ಸಾವು ಮತ್ತು ನಾವು: ಸಹನಾ ಪ್ರಸಾದ್

“ಅಯ್ಯೋ, ಪದ್ದಮ್ಮ ಹೋಗಿಬಿಟ್ರು ಕಣ್ರೀ, ರಾತ್ರಿ ಮಲಗಿದವರು ಬೆಳಗ್ಗೆ ಏಳಲೇ ಇಲ್ಲವಂತೆ. ಪಾಪ “ ಒಬ್ಬಾಕೆಯ ಉವಾಚ. ಮತ್ತೊಬ್ಬರದು ಜೋಡಣೆ. “ಸುಖವಾದ ಸಾವು, ಬಿಡ್ರೀ. ಎಷ್ಟು ಜನಕ್ಕೆ ಲಭ್ಯ, ಹೇಳಿ? ಒಂದು ದಿನ ನರಳಲಿಲ್ಲ, ಹಾಸಿಗೆ ಹಿಡಿಯಲಿಲ್ಲ. ಒಬ್ಬರ ಕೈಲಿ ಸೇವೆ ಮಾಡಿಸಿಕೊಳ್ಳಲಿಲ್ಲ. ಹೀಗೆ ಅಚಾನಕವಾಗಿ ಹೋಗೋದು ಪುಣ್ಯ ಅಲ್ಲದಿದ್ರೆ ಮತ್ತೇನು?” ಮಾತು ಒಬ್ಬರಿಂದ ಒಬ್ಬರಿಗೆ ದಾಟಿ ಅನೇಕ ಭಾವಗಳನ್ನು ತೋರಿ ಎಲ್ಲೋ ಒಂದು ಕಡೆ “ ಹೋಗಲಿ ಬಿಡಿ, ಅವರು ಪಡೆದುಕೊಂಡು ಬಂದಿದ್ದಷ್ಟೇ, ಭೂಮಿಯ ಋಣ ಮುಗೀತು, ಹೋದ್ರು!” ಎನ್ನುವಲ್ಲಿಗೆ ಮುಕ್ತಾಯಗೊಂಡಿತು.

ಸಾವಿನ ಸುದ್ದಿಯನ್ನು ಮಾತಾಡುವುದು, ಚರ್ಚೆ ಮಾಡುವುದು ಕಷ್ಟ. ನಮ್ಮ ಮನೆಯಲ್ಲೇ ಆಗಲಿ, ನೆರೆಮನೆಯದ್ದೇ ಇರಲಿ, ಆಸುಪಾಸಿನಲ್ಲಿ, ದೂರದಲ್ಲಿ, ಎಲ್ಲೇ ಆಗಲಿ ಅದೊಂದು ಹಿಂಸೆಯ ವಿಷಯ. ಹೋದವರು ವಯಸ್ಸಾದವರಾಗಿದ್ದರೆ ಅಂದೊಂದು ಸ್ವಲ್ಪ ಸಹನೀಯ. “ಪಾಪ, ವಯಸ್ಸಾಗಿತ್ತು. ಇನ್ನೆಷ್ಟು ದಿನ ಆಯುಸ್ಸಿದ್ದೀತು?” ಎಲ್ಲೋ ಸಮಾಧಾನದ ಉಸಿರು. ಚಿಕ್ಕವರಾಗಿದ್ದರೆ ಹಲಬುವುದು ಜಾಸ್ತಿ “ಛೇ, ಇನ್ನು ಸಣ್ಣ ವಯಸ್ಸು. ಪಾಪ, ಬಾಳಿ ಬದುಕಬೇಕಾದ ಜೀವ. ದೇವರು ನಿಷ್ಕರುಣಿ. ಇವನಿಗೆ ಈ ಸಣ್ಣ ವಯಸ್ಸಿನವರ ಮೇಲೇಕೆ ಕಣ್ಣು. ಅವರು ನೋಡಿ, ವಯಸ್ಸಾಗಿದೆ, ನರಳುತ್ತಾ ಇದ್ದಾರೆ. ಅವರನ್ನು ಕರೆದೊಯ್ಯುವ ಬದಲು ಈ ಜೀವಕ್ಕೆ ಹೊಂಚು ಹಾಕಿತಲ್ಲ, ಸಾವು!”

ಇನ್ನು ಹೊಸದಾಗಿ ಮಾಡುವೆಯಾಗಿದ್ದರೆ, ಸಣ್ಣ ಸಣ್ಣ ಮಕ್ಕಳಿದ್ದಾರೆ, ಮನಸ್ಸು ಬಲು ಭಾರ. ಕೆಲವು ವರುಷದ ಮುನ್ನ ವಿಧವೆಯನ್ನು ಕಾಣುವ ದೃಷ್ಟಿಯೇ ಬೇರೆ. “ಇಷ್ಟು ಚಿಕ್ಕ ವಯಸ್ಸಿನಲ್ಲಿ ಗಂಡ ಹೋಗಿಬಿಟ್ಟನಲ್ಲ. ಇನ್ನು ಇವಳ ಗತಿಯೇನು. ಮಕ್ಕಳನ್ನು ನೋಡಿಕೊಂಡು,ಅವಳಾಸೆಯನ್ನೆಲ್ಲಾ ಅದುಮಿ ಬಾಳಬೇಕು” ಎಂದಾದರೆ, ಮಕ್ಕಳಿಲ್ಲದವರಿಗೆ “ ಒಂದು ಮಗುವಾದರೂ ಇದ್ದಿದ್ರೆ ಚೆನ್ನಾಗಿತ್ತು. ಅದರ ಮುಖ ನೋಡಿ ಬದುಕು ಸಾಗಿಸುತ್ತಿದ್ದಳು” ಎಂಬ ಉದ್ಗಾರ. ಇನ್ನು ವಿಧುರನಾದರೆ, “ ಅಯ್ಯೋ, ಈ ಚಿಕ್ಕ ಮಕ್ಕಳನ್ನು ಹೇಗೆ ಸುಧಾರಿಸುತ್ತಾನೋ, ಆದಷ್ಟು ಬೇಗ ಈ ಮಕ್ಕಳಿಗೆ ಇನ್ನೊಂದು ತಾಯಿ ಬಂದರೆ ವಾಸಿ. ಆಫೀಸು, ಮನೆ, ಮಕ್ಕಳು ಎಲ್ಲ ಈ ಗಂಡಸಿನ ಕೈಲಿ ಸುಧಾರಿಸಕ್ಕೆಆಗೋಲ್ಲ. ಆದರೆ ಬರುವಾಕೆ ಒಳ್ಳೆಯವಳಿರಬೇಕು, ಅಷ್ಟೇ. ಮಲತಾಯಿಯ ತರಹ ವರ್ತಿಸದೆ, ಮಕ್ಕಳನ್ನು ಪ್ರೀತಿ, ವಿಶ್ವಾಸದಿಂದ ಗಮನಿಸುವವಳು ಬೇಕು” ಇನ್ನು ಮಕ್ಕಲಿಲ್ಲದಿದ್ದರೆ, “ಅಯ್ಯೋ, ಚಿಕ್ಕ ವಯಸ್ಸು. ಒಂದು ಮಗುವಾಗಿದ್ದಿದ್ದರೆ ಅವಳ ನೆನಪಾದರೂ ಉಳಿಯುತ್ತಿತ್ತು. ಹೋಗಲಿ, ಒಂದು ತರಹ ಒಳ್ಳೆಯದೇ ಆಯಿತು. ಬರುವವಳು ಹೇಗಿರುತ್ತಾಳೋ ಏನೋ!”

ಈಗಿನ ಕಾಲದಲ್ಕಿ, ಹೆಣ್ಣಿಗೂ, ಗಂಡಿಗೂ ಜಾಸ್ತಿ ವ್ಯತ್ಯಾಸವೆನಿಲ್ಲ. ಅದರಲ್ಲೂ ಪೇಟೆಗಳಲ್ಲಿ. ಓದಿ, ಬದುಕನ್ನು ಅರ್ಥ ಮಾಡಿಕೊಂಡಿರುವವರಲ್ಲಿ. ಮದುವೆಯಾದ ಹೆಣ್ಣು ಹೋದರೆ ಒಂದು ರೀತಿ ವಿಧಾನಗಳು, ಮದುವೆಗಾಗದಿದ್ದರೆ ಬೇರೇನೋ.

ಇನ್ನು ಸಾವಾಗಿದ್ದ ರೀತಿ ಕೂಡ ವಿವಿಧ ಮಾತುಗಳಿಗೆ ಅನುವು ಮಾಡಿಕೊಡುತ್ತದೆ. ಪದ್ದಮ್ಮನ ರೀತಿ ಹೋದವರದೊಂದು ಕತೆಯಾದರೆ, ದೀರ್ಘಕಾಲ ನರಳಿದವರದೊಂದು ಕತೆ.” ಅಯ್ಯೋ, ಎಷ್ಟು ನರಳುತ್ತಿದ್ದರು. ಅವರಿಗೂ ಕಷ್ಟ, ಮನೆಯವರಿಗೂ ಸಹ. ಮಾಡಿಸಿಕೊಳ್ಳುವವರಿಗೆ ಒಂದು ರೀತಿಯಾದರೆ, ಮಾಡುವರಿಗೆ ಇನ್ನೊಂದು ರೀತಿ. ಇಬ್ಬರಿಗೂ ಮುಕ್ತಿ ಸಿಕ್ಕಿತು, ಬಿಡಿ” ಕೇಳಿಸಿಕೊಳ್ಳಲು ಹಿಂಸೆಯಾದರೂ, ಮನದ ಮೂಲೆಯಲ್ಲಿ ಹೌದಲ್ವಾ ಅನಿಸುವುದು ಸುಳ್ಳಲ್ಲ. ಕಷ್ಟ ಪಡುತ್ತಿದ್ದವರಿಗೆ ಏನೂ ಮಾಡಲಾಗದಂತಹ ಅಸಹಾಯಕ ಪರಿಸ್ಥಿತಿ ಮನೆಯವರದ್ದು. ನಾವು ಮಾಡುತ್ತಿದ್ದು ಸಾಕೋ, ಇನ್ನಷ್ಟು ಮಾಡಬೇಕಿತ್ತೋ ಏನೋ ಎನ್ನುವ ನೋವು ಬಾಧಿಸುತ್ತಲೇ ಇರುತ್ತದೆ. ಈ ರೀತಿಯ ಮಾತುಗಳು ಸ್ವಲ್ಪ ನೋವು, ಸ್ವಲ್ಪ ಸಾಂತ್ವಾನ ಸಿಗುವುದು ಸುಳ್ಳಲ್ಲ.
ಇನ್ನು ಅಪಘಾತಕ್ಕೆ ಈಡಾಗಿ ಮರಣ ಹೊಂದಿದವರು ಕೆಲವೂಮ್ಮೆ ಪುಣ್ಯವಂತರು (“ಹೋಗಲಿ ಬಿಡಿ, ಇಷ್ಟೊಂದು ಗಾಯವಾಗಿ ಬದುಕುಳಿದಿದ್ದರೆ ಎಷ್ಟು ತ್ರಾಸವಾಗುತ್ತಿತ್ತು. ಆ ರೀತಿ ಬಾಳುವುದಕ್ಕಿಂತ ಹೋಗಿದ್ದೇ ಒಳ್ಳೆಯದಾಯಿತು) ಕೆಲವೊಮ್ಮೆ ನತದೃಷ್ಟರು ( ಪಾಪ, ಸಾಯುವಂತಹುದ್ದೇನೂ ಆಗಿರಲಿಲ್ಲ, ಬಿಡಿ. ಇನ್ನು ಗಾಯಗೊಂಡಿರುವರು ಬದುಕುಳಿಯಲಿಲ್ಲವೇ).

ಒಟ್ಟಿನಲ್ಲಿ ಯಾವ ರೀತಿಯ ಸಾವಾಗಲಿ, ಮಾತು ಒಂದೊಂದು ರೀತಿ. ಇನ್ನು ಸಾಂತ್ವಾನ ಹೇಳುವವರಿಗೂ ಬಲು ಕಷ್ಟ. ಯಾವ ರೀತಿಯ ಸಾವಿರಲಿ, ಸತ್ತವರ ವಯಸ್ಸು, ಸ್ಥಿತಿ ಎಂತಹುದ್ದೇ ಇರಲಿ, ಅದು ಸಂಬಂಧಪಟ್ಟವರಿಗೆ ತುಂಬಲಾಗದ ನಷ್ಟ. “ದೇವರಿಚ್ಛೆ”, “ಅವರ ಭೂಮಿಯ ಋಣ ಇದ್ದಿದ್ದೇ ಇಷ್ಟು”, “ ದೇವರ ಪಾದದಲ್ಲಿ ನೆಮ್ಮದಿಯಾಗಿದ್ದಾರೆ ಬಿಡಿ”, “ಸದ್ಗತಿ ಸಿಗಲಿ”, “ಮುಕ್ತಿ ದೊರಕಲಿ” ಇತ್ಯಾದಿ ಪದಗಳು ಕೇವಲ ಬಾಯಿ ಮಾತಲ್ಲ. ಆ ನಿಮಿಷದಲ್ಲಿ ಮನಸ್ಸಿಗೆ ತೋಚಿದ್ದು, ಕೇಳುಗರಿಗೆ ನೆಮ್ಮದಿ ಕೊಡುವಂತಹುದ್ದು ಎಂಬುದು ಸುಳ್ಳಲ್ಲ.

ಕೊನೆಗೆ ಉಳಿಯುವುದು ಒಂದು ಸತ್ಯ- ಕಾಲನ ಕರೆಯ ಮುಂದೆ ಯಾರೂ ಇಲ್ಲ. ಈ ಪ್ರಪಂಚದಲ್ಲಿ ಅದನ್ನು ಮೀರಿದವರು, ಶಾಶ್ವತವಾಗಿ ಉಳಿದವರು ಒಬ್ಬರು ಸಹ ಇಲ್ಲ. ಉಳಿಯುವುದು ನಾವು ಮಾಡಿದ ಕೆಲಸಗಳು, ಆಡಿದ ಒಳ್ಳೆಯ ಮಾತುಗಳು, ಹಿತ ತಂದ ನಮ್ಮ ವರ್ತನೆಗಳು ಮಾತ್ರ!

ಸಹನಾ ಪ್ರಸಾದ್


Read more

ಕನ್ನಡದ ಬರಹಗಳನ್ನು ಹಂಚಿ ಹರಡಿ

ನ್ಯಾನೋ ಕಥೆಗಳು: ವೆಂಕಟೇಶ್‌ ಚಾಗಿ

೧) ಹೊಸ ವರ್ಷಹೊಸ ವರ್ಷ ಬಂದಿತೆಂದು ಅವನಿಗೆ ತುಂಬ ಖುಷಿ. ಹೊಸ ವರ್ಷದ ಸಡಗರ ಭರ್ಜರಿಯಾಗಬೇಕೆಂಬುದು ಅವನ ಅಭಿಲಾಷೆ. ಅದರಂತೆ ತನ್ನ ಸ್ನೇಹಿತರೊಂದಿಗೆ ಸೇರಿ ದೊಡ್ಡ ಔತಣಕೂಟವನ್ನೆ ಏರ್ಪಡಿಸಿದ.ಮೋಜು ಮಸ್ತಿಯೊಂದಿಗೆ ಪಾರ್ಟಿ ಜೋರಾಗಿಯೇ ಆಯ್ತು. ಹೊಸ ವರ್ಷಕ್ಕೆ ಹೊಸ ಕ್ಯಾಲೆಂಡರ್ ಖರೀದಿಸಿದ. ಹೊಸ ಡೈರಿಯೊಂದನ್ನು ಖರೀದಿ ಮಾಡಿದ. ಡೈರಿಯ ಮೊದಲ ಪುಟದಲ್ಲಿ ತಾನು ಈ ವರ್ಷದಲ್ಲಿ ಕೈಗೊಳ್ಳ ಲೇಬೇಕಾದ ಕಾರ್ಯಗಳನ್ನು ಪಟ್ಟಿ ಮಾಡಿದ. ಸನ್ನಡತೆ , ನೈತಿಕತೆ ,ಉತ್ತಮ ಹವ್ಯಾಸ , ಉಳಿತಾಯ ಮುಂತಾದ ಗುಣಗಳನ್ನು ರೂಢಿಸಿಕೊಳ್ಳಲೇಬೇಕೆಂದು … Read more

ಕನ್ನಡದ ಬರಹಗಳನ್ನು ಹಂಚಿ ಹರಡಿ

ಬಯಲು ಕಮ್ಮಾರರ ಬಯಲ ಬದುಕು!: ಕೆ ಟಿ ಸೋಮಶೇಖರ ಹೊಳಲ್ಕೆರೆ.

 ಬಡವರು ಬಡತನದಿಂದ ದೂರವಾಗಿ ಒಳ್ಳೆಯ ಬದುಕು ರೂಪಿಸಿಕೊಳ್ಳಲು ಭಾರತ ಸರಕಾರ ಲೆಕ್ಕವಿಲ್ಲದಷ್ಟು ಕಾರ್ಯಕ್ರಮಗಳ ಅನಷ್ಠಾನಕ್ಕೆ ತಂದಿರುವುದು ಮೀಸಲಾತಿ ಘೋಷಿಸಿರುವುದು ಸತ್ಯಸ್ಯಸತ್ಯ! ಬಡವರ ಉದ್ದಾರಕ್ಕೆಂದೇ ಅವು ಮೈದಳೆದದ್ದು. ರಾಜ್ಯ ಸರಕಾರಗಳೂ ತಾವೇನು ಕಡಿಮೆಯಿಲ್ಲದಂತೆ ಅವರಿಗಾಗಿ ಕಾರ್ಯಕ್ರಮಗಳ ರೂಪಿಸಿರುವುದು ಸಹ ಸತ್ಯ! ಆದರೂ ಅವು ಕಾರಣಾಂತರದಿಂದ ಕೆಲವರಿಗೆ ತಲುಪದೆ ಅವರು ಬದುಕು ಸಾಗಿಸಲು ತುತ್ತಿನ ಚೀಲ ತುಂಬಿಸಿಕೊಳ್ಳಲು ಹರಸಾಹಸಪಡುತ್ತಿರುವುದು ಸಹ ಸತ್ಯಸ್ಯಸತ್ಯ! ಈ ಗುಂಪಿಗೆ ಸೇರಿದವರಲ್ಲಿ ಬಯಲು ಕಮ್ಮಾರರು ಒಬ್ಬರು! ಬಡವರಿಗೆ ಕೊಡುವ ಪಡಿತರ, ನರೇಗದಂತಹ ಉದ್ಯೋಗ ಖಾತ್ರಿ ಕಾರ್ಯಕ್ರಮದಿಂದಲೂ … Read more

ಕನ್ನಡದ ಬರಹಗಳನ್ನು ಹಂಚಿ ಹರಡಿ

ಪಂಜು ಕಾವ್ಯಧಾರೆ

ನಗ್ನ ರಾತ್ರಿಗಳು ನನ್ನ ಆಸೆಗಳು ಮತ್ತು ನಿನ್ನ ಯೌವ್ವನ ನಿನ್ನ ದೇಹ ನನ್ನ ಸ್ಪರ್ಷ ಎಷ್ಟು ಹೊತ್ತಿ೦ದ ಅನ್ನುವುದನ್ನು ಡಿಮ್ ಲೈಟಿನ ನಾಲ್ಕು ಗೋ‌ಡೆಯ ಮದ್ಯ ಮರೆತಿರುವುದು ಒ೦ದು ಹುಚ್ಚುತನ ಅ೦ತ ನನಗನಿಸಲಿಲ್ಲ, ನಿನಗೂ ಕೂಡ! ನಿನ್ನ ಕೈ ಬೆರಳಿನ ಉಗುರಿನ ಗಾಯ ನನ್ನ ಬೆತ್ತಲೆಯ ಬೆನ್ನಿನ ಮೇಲೆ ತೇವಗೊ೦ಡಿರುವುದು ನಿನ್ನ ಸ್ತನದ ತೊಟ್ಟು ನನ್ನ ತುಟಿಯ ಚು೦ಬನದಲಿ ನರಳುತ್ತಿರುವುದು ನೋವು ನಲಿವಿನ ಸ್ವರ್ಗಸುಖದಲಿ ಯಾವುದೂ ಅರಿವಿಲ್ಲದೆಯೆ ತಿರುಗುವ ಸೀಲಿ೦ಗ್ ಫ್ಯಾನಿನ ಕೆಳಗೆ ನಾವಿಬ್ಬರು ಹೀಗೆ ಎಷ್ಟು … Read more

ಕನ್ನಡದ ಬರಹಗಳನ್ನು ಹಂಚಿ ಹರಡಿ

ಮೆಟ್ಟು ಹೇಳಿದ ಕಥಾ ಪ್ರಸಂಗ (ಒಂದು ನೀಳ್ಗಾವ್ಯ): ಎಂ.ಜವರಾಜ್

  -೧- ‘ನನ್ನ ಏನಂತ ಅನ್ಕಂಡೆ..’ ಆ ಕಗ್ಗತ್ತಲ ಸರಿ ರಾತ್ರಿಯಲಿ ನನ್ನ ಮೈ ರೋಮ ರೋಮಗಳು ನಿಗುರಿ ನಿಂತವು. ಬೆಕ್ಕಸ ಬೆರಗಿನಲಿ ನಿಂತಲ್ಲೆ ನಿಂತು ಕಣ್ಗಗಲಿಸಿ ಅತ್ತಿತ್ತ ಕಾಲ ಹೆಜ್ಜೆಯ ಸರಿಸಿ ತಿರುಗಿ ಉರುಗಿ ನೋಡಿದೆ ಆ ಕತ್ತಲ ಸಾಮ್ರಾಜ್ಯದಲಿ ಜೀವ ಅಳುಕಿತು. ‘ನಿಂಗ ಏನೂ ಕಾಣೊಲ್ದು..’ ಮತ್ತೆ ಎತ್ತರಿಸಿದ ದನಿ. ದನಿ ಬಂದ ಕಡೆ ನೋಡಿದೆ. ಜೀವ ಇನ್ನಷ್ಟು ಅದುರಿತು. ಸರಕ್ಕನೆ ನಿಂತಲ್ಲೆ ಕುಂತೆ. ‘ಎದ್ರು ಮ್ಯಾಕ್ಕೆ..’ ಸಡನ್ ಎದ್ದವನು ಮತ್ತೆ ಮತ್ತೆ ತಿರುಗಿ … Read more

ಕನ್ನಡದ ಬರಹಗಳನ್ನು ಹಂಚಿ ಹರಡಿ

ಮಕ್ಕಳ ಆರೈಕೆ ಹೆತ್ತವರಿಗೊಂದು ಸವಾಲೇ ಸರಿ: ಸಿಂಧು ಭಾರ್ಗವ್

ಒಂದೇ ಬಳ್ಳಿಯ ಎರಡು ಸುಮಗಳ ನೋಡಲು ಎಲ್ಲರಿಗೂ ಇಷ್ಟ. ಅಂದರೆ ದಂಪತಿಗಳಿಗೆ ಮುದ್ದು ಮುದ್ದಾದ ಎರಡು ಮಕ್ಕಳು ಮನೆ ತುಂಬಾ ಓಡಾಡಿಕೊಂಡಿದ್ದರೆ ನೋಡಲು ಬಲುಸೊಗಸು. ಕೆಲವರು ಉದ್ಯೋಗ,ಬಡ್ತಿ ಮೇಲೆ ಬಡ್ತಿ ,ಲಕ್ಷ ಲಕ್ಷ ಸಂಬಳ , ಆಸ್ತಿ ಮಾಡಿಕೊಳ್ಳುವುದು ಎಂಬ ಆಸೆಯ ಪಾಶಕ್ಕೆ ಸಿಲುಕಿ ಒಂದು ಮಗುವನ್ನು ಹೆರಲು ಕೂಡ ಮನಸ್ಸು ಮಾಡುವುದಿಲ್ಲ. ಇನ್ನೂ ಕೆಲವರು “ಅಯ್ಯೋ.. ಈಗಿನ ಖರ್ಚು ದುಬಾರಿ ಜೀವನಕ್ಕೆ ಒಂದೇ ಮಗು ಸಾಕಪ್ಪ… ಎರಡೆರಡು ಮಕ್ಕಳನ್ನು ಯಾರು ನೋಡಿಕೊಳ್ತಾರೆ…”ಎಂದು ರಾಗ ಎಳೆಯುತ್ತಾರೆ. ಒಂದು … Read more

ಕನ್ನಡದ ಬರಹಗಳನ್ನು ಹಂಚಿ ಹರಡಿ

ಹೆಣ್ಣು ಮತ್ತು ಭಯ: ಸಹನಾ ಪ್ರಸಾದ್

ನಮ್ಮ ಜಮಾನಾದಲ್ಲಿ…ತಡೆಯಿರಿ, ನಾನು ಇನ್ನು ಬದುಕಿರುವುದರಿಂದ, ಇದೂ ನನ್ನ ಜಮಾನ! ಆಯ್ತು, ನಾ ೨೦ರ ಹೊಸಿಲಲ್ಲಿ ಇರುವಾಗ ಅಂದರೆ ೧೯೮೦ ರಲ್ಲಿ. ದೆಹಲಿಯಲ್ಲಿ ಅಪ್ಪನ ಕೆಲಸದ ನಿಮಿತ್ತ ವಾಸ. ಹೇಳಿ ಕೇಳಿ ನಾನು ಚಿಕ್ಕ, ತೀರ ಆಧುನಿಕವೂ ಅಲ್ಲದೆ, ತೀರ ಸಾಂಪ್ರದಾಯಿಕವೂ ಅಲ್ಲದ ಸಂಸಾರಕ್ಕೆ ಸೇರಿದವಳು. ದೆಹಲಿಯ ವಾತಾವರಣ, ಜನ, ಭಾಷೆ ನೋಡಿ ನಡುಗಿ ಹೋಗಿದ್ದಂತೂ ನಿಜ. ಎಲ್ಲದಕ್ಕಿಂತ ಆಘಾತ ಆಗಿದ್ದು ದೆಹಲಿಯ ಜನ. ಉತ್ತರದ ಅನೇಕ ರಾಜ್ಯಗಳಿಂದ ವಲಸೆ ಬಂದವರು ಇಲ್ಲಿ ಜಾಸ್ತಿ ಸಂಖ್ಯೆಯಲ್ಲಿ ಇದ್ದಿದ್ದರಿಂದ … Read more

ಕನ್ನಡದ ಬರಹಗಳನ್ನು ಹಂಚಿ ಹರಡಿ

ಜಿಪುಣಾಗ್ರೇಸರರು: ವೈ. ಬಿ. ಕಡಕೋಳ

ದೈನಂದಿನ ಬದುಕಿನಲ್ಲಿ ಜಿಪುಣತನ ಇರಕೂಡದು. ಹಾಗೆ ಇದ್ದರೆ ಅಂತಹ ವ್ಯಕ್ತಿಗಳು ಯಾರಿಗೂ ಹೊಂದಿಕೊಳ್ಳಲಾರರು. ಅಂತವರನ್ನು ಯಾರೂ ಕೂಡ ಇಷ್ಟ ಪಡಲಾರರು. ಕಾಗೆ ಒಂದಗುಳ ಕಂಡರೆ ಕರೆಯುವುದು ತನ್ನ ಬಳಗವನ್ನು ಕಾಕಾ ಎಂದು. ಎಂಬ ಮಹತ್ವವನ್ನು ಪಕ್ಷಿ ಪ್ರಾಣಿಗಳಿಂದ ಕಲಿಯುವ ನಾವು ಕನಿಷ್ಟರಾಗಿ ಬದುಕುವುದು ತರವೇ. ? ಒಂದು ಸಲ ಯೋಚಿಸಿ. ಒಂದು ಸಲ ಒಬ್ಬ ವ್ಯಕ್ತಿ ಮರಭೂಮಿಯಲ್ಲಿ ತನ್ನ ನಾಯಿಯೊಂದಿಗೆ ಪ್ರವಾಸ ಆರಂಭಿಸಿದ್ದ. ಬೇಸಿಗೆ ಕಾಲ ಬೇರೆ ಅಂತಹ ಸ್ಥಳದಲ್ಲಿ ನೀರನ ಕೊರತೆ ಇತ್ತು. ಆತ ತನ್ನ … Read more

ಕನ್ನಡದ ಬರಹಗಳನ್ನು ಹಂಚಿ ಹರಡಿ

ವಾರಾಂತ್ಯದಲ್ಲೊಂದು ರಂಗ ರಸದೌತಣ

ಡಿಸೆಂಬರ್ ಕೊನೆವಾರ ಜಗತ್ತು ಪಟಾಕಿ ಹಾಡು ಕುಣಿತದ ಮೂಲಕ ಹೊಸವರ್ಷವನ್ನು ಬರಮಾಡಿಕೊಳ್ಳುಲು ಸಜ್ಜಾಗುತ್ತದೆ. ಆದರೆ ಮೈಸೂರಿನ ರಂಗಾಸಕ್ತರು ಅರ್ಥಪೂರ್ಣವಾಗಿ ಹೊಸವರ್ಷವನ್ನು ಬರಮಾಡಿಕೊಳ್ಳುತ್ತಾರೆ. ಮಾಗಿಯ ಚಳಿಗೆ ನಗರವೆಲ್ಲ ತಣ್ಣಗೆ ಮನೆಸೇರುವಾಗ ಕಲಾಮಂದಿರದ ಆವರಣದಲ್ಲಿ ನಿರಂತರ ರಂಗೋತ್ಸವ ಕಳೆಗಟ್ಟುತ್ತದೆ. ಬಣ್ಣ ಬಣ್ಣದ ಹೊರ ಆವರಣ, ಬೇರೆ ಬೇರೆ ಊರುಗಳಿಂದ ಬಂದ ರಂಗತಂಡಗಳ ನಾಟಕ ಪ್ರದರ್ಶನ, ಜನಪದ ಕಲಾಪ್ರಕಾರಗಳ ಅನಾವರಣ, ಕೊನೆಯಲ್ಲೊಂದು ರಂಗಸಂಗೀತಕ್ಕೆ ಪ್ರೇಕ್ಷಕರೆಲ್ಲರು ಸಾಕ್ಷಿಯಾಗುವ ಮೂಲಕ ರಂಗಭೂಮಿಯ ಹಬ್ಬವನ್ನು ಯಶಸ್ವಿಗೊಳಿಸುತ್ತಾರೆ. ಹೌದು ಪ್ರತಿವರ್ಷದಂತೆ ಈ ವರ್ಷವೂ ನಿರಂತರ ರಂಗೋತ್ಸವ ಇದೇ … Read more

ಕನ್ನಡದ ಬರಹಗಳನ್ನು ಹಂಚಿ ಹರಡಿ

ಸಾಧನೆಯ ಹಾದಿ: ವೆಂಕಟೇಶ್‌ ಚಾಗಿ

ಕಮಲಾಪುರ ಎಂಬ ಊರಿನಲ್ಲಿ ರಾಮಯ್ಯ ಎಂಬ ರೈತನಿದ್ದನು. ರಾಮಯ್ಯ ತನಗೆ ತನ್ನ ಪೂರ್ವಿಕರಿಂದ ಬಂದ ಜಮೀನಿನಲ್ಲಿ ಉತ್ತಿ ಬಿತ್ತಿ ಬೆಳೆ ಬೆಳೆದು ಸುಖವಾಗಿ ಜೀವನ ಸಾಗಿಸುತ್ತಿದ್ದನು. ಯಾವುದೇ ಆಮೀಷಕ್ಕೆ ಅತೀ ಆಶೆಗೆ ಒಳಗಾಗದೇ ಕಷ್ಟ ಪಟ್ಟು ದುಡಿಯುವುದೇ ಅವನ ನಿತ್ಯ ಕಾಯಕವಾಗಿತ್ತು. ತನ್ನ ದಿನದ ಬಹುತೇಕ ಭಾಗವನ್ನು ಹೊಲ ಗದ್ದೆಗಳಲ್ಲಿ ಕಳೆಯುತ್ತಿದ್ದನು. ಕೆಲವು ಜನರು ಅವನನ್ನು ಆಸೆಬುರುಕ ಎಂತಲೂ ಲೋಭಿ ಎಂತಲೂ ಮತಿ ಹೀನ ಎಂತಲೂ ಕರೆಯುತ್ತಿದ್ದರು. ಆದರೂ ಯಾರ ಮಾತಿಗು ಗಮನ ಕೊಡದೆ ತನ್ನ ಕಾಯಕವನ್ನು … Read more

ಕನ್ನಡದ ಬರಹಗಳನ್ನು ಹಂಚಿ ಹರಡಿ

ಸರಸ್ವತಿ ಪುರಂದರ ದಾಸರ ಸತಿ ಸದ್ಗತಿ!: ಕೆ ಟಿ ಸೋಮಶೇಖರ ಹೊಳಲ್ಕೆರೆ

ಪ್ರತಿಯೊಬ್ಬ ಮಹಾನ್ ಪುರುಷನ ಮಹಾನ್ ಸಾಧನೆಯ ಹಿಂದೆ ಒಬ್ಬ ಸ್ತ್ರೀ ಇರುತ್ತಾಳೆ ಎಂದು ಹೇಳಿರುವುದನ್ನು ಕೇಳಿರುತ್ತೇವೆ! ಗಾಂಧಿ, ಶಿವಾಜಿಯ ಮಹಾನ್ ಸಾಧನೆಯ ಹಿಂದೆ ಇದ್ದ ಸ್ತ್ರೀಯರು ಯಾರೆಂದು ಎಲ್ಲರೂ ತಿಳಿದಿದ್ದಾರೆ! ಕರ್ನಾಟಕ ಸಂಗೀತ ಪದ್ದತಿಯ ಪಿತಾಮಹಾ, ದಾಸವರೇಣ್ಯ, ಭಕ್ತಿಯಿಂದ ಮುಕ್ತಿ ಮಾರ್ಗ ತೋರಿದ ಪುರಂದರ ದಾಸರು ಯಾರಿಗೆ ತಾನೇ ಗೊತ್ತಿಲ್ಲ? ಅವರು, ಅವರ ಕೀರ್ತನೆಗಳು ಎಲ್ಲ ಜನರಿಗೂ ಗೊತ್ತು! ಆದರೆ ಅವರು ಹರಿದಾಸರಾಗಿ ಪ್ರಖ್ಯಾತಿ ಹೊಂದಲು ಕಾರಣವಾದ ಅವರ ಹೆಂಡತಿ ಬಗ್ಗೆ ಎಷ್ಟು ಜನಕ್ಕೆ ಗೊತ್ತು? ಕೆಲವರಿಗೆ … Read more

ಕನ್ನಡದ ಬರಹಗಳನ್ನು ಹಂಚಿ ಹರಡಿ

ಡಿಜಿಟಲ್ ಕನ್ನಡ: ಡಾ. ಹೆಚ್ಚೆನ್ ಮಂಜುರಾಜ್

ಹರಿತವಾದ ಆಯುಧದಿಂದ ಹಣ್ಣನ್ನೂ ಕೊಯ್ಯಬಹುದು; ಜೀವವನ್ನೂ ತೆಗೆಯಬಹುದು ಎಂಬ ಮಾತು ಕ್ಲೀಷೆಯೆನಿಸಿದರೂ ಆಧುನಿಕ ಡಿಜಿಟಲ್ ಮಾಧ್ಯಮಗಳಿಗೆ ಇದಕ್ಕಿಂತ ಸೂಕ್ತವಾದ ವ್ಯಾಖ್ಯಾನ ಬೇರೊಂದಿರಲಾರದು! ನಮ್ಮೆಲ್ಲರ ಕೈಯಲ್ಲೂ ಮೊಬೈಲು; ಮನೆಯಲ್ಲಿ ಕಂಪ್ಯೂಟರು ಇರುವಾಗ ಯಾರಾದರೂ ಹೀಗೆ ಹೇಳಲೇಬೇಕು. ಅದರಲ್ಲೂ ಇಂಥವನ್ನು ಬಳಸಿಕೊಂಡು ಯುವಜನತೆ ದಾರಿ ತಪ್ಪುವುದಿರಲಿ ದಿಕ್ಕೇ ತಪ್ಪುತ್ತಿದೆ ಎಂದು ಬೈಯ್ಯುವವರ ಕೈಯಲ್ಲೂ ಇವೇ ಇವೆ! ಆದರೆ ಇವನ್ನು ಸದ್ಬಳಕೆ ಮಾಡಿಕೊಂಡು ಬದುಕಿನ ಸಂವೇದನೆಯನ್ನು ಇನ್ನಷ್ಟು ನೇರ್ಪುಗೊಳಿಸಿಕೊಳ್ಳಬಹುದು; ದೈವತ್ವವನ್ನು ಧರಿಸಬಹುದು ಅಥವಾ ಅದರತ್ತ ಚಲಿಸಬಹುದು ಎಂದು ಆಲೋಚಿಸುವವರು ವಿರಳ. ಕವಿ … Read more

ಕನ್ನಡದ ಬರಹಗಳನ್ನು ಹಂಚಿ ಹರಡಿ

ಯೋಗ್ಯತೆ ಇಲ್ಲದವರದೂ ಒಂದು ಯೋಗ: ಅಮರದೀಪ್ ಪಿ.ಎಸ್.

ರೈಲ್ವೆ ಸ್ಟೇಷನ್ ನಿಂದ ಹೊರಗೆ ಬಂದರೆ ಗೌಜೋ ಗೌಜು. ಚಾಯ್ ವಾಲಾಗಳ ಸ್ಟಾಲುಗಳು, ಗಿಜಿಗಿಜಿ ರಸ್ತೆ, ಬದಿಯಲ್ಲಿ ತಳ್ಳುಗಾಡಿಗಳನ್ನು ಬೆಳಿಗ್ಗೆಯಿಂದ ಸಂಜೆವರೆಗೂ ತಳ್ಳಿಯೇ ಜೀವ ಮೆತ್ತಗಾದವರ ಬದುಕನ್ನು ಢಾಳಾಗಿ ಬಿಂಬಿಸುತ್ತದೆ… ಎರಡುವರೆ ಅಡಿ ಜಾಗ ಸಿಕ್ಕುಬಿಟ್ಟರೆ ಸಾಕು, ಬೀಡಿ ಸಿಗರೇಟು ಮಾರಿಯಾದರೂ ಹೆಂಗೋ ಬದುಕು ಸಾಗುತ್ತದೆನ್ನುವ ನಿರೀಕ್ಷೆಯ ಮುಖಗಳು… ದಾರಿಗುಂಟ ರೈಲಲ್ಲಿ ಬ್ಯಾಗನ್ನೇ ಕಳೆದುಕೊಂಡ ಜೋತುಬಿದ್ದ ಕಣ್ಣುಗಳು.. ಪರ್ಸು, ದುಡ್ಡು ಇರಲಿ ಜೊತೆಗಿದ್ದವರೇ ಕಾಣದ ಊರಲ್ಲಿ ಇಳಿಸಿ ಮರೆಯಾದವರನ್ನು , ಅವರ ಅಡ್ರೆಸ್ಸನ್ನೂ ಹೇಳಲು ತಡಬಡಾಯಿಸುವ ಅತ್ತ … Read more

ಕನ್ನಡದ ಬರಹಗಳನ್ನು ಹಂಚಿ ಹರಡಿ

ಕಣ್ಮರೆಯಾದ ಗೆಳತಿಯರು: ಸಿಂಧು ಭಾರ್ಗವ್.

ಕಾಲೇಜು ದಿನಗಳಲ್ಲಿ ಲವಲವಿಕೆಯಿಂದ ತುಂಟತನ ತರಲೆ ಮಾಡಿಕೊಂಡು ದಿನಕಳೆಯುತ್ತಿದ್ದ ನಾವು ಎಷ್ಟು ಸಂತೋಷದಿಂದ ಇರುತ್ತಿದ್ದೆವು. ಓದು , ಆಟದ ಜೊತೆಗೆ ಜಗಳ, ಗಲಾಟೆ, ಮುಷ್ಕರ, ಪ್ರೀತಿ-ಪ್ರೇಮ ಸಂತೆ ಎಲ್ಲವನ್ನೂ ಅಲ್ಲಿ ಇಲ್ಲಿ ನೋಡಿ, “ನಾವೆಲ್ಲ ಹಾಗಿಲ್ಲಪ್ಪ…” ನಮ್ಮದು “ಓನ್ಲೀ ಫ್ರೆಂಡ್ ಶಿಪ್ ” ಓದು, ಮನೆ… ಅಷ್ಟೇ ಎಂದು ಎಂಜಾಯ್ ಮಾಡುತ್ತಿದ್ದೆವು. ರಕ್ತ ಸಂಬಂಧಗಳ ಮೀರಿದ ಬಂಧವಿದು ಎಂದು ಹಾಡು ಹೇಳುತ್ತ ಖುಷಿ-ಖುಷಿಯಾಗಿದ್ದೆವು. ಆಮೇಲೆ? ಮುಂದೇನು? ಕಾಲೇಜು ಜೀವನದ ಕೊನೆಯ ವರುಷ ಎರಡು ಸೆಮಿಸ್ಟರ್, ಪ್ರೊಜೆಕ್ಟ್ ಮಾಡಿ … Read more

ಕನ್ನಡದ ಬರಹಗಳನ್ನು ಹಂಚಿ ಹರಡಿ

ಎತ್ತ ಸಾಗುತ್ತಿದ್ದೇವೆ ನಾವು?: ಸಹನಾ ಪ್ರಸಾದ್

ಪ್ರತಿದಿನ ದೃಶ್ಯ ಮಾಧ್ಯಮಗಳಲ್ಲಿ, ಪತ್ರಿಕೆಗಳಲ್ಲಿ, ಜನರ ನುಡಿಗಳಲ್ಲಿ, ಹೆಂಗಸರ ಮೇಲೆ ದೌರ್ಜನ್ಯ, ಮಾನಭಂಗ ಇತ್ಯಾದಿಗಳ ಸುದ್ದಿ ಸರ್ವೇಸಾಮಾನ್ಯವಾಗಿಬಿಟ್ಟಿದೆ. ಸಮೀಕ್ಷೆಗಳ ಪ್ರಕಾರ, ನಮ್ಮ ಮೆದುಳು ಕೆಲವು ಶಬ್ಢಗಳು, ವಿಷಯಗಳನ್ನು ತಕ್ಷಣ ಗುರುತಿಸುತ್ತಂತೆ. ಆದುದರಿಂದಲೇ ಕೆಲವು ಮಾಧ್ಯಮಗಳಲ್ಲಿ ಸುದ್ದಿಗಳನ್ನು ಅತ್ಯಂತ ಆಸಕ್ತಿಯಿಂದ(!!) ರೋಚಕವಾಗಿ ಚಿತ್ರಿಸುತ್ತಾರೆ. ಅದರಲ್ಲಿ ಅವರ ಕಾಳಜಿ, ಕಳಕಳಿಗಿಂತ ಸುದ್ದಿಯನ್ನು ಜನರ ಮನಸ್ಸಿಗೆ ಹೊಡೆಯುವಂತೆ ಸೃಷ್ಟಿಸುವುದೇ ಉದ್ದೇಶ. ದೌರ್ಜನ್ಯದ ಘಟನೆಗಳು ನಡೆದಾಗ ನಮ್ಮ ಮನ ರೊಚ್ಚಿಗೇಳಬೇಕು, ಕಷ್ಟಪಡಬೇಕು. ಆಗ ಉಂಟಾದ ಹಿಂಸೆಯಿಂದ ನಮ್ಮ ಮನಸ್ಸಲ್ಲಿ ಒಂದು ನಿಲುಮೆ ಜನ್ಮತಾಳಬೇಕು. … Read more

ಕನ್ನಡದ ಬರಹಗಳನ್ನು ಹಂಚಿ ಹರಡಿ

ಗಿಳಿ ಕಲಿಸಿದ ಪಾಠ: ವರದೇಂದ್ರ ಕೆ.

ಒಂದು ಕಾಡು ಇತ್ತು. ಆ ಕಾಡಿಗೆ ಬೆಂಕಿ ಬಿದ್ದು ಎಲ್ಲ ಗಿಡ ಮರಗಳೂ ಸುಟ್ಟು ಕರಕಲಾಗಿದ್ದವು. ಹೇಗೋ ತಪ್ಪಿಸಿಕೊಂಡ ಪ್ರಾಣಿ ಪಕ್ಷಿಗಳು ದಿಕ್ಕಾಪಾಲಾಗಿ ಹೋದವು. ಅದರಲ್ಲಿ ಒಂದು ಮರಿ ಗಿಳಿ ತಾಯಿ, ತಂದೆಯಿಂದ ಬೇರ್ಪಟ್ಟು ದೂರವಾಯಿತು. ಎಲ್ಲ ಕಡೆ ಸುತ್ತಿ ಸುತ್ತಿ ದಣಿವಾಯಿತು. ಹೊಟ್ಟೆ ಹಸಿದರೂ ತಿನ್ನಲು ಯಾವ ಹಣ್ಣು ಸಿಗದೆ ಬಳಲಿತು. ಆಹಾರ ಮತ್ತು ವಾಸಕ್ಕಾಗಿ ಅಲೆಯತೊಡಗಿತು. ಎಷ್ಟು ದೂರ ಸಾಗಿದರೂ ಏನು ಸಿಗದೆ ಸತ್ತೇ ಹೋಗುತ್ತೇನೋ ಎನ್ನುವಷ್ಟು ನಿರಾಸೆಯಿಂದ ಚಿಂತಿಸತೊಡಗಿತು. ಅಷ್ಟರಲ್ಲಿ ದೂರದಲ್ಲಿ ಒಂದು … Read more

ಕನ್ನಡದ ಬರಹಗಳನ್ನು ಹಂಚಿ ಹರಡಿ

ಹೃದಯ ಸ್ಪರ್ಶಿ ಬರಹಗಳಿಂದ ಮಾತ್ರ ಸುಂದರವಾದ ಸಮತಾ ಸಮಾಜ ನಿರ್ಮಾಣ: ಈಶ್ವರ ಚ ಮಗದುಮ್ಮ

ಹೌದು! ಎಷ್ಟೋಬಾರಿ ಆತನ ಬಗ್ಗೆ ಬರೆದಿದ್ದೇನೆ. ಆದರೂ ಮತ್ತೇ ಮತ್ತೇ ಅವನ ವ್ಯಕ್ತಿತ್ವದ ಕುರಿತು ಬರೆಯಬೇಕೆನಿಸುತ್ತದೆ. ಅವನ ಬಗ್ಗೆ ಎಷ್ಟು ಬರೆದರೂ ಕಮ್ಮಿ ಅನಿಸಲು ಕಾರಣವೂ ಇದೆ. ಅವನ ಮತ್ತು ನನ್ನ ಸ್ನೇಹ-ಒಡನಾಟ ಹಾಗೇ ಇದೆ. ನಮ್ಮಿಬ್ಬರ ನಡುವೆ ಕೇವಲ ಸ್ನೇಹವಿದ್ದರೆ ಬಹುಶಃ ನಾನು ಅವನ ಕುರಿತು ಪದೆ ಪದೆ ಬರೆಯುತ್ತಿರಲಿಲ್ಲವೇನೋ? ಆದರೂ ಸ್ನೇಹಕ್ಕೂ ಮೀರಿದ ಅದ್ಯಾವುದೋ ಒಂದು ಶಕ್ತಿ ನಮ್ಮನ್ನು ಬೆಸೆದಿದೆ ಎನಿಸಿತ್ತದೆ. ಅದ್ಯಾವದೋ ಒಂದು ತಂತು ನಮ್ಮ ಮನಗಳಲ್ಲಿ ಸಮಾನವಾಗಿ ಮಿಡಿಯುತ್ತಿದೆ ಅನಿಸುತ್ತದೆ. ಅದಕ್ಕಾಗಿಯೇ … Read more

ಕನ್ನಡದ ಬರಹಗಳನ್ನು ಹಂಚಿ ಹರಡಿ

ಕೌಟುಂಬಿಕ ಮೌಲ್ಯ ಮತ್ತು ವಿಶ್ವಭ್ರಾತೃತ್ವ: ಡಿ. ಪಿ. ಭಟ್, ಪುತ್ತೂರು.

ಅನೇಕ ತೀರ್ಥ ಕ್ಷೇತ್ರಗಳನ್ನು, ಹಲವು ಪರಿಶುದ್ಧ ಪಾವಿತ್ರ್ಯತೆಯಿಂದ ಕೂಡಿದ ಕಲ್ಯಾಣಿಗಳನ್ನು, ಮಠ ಮಂದಿರಗಳನ್ನು, ವಿದ್ಯಾ ದೇಗುಲಗಳನ್ನು ಸೇರಿದಂತೆ ಹಿಮಾಲಯದಿಂದ ಕನ್ಯಾಕುಮಾರಿಯವರೆಗೆ ಒಳಗೊಂಡಿರುವ ಹಲವು ಪ್ರಕೃತಿ ವಿಸ್ಮಯಾತ್ಮಕ ರಮಣೀಯ ಸ್ಥಳಗಳ ಮೂಲಕ ಪ್ರವಹಿಸುತ್ತಿರುವ ಆಧ್ಯಾತ್ಮಿಕತೆಯ ಅಭಿವ್ಯಕ್ತಿಯಿಂದ ನಮ್ಮ ಭಾರತವು ಕಂಗೊಳಿಸುತ್ತಿದೆ. ಪರಮೋತ್ಕಟ ಭಕ್ತಿಭಾವೋನ್ಮಾದಸ್ನಾತರಾದ ರಾಮ, ಸೀತಾ, ಕೃಷ್ಣ,  ಶಂಕರರು, ರಾಮಾನುಜರು, ಮಾಧ್ವರು, ಶೀರಾಮಕೃಷ್ಣರು, ಶ್ರೀಮಾತೆ ಶಾರದಾದೇವಿ, ಸ್ವಾಮೀ ವಿವೇಕಾನಂದರಂತಹ ಭಗವದ್ ಸತ್ಪುರುಷರು, ಸಂತರು, ಶರಣರು, ದಾರ್ಶನಿಕರು ಓಡಾಡಿದ ದೇಶವಿದು. ಆಧ್ಯಾತ್ಮಿಕ ಶಕ್ತಿಯ ಪ್ರಬಲತೆಯಿಂದ ಕೂಡಿದ ಭರತ ಭೂಮಿಯಲ್ಲಿಂದು ಕೊಲೆ, … Read more

ಕನ್ನಡದ ಬರಹಗಳನ್ನು ಹಂಚಿ ಹರಡಿ

ಮರೆಯಾಗದಿರಲಿ ನೋವು ಮರೆಸುವ ನಗು!: ಜಯಶ್ರೀ.ಜೆ. ಅಬ್ಬಿಗೇರಿ

ಬಹುತೇಕ ನಮ್ಮೆಲ್ಲರ ಇತ್ತೀಚಿನ ದೈನಂದಿನ ಜೀವನ ಒತ್ತಡದ ಮಡುವಿನಲ್ಲಿ ಬಿದ್ದು ಒದ್ದಾಡುತ್ತಿದೆ. ಒತ್ತಡ ಹಾಗೂ ಬದ್ಧತೆಗಳ ಆರ್ಭಟಕ್ಕೆ ಮಣದಿರುವ ನಾವು ಅಕ್ಷರಶಃ ನಗುವುದನ್ನೇ ಮರೆತಿದ್ದೇವೆ. ಅಲ್ಲೊಮ್ಮೆ ಇಲ್ಲೊಮ್ಮೆ ಆಗೊಮ್ಮೆ ಈಗೊಮ್ಮೆ ನಕ್ಕರೂ ಅದು ಗೊಂಬೆ ನಗುವಿನಂತಿರುತ್ತದೆ. ಹೃದಯ ತುಂಬಿದ ನಗು ಅದೆಲ್ಲಿ ಮಾಯವಾಗಿದೆಯೋ ಹುಡುಕ ಬೇಕಿದೆ. ಕಿವಿಯಿಂದ ಕಿವಿಯವರೆಗಿನ ನಗು ಮರೆತು ಅದೆಷ್ಟೋ ವರ್ಷಗಳು ಕಳೆದವು ಅನಿಸುತ್ತಿದೆ ಅಲ್ಲವೇ? ನಗು ಮಾನವನ ಸಹಜ ಪ್ರಕ್ರಿಯೆ ಅದನ್ನೇ ಮರೆತು ಬಾಳುತ್ತಿರುವುದು ನಿಜಕ್ಕೂ ಖೇದಕರ ಸಂಗತಿಯೇ ಸರಿ. ಒಂದು ಅಧ್ಯಯನದ … Read more

ಕನ್ನಡದ ಬರಹಗಳನ್ನು ಹಂಚಿ ಹರಡಿ

ರೈತ (ಪುಟ್ಟ ಕತೆ): ವೆಂಕಟೇಶ ಚಾಗಿ

ಆಗ ನಾನಿನ್ನು  ಪುಟ್ಟ ಹುಡುಗ. ಎರಡೇ ತರಗತಿಯಲ್ಲಿ ಓದುತ್ತಿರುವಾಗಲೇ ಅಪ್ಪ ನನ್ನನ್ನು ಹೊಲಕ್ಕೆ ಕರೆದುಕೊಂಡು ಹೋಗುತ್ತಿದ್ದ. ಅಪ್ಪನಿಗೆ “ಅಪ್ಪಾ , ನಾನೂ ರೈತ ಆಗ್ಲಾ? ” ಅಂತ ಕೇಳಿದ್ದೆ.  ಅಪ್ಪನ ಕೆಲಸಗಳೋ ಒಂದಲ್ಲ ಎರಡಲ್ಲ. ನಸುಕಿನ ಜಾವ ಏಳುತ್ತಲೇ ಅಪ್ಪನ ಕಾಯಕ ಶುರುವಾಗುತ್ತಿತ್ತು. ಅಮ್ಮ ಮಾಡಿಕೊಟ್ಟ ನಾಲ್ಕೈದು ರೊಟ್ಟಿ  , ಪಲ್ಲೆ ಒಂದು ಬಟ್ಟೆಯಲ್ಲಿ ಕಟ್ಟಿಕೊಂಡು ಬಾಯಾರಿಕೆಗಾಗಿ ಮಣ್ಣಿನ ಬಾಟಲ್ ನಲ್ಲಿ ನೀರು ತುಂಬಿಕೊಂಡು ಎರಡು ಎತ್ತುಗಳನ್ನು ಹಿಡಿದು ಹೊರಟರೆ ಮುಗೀತು ಮತ್ತೆ ಸಂಜೆ ಆರಕ್ಕೆ ಅಪ್ಪ … Read more

ಕನ್ನಡದ ಬರಹಗಳನ್ನು ಹಂಚಿ ಹರಡಿ

ಸಕಾರಾತ್ಮಕವಾಗಿಯೇ ಚಿಂತಿಸಬೇಕಲ್ಲವೆ?: ಸೋಮಶೇಖರ್ ಹೊಳಲ್ಕೆರೆ

ಬಹಳ ವರುಷ ಒಂದೇ ಸ್ಥಳದಲ್ಲಿ, ಒಂದೇ ವಾತಾವರಣದಲ್ಲಿ ವಾಸಿಸುವುದರಿಂದ, ಒಂದೇ ರುಚಿ ಆಹಾರ ಸೇವಿಸುವುದರಿಂದ ಬೇಸರ ಉಂಟಾಗುವುದು ಸಾಮಾನ್ಯ! ಅದಕ್ಕೇ ಆಗಾಗ ಹಬ್ಬಗಳು, ಜಾತ್ರೆಗಳು ಬಂದು ವಿಧವಿಧ ರುಚಿಯ ಭಕ್ಷ್ಯ ಬೋಜ್ಯಗಳ ತಂದು, ನೆಂಟರಿಷ್ಟರ ಮನೆತುಂಬಿಸಿ, ಪೂಜೆ ಪುರಸ್ಕಾರ ಗಂಟಾ ಘೋಷಗಳಲಿ ಮೀಯಿಸಿ, ಮನೆಯ ತಳಿರು ತೋರಣಗಳಿಂದ ಸಿಂಗರಿಸಿ ಮನೆಯ ವಾತಾವರಣವನ್ನು ಬದಲಾಯಿಸಿ ಏಕತಾನತೆಯ ಬೇಸರ ಕಳೆದು ಬದುಕುವ ಉತ್ಸಾಹವ ತುಂಬುವ ಹೊಸ ಹುರುಪು ತುಂಬುವ ಉಪಾಯಗಳ ನಮ್ಮ ಹಿರಿಯರು ವರುಷ ಪೂರ್ತಿ ಮಾಡಿರುವುದು! ಪ್ರವಾಸ, ತೀರ್ಥಯಾತ್ರೆಗಳು … Read more

ಕನ್ನಡದ ಬರಹಗಳನ್ನು ಹಂಚಿ ಹರಡಿ

ಪಂಜು ಕಾವ್ಯಧಾರೆ

ಈ ಜಗದಾಗೆ ದೊಡ್ಡೋರು ಯಾರಿಲ್ಲ ಚಿಕ್ಕೋರು ಯಾರಿಲ್ಲ ಎಲ್ಲಾರೂ ಒಂದೇನೆ ಈ ಜಗದಾಗೆ ದೇವ್ರಾಟ ಆಡ್ಕೋತ ಬದುಕನ್ನ ಬೇಯಿಸ್ಕೊತ ಕಡೆಗೆಲ್ಲಾ ಮಣ್ಣು ಈ ಜಗದಾಗೆ || ಲೋಕಾನೆ ಗೆಲ್ಬೇಕು ಅಂದ್ಕೊಂಡು ಬಂದವ್ರು ಬರಿಗೈಲಿ ಹೋದ್ರಂತೆ ಇತಿಹಾಸ್ದಾಗೆ ಅಂತಸ್ತು ಬಿದ್ದೋಯ್ತು ನೆಲವೆಲ್ಲಾ ಮುಳುಗೋಯ್ತು ಗೊತ್ತಿಲ್ಲಾ ಬರ್ದದ್ದು ಹಣೆಬರ್ದಾಗೆ || ಕಷ್ಟಾನೂ ಬರ್ತಾದೆ ಸುಖಾನೂ ಬರ್ತಾದೆ ಬಂದದ್ದು ತಗೋಬೇಕು ಜೀವಂದಾಗೆ ಕಷ್ಟದಲಿ ಕುಗ್ಗದಂಗೆ ಸುಖದಲ್ಲಿ ಹಿಗ್ಗದಂಗೆ ದೇವ್ರೌನೆ ಅಂದ್ಕೊಂಡ್ರೆ ನೆಮ್ಮದಿತಾನೆ || ಗೆದ್ದದ್ದು ಗೆಲುವಲ್ಲ ಸೋತದ್ದು ಸೋಲಲ್ಲ ಜಿದ್ದಾಜಿದ್ದಿಯ ಕಾಣೆ … Read more

ಕನ್ನಡದ ಬರಹಗಳನ್ನು ಹಂಚಿ ಹರಡಿ

ಅಮ್ಮ ಹೀಗೆ ಇರಬೇಕು: ಗಿರಿಜಾ ಜ್ಞಾನಸುಂದರ್

ಪುಟ್ಟ ಪುಟ್ಟ ಕೈಗಳು ಅಮ್ಮನನ್ನು ಹಿಡಿದಿದ್ದವು. ೮ ದಿನದ ಮಗು ಬಹಳ ಸಣ್ಣದಾಗಿ ಹುಟ್ಟಿದ್ದು, ಆ ಮಗುವನ್ನು ಹೇಗೆ ಎತ್ತಿಕೊಳ್ಳಬೇಕೆಂಬುದು ಸಹ ತಿಳಿದಿರಲಿಲ್ಲ ಅಮ್ಮನಿಗೆ. ಸರಸ್ವತಿ ತನ್ನ ೨೨ ನೇ ವರ್ಷಕ್ಕೆ ಮಗುವಿಗೆ ಜನನ ನೀಡಿದ್ದಳು. ಅವಳಿಗೆ ಇದೆಲ್ಲ ಹೊಸತು. ಮಗು ಅಳುತ್ತಿದ್ದರೆ ಏನು ಮಾಡಬೇಕೆಂಬುದೇ ಅವಳಿಗೆ ತಿಳಿಯುತ್ತಿರಲಿಲ್ಲ. ಯಾವ ಕಾರಣಕ್ಕೆ ಅಳುತ್ತಿದೆ ಎಂದು ಯೋಚಿಸುತ್ತಿದ್ದಳು. ಮಗು ತುಂಬ ಅಳುತ್ತಿತ್ತು, ಅವಳಿಗೆ ಅದನ್ನು ಸಮಾಧಾನ ಮಾಡುವುದೇ ಒಂದು ದೊಡ್ಡ ಸಾಹಸವಾಗಿತ್ತು. ಅವಳ ನಿದ್ದೆಗೆ, ಊಟಕ್ಕೆ ಪ್ರತಿಯೊಂದಕ್ಕೂ ಮಗು … Read more

ಕನ್ನಡದ ಬರಹಗಳನ್ನು ಹಂಚಿ ಹರಡಿ

ಇತಿ ತಮ್ಮ ವಿಶ್ವಾಸಿ: ಪ್ರಣವ್ ಜೋಗಿ

ಬಹುಶಃ ಶಾಲೆಯ ದಿನಗಳು ಇರಬೇಕು. ಯಾವುದೋ ಒಂದು ಪರೀಕ್ಷೆಯಲ್ಲಿ ಬರೆದ ಪತ್ರ. ಅದೇ ಕೊನೆಯ ಪತ್ರವಾಗಲಿದೆ ಎಂಬ ಸುಳಿವು ಆಗಲೇ ದೊರೆತ್ತಿದ್ದಿದ್ದರೆ, ಇನ್ನೂ ಒಂದಷ್ಟು ಸಾಲುಗಳನ್ನು ಬರೆದು ಬಿಡುತ್ತಿದ್ದೆ. ಆ ನಂತರ ಎಂದೂ ಪತ್ರ ಬರೆಯಲೇ ಇಲ್ಲ. ಕ್ಷಣ ಮಾತ್ರದಲ್ಲಿ ಸಂದೇಶ ತಲುಪುವ ತಂತ್ರಜ್ಞಾನ ಇರುವಾಗ, ಪತ್ರವೇಕೆ ಬರೆಯಬೇಕು ಎಂಬ ಆಲೋಚನೆ ಇದರ ರೂವಾರಿ. ದುರಂತರವೆಂದರೆ, ಮುಂಚೆ ಬರೆದ ಪತ್ರಗಳೂ ಕೂಡ ಪರೀಕ್ಷೆಗಳಲ್ಲೇ. ನಿಜ ಜೀವನದಲ್ಲಿ, ದೂರದ ಸಂಬಂಧಿಕರೊಬ್ಬರಿಗೆ ಒಂದೆರಡು ಬಾರಿ ಪತ್ರ ಬರೆದಿರಬಹುದಷ್ಟೇ. ಇಂದಿನ ಕಾಲದಲ್ಲಿ … Read more

ಕನ್ನಡದ ಬರಹಗಳನ್ನು ಹಂಚಿ ಹರಡಿ

ಮಕ್ಕಳ ಕವನ: ವರದೇಂದ್ರ ಕೆ

ಪ್ರಾರ್ಥನೆ ನಾವೆಲ್ಲ ಮಕ್ಕಳು ನಿನ್ನ ಚರಣ ಪುಷ್ಪಗಳು| ಜ್ಞಾನ ಅರಸಿ ಬಂದಿಹೆವು ವಿದ್ಯೆ ಬುದ್ಧಿ ನೀಡಮ್ಮ, ಹೇ ಮಾತೆ ಶಾರದಾಂಬೆ|| ನಾವೆಲ್ಲ ಮಕ್ಕಳೂ…. ವಿದ್ಯಾದಾಯಿನಿ ವೀಣಾಪಾಣಿ| ರಾಗ ತಾಳ ಎಲ್ಲ ನಾವೆ ಜ್ಞಾನ ವೀಣೆ ನುಡಿಸು ತಾಯೆ|೧| ನಾವೆಲ್ಲ ಮಕ್ಕಳೂ… ನಿತ್ಯವೂ ನಿನ್ನ ಸ್ಮರಣೆ ಮಾಡುವೆವು ಭಕ್ತಿಯಿಂದ| ಕರುಣೆ ತೋರಿ ಒಲಿಯಮ್ಮ ಸತ್ಯವನ್ನೆ ನುಡಿಸು ತಾಯೆ|೨| ನಾವೆಲ್ಲ ಮಕ್ಕಳೂ…. ಜ್ಞಾನ ದೀಪ ಹಚ್ಚುವೆವು ನಿನ್ನ ಚರಣ ಕಮಲಕ್ಕೆ| ಜ್ಯೋತಿ ಆಗಿ ಬಾರಮ್ಮ ನಮ್ಮ ಬಾಳ ಬೆಳಗು ತಾಯೆ|೩| … Read more

ಕನ್ನಡದ ಬರಹಗಳನ್ನು ಹಂಚಿ ಹರಡಿ

ಸಂ-ಜನ: ಹೆಚ್. ಷೌಕತ್ ಆಲಿ, ಮದ್ದೂರು

ಒಂದು ತಾಲ್ಲೋಕಿನಿಂದ ಮತ್ತೊಂದು ತಾಲ್ಲೋಕಿನ ಒಂದು ಕಾಲೇಜಿನಲ್ಲಿ ನಾನು ಉಪನ್ಯಾಸಕನಾಗಿ ಕಾರ್ಯ ನಿರ್ವಹಿಸುತ್ತಿದ್ದ ಸಂದರ್ಭದಲ್ಲಿ ದಿನಾ ಕೆ ಎಸ್ ಆರ್ ಟಿ ಸಿ ಬಸ್ನಲ್ಲಿ ಹೋಗಿ ಬರುವುದು ಮಾಮೂಲಿಯಾಗಿತ್ತು. ಸಮಯಕ್ಕೆ ಅರ್ಧಘಂಟೆ ಮುಂಚೆ ನಾನು ಬಸ್ಸ್ಟ್ಯಾಂಡ್ ನಿಂದ ಇಳಿದು ಕಾಲೇಜಿಗೆ ನಡೆದುಕೊಂಡೆ ಹೋಗುತ್ತಿದ್ದೆ. ನನ್ನ ಕೈಯಲ್ಲಿ ಟೀಫಿನ್ ಬಾಕ್ಸ್, ವಾಟರ್ ಬಾಟಲ್ ಅವುಗಳನ್ನು ಹೊತ್ತಿರೋ ಒಂದು ಬ್ಯಾಗ್ ಆ ಬ್ಯಾಗ್ ನನ್ನ ಕೈಯಲ್ಲಿ. ಆ ಬ್ಯಾಗ್ ಹಿಡಿದುಕೊಂಡು ನಾನು ಕಾಲೇಜಿಗೆ ಬರುವಾಗ, ಹೋಗುವಾಗ ನನ್ನ ವಾಕಿಂಗ್ ಸ್ಟೈಲ್ … Read more

ಕನ್ನಡದ ಬರಹಗಳನ್ನು ಹಂಚಿ ಹರಡಿ

ದೇಹವೆ ದೇವಾಲಯ !: ಕೆ ಟಿ ಸೋಮಶೇಖರ ಹೊಳಲ್ಕೆರೆ

ದೇವಾಲಯ ಎಂಬುದು ನೆಮ್ಮದಿಯ ತಾಣ. ದೇವರು ಎಂಬುದು ಒಳ್ಳೆಯದರ ಸಂಕೇತ! ಮಾನವರು ದೇವರನ್ನು ಪೂಜಿಸುವುದು ಆರಾಧಿಸುವುದು ಎಂದರೆ ಒಳ್ಳೆಯತನದ ಆರಾಧನೆ ಎಂದು ಅರ್ಥ ! ಎಲ್ಲರೂ ದೇವಸ್ಥಾನಕ್ಕೆ ಹೋಗುತ್ತಿದ್ದಾರೆಂದರೆ ಒಳ್ಳೆಯದನ್ನು ಬಯಸುತ್ತಿದ್ದಾರೆಂದು ಅರ್ಥ. ಒಳ್ಳೆಯತನ ಸದಾ ಮಾನವರಿಗೆ ನೆಮ್ಮದಿ ನೀಡುತ್ತದೆ! ಅದಕ್ಕಾಗಿ ಅನೇಕರು ಅದನ್ನು ಅರಸಿ ದೇವಾಲಯಗಳಿಗೆ ಹೋಗುತ್ತಾರೆ. ಆದರೆ ಅದನ್ನು ಕೆಲವರು ಅರ್ಥೈಸುವಲ್ಲಿ ಆಚರಿಸುವಲ್ಲಿ ಪ್ರಮಾದಗಳಾಗಲು ಕಾರಣರಾಗಿರುವುದರಿಂದ ರೌದ್ರ ಭೀಭತ್ಸ ವಾತಾವರಣ ಉಂಟಾಗುತ್ತಿದೆ. ನೆಮ್ಮದಿಯ ತಾಣವಾಗಬೇಕಾದವು ನೆಮ್ಮದಿಯ ಕದಡಲು ಕಾರಣವಾಗುತ್ತಿವೆ. ಕೆಲವು ಮಹನಿಯರು ದೇಹವೆ ದೇವಾಲಯವಾಗಬೇಕೆಂದಿರುವರು. … Read more

ಕನ್ನಡದ ಬರಹಗಳನ್ನು ಹಂಚಿ ಹರಡಿ