ಬದಲಾಗಿದೆ ಭಾರತದ ಬೌಲಿಂಗ್ ಹವಾಮಾನ!: ವಿನಾಯಕ‌ ಅರಳಸುರಳಿ,

ಮೊನ್ನೆ ಮಂಗಳವಾರ ಭಾರತ ಹಾಗೂ ಇಂಗ್ಲೆಂಡ್ ಗಳ ನಡುವೆ ಮ್ಯಾಚ್ ಇರುವುದು ಗೊತ್ತಿರಲಿಲ್ಲ. ಗೊತ್ತಾಗಿ ನೋಡುವಷ್ಟರಲ್ಲಿ ಪ್ರಸಿದ್ ಕೃಷ್ಣ ಎನ್ನುವ ಹೊಸ ಬೌಲರ್ ಪಾದಾರ್ಪಣೆ ಮಾಡಿ, ಅವರಿಗೆ ಆಂಗ್ಲರು ಮೂರು ಓವರ್ ಗೆ ಮೊವ್ವತ್ತೇಳು ರನ್ ಚಚ್ಚಿರುವುದು ಕಾಣಿಸಿತು. ಏನು ನಡೆಯುತ್ತಿದೆ ಇಲ್ಲಿ? ವರ್ಲ್ಡ್ ಕಪ್ ಗೆ ಕೆಲವೇ ತಿಂಗಳು ಇರುವಾಗ ಹೀಗೇಕೆ ಹೊಸ ಹೊಸ ಪ್ರಯೋಗ ಮಾಡ್ತಿದ್ದಾರೆ? ಇರುವವರಿಗೇ ಮತ್ತಷ್ಟು ಆಡುವ ಅವಕಾಶ ಕೊಟ್ಟು ಇಂತಿಂತವನು ಇಂತಿಂತಲ್ಲಿ ಎಂದು ಫಿಕ್ಸ್ ಮಾಡಬಾರದಾ ಎಂದುಕೊಳ್ಳುವಷ್ಟರಲ್ಲಿ ಅದೇ ಪ್ರಸಿದ್ … Read more

ಮಾತೆಂಬ ಜ್ಯೋತಿ ಮನವ ಬೆಳಗಲಿ: ಸುಂದರಿ ಡಿ.

ಜೀವಜಗತ್ತು ಹಲವು ವಿಸ್ಮಯಗಳ ಆಗರ. ಇಲ್ಲಿ ನಾವು ಕಂಡು ಅಚ್ಚರಿಯಿಂದ ಹುಬ್ಬೇರಿಸಿದ ಹಲವು ಸಂಗತಿಗಳು ನಮ್ಮ ಅರಿವಿಗೆ ಬಾರದೆಯೂ ಇರಬಹುದು. ನಮ್ಮ ಅರಿವಿಗೆ ಬಂದರೆ ಕುತ್ತಾಗಬಹುದೆಂಬ ಭಯಕ್ಕೆ ಜೀವಜಗತ್ತು ಹೊಸ ಪಾಠವನ್ನೇ ಈ ವೇಳೆಗೆ ಕಲಿತಿರಲೂಬಹುದು ಅಥವಾ ಅದೆಷ್ಟೋ ವಿಸ್ಮಯಗಳನು ಅರಿವಾಗುವ ಮೊದಲೇ ನಾವು ನಮ್ಮ ಪಾಪಕೂಪಗಳಿಂದ ಇಲ್ಲವಾಗಿಸಿರಲೂಬಹುದು. ಅದೇನೇ ಇರಲಿ ಮನುಷ್ಯ ತನ್ನ ಅರಿವಿಗನುಗುಣವಾಗಿ ಮತ್ತು ವಾಸಪ್ರಪಂಚದ ಕೆಲವು ವಿಸ್ಮಯಗಳನ್ನಷ್ಟೇ ಅರಿತಿರಲು ಸಾಧ್ಯ. ಏಕೆಂದರೆ ಆ ಪ್ರಮಾಣದ ವಿಸ್ಮಯಗಳ ಹೊದ್ದು ನಿಂತಿದೇ ಈ ಜಗತ್ತು. ಕವಿಗಳ … Read more

ನೋವು ಸಾವಾಗದಿರಲಿ..: ಪೂಜಾ ಗುಜರನ್. ಮಂಗಳೂರು

ಬದುಕು ಒಂದೊಂದು ಸಲ ಹೀಗಾಗಿ ಬಿಡುತ್ತದೆ.. ಯಾರು ಬೇಡ ಏನೂ ಬೇಡ ಹಾಗೇ ಎದ್ದು ಹೋಗಿಬಿಡಬೇಕು. ಯಾರ ಜಂಜಾಟವೂ ಬೇಡ ಅನಿಸುವಷ್ಟು ಬದುಕು ರೋಸಿ ಹೋಗಿರುತ್ತದೆ..ಈ ಯೋಚನೆ ಪ್ರತಿಯೊಬ್ಬನ ಬದುಕಿನಲ್ಲಿಯೂ ಒಂದಲ್ಲ ಒಂದು ದಿನ ಬಂದಿರುತ್ತದೆ. ಕೆಲವರು ಎದ್ದು ಹೋದರೆ ಇನ್ನು ಕೆಲವರು ಯೋಚನೆಯ ಆಯಾಮವನ್ನು ಬದಲಿಸಿ ಸುಮ್ಮನಿರುತ್ತಾರೆ. ಆದರೆ ಎಲ್ಲರ ನಿರ್ಧಾರಗಳು ಬದಲಾಗಿರುವುದಿಲ್ಲ. ಬದಲಿಗೆ ಅವರಿಗೆ ಈ ಬದುಕಲ್ಲಿ ಇನ್ನೇನೂ ಇಲ್ಲ ಅನ್ನುವುದೊಂದೆ ಯೋಚನೆಯಾಗಿರುತ್ತದೆ. ಈ ಯೋಚನೆಯ ಯೋಜನೆಗಳೆಲ್ಲ ಮುಕ್ತಾಯವಾಗುವುದು ಸಾವಿನಲ್ಲಿ. ಅತಿಯಾದ ಖಿನ್ನತೆ ಸಾವಿನ … Read more

ನಿನ್ನ ಪ್ರೀತಿಯಲ್ಲಿ ಯಾವಾಗ ಮುಳುಗಿ ಹೋದೆನೋ ಗೊತ್ತೇ ಆಗಲಿಲ್ಲ: ದಿನೇಶ್‌ ಉಡಪಿ

ಪಂಜು ಪ್ರೇಮ ಪತ್ರ ಸ್ಪರ್ಧೆಯಲ್ಲಿ ಸಮಾಧಾನಕರ ಬಹುಮಾನ ಪಡೆದ ಪತ್ರ ನಲ್ಮೆಯ ಗೆಳೆಯ,ಸುಮಾರು ದಿನಗಳಿಂದ ಹಗಲು ರಾತ್ರಿಗಳ ಪರಿವೆಯಿಲ್ಲದೇ, ಹೇಳಬೇಕೋ ಬೇಡವೋ? ಎಂಬ ತೊಳಲಾಟದಲ್ಲಿ ಬಳಲಿ, ಹೇಳಲೇಬೇಕಾದದ್ದು ಏನಾದರೂ ಇದೆಯಾ? ಹೇಳಲೇ ಬೇಕಾ? ಹೇಳಿದರೆ ಏನಾಗಬಹುದು? ಹೇಳದೆ ಇದ್ದರೆ ಏನಾಗಬಹುದು? ನಾನೀಗ ಹೇಳಬೇಕಾಗಿದೆಯಾ? ಅಥವಾ ಕೇಳಬೇಕಾಗಿದೆಯಾ? ಎಂಬ ಉತ್ತರವೇ ಇಲ್ಲದ ಪ್ರಶ್ನೆಗಳ ಕಾಡಲ್ಲಿ ಸಿಲುಕಿ, ದಿಕ್ಕು ತಪ್ಪಿ ಕೊನೆಗೆ ಏನಾದರೂ ಆಗಲಿ, ಆಗದೆ ಆದರೂ ಇರಲಿ ಎಂಬ ನಿರ್ಧಾರಕ್ಕೆ ಬಂದು, ನಡುಗುವ ಕೈಗಳಿಂದ ಈ ಪತ್ರ ಬರೆಯುತ್ತಿದ್ದೇನೆ. … Read more

ನಿಮ್ಮ ನೋಡಲೆಂದೇ ನಾನು ಚರಂಡಿಗೆ ಬಿದ್ದಿದ್ದು ರೀ..: ನರೇಂದ್ರ ಎಸ್ ಗಂಗೊಳ್ಳಿ.

ಪಂಜು ಪ್ರೇಮ ಪತ್ರ ಸ್ಪರ್ಧೆಯಲ್ಲಿ ಸಮಾಧಾನಕರ ಬಹುಮಾನ ಪಡೆದ ಪತ್ರ ನಮಸ್ತೆ ಪ್ರತೀಕ್ಷಾ ಮೇಡಂ,ನನ್ನ ಪರಿಚಯ ಖಂಡಿತಾ ನಿಮಗೆ ನೆನಪಿರಬಹುದೋ ಇಲ್ಲವೋ ಗೊತ್ತಿಲ್ಲ. ಆದರೆ ನನ್ನ ಜೀವಮಾನದಲ್ಲಂತೂ ನಿಮ್ಮ ನೆನಪನ್ನು ಬಿಡಲು ಖಂಡಿತಾ ಸಾಧ್ಯವಿಲ್ಲ. ಹಾಗಾಗಿಯೇ ಇದು ನಿಮಗೂ ಗೊತ್ತಿರಲಿ ಅಂತಂದುಕೊಂಡು ಈ ಪ್ರೀತಿಯ ಪತ್ರ ಬರೆಯುತ್ತಿದ್ದೇನೆ. ಅಸಲಿಗೆ ಮೂರು ಕತ್ತೆ ವಯಸ್ಸು ಅಂತಾರಲ್ಲಾ ಅಷ್ಟಾಗುತ್ತಾ ಬಂದರೂ ಮದುವೆ ಅಂದರೆ ದೂರವೇ ನಿಲ್ಲುತ್ತಿದ್ದವನು ನಾನು. ಅದೇಕೋ ಏನೋ ಹೊಸದೊಂದು ಜವಾಬ್ದಾರಿ ಯಾಕೆ ತಗೋ ಬೇಕು? ಈಗಿರುವ ಅದ್ಭುತ … Read more

ಮುಂದಿನ ಬೆಂಚಿನಿಂದ ಹಿಡಿದು ಕೊನೆ ಬೆಂಚಿನವರೆಗೂ ಎಷ್ಟೊಂದು ಹುಡುಗಿಯರಿದ್ದರೂ: ಕಪಿಲ ಪಿ ಹುಮನಾಬಾದೆ

ಪಂಜು ಪ್ರೇಮ ಪತ್ರ ಸ್ಪರ್ಧೆಯಲ್ಲಿ ಸಮಾಧಾನಕರ ಬಹುಮಾನ ಪಡೆದ ಪತ್ರ ಲಾಸ್ಟ್ ಬೆಂಚ್ ಹುಡುಗಿಗೆ, ನಿನ್ನ ನಿರಾಕರಣೆಯ ನೋಟದಲ್ಲಿಯೂ ಸಹ ಪ್ರೀತಿಗೆ ಚಡಪಡಿಸುತ್ತಿರುವ ಜೀವವೊಂದರ ಮಾತುಗಳಿವು. ನೀನು ಕೂತೆದ್ದು ಹೋದ ಬೆಂಚಿನ ಮೇಲೆ, ಕ್ಲಾಸ್ ರೂಮ್ ಪೂರ್ತಿ ಖಾಲಿ ಆಗಿದ್ದಾಗ ನಾನು ಹೋಗಿ ಕೂತು ಬೆಚ್ಚನೆಯ ಸ್ಪರ್ಶವೊಂದು ಅನುಭವಿಸಿದ್ದೇನೆ. ಮೊನ್ನೆ ಮುಂಜಾನೆ ಯುನಿವರ್ಸಿಟಿಯ ಮೇನ್ ಗೇಟಿನ್ ರಸ್ತೆಯಲ್ಲಿ ನೀನು ಎಲ್ಲಿಗೋ ನಡೆದುಕೊಂಡು ಹೋಗುತ್ತಿದ್ದೆ, ಗರಿ ಬಿಚ್ಚಿ ನಿಂತ ಆ ನಿನ್ನ ಹಸಿ ಕೂದಲುಗಳಲ್ಲೊಮ್ಮೆ ನನ್ನುಸಿರು ಸುಳಿದಾಡಿ ಬಂದಂತೆ … Read more

ನಿನ್ನ ಜೋಳಿಗೆಯಲ್ಲಿ ಪ್ರೇಮದ ಬುತ್ತಿ ಸದಾ ತುಂಬಿರುತ್ತೆ: ಸುಜಾತಾ ಲಕ್ಮನೆ

ಹಾಯ್ ದೊರೆ, ಎಲ್ಲಿಂದ ಶುರು ಮಾಡಲಿ? ಅದೇ ನೀ ಸಿಕ್ಕ ದಿನ ಕಣ್ಣ ಚುಂಗಲ್ಲಿ ನೀ ಎಸೆದ ಒಲವ ನೋಟವ ಪೋಣಿಸಿ ಎದುರಿಡಲೇ ಅಥವಾ ಕಳೆದ ಸವಿ ಕ್ಷಣಗಳ ನೆನಪ ನೇಯಲೇ? ಸುಂದರ, ಸಂತಸಮಯ ಕ್ಷಣಗಳು ದಿನದುದ್ದಕ್ಕೂ ಕಾಡಿ ಕಚಗುಳಿಯಿಡುವಾಗ ಮೈ ರೋಮಾಂಚನಗೊಳ್ಳುವ ಆ ಭಾವವನ್ನು ವರ್ಣಿಸೋದು ಹೇಗೆ? ಆ ದಿನಗಳಲ್ಲಿ ಭಾವಗಳು ತುಂಬಿ ತುಳುಕಿತ್ತು! ಎಲ್ಲ ಪೂರ್ಣವೂ ಚಂದ ನೋಡು. ಪೂರ್ಣ ಚಂದಿರ, ಆಡಿ ಮುಗಿವ ಮಾತಿನ ನಂತರದ ತುಂಬು ಮೌನ, ಕಣ್ತುಂಬುವ ನೋಟ; ಬೀಸಿ … Read more

ನಿನಗೆ ನನ್ನ ಮೇಲೆ ಒಲವಿದ್ದರೆ: ಪರಮೇಶ್ವರಿ ಭಟ್

ಪಂಜು ಪ್ರೇಮ ಪತ್ರ ಸ್ಪರ್ಧೆಯಲ್ಲಿ ಸಮಾಧಾನಕರ ಬಹುಮಾನ ಪಡೆದ ಪತ್ರ ಪ್ರಿಯ ಮಧುರಾ, ನಿನಗೆ ಯಾರಿವನು ಅಂತ ಆಶ್ಚರ್ಯ ವಾಗಬಹುದು. ನಾನು ನಿನ್ನನ್ನು ಮೆಚ್ಚಿದ ಒಬ್ಬ ಸುಸಂಸ್ಕೃತ ಹುಡುಗ. ಹೆದರಬೇಡ. ಪತ್ರವನ್ನು ಪೂರ್ತಿ ಓದು. ನಾನು ಒಬ್ಬ ಸಂಶೋಧನ ವಿದ್ಯಾರ್ಥಿ. ನೀನು ಕೂಡ ಇಂಗ್ಲಿಷ್ ನಲ್ಲಿ ಸ್ನಾತಕೋತ್ತರ ಪದವಿಯಲ್ಲಿ ಓದುತ್ತಿರುವಿ ಎಂದು ತಿಳಿದುಕೊಂಡೆ. ನನ್ನ ನಿನ್ನ ಆಕಸ್ಮಿಕ ಭೇಟಿ ನಾನು ಮರೆತಿಲ್ಲ. ಈ ಪತ್ರ ಬರೆಯಲು ಅದುವೇ ನಾಂದಿಯಾಯಿತು ಗೊತ್ತಾ? ಹೇಗೆ ಅಂತೀಯಾ.. ಒಂದು ದಿನ ಲೈಬ್ರರಿಯಲ್ಲಿ … Read more

ಪಂಜು ಕಾವ್ಯಧಾರೆ

ಗೋಡೆಗಳು… ಅವ ತೋರಿಸೆಂದುದಕೆಇವಳು ತೋರಿಬಿಟ್ಟಳು..ಸುತ್ತಲ ಗೋಡೆಗಳೆಲ್ಲ ಕೇಳುತ್ತ ನೋಡಿಬಿಟ್ಟವುಕೆಲ ಗೋಡೆಗಳು ಮಾತಾಡಿಬಿಟ್ಟವುಅಡಗಿಸಿಡಬಹುದಾದ ಸಂಗತಿಗಳೆಲ್ಲತೆರದಿಡುವಂತಾಗಿ ಗೋಡೆಯ ಬಾಯಿಗಳುಬಡಬಡಿಸುವಂತಾದವು ಗೋಡೆಗಳ ಮಧ್ಯೆ ಗೌಪ್ಯವಾಗಿಡಬಹುದೆಂಬುದುಈಗೀಗ ಸುಲಭ ಸಾಧ್ಯವಲ್ಲಈಗಿನ ಗೋಡೆಗಳು ಆಗಿನ ಗೋಡೆಗಳಂತಲ್ಲ..ಕಣ್ಣುಗಳ ಜತೆಗೆ ಕಿವಿಗಳು ಇಷ್ಟಗಲವಾಗಿತೆರೆದು ನಿಮಿರುತ್ತವೆ..ಕೆಲವಂತೂ ಮಾತನ್ನೇ ಸ್ಖಲಿಸಿಬಿಡುತ್ತವೆ ಗೋಡೆಗಳ ನಡುವೆ ಖಾಸಗಿತನವೆಂಬ ಕಾಲಈಗೀಗ ಸಾಮಾನ್ಯವಾಗುಳಿದಿಲ್ಲಗೋಡೆಗಳ ಮಧ್ಯೆ ವಿರಕ್ತರ ಬಟ್ಟೆಗಳ ಕಲೆಯೂ ಸಹಸಾಕಷ್ಟು ಕತೆಗಳನ್ನು ಹಡೆಯುತ್ತಿದೆ. ಗೋಡೆಗಳಿಂದೀಚೆಗೆ ಬಂದ ಕತೆಗಳಲ್ಲಿನ ಪಾತ್ರಗಳುಒಂದನ್ನೊಂದು ಒಪ್ಪಿಕೊಳ್ಳುವುದಿಲ್ಲ..ಕಲ್ಪನೆಯ ಜಾಡಿನೊಳಗೆ ಸುಳಿದಾಡಿದ ಕಾಕತಾಳೀಯ ಎಂಬ ಷರಾದೊಂದಿಗೆಮರೆಯಾಗಿಬಿಡುತ್ತವೆ.. ದೇಹಗಳ ತೀಟೆಗೆ ಗೋಡೆಗಳೂ ಬೇಸತ್ತಿವೆ..ಮನಸು ತನ್ನ ತಪ್ಪನ್ನು ಕಾಲದ … Read more

ಪಂಜು ಪ್ರೇಮ ಪತ್ರ ಸ್ಪರ್ಧೆಯಲ್ಲಿ ಪ್ರಥಮ ಬಹುಮಾನ ಪಡೆದ ಕೃತಿಕಾರಾಣಿ, ಯಲ್ಲಾಪುರ ಅವರ ಪ್ರೇಮ ಪತ್ರ

ಪ್ರಿಯ ಸಖಾ, ನಿನ್ನದೊಂದು ಸಾದಾ ಸೀದಾ ಮುಗುಳುನಗೆ ʻಪ್ರಿಯ ಸಖಾʼ ಎನ್ನುವ ಆಪ್ತತೆ ಒದಗಿಸಿತೆನಗೆ! ನಾನರಿವೆ, ನಿನಗಿದಚ್ಚರಿಯೇ. ಆ ಕಣ್ಣ ಹೊಳಪಲ್ಲಿ ಜಗವ ನೋಡುವ ಬೆರಗ ಕಂಡೆ. ಇನ್ನೇನು ಬೇಕೆನಗೆ ನಿನ್ನ ಮೋಹಕ್ಕೆ ಜಾರಲು? ಮೊನ್ನೆ ಮೊನ್ನೆವರೆಗೂ ತೀರಾ ಸಾಮಾನ್ಯ ಹುಡುಗಿ ನಾನು. ವಿಪರೀತ ಮಾತಿನ ಚಟದವಳು, ಮಕ್ಕಳಂತೆ ಚಲ್ಲಾಟವಾಡುತ್ತಾ, ಮನೆಯಲ್ಲಿ ಕಿವಿ ಹಿಂಡಿಸಿಕೊಂಡು, ಸ್ನೇಹ ಬಳಗದಲ್ಲಿ ಚೇಷ್ಟೆ ಮಾಡುತ್ತಾ ಹಾರಾಡಿಕೊಂಡಿದ್ದವಳು. ಅಚಾನಕ್ಕಾಗಿ ನಿನ್ನ ಮಾಯೆಗೆ ಮೌನಿಯಾಗಿಬಿಟ್ಟೆ! ಅರ್ಥವಾಗದ ಖುಷಿಯೂ ಜೊತೆಯಾಗಿದೆ. ಹರೆಯದ ಹುಡುಗಿಯೊಬ್ಬಳು ಪ್ರೇಮ ಪತ್ರ … Read more

ಪಂಜು ಪ್ರೇಮ ಪತ್ರ ಸ್ಪರ್ಧೆಯಲ್ಲಿ ದ್ವಿತೀಯ ಬಹುಮಾನ ಪಡೆದ ಸುಕೃತಿ ಕೆ ಪೂಜಾರಿ ಅವರ ಪ್ರೇಮ ಪತ್ರ

ನನ್ನ ಪ್ರೀತಿಯ ಇನಿಯ. ಹೇಗಿದ್ದೀಯಾ? ಹೊರ ನೋಟಕ್ಕೆ ಚೆನ್ನಾಗಿದ್ದೀನಿ ಅಂತಿಯಾ. ಅಂತರಂಗದ ಅಳಲು ನನಗೆ ಗೊತ್ತಿದೆ ಕಣೋ. ಯಾಕಂದ್ರೆ ನನ್ನ ಜೀವದ ಉಸಿರಿನ ಬಗ್ಗೆ ನನಗೆ ಗೊತ್ತಿಲ್ಲದೇ ಇರುವುದೇ? ಹೌದು. ನಾ ಈ ಪತ್ರ ಯಾಕೆ ಬರೆಯುತ್ತಿದ್ದೇನೆಂದು ನಾನರಿಯೇ. ಇದು ಅಮೂಲ್ಯ ಪ್ರೇಮದ ನಿವೇದನೆಯೋ? ಅಂತರಂಗದ ವಿರಹದ ವೇದನೆಯೋ? ಮನದ ಮೂಲೆಯಲ್ಲಿ ಹೇಳಲಾಗದೇ ಉಳಿದಿಹ ಅವೆಷ್ಟೋ ಭಾವನೆಗಳಿಗೆ ಇಲ್ಲಿ ಅಕ್ಷರ ರೂಪ ನೀಡುತ್ತಿದ್ದೇನೆ. ಒಮ್ಮೆ ಓದಿ ಬಿಡು ಬಂಗಾರ. ಅಂದು ನಾನ್ಯಾರೋ. ನೀನ್ಯಾರೋ! ಬಂಧು- ಬಾಂಧವರ ಸಮ್ಮುಖದಿ … Read more

ಪಂಜು ಪ್ರೇಮ ಪತ್ರ ಸ್ಪರ್ಧೆಯಲ್ಲಿ ತೃತೀಯ ಬಹುಮಾನ ಪಡೆದ ಶರಣಬಸವ ಕೆ.ಗುಡದಿನ್ನ ಅವರ ಪ್ರೇಮ ಪತ್ರ

ನೀ ಇಲ್ಲದ ಈ ಘಳಿಗೆ. . ಈ ಸಮಯದಲ್ಲಿ ನಿನಗೆ ಪ್ರೇಮಪತ್ರ ಬರೆಯಬಹುದಾ? ಗೊತ್ತಿಲ್ಲ! ಈ ಪ್ರೇಮ ಪತ್ರ ನಿನಗೆ ತಲುಪಿಸುವ ಬಗೆಯೂ ನನಗೆ ಸ್ಪಷ್ಠವಿಲ್ಲ. ಅದೆಷ್ಟು ದಿನವಾಯಿತೊ ನಿನ್ನ ಮೊಬೈಲ್ ನಂಬರನ್ನು ದ್ಯಾಸ ಮಾಡಿಕೊಂಡು ಮೊಬೈಲಿನ ಮುಖದ ಮೇಲೆ ಡಯಲ್ ಮಾಡಿ. ಒಂದೇ ಒಂದು ಮೆಸೇಜು ಕೂಡ ಇತ್ತೀಚಿಗೆ ನಮ್ಮ ಮದ್ಯೆ ಹರಿದಾಡಿಲ್ಲ. ನನ್ನ ಅಂದಾಜು, ಮಾಡಿಕೊಂಡ ಬಾಯಿಲೆಕ್ಕ ಸರಿಯಿದ್ದರೆ ನಿನಗೀಗ ಭರ್ತಿ ಒಂಭತ್ತು ತಿಂಗಳು! ಘಳಿಗೆಗೊಂದು ಸಲ ನೀವಿಕೊಳ್ಳುತ್ತಿದ್ದ ಸೀರೆಯ ಬಣ್ಣದ ನೆರಿಗೆಗಳೇ ಉಳಿಯದಷ್ಟು … Read more

ಭಾಷೆ ಭಾರವಾಗದಿರಲಿ: ಪೂಜಾ ಗುಜರನ್ ಮಂಗಳೂರು..

ನಾವಾಡುವ ಭಾಷೆ, ನಮ್ಮ ಹೃದಯದ ಸಂವಹನವನ್ನು ಬೆಸೆಯುವ ಒಂದು ಮಾಧ್ಯಮ. ನಮ್ಮೊಳಗಿನ ನೋವು, ವಿಷಾದ, ಖುಷಿ, ಕೋಪ, ಎಲ್ಲವನ್ನೂ ನಾವು ವ್ಯಕ್ತಪಡಿಸಬೇಕಾದರೆ ಹೃದಯಕ್ಕೆ ಹತ್ತಿರವಾಗುವ ಭಾಷೆ ಬೇಕು. ನಮ್ಮ ಮಾತೃಭಾಷೆ ಯಾವುದೇ ಇರಲಿ. ಅದನ್ನು ಮಾತಾನಾಡುವವರು ಜೊತೆಗೆ ದೊರೆತರಂತೂ ಮನಸ್ಸಿನ ಭಾವನೆಗಳು ಸರಾಗವಾಗಿ ಹರಿಯುತ್ತದೆ. ಆದರೆ ಈಗ ಎಲ್ಲರಿಗೂ ಇಂಗ್ಲಿಷ್ ಮೋಹ. ತಮ್ಮೊಳಗೆ ಹರಿಯುವುದು ಇಂಗ್ಲೀಷ್ ರಕ್ತ ಅನಿಸುವಷ್ಟರ ಮಟ್ಟಿಗೆ ಟಸ್ಸು ಪುಸ್ಸು ಇಂಗ್ಲೀಷ್ ಬಳಕೆಯಾಗುತ್ತದೆ. ಇನ್ನು ಹೆಚ್ಚಿನವರ ಮಾತಿನಲ್ಲಿ ಈ ಇಂಗ್ಲೀಷ್ ಭಾಷೆ ಇನ್ನಷ್ಟು ಬೆರೆತು … Read more

ಅಂತರ ನಿರಂತರವಾಗದೆ ಕಾವ್ಯ ಹೂವುಗಳು ಪರಿಮಳಿಸುತಿರಲಿ: ಅನಿತಾ ಪಿ.ಪೂಜಾರಿ ತಾಕೊಡೆ

ಲೇಖಕರು: ಡಾ.ವಿಶ್ವನಾಥ ಕಾರ್ನಾಡ್ಪ್ರಕಾಶನ: ಗಾಯತ್ರೀ ಪ್ರಕಾಶನಮುದ್ರಕರು: ಅನಂತ ಪ್ರಕಾಶ ಕಿನ್ನಿಗೋಳಿಪುಟ: 96. ಬೆಲೆ: ರೂ 120/- ಡಾ. ವಿಶ್ವನಾಥ ಕಾರ್ನಾಡ್ ಅವರು ಸೌಮ್ಯಭಾವದ ಕವಿ. ಕಳೆದ ಹಲವಾರು ದಶಕಗಳಿಂದ ತಮ್ಮನ್ನು ಎಲ್ಲ ಪ್ರಕಾರದ ಬರವಣಿಗೆಯಲ್ಲಿ ತೊಡಗಿಸಿಕೊಂಡಿರುವ ಇವರು ಸಾಹಿತ್ಯ ಕ್ಷೇತ್ರದಲ್ಲಿ ನಿರಂತರತೆಯನ್ನು ಕಾಯ್ದುಕೊಂಡಿದ್ದಾರೆ. ಇವರು ಕನ್ನಡದ ಬರವಣಿಗೆ ಆರಂಭಾವದದ್ದು ಕವಿತೆಯಿಂದಲೇ. ಅವರ ಮೊದಲ ಕವಿತೆ ‘ದಿಬ್ಬಣ’ ಮಾಸ್ತಿಯರ ‘ಜೀವನ’ ಪತ್ರಿಕೆಯಲ್ಲಿ ಪ್ರಕಟವಾಗಿದೆ. ಅದೇ ಅವರಿಗೆ ಇನ್ನಷ್ಟು ಕಾವ್ಯ ಬರೆಯುವಲ್ಲಿ ಪ್ರೇರಣೆಯಾಯಿತೆಂದು ಅವರೇ ಹೇಳಿಕೊಂಡಿದ್ದಾರೆ. “ಪ್ರತಿಯೊಬ್ಬನಲ್ಲಿಯೂ ಭಾವನೆ ಇದೆ. … Read more

ಪಂಜು ಗಜಲ್

‌ ಗಜಲ್. ಇಲಕಲ್ಲ ಸೀರೆಯುಟ್ಟ ರಮಣಿ ನಾನು ನೋಡೋದ್ಯಾಕೆಹಸಿರು ಬಣ್ಣ ನಿನ್ನಿಷ್ಟದ್ದಂತ ನೀನೆ ಕೊಟ್ಟಿದ್ದು ನೋಡೋದ್ಯಾಕೆ. ಮಲ್ಲಿಗೆ ತುರುಬ ಕಂಡು ಕಣ್ಣಂಚಿನಲ್ಲಿ ಸಳೆಯುವವನೇಮಲ್ಲಿಗೆ ನಲ್ಲೆಗೆ ತಂದವನು ನೀನೇ ರಾಯ ನೋಡೋದ್ಯಾಕೆ ಘಲ್ ಘಲ್ ಗೆಜ್ಜೆಯ ಸದ್ದಿಗೆ ಹೆಜ್ಜೆ ಹಾಕುತ ನಡೆದರೆಗೆಜ್ಜೆಯ ಸರದಾರ ನೀನೇ ನಿಂತು ನಿಂತು ನೋಡೋದ್ಯಾಕೆ ಬಳೆಗಳ ಖನ ಖನ ನಾದಕೆ ಬೆರಗಾಗಿ ಮರಳಿ ನೋಡೋನೆಜಾತ್ರೆಯಲಿ ಖುದ್ದಾಗಿ ಬಳೆಗಳ ಕೊಡಿಸಿದ ಧೀರನೇ ನೋಡೋದ್ಯಾಕೆ ಜಿರಕಿ ಜೋಡು ಮೆಟ್ಟಿ ಕಟ್ಟು ಮಸ್ತಾಗಿ ಹೊರಟವನೇಮನೆಯಂಗಳದಿ ಹಣಿಕಿ ಹಾಕುತ ಒಲವಿನಲಿ … Read more

ಮಕ್ಕಳನ್ನೂ ಅನ್ವೇಷಣಾ ಮನೋಭಾವದತ್ತ ಪ್ರೇರೇಪಿಸುವ ಆನಂದ ಪಾಟೀಲರ “ಬೆಳದಿಂಗಳು”: ರವಿರಾಜ್ ಸಾಗರ್. ಮಂಡಗಳಲೆ

ಸಣ್ಣ ಮಕ್ಕಳನ್ನೆ ದೃಷ್ಟಿಯಲ್ಲಿಟ್ಟುಕೊಂಡ ಸಿದ್ಧಮಾದರಿಯ ದಾರಿಯಿಂದ ದೂರ ನಿಂತು ಮಕ್ಕಳಿಗೆ ಕುತೂಹಲದ ವಸ್ತುವಿನೊಂದಿಗೆ ತಮ್ಮದೇ ಕಾಲ್ಪನಿಕತೆಗೆ ತೆರೆದುಕೊಳ್ಳಬಲ್ಲ, ಅನ್ವೇಷಣಾ ಮನೋಭಾವದತ್ತ ತೆರೆದುಕೊಳ್ಳುವಂತೆ ಮಾಡಬಲ್ಲ ವಸ್ತುವನ್ನಿಟ್ಟುಕೊಂಡು, ಸಣ್ಣ ಮಕ್ಕಳಿಗೆ ತುಸು ಗಂಭೀರ ಎನಿಸಿದರರೂ ಪ್ರೌಢ ಹಂತದ ಮಕ್ಕಳ ಮನೋಮಟ್ಟಕ್ಕೆ ಆಳವಾಗಿ ಇಳಿದು ತುಸು ಹೆಚ್ಚಾಗಿ ಪ್ರಭಾವ ಬೀರಬಲ್ಲ ಆನಂದ ಪಾಟೀಲರ ಬೆಳದಿಂಗಳು ಕಾದಂಬರಿಯನ್ನು ನೀವು ಒಮ್ಮೆ ಓದಿದರೆ ಅದು ಮತ್ತೊಮ್ಮೆ ಓದಿಸಿಕೊಳ್ಳುತ್ತದೆ. ಸರಳ ಸಂಭಾಷಣೆಯೊಂದಿಗೆ ಮಕ್ಕಳ ಮನಃಪಟಲದಲ್ಲಿ ತಾವು ಈಗಾಗಲೇ ನೋಡಿರುವ ಯಾವುದೋ ಬೆಟ್ಟಗುಡ್ಡ,ಕಣಿವೆ ಪರಿಸರ ಅಥವಾ ಈಗಾಗಲೇ … Read more

ಭಾವಪೂರ್ಣ, ಲಾಲಿತ್ಯಮಯ ಕಾವ್ಯಗಳ ಒಡತಿ- ಸರೋಜಿನಿ ನಾಯ್ಡು: ನಾಗರೇಖಾ ಗಾಂವಕರ

“Lightly, O lightly we bear her alongShe sways like a flower in the mind of our songShe skims like a bird in the foam of a streamShe floats like a laugh from the lips of a dream” ಇದು ಭಾರತದ ಕೋಗಿಲೆ ಸರೋಜಿನಿ ನಾಯ್ಡು ಅವರ “Palanquin-bearers” ಕವನದ ಆರಂಭದ ಸಾಲುಗಳು. ಬೋವಿಗಳು [ಪಲ್ಲಕ್ಕಿ ಹೊರುವವರು] ಮದುಮಗಳನ್ನು ಪಲ್ಲಕ್ಕಿಯಲ್ಲಿ ಹೊತ್ತು ನಿಧಾನವಾಗಿ ಸಾಗುತ್ತಿದ್ದಾರೆ. … Read more

ಮೆಟ್ಟು ಹೇಳಿದ ಕಥಾ ಪ್ರಸಂಗ ಒಂದು ನೀಳ್ಗಾವ್ಯ (ಭಾಗ 69 & 70): ಎಂ. ಜವರಾಜ್

-೬೯-ಮೊಕ್ಕತ್ಲು ಕವಿಕಂಡು ಕಣ್ಣು ಕತಿ ಕಾಣ್ದುಏನ್ಮಾಡಗಿದ್ದದುನಾ ತೇಲ್ತನೇ ಇದ್ದಿ.. ಮೋಟ್ರು ಸದ್ದಾಯ್ತನೆ ಇತ್ತುಅದ ಆಪ್ಮಾಡ್ದೆನೀರು ತುಂಬಿ ತುಳುಕ್ತತೆವ್ರಿ ಮ್ಯಾಲ ಏರಿ ಹರಿತಿತ್ತುನಾನು ಆ ಹರಿಯ ನೀರ್ಲಿ ತೆವ್ರಿ ಸುತ್ತದೋಣಿತರ ತೇಲ್ತ ಸುತ್ತ ಬರದೇ ಆಯ್ತು.. ಆಗ ತೆವ್ರಿ ಮ್ಯಾಲಅದೇನ ಬುಸುಗುಟ್ಟ ಸದ್ದಾಯ್ತುನಂಗ ಗಾಬ್ರಿಯಾಗಿ ತಿರುಗ್ದಿಆ ಬುಸಗುಟ್ಟ ಜಾಗದ ಮ್ಯಾಲಪಣುಕ್ನುಳ್ಗಳ ಹಿಂಡೆ ಹಾರಾಡ್ತಆ ಪಣುಕ್ನುಳ್ಗಳ ಬೆಳುಕ್ಲಿದಪ್ದು ಕರಿ ನಾಗ್ರಾವು ಕಾಣ್ತು..ಅದು ಬುಸುಗುಡ್ತ ತೆವ್ರಿ ಮ್ಯಾಲನೀರ ಸರಿಸ್ತಾ ಹರಿತಾ ಹೋಯ್ತಿತ್ತು ಅದೆ ಗಳುಗ್ಗ ಅತ್ತಿಂದ ಯಾರೊಓಡ್ಬತ್ತಿರ ಸದ್ದಾಯ್ತುನಂಗ ಅತ್ತಗ ದಿಗಿಲಾಗಿ … Read more

ಪಂಜು ಪ್ರೇಮ ಪತ್ರ ಸ್ಪರ್ಧೆ 2021 ರ ಫಲಿತಾಂಶ

2021 ರ ಪಂಜು ಪ್ರೇಮ ಪತ್ರ ಸ್ಪರ್ಧೆಯಲ್ಲಿ ವಿಜೇತರಾದವರ ಪಟ್ಟಿ ಈ ಕೆಳಗಿನಂತಿದೆ. 1 ಪ್ರಥಮ ಬಹುಮಾನ: ಕೃತಿಕಾರಾಣಿ, ಯಲ್ಲಾಪುರ 2 ದ್ವಿತೀಯ ಬಹುಮಾನ: ಸುಕೃತಿ ಕೆ ಪೂಜಾರಿ 3 ತೃತೀಯ ಬಹುಮಾನ: ಶರಣಬಸವ ಕೆ.ಗುಡದಿನ್ನಿ ಐದು ಸಮಾಧಾನಕರ ಬಹುಮಾನಗಳು: 1. ದಿನೇಶ್‌ ಉಡಪಿ 2. ನರೇಂದ್ರ ಎಸ್‌. ಗಂಗೊಳ್ಳಿ 3. ಕಪಿಲ ಪಿ ಹುಮನಾಬಾದೆ 4. ಪರಮೇಶ್ವರಿ ಭಟ್ 5. ಸುಜಾತಾ ಲಕ್ಮನೆ, ಬೆಂಗಳೂರು ತೀರ್ಪುಗಾರರು: ಕನ್ನಡದ ಖ್ಯಾತ ಬರಹಗಾರರಾದ ಎ ಆರ್‌ ಮಣಿಕಾಂತ್‌ ರವರು ಈ … Read more

ಅವ ಇನ್ನೆಂದೂ ಮರಳಿ ಬರಲಾರ: ಶೀಲಾ ಅರಕಲಗೂಡು

ರವಿ ಬೆಳಗೆರೆ ಎಂಬ ದೈತ್ಯ ಶಕ್ತಿ, ಪ್ರಖರ ಬೆಳಕು, ಬತ್ತದ ಪ್ರೀತಿಯ ಒರತೆ, ಅಕ್ಷರ ಮಾಂತ್ರಿಕ, ಇತ್ಯಾದಿ, ಇತ್ಯಾದಿ …… ಇದೇ ಮಾರ್ಚ್ 15ಕ್ಕೆ ತನ್ನ ಹುಟ್ಟು ಹಬ್ಬವನ್ನು ಆಚರಿಸಿಕೊಳ್ಳಲು ನಮ್ಮ ನಡುವೆ ಇಲ್ಲವೇ ಇಲ್ಲ! ಏನೋ ಆತುರವಿರುವಂತೆ ಅರವತ್ತೆರಡು ವರ್ಷಗಳಲ್ಲೇ ನೂರು ವರ್ಷಗಳಲ್ಲಿ ಮಾಡಬಹುದಾದುದನ್ನು ಮಾಡಿ, ನೋಡ ನೋಡುತ್ತಿದ್ದಂತೆ ಮರೆಯಾಗಿ ಹೋಗಿರುವುದು ಇಂದಿಗೂ ನಂಬಲಾಗುತ್ತಿಲ್ಲ. ಇಷ್ಟು ಬೇಗ ಅಲ್ಲೆಲ್ಲೋ ಹೋಗಿ ಮಾಡುವುದಿತ್ತಾದರೂ ಏನನ್ನು? ಏನು ಮಾಡುತ್ತಿರಬಹುದು ಈಗಲ್ಲಿ? ಇಷ್ಟೆಲ್ಲ ಜನ ಆತನಿಗಾಗಿ ಹಂಬಲಿಸಿ ನೆನೆಯುತ್ತಿರುವಾಗ ಅಲ್ಲಿ … Read more