ಎತ್ತ ಸಾಗುತ್ತಿದ್ದೇವೆ ನಾವು?: ಸಹನಾ ಪ್ರಸಾದ್

ಪ್ರತಿದಿನ ದೃಶ್ಯ ಮಾಧ್ಯಮಗಳಲ್ಲಿ, ಪತ್ರಿಕೆಗಳಲ್ಲಿ, ಜನರ ನುಡಿಗಳಲ್ಲಿ, ಹೆಂಗಸರ ಮೇಲೆ ದೌರ್ಜನ್ಯ, ಮಾನಭಂಗ ಇತ್ಯಾದಿಗಳ ಸುದ್ದಿ ಸರ್ವೇಸಾಮಾನ್ಯವಾಗಿಬಿಟ್ಟಿದೆ. ಸಮೀಕ್ಷೆಗಳ ಪ್ರಕಾರ, ನಮ್ಮ ಮೆದುಳು ಕೆಲವು ಶಬ್ಢಗಳು, ವಿಷಯಗಳನ್ನು ತಕ್ಷಣ ಗುರುತಿಸುತ್ತಂತೆ. ಆದುದರಿಂದಲೇ ಕೆಲವು ಮಾಧ್ಯಮಗಳಲ್ಲಿ ಸುದ್ದಿಗಳನ್ನು ಅತ್ಯಂತ ಆಸಕ್ತಿಯಿಂದ(!!) ರೋಚಕವಾಗಿ ಚಿತ್ರಿಸುತ್ತಾರೆ. ಅದರಲ್ಲಿ ಅವರ ಕಾಳಜಿ, ಕಳಕಳಿಗಿಂತ ಸುದ್ದಿಯನ್ನು ಜನರ ಮನಸ್ಸಿಗೆ ಹೊಡೆಯುವಂತೆ ಸೃಷ್ಟಿಸುವುದೇ ಉದ್ದೇಶ. ದೌರ್ಜನ್ಯದ ಘಟನೆಗಳು ನಡೆದಾಗ ನಮ್ಮ ಮನ ರೊಚ್ಚಿಗೇಳಬೇಕು, ಕಷ್ಟಪಡಬೇಕು. ಆಗ ಉಂಟಾದ ಹಿಂಸೆಯಿಂದ ನಮ್ಮ ಮನಸ್ಸಲ್ಲಿ ಒಂದು ನಿಲುಮೆ ಜನ್ಮತಾಳಬೇಕು. … Read more

ಗಿಳಿ ಕಲಿಸಿದ ಪಾಠ: ವರದೇಂದ್ರ ಕೆ.

ಒಂದು ಕಾಡು ಇತ್ತು. ಆ ಕಾಡಿಗೆ ಬೆಂಕಿ ಬಿದ್ದು ಎಲ್ಲ ಗಿಡ ಮರಗಳೂ ಸುಟ್ಟು ಕರಕಲಾಗಿದ್ದವು. ಹೇಗೋ ತಪ್ಪಿಸಿಕೊಂಡ ಪ್ರಾಣಿ ಪಕ್ಷಿಗಳು ದಿಕ್ಕಾಪಾಲಾಗಿ ಹೋದವು. ಅದರಲ್ಲಿ ಒಂದು ಮರಿ ಗಿಳಿ ತಾಯಿ, ತಂದೆಯಿಂದ ಬೇರ್ಪಟ್ಟು ದೂರವಾಯಿತು. ಎಲ್ಲ ಕಡೆ ಸುತ್ತಿ ಸುತ್ತಿ ದಣಿವಾಯಿತು. ಹೊಟ್ಟೆ ಹಸಿದರೂ ತಿನ್ನಲು ಯಾವ ಹಣ್ಣು ಸಿಗದೆ ಬಳಲಿತು. ಆಹಾರ ಮತ್ತು ವಾಸಕ್ಕಾಗಿ ಅಲೆಯತೊಡಗಿತು. ಎಷ್ಟು ದೂರ ಸಾಗಿದರೂ ಏನು ಸಿಗದೆ ಸತ್ತೇ ಹೋಗುತ್ತೇನೋ ಎನ್ನುವಷ್ಟು ನಿರಾಸೆಯಿಂದ ಚಿಂತಿಸತೊಡಗಿತು. ಅಷ್ಟರಲ್ಲಿ ದೂರದಲ್ಲಿ ಒಂದು … Read more

ಹೃದಯ ಸ್ಪರ್ಶಿ ಬರಹಗಳಿಂದ ಮಾತ್ರ ಸುಂದರವಾದ ಸಮತಾ ಸಮಾಜ ನಿರ್ಮಾಣ: ಈಶ್ವರ ಚ ಮಗದುಮ್ಮ

ಹೌದು! ಎಷ್ಟೋಬಾರಿ ಆತನ ಬಗ್ಗೆ ಬರೆದಿದ್ದೇನೆ. ಆದರೂ ಮತ್ತೇ ಮತ್ತೇ ಅವನ ವ್ಯಕ್ತಿತ್ವದ ಕುರಿತು ಬರೆಯಬೇಕೆನಿಸುತ್ತದೆ. ಅವನ ಬಗ್ಗೆ ಎಷ್ಟು ಬರೆದರೂ ಕಮ್ಮಿ ಅನಿಸಲು ಕಾರಣವೂ ಇದೆ. ಅವನ ಮತ್ತು ನನ್ನ ಸ್ನೇಹ-ಒಡನಾಟ ಹಾಗೇ ಇದೆ. ನಮ್ಮಿಬ್ಬರ ನಡುವೆ ಕೇವಲ ಸ್ನೇಹವಿದ್ದರೆ ಬಹುಶಃ ನಾನು ಅವನ ಕುರಿತು ಪದೆ ಪದೆ ಬರೆಯುತ್ತಿರಲಿಲ್ಲವೇನೋ? ಆದರೂ ಸ್ನೇಹಕ್ಕೂ ಮೀರಿದ ಅದ್ಯಾವುದೋ ಒಂದು ಶಕ್ತಿ ನಮ್ಮನ್ನು ಬೆಸೆದಿದೆ ಎನಿಸಿತ್ತದೆ. ಅದ್ಯಾವದೋ ಒಂದು ತಂತು ನಮ್ಮ ಮನಗಳಲ್ಲಿ ಸಮಾನವಾಗಿ ಮಿಡಿಯುತ್ತಿದೆ ಅನಿಸುತ್ತದೆ. ಅದಕ್ಕಾಗಿಯೇ … Read more

ಕೌಟುಂಬಿಕ ಮೌಲ್ಯ ಮತ್ತು ವಿಶ್ವಭ್ರಾತೃತ್ವ: ಡಿ. ಪಿ. ಭಟ್, ಪುತ್ತೂರು.

ಅನೇಕ ತೀರ್ಥ ಕ್ಷೇತ್ರಗಳನ್ನು, ಹಲವು ಪರಿಶುದ್ಧ ಪಾವಿತ್ರ್ಯತೆಯಿಂದ ಕೂಡಿದ ಕಲ್ಯಾಣಿಗಳನ್ನು, ಮಠ ಮಂದಿರಗಳನ್ನು, ವಿದ್ಯಾ ದೇಗುಲಗಳನ್ನು ಸೇರಿದಂತೆ ಹಿಮಾಲಯದಿಂದ ಕನ್ಯಾಕುಮಾರಿಯವರೆಗೆ ಒಳಗೊಂಡಿರುವ ಹಲವು ಪ್ರಕೃತಿ ವಿಸ್ಮಯಾತ್ಮಕ ರಮಣೀಯ ಸ್ಥಳಗಳ ಮೂಲಕ ಪ್ರವಹಿಸುತ್ತಿರುವ ಆಧ್ಯಾತ್ಮಿಕತೆಯ ಅಭಿವ್ಯಕ್ತಿಯಿಂದ ನಮ್ಮ ಭಾರತವು ಕಂಗೊಳಿಸುತ್ತಿದೆ. ಪರಮೋತ್ಕಟ ಭಕ್ತಿಭಾವೋನ್ಮಾದಸ್ನಾತರಾದ ರಾಮ, ಸೀತಾ, ಕೃಷ್ಣ,  ಶಂಕರರು, ರಾಮಾನುಜರು, ಮಾಧ್ವರು, ಶೀರಾಮಕೃಷ್ಣರು, ಶ್ರೀಮಾತೆ ಶಾರದಾದೇವಿ, ಸ್ವಾಮೀ ವಿವೇಕಾನಂದರಂತಹ ಭಗವದ್ ಸತ್ಪುರುಷರು, ಸಂತರು, ಶರಣರು, ದಾರ್ಶನಿಕರು ಓಡಾಡಿದ ದೇಶವಿದು. ಆಧ್ಯಾತ್ಮಿಕ ಶಕ್ತಿಯ ಪ್ರಬಲತೆಯಿಂದ ಕೂಡಿದ ಭರತ ಭೂಮಿಯಲ್ಲಿಂದು ಕೊಲೆ, … Read more

ಮರೆಯಾಗದಿರಲಿ ನೋವು ಮರೆಸುವ ನಗು!: ಜಯಶ್ರೀ.ಜೆ. ಅಬ್ಬಿಗೇರಿ

ಬಹುತೇಕ ನಮ್ಮೆಲ್ಲರ ಇತ್ತೀಚಿನ ದೈನಂದಿನ ಜೀವನ ಒತ್ತಡದ ಮಡುವಿನಲ್ಲಿ ಬಿದ್ದು ಒದ್ದಾಡುತ್ತಿದೆ. ಒತ್ತಡ ಹಾಗೂ ಬದ್ಧತೆಗಳ ಆರ್ಭಟಕ್ಕೆ ಮಣದಿರುವ ನಾವು ಅಕ್ಷರಶಃ ನಗುವುದನ್ನೇ ಮರೆತಿದ್ದೇವೆ. ಅಲ್ಲೊಮ್ಮೆ ಇಲ್ಲೊಮ್ಮೆ ಆಗೊಮ್ಮೆ ಈಗೊಮ್ಮೆ ನಕ್ಕರೂ ಅದು ಗೊಂಬೆ ನಗುವಿನಂತಿರುತ್ತದೆ. ಹೃದಯ ತುಂಬಿದ ನಗು ಅದೆಲ್ಲಿ ಮಾಯವಾಗಿದೆಯೋ ಹುಡುಕ ಬೇಕಿದೆ. ಕಿವಿಯಿಂದ ಕಿವಿಯವರೆಗಿನ ನಗು ಮರೆತು ಅದೆಷ್ಟೋ ವರ್ಷಗಳು ಕಳೆದವು ಅನಿಸುತ್ತಿದೆ ಅಲ್ಲವೇ? ನಗು ಮಾನವನ ಸಹಜ ಪ್ರಕ್ರಿಯೆ ಅದನ್ನೇ ಮರೆತು ಬಾಳುತ್ತಿರುವುದು ನಿಜಕ್ಕೂ ಖೇದಕರ ಸಂಗತಿಯೇ ಸರಿ. ಒಂದು ಅಧ್ಯಯನದ … Read more

ರೈತ (ಪುಟ್ಟ ಕತೆ): ವೆಂಕಟೇಶ ಚಾಗಿ

ಆಗ ನಾನಿನ್ನು  ಪುಟ್ಟ ಹುಡುಗ. ಎರಡೇ ತರಗತಿಯಲ್ಲಿ ಓದುತ್ತಿರುವಾಗಲೇ ಅಪ್ಪ ನನ್ನನ್ನು ಹೊಲಕ್ಕೆ ಕರೆದುಕೊಂಡು ಹೋಗುತ್ತಿದ್ದ. ಅಪ್ಪನಿಗೆ “ಅಪ್ಪಾ , ನಾನೂ ರೈತ ಆಗ್ಲಾ? ” ಅಂತ ಕೇಳಿದ್ದೆ.  ಅಪ್ಪನ ಕೆಲಸಗಳೋ ಒಂದಲ್ಲ ಎರಡಲ್ಲ. ನಸುಕಿನ ಜಾವ ಏಳುತ್ತಲೇ ಅಪ್ಪನ ಕಾಯಕ ಶುರುವಾಗುತ್ತಿತ್ತು. ಅಮ್ಮ ಮಾಡಿಕೊಟ್ಟ ನಾಲ್ಕೈದು ರೊಟ್ಟಿ  , ಪಲ್ಲೆ ಒಂದು ಬಟ್ಟೆಯಲ್ಲಿ ಕಟ್ಟಿಕೊಂಡು ಬಾಯಾರಿಕೆಗಾಗಿ ಮಣ್ಣಿನ ಬಾಟಲ್ ನಲ್ಲಿ ನೀರು ತುಂಬಿಕೊಂಡು ಎರಡು ಎತ್ತುಗಳನ್ನು ಹಿಡಿದು ಹೊರಟರೆ ಮುಗೀತು ಮತ್ತೆ ಸಂಜೆ ಆರಕ್ಕೆ ಅಪ್ಪ … Read more

ಸಕಾರಾತ್ಮಕವಾಗಿಯೇ ಚಿಂತಿಸಬೇಕಲ್ಲವೆ?: ಸೋಮಶೇಖರ್ ಹೊಳಲ್ಕೆರೆ

ಬಹಳ ವರುಷ ಒಂದೇ ಸ್ಥಳದಲ್ಲಿ, ಒಂದೇ ವಾತಾವರಣದಲ್ಲಿ ವಾಸಿಸುವುದರಿಂದ, ಒಂದೇ ರುಚಿ ಆಹಾರ ಸೇವಿಸುವುದರಿಂದ ಬೇಸರ ಉಂಟಾಗುವುದು ಸಾಮಾನ್ಯ! ಅದಕ್ಕೇ ಆಗಾಗ ಹಬ್ಬಗಳು, ಜಾತ್ರೆಗಳು ಬಂದು ವಿಧವಿಧ ರುಚಿಯ ಭಕ್ಷ್ಯ ಬೋಜ್ಯಗಳ ತಂದು, ನೆಂಟರಿಷ್ಟರ ಮನೆತುಂಬಿಸಿ, ಪೂಜೆ ಪುರಸ್ಕಾರ ಗಂಟಾ ಘೋಷಗಳಲಿ ಮೀಯಿಸಿ, ಮನೆಯ ತಳಿರು ತೋರಣಗಳಿಂದ ಸಿಂಗರಿಸಿ ಮನೆಯ ವಾತಾವರಣವನ್ನು ಬದಲಾಯಿಸಿ ಏಕತಾನತೆಯ ಬೇಸರ ಕಳೆದು ಬದುಕುವ ಉತ್ಸಾಹವ ತುಂಬುವ ಹೊಸ ಹುರುಪು ತುಂಬುವ ಉಪಾಯಗಳ ನಮ್ಮ ಹಿರಿಯರು ವರುಷ ಪೂರ್ತಿ ಮಾಡಿರುವುದು! ಪ್ರವಾಸ, ತೀರ್ಥಯಾತ್ರೆಗಳು … Read more

ಪಂಜು ಕಾವ್ಯಧಾರೆ

ಈ ಜಗದಾಗೆ ದೊಡ್ಡೋರು ಯಾರಿಲ್ಲ ಚಿಕ್ಕೋರು ಯಾರಿಲ್ಲ ಎಲ್ಲಾರೂ ಒಂದೇನೆ ಈ ಜಗದಾಗೆ ದೇವ್ರಾಟ ಆಡ್ಕೋತ ಬದುಕನ್ನ ಬೇಯಿಸ್ಕೊತ ಕಡೆಗೆಲ್ಲಾ ಮಣ್ಣು ಈ ಜಗದಾಗೆ || ಲೋಕಾನೆ ಗೆಲ್ಬೇಕು ಅಂದ್ಕೊಂಡು ಬಂದವ್ರು ಬರಿಗೈಲಿ ಹೋದ್ರಂತೆ ಇತಿಹಾಸ್ದಾಗೆ ಅಂತಸ್ತು ಬಿದ್ದೋಯ್ತು ನೆಲವೆಲ್ಲಾ ಮುಳುಗೋಯ್ತು ಗೊತ್ತಿಲ್ಲಾ ಬರ್ದದ್ದು ಹಣೆಬರ್ದಾಗೆ || ಕಷ್ಟಾನೂ ಬರ್ತಾದೆ ಸುಖಾನೂ ಬರ್ತಾದೆ ಬಂದದ್ದು ತಗೋಬೇಕು ಜೀವಂದಾಗೆ ಕಷ್ಟದಲಿ ಕುಗ್ಗದಂಗೆ ಸುಖದಲ್ಲಿ ಹಿಗ್ಗದಂಗೆ ದೇವ್ರೌನೆ ಅಂದ್ಕೊಂಡ್ರೆ ನೆಮ್ಮದಿತಾನೆ || ಗೆದ್ದದ್ದು ಗೆಲುವಲ್ಲ ಸೋತದ್ದು ಸೋಲಲ್ಲ ಜಿದ್ದಾಜಿದ್ದಿಯ ಕಾಣೆ … Read more

ಅಮ್ಮ ಹೀಗೆ ಇರಬೇಕು: ಗಿರಿಜಾ ಜ್ಞಾನಸುಂದರ್

ಪುಟ್ಟ ಪುಟ್ಟ ಕೈಗಳು ಅಮ್ಮನನ್ನು ಹಿಡಿದಿದ್ದವು. ೮ ದಿನದ ಮಗು ಬಹಳ ಸಣ್ಣದಾಗಿ ಹುಟ್ಟಿದ್ದು, ಆ ಮಗುವನ್ನು ಹೇಗೆ ಎತ್ತಿಕೊಳ್ಳಬೇಕೆಂಬುದು ಸಹ ತಿಳಿದಿರಲಿಲ್ಲ ಅಮ್ಮನಿಗೆ. ಸರಸ್ವತಿ ತನ್ನ ೨೨ ನೇ ವರ್ಷಕ್ಕೆ ಮಗುವಿಗೆ ಜನನ ನೀಡಿದ್ದಳು. ಅವಳಿಗೆ ಇದೆಲ್ಲ ಹೊಸತು. ಮಗು ಅಳುತ್ತಿದ್ದರೆ ಏನು ಮಾಡಬೇಕೆಂಬುದೇ ಅವಳಿಗೆ ತಿಳಿಯುತ್ತಿರಲಿಲ್ಲ. ಯಾವ ಕಾರಣಕ್ಕೆ ಅಳುತ್ತಿದೆ ಎಂದು ಯೋಚಿಸುತ್ತಿದ್ದಳು. ಮಗು ತುಂಬ ಅಳುತ್ತಿತ್ತು, ಅವಳಿಗೆ ಅದನ್ನು ಸಮಾಧಾನ ಮಾಡುವುದೇ ಒಂದು ದೊಡ್ಡ ಸಾಹಸವಾಗಿತ್ತು. ಅವಳ ನಿದ್ದೆಗೆ, ಊಟಕ್ಕೆ ಪ್ರತಿಯೊಂದಕ್ಕೂ ಮಗು … Read more

ಇತಿ ತಮ್ಮ ವಿಶ್ವಾಸಿ: ಪ್ರಣವ್ ಜೋಗಿ

ಬಹುಶಃ ಶಾಲೆಯ ದಿನಗಳು ಇರಬೇಕು. ಯಾವುದೋ ಒಂದು ಪರೀಕ್ಷೆಯಲ್ಲಿ ಬರೆದ ಪತ್ರ. ಅದೇ ಕೊನೆಯ ಪತ್ರವಾಗಲಿದೆ ಎಂಬ ಸುಳಿವು ಆಗಲೇ ದೊರೆತ್ತಿದ್ದಿದ್ದರೆ, ಇನ್ನೂ ಒಂದಷ್ಟು ಸಾಲುಗಳನ್ನು ಬರೆದು ಬಿಡುತ್ತಿದ್ದೆ. ಆ ನಂತರ ಎಂದೂ ಪತ್ರ ಬರೆಯಲೇ ಇಲ್ಲ. ಕ್ಷಣ ಮಾತ್ರದಲ್ಲಿ ಸಂದೇಶ ತಲುಪುವ ತಂತ್ರಜ್ಞಾನ ಇರುವಾಗ, ಪತ್ರವೇಕೆ ಬರೆಯಬೇಕು ಎಂಬ ಆಲೋಚನೆ ಇದರ ರೂವಾರಿ. ದುರಂತರವೆಂದರೆ, ಮುಂಚೆ ಬರೆದ ಪತ್ರಗಳೂ ಕೂಡ ಪರೀಕ್ಷೆಗಳಲ್ಲೇ. ನಿಜ ಜೀವನದಲ್ಲಿ, ದೂರದ ಸಂಬಂಧಿಕರೊಬ್ಬರಿಗೆ ಒಂದೆರಡು ಬಾರಿ ಪತ್ರ ಬರೆದಿರಬಹುದಷ್ಟೇ. ಇಂದಿನ ಕಾಲದಲ್ಲಿ … Read more

ಮಕ್ಕಳ ಕವನ: ವರದೇಂದ್ರ ಕೆ

ಪ್ರಾರ್ಥನೆ ನಾವೆಲ್ಲ ಮಕ್ಕಳು ನಿನ್ನ ಚರಣ ಪುಷ್ಪಗಳು| ಜ್ಞಾನ ಅರಸಿ ಬಂದಿಹೆವು ವಿದ್ಯೆ ಬುದ್ಧಿ ನೀಡಮ್ಮ, ಹೇ ಮಾತೆ ಶಾರದಾಂಬೆ|| ನಾವೆಲ್ಲ ಮಕ್ಕಳೂ…. ವಿದ್ಯಾದಾಯಿನಿ ವೀಣಾಪಾಣಿ| ರಾಗ ತಾಳ ಎಲ್ಲ ನಾವೆ ಜ್ಞಾನ ವೀಣೆ ನುಡಿಸು ತಾಯೆ|೧| ನಾವೆಲ್ಲ ಮಕ್ಕಳೂ… ನಿತ್ಯವೂ ನಿನ್ನ ಸ್ಮರಣೆ ಮಾಡುವೆವು ಭಕ್ತಿಯಿಂದ| ಕರುಣೆ ತೋರಿ ಒಲಿಯಮ್ಮ ಸತ್ಯವನ್ನೆ ನುಡಿಸು ತಾಯೆ|೨| ನಾವೆಲ್ಲ ಮಕ್ಕಳೂ…. ಜ್ಞಾನ ದೀಪ ಹಚ್ಚುವೆವು ನಿನ್ನ ಚರಣ ಕಮಲಕ್ಕೆ| ಜ್ಯೋತಿ ಆಗಿ ಬಾರಮ್ಮ ನಮ್ಮ ಬಾಳ ಬೆಳಗು ತಾಯೆ|೩| … Read more

ಸಂ-ಜನ: ಹೆಚ್. ಷೌಕತ್ ಆಲಿ, ಮದ್ದೂರು

ಒಂದು ತಾಲ್ಲೋಕಿನಿಂದ ಮತ್ತೊಂದು ತಾಲ್ಲೋಕಿನ ಒಂದು ಕಾಲೇಜಿನಲ್ಲಿ ನಾನು ಉಪನ್ಯಾಸಕನಾಗಿ ಕಾರ್ಯ ನಿರ್ವಹಿಸುತ್ತಿದ್ದ ಸಂದರ್ಭದಲ್ಲಿ ದಿನಾ ಕೆ ಎಸ್ ಆರ್ ಟಿ ಸಿ ಬಸ್ನಲ್ಲಿ ಹೋಗಿ ಬರುವುದು ಮಾಮೂಲಿಯಾಗಿತ್ತು. ಸಮಯಕ್ಕೆ ಅರ್ಧಘಂಟೆ ಮುಂಚೆ ನಾನು ಬಸ್ಸ್ಟ್ಯಾಂಡ್ ನಿಂದ ಇಳಿದು ಕಾಲೇಜಿಗೆ ನಡೆದುಕೊಂಡೆ ಹೋಗುತ್ತಿದ್ದೆ. ನನ್ನ ಕೈಯಲ್ಲಿ ಟೀಫಿನ್ ಬಾಕ್ಸ್, ವಾಟರ್ ಬಾಟಲ್ ಅವುಗಳನ್ನು ಹೊತ್ತಿರೋ ಒಂದು ಬ್ಯಾಗ್ ಆ ಬ್ಯಾಗ್ ನನ್ನ ಕೈಯಲ್ಲಿ. ಆ ಬ್ಯಾಗ್ ಹಿಡಿದುಕೊಂಡು ನಾನು ಕಾಲೇಜಿಗೆ ಬರುವಾಗ, ಹೋಗುವಾಗ ನನ್ನ ವಾಕಿಂಗ್ ಸ್ಟೈಲ್ … Read more

ದೇಹವೆ ದೇವಾಲಯ !: ಕೆ ಟಿ ಸೋಮಶೇಖರ ಹೊಳಲ್ಕೆರೆ

ದೇವಾಲಯ ಎಂಬುದು ನೆಮ್ಮದಿಯ ತಾಣ. ದೇವರು ಎಂಬುದು ಒಳ್ಳೆಯದರ ಸಂಕೇತ! ಮಾನವರು ದೇವರನ್ನು ಪೂಜಿಸುವುದು ಆರಾಧಿಸುವುದು ಎಂದರೆ ಒಳ್ಳೆಯತನದ ಆರಾಧನೆ ಎಂದು ಅರ್ಥ ! ಎಲ್ಲರೂ ದೇವಸ್ಥಾನಕ್ಕೆ ಹೋಗುತ್ತಿದ್ದಾರೆಂದರೆ ಒಳ್ಳೆಯದನ್ನು ಬಯಸುತ್ತಿದ್ದಾರೆಂದು ಅರ್ಥ. ಒಳ್ಳೆಯತನ ಸದಾ ಮಾನವರಿಗೆ ನೆಮ್ಮದಿ ನೀಡುತ್ತದೆ! ಅದಕ್ಕಾಗಿ ಅನೇಕರು ಅದನ್ನು ಅರಸಿ ದೇವಾಲಯಗಳಿಗೆ ಹೋಗುತ್ತಾರೆ. ಆದರೆ ಅದನ್ನು ಕೆಲವರು ಅರ್ಥೈಸುವಲ್ಲಿ ಆಚರಿಸುವಲ್ಲಿ ಪ್ರಮಾದಗಳಾಗಲು ಕಾರಣರಾಗಿರುವುದರಿಂದ ರೌದ್ರ ಭೀಭತ್ಸ ವಾತಾವರಣ ಉಂಟಾಗುತ್ತಿದೆ. ನೆಮ್ಮದಿಯ ತಾಣವಾಗಬೇಕಾದವು ನೆಮ್ಮದಿಯ ಕದಡಲು ಕಾರಣವಾಗುತ್ತಿವೆ. ಕೆಲವು ಮಹನಿಯರು ದೇಹವೆ ದೇವಾಲಯವಾಗಬೇಕೆಂದಿರುವರು. … Read more

ಬಹು ಮುಖದ ‘ ಚಿಲುಮೆ’: ಅರವಿಂದ ಚೊಕ್ಕಾಡಿ

ಸ್ನೇಹಿತ ಲಕ್ಷ್ಮೀಕಾಂತ ಮಿರಜಕರ ಮೊಳಕಾಲ್ಮೂರಿನ ದೇವಸಮುದ್ರದ ಇಂದಿರಾ ಗಾಂಧಿ ವಸತಿ ಶಾಲೆಯ ಪ್ರಾಂಶುಪಾಲರು. ನನ್ನ ಇಲಾಖಾ ಸನ್ಮಿತ್ರರು. ನಮ್ಮದು ಬಹಳ ಸಣ್ಣ ವ್ಯವಸ್ಥಾಪನೆಯಾದುದರಿಂದ, ಸಂಕಷ್ಟಗಳು ಮತ್ತು ಅನುಭವಗಳು ಉಳಿದೆಲ್ಲ ಇಲಾಖೆಯವರಿಗಿಂತ ಭಿನ್ನವಾಗಿರುವುದರಿಂದ ಬೃಹತ್ ವ್ಯವಸ್ಥೆಯಲ್ಲಿ ಕಣ್ಣಿಗೆ ಕಾಣದಷ್ಟು ಸಣ್ಣ ಸಂಖ್ಯೆಯವರು ಇಟ್ಟಾಗಿ ಬಡಿದಾಡಬೇಕಾದ್ದರಿಂದ ಸಂಬಂಧಗಳು ಬಿಗಿಯಾಗಿರುತ್ತವೆ. ಇಂತಿಪ್ಪ ಲಕ್ಷ್ಮೀಕಾಂತರು ಇತ್ತೀಚೆಗೆ ನನಗೊಂದು ಪುಸ್ತಕವನ್ನು ಕಳಿಸಿಕೊಟ್ಟರು. ಅದು ತಮ್ಮ ವಸತಿ ಶಾಲೆಯ ವಿದ್ಯಾರ್ಥಿಗಳು ಬರೆದ ಬರಹಗಳ ಸಂಕಲನ-‘ಚಿಲುಮೆ’. ‘ಚಿಲುಮೆ’ಯ ವೈವಿಧ್ಯ ಬಹಳ ಮುದ ನೀಡಿತು. ಒಬ್ಬ ವಿದ್ಯಾರ್ಥಿ ಕವನ … Read more

ಹೋರಾಟದ ಹೆಜ್ಜೆ ಮೂಡಿಸಿ ಮರೆಯಾದ ಮಿತ್ರ ಈಶ್ವರ ಮಗದುಮ್: ಅಶ್ಫಾಕ್ ಪೀರಜಾದೆ

ಈಗ ಬರೆಯುತ್ತಿರುವ ಒಂದೊಂದು ಅಕ್ಷರಕೂಡ ನೇರವಾಗಿ ನನ್ನ ಹೃದಯದಿಂದ ತೊಟ್ಟಿಕುತ್ತಿರುವಂತೆ ಭಾಸವಾಗುತ್ತಲಿದೆ. ಅಂತಿಮವಾಗಿ ಅವನ ಮುಖದರ್ಶನ ಮಾಡಿಕೊಂಡು ಬಂದಾಗಿನಿಂದಲೂ ಮನಸ್ಸಿಗೆ ಸೊಗಸೇ ಇಲ್ಲದಂತಾಗಿದೆ. ಏನೋ ಕಳೆದುಕೊಂಡಿದ್ದು ಅಲ್ಲ ಎಲ್ಲವನ್ನು ಕಳೆದುಕೊಂಡಂತೆ ಹೃದಯ ತಬ್ಬಲಿಯಾಗಿ ಆಕ್ರಂದಿಸುತ್ತಲಿದೆ. ಜೀವ ಸಮಾಧನವಿಲ್ಲದೆ ಒದ್ದಾಡುತ್ತಿದೆ. ನನ್ನೊಳಗಿನ ತಬ್ಬಲಿತನದ ಭಾವನೆ ಶಬ್ಧಗಳಲ್ಲಿ ಹಿಡಿದಿಡಲು ಸಾಧ್ಯವಿಲ್ಲ ಅನಿಸುತ್ತಲಿದೆ. ಅಣ್ಣ ಸಯಿದ ಮತ್ತು ಸ್ನೇಹಿತ ವಿಠ್ಠಲ ಕರೆ ಮಾಡಿ ನಮ್ಮ ಈಶ್ವರ ಇನಿಲ್ಲವೆಂದಾಗ ಒಂದು ಕ್ಷಣ ನನ್ನ ಕಾಲ ಕೆಳಗಿನ ಭೂಮಿಯೇ ಬಾಯ್ದೆರೆದು ನುಂಗಿದಂತೆ ಭಾಸವಾಯಿತು ನನಗೆ. … Read more

ಸಾಮಾಜಿಕ ಜಾಲತಾಣಗಳಲ್ಲಿ ಟೀಕೆ ಎದುರಿಸುವುದು ಒಂದು ಕಲೆ!: ಸಹನಾ ಪ್ರಸಾದ್

” ಯಾಕ್ರೀ ಜಾನಕಿ, ಎಫ್ ಬಿ ಯಲ್ಲಿ ಕಾಣುತ್ತಾನೇ ಇಲ್ಲ, ಈಚೀಚಿಗೆ. ನಿಮ್ಮ ನಿಲುಮೆಗಳು, ಪಟಗಳು ಇಲ್ಲದೆ ಫ಼ೇಸ್ಬುಕ್ಕು ಸೊರಗಿದೆಯಲ್ಲಾ!” ನನ್ನ ಮಾಮೂಲಿ ಹಾಸ್ಯದ ಧಾಟಿಯಲ್ಲಿ ಕಾಲೆಳೆದಾಗ ಜಾನಕಿಯ ಪ್ರತಿಕ್ರಿಯೆ ಅನಿರೀಕ್ಷಿತವಾಗಿತ್ತು. ” ಈ ಮುಖಪುಟ ಒಂದೇ ಸಾಕು, ನಮ್ಮ ಮನಸ್ಸಿನ ನೆಮ್ಮದಿ ಹಾಳು ಮಾಡಕ್ಕೆ ಇಲ್ಲಿ ಜನರು ಬಹಳ ಭಯಂಕರ. ನನ್ನ ಮುಂದೆ ಒಂದು ರೀತಿ, ಬೆನ್ನ ಹಿಂದೆ ಮತ್ತೊಂದೇ ತರಹ. ಅಲ್ಲಿ ಕಾಮೆಂಟ್ ಹಾಕುವುದು ಬೇರೆ, ಇನ್ಬಾಕ್ಸಲ್ಲಿ ಬರೀ ದೂಷಣೆ, ಜಾನಕಿ ಹಾಗೆ, ಅವಳ … Read more

ನಡುವೆ ಬಂದವರು: ಸಿಂಧು ಭಾರ್ಗವ್

ರೋಶನಿ ಪ್ರತಿಷ್ಠಿತ ಕಂಪೆನಿಯಲ್ಲಿ ಕೆಲಸ ಮಾಡುತ್ತಿರುವ ಉದ್ಯೋಗಿ. ವಯಸ್ಸು 35 ವರ್ಷವಿರಬಹುದು. ಮದುವೆಯಾಗಿ ಒಂದು ಮಗು ಇರುವ ಸಂಸಾರಸ್ಥೆ. ಹೀಗಿರುವಾಗ ರೋಹಿತ್ ಎಂಬ ಹೊಸ ಸಹೋದ್ಯೋಗಿಯ ಪರಿಚಯವಾಗಿ ಸ್ನೇಹ ಬೆಳೆದು ಪ್ರೀತಿಯ ನಾಮಕರಣ ಮಾಡಿದ್ದಳು. ಅವನೋ ಇನ್ನೂ ಯುವಕ. 23 ವರ್ಷ ವಯಸ್ಸಿರಬಹುದು. ನೋಡಲು ಸುರದ್ರೂಪಿ. ಉತ್ಸಾಹಿ ಕೆಲಸಗಾರ. ಅನುದಿನವೂ ಅವಳ ಜೊತೆ ಹರಟುವುದು, ಅವಳ ಸೌಂದರ್ಯವನ್ನು ಹೊಗಳುವುದು, ವೃತ್ತಿ ನಿಷ್ಠೆಯನ್ನು ಹೊಗಳುವುದು ಅವನ ದಿನಚರಿಯಾಗಿತ್ತು. ಹೆಣ್ಮಕ್ಕಳಿಗೆ ಸ್ವಲ್ಪ ಹೊಗಳಿದರೂ ಕರಗಿ ಹೋಗುವುದು ಅವರ ಮನೋ ದೌರ್ಬಲ್ಯ … Read more

ಇಹದ ದುರ್ಗಂಧ- ಪರದ ಪರಿಮಳ: ಡಾ. ಹೆಚ್ ಎನ್ ಮಂಜುರಾಜ್

(ಹರಿದಾಸ ಪ್ರಸಿದ್ಧ ಶ್ರೀಪಾದರಾಜರ ಎರಡು ಕೀರ್ತನ ರಚನೆಗಳ ವಿಶ್ಲೇಷಣೆ) ರಚನೆ : ಶ್ರೀ ಶ್ರೀಪಾದರಾಜರು ಮರುದಂಶರ ಮತ ಪಿಡಿಯದೆ ಇಹ -ಪರದಲ್ಲಿ ಸುಖವಿಲ್ಲವಂತೆ || ಪ || ಅರಿತು ವಿವೇಕದಿ ಮರೆಯದೆ ನಮ್ಮಗುರುರಾಯರ ನಂಬಿ ಬದುಕಿರೋ || ಅ.ಪ.|| ಕ್ಷೀರವ ಕರೆದಿಟ್ಟ ಮಾತ್ರದಿ ಸಂಸ್ಕಾರವಿಲ್ಲದೆ ಘೃತವಾಗದಂತೆ ಸೂರಿಜನರ ಸಂಗವಿಲ್ಲದೆ ಸಾರವೈರಾಗ್ಯ ಭಾಗ್ಯ ಪುಟ್ಟದಂತೆ || ೧ || ಉಪದೇಶವಿಲ್ಲದ ಮಂತ್ರ ಏಸುಜಪಿಸಲು ಫಲಗಳ ಕೊಡದಂತೆ ಉಪವಾಸ ವ್ರತಗಳಿಲ್ಲದೆ ಜೀವತಪಸಿಯೆನಿಸಿಕೊಳ್ಳಲರಿಯನಂತೆ || ೨ || ಸಾರಮಧ್ವಶಾಸ್ತ್ರವೋದದೆ ಗುರುತಾರತಮ್ಯ ಜ್ಞಾನ … Read more