ಜಾಣಸುದ್ದಿ 7: ಕೊಳ್ಳೇಗಾಲ ಶರ್ಮ

ಈ ವಾರದ ಸಂಚಿಕೆಯಲ್ಲಿ ಕೊಳ್ಳೇಗಾಲ ಶರ್ಮರವರ ಧ್ವನಿಯಲ್ಲಿರುವ ಈ ಆಡೀಯೊ ಕೇಳಲು ಈ ಕೆಳಗಿನ ಕೊಂಡಿಯ ಮೇಲೆ ಕ್ಲಿಕ್ಕಿಸಿ. ಈ ಧ್ವನಿಮುದ್ರಿಕೆಯನ್ನು ಡೌನ್ ಲೋಡ್ ಮಾಡಿಕೊಳ್ಳಲು ಜಾಣ ಸುದ್ದಿ ಧ್ವನಿಮುದ್ರಿಕೆ ಲಿಂಕ್ ನ ಮೇಲೆ ಕ್ಲಿಕ್ ಮಾಡಿ ನಂತರ save as/ download ಆಪ್ಷನ್ ನಿಂದ ನಿಮ್ಮ ಮೊಬೈಲ್/ ಕಂಪ್ಯೂಟರ್ ಗೆ ಡೌನ್ ಲೋಡ್ ಮಾಡಿಕೊಳ್ಳಿ… ಇ ಮೇಲ್ ನಲ್ಲಿ ಅಥವಾ ವಾಟ್ಸ್ ಅಪ್ ನಲ್ಲಿ ಈ ಧ್ವನಿಮುದ್ರಿಕೆ ನಿಮಗೆ ಬೇಕು ಎಂದನಿಸಿದರೆ ನಿಮ್ಮ ಕೋರಿಕೆಯನ್ನು ನಮ್ಮ ಇ … Read more

ಹೆಣ್ಣು: ಸಹನಾ ಪ್ರಸಾದ್

ರಾತ್ರಿ ಎಲ್ಲ ಮಧುಸೂದನನಿಗೆ ನಿದ್ರೆ ಇಲ್ಲ. ಆ ಕಡೆ, ಈ ಕಡೆ ಹೊರಳಾಡಿ, ಎದ್ದು ಕುಳಿತು, ಮತ್ತೆ ಮಲಗಿ, ಹೀಗೆ ಅರ್ಧ ರಾತ್ರಿ ಕಳೆಯಿತು. ಸಧ್ಯ, ಹೆ0ಡತಿಗೆ ಬೇರೆ ಕೋಣೆಯಲ್ಲಿ ಮಲಗಿ ಅಭ್ಯಾಸ. ಇಲ್ಲದಿದ್ದರೆ ಇಷ್ಟು ಹೊತ್ತಿಗೆ ರ0ಪ ಮಾಡಿ ಬಿಟ್ಟಿರುತ್ತಿದ್ದಳು. ಅಬ್ಬಬ್ಬಾ, ರಾತ್ರಿಯೆಲ್ಲ ನಿಮ್ಮ ಗೊರಕೆ ಇಲ್ಲಾ ಹೊರಳಾಟ, ನನ್ಕೈಲಿ ಆಗುವುದಿಲ್ಲಪ್ಪ. ಆರಾಮವಾಗಿ ಹೊದ್ದು ಮಲಗಲು ನಿಮಗೇನು ಕಷ್ಟ? ಹೇಗು ನನಗೆ ಚಿಕ್ಕ ವಯಸ್ಸಿನಿ0ದ ಆಸೆ, ನನ್ನದೇ ರೂಮು ಇರಬೇಕೆ0ದು, ರಮ್ಯಳ ರೂಮು ಖಾಲಿಯಾಗಿದೆಯಲ್ಲ, ಅಲ್ಲಿ … Read more

ಕೆರೆಗೆ ಹಾರ (ಭಾಗ 1): ಅಖಿಲೇಶ್ ಚಿಪ್ಪಳಿ

ಎಲ್ಲಾ ನಾಗರೀಕತೆಗಳು ಹುಟ್ಟಿ ವಿಕಾಸವಾಗಿದ್ದು ನದಿದಂಡೆಗುಂಟ ಎಂದು ಇತಿಹಾಸ ಹೇಳುತ್ತದೆ. ಗಾಳಿಯಲ್ಲಿರುವ ಆಮ್ಲಜನಕ ಪುಕ್ಕಟೆಯಾಗಿಯೇ ಸಿಗುತ್ತದೆ. ಅಂತೆಯೇ ನೀರು. ಗಾಳಿಯ ಲಭ್ಯತೆ ಇರುವಂತೆ ನೀರಿನ ಲಭ್ಯತೆ ಎಲ್ಲಾ ಸ್ಥಳಗಳಲ್ಲೂ ಇರುವುದಿಲ್ಲ. ಇಳಿಜಾರಿನತ್ತ ಸಾಗುವ ನೀರಿನ ಗುಣವೇ ಮನುಷ್ಯನನ್ನು ಸೆಳೆದು ತನ್ನ ದಂಡೆಗುಂಟ ಸಾಕಿಕೊಂಡಿತು. ಜೀವಜಲದ ಮಹತ್ವದ ಅರಿವು ಎಲ್ಲರಿಗೂ ಇರಬೇಕಿತ್ತು. ಅರಿವಿನ ಕೊರತೆ ನೀರಿನ ಅಗಾಧತೆಗಿಂತಲೂ ಹೆಚ್ಚಿದೆ. ತಗ್ಗಿನಲ್ಲಿ ನೀರು ಸಿಗುತ್ತದೆ ಎಂಬ ಅರಿವು ಮಾನವನಿಗೆ ಆದ ಕ್ಷಣ ಬಾವಿ-ಕೆರೆಗಳ ಹುಟ್ಟೂ ಆಯಿತು. ಒಂದು ಊರು ಆರೋಗ್ಯವಾಗಿ … Read more

ಪ್ರೇಮಪತ್ರಗಳು: ನಳಿನ.ಡಿ., ಆರೀಫ ವಾಲೀಕಾರ

ನೋವು ನಿರಂತರ ಧ್ಯಾನದಂತೆ! ಆ ಹೊತ್ತು ನೀನು ಸಿಗಬಾರದಿತ್ತೇನೋ, ನೀನು ಸಿಕ್ಕು ಖಾಲಿ ಬಿದ್ದಿದ್ದ ನನ್ನ ಮೊಬೈಕ್ ನೊಳಗೆ ಪೆಟ್ರೋಲ್ ತುಂಬಿಸಲು ಬೆನ್ನ ಹಿಂದೆ ಹತ್ತಿಸಿಕೊಂಡು ಹೋದಿ. ಅಗ ಬರೀ ನನ್ನ ಗಾಡಿಯ ಎದೆಯೊಳಗೆ ಪೆಟ್ರೋಲ್ ಮಾತ್ರ ತುಂಬಿಸಲಿಲ್ಲ, ನನ್ನ ಎದೆಯ ತುಂಬಾ ನೀನೇ ತುಂಬಿಕೊಂಡೆ. ಭಾಷೆ ಗೊತ್ತಿಲ್ಲದ ಅನಾಮಿಕ ಭಾಷೆಯಲ್ಲಿ ನಾನು ನಿನ್ನನ್ನು ಕಷ್ಟಪಟ್ಟು ಇಷ್ಟವಾದದ್ದನ್ನು ಹೇಳಿದಾಗ ನೀನು ’ಥೂ, ಹೋಗಾಚೆ’ ಅಂದಿದ್ದರೆ ಸಾಕಿತ್ತು, ನೀನು ಹಾಗೆ ಮಾಡುತ್ತೀಯೇನೋ ಅಂತ ನಾನು ಎಷ್ಟು ಸಲ ನನ್ನ … Read more

ಅಹಂಕಾರ ದರ್ಪಗಳ ಮಧ್ಯೆ ಬಂದ ಅವನೊಬ್ಬ: ಬಸವರಾಜ ಕಾಸೆ

ಮಧ್ಯೆ ರಾತ್ರಿ ಎರಡು ಗಂಟೆಯ ಸಮಯ, ಸಿಟಿ ರೈಲು ನಿಲ್ದಾಣದ ಎದುರು ಪುಟಪಾತ್ ಅಲ್ಲಿ ಹೇಗೇಗೊ ಪೇಪರ್ ಹಾಸಿಕೊಂಡು ಮಲಗಿರುವ ಜನರು. ಗಾಢ ಅಂಧಕಾರದ ನಡುವೆ ಕುಂಟುತ್ತಿರುವ ಕುದುರೆ ನಿಂತಲ್ಲೇ ಎಗರಾಡಿ ಬರುತ್ತಿದೆ ಅವನ ಮೈಮೇಲೆ, ಇನ್ನೇನು ತುಳಿದು ಬಿಟ್ಟಿತು ಎನ್ನುವಷ್ಟರಲ್ಲಿ ಒಂದೆಡೆ ರಣಕೇಕೆ ಹಾಕಿ ನಗುತ್ತಿರುವ ರಾಜ ರಾಣಿ ಮಂತ್ರಿಗಳು, ಅಷ್ಟರಲ್ಲಿ ಜೋರಾಗಿ ತಿರುಗುತ್ತಿರುವ ಯಂತ್ರವೊಂದು ಕಳಚಿ ಭಯಾನಕವಾಗಿ ಬಿದ್ದು ಬಿಟ್ಟಿತು. ಹೊಡಿ ಆರು ನೂರಾ ಎಂಭತ್ತು ಎಂಬ ಕರಾಳ ಧ್ವನಿ…ಮಲಗಿದ್ದ ಅವನು ಇದ್ದಕ್ಕಿದ್ದಂತೆ ಬೆಚ್ಚಿ … Read more

ವೃದ್ದಾಪ್ಯದಲ್ಲಿ ಮಕ್ಕಳ ಜವಾಬ್ದಾರಿ: ವೇದಾವತಿ ಹೆಚ್. ಎಸ್.

ಹಳ್ಳಿಯಿಂದ ಡೆಲ್ಲಿಯವರೆಗೆ ವೃದ್ದಶ್ರಾಮಗಳ ಸಂಖ್ಯೆ ಗಣನೀಯ ಪ್ರಮಾಣದಲ್ಲಿ ದಿನೇ ದಿನೇ ಹೆಚ್ಚುತ್ತಿದೆ. ಕಾರಣ ಬೇಕಾದಷ್ಟು ಇರಬಹುದು. ಇಂದಿನ ಮಕ್ಕಳ ನಡವಳಿಕೆ,ಹೊಂದಾಣಿಕೆಯ ಕೊರತೆಯಿಂದಲೂ ಇರಬಹುದು. ಮೂವತ್ತು ವರ್ಷಗಳ ಹಿಂದೆ ತುಂಬಿದ ಕುಟುಂಬ ಇರುತ್ತಿದ್ದ ದಿನಗಳವು. “ಮನೆ ತುಂಬಾ ಮಕ್ಕಳಿರಲವ್ವ”ಎನ್ನುವ ಕಾಲವಾಗಿತ್ತು. ಒಂದು ಮನೆಯಲ್ಲಿ ಐದಾರು ಮಕ್ಕಳಿಂದ ತುಂಬಿ ತುಳುಕುತ್ತಿತ್ತು. ಮಕ್ಕಳಿಗೆ ತಂದೆ ತಾಯಿಯು ಮನೆಯಲ್ಲಿ ಸಂಸ್ಕಾರವನ್ನು ಕಲಿಸುತ್ತಿದ್ದರು. “ಮನೆಯೇ ಮೊದಲ ಪಾಠ ಶಾಲೆ”ಎಂಬ ಹಾಗೆ ದೊಡ್ಡವರಿಂದ ಹಿಡಿದು ಚಿಕ್ಕ ಮಕ್ಕಳವರೆಗೆ ಬೆರೆತು ಬಾಳಬೇಕು ಎನ್ನುವುದು ಮನೆಯ ಜನರಿಂದಲೇ ನೋಡಿ … Read more

ಯುವ ಜನತೆಗೆ ವಿವೇಕಾನಂದರ ಆದರ್ಶಗಳು: ವೈ. ಬಿ. ಕಡಕೋಳ

ಸ್ವಾಮಿ ವಿವೇಕಾನಂದ(ನರೇಂದನಾಥ ದತ್ತ)(ಜನೇವರಿ 12 1863 ಜನನ) ಭಾರತದ ಅತ್ಯಂತ ಪ್ರಸಿದ್ದ ಹಾಗೂ ಪ್ರಭಾವಶಾಲೀ ತತ್ವಜ್ಞಾನಿಗಳು. ನಿರ್ಭಯತೆ, ಆಶಾವಾದ, ಮತ್ತು ಸಾಮಾಜಿಕ ಸಮಸ್ಯೆಗಳ ಬಗೆಗಿನ  ವಿಶಾಲ ದೃಷ್ಟಿಯ ಸಂಕೇತವಾಗಿ ಇಡೀ ವಿಶ್ವಕ್ಕೆ ಮಾದರಿಯಾದ ಸನ್ಯಾಸಿ. ಸ್ವಾಮಿ ವಿವೇಕಾನಂದರ ಜನ್ಮದಿನವಾದ ಜನೇವರಿ 12 “ರಾಷ್ಟ್ರೀಯ ಯುವ ದಿನ”ವೆಂದು 1984 ರಿಂದ ಕೇಂದ್ರ ಸರಕಾರ ಸೂಚಿಸಿದ್ದು ಅಂದಿನಿಂದ ಇದನ್ನು ಆಚರಿಸಲಾಗುತ್ತಿದೆ. ಪ್ರತಿಯೊಬ್ಬರೂ ವಿವೇಕಾನಂದರ ಬದುಕಿನ ಆದರ್ಶಗಳ ಕುರಿತು ಈ ಸಂದರ್ಭದಲ್ಲಿ ಅರ್ಥೈಸಿಕೊಳ್ಳಬೇಕು. ವಿವೇಕಾನಂದರ ಪೂರ್ವಾಶ್ರಮದ ಹೆಸರು ನರೇಂದ್ರನಾಥ ದತ್ತ. ತಂದೆ … Read more

ಪ್ರೇಮಿಗಳ ದಿನಾಚರಣೆಯನ್ನು ಹೇಗೆ ಆಚರಿಸಬೇಕು?: ಕೆ ಟಿ ಸೋಮಶೇಖರ ಹೊಳಲ್ಕೆರೆ.

ಪ್ರೀತಿ ಅತಿ ಅಮೂಲ್ಯ! ಜಗದ ತುಂಬ ತುಂಬಿದೆ. ಮಾನವನ ಜಗತ್ತನ್ನು ಆಳುತ್ತಿದೆ. ಸಕಲ ಜೀವಜಂತುಗಳಲ್ಲೂ ಮನೆ ಮಾಡಿದೆ. ಜಗತ್ತು ಆಗಿರುವುದೇ ಪ್ರೀತಿಯಿಂದ. ಭಾರತೀಯ ಸಂಸ್ಕೃತಿ, ಪರಂಪರೆಯಲ್ಲಿ ಪ್ರೀತಿ, ಪ್ರೇಮ ತೋರಿಸುವಂಥವು ಆಗಿರದೆ ನಡೆ, ನುಡಿ, ಮಾಳ್ಕೆಗಳಲ್ಲಿ ಕಂಡುಬರುವಂಥವು ಆಗಿವೆ. ಅವರವರ ಸಂಬಂಧ, ಭಾವನೆ, ಇಬ್ಬರಲ್ಲಿರುವ ಇಷ್ಟವಾಗುವ ಗುಣಗಳಿಂದ ಅವರ ಪ್ರೀತಿಯ ಅನ್ಯೋನ್ಯತೆ ತೀರ್ಮಾನವಾಗುತ್ತದೆ. ಪ್ರೀತಿ ಎಲ್ಲಾ ಜೀವಿಗಳಲ್ಲೂ ಸಹಜವಾಗಿ ಇರುವಂತಹದ್ದೇ! ಆದ್ದರಿಂದ ಪ್ರೇಮಿಗಳ ದಿನ, ಅಪ್ಪಂದಿರ ದಿನ, ಸ್ನೇಹಿತರ ದಿನ, ಅಮ್ಮಂದಿರ ದಿನ… ಆಚರಿಸುವುದು ಭಾರತೀಯ ಪರಂಪರೆಯಲ್ಲಿಲ್ಲ! … Read more

ಕಾವ್ಯಧಾರೆ

ನೀ ಮೌನ ಮುರಿಯಬೇಕು ನೀನು ಮತ್ತೆ ಎಂದಿನಂತೆ ಮಾತಾಡಬಹುದೆಂಬ ನಂಬಿಕೆ ಅರೆ ಘಳಿಗೆ ಸುಮ್ಮನಿರದ ಕನಸುಗಳು ಹುಟ್ಟುವುದನು ತಡೆಯುವವರು ಯಾರು..!? ನನಸಾಗುವ ಹೂ ಅರಳಲು ರವಿ ಹೊಸತಾಗಿಯೆ ಹುಟ್ಟಬೇಕು ನೀ ಮಾತಿಗೆ ಅಮೃತವನುಣಿಸುವ ಮನಸು ಮಾಡಬೇಕು ಒಲವಲಿ ಮೌನ ಮಾತಾಗಿ ಮುತ್ತಾಗುವುದು ಸಾಮಾನ್ಯ ತಾನೇ..? -ಅಕ್ಷತಾ ಕೃಷ್ಣಮೂರ್ತಿ         ಗಜಲ್ ನೀರಡಿಸಿದಾಗ ಬಾಂವಿ ತೋಡಿದಂಗಾತು ಸಾಯುಹೊತ್ತಾಗ ನಿನ್ನ ನೋಡಿದಂಗಾತು ಹ್ಯಾಂಗೈತಿ ನಮ್ಮ ಜೋಡಿ ಗೊತ್ತೇನ ಸಾಕಿ? ಚೂಡಾದ ಜೊತಿ ಚಹಾ ಕೂಡಿದಂಗಾತು.! ಮಾಡಿಲ್ಲದ … Read more

ಭೂಜ್ವರ – 2017ರ ಹಿನ್ನೋಟ: ಅಖಿಲೇಶ್ ಚಿಪ್ಪಳಿ

ಹಳೆಯ ಕ್ಯಾಲೆಂಡರ್ ಹಾಗೂ ಡೈರಿಯನ್ನು ಬದಿಗಿಟ್ಟು ಹೊಸದನ್ನು ಪಡೆಯುವ ದಿನ ದಾಪುಗಾಲಿಕ್ಕುತ್ತಾ ಬರುತ್ತಿದೆ. ಮತ್ತೊಂದು ವರುಷ ಕಳೆಯಿತು. ಹಾಗಂತ ಹಳೆಯ ಡೈರಿ ಹಾಗೂ ಕ್ಯಾಲೆಂಡರ್‍ಗಳನ್ನು ಮರತೇ ಬಿಡುವುದು ಐತಿಹಾಸಿಕ ದಾಖಲೆಯನ್ನು ಮರೆತ ಹಾಗೆ ಆಗುತ್ತದೆ. ಅತಿಮುಖ್ಯವಾದ ಘಟನೆಗಳನ್ನು ನೆನಪಿಟ್ಟುಕೊಳ್ಳಲು ಇವು ಅಗತ್ಯ. ಹೊಸದನ್ನು ಸ್ವಾಗತಿಸುವು ಪೂರ್ವದಲ್ಲಿ ಒಮ್ಮೆ ಹಿಂತಿರುಗಿ ಅವಲೋಕನಗೈಯುವುದು ಕೂಡ ಮುಖ್ಯ. ಇಡೀ ಪ್ರಪಂಚ ಇವತ್ತು ನಮ್ಮ ಅಂಗೈ ತುದಿಯಲ್ಲಿದೆ. ಮಾಹಿತಿಗಳು ಭರಪೂರ ಲಭ್ಯ. ಹಾಗಂತ ಅಂಗೈತುದಿಗೆ ನಿಲುಕುವ ಪ್ರಪಂಚ ಎಷ್ಟು ಸುರಕ್ಷಿತ ಎಂದು ಕೇಳಿದರೆ, … Read more

ಜಾಣಸುದ್ದಿ 6: ಕೊಳ್ಳೇಗಾಲ ಶರ್ಮ

ಈ ವಾರದ ಸಂಚಿಕೆಯಲ್ಲಿ ಕೊಳ್ಳೇಗಾಲ ಶರ್ಮರವರ ಧ್ವನಿಯಲ್ಲಿರುವ ಈ ಆಡೀಯೊ ಕೇಳಲು ಈ ಕೆಳಗಿನ ಕೊಂಡಿಯ ಮೇಲೆ ಕ್ಲಿಕ್ಕಿಸಿ. ಈ ಧ್ವನಿಮುದ್ರಿಕೆಯನ್ನು ಡೌನ್ ಲೋಡ್ ಮಾಡಿಕೊಳ್ಳಲು ಜಾಣ ಸುದ್ದಿ ಧ್ವನಿಮುದ್ರಿಕೆ ಲಿಂಕ್ ನ ಮೇಲೆ ಕ್ಲಿಕ್ ಮಾಡಿ ನಂತರ save as/ download ಆಪ್ಷನ್ ನಿಂದ ನಿಮ್ಮ ಮೊಬೈಲ್/ ಕಂಪ್ಯೂಟರ್ ಗೆ ಡೌನ್ ಲೋಡ್ ಮಾಡಿಕೊಳ್ಳಿ… ಇ ಮೇಲ್ ನಲ್ಲಿ ಅಥವಾ ವಾಟ್ಸ್ ಅಪ್ ನಲ್ಲಿ ಈ ಧ್ವನಿಮುದ್ರಿಕೆ ನಿಮಗೆ ಬೇಕು ಎಂದನಿಸಿದರೆ ನಿಮ್ಮ ಕೋರಿಕೆಯನ್ನು ನಮ್ಮ ಇ … Read more

ಪ್ರಕೃತಿಯ ಹಾಡು: ಧನು ಮಲ್ಪೆ

ನೀವು ಎಂದಾದರೂ ಪ್ರಕೃತಿಯ ಸಂಗೀತ ಕೇಳಿದ್ದೀರಾ. . ? ಪಾಪ್ ಗೊತ್ತು ರಾಕ್‌ ಗೊತ್ತು ಇದ್ಯಾವುದಪ್ಪಾ ಹೊಸ ಪ್ರಕಾರದ ಸಂಗೀತ ಅಂತೀರಾ? ಹಾಗಾದರೆ ಇಲ್ಲಿ ಕೇಳಿ. ಪ್ರಕೃತಿಯ ಪ್ರತಿಯೊಂದು ಶಬ್ಧವೂ ಮಧುರ ಸಂಗೀತವೆ. ಆದರೆ ಸಿಟಿಯಲ್ಲಿ ಇರುವವರಿಗೆ ಆಟೋರಿಕ್ಷಾ ಬಸ್ಸುಗಳ ಇಂಜಿನ್ ಶಬ್ಧ, ಕರ್ಕಶ ಹಾರ್ನ್ ಬಿಟ್ಟು ಬೇರೆ ಶಬ್ದ ಮರೆತೇ ಹೋಗಿರಬಹುದು. ಪ್ರಕೃತಿಯ ಹಾಡು ಕೇಳಬೇಕಿದ್ದರೆ ನೀವು ಮಾನವ ನಿರ್ಮಿತ ಕೃತಕ ಶಬ್ಧಗಳೇ ಇಲ್ಲದ ದೊಡ್ಡ ಪರ್ವತವನ್ನೇರಬೇಕು ಅಥವಾ ಬಿಸಿಲೇ ನೆಲ ತಾಗದ ದಟ್ಟ ಅರಣ್ಯವನ್ನು … Read more

ಬಾನಂಗಳದಲೊಮ್ಮೆ….: ಅನುರಾಧ ಪಿ. ಸಾಮಗ

ಚಂದ್ರನಿಗೆ ರೋಹಿಣಿಯೂ, ಉಳಿದ ಇಪ್ಪತ್ತಾರು ಪತ್ನಿಯರೂ, ಸುತ್ತಮುತ್ತ ರಾರಾಜಿಸುವ ಇನ್ನುಳಿದ ತಾರೆಯರೂ, ಜಲದ ನೈದಿಲೆಯೂ, ಮರದ ಆಕಾಶಮಲ್ಲಿಗೆಯೂ ಎಲ್ಲರೂ ಒಂದಲ್ಲ ಒಂದು ರೀತಿಯಲ್ಲಿ ಪ್ರೀತ್ಯರ್ಹರೇ. ಅಲ್ಲದೆ ಅವನು ಅವರೊಬ್ಬೊಬ್ಬರ ಜೊತೆಗೂ ಹೆಣೆದುಕೊಂಡ ಅನುಬಂಧದ ಪರಿಗೆ ಸರಿಯಾಗಿ ಒಬ್ಬೊಬ್ಬರೂ ಅವರವರದೇ ರೀತಿಯಲ್ಲಿ ಅವನ ಸಂತೋಷವನ್ನು ಪರಿಪೂರ್ಣವಾಗಿಸುತಿದ್ದರು. ಅವರಲ್ಲೊಬ್ಬರ ಕೊಡುಗೆಯ ವಿನಃವೂ ಅವನ ಸಂತೋಷ ಅಪರಿಪೂರ್ಣ. ಮತ್ತಾಗ ಚಂದ್ರ ಹುಣ್ಣಿಮೆ ಬಂದರೂ ತನ್ನ ತಾನು ಪೂರ್ಣವಾಗಿ ಕಂಡುಕೊಳ್ಳಲಾರ. ಇದು ಅವನ ಬಲಹೀನತೆಯೆಂದರೂ ಸರಿಯೇ, ಮತ್ತೆ ಮತ್ತೆ ಅಳಿಯುತ್ತ ಬೆಳೆಯುತ್ತ ಅದೆಷ್ಟೋ … Read more

ವೆಂಕಜ್ಜ: ಗಿರಿಜಾ ಜ್ಞಾನಸುಂದರ್

ಬೆಳಗಿನ ಸೂರ್ಯನ ಕಿರಣ ಕಣ್ಣಿಗೆ ಚುಚ್ಚುತ್ತಿದ್ದು,   ವೆಂಕಜ್ಜನ ಕಣ್ಣು ಭಾರವಾಗಿದ್ದರೂ ನಿಧಾನವಾಗಿ ತೆಗೆಯುತ್ತಿದ್ದ. ದೇವಸ್ಥಾನದ ಒಂದು ಮೂಲೆಯಲ್ಲಿ ಮಲಗುವ ವೆಂಕಜ್ಜ ಯಾವಾಗಲು ಚುರುಕು. ಅಷ್ಟೊಂದು ನಿಧಾನವಾಗಿ ಎದ್ದವನೇ ಅಲ್ಲ. ಇಂದೇಕೋ ಅವನ ಮನಸ್ಸು ಎಂದಿನಂತೆ ಇರಲಿಲ್ಲ. ವಸುಧಾಳ ನೆನಪು ಬಹಳವಾಗಿ ಕಾಡುತ್ತಿತ್ತು. ಅವಳು ತನ್ನನ್ನು ಎಬ್ಬಿಸುತ್ತಿದ್ದ ರೀತಿ,   ಮುದ್ದು ಮಾಡುತ್ತಾ ಕಚಗುಳಿ ಇಡುತ್ತಿದ್ದ ನೆನಪು. ವೆಂಕಜ್ಜನ ಜೀವನದಲ್ಲಿ ವಸುಧಾ ಅವನ ಬಾಳ ಸಂಗಾತಿಗಿಂತ ಹೆಚ್ಚಾಗಿದ್ದಳು. ಅವನೆಲ್ಲ ಜವಾಬ್ದಾರಿಯನ್ನು ವಹಿಸಿಕೊಂಡಿದ್ದಳು. ಚಿಕ್ಕವಯಸ್ಸಿನಲ್ಲಿ ತಂದೆ ತಾಯಿಯನ್ನು ಕಳೆದುಕೊಂಡಿದ್ದ ಅವನಿಗೆ ತನ್ನೆಲ್ಲ … Read more

ಆರೋಗ್ಯಕ್ಕಾಗಿ ಮರಳಬೇಕಿದೆ ಹಿಂದಿನ ಬದುಕಿಗೆ!: ಕೆ ಟಿ ಸೋಮಶೇಖರ ಹೊಳಲ್ಕೆರೆ

ಕಾಲಚಕ್ರ ಉರುಳುತ್ತನೇ ಇರುತ್ತದೆ. ಉರುಳುವಾಗ ಚಕ್ರದ ಭಾಗ ಹಿಂದಿನದು ಮುಂದಕ್ಕೆ, ಮುಂದಿನದು ಹಿಂದಕ್ಕೆ ಬರುವುದು ಸಹಜ! ಇತಿಹಾಸ ಸಹ ಪುನರಾವರ್ತನೆಯಾಗುತ್ತದೆ ಎನ್ನುತ್ತಾರೆ. ಹಾಗೇ ಮಾನವನ ಬದುಕಿನ ರೀತಿ ಸಹ ಪುನರಾವರ್ತನೆಯಾಗಬೇಕಿದೆ! ನಾವು ನಾಗರೀಕರು ತುಂಬಾ ಮುಂದುವರಿದವರು ಎಂಬುದು ನಾವು ಬಹಳ ಹಿಂದುಳಿದವರೆಂಬ ಧ್ವನಿಯನ್ನು ಒಳಗೊಂಡಿದೆಯಲ್ಲವೆ? ನಮಗೆ ಅನುಕೂಲವಾಗಲೆಂದು, ಸುಲಭವಾಗಿ ಬದುಕಬೇಕೆಂದು ಕಷ್ಟಕರ ಬದುಕನ್ನು ತೊರೆದು ಸುಲಭವಾಗಿ ಬದುಕಲು ಪ್ರಯತ್ನಿಸುವಾಗ ಹಿಂದಿನದಕ್ಕೆ ತಿಲಾಂಜಲಿ ಇತ್ತು ಹೊಸದನ್ನು ಬಿಗಿದಪ್ಪಿಕೊಂಡು ಜೀವಿಸುತ್ತಿದ್ದೇವೆ. ಅದರ ದುಷ್ಪರಿಣಾಮಗಳು ಈಗ ಅರಿತದ್ದರಿಂದ ಹಿಂದಿನ ಜೀವನದ ರೀತಿಯ … Read more

ಹೃದಯಗಳ ಮಿಲನಮಹೋತ್ಸವವೆಂಬುದು: ಸಿದ್ದುಯಾದವ್ ಚಿರಿಬಿ

ಮೈ ಡಿಯರ್ ಸ್ವೀಟ್ ಸವಿ…, ಈ ನವಿರು ಮುಂಜಾವಿಗೆ ನಿನ್ನ ನೆನಪುಗಳಿಂದಲೆ ನೇಯ್ದ ಪ್ರೇಮದ ಬೆಡ್ ಶೀಟ್ ಹೊದ್ದು ಮಲಗಿದ್ದೇನೆ ಸಖಿ. ಸಿಹಿ ಕನಸುಗಳು ನೆನಪಿನ ಪುಟಗಳು ಒಂದೊಂದಾಗಿ ತೆರೆದುಕೊಳ್ಳುತ್ತವೆ. ಆ ನೆನಪಿನ ಪುಟಗಳ ಸಾಲು ಸಾಲು ಅಕ್ಷರಗಳ ಬೀದಿಯಲಿ ಅಲೆದಂತೆ ಅಲ್ಲೆಲ್ಲೊ ನಿನ್ನ ನಗುವಿನ ವೀಣಾ ಲಹರಿ ತೇಲಿದರೆ, ಮತ್ತೆಲ್ಲೋ ನಿನ್ನ ನುಣುಪು ಪಾದಗಳ ಕಾಲ್ಗೆಜ್ಜೆಯ ಝೇಂಕಾರ ಧುಮ್ಮಿಕ್ಕುವುದು, ಕಿವಿಯ ಬಳಿ ಬಂದು ಪ್ರಿಯ ಎಂದು ನೀ ಉಸುರಿದಂತೆ, ಕೈ ಬಳೆಗಳ ಸರಿಗಮ ಚೆಲ್ಲಿದಂತೆ, ಮತ್ತೆಲ್ಲೊ … Read more

ವೃದ್ಧಾಪ್ಯ: ವೈ. ಬಿ. ಕಡಕೋಳ

ವೃದ್ಧಾಪ್ಯ ಮನುಷ್ಯನ ನಾಲ್ಕು ವಿಧದ ಅವಸ್ಥೆಗಳಲ್ಲಿ ಒಂದು. ಬಾಲ್ಯ, ಯೌವನ. ಗೃಹಸ್ಥ, ನಂತರ ಬರುವುದು ವೃದ್ಧಾಪ್ಯ. ಜೀವಿಯ ದೇಹವು ಬೆಳವಣಿಗೆಯ ಕೊನೆಯ ಹಂತದಲ್ಲಿರುವಾಗ ಬರುವ ಈ ವೃದ್ಧಾಪ್ಯ ಬದುಕಿನಲ್ಲಿ ಕೆಲವು ಕುಟುಂಬಗಳಲ್ಲಿ ಸಂತಸವನ್ನು ತಂದರೆ ಇನ್ನು ಕೆಲವು ಕುಟುಂಬಗಳಲ್ಲಿ ದುಃಖದ ಛಾಯೆಯನ್ನು ನೀಡುವ ಬದುಕಿನ ಕೊನೆಯ ಘಟ್ಟದ ಗಳಿಗೆಯನ್ನು ತಂದೊಡ್ಡುತ್ತಿದೆ. ನಾವು ಇತಿಹಾಸದಲ್ಲಿ ಶ್ರವಣಕುಮಾರನ ಕಥೆಯನ್ನು ಕೇಳುತ್ತೇವೆ. ಹಾಗೂ ಒದುತ್ತೇವೆ. ತನ್ನ ವೃದ್ದ ತಂದೆ-ತಾಯಿಯನ್ನು ಬುಟ್ಟಿಯಲ್ಲಿ ಕುಳ್ಳಿರಿಸಿ ತೀರ್ಥಯಾತ್ರೆ ಮಾಡಿಸಿದ್ದನ್ನು ಮತ್ತೊಬ್ಬರಿಗೆ ಆದರ್ಶಪ್ರಾಯವೆಂಬ ಉದಾಹರಣೆ ಕೊಡುತ್ತೇವಲ್ಲವೇ, ? … Read more

ನಿರಂತರ ಪರಿಶ್ರಮದಿಂದ “ಯಶಸ್ಸು”ಗಳಿಸಲು ಸಾಧ್ಯ: ವೇದಾವತಿ ಹೆಚ್. ಎಸ್.

ಪ್ರಪಂಚದಲ್ಲಿ “ಯಶಸ್ಸು”ಎಂಬುದು ಯಾರಿಂದಲೂ ಎರವಲಾಗಿ ಪಡೆಯಲು ಸಾಧ್ಯವಿಲ್ಲ. ನಾವೇ ಕಷ್ಟಪಟ್ಟು ಗುರಿಯನ್ನು ಮುಟ್ಟಿದರೆ ಮಾತ್ರ “ಯಶಸ್ಸು”ನಮ್ಮ ಪಾಲಿಗೆ ಒಲಿಯುತ್ತದೆ. ಮನುಷ್ಯನ ಜೀವನದಲ್ಲಿ ಹಣ, ಕಾರು, ಬಂಗಲೆ, ಅಥವಾ ಬೇರೆಯವರಿಗೆ ಆಫೀಸ್ನಲ್ಲಿ ಕೆಲಸವನ್ನೂ ಕೊಡಿಸಬಹುದು! ಅದರ ಮುಂದಿನ ಗುರಿ, ಜೀವನದಲ್ಲಿ ಸಾಧನೆ ರೂಪದಲ್ಲಿ ಮೆಟ್ಟಿಲು ಏರುವುದೇ “ಯಶಸ್ಸು”. ಯಶಸ್ಸು ಎಂಬುದು ಎಲ್ಲಾ ವಸ್ತುಗಳು ಸಿಗುವಷ್ಟು ಸುಲಭವಾಗಿ ಯಾರಿಗೂ ದೊರಕುವುದಿಲ್ಲ. ಅದನ್ನು ಜಾಣತನದಿಂದ ಸಂಪಾದಿಸಲು ಕಲಿಯಬೇಕು. ಹೊಂಡಾ’ಕಂಪನಿಯ ಹೆಸರನ್ನು ಯಾರು ತಾನೇ ಕೇಳಿಲ್ಲ? ಹೊಂಡಾ ಒಬ್ಬ ಸರಳ ಸ್ವಭಾವದ ವ್ಯಕ್ತಿಯಾಗಿದ್ದ. … Read more

ಸ್ಥಾನಮಾನ ಮತ್ತು ಸ್ತ್ರೀ ಸಾಮರ್ಥ್ಯ: ನಾಗರೇಖಾ ಗಾಂವಕರ

ಶ್ರೇಷ್ಟ ತತ್ವಜ್ಞಾನಿ ಕಾರ್ಲಮಾರ್ಕ್ಸ್ ಹೇಳುತ್ತಾನೆ “ಸ್ತ್ರೀಯರ ವಿಮೋಚನೆ ಹಾಗೂ ಎಲ್ಲಿಯರವರೆಗೆ ಸಮಾಜದಲ್ಲಿ ಮಹಿಳೆ ಕ್ರ್ರಿಯಾತ್ಮಕ ಮತ್ತು ಆರ್ಥಿಕ ಮೌಲ್ಯಗಳ ಸಾಮಾಜಿಕ ಚಟುವಟಿಕೆಗಳಲ್ಲಿ ಸಕ್ರಿಯವಾಗಿ ಭಾಗವಹಿಸಲು ಅವಕಾಶ ಪಡೆಯದೇ, ಅವರ ಚಟುವಟಿಕೆಗಳು ಬರೀಯ ಮನೆಗೆಲಸಗಳಿಗೆ ಸೀಮಿತವಾಗಿ ಉಳಿಯುತ್ತವೆಯೋ, ಅಲ್ಲಿಯವರೆಗೆ ಮಹಿಳೆಯರ ಉದ್ದಾರ ಸಾಧ್ಯವಿಲ್ಲ. ಆಕೆ ಪುರುಷನಿಗೆ ಸಮಾನ ಅವಕಾಶ ಸ್ಥಾನಮಾನಗಳನ್ನು ಪಡೆಯುವುದು ದುಸ್ಸಾಧ್ಯ. ”  ಎನ್ನುತ್ತಾರೆ.  ದ್ವಿತೀಯ ಲಿಂಗಿಯಾಗಿಯೇ ಪರಿಗಣಿಸಲ್ಪಡುವ ಸ್ತ್ರೀಗೆ ಪುರುಷನಿಗೆ ಇರುವ ಸ್ಥಾನಮಾನ ಇಲ್ಲದಿರುವುದಕ್ಕೆ ಕಾರಣ ತಾರತಮ್ಯ ನೀತಿ. ಆಕೆಯ ಸಾಮರ್ಥ್ಯದ ಬಗ್ಗೆ  ಸೃಷ್ಟಿಸಿದ ತಪ್ಪು … Read more

ಪಂಜು ಕಾವ್ಯಧಾರೆ

ಅಪ್ಪ ಅಪ್ಪಾ ಅದೊಂದು ದಿನ ನೀ ಹೇಳಿದೆ ಕಣ್ಣುಗಳನ್ನು ಪಿಳ  ಪಿಳನೆ ಬಿಟ್ಟು ನಿನ್ನನ್ನೇ  ನೋಡುತ್ತಿದ್ದಾ ಈ ಪುಟ್ಟ ಜೀವಕ್ಕೆ, ಮಗಳೇ  ನೀ ನನ್ನ ಮಾತ ನಡೆಸುವೆಯ? ನಿನ್ನ ಬದುಕಿನ  ಪರಪಂಚದಲ್ಲಿ ಕಾಣಿಸುತ್ತಿದ್ದ ಆ ನಿನ್ನ ಆಚಾರಗಳು, ವಿಚಾರಗಳು, ಮಮತೆಯದನಿಯಾಳಗಳು… ಹೀಗೆ.. ನಿನ್ನಪರೂಪದ  ಸಂಗತಿಗಳ ಅರ್ಥೈಸಲಾಗದೆ, ನಿನ್ನೊಲುಮೆಯ ಪ್ರೀತಿಸಾಗರದಲಿ ಮಿಂದೇಳುತ್ತಿದ್ದ ನನಗೆ ನೀನೇ ವಿಸ್ಮಯ ಬೇರೊಂದ ಬಯಸದೆ  ನಾ ಉಲಿದೆ ನೀ ಹೇಳುವ ಮಾತನ್ನೊಂದನ್ನೂ ನಾ ತೆಗೆಯಲಾರೆ. ಅಪ್ಪಾ ನನ್ನಿಂದ ನೀ ದೂರಾದ  ಇಷ್ಟು ವರುಷಗಳೂ ನಡೆದೇ … Read more

ಜಾಣಸುದ್ದಿ 5: ಕೊಳ್ಳೇಗಾಲ ಶರ್ಮ

  ಈ ವಾರದ ಸಂಚಿಕೆಯಲ್ಲಿ ಕೊಳ್ಳೇಗಾಲ ಶರ್ಮರವರ ಧ್ವನಿಯಲ್ಲಿರುವ ಈ ಆಡೀಯೊ ಕೇಳಲು ಈ ಕೆಳಗಿನ ಕೊಂಡಿಯ ಮೇಲೆ ಕ್ಲಿಕ್ಕಿಸಿ. ಈ ಧ್ವನಿಮುದ್ರಿಕೆಯನ್ನು ಡೌನ್ ಲೋಡ್ ಮಾಡಿಕೊಳ್ಳಲು ಜಾಣ ಸುದ್ದಿ ಧ್ವನಿಮುದ್ರಿಕೆ ಲಿಂಕ್ ನ ಮೇಲೆ ಕ್ಲಿಕ್ ಮಾಡಿ ನಂತರ save as/ download ಆಪ್ಷನ್ ನಿಂದ ನಿಮ್ಮ ಮೊಬೈಲ್/ ಕಂಪ್ಯೂಟರ್ ಗೆ ಡೌನ್ ಲೋಡ್ ಮಾಡಿಕೊಳ್ಳಿ… ಇ ಮೇಲ್ ನಲ್ಲಿ ಅಥವಾ ವಾಟ್ಸ್ ಅಪ್ ನಲ್ಲಿ ಈ ಧ್ವನಿಮುದ್ರಿಕೆ ನಿಮಗೆ ಬೇಕು ಎಂದನಿಸಿದರೆ ನಿಮ್ಮ ಕೋರಿಕೆಯನ್ನು … Read more

ಕುವೆಂಪು ಮತ್ತು ಕನ್ನಡ: ದೊರೇಶ್

 ಡಿಸೆಂಬರ್ 29 ಕುವೆಂಪು ಅವರ ಹುಟ್ಟುಹಬ್ಬವನ್ನು ನಾವು ಆಚರಿಸುತ್ತಿದ್ದೇವೆ. ಆದಿಕವಿ ಪಂಪನಿಂದ ಸಶಕ್ತ ಕಾವ್ಯ ಮಾರ್ಗವನ್ನು ಕಂಡುಕೊಂಡ ಕನ್ನಡ ಸಾಹಿತ್ಯವು ಅಗಾಧವಾಗಿ ಬೆಳೆದಿರುವುದಷ್ಟೇ ಅಲ್ಲದೆ ಅನುಪಮ ಕೊಡುಗೆಯನ್ನು ವಿಶ್ವ ಸಾಹಿತ್ಯಕ್ಕೆ ನೀಡಿದೆ. ಈ ಕನ್ನಡದ ಸಾಹಿತ್ಯ ನದಿಯು ತನ್ನ ಸುದೀರ್ಘ ಪಯಣದಲ್ಲಿ ಆಚೀಚೆಯಿಂದ ಜಲದ್ರವ್ಯಗಳನ್ನು ಪಡೆದು ಮುಂದೆ ಸಾಗಿ ಸಾಗರವಾಗಿ ರೂಪುಗೊಂಡಿತು. ಆ ಸಾಗರದಲ್ಲಿ ಮುತ್ತುರತ್ನಗಳು ನಿರ್ಮಾಣವಾದವು. ಅದರಲ್ಲೊಂದು ಅದ್ಭುತ ಮುತ್ತು ಕುವೆಂಪು.ಅವರ ಸಾಧನೆಯ ಪ್ರತಿಯೊಂದು ಹೆಜ್ಜೆಯಲ್ಲೂ ಕನ್ನಡ ಸಂಸ್ಕೃತಿಯ ದರ್ಶನವಾಗುತ್ತದೆ. ಕುವೆಂಪು ಅವರಷ್ಟು ಕನ್ನಡದ ಪರವಾಗಿ … Read more

ಹೊಸ ವರುಷದೊಂದಿಗೆ ಬೆಸೆಯಲಿ ಸ್ನೇಹ- ಸಂಬಂಧಗಳು: ವೇದಾವತಿ ಹೆಚ್. ಎಸ್.

ಮನುಷ್ಯನ ಜೀವನ ಎಷ್ಟೊಂದು ವಿಚಿತ್ರ. ಬೇಕು ಬೇಕು ಎನ್ನುತ್ತಾ ಸಾಗುವಾಗ ವಯಸ್ಸಿನ ಅರಿವು ಮರೆತು ಹೋಗುತ್ತದೆ. ಹೊಸ ವರ್ಷದ ಸಂತೋಷ ಒಂದು ಕಡೆ ಇದ್ದರೆ, ಈ ಹಿಂದಿನ ವರುಷಗಳು ಹೇಗೆ ಕಳೆದು ಹೋದವು ಎಂಬುದು ಮೆಲುಕು ಹಾಕುವುದು ಮರೆತಿರುತ್ತಾನೆ. ನಾಗಾಲೋಟದಲ್ಲಿ ಸಾಗುತ್ತಿರುವ ಜೀವನ ಯಾವಾಗಲೂ ನಾಳೆಯದನ್ನೇ ಯೋಚಿಸಿ ಜೀವನದಲ್ಲಿ ತನಗಾಗಿ ಬರುವಂತಹ ಇಂದಿನ ದಿನದ  ಸಂತೋಷವನ್ನು ಕಳೆದು ಕೊಳ್ಳುತ್ತಾನೆ. ಹಿಂದಿನ ಕಾಲದಲ್ಲಿ ಹಬ್ಬಗಳಲ್ಲಿ ಹೊಸ ವರ್ಷಗಳ ಆಚರಣೆಯನ್ನು ಮಾಡುವ ಸಂಪ್ರದಾಯವಿತ್ತು. ಮನೆಯವರೆಲ್ಲ ಒಂದೆಡೆ ಸೇರಿ ಸಂಭ್ರಮಿಸುತ್ತಿದ್ದ ದಿನಗಳವು. … Read more

ಕುಪ್ಪಳ್ಳಿಯ ಕವಿಶೈಲದ ಮರೆಯಲಾಗದ ನೆನಪುಗಳು: ವೈ.ಬಿ.ಕಡಕೋಳ

ಹತ್ತು ವರ್ಷಗಳ ಹಿಂದಿನ ನೆನಪು (2007) ಕುವೆಂಪುರ ಮನೆಯಲ್ಲಿ ಐದು ದಿನಗಳ ಕಾಲ ಸಂಶೋಧನ ವಿದ್ಯಾರ್ಥಿಗಳಿಗೆ ಕಮ್ಮಟವನ್ನು ಅನಿಕೇತನ ಕಟ್ಟಡದಲ್ಲಿ ಹಮ್ಮಿಕೊಳ್ಳಲಾಗಿತ್ತು. ಐದು ದಿನಗಳು ಕಮ್ಮಟದ ಜೊತೆಗೆ ಕವಿಮನೆಯನ್ನು ನೋಡುತ್ತ ಅಲ್ಲಿನ ವಾತಾವರಣದ ಜೊತೆಗೆ ಕುವೆಂಪುರವರ ಬದುಕಿನ ಘಟ್ಟಗಳ ಹಾಗೂ ಅವರ ಕೃತಿಗಳ ಓದು ನನಗೆ ಹಿಡಿಸಿತ್ತು. ಆ ಐದು ದಿನಗಳ ಅವಧಿಯ ನಂತರ ಆ ಸ್ಥಳ ಪರಿಸರ ಬಿಟ್ಟು ಬರುವಾಗ ಕವಿಸ್ಮøತಿಯನ್ನು ಮನದಲ್ಲಿ ಹೊತ್ತು ಹೊರಬರಬೇಕಾಯಿತು.ಆ ದಿನ ಅವರ ಹುಟ್ಟು ಹಬ್ಬದ ಸಡಗರ ಎಲ್ಲ ಶಿಬಿರಾರ್ಥಿಗಳೊಡನೆ … Read more

ಸ್ತ್ರೀ ಸಾಮರ್ಥ್ಯ ಮತ್ತು ಅವಕಾಶಗಳು: ನಾಗರೇಖಾ ಗಾಂವಕರ

ಡಾ. ಸೌಮ್ಯ ಸ್ವಾಮಿನಾಥನ್ ವಿಶ್ವ ಆರೋಗ್ಯ ಸಂಸ್ಥೆಯ ಭಾರತದ ಪ್ರತಿನಿಧಿಯಾಗಿ ಈ ತಿಂಗಳ ಮೊದಲ ವಾರವಷ್ಟೇ ಆಯ್ಕೆಯಾಗಿದ್ದಾರೆ. ಭಾರತದ ಮಟ್ಟಿಗೆ ಪ್ರಪ್ರಥಮ ಬಾರಿಗೆ ಒಬ್ಬ ಮಹಿಳೆ ಆಯ್ಕೆಯಾಗಿರುವುದು ಸ್ತ್ರೀ ಸಮಾಜ ಹೆಮ್ಮೆ ಪಡುವಂತಹ ಸಂಗತಿ. ಮಹಿಳೆಗೆ ಅಸಾಧ್ಯವೆನ್ನುವಂತಹ  ಜವಾಬ್ದಾರಿ ಯಾವುದು ಇಲ್ಲ ಎಂಬುದಕ್ಕೆ  ಸಾಕ್ಷಿಯಾಗುತ್ತಿದ್ದಾರೆ. ಸ್ತ್ರೀ ಜಾಗತಿಕ ರಂಗದಲ್ಲಿ ಪುರುಷನಿಗೆ ಸಮಾನವಾಗಿ ಮಿಂಚುವ ಯಾವ ಸಾಮಥ್ರ್ಯದಲ್ಲೂ ಕಡಿಮೆಯಿಲ್ಲ. ಹಾಗಾಗಿ ಮಹಿಳೆ ಮತ್ತು ಮಹಿಳಾ ಜಗತ್ತು ಇಂದು ವ್ಯಾಪಕ ಅರ್ಥ ಹಾಗೂ ವಿಸ್ತಾರವನ್ನು ಪಡೆದುಕೊಳ್ಳುತ್ತಿದೆ. ಜಾಗತಿಕ ಸಮೀಕ್ಷೆಯ ಪ್ರಕಾರ … Read more

ದೇವಾಲಯ, ದೇವರ .. ಸರಳವಾಗಿ ಅರ್ಥೈಸಿದ ವಚನಕಾರರು!: ಕೆ ಟಿ ಸೋಮಶೇಖರ ಹೊಳಲ್ಕೆರೆ

ಇಂದು ಹಣ, ಅಧಿಕಾರ, ಆಸ್ಥಿ, ವಸ್ತು, ಒಡವೆ, ವಾಹನಗಳು ಇದ್ದವರಿಗೆ ಜನ ಹೆಚ್ಚು ಗೌರವ ಕೊಡುತ್ತಿದ್ದಾರೆ. ಮಾನ, ಮನ್ನಣೆ ನೀಡುತ್ತಿದ್ದಾರೆ. ಪ್ರಯುಕ್ತ ಜನ ಅದನ್ನು ಗಳಿಸಲು ಶತಾಯ ಗತಾಯ ಶ್ರಮಿಸುತ್ತಿದ್ದಾರೆ. ಇವರು ಗಳಿಸುವ ಏಕಮೇವ ಉದ್ದೇಶ ಹೊಂದಿ ಶೀಘ್ರವಾಗಿ ಸಂಪತ್ತು ಗಳಿಸಲು ಇರುವ ಮಾರ್ಗಗಳು ಯಾವು ಎಂದು ಹುಡುಕುತ್ತಿದ್ದಾರೆಯೇ ವಿನಾ ಒಳ್ಳೆಯ, ನೀತಿಯುತ ಮಾರ್ಗ ಯಾವುದು ಎಂದು ಹುಡುಕುತ್ತಿಲ್ಲ! ಗಳಿಸುವುದು ಮುಖ್ಯ ವಿನಾ ಮಾರ್ಗ ಮುಖ್ಯವಲ್ಲ! ಎಂದು ಭಾವಿಸಿದುದರಿಂದ ಅನ್ಯ ಮಾರ್ಗದಿಂದ ದುಡಿಯುವಂತಾಗಿದೆ. ಧರ್ಮ, ಅರ್ಥ, ಕಾಮ, … Read more

ಮಾತೋಶ್ರೀ ಗೌರಮ್ಮ ಸಾಹಿತ್ಯ ಪ್ರಶಸ್ತಿಗಾಗಿ ಕೃತಿಗಳ ಆಹ್ವಾನ

ಮಾತೋಶ್ರೀ ಗೌರಮ್ಮ ಸಾಹಿತ್ಯ ಪ್ರತಿಷ್ಠಾನವು 2016-17ರಲ್ಲಿ ಪ್ರಕಟವಾದ ಕಥೆ,ಕಾದಂಬರಿ,ಕವನ ಸಂಕಲನ,ವಿಮರ್ಶೆ ಮತ್ತು ಅನುವಾದ ಸಾಹಿತ್ಯ ಕೃತಿಗಳಿಗೆ ಪ್ರಶಸ್ತಿ ನೀಡಲು ಆಹ್ವಾನಿಸಿದೆ. ಕನ್ನಡದ ಕೃತಿಗಳನ್ನು ಪ್ರಶಸ್ತಿಗೆ ಪರಿಗಣಿಸಲಾಗುವುದು. ಸಾಹಿತ್ಯದ ಎರಡು ಪ್ರಕಾರದ ಉತ್ತಮ ಕೃತಿಗಳಿಗೆ ಈ ಪ್ರಶಸ್ತಿ ನೀಡಲು ಪ್ರತಿಷ್ಠಾನ ನಿರ್ಧರಿಸಿದೆ.  2500 ನಗದು ಮತ್ತು ಫಲಕವನ್ನು ಒಳಗೊಂಡಿರುವುದೆಂದು ಪ್ರತಿಷ್ಠಾನದ ಅಧ್ಯಕ್ಷರು ಶ್ರೀ ಭೀಮಣ್ಣ ಭಂಗಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.ಲೇಖಕರು ಕೃತಿಗಳನ್ನು 28 ಜನವರಿ 2018ರ ಒಳಗಾಗಿ ಈ ವಿಳಾಸಕ್ಕೆ ಕಳಿಸಬಹುದು. ತಿರುಪತಿ ಭಂಗಿ  ಕಾರ್ಯದರ್ಶಿಗಳು “ಮಾತೋಶ್ರೀ ಗೌರಮ್ಮ ಸಾಹಿತ್ಯ … Read more