ನಿನ್ನ ಕಣ್ಣುಗಳಲ್ಲಿನ ಉತ್ಸಾಹದ ಜಲಪಾತವ ಕಾಣುವಾಸೆಯೆನಗೆ: ಕೆ. ಎನ್‌ ಶ್ರೀವಲ್ಲಿ

ನನ್ನೊಲವಿನ ಇನಿಯಾ, ಸವಿನೆನಪೆಂಬ ರೇಷಿಮೆ ದಾರದಿಂದ ಕನಸೆಂಬ ಹೊನ್ನಿನ ಬಟ್ಟೆಯ ನೇಯ್ದಂತೆ ನನ್ನ ಮನದಲಿ ನಿನ್ನದೇ ರೂಪ ಅಚ್ಚೊತ್ತಿದೆ. ಪಿಸುಮಾತಿನ ಸಮಾಗಮದ ಕಲೆಯನ್ನು ನನ್ನಲ್ಲಿ ಅರಳಿಸಿದ್ದು ನೀನಲ್ಲವೆ. ನನ್ನ ಕಡೆಗಣ್ಣಿನ ಮಿಂಚಿನ ನೋಟ, ಚೆಂದುಟಿಯ ಮುಗುಳುನಗೆ, ಕಿರುಬೆರಳ ಸ್ಪರ್ಶ, ನನ್ನ ಮನದ ಭಾವನೆಯನ್ನು ನಿನಗೆ ತಿಳಿಸಿಲ್ಲವೆ. ನನ್ನ ಅನಿಸಿಕೆಗಳು ನಿನಗೇಕೆ ಅರಿವಾಗಲೇ ಇಲ್ಲ. ಮೋಡದ ಮುಸುಕಿನಲಿ ಪೂರ್ಣಚಂದ್ರ ಮರೆಯಾದ ಆ ಬೆಳದಿಂಗಳ ರಾತ್ರಿಯಲಿ, ನಿನ್ನ ಕಣ್ಣೋಟದ ಬೆಳ್ಳಿ ಬೆಳಕಿಗೆ ನಾ ಸೋತು ಕಣ್ಮುಚ್ಚಿದ್ದು ನಿನಗೇಕೆ ಅರಿವಾಗಲೇ ಇಲ್ಲ … Read more

“ಅಲೈದೇವ್ರು” ನಾಟಕವನ್ನು ನೀವು ಮನೆಯಲ್ಲೆ ಕುಳಿತು ನೋಡಬಹುದು

ಈ ವೀಕೆಂಡ್ನಲ್ಲಿ “ಅಲೈದೇವ್ರು” ನಾಟಕವನ್ನು ನೀವು ಮನೆಯಲ್ಲೆ ಕುಳಿತು ನೋಡಬಹುದು. ನೀವು ನೋಡಿ ಫೀಡಬ್ಯಾಕ್ ಕೊಟ್ರೆ ನಮ್ಮ ತಂಡಕ್ಕೆ ಖುಷಿ. ಲಾಕ್ಡೌನ್ ಇರದಿದ್ರೆ ಇಷ್ಟೊತ್ತಿಗೆ ನಮ್ಮ ಜನರಂಗದಿಂದ “ಅಲೈದೇವ್ರು” ನಾಟಕ ಹತ್ತಾರು ಪ್ರದರ್ಶನ ಕಾಣುತ್ತಿತ್ತೇನೋ. ಸಾಲಸೋಲ ಮಾಡಿ, ಕೆಲವರು ಹತ್ರ ಇಸ್ಕೊಂಡು, ಲಕ್ಷಾಂತರ ರೂಪಾಯಿ ಖರ್ಚು ಮಾಡಿ 35 ಜನ ಹೊಸಬರೊಂದಿಗೆ ನಾಟಕ ಕಟ್ಟಿದ್ದೆವು. ಆದರೆ, ಇನ್ನು ಮುಂದೆ ಪ್ರದರ್ಶನವಾಗುತ್ತೋ ಇಲ್ಲವೋ ಗೊತ್ತಿಲ್ಲ. ಆದ್ದರಿಂದ ಈ ನಾಟಕವು ಈಗ ಜೂನ್ 19ರಿಂದ ಶನಿವಾರ ಬೆಳಿಗ್ಗೆ 7 ಗಂಟೆಯಿಂದ … Read more

ನಾ ಕಂಡ ಸಂತೆ: ಮಂಜು ನವೋದಯ

ಶುದ್ದ ನಗರಿಕರಣದಿಂದ ದೈತ್ಯ ನಗರಗಳು ಯಾಂತ್ರಿಕವಾಗಿ ಮುನ್ನೆಡೆಯುವ ಇಂದಿನ ಜೀವನ ಶೈಲಿ ಅದೇಕೋ ನನಗೆ ಹಿಡಿಸಲಾರದಷ್ಟು ಯಾತನೆ ಪಡಿಸುತ್ತೆ. ಅದೇ ಹಳ್ಳಿಗಳ ಗ್ರಾಮೀಣ ಬದುಕು ರೀತಿರಿವಾಜುಗಳು, ರಾಜಕೀಯದ ಒಳಪಟ್ಟುಗಳು, ಅಣ್ಣ ತಮ್ಮರ ವ್ಯಾಜ್ಯ, ಜಾತ್ರೆಯ ಬಾಡೂಟ- ಇಂತಹ ಹಲವಾರು ನಿದರ್ಶನಗಳು ಗ್ರಾಮ್ಯ ಸಮಾಜದ ಜೀವಂತಿಕೆಯನ್ನು ಹಾಗೂ ಬದುಕಿನ ಶ್ರೀಮಂತಿಕೆಯನ್ನು ಹೆಜ್ಜೆ- ಹೆಜ್ಜೆಗೂ ಪ್ರತಿಪಾದಿಸುತ್ತವೆ. ನಮ್ಮ ಊರಿನ ಆಜುಬಾಜಿನ ಸುಮಾರು 30 ಹಳ್ಳಿಗಳ ಜನರು ತಮ್ಮ ಜಾನುವಾರು, ಬೆಳ್ಗೆ ಹಾಗೂ ದೈನಂದಿನ ಅವಶ್ಯಕ ವಸ್ತುಗಳ ಖರೀದಿ ಹಾಗೂ ಬಿಕರಿ … Read more

ಮೆಟ್ಟು ಹೇಳಿದ ಕಥಾ ಪ್ರಸಂಗ ಒಂದು ನೀಳ್ಗಾವ್ಯ (ಭಾಗ 76 & 77): ಎಂ. ಜವರಾಜ್

-೭೬- ಕಂತಕಟ್ಟ ಗದ್ದಮಾಳಗಕುಂ ಅಂತಿತ್ತು ಕೆರ ಪಾಚಿಕಟ್ಟಿಜೊಂಡು ಬೆಳ್ದುಮಧ್ಯದಲಿ ಒಂದೇಡ್ ತಾವರ ಹೂ ಆ ಹೂವ್ಗಳುಅತ್ತ ಅಳ್ದಾಗು ಅಲ್ಲಇತ್ತ ಮೊಗ್ನಾಗು ಅಲ್ಲಜೋತ್ಗಂಡು ಮ್ಯಾಕ್ಕ ನೋಡ್ತಮ್ಯಾಲ ತಿಂಗ್ಳು ಬೆಳ್ಕು ಬೆಳುಗ್ತಾ.. ಇತ್ತಗಈ ಅಯ್ನೋರು ನನ್ನ ಮೆಟ್ಟಿಈ ಮೆಟ್ಟಿರ ಪಾದ್ವಈ ಭೂಮ್ತಾಯ್ಗ ಕುಟ್ಟಿ ಕುಟ್ಟಿಸುಮ್ನ ಅತ್ತಗು ಇತ್ತಗು ನೋಡ್ತಾ.. ಹಂಗ ನೋಡ್ತಾ ನೋಡ್ತಾಆ ತಿಂಗ್ಳು ಬೆಳುಕ್ಲಿಕೆರ ಮಗ್ಗುಲ್ಲಿ ಅದೇನ ಸದ್ದಾಯ್ತುಆ ಸದ್ದು,ಹೆಜ್ಜ ಸದ್ದೇ ಆದಂಗಿತ್ತು ಈ ಅಯ್ನೋರು ಬೆಚ್ತ ಮ್ಯಾಕೆದ್ರು ಮರದ ಕೊಂಬ ಮ್ಯಾಲಿಂದಬೇರು ಕಂಡಾಗಿ ಜೋತಾಡ್ತಭೂಮ್ತಾಯಿಗ ಅಂಟ್ಗಂಡಿದ್ದಆಲದ ಮರ … Read more

ಪಂಜು ಕಾವ್ಯಧಾರೆ

ಚುಟುಕುಗಳು1ಬಿಸಿಲಿನಲ್ಲಿ ಅಲೆದು ಅವನಹಸಿವು ಹೆಚ್ಚಿ ಸುಸ್ತು ಆಗಿಹಸಿರು ಮರದ ನೆರಳಿಗಾಗಿ ತುಂಬ ಅಲೆದನುಮಳೆಯ ಕಾಲದಲ್ಲಿ ಹತ್ತುಗೆಳೆಯರೊಡನೆ ಸೇರಿಕೊಂಡುನಾಳೆಗಾಗಿ ಹಲವು ಸಸಿಯ ನೆಟ್ಟು ಬಂದನು2ಹುಡುಗನೋರ್ವ ಬಿಸಿಲಿನಲ್ಲಿನಡೆದು ಬರಲು ಸುಸ್ತು ಆಗಿಗಿಡದ ನೆರಳಿನಲ್ಲಿ ಕೊಂಚ ಒರಗಿಕೊಂಡನುಮರಳಿ ಮನೆಗೆ ತೆರಳಿ ತಾನು,ಹುರುಪಿನಿಂದ ಗೆಳೆಯರೊಡನೆಅರಳಿ, ಹೊಂಗೆ ಸಸಿಯ ದಾರಿ ಬದಿಗೆ ನೆಟ್ಟನು3ಬಿಸಿಲ ಕಾಲದಲ್ಲಿ ಬುವಿಯಹಸಿರು ಮಾಯವಾಗುತಿರಲುಹೆಸರು ಉಳಿಸುವಂತ ಕೆಲಸಕೆಂದು ಪುಟ್ಟನುಕಟ್ಟೆ ಮೇಲೆ ಹಕ್ಕಿಗಳಿಗೆಬಟ್ಟಲಲ್ಲಿ ನೀರು ಕಾಳುಇಟ್ಟು ತಿನ್ನಲೆಂದು ಒಲುಮೆಯಿಂದ ಕರೆದನು4ಬರವು ಬಿದ್ದು ಬುವಿಯು ಸುಡಲುಮರಗಳೆಲ್ಲ ಒಣಗುತಿರಲುನರಳುತಿಹವು ಜೀವರಾಶಿ ವರುಣನಿಲ್ಲದೆಇಳೆಯ ಮೇಲೆ ಗಿಡವ ನೆಡದೆಮಳೆಯ … Read more

ಪಂಜು ಕಾವ್ಯಧಾರೆ

ಚಿತೆಯಾಗದ ಮಾತುಗಳು ಬನ್ನಿ ಮಲಗೋಣ ಯಾರೂ ಇಲ್ಲ ನಮಗೀಗಮಣ್ಣಿನ ಮಾತು ಮನಸಲಿ ಕೂತಿದೆಮಸಣದಲಿ.. ನಾವು ಮಾಡಿದ ಕೆಲಸಗಳಮಾತು-ಕತೆ ಶುರುವಾಗಿದೆಬೆಂಕಿ ಇಡುವ ಮುನ್ನ ನನ್ನ ಸೋಂಕಿನಇತಿಹಾಸವನ್ನೆಲ್ಲ ಎಲ್ಲರೂಊರು ಹೊಡೆಯುತ್ತಿದ್ದಾರೆ. ವಾಸನೆ ಹೆಚ್ಚಾಗಿ ಮೂಗು ಮುಚ್ಚುತ್ತಿದ್ದಾರೆಮುಟ್ಟಲು ಸಮಾಜವನ್ನೆಧಿಕ್ಕರಿಸುತ್ತಿದ್ದಾರೆಅತ್ತು ಕರೆಯಲು ಸಮಯವಿಲ್ಲಚಿತಾಗಾರದ ಬಾಗಿಲಲ್ಲಿಯತಾಸ್ಥಿತಿಯಲ್ಲಿ ಕ್ಯೂ ಹೆಚ್ಚೆ ಆಗಿದೆಸತ್ತವರು ನಾವೆಅವರ ಹೆಸರಲ್ಲಿ ಅವರ ಉಸಿರಲ್ಲಿ. ಅಂಬೆಗಾಲಿಟ್ಟು ನಡೆಯಲುಪ್ರೋತ್ಸಾಹಿಸಿದ ನೆಲದವ್ವನವ ನವ ಜಾತಿಯ ಸೋಂಕನ್ನು ಮಡಿಲುತುಂಬಿಸಿಕೊಳ್ಳುತ್ತಿದ್ದಾಳೆಕರುಳ ಬೇನೆಯು ಇಲ್ಲತೀವ್ರವಾದ ಎದೆಹಾಲಿನ ಕೊರತೆಯು ಇಲ್ಲಬರಿ ಬರಡಾಗಿರುವಗರ್ಭದಲಿ ಸೃಷ್ಠಿಯ ಋತುಸ್ರಾವಸಂಕಟಗಳ ವ್ಯರ್ಥ ಹರಿವು. ನಿನ್ನ ನನ್ನ ಭೇಟಿಗೆ … Read more

“ಪರಿಸ್ಥಿತಿಯ ಕೈಗೊಂಬೆಯಾದಾಗ ಬದುಕು ಅಸಹನೀಯವಾಗುತ್ತದೆ”: ಪೂಜಾ ಗುಜರನ್ ಮಂಗಳೂರು.

ಇದೊಂದು ಸಂಕಷ್ಟದ ಕಾಲ. ಸಾಲು ಸಾಲು ಸೋಲುಗಳು ಕಣ್ಣೆದುರೆ ನಿಂತಿದೆ. ಎದ್ದೇಳಬೇಕು ಅಂದಾಗಲೆಲ್ಲ  ಈ ಕಣ್ಣಿಗೆ ಕಾಣದ ಸೂಕ್ಷ್ಮಾಣು ಕಣ ಮತ್ತೆ ಮತ್ತೆ ಬದುಕನ್ನು ಸೋಲಿಸುತ್ತಿದೆ. ದುಡಿವ ಕೈಗಳಿಗೆ ಯಾರೋ ಬೇಡಿ ತೊಡಿಸಿ ಕುಕ್ಕರುಗಾಲಿನಲ್ಲಿ ಕೂರಿಸಿದಂತೆ. ಏನೀದು ಯಾಕೆ ಹೀಗಾಗುತ್ತಿದೆ ಎಂದು ಪ್ರಶ್ನೆಗಳ ಮೇಲೆ ಪ್ರಶ್ನೆಗಳು ಮನಸ್ಸನ್ನು ದಾಳಿ ಮಾಡಿ ಬಿಡುತ್ತದೆ. ವಿಪರ್ಯಾಸವೆಂದರೆ ನಾವು ಎಲ್ಲದಕ್ಕೂ ಒಂದೇ ಕಾರಣವನ್ನು ಕೊಟ್ಟು ಅದನ್ನೇ ದೂಷಿಸುತ್ತೇವೆ. ಇವತ್ತು ಹೀಗೆ ಆಗಲು ಆ ಒಂದು ರೋಗವೇ ಕಾರಣ ಅನ್ನುವ ಮಾತು ಎಲ್ಲರಲ್ಲೂ … Read more

ಕನ್ನಡ ಶಾಯಿರಿಗಳು – ಒಂದು ಅವಲೋಕನ: ಪರಮೇಶ್ವರಪ್ಪ ಕುದರಿ

ಕನ್ನಡ ಸಾರಸ್ವತ ಲೋಕವು ಕಥೆ, ಕಾದಂಬರಿ, ನಾಟಕ, ಮಹಾಕಾವ್ಯ, ಕವನ, ಸಣ್ಣ ಕಥೆ, ಹನಿಗವನ ಇನ್ನೂ ಹಲವಾರು ಪ್ರಕಾರಗಳಿಂದ ಶ್ರೀಮಂತವಾಗಿದೆ. ಈ ಶ್ರೀಮಂತ ಪರಂಪರೆಗೆ ಇತ್ತಿಚಿನ ಸೇರ್ಪಡೆ ಎಂದರೆ ಕನ್ನಡ ಶಾಯಿರಿಗಳು. ಬದುಕಿನ ಸಾರವನ್ನು ಕೆಲವೇ ಸಾಲುಗಳಲ್ಲಿ ತೆರೆದಿಡುವ ಪರಿಯನ್ನು ಶಾಯಿರಿ ಎನ್ನಬಹುದು.ಇದನ್ನು ಓದಿಯೇ ಸವಿಯಬೇಕು! ಶಾಯಿರಿ ಎಂಬ ಪದವು ಅರೇಬಿಕ್ ಭಾಷೆಯ “ ಶೇರ್” ಎಂಬ ಪದದ ರೂಪಾಂತರವಾಗಿದೆ. ಶೇರ್ ಪದದ ಅರ್ಥ ಎರಡು ಸಾಲಿನ ಪದ್ಯ ಎಂದಾಗುತ್ತದೆ. ನಮಗೆ ಬಹಳ ಸಂತೋಷವಾದಾಗ, ಮತ್ತು ಬಹಳ … Read more

ತಾನೇ ಕವಿತೆಯಾದ ಕವಿಯ ಕವಿತೆಗಳ ಜಾಡ್ಹಿಡಿದು ನಡೆದಾಗ…..!: ಜಬೀವುಲ್ಲಾ ಎಮ್. ಅಸದ್, ಮೊಳಕಾಲ್ಮುರು.

ಕೃತಿ: ನನ್ನೊಳಗಿನ ಕವಿತೆ (ಕವನ ಸಂಕಲನ – ೨೦೨೦)ಲೇಖಕರು: ಅಷ್ಫಾಕ್ ಪೀರಜಾದೆಪ್ರಕಾಶನ: ಹೆಚ್. ಎಸ್. ಆರ್. ಎ. ಪ್ರಕಾಶನ, ಬೆಂಗಳೂರು.ಬೆಲೆ: ೧೫೦/- “ಕವಿ ಕೊರಳಿಗೆಉರಳಾದ ಕವಿತೆಅದ್ಹೇಗೋಅಮರವಾಗಿತ್ತುಕವಿ ಮಾತ್ರಜಗದ ಬೆಳಕಿಗೆಅಪರಿಚಿತನಾಗಿಯೇಉಳಿದುಬಿಟ್ಟ” ಹೀಗೆಲ್ಲಾ ಸಶಕ್ತವಾದ, ಅರ್ಥಪೂರ್ಣವಾಗಿ ಧ್ವನಿಸುವ ಕವಿತೆ ರಚಿಸುವ ‘ಅಷ್ಫಾಕ್ ಪೀರಜಾದೆ’ ರವರು, ಲೋಕದ ಬೆಳಕಿಗೆ ಅಪರಿಚಿತನಾಗಿ ಕತ್ತಲಲ್ಲೇ ಉಳಿದು ಬಿಡುವ ಕಹಿ ಸತ್ಯವನ್ನು ಕಾವ್ಯದ ಮೂಲಕ ತಮ್ಮ ಮನದಾಳದ ಇಂಗಿತವನ್ನು, ನೋವನ್ನು, ಹತಾಶೆಯನ್ನು, ತಲ್ಲಣವನ್ನು “ನನ್ನೊಳಗಿನ ಕವಿತೆ” ಎಂಬ ಭಾವಪೂರ್ಣ ಕವನ ಸಂಕಲನ ದಲ್ಲಿ ಹಂಚಿಕೊಂಡಿದ್ದಾರೆ. ಬರಹಗಾರನು … Read more

ಹೆಸರಿನಲ್ಲೇನಿದೆ: ಡಾ. ವೃಂದಾ. ಸಂಗಮ್

ಎಂದಿನಂತೆ ಆಫೀಸಿಗೆ ಹೋಗಿ, ಕಂಪ್ಯೂಟರ್ ತೆಗೆಯುತ್ತಿದ್ದೆ, ನಮ್ಮ ದತ್ತಾಂಶ ನಮೂದಕಿ (ಟೈಪಿಸ್ಟ್) ಒಬ್ಬರು ಬಂದವರೇ, ” ಮೇಡಂ, ನಿನ್ನೆ ಪತ್ರಗಳಲ್ಲಿ ಇದೊಂದು ಬಾಕಿ ಇದೆ, ಟೈಪ್ ಆಗಿಲ್ಲ.” ಎಂದರು. “ಯಾಕೆ” ಎಂದೆ. “ಮೇಡಂ, ಅವರ ಹೆಸರು ಚಿಂತಾಮಣಿ ಎಂದಿದೆ, ಶ್ರೀ ಅಂತ ಬರೀಬೇಕೋ, ಶ್ರೀಮತಿ ಅಂತ ಬರೀಬೇಕೋ ತಿಳೀಲಿಲ್ಲ. ಅದು ಮಾಹಿತಿ ಹಕ್ಕು ಅಧಿನಿಯಮ ಕಾಯ್ದೆಯ ಪತ್ರ. ಇಂದೇ ಕೊನೆಯ ದಿನ. ಕಳಿಸಲೇ ಬೇಕು ಇವೊತ್ತು. ಏನು ಬರೀಲಿ, ಶ್ರೀ ಅಥವಾ ಶ್ರೀಮತಿ” ಎಂದು ಕೇಳಿದರು. ಅವರ … Read more

ಶ್ರೀ. ಗಣಪತ್ ಕಾಕೋಡೇಜಿ, ನಮ್ಮ ಕಾಲೋನಿಯ ಭರವಸೆಯ ಪೋಸ್ಟ್ಮನ್ !: ಎಚ್. ಆರ್. ಲಕ್ಷ್ಮೀವೆಂಕಟೇಶ್

ಕಾಕೋಡೆ ಅವರನ್ನು ನಾನು ಸುಮಾರು ೧೦ ವರ್ಷಕ್ಕೂ ಹೆಚ್ಚು ಸಮಯದಿಂದ ಬಲ್ಲೆ ಎಂದರೆ ತಪ್ಪಾಗಲಾರದು. ನಮ್ಮ ಹಿಮಾಲಯ ಕಾಲೋನಿಯ ಭರವಸೆಯ ಪೋಸ್ಟ್ಮನ್ ಎಂದು ಅವರನ್ನು ಕರೆಯಲು ಹಲವು ಕಾರಣಗಳೂ ಇವೆ. ತನ್ನ ವೃತ್ತಿಯಲ್ಲೂ ಕೆಲವು ಮಹತ್ವವೆಂದು ನಾನು ಕರೆಯುವ (ಬೇರೆಯವರಿಗೆ ಇದು ಅಷ್ಟು ಮುಖ್ಯವಾಗಿ ಕಾಣಿಸದೆ ಇರಬಹುದು) ಕಾರ್ಯಗಳನ್ನು ಅವರು ಮಾಡಿದ್ದಾರೆ ಎಂದರೆ ಸುಳ್ಳಲ್ಲ. ಯಾವುದೇ ಕೆಲಸ ತನ್ನದೇ ಆದ ಮಹತ್ವವನ್ನು ಪಡೆದಿದೆ. ಅದನ್ನು ಎಷ್ಟು ಜನ ಗುರುತಿಸುತ್ತಾರೆ ಎನ್ನುವುದು ಮುಖ್ಯ. ವರ್ಷ ೨೦೦೮ ರಲ್ಲಿ ನಾವು … Read more

“ಪರಿಸರ ದಿನ ಎನ್ನುವ ವರ್ಷದ ಶ್ರಾದ್ಧ”: ವೃಶ್ಚಿಕ ಮುನಿ

ಇವತ್ತಿನ ಜಮಾನಾದ ಜನರು ಪರಿಸರ ದಿನಾಚರಣೆ ಎಂದರೆ ವಾಟ್ಸಪ್, ಫೇಸ್ಬುಕ್, ಟ್ವಿಟ್ಟರ್,ಯೂಟುಬ್ ಇನ್ನಾವುದೋ ಸಾಮಾಜಿಕ ಜಾಲತಾಣಗಳಲ್ಲಿ ಒಂದು ಗೀಚಿ, ಒಂದಿಷ್ಟು ಎಡಿಟ್ ಪೋಟೋ ಹಾಕಿ ಕೆಳಗೆ ಮೂಲೆಯಲ್ಲಿ ಇರಲಿ ನಮ್ಮದೊಂದು ಅಂತಾ ಫೋಟೋ ಹಾಕಿಕೊಂಡು ಮೆರೆದು ನಾವು ದೊಡ್ಡ ಪರಿಸರ ಪ್ರೇಮಿ ಎಂದು ಬಿಡುತ್ತೇವೆ. ಅವತ್ತು ನೆಟ್ಟು ಸಸಿ ಸಂಜೆಗೆ ಬಾಡಿ ಹೋಗಿರುತ್ತದೆ.ಪ್ರತಿ ವರ್ಷ ನೆಟ್ಟು ಜಾಗದಲ್ಲಿ ಮತ್ತೆ ಮತ್ತೆ ಸಸಿ ನೆಟ್ಟು ಹಲ್ಲು ಕಿಸಿದು ಫೋಟೋ, ಸೆಲ್ಫ್ ತೆಗೆಸಿಕೊಂಡು ಮತ್ತೆ ಸಾಮಾಜಿಕ ಜಾಲ ತಾಣಗಳಲ್ಲಿ ಹಾಕಿಕೊಂಡು … Read more

ಜಪಾನ್ ಕಾವ್ಯ ಪ್ರಕಾರ ಹೈಕು ಕನ್ನಡಮ್ಮನ ಮಡಿಲಲ್ಲಿ….: ರತ್ನರಾಯಮಲ್ಲ

ಕನ್ನಡ ವಾಗ್ದೇವಿಯ ಭಂಡಾರವನ್ನೊಮ್ಮೆ ಅವಲೋಕಿಸಿದಾಗ ಹಲವಾರು ವಿಸ್ಮಯಗಳು ಸಹೃದಯ ಓದುಗರನ್ನು ಜಿಜ್ಞಾಸೆಗೆ ಹಚ್ಚುತ್ತವೆ. ಅರ್ವಾಚೀನ ಸಾಹಿತ್ಯದ ಮೇಲೆ ಸಂಸ್ಕೃತ ಭಾಷೆಯ ಪ್ರಭಾವವಿದ್ದಂತೆ ಆಧುನಿಕ ಸಾಹಿತ್ಯದ ಮೇಲೆ ಆಂಗ್ಲ ಭಾಷೆಯ ಪ್ರಭಾವವಿರುವುದನ್ನು ಕಾಣುತ್ತೇವೆ. ಅದರಲ್ಲಿ ಜಪಾನಿನ ಕಾವ್ಯ ಕಲೆ ‘ಹೈಕು’ ಕೂಡ ಒಂದು. ಜಪಾನಿನ ಜನಪದ ಲೋಕದಿಂದ ಒಡಮೂಡಿದ್ದ ಹಾಗೂ ಆಸ್ಥಾನದಲ್ಲಿ ನಲೆದಾಡುತಿದ್ದ ಹೈಕುಗೆ ಭವ್ಯವಾದ ದೀರ್ಘ ಪರಂಪರೆಯಿದೆ. ಜಪಾನಿನ ಭಾಷೆ ಚೀನಿಮಯ, ಚಿತ್ರಲಿಪಿ. ನಾವು ನಮ್ಮ ಭಾಷೆಯನ್ನು ಧ್ವನಿ ಮೂಲಕ ಗುರುತಿಸಿದರೆ ಜಪಾನೀಯರು ಚಿತ್ರದ ಮೂಲಕ ಗುರುತಿಸುವರು. … Read more

ಬುದ್ಧ ಧ್ಯಾನದ “ಪ್ಯಾರಿ ಪದ್ಯ” ಗಳು: ಅಶ್ಫಾಕ್ ಪೀರಜಾದೆ

ಚುಟುಕು, ಹನಿಗವನ, ಹನಿಗವಿತೆ, ಹಾಯ್ಕು, ಶಾಯರಿ, ರೂಬಾಯಿ, ಫರ್ದ, ಶೇರ್, ದ್ವಿಪದಿ, ತ್ರಿಪದಿ, ಚೌಪದಿ ಇತ್ಯಾದಿ ಇತ್ಯಾದಿಯಾಗಿ ಕರೆಯಲ್ಪಡುವ ಸಾಹಿತ್ಯದ ವಿವಿಧ ಪ್ರಕಾರಗಳು ಸಾಸಿವೆಯಲ್ಲಿ ಸಾಗರ ಅಡಕಗೊಳಿಸಿದಂತೆ ಅತಿ ಸ್ವಲ್ಪದರಲ್ಲಿ ಬಹಳಷ್ಟು ಹೇಳುವ ಅಭಿವ್ಯಕ್ತಿ ಮಾಧ್ಯಮ. ಇಲ್ಲಿ ಕತೆ, ಕವಿತೆಯಂತೆ ಸ್ವಲ್ಪೂ ಕೂಡ ವಾಚ್ಯತೆಗೆ ಜಾಗವಿರುವುದಿಲ್ಲ. ಹೀಗಾಗಿ ಪ್ರಸ್ತುತ ಅಕ್ಕಡಿ ಸಾಲಿನ ಮೂಲಕ ಶ್ರೇಷ್ಠ ಕವಿಯಾಗಿ ಗುರುತಿಸಿಕೊಂಡಿರತಕ್ಕಂತಹ ಎ. ಎಸ್. ಮಕಾನದಾರ ಅವರ ಇತ್ತೀಚಿನ ಸಂಕಲನ ಮೇಲಿನ ಯಾವುದೇ ಒಂದು ಪ್ರಕಾರಕ್ಕೆ ಬದ್ಧವಾಗಿರದೆ, ಅಷ್ಟೂ ಪ್ರಕಾರಗಳನ್ನು ತನ್ನೊಳಗೆ … Read more

ಬದುಕಿನ ಬಂಧಕ್ಕೆ ಹೆಸರಿನ ಹಂಗು ಯಾತಕ್ಕೆ? : ಪೂಜಾ ಗುಜರನ್. ಮಂಗಳೂರು.

ರಕ್ತ ಸಂಬಂಧಗಳೆಂದರೆ ಒಂದೇ ರಕ್ತ ಹಂಚಿಕೊಂಡು ಜೊತೆಯಾಗಿ ಹುಟ್ಟಿದವರು. ಆದರೆ ಜೊತೆಯಾಗಿ ಹುಟ್ಟದೆಯೂ ಜೊತೆಯಿರುವವರಿಗೆ ಏನು ಅನ್ನುತ್ತಾರೆ. ಅವರನ್ನು ಒಡನಾಡಿಗಳು, ಅನ್ನಬಹುದು. ಒಂದು ಬಾಂಧವ್ಯ ಬೆಳೆಯಲು ಜೊತೆಯಾಗಿಯೇ ಹುಟ್ಟಬೇಕಿಲ್ಲ. ಜೊತೆಯಾಗಿಯೇ ಬದುಕಬೇಕಿಲ್ಲ. ಕೊನೆವರೆಗೂ ಜೊತೆ ಜೊತೆಯಾಗಿ ನಡೆಯುವ ಒಂದೊಳ್ಳೆ ಮನಸ್ಸು ಇದ್ದರೆ ಸಾಕು. ಅವರು ಯಾವತ್ತಿಗೂ ನಮ್ಮೊಳಗೆ ಇರುತ್ತಾರೆ. ಅಲ್ಲಿ ಯಾವುದೆ ಕಟ್ಟುಪಾಡುಗಳ ಹಂಗು ಇರುವುದಿಲ್ಲ. ನಂಬಿಕೆ ವಿಶ್ವಾಸ ಅನ್ನುವ ಚೌಕಟ್ಟಿನ ಒಳಗೆ ಬಾಂಧವ್ಯ ಗಟ್ಟಿಯಾಗುತ್ತದೆ. ಇಲ್ಲಿ ನಾವು ಜೊತೆಯಾಗಿ ಬದುಕಲು ಸಂಬಂಧಗಳಿಗೆ ಹೆಸರಿಡುತ್ತೇವೆ. ಇದು ಯಾರು … Read more

“ಕುಮಾರ” ಹೆಸರಿನ ದೊಡ್ಡ ಮನಸಿನವರು…..”: ಅಮರದೀಪ್

ಬಹುಶ: ನಾನಿದ್ದ ಗೊಂದಲದ ದಿನಗಳಲ್ಲಿ ಇವರಿಬ್ಬರ ಪರಿಚಯ ಸ್ನೇಹವಾಗದಿದ್ದರೆ ಇನ್ನಷ್ಟು ಗೊಂದಲಕ್ಕೆ ಬೀಳುತ್ತಿದ್ದೆನೇನೋ. 1998ರಲ್ಲಿ ವರ್ಗಾವಣೆಗೊಂಡು ನಾನಿದ್ದ ಕಛೇರಿಗೆ ಬಂದವರೊಬ್ಬರು ವಿಹಾರ್ ಕುಮಾರ್. ಎ. ಅಂತ. ಇನಿಷಿಯಲ್ “ಎ” ಅಂದರೆ ಏನೆಂದು ನನಗೂ ಗೊತ್ತಿರಲಿಲ್ಲ. ನಂತರ ತಿಳಿದದ್ದು, ಎ ಅಂದರೆ ಆವುಲ ಅಂತ. ತೆಲುಗಿನಲ್ಲಿ ಆವುಲ ಅಂದರೆ ಆಕಳಂತೆ. ಥೇಟ್ ಆಕಳಂತೆಯೇ ಸ್ವಭಾವದ ವ್ಯಕ್ತಿ ಅವರು. ಬಂದ ಕೆಲವೇ ದಿನಗಳಲ್ಲಿ ನನಗೆ ತುಂಬಾ ಹಳೆಯ ಸ್ನೇಹಿತರಂತಾದರು. ನೋಡಿದರೆ ನನಗೂ ಅವರಿಗೂ ಇಪ್ಪತ್ತೆರಡು ವರ್ಷಗಳ ಅಂತರದ ವಯಸ್ಸು. ಆದರೆ, … Read more

ಕೌದಿ ಕಥೆಗಳು: ಗಂಗಮ್ಮ ಮಂಡಿಗೇರಿ

ರಾಕೇಶ್ ಎಂಬ ಬಾಲಕಿ ತನ್ನ ತಂದೆ ತಾಯಿ ಜೊತೆ ಬಡ ಜೀವನವನ್ನು ನಡೆಸುತ್ತಿದ್ದ. ತಂದೆ ಹೆಸರು ಸುರೇಶ ಮತ್ತು ತಾಯಿ ಸುಮಾ. ಚಿಕ್ಕವನಿದ್ದಾಗ ತಂದೆ-ತಾಯಿ ಎಲ್ಲಾ ಕೊಟ್ಟು ಚೆನ್ನಾಗಿ ನೋಡಿಕೊಳ್ಳುತ್ತಿದ್ದರು ಆರೋಗ್ಯವಂತನಾಗಿ ಬೆಳೆದ ಆದರೆ ಅವನಲ್ಲಿ ಯಾವುದೇ ಕೌಶಲ ವಾಗಲಿ ಕಲೆಯಾಗಲಿ ಬರಲಿಲ್ಲ ರಾಕೇಶ ಸೋಮಾರಿಯಾಗಿ ಬೆಳೆಯುವುದನ್ನು ಕಂಡು ತಂದೆ ತಾಯಿಯು ಮನೆಯಲ್ಲೇ ಉಳಿಸಿಕೊಂಡರು. ದಿನಕಳೆದಂತೆ ರಾಕೇಶನಿಗೆ ಬಡತನದ ಬೆಂಕಿ ತಗುಲಿತ್ತು. ಅವನಿಗೆ ಹೊಟ್ಟೆಬಟ್ಟೆಯ ಚಿಂತೆ ಶುರುವಾಯಿತು ಆದರೂ ಅವನು ಊರಿನಲ್ಲಿ ಸೋಮಾರಿಯಾಗಿ ಓಡಾಡುತ್ತಾ ತಿರುಗಾಡುತ್ತಾ ಸಮಯವನ್ನು … Read more

ಪಂಜು ಕಾವ್ಯಧಾರೆ

ಬಡಿತದ ಭಾವ ಅಲೆಗಳು ಎನ್ನೆದೆಯಾಳದಲ್ಲಿ ಜನ್ಮಿಸಿದನೂರಾರು ಬಡಿತದ ಭಾವಗಳುಧರೆಯ ಮಡಿಲಲ್ಲಿ ಚಿಗುರಿದಂತೆಹೊಸ ಹೊಸ ತುಡಿತದ ಕನಸುಗಳುಒಮ್ಮೊಮ್ಮೆ ಕುಸುಮವಾಗಿ ಅರಳಿಮತ್ತೊಮ್ಮೆ ಕಮರಿದ ಕ್ಷಣಗಳು ಒಮ್ಮೊಮ್ಮೆ ಯಾರನ್ನು ಹಂಬಲಿಸಿಅವರಿಗಾಗಿ ನವಜೀವನ ಬಯಸಿಒಲವಿನ ಚೆಲುವಿನ ಕನಸುಗಳು ಮೂಡಿಸಿಮೌನ ನಲಿಯುತ್ತಾ ಹೂವಂತೆ ಅರಳಿದರೆಮತ್ತೊಮ್ಮೆ ಮುಳ್ಳುಗಳಿಂದ ಹೃದಯಪರಚಿಸುಮ್ಮನೆ ಕುಳಿತಂತಾಗುವುದು ಅದು ಕುಂತಲ್ಲಿ ಚಿಂತಿಸುವುದುನನ್ನ ಭವ್ಯಭವಿಷ್ಯದ ಬಗ್ಗೆಒಮ್ಮೊಮ್ಮೆ ಪರದಾಡುವುದುಪಾರಿವಾಹಕ ಸೆಳೆತದ ಬಗ್ಗೆಮತ್ತೊಮ್ಮೆ ಉಗ್ರವಾಗದೆ ಅರಿವುದುಗೋಮುಖ ವ್ಯಾಘ್ರ ದ ಮಾನವರ ಬಗ್ಗೆ ಒಮ್ಮೊಮ್ಮೆ ನನ್ನದೆಯ ಅರಗಿಳಿಯುಸುಮಧುರ ಅಕ್ಷರಗಳನ್ನು ಪೋಣಿಸಿಮಾತಿನ ಮುತ್ತಿನ ಹೊಳೆ ಸುರಿಸಿದರೆಮತ್ತೊಮ್ಮೆ ಮಾಗಿಯ ಕೋಗಿಲೆಯಂತೆಮೂಕಭಾವವನ್ನು ಆವರಿಸಿಕೊಂಡುಅಕ್ಷರಗಳೋತ್ಪತ್ತಿಯನ್ನು … Read more

ಶಿಶು ಗೀತೆ: ನಾಗರಾಜನಾಯಕ ಡಿ.ಡೊಳ್ಳಿನ, ಪರಮೇಶ್ವರಪ್ಪ ಕುದರಿ

ಕತ್ರಿ ಪತ್ರಿ ಛತ್ರಿ ಪುಟ್ಟ ದಿನಾಲು ಓದುವುದು ಖಾತ್ರಿಪೂಜಿಸುವನು ದೇವರಿಗೆ ಎರಿಸಿ ಪತ್ರಿಮಳೆ ಬಂದಾಗ ತರುವನು ಛತ್ರಿ ಪರೀಕ್ಷೆ ಅಂಕಗಳಿಗೆ ಬಿದ್ದರೆ ಕತ್ರಿಅಪ್ಪ ಬಯ್ಯುವುದು ಖಾತ್ರಿಅವ್ವನು ಸಿಟ್ಟಾಗ್ತಾಳೇ ಗೊತ್ರಿ ಅಂದಿನದ ಅಂದಿಗೆ ಓದುವನು ರಾತ್ರಿಅಂಕಗಳು ಹೆಚ್ಚುವುದು ಖಾತ್ರಿಬಾಯಿಗೆ ಹಾಕ್ತಾರೆ ಮೈಸೂರ ಪಾಕ್ ರೀ .. -ನಾಗರಾಜನಾಯಕ ಡಿ.ಡೊಳ್ಳಿನ ಇಷ್ಟ – ಕಷ್ಟ ಸ್ನಾನವ ಮಾಡಲುಬಲು ಇಷ್ಟಬಿಸಿ – ಬಿಸಿ ನೀರಾದರೆಬಲು ಕಷ್ಟ! ಪಾಠವ ಓದಲುಬಲು ಇಷ್ಟಲೆಕ್ಕವ ಮಾಡಲುಬಲು ಕಷ್ಟ! ಮೊಬೈಲ್ ಗೇಮುಬಲು ಇಷ್ಟಕಬಡ್ಡಿ ಖೊ – ಖೋಬಲು … Read more

ಅಮ್ಮಾ ಎಂದರೆ ಏನೋ ಹರುಷವು: ಶಿವಲೀಲಾ ಹುಣಸಗಿ ಯಲ್ಲಾಪುರ

ಸೀರೆಯಂಚ ಹಿಡಿದು ತಪ್ಪೆಗಾಲ ಹಾಕಿ ಸೀರೆಯ ತೊಡರಿಸಿ ಕೊಂಡು ಬಿದ್ದಾಗ ಅಮ್ಮಾ‌ ಎಂದಾಗ ಗಾಬರಿಗೊಂಡು‌ ಜೋರಾಗಿ ಅಳುವ ನನ್ನ ಎತ್ತಿಕೊಂಡು ಎದೆಗಪ್ಪಿಕೊಂಡು ಪೆಟ್ಟಾಯಿತಾ ಮುದ್ದು ಎಂದು ಮುತ್ತಿಡುತ್ತ, ಬಿದ್ದ ಜಾಗವನ್ನೊಮ್ಮೆ ಇನ್ನೊಮ್ಮೆ ಬಡಿದು ಕಣ್ಣೀರು ಒರೆಸುತ್ತ ಎದೆಗವುಚಿ ಎದೆಹಾಲುಣಿಸುವಾಗ ಎಲ್ಲಿಲ್ಲದ ಸಂತಸ. ಅಮ್ಮನಿಗೆ ಅತ್ತು ಕರೆದು ಯಾಮಾರಿಸಿ ಹಾಲು ಕುಡಿವ ಕಾಯಕ ನನಗೆ ಹೊಸದಲ್ಲ. ಐದು ವರುಷ ಕಳೆದರೂ ಅಮ್ಮ ಒಮ್ಮೆಯು ಗದರಿಸಿಲ್ಲ. ಹಾಲುಣಿಸುವುದ ಬಿಟ್ಟಿಲ್ಲ. ಶಾಲೆಗೆ ಹೋಗುವಾಗ ಪುಟ್ಟ ಕಿರುಬೆರಳ ತೋರಿಸುತ್ತ ಪ್ರೀತಿ ಬರುವಷ್ಟು ಮುದ್ದು … Read more