ಅವರು ನಮ್ಮ ತಾಯಿ ಸಾರ್ !!!!!!: ನಾಗಸಿಂಹ ಜಿ ರಾವ್

ಕೆಲವೊಮ್ಮೆ ನಮಗಾಗುವ ಮುಜುಗರವನ್ನು ಪದಗಳಲ್ಲಿ ವಿವರಿಸಲು ಅಸಾಧ್ಯ. ಅಂತಹ ಸಂದರ್ಭದಲ್ಲಿ ಹೇಗೆ ಪ್ರತಿಕ್ರಿಯೆ ನೀಡಬೇಕು ಅನ್ನುವುದೂ ಕಲ್ಪನೆಗೆ ಮೀರಿದ ಸಂವಹನಾ ಸಾಮರ್ಥ್ಯ. ಇಂತಹ ಒಂದು ಪ್ರಸಂಗ ನಾನು ಎದುರಿಸಿದೆ. ಆ ಪ್ರಸಂಗವನ್ನು ಸಮರ್ಥವಾಗಿ ನಿಭಾಯಿಸಲಿಲ್ಲ ಎಂಬುದು ನನ್ನ ಅನಿಸಿಕೆ. ನನ್ನ ಹುಟ್ಟೂರು ಹಾಸನದ ಬಾಲಕರ ಬಾಲಭವನದಿಂದ ನನಗೊಂದು ಅಹ್ವಾನ ಬಂದಿತ್ತು, ಆ ಬಾಲಕರ ಬಾಲಭವನದ ಸಿಬ್ಬಂದಿಗಳಿಗೆ ಮತ್ತು ಮಕ್ಕಳಿಗೆ ಮಕ್ಕಳ ಹಕ್ಕುಗಳು ಮತ್ತು ಮಕ್ಕಳ ರಕ್ಷಣೆಯ ಬಗ್ಗೆ ಮಾಹಿತಿ ನೀಡಿ ಅಲ್ಲಿ ಮಕ್ಕಳ ರಕ್ಷಣಾ ನಿಯಮಗಳನ್ನು ಸಿದ್ಧಪಡಿಸಲು … Read more

ಬದುಕಿಗೆ ಗುರಿ – ಗುರುವಿನ ಸಾಂಗತ್ಯವಿರಲಿ: ಮಧು ಕಾರಗಿ, ಕೆರವಡಿ

ತಮ್ಮ ಮಕ್ಕಳು ವಿದ್ಯಾವಂತರಾಗಲಿ ಎನ್ನುವುದು ಪ್ರತಿ ತಂದೆತಾಯಿಯ ಮನದಾಳದ ಮಾತು ಹಾಗೆಯೇ ಅವರು ಎಷ್ಟೋ ಕನಸುಗಳನ್ನು ಕಟ್ಟಿಕೊಂಡಿರುತ್ತಾರೆ .ತಮಗೆ ಬಡತನವಿದ್ದರೂ ಕೂಲಿ ಮಾಡಿ ದುಡಿದು ಮಕ್ಕಳನ್ನು ಓದಿಸುವ ಎಷ್ಟೋ ತಂದೆ ತಾಯಂದಿರಿದ್ದಾರೆ . ಇಂದಿನ ತಂತ್ರಜ್ಞಾನದ ದಿನಮಾನದಲ್ಲಿ ಅಶಿಕ್ಷಿತನೊಬ್ಬ ಬದುಕು ನಡೆಸುವುದು ಕಷ್ಟಸಾಧ್ಯ ಆದ್ದರಿಂದಲೇ ಶಿಕ್ಷಣ ಬದುಕಿನ ಅವಿಭಾಜ್ಯ ಅಂಗವಾಗಿದೆ” ಜೀವನವೇ ಶಿಕ್ಷಣ ; ಶಿಕ್ಷಣವೇ ಜೀವನ ” ಎಂದು ಮಹಾತ್ಮ ಗಾಂಧೀಜಿಯವರು ಹೇಳಿದ್ದಾರೆ . ಬಾಲ್ಯದಲ್ಲಿ ದೊಡ್ಡವರು ಯಾರಾದರೂ ನೀನು ದೊಡ್ಡವನಾ/ಳಾದರೆ ಮುಂದೆ ಏನಾಗಬಯಸುತ್ತಿ ಎಂದು … Read more

“ಶಿಕ್ಷಕರು ವಿದ್ಯಾರ್ಥಿಗಳ ಭವಿಷ್ಯವನ್ನು ರೂಪಿಸುವ ಶಿಲ್ಪಿಗಳು”: ಅಪೇಕ್ಷಾ ಎಂ ಎಸ್

ಇಂದಿನ ಕಾಲದಲ್ಲಿ ವಿದ್ಯಾರ್ಥಿಗಳ ಜೀವನವು ತಂತ್ರಜ್ಞಾನ, ಸ್ಪರ್ಧೆ ಮತ್ತು ಹೊಸ ಆಲೋಚನೆಗಳ ನಡುವೆ ಸಾಗುತ್ತಿದೆ. ಮೊಬೈಲ್, ಇಂಟರ್ನೆಟ್ ಮತ್ತು ಸಾಮಾಜಿಕ ಜಾಲತಾಣಗಳು ವಿದ್ಯಾರ್ಥಿಗಳ ದಿನನಿತ್ಯದ ಬದುಕಿನ ಒಂದು ಭಾಗವಾಗಿವೆ. ಆದರೆ ಇವುಗಳ ನಡುವೆಯೂ ಉತ್ತಮ ಮಾರ್ಗದರ್ಶನದ ಅಗತ್ಯತೆ ಹೆಚ್ಚಾಗಿದೆ. ಇದೇ ಸಂದರ್ಭದಲ್ಲಿ ಶಿಕ್ಷಕರ ಪಾತ್ರ ಅತ್ಯಂತ ಮಹತ್ವದ್ದಾಗಿದೆ. ಶಿಕ್ಷಕರು ಕೇವಲ ಪಾಠ ಹೇಳುವವರಲ್ಲ, ಬದಲಾಗಿ ವಿದ್ಯಾರ್ಥಿಗಳಿಗೆ ಪ್ರೇರಣೆಯಾಗುವವರು, ದಾರಿದೀಪವಾಗುವವರು. ಅವರು ಜ್ಞಾನ ಮಾತ್ರ ನೀಡುವುದಲ್ಲದೇ ಜೀವನ ಮೌಲ್ಯಗಳನ್ನು ಬೋಧಿಸುತ್ತಾರೆ. ಶ್ರದ್ಧೆ, ಶಿಸ್ತು, ಪರಿಶ್ರಮ ಮತ್ತು ಮಾನವೀಯತೆ ಎಂಬ … Read more

ಗುರುವಂದನೆ: ಚಂದಕಚರ್ಲ ರಮೇಶ ಬಾಬು

| ಗುರುಃ ಬ್ರಹ್ಮ ಗುರುಃ ವಿಷ್ಣುಃ ಗುರುಃ ದೇವೋ ಮಹೇಶ್ವರಃ|ಗುರುಃ ಸಾಕ್ಷಾತ್ ಪರಬ್ರಹ್ಮ ತಸ್ಮೈ ಶ್ರೀ ಗುರವೇ ನಮಃ || ವೇದಕಾಲದಿಂದಲೂ ನಮ್ಮ ಭಾರತದಲ್ಲಿ ಗುರು ಶಿಷ್ಯ ಪರಂಪರೆಯಿಂದಲೇ ವಿದ್ಯೆಯ ಕಲಿಕೆ ಸಾಗಿ ಬಂದಿದೆ. ತನ್ನ ಅರಿವಿಗೆ ಬಂದದ್ದನ್ನೆಲ್ಲವನ್ನೂ ಶಿಷ್ಯನಿಗೆ ಧಾರೆ ಎರೆಯುವ ಗುರು, ಗುರುವಿಗೆ ತನ್ನ ತನು ಮನಗಳಿಂದ ಸೇವೆ ಮಾಡಿ ಅವರ ಜ್ಞಾನವನ್ನು ತಾನು ಪಡೆದು ಮುಂದೆ ತಾನೊಬ್ಬ ಶ್ರೇಷ್ಠ ಗುರುವಾಗಿ ತನ್ನ ಶಿಷ್ಯರಿಗೆ ಜ್ಞಾನ ಹಂಚುವುದು ಇದು ಪರಂಪರೆ. ಇದೇ ರೀತಿಯಲ್ಲಿ ಪ್ರಾಚೀನ … Read more

ಬಂಡಾಯ ಚಿಂತನೆಯ ಒಂದು ಕೃತಿ – “ಹಕೀಮನೊಬ್ಬನ ತಕರಾರು”: ನಾರಾಯಣಸ್ವಾಮಿ ವಿ (ನಾನಿ)

ಹಿಂದಿನ ಕಾಲದ ಕನ್ನಡ ಸಾಹಿತ್ಯದಲ್ಲಿ ಅಂದರೆ ದಾಸ ಸಾಹಿತ್ಯ, ವಚನ ಸಾಹಿತ್ಯ ಪ್ರಾರಂಭವಾದಾಗ ಬಂಡಾಯದ ಸಾಲುಗಳು ಪ್ರಾರಂಭವಾದರೂ ಕೂಡ ಎಂಭತ್ತರ ದಶಕದಲ್ಲಿ ಬಂಡಾಯ ಸಾಹಿತ್ಯ ಉಚ್ಛ್ರಾಯ ಸ್ಥಿತಿಗೆ ಬಂತು ಅಂತಲೇ ಹೇಳಬಹುದು. ಅಂದಿನ ಕಾಲದಲ್ಲಿ ನೆಲೆಯೂರಿನಿಂತಿದ್ದ ಅಸ್ಪೃಶ್ಯತೆ, ಸಮಾನತೆ, ಶೋಷಣೆ ಮುಂತಾದ ವಿಷಯಗಳ ಬಗ್ಗೆ ವಿರೋಧಿಸುತ್ತಾ, ಅನ್ಯಾಯದ ವಿರುದ್ಧ ಲೇಖಕರು ತಮ್ಮ ಬರವಣಿಗೆಯ ಮೂಲಕ ಸಮಾಜದ ಮತ್ತು ಸರ್ಕಾರದ ವಿರುದ್ದ ಹೋರಾಡುವ ಬರಹದ ಮೂಲಕ ಜನರ ಮನೋಭಾವವನ್ನು ತಿದ್ದಲು ಪ್ರಯತ್ನ ಪಡುತ್ತಿದ್ದರು. ಅದರೆ ಇವತ್ತಿನ ದಿನಗಳಲ್ಲಿ ಕನ್ನಡ … Read more

“ಶಿಕ್ಷಕರು ಮತ್ತು ವಿದ್ಯಾರ್ಥಿಗಳಿಬ್ಬರು ಸಾಧನೆಯ ಬಿಂಬ-ಪ್ರತಿಬಿಂಬ”: ಚಂದನ ಮಲ್ಲಿಕಾರ್ಜುನ್

ಕಲಿಯುಗದಲ್ಲಿ ವಿದ್ಯಾರ್ಥಿಗಳು ಗುರು-ಶಿಷ್ಯರ ಸಂಬಂಧ ಕೇವಲ ಪುಸ್ತಕದಲ್ಲಿ ಇರುವುದನ್ನು ಬೋಧಿಸುವ ತನಕ ಎಂದು ಭಾವಿಸಿದ್ದಾರೆ. ಆದರೆ ಗುರುಗಳಕ ತಮ್ಮ ವಿದ್ಯಾರ್ಥಿಗಳಲ್ಲಿ ಇಟ್ಟಿರುವ ಪ್ರೀತಿ, ವಿಶ್ವಾಸ ಯಾವುದಕ್ಕೂ ಸಮನಾಗಿರುವುದಿಲ್ಲ. ಶಿಕ್ಷಕರು ಹೇಳುವ ಒಂದು ಸಾಲಿನ ಅರ್ಥ ಮೇಲ್ನೋಟಕ್ಕೆ ಸಾಮಾನ್ಯವಾಗಿರಬಹುದು. ಆದರೆ ಅದರಲ್ಲಿ ನಿಗೂಢ ಅರ್ಥವನ್ನು ತಿಳಿದುಕೊಳ್ಳುವುದು ವಿದ್ಯಾರ್ಥಿಗಳ ಕೈಯಲ್ಲಿರುತ್ತದೆ. ಇದನ್ನು ಅರ್ಥಮಾಡಿಕೊಂಡ ವಿದ್ಯಾರ್ಥಿಗಳ ಜೀವನವು ಕಾಮನ ಬಿಲ್ಲಿನಂತೆ ಸುಂದರವಾಗಿರುತ್ತದೆ. ವಿದ್ಯಾರ್ಥಿಗಳ ಜೀವನವು ಒಂದು ಸುಂದರವಾದ ಬಿಳಿಯ ಹಾಳೆಯ ರೀತಿ. ಅದರ ಮೇಲೆ ಸಣ್ಣ ಕಪ್ಪುಚುಕ್ಕೆ ಬಿದ್ದರು ಅವರ ತಂದೆ … Read more

ಮಕ್ಕಳ ಕವಿತೆಗಳು

ಶ್ರೀ ಗುರುವೇ ಗುರುವೇ ನಿಮಗೆ ನಮನನಿಮ್ಮಿಂದಲೇ ಪಡೆದೆವು ಜ್ಞಾನಜ್ಞಾನದ ದೀಪವನು ಹಚ್ಚಿದಿರಿಅಂಧಕಾರವ ದೂರ ಸರಿಸಿದಿರಿ. ನಿಮ್ಮ ಮಾತುಗಳು ಕೇಳಲುನಮ್ಮಿಂದ ತಪ್ಪುಗಳಾಗದುಕೀಟಲೆ, ಕಿತಾಪತಿಗಳೆಂದಿಗೂನಮ್ಮಿಂದ ಎಂದೆಂದಿಗಾಗದು‌. ತಿಳಿದೋ ತಿಳಿಯದೆಯೋನೋವುಂಟು ಮಾಡಿದ್ದರೆ ನಾವುಕೈಮುಗಿದು, ಶಿರಬಾಗಿ ನಿಮಗೆಕ್ಷಮೆಯ ಕೇಳುವೆವು ನಾವು. ನೀವು ನೀಡಿದ ಶಿಕ್ಷಣವುನಮ್ಮೆಲ್ಲರ ಬದುಕಿಗೆ ಉಸಿರುಪ್ರತಿಕ್ಷಣವೂ ಮರೆಯದೇಸ್ಮರಿಸುವೆವು ನಿಮ್ಮ ಹೆಸರು. ಅಭಿನಂದನಾ ಕೆ ಎಂ ಗೆಲ್ಲುವಿರಿ ನಿಮ್ಮ ದಿನಗಳುಚಲಿಸುತ್ತಿವೆ ಬೇಗಅದಕ್ಕಾಗಿ ಸತತವಿರಲಿನಿಮ್ಮ ಶ್ರಮದ ವೇಗ. ಜೀವನದಲ್ಲಿ ಒಂದೇ ಸಾರಿಬಂದೇ ಬರುತ್ತದೆ ಯೋಗಆಗ ನಿಮಗೆ ಸಮಾಜದಲ್ಲಿಸಿಗುವುದು ಉನ್ನತ ಜಾಗ. ನಿಮ್ಮ ಗುರಿಯೆಂದಿಗೂದೊಡ್ಡ ದೊಡ್ಡದಾಗಿರಲಿಗುರಿ … Read more

ವೃದ್ಧೋಪನಿಷತ್ (6-10): ಡಾ ರಾಜೇಶ್ವರಿ ದಿವಾಕರ್ಲ

6. ವಯಸ್ಸು ಮರಳಿದ ಹಾಡುದಿಗಂತ ರೇಖೆಸ್ವಲ್ಪ ಮಂಜಾಗುತ್ತದೆ.ವರ್ಷಗಳುಎಲೆಗಳಂತೆ ಉದುರೋಗುತ್ತಲಿವೆ.ಸ್ನೇಹಿತರು ಸಾಯುತ್ತಾಸ್ಮೃತಿ ನಕ್ಷತ್ರಗಳಾಗುತ್ತಾರೆದೃಶ್ಯ ಗಳಿಗೆಫ್ರೆಮುಗಳು ಅಮರುತ್ತವೆಲೋಕಮಾರ್ಪಾಡಾಗುತ್ತಲಿದೆಎಂದು ಆರ್ಥವಾಗಿದೆ. ನಮ್ಮ ಮಾತುಗಳಿಗೆಬೇಕಾಗಿರುವ ಉತ್ತರಗಳು ಬರಲ್ಲ.ನಮ್ಮ ಮಾತುಗಳಲ್ಲಿ ಕೆಲವುಚಲಾವಣೆ ಯಾಗದ ನಾಣ್ಯ ಗಳಾಗುತ್ತವೆ. ವಯಸ್ಸು ಮರಳಿದೆ ಶರೀರ ಗಳಿಗೆಪ್ರಾಧಾನ್ಯತೆಗಳು ಅದಲು ಬದಲಾಗುತ್ತವೆ.ಜೀವನ ಮರಣಗಳ ನಡುವೆ ಸ್ಪಷ್ಟವಾದರೇಖೆ ಗಳು ಚೆದರಿಹೋಗುತ್ತವೆ. ದೇಶಗಳ ಗಡಿ ಗಳುಬದಲಾಗುತ್ತವೆಕ್ರಾಂತಿ ಗೆಹೊಸ ಆವಶ್ಯಕತೆ ಗಳುಂಟಾಗುತ್ತವೆ. ಕೆಲವುಸಲ ಸೂರ್ಯನುಸುಸ್ತಾಗಿ ಉದಯಿಸುವುದೇ ಗೊತ್ತಾಗುವುದಿಲ್ಲಆಗ ಬದಲಾವಣೆ ಎಂದರೆಪುರೋಗಮನದ ಪ್ರತೀಕ್ಷೆ.ಈಗ ಬದಲಾವಣೆ ಎಂದರೆಭಯವಾಗುತ್ತದೆ. ಯಾರನ್ನೊಕರೆಯುತ್ತೀವಿವಾಸ್ತವವಾಗಿ ಯಾರನ್ನುಕರಿಯುವುದೋ ತಿಳಿಯದು.ವಯಸ್ಸು ಮೇಲೆ ಬೀಳುತ್ತಲಿದೆಆಕಾಶದಲ್ಲಿ ಮೋಡಗಳು ಹಮ್ಮುಕೊಳ್ಳುತ್ತಲಿವೆ. 7. … Read more

ಎರಡು ತೆಲುಗು ಕವಿತೆಗಳ ಅನುವಾದ

ಕದ ತೆರೆಯಿರಿ ಗಾಳಿಗೆ ಆಹ್ವಾನವಿರಲಿ, ಬೆಳಕಿಗೆ ಪ್ರವೇಶವಿರಲಿ,ಸೆರೆಹಿಡಿದ ಮನದಿ, ಬರಿದೆ ಗತದ ನೆನಪಲಿ,ಕತ್ತಲೆಯ ಗವಿಯಲಿ ಸುಮ್ಮನೆ ಅಲೆಯದಿರಿ.ನೆನಪಿಸಿಕೊಳ್ಳಿ ಬಂದ ದಾರಿಯ ಪಯಣವನು,ಎಲ್ಲ ಭಾವಗಳ ಬಿಡುಗಡೆ ಮಾಡಿ,ಯಾವುದೇ ದ್ವಾರದಿಂದ ಜಾರಿಹೋಗದಿರಿ. ನಿಮ್ಮ ಸತ್ವ ಜಗಕೆ ಕಾಣಲಿ, ಕಿಟಕಿ-ಬಾಗಿಲು ತೆರೆಯಿರಿ,ಬರುವವರು ಬರಲಿ, ಹೋಗುವವರು ಸಾಗಲಿ.ಮುಚ್ಚಿದ ಕಿಟಕಿಗಳ ಹಿಂದೆ ಅಡಗದಿರಿ ನೀವಿಂದು,ಅನಾದಿ ಕಾಲದ ಸ್ವಾತಂತ್ರ್ಯದ ಬೀಗಗಳ ಕಿತ್ತೊಗೆಯಿರಿ. ಮನದ ಕದವ ತೆರೆದಿಡಿ, ತೊಳೆಯಿರಿ ಕಲ್ಮಷಗಳನು,ಮುಖ್ಯದ್ವಾರಗಳು ಸದಾ ತೆರೆದಿರಲಿ ಪೂರ್ಣವಾಗಿ,ಯಾವುದನ್ನೂ ಕಳೆವ ಭಯದ ಭ್ರಮೆಯ ಬಿಡಿ.ಹೃದಯದ ಕೋಣೆಗಳಿಗೆ ಬೀಗ ಹಾಕುವುದು ಸಲ್ಲ, ಅರಿಯಿರಿ. … Read more

ಮಾಸಿದ ಪಟ: ಎಫ್.‌ ಎಂ. ನಂದಗಾವ

ಕ್ರಿಸ್ಮಸ್ ಬಂತಂದ್ರ ನನಗ ನಮ್ಮ ಮನ್ಯಾಗಿದ್ದ ಮಾಸಿದ ಪಟ ನೆನಪಾಗ್ತದ. ಸಣ್ಣಾಂವ ಇದ್ದಾಗ ನಾ ಮಾಡಿದ್ದ ಹಳವಂಡದ ಕೆಲಸ ನೆನಪಾಗಿ ಮನಸ್ಸ ಖಜೀಲ ಆಗ್ತದ. ನನಗ ತಿಳಿವಳಿಕಿ ಬಂದಾಗಿಂದಲೂ, ನಮ್ಮ ಮನೆಯ ದೇವರ ಪೀಠದಾಗ ಅಪ್ಪ ಜೋಸೆಫ್, ಅವ್ವ ಮರಿಯವ್ವ ಮತ್ತು ಬಾಲಯೇಸುಸ್ವಾಮಿ ಅವರ ಪವಿತ್ರ ಕುಟುಂಬದ ಚಿತ್ರಪಟದ ಜೋಡಿ ಒಬ್ಬರು ಸ್ವಾಮಿಗಳ ಚಿತ್ರಪಟಾನೂ ಐತಿ. ಕನ್ನಡ ಸಾಲಿ ಓದ ಮುಗಿಸಿ, ನಾನು ಪ್ಯಾಟಿಯೊಳಗಿನ ಹೈಸ್ಕೂಲ್ ಕಟ್ಟಿ ಏರಿದಾಗ ನನ್ನ ಸಹಪಾಠಿಗಳು ನಮ್ಮ ಮನಿಗೆ ಬಂದಾಗಲೆಲ್ಲಾ, `ಅದೇನೋ, … Read more

ಸಾಂಪ್ರದಾಯಿಕವಾಗಿ ಆಚರಿಸುವ ಪ್ರಾಣಿ ಸ್ಪರ್ಧೆಗಳು, ಪ್ರಾಣಿ ಹಿಂಸೆ ಹಾಗು ಪ್ರಾಣಿ ಕಲ್ಯಾಣದ ಅಗತ್ಯತೆ: ಡಾ. ಕಾವ್ಯ ವಿ.

ಜಲ್ಲಿಕಟ್ಟುಗುಮ್ಮೋಗೂಳಿಯ ಸ್ಪರ್ಧೆ ಹಾಗು ಬುಲ್ ಟೇಮಿಂಗ್ ಎಂದು ಕರೆಯಲ್ಪಡುವ ಜಲ್ಲಿಕಟ್ಟು, ಇದು ತೆಮಿಳುನಾಡಿನ ಸಾಂಪ್ರದಾಯಿಕ ಪೊಂಗಲ್ ಹಬ್ಬದ ಕ್ರೀಡೆಯಾಗಿದೆ. ಈ ಕ್ರೀಡೆಯಲ್ಲಿ ಕಂಗಾಯಾಮ್ ತಳಿಯ ಗೂಳಿಯನ್ನು ಸ್ಪರ್ಧೆಯ ಗುಂಪಿನಲ್ಲಿ ಬಿಡಲಾಗುತ್ತದೆ ಹಾಗು ಓಡುವ ಗೂಳಿಯನ್ನು ನಿಲ್ಲಿಸಲು ಸ್ಪರ್ಧಾಳುಗಳು ಗೂಳಿಯ ಗೂನನ್ನು ಹಿಡಿದುಕೊಳ್ಳಲು ಪ್ರಯತ್ನಿಸುತ್ತಾರೆ. ಇದರ ಜೊತೆಗೆ ಗೂಳಿಯ ಕೊಂಬಿಗೆ ಕಟ್ಟಿದ ಬಾವುಟವನ್ನು ಹಿಡಿದು ಅಂತಿಮ ಗುರಿಯನ್ನು ತಲುಪಬೇಕಿರುತ್ತದೆ. ಕಂಬಳಇದು ದಕ್ಷಿಣ ಕರ್ನಾಟಕದ ತುಳುನಾಡಿನ ಒಂದು ಸಾಂಪ್ರದಾಯಿಕ ಆಟವಾಗಿದ್ದು, ಇದರಲ್ಲ್ಲಿ ದಷ್ಟ ಪುಷ್ಟವಾಗಿ ಸಾಕಿರುವ ಕೋಣಗಳನ್ನು ಕೆಸರು ಭತ್ತದ … Read more

ವೃದ್ಧೋಪನಿಷತ್ (೧-೫): ಡಾ ರಾಜೇಶ್ವರಿ ದಿವಾಕರ್ಲ

ತೆಲುಗು ಮೂಲ: ಡಾ ಎನ್ ಗೊಪಿ ರವರ ವೃದ್ಧೋ ಪನಿಷತ್ ಕನ್ನಡ ಅನುವಾದ: ಡಾ ರಾಜೇಶ್ವರಿ ದಿವಾಕರ್ಲ 1. ವೃದ್ಧನು ವೃದ್ಧನೆಂದರೆಮುದುಕ ನೆಂದಲ್ಲವೃದ್ಧಿಹೊಂದಿದವನೆಂದರ್ಥಅಂತಹ ವೃದ್ಧಿಕಾಲದ ಪುರೋಗಮನದಲಿ ಮಾತ್ರವೆ ಅಲ್ಲ,ಅನುಭವದ ಪರಿಣತಿ ಯಲ್ಲಿಯೂ ಸಹವಯಸು ಕಳೆದಿರುವುದರಲಿ ಮಾತ್ರ ವಲ್ಲಮನಸು ಬೆಳೆದಿರುವುದುರಲ್ಲಿಯೂ ಸಹ,ಶಿಥಿಲವಾಗಿತ್ತಿರುವುದು ಶರೀರವೇ !ಆದರೆಅದು ಸಾಧಿಸಿದ್ದುಕಡಿಮೆಯೇನೂ ಅಲ್ಲ,ಗಿಡ ಹೊಂದಿದಸಾಫಲ್ಯ ವಂತಹುದೇ ಇದೂ ಸಹ.ಇದೊಂದು ಜ್ಞಾನದ ಕುಂಡ.ಜೀವನ ಬಿಗಿಹಿಡಿದ ತತ್ವವೃದ್ಧಾಪ್ಯ ವೆಂದರೆಪೊದೆತುಂಬಿದಅರಣ್ಯ ಯಾನದಲ್ಲಿಹಸಿರು ಹಾದಿಗಳನ್ನುಕೆತ್ತಿದ ಕಂಕಣ ಬದ್ದರುಸಂಸಾರ ಮಹಾ ಸಾಗರದಲ್ಲಿನೆಂದ ಮಮತೆಯ ಮುದ್ದೆಗಳು.ಜೀವನದ ವೇದಿಕೆಯಲ್ಲಿತಂದೆ ತಾಯಿತಾತ, ಗುರುಗಳ ಪಾತ್ರಗಳನ್ನೂನಿರ್ವಹಿಸಿದ ಸಿದ್ಧರುಈದಿನ … Read more

ನಿರ್ಲಿಪ್ತತೆಯಲ್ಲಿ ಹರಿದುಬಂದ ಜೀವಭಾವ “ಬೊಗಸೆ ನೀರು”: ಬಿ.ಕೆ.ಮೀನಾಕ್ಷಿ, ಮೈಸೂರು.

ಪತ್ರಕರ್ತನ ಸತ್ಯಕಥೆ: ಬೊಗಸೆ ನೀರುಲೇಖಕರು: ಅರುಣಕುಮಾರ ಹಬ್ಬುಪ್ರಕಾಶನ: ಸುದರ್ಶನ ಪ್ರಕಾಶನ, ಬೆಂಗಳೂರು. ಬೊಗಸೆ ನೀರನ್ನು ಹೀರಿ ಮುಗಿಸುವಷ್ಟರಲ್ಲಿ ಗಂಗೆಯಲ್ಲಿ ಮಿಂದು ಮಡಿಯಾದಂತಾಯಿತು. ಪದ ಕುಸಿಯೆ ನೆಲವಿಹುದು ಮಂಕುತಿಮ್ಮ ಎಂದು ಡಿವಿಜಿಯವರು ಹೇಳಿದಂತೆ ಪ್ರತಿಸಾರಿ ಮನುಷ್ಯ, ತನ್ನ ಚೈತನ್ಯವನ್ನು ಆತ್ಮಸ್ಥೈರ್ಯವನ್ನು ಕಳೆದುಕೊಂಡಾಗೆಲ್ಲ ಯಾವುದೋ ಒಂದು ದಿವ್ಯಶಕ್ತಿ ಆಸರೆಯಾಗಿ ಒದಗಿಬರುತ್ತದೆ ಎಂಬುದು ಸತ್ಯವಾದ ಮಾತು. ಬದುಕೆಂಬ ಕತ್ತಿಯಲಗಿನ ಮೇಲೆ ನಡೆಯುತ್ತಾ, ಜೀವನವನ್ನು ಸರಿದೂಗಿಸಲು ಸಮತೋಲನಗೊಳಿಸುತ್ತಾ, ಇಡೀ ಜೀವನವನ್ನೇ ಸವೆಸುವುದಿದೆಯಲ್ಲ ಅದಕ್ಕಿಂತ ದೌರ್ಭಾಗ್ಯ ಇನ್ನೊಂದಿಲ್ಲ. ಆದರೆ ಆ ದುರದೃಷ್ಟವನ್ನೇ ತನ್ನ ಪಾಲಿನ … Read more

ಈ ಪ್ರಶ್ನೆಗೆ ಉತ್ತರವೇನು?: ಕೊಡೀಹಳ್ಳಿ ಮುರಳೀ ಮೋಹನ್

ತೆಲುಗು ಮೂಲ: ಸಂಘಮಿತ್ರಕನ್ನಡ ಅನುವಾದ: ಕೊಡೀಹಳ್ಳಿ ಮುರಳೀ ಮೋಹನ್ ದೇರೆಬೈಲು ಐ.ಟಿ. ಹಿಲ್ಸ್, ಟವರ್ ನಂಬರ್ 4, ಹತ್ತನೇ ಮಹಡಿ.ವಿವಿಧ ಕ್ಷೇತ್ರಗಳ ವಿಶ್ವಪ್ರಸಿದ್ಧ ವಿಜ್ಞಾನಿಗಳು ಮತ್ತು ಹಲವಾರು ದೇಶಗಳ ಸರ್ಕಾರಿ ಪ್ರತಿನಿಧಿಗಳಿಂದ ತುಂಬಿರುವ ಸಭಾಂಗಣ. ಇನ್ನೆಷ್ಟು ಹೊತ್ತು? ಇನ್ನು ಐದೇ ನಿಮಿಷ. ಇಡೀ ಜಗತ್ತು ಕಾತರದಿಂದ ಕಾಯುತ್ತಿರುವ ಅದ್ಭುತ ಆವಿಷ್ಕಾರವೊಂದು ಅಲ್ಲಿ ಸಂಭವಿಸಲಿದೆ. ನೋಡುತ್ತಿದ್ದಂತೆ, ವೇದಿಕೆಯ ಮೇಲೆ ತಿಳಿನೀಲಿ ಬಣ್ಣದ ತೆಳುವಾದ ಮಂಜು ಆವರಿಸಿತು. ಕುತೂಹಲಕ್ಕೆ ತೆರೆ ಎಳೆದಂತೆ, ಡಾ. ವಾಣಿ ಅವರ ಐದು ವರ್ಷಗಳ ಕಠಿಣ … Read more

ಹಕ್ಕರಕಿಯೂ, ಸಮೀಕ್ಷೆಯೂ: ಎಫ್.‌ ಎಂ. ನಂದಗಾವ

ʻʻನಾವ್, ಹಕ್ಕರಕಿ ಮಾರೂದಿಲ್ಲರಿ ಸಾವಕಾರರ.ʼʼ ʻʻಯಾಕವ್ವ, ಹಕ್ಕರಕಿ ನೀವ್ಯಾಕ ಮಾರೂದಿಲ್ಲ?ʼʼ ʻʻನಿಮಗ ಕಾಯಿಪಲ್ಲೆ ಬೇಕಲಾ? ಮೆಂತೆ ಪಲ್ಲೆ ಬೇಕೋ? ಪುಂಡಿಪಲ್ಲೆ ಬೇಕೋ, ಸಬ್ಬಸಗಿ ಬೇಕೋ, ರಾಜಗಿರಿ ಬೇಕೋ ತಗೊಳ್ರಿ. ಕೋತಂಬ್ರಿ ಬೇಕಾತು ತಗೊಳ್ರಿ. ಬರಿ ಕರಿಬೇವು ಕೊಡಾಂಗಿಲ್ಲ ನೋಡ್ರಿ.ʼʼ ಸಂತೆ ಮೈದಾನದ ಒಳಗೆ ಎತ್ತರದ ಕಟ್ಟೆಗಳಲ್ಲಿನ ಒಂದು ಕಟ್ಟೆಯಲ್ಲಿ ಕುಳಿತು ಕಾಯಿಪಲ್ಲೆ ಮಾರುತ್ತಿದ್ದ ಸಾಂವತ್ರಕ್ಕ ಹೇಳಾಕ್ಹತ್ತಿದ್ದಳು. ಸಾಂವತ್ರಕ್ಕನ ಹಣಿ ಮ್ಯಾಲ ಮೂರು ಬೆರಳಿನ ವಿಭೂತಿ ಇದ್ದರ, ಕೊರಳಾಗ ತಾಳಿ ಜೋಡಿ ಬೋರಮಾಳ ಮತ್ತು ಅವಲಕ್ಕಿ ಸರಗಳು ಇದ್ದವು. … Read more

ವಾಸು ಸಿಕ್ಕಿದ್ದು…. !!!!: ನಾಗಸಿಂಹ ಜಿ ರಾವ್

ಸಿಂಹಾವಲೋಕನ 5 ಸಮುದಾಯದ ಪುಲಪೇಡಿ ನಾಟಕದ ತಾಲೀಮಿನ ಸಮಯದಲ್ಲಿ ಒಂದು ಘಟನೆ ನಡೆಯಿತು. ನಾನು ಲಿಂಗದೇವರು ಹಳೆಮನೆಯವರ ಜೊತೆ ನನ್ನ ಪಾತ್ರದ ಬಗ್ಗೆ ಮಾಹಿತಿ ಕೇಳುತ್ತಾ ನಿಂತಿದ್ದೆ. ಆಗ ನನಗಿಂತ ಸ್ವಲ್ಪ ದೊಡ್ಡ ಹುಡುಗ ಬಂದು ” ನೀವು ನಾಗಸಿಂಹ ಅಲ್ವ ?? ” ಎಂದು ಕೇಳಿದ, ನನಗೆ ಆಶ್ಚರ್ಯ, ಮೈಸೂರಿಗೆ ಬಂದು ಇನ್ನೂ ನಾಲ್ಕು ತಿಂಗಳು ಆಗಿಲ್ಲ ಯಾರಪ್ಪ ಇವರು ? ನನ್ನ ಹೆಸರು ಇವರಿಗೆ ಹೇಗೆ ಗೊತ್ತು? ಹೌದು ನಾನೆ ನಾಗಸಿಂಹ, ನೀವು ಯಾರು … Read more

ಅವಲಕ್ಕಿ ಎಂಬ ಮಹಾ ಪುರಾಣ: ಡಾ. ವೃಂದಾ ಸಂಗಮ್

ಅವಲಕ್ಕಿಗೆ ಒಂದು ಪುರಾಣ ಅದ. ಅದು ಭವಿಷ್ಯೋತ್ತರ ಪುರಾಣದೊಳಗ ಬರತದ. ನಾವೆಲ್ಲ, ಅವಲಕ್ಕಿ ಪವಲಕ್ಕಿ ಕಾಂಚಣ ಮಿಣಮಿಣ ಎಂಬ ಹಾಡನ್ನ ಮಕ್ಕಳಿದ್ದಾಗಲೇ ಹಾಡತಿದ್ವಿ. ಈಗೀಗ, ಅದಕ್ಕೂ ರಾಮಾಯಣಕ್ಕೂ ನಂಟು ಜೋಡಿಸಿದ್ದೂ ಕೇಳತೇವಿ. ಆದರ, ಅವಲಕ್ಕಿ ಪ್ರಾಚೀನತೆ ಬರೋದು ಮಹಾಭಾರತದಾಗ. ಮತ್ತ ಮುಂದ ಭಾಗವತ ಪುರಾಣದಾಗ, ಅಲ್ಲದ ಹರಿವಂಶದಾಗ. ಊಟಂದ್ರ ಊಟ ಅಲ್ಲ, ತಿಂಡಿ ಅಂದ್ರ ತಿಂಡಿ ಅಲ್ಲ, ಊಟನೂ ಹೌದು, ತಿಂಡಿನೂ ಹೌದು, ಬಹುರೂಪಿ, ನಾನ್ಯಾರು. ಅಂತ ಯಾರರೇ ಕೇಳಿದರ ಅದು ಅವಲಕ್ಕಿ ಅಂತ ಎಲ್ಲಾರಿಗೂ ಗೊತ್ತು. … Read more

ಸುನೀಲರ ತನಗಗಳು: ಬೊಗಸೆಯಲಿ ತುಂ ತುಂಬಿಕೊಂಡ ನದಿ ನೀರ ನೀರವತೆ !: ಡಾ. ಹೆಚ್ ಎನ್ ಮಂಜುರಾಜ್

ಶ್ರೀಯುತ ಸುನೀಲ್ ಹಳೆಯೂರು ಮೂಲತಃ ಸಾಹಿತ್ಯ ಸಹೃದಯಿ. ಬರೀ ಸಹೃದಯಿ ಮಾತ್ರವಲ್ಲ; ಸ್ವತಃ ಕವಿ, ವಿಮರ್ಶಕರು, ವ್ಯಾಖ್ಯಾನಕಾರರು, ಕನ್ನಡ ಪುಸ್ತಕಗಳನ್ನು ಓದಿಸುವ ಸದ್ದಿಲ್ಲದ ಸುದ್ದಿ ಬೇಡದ ಪ್ರಸಾರಕರು, ಬೆಂಗಳೂರಿನ ಕಾರ್ಪೊರೇಟ್ ಮತ್ತು ಕಾರ್ಪೊರೇಟ್ ಅಲ್ಲದ ಎರಡೂ ಕ್ಷೇತ್ರಗಳಲ್ಲೂ ತಮ್ಮದೇ ಆದ ಬರೆಹಗಾರತನದ ಛಾಪನ್ನೊತ್ತಿದವರು. ಆಕಾಶವಾಣಿ, ದೂರದರ್ಶನ, ಪತ್ರಿಕೆಗಳ ಆನ್‌ಲೈನ್ ವಾಹಿನಿಗಳಲ್ಲಿ ತಮ್ಮ ಕಗ್ಗದ ವ್ಯಾಖ್ಯಾನಗಳ ಮೂಲಕ ಮನೆ ಮಾತಾದವರು. ಗೀತ ರಚನಾಕಾರರು. ಮುಖ್ಯವಾಗಿ ತಮ್ಮ ಸಾಹಿತ್ಯ, ಸಂಸ್ಕೃತಿ ಮತ್ತು ಕನ್ನಡತನದ ಕೆಲಸಗಳಿಗೆ ಸಾಮಾಜಿಕ ಮತ್ತು ಸಾಮುದಾಯಿಕ ಆಯಾಮ … Read more

ವಿಭಾವರಿ (ಕೊನೆಯ ಭಾಗ): ವರದೇಂದ್ರ ಕೆ ಮಸ್ಕಿ

ಇತ್ತ ಅನುಪಮಾಳ ಅಳು ನೋಡಲಾಗದೆ ತೇಜಸ್ ಕೂಡ ಬಿಕ್ಕಿ ಬಿಕ್ಕಿ ಅಳಲು ಪ್ರಾರಂಭಿಸಿದ್ದಾನೆ. ಇದನ್ನು ಕಂಡ ವಿಭಾಳ ಮನಸಲ್ಲಿ ತಲ್ಲಣವಾಗುತ್ತಿದೆ. ನಾನು ತಪ್ಪು ಮಾಡಿದೆ, ಮತ್ತೆ ಮತ್ತೆ ತಪ್ಪೇ ಮಾಡುತ್ತಿದ್ದೇನೆ. ಅಂದು ತೇಜಸ್ನನ್ನು ಬಿಟ್ಟು ಹೋಗಿ ತಪ್ಪು ಮಾಡಿದೆ, ಈಗ ಮತ್ತೆ ಅವನೊಂದಿಗೆ ಬಂದು ಮತ್ತೆ ತಪ್ಪು ಮಾಡಿದ್ದೇನೆ. ಆದರೆ ತೇಜಸ್ನ ಜೊತೆ ಬರದೇ ವಿಧಿ ಇರಲಿಲ್ಲ.. ಈಗ ಏನು ಮಾಡಲಿ.. ಏನು ಮಾಡಲಿ.. ಎಂದು ಚಿಂತೆಯಲ್ಲಿ ಮುಳುಗಿದವಳನ್ನು ಅವಳ ಗೆಳತಿ ವೇದಶ್ರೀ ಬಂದು ಕರೆದುಕೊಂಡು ಹೋಗುತ್ತಾಳೆ. … Read more

ದಿಕ್ಕುಗಳು (ಭಾಗ 6): ಹಟ್ಟಿ ಸಾವಿತ್ರಿ ಪ್ರಭಾಕರಗೌಡ

ಅಜ್ಜಿಯ ಒತ್ತಾಯಕ್ಕೆ ಮಣಿದು ಅನುಶ್ರೀ ಒಂದೆರಡು ತುತ್ತು ತಿಂದಳು. ಇಷ್ಟು ದಿನ ಸತ್ತು ಹೋಗಿರುವ ತಾಯಿಯ ನೆನಪುಗಳು ಬಾಧಿಸುತ್ತಿದ್ದರೂ ತಂದೆ ಇರುವನಲ್ಲ ಅಂತ ಧೈರ್ಯದಿಂದ ಇರಲು ಯತ್ನಿಸುತ್ತಿದ್ದವಳಿಗೆ ತಂದೆ ಇದ್ದೂ ಇಲ್ಲದಂತಾದ ಎಂಬ ಸತ್ಯವನ್ನು ಅರಗಿಸಿಕೊಳ್ಳಲಾಗದೇ ಉಣ್ಣುತ್ತಿದ್ದ ತುತ್ತು ನೆತ್ತಿಗೆ ಹತ್ತಿ ಕೆಮ್ಮತೊಡಗಿದಳು. ಆ ಹೊತ್ತಿಗೆ ಚೈತನ್‌ನ ಬೈಕ್ ಅನುಶ್ರೀಯ ಮನೆಯ ಮುಂದೆ ನಿಂತಿತು. ಸದ್ದು ಕೇಳಿ ಬಾಗಿಲಿಗೆ ಓಡಿದಳು ಜ್ಯೋತಿ. ಯಾರಾಗಿರಬಹುದೆಂದು ಅನು ಚಡಪಡಿಸಿದಳು. ಬೈಕ್ ನಿಲ್ಲಿಸಿ ಚೈತನ್ ಒಳ ಬಂದನು. ವೃದ್ಧಾಶ್ರಮಕ್ಕೆ ಹೋಗದೇ ಸೀದಾ … Read more