಫರ್ಧಿಗಳಲ್ಲಿ ತಳಮಳವಿತ್ತು ನಿಜ ಅಂತೆಯೇ … Read more

ತಲಾಖ್: ಸಿದ್ದರಾಮ ತಳವಾರ, ದಾಸ್ತಿಕೊಪ್ಪ.

ಊರಿನ ಮುಂಭಾಗದಲ್ಲೇ ಶತಮಾನಗಳಷ್ಟು ಹಳೆಯದಾದ ಹುಣಸೀಮರದ ಬುಡದಲ್ಲಿ ಪೇಚು ಮಾರಿ ಹಾಕಿಕೊಂಡು ತಲೆ ಮೇಲೆ ಕೈ ಹೊತ್ತು ಕೂತ ಕರವೀರನನ್ನು ಸಮಾಧಾನ ಮಾಡಲು ಯಾರೊಬ್ಬರೂ ಮುಂದೆ ಬರಲಿಲ್ಲ. ಅಷ್ಟಕ್ಕೂ ಅಲ್ಲೇನಾಗಿತ್ತು ಎಂದು ಅದಾರಿಗೂ ಸ್ಪಷ್ಟವಾಗಿ ಗೊತ್ತಾಗಿರಲಿಲ್ಲ. ಎಲ್ಲರ ಮುಖದಲ್ಲೂ ಭಯ, ಸಂಶಯ, ಆಶ್ಚರ್ಯ, ಸಂದೇಹವೇ ಮನೆ ಮಾಡಿದಂತಿತ್ತು. ಆಗಷ್ಟೇ ಕಚೇರಿಯಿಂದ ಬಂದ ಮಂಜನಿಗೆ ಇದಾವುದರ ಪರಿವೆಯೂ ಇರಲಿಲ್ಲವಾದರೂ ಅಲ್ಲಿ ಏನೋ ಒಂದು ದುರ್ಘಟನೆ ಜರುಗಿರಬಹುದೆಂಬ ಗುಮಾನಿಯಂತೂ ಮಂಜನ ತಲೆಯಲ್ಲಿ ಓಡುತ್ತಿತ್ತು. “ ಹಾಂ,, ನನ್ ಮಗಳು ಅಂಥಾದ್ದೇನು … Read more