ಸ್ಪಾಟಾಗಿದ್ದರೆ : ಡಾ. ಗವಿಸ್ವಾಮಿ

ಸಂಜೆ ಐದಾಗಿತ್ತು. ಬೈಕಿನಲ್ಲಿ ಊರಿಗೆ ಹೋಗುತ್ತಿದ್ದೆ. ಐವತ್ತರವತ್ತು ಮೀಟರಿನಷ್ಟು ಮುಂದೆ ಗೌರ್ಮೆಂಟ್ ಬಸ್ ಹೋಗುತ್ತಿತ್ತು. ಬಿರುಗಾಳಿ ವೇಗದಲ್ಲಿ ನನ್ನ ಸನಿಹಕ್ಕೇ ಬಂದು ಸೈಡು ಹೊಡೆದು  ಹೋಯ್ತು ಒಂದು ಬೈಕು. ಒಂದು ಕ್ಷಣ ಎದೆ ಝಲ್ಲೆಂದಿತು. ಬಸ್ಸನ್ನೂ ಸೈಡು ಹೊಡೆಯಲು  ಯತ್ನಿಸಿದ ಬೈಕ್ ಸವಾರ. ಎದುರಿಗೆ ಲಾರಿ ಬಂದು ಬಿಡ್ತು. ಸಿಕ್ಕಿಕೊಂಡು ಬಿಟ್ಟಿದ್ದರೆ ಅಲ್ಲೇ ಕತೆಯಾಗಿರುತ್ತಿದ್ದ . ಸಣ್ಣ ಗ್ಯಾಪಿನಲ್ಲಿ ನುಸುಳಿಬಿಟ್ಟ. ಆದರೆ ಅದೇ ಸ್ಪೀಡಿನಲ್ಲಿ ಹೋಗಿ  ಎದುರಿಗಿದ್ದ ಮೈಲಿಗಲ್ಲಿಗೆ ಗುದ್ದಿಸಿಬಿಟ್ಟ! ಕೇವಲ ಐದಾರು ಸೆಕೆಂಡುಗಳಲ್ಲಿ  ಇಷ್ಟೆಲ್ಲಾ  ನಡೆದುಹೋಯ್ತು. … Read more

ಕನ್ನಡದ ಬರಹಗಳನ್ನು ಹಂಚಿ ಹರಡಿ

ಪಂಜು ಚುಟುಕ ಸ್ಪರ್ಧೆ: ಡಾ. ಆಜಾದ್ ಐ ಎಸ್ ಅವರ ಚುಟುಕಗಳು

1.    ನಿನ್ನೆ ಮಳೆ ಹನಿ ಅಂಗೈಲಿದೆ ಇನ್ನೂ ನಿನ್ನೇ ನೆನೆದು ಕುಳಿತಿರುವೆ ಇನ್ನೂ ನಿನ್ನೀ ತಪನದ ಬೇಗೆಯಲಿ ಬರಿದೇ ನನ್ನೇ ಮರೆತಿರುವೆ ವರ್ಷಾ ನೀ ಮತ್ತೆ ……………..ಬರದೇ……………..   2.    ಮಿಂಚು-ಹೊಳಪು ಹುಟ್ಟಿದಾಗ ಮಗ ಮಮತೆ ಮಡಿಲಲಿ ಆಡುತಿರುವಾಗ ತುಂಬಿ ಆತಂಕ-ಕಂಬನಿ ಗೆಲುವಿಲ್ಲದಾಗ  ಬೆಳೆದು ಹೆಮ್ಮರ ನಾನು, ಏನೆನ್ನಲಿ ? ಆ ಮಮತಾ ಮಯಿಯ ಕಣ್ಣ ಕನ್ನಡಿ ಬರೆದಂತೆ ಕಂಡಿಲ್ಲ ನನ್ನ ವಯಸಿಗೂ  ……………ಮುನ್ನುಡಿ ……………   3.    ನೀ ನನ್ನ ಮನದನ್ನೆ … Read more

ಕನ್ನಡದ ಬರಹಗಳನ್ನು ಹಂಚಿ ಹರಡಿ

ಸಾರಿ ರೀ.. ಥ್ಯಾಂಕ್ಯೂ: ಪ್ರಶಸ್ತಿ ಅಂಕಣ

ತಪ್ಪು ಮಾಡದೋರು ಯಾರವ್ರೇ, ತಪ್ಪೇ ಮಾಡದವ್ರು ಯಾರವ್ರೇ ಅಂತ ನಮ್ಮ ಜಗ್ಗೇಶ್ ಮಠ ಫಿಲ್ಮಲ್ಲಿ ಕುಣಿದಿದ್ದು ಎಲ್ರಿಗೂ ಗೊತ್ತಿದ್ದೆ. ತಿಳಿದೋ, ತಿಳೀದೆನೋ ಏನಾರೂ ತಪ್ಪು ಮಾಡ್ತಾನೆ ಇರ್ತೀವಿ. ನಮಗೆ ಸರಿಯೆನಿಸಿದ್ದು ಯಾರಿಗೋ ತಪ್ಪೆನಿಸಿ ಅವರ ಮನ ನೋಯಿಸಿರ್ತೀವಿ. ಸುಮ್ಮನೇ ತಪ್ಪೆಣಿಸಿ ಮುಗ್ದ ಮನವನ್ನ ನೋಯಿಸಿರ್ತೀವಿ. ಯಾರೋ ತಪ್ಪು ತಿಳೀಬೋದೆಂದು ತಪ್ಪಾಗಿ ಭಾವಿಸಿ ಹೇಳಬೇಕಾದ ಮಾತು, ಮಾಡಬೇಕಾದ ಕೆಲಸ ಮಾಡದೇ ತಪ್ಪೆಸಗಿರ್ತೀವಿ. ಹೀಗೇ ಹೆಜ್ಜೆ ಹೆಜ್ಜೆಗೆ ತಪ್ಪು, ಕೂತಿದ್ದು-ನಿಂತಿದ್ದು ತಪ್ಪೆಂದು ಕಾಡಿ ಎಷ್ಟೋ ಜೀವಗಳ ಕಣ್ಣೀರಿಳಿಸಿರ್ತೀವಿ. ಕೆಲವೊಮ್ಮೆಯಂತೂ ನಾವು … Read more

ಕನ್ನಡದ ಬರಹಗಳನ್ನು ಹಂಚಿ ಹರಡಿ

ಹೀಗೊಂದು ಕಿಡ್ನಾಪ್:ಪಾರ್ಥಸಾರಥಿ ಎನ್

ಪ್ರಿಯಾ ಸೆಲ್ವರಾಜ್ ಬೆಂಗಳೂರಿನಲ್ಲಿಯೆ ಪ್ರಸಿದ್ದಳಾಗಿದ್ದ ಕ್ರಿಮಿನಲ್ ಅಡ್ವೊಕೇಟ್. ಆಕೆ ಕೊಲೆ ದರೋಡೆಗಿಂತ, ಬೆಂಗಳೂರಿನ ರಿಯಲ್ ಎಸ್ಟೇಟ್ ವ್ಯವಹಾರಕ್ಕೆ ಸಂಬಂದಿಸಿದ ಕೇಸ್ ಗಳನ್ನು ಹ್ಯಾಂಡಲ್ ಮಾಡಿರುವುದೆ ಜಾಸ್ತಿ. ಅದಕ್ಕೆ ಕಾರಣ ಅದರಲ್ಲಿ ಬರುತ್ತಿದ್ದ ಹಣ.  ಆಕೆ ಕೋರ್ಟ್ ನಲ್ಲಿ ಗೆದ್ದ ಕೇಸುಗಳಿಗಿಂತ ಹೊರಗೆ ಸೆಟ್ಲ್ ಮಾಡಿರುವ ಕೇಸ್ ಗಳೆ ಜಾಸ್ತಿ ಇದ್ದವು, ತಾನು ತೆಗೆದುಕೊಂಡ ಕೇಸ್ ಗೆಲ್ಲಲು ಆಕೆ ಎಲ್ಲ ರೀತಿಯಲ್ಲು ಪ್ರಯತ್ನ ಪಡುತ್ತಿದ್ದಳು. ಎದುರು ಪಾರ್ಟಿಯನ್ನು ಹಿಡಿದು ಒಪ್ಪಿಸುವುದು, ಎದುರು ಪಾರ್ಟಿಯ ಲಾಯರ್ ಗಳನ್ನು ಹಣತೋರಿಸಿ ಆಸೆ … Read more

ಕನ್ನಡದ ಬರಹಗಳನ್ನು ಹಂಚಿ ಹರಡಿ

ಆಂಗ್ಲ – ಕನ್ನಡ ಇತ್ತೀಚಿನ ನಿಘಂಟು, ಇತ್ಯಾದಿ : ಆರತಿ ಘಟಿಕಾರ್

1.       ಬೈತಲೆ ಬಟ್ಟು ಧರಿಸುವವಳು ಬೈತಲೆ ತಗೆಯಲೇ ಬೇಕೆಂಬ ನಿಯಮ ಇಲ್ಲ  ! 2.       ಸಾಮನ್ಯವಾಗಿ  ಡಾಕ್ಟರ್ ದಂಪತಿಗಳು  ತಮ್ಮ ಮಕ್ಕಳ ಹ್ಯಾಂಡ್ ರೈಟಿಂಗ್ ಬಗ್ಗೆ ತಲೆಕೆಡಿಸಿಕೊಳ್ಳುವುದಿಲ್ಲ. 🙂 3.       ವರ ಪೂಜೆಯ ಸಮಾರಂಭದಿಂದಲೇ  ಮದುವೆ  ಆಗುವವನ ಪೂಜೆ ಶುರುವಾಗುತ್ತದೆ. 🙂 4.       ಮನೆಗೆ ಬಂದ ನಂತರ ಮಾಮೂಲಿಗಿಂತಲೂ  ಹೆಚ್ಚು ಮೌನಿಯಾಗಿ  ಗಂಡ  ಕುಳಿತ್ತಿದ್ದರೆ (ಆಫೀಸಿನಲ್ಲಿ) ಏನಾದರೂ ಎಡವಟ್ಟು ಮಾಡಿಕೊಂಡಿದ್ದಾನೆಂದೇ ಅರ್ಥ. 5.       ಪೆನ್ ಅಂಗಡಿಗಳಲ್ಲಿ  ಹೊಸ ಪೆನ್ ಪರೀಕ್ಷಿಸುವವರೆಲ್ಲರೂ  ಅಲ್ಲಿದ್ದ ಪೇಪರ್ ಮೇಲೆ ಗೀಚೀಯೇ ನೋಡುತ್ತಾರೆ. (ಹೀಗಾಗಿ … Read more

ಕನ್ನಡದ ಬರಹಗಳನ್ನು ಹಂಚಿ ಹರಡಿ

ಅವಳಿಗೆ ಸಾಸಿವೆ ಬೇಕಿಲ್ಲ, ಇವಳಿಗೆ ಸಾಸಿವೆ ಸಿಗಲಿಲ್ಲ: ಚೈತ್ರಾ.ಎನ್.ಭವಾನಿ

ಅರೆ ಬೆಂದ ಸೌದೆ ಅತ್ತ ಬೇಸಿಗೆಯ ಧಗೆಯಲ್ಲಿ ಮೆಲ್ಲಗೆ ವಿಧಾಯ ಹೇಳುತ್ತಿರೋ ಸೌದೆ ಸೀಳುಗಳಿಗೆ ಆರಲೇಬೇಕು ಅನ್ನೋ ಧಾವಂತವಿಲ್ಲ. ಸಣ್ಣಗೆ ಏಳುತಿದ್ದ ಬಿಳಿ ಮಿಶ್ರಿತ ಕಪ್ಪು ಹೊಗೆ ಮುಚ್ಚಿದ ಮೋಡದ ಪ್ರತಿಬಿಂಬ. ಎಂದಿನಂತೆಯೇ  ಮನೆಯ ಬಾಗಿಲಿಗೆ ಒರಗಿ ಮನೆಯ ಮುಂಭಾಗ ಕುಳಿತಿದ್ದ ಮುದುಕಮ್ಮನ ಮುಖದಲ್ಲಿ ಎಂದಿನಂತೆಯೇ ಅದೇ ನಿರ್ಲಿಪ್ತ ಭಾವಗಳು. ಅಲ್ಲೇ ಆಚೆಗೆ  ಕುರ್ಚಿ ಮೇಲೆ ಕುಳಿತಿದ್ದ ಮುದುಕಪ್ಪನಿಗೂ ಅಷ್ಟೇ, ಹೋದವನು ಹೋದ ಅನ್ನೋ ನಿರ್ಲಿಪ್ತ ಭಾವ!? ಸಂತಸದ ಪರಮಾವಧಿಯಲ್ಲಿ ಒಳಗೊಳಗೇ ಬಿಡಿಸಿಕೊಳ್ಳುತ್ತಿರುವ  ನಿರಾಳದ ಮೌನವೇ..!? ದೊರಕಿತೆ ಮುಕ್ತಿ …? … Read more

ಕನ್ನಡದ ಬರಹಗಳನ್ನು ಹಂಚಿ ಹರಡಿ

ನಾಟಕಕಾರರಾಗಿ ಕುವೆಂಪು (ಭಾಗ-7): ಹಿಪ್ಪರಗಿ ಸಿದ್ದರಾಮ್

ಓರ್ವ ವಿದ್ಯಾವಂತ ಘನ ಬ್ರಾಹ್ಮಣೋತ್ತಮನು ಧರ್ಮಭೀರುವಾಗಿದ್ದರೂ ಪರಂಪರೆಯಿಂದ ಬಂದ ಶಾಸ್ತ್ರದ ಕುರಿತ ಶ್ರದ್ಧೆ ಆತನ ವಿಕಾಸವನ್ನು ಮೊಟಕುಗೊಳಿಸುತ್ತಾ ತನ್ನಂತೆ ಇತರರು ಆಗಬಾರದೆನ್ನುವ ಅಸೂಯಾಗುಣ ಅವನನ್ನು ಹೇಗೆ ಕೆಳಮಟ್ಟಕ್ಕೆ ತಳ್ಳುವದರೊಂದಿಗೆ ಆತನನ್ನು ಹಿಂದೆ-ಮುಂದೆ ಗೊತ್ತಿಲ್ಲದೇ ಬೆಂಬಲಿಸಿದವರೂ ಸಹ ಚಿಕ್ಕವರಾಗುತ್ತಾರೆ ಎಂಬುದರಿಂದ ಹಿಡಿದು ಕೊನೆಯಲ್ಲಿ ತನ್ನ ತಪ್ಪಿನ ಅರಿವಾಗಿ ವಕ್ರಬುದ್ಧಿಯನ್ನು ತಿದ್ದಿಕೊಂಡು ಪಶ್ಚಾತ್ತಾಪ ಪಡುವುದು, ನಂತರದಲ್ಲಿ ಶ್ರೀರಾಮಚಂದ್ರನು ಆದರ್ಶಪ್ರಾಯನಾಗಿರುವುದನ್ನು ಮತ್ತೊಮ್ಮೆ ಸಾಬೀತುಪಡಿಸುವುದು ಹೀಗೆ ಪೌರಾಣಿಕ ಕಾಲದ ಅಂಧಶ್ರದ್ಧೆಯ ಕಥೆಯೊಂದು, ಮಹಾಕವಿಗಳ ಪ್ರತಿಭಾಲೋಕವನ್ನು ಪ್ರವೇಶಿಸಿ ಹೇಗೆ ಪುನರ್ಜನ್ಮವನ್ನು ಪಡೆದು ಪ್ರಜ್ವಲಿಸುವ ಬೆಳಕನ್ನು … Read more

ಕನ್ನಡದ ಬರಹಗಳನ್ನು ಹಂಚಿ ಹರಡಿ

ಕಮಲಾದಾಸ್ ರ ಎರಡು ಕವನಗಳ ಕನ್ನಡರೂಪ: ಚಿನ್ಮಯ್ ಎಂ.

( ಕಮಲಾದಾಸ್ ರ ‘My Grandmother’s House’ ಕವನದ ಕನ್ನಡರೂಪ ) ನನ್ನ ಪ್ರೀತಿಯ ಮನೆ ದೂರದಲ್ಲಿದೆ. ಆ ಮುದುಕಿ ಸತ್ತಮೇಲೆ ಅವಳ ಬಿಳಿ ಸೀರೆಯಂತೆ ಮೌನವನ್ನುಟ್ಟ ಮನೆಯ ಪುಟಗಳ ನಡುವೆ, ಗೋಡೆಯ ಬಿರುಕುಗಳಲ್ಲಿ ಹಾವುಗಳು ಹರಿದಾಡಿದವು. ನನ್ನ ಪುಟ್ಟ ಜೀವ ಹೆಪ್ಪುಗಟ್ಟಿತು. ಅದೆಷ್ಟು ಬಾರಿ ಅಲ್ಲಿಗೆ ಹೋಗುವ ಯೋಚನೆ  ಮಾಡಿಲ್ಲ ನಾನು? ಕಿಟಕಿಗಳ ಖಾಲಿ ಕಣ್ಣುಗಳಾಚೆ ಇಣುಕಿ ಹೆಂಚಿನ ಕಾವಿಗೆ ಮೈಯ್ಯೊಡ್ಡಿ ನೀರವದ ಸದ್ದಿಗೆ ಕಿವಿಗೊಟ್ಟು ಅಥವಾ ಕಡೇ ಪಕ್ಷ ಹುಚ್ಚು ನಿರಾಸೆಯಿಂದ ಬೊಗಸೆ ತುಂಬಾ … Read more

ಕನ್ನಡದ ಬರಹಗಳನ್ನು ಹಂಚಿ ಹರಡಿ

ಬದುಕೆಂಬ ಬಂದೀಖಾನೆಯಲ್ಲಿ…: ವಾಸುಕಿ ರಾಘವನ್

ಆಗಿನ್ನೂ ನನಗೆ ಈ ಪರಿ ಸಿನಿಮಾ ಹುಚ್ಚು ಹತ್ತಿರಲಿಲ್ಲ. ಆಫೀಸ್ ಗೆ ಕ್ಯಾಬ್ ಅಲ್ಲಿ ಹೋಗೋವಾಗ “ಡಂಬ್ ಶರಾಡ್ಸ್” ಆಡ್ತಾ ಇದ್ವಿ. ಸ್ವಲ್ಪ ದಿನದಲ್ಲೇ ಎಕ್ಸ್‌ಪರ್ಟ್ಸ್ ಆಗೋದ್ವಿ ತುಂಬಾ ಜನ, ಸಿನಿಮಾ ಹೆಸರನ್ನ ಸುಲಭವಾಗಿ ಊಹಿಸಿಬಿಡ್ತಿದ್ವಿ. ಆಗ ಕಷ್ಟಕಷ್ಟದ ಹೆಸರುಗಳನ್ನು ಹುಡುಕಿ ಕೊಡೋ ಪರಿಪಾಠ ಶುರು ಆಗಿತ್ತು. ಒಂದು ದಿನ ಗೆಳೆಯ ಪ್ರದೀಪ್ “ಶಾಶ್ಯಾಂಕ್ ರಿಡೆಂಪ್ಶನ್” ಅಂತ ನನ್ನ ಕಿವಿಯಲ್ಲಿ ಉಸುರಿದರು. “ಏನು? ಶಶಾಂಕ್ ರಿಡೆಂಪ್ಶನ್ ಅಂತಾನಾ? ಆ ಥರ ಯಾವ ಫಿಲ್ಮ್ ಇದೆ? ತಮಾಷೆ ಮಾಡ್ತಿಲ್ಲ … Read more

ಕನ್ನಡದ ಬರಹಗಳನ್ನು ಹಂಚಿ ಹರಡಿ

ಕನಸೆಂಬೋ ಕುದುರೆಯನೇರಿ:ಮಹಾದೇವ ಹಡಪದ

ಜಗತ್ತಿನ ಶ್ರೇಷ್ಠ ಚಿತ್ರನಿರ್ದೇಶಕರಾದ ಜಪಾನಿನ ಕುರೊಸವಾ ಅವರ ರಶೊಮನ್ ಗೇಟ್ ಚಿತ್ರದ ಮಾದರಿಯಲ್ಲಿ ಕನಸೆಂಬೋ ಕುದುರೆಯನೇರಿ ಸಿನಿಮಾವನ್ನು ಕಾಸರವಳ್ಳಿಯವರು ಕಟ್ಟಿಕೊಡಲು ಪ್ರಯತ್ನಿಸಿದ್ದಾರೆ. ಒಂದು ಘಟನೆಯನ್ನು ಏಳೆಂಟು ಜನ ತಮಗೆ ಕಂಡ ಸತ್ಯದ ಎಳೆಯಲ್ಲಿ, ಗ್ರಹಿಸಿದ ರೀತಿಯಲ್ಲಿ ಹೇಳುವ ರಶೋಮನ್ ಗೇಟ್ ಸಿನಿಮಾದ ನಿರೂಪಣಾ ತಂತ್ರವನ್ನು ಕನಸೆಂಬೋ ಕುದುರೆಯನೇರಿ ಚಿತ್ರದಲ್ಲಿ ಬಳಸಿಕೊಂಡಿದ್ದಾರೆ. ಆದರೆ ರಶೋಮನ್ ಚಿತ್ರದ ಸಾಧ್ಯತೆಗಳಿಗಿಂತ ಹೆಚ್ಚು ಸಾತ್ವಿಕವಾದ ವಿಭಿನ್ನ ಹಾದಿ ತುಳಿದಿದೆ. ಈ ಚಿತ್ರದಲ್ಲಿ ವಾಸ್ತವದ ಮತ್ತೊಂದು ಮಜಲು ಕಾಣಿಸುತ್ತದೆ.  ಕನಸು, ನಂಬಿಕೆಗಳು ಸುಳ್ಳಾಗುತ್ತ ಹೋದಂತೆ … Read more

ಕನ್ನಡದ ಬರಹಗಳನ್ನು ಹಂಚಿ ಹರಡಿ

ಮೂವರ ಕವಿತೆಗಳು: ರಾಘವ ಭಟ್ ಲಾಲಗುಳಿ, ದಿಲೀಪ್ ರಾಥೋಡ್, ರುಕ್ಮಿಣಿ.ಎನ್.

ಮಾತು-ಮೌನ ಮೌನ ಬದುಕಿಗೆ ಅರ್ಥ ಮೌನ ಮಾತಿಗೆ ವ್ಯರ್ಥ ಭಾವ ಭಾವದ ತುಣುಕು ಮೃದು ಮೌನದಲಿ ಹುಡುಕು ||   ಮೌನ ಸಾಗರವಹುದು  ಮಾತೊಂದು ಕೆರೆ ಹುಚ್ಛ ಮೌನ ಸಂವೇದನೆಗೆ ಮೌನದರ್ಥವೇ ಸ್ವಚ್ಛ ||   ಕಳೆದದ್ದು ಮಾತು ಹುಡುಕಿದ್ದು ಮೌನ ಮೌನ ಪ್ರಖರತೆ ಮುಂದೆ ಮಾತೊಂದು ಗೌಣ ||   ಮಾತು ತಾರಿಕೆಯಾಯ್ತು ಮೌನ ತಾ ಚಂದ್ರಮನು ಮೌನ ಹಗಲೂ ಇರುಳು ಮಾತು ಬೆಳಕಿಗೆ ಮರುಳು||   ಮಾತು ಮಾಣಿಕ ನಿಜ ಮಾತೆಲ್ಲ ಮಾಣಿಕವಲ್ಲ ಮೌನದಲಿ … Read more

ಕನ್ನಡದ ಬರಹಗಳನ್ನು ಹಂಚಿ ಹರಡಿ

ನಾಟಕಕಾರರಾಗಿ ಕುವೆಂಪು (ಭಾಗ-6): ಹಿಪ್ಪರಗಿ ಸಿದ್ದರಾಮ್

ಅಲ್ಪನೋರ್ವ ಆಡಿದನೆಂಬ ಕೊಂಕು ಮಾತಿಗೆ ಕಿವಿಗೊಟ್ಟು ಅರಮನೆಯಿಂದಲೇ ಗರ್ಭಿಣಿಯಾಗಿದ್ದ ಅರ್ಧಾಂಗಿಯನ್ನು ಕಾಡಿಗಟ್ಟುವ ಭರತಖಂಡದ ಆದರ್ಶ ವ್ಯಕ್ತಿತ್ವದ ರಾಮನ ವಿವಾದಾಸ್ಪದ ವಿಚಾರದಿಂದ ನಡೆಯುವ ಪ್ರಸಂಗದಲ್ಲಿ ಭಾಗ್ಯಶಾಲಿಯಾದ ರಾಮಾಯಣದ ಪಾತ್ರವೆಂದರೆ ವಾಲ್ಮೀಕಿ ಮಹರ್ಷಿಗಳು. ಮಹಾಕವಿ ಕುವೆಂಪು ಅವರ ತರ್ಕದ ಹಿನ್ನಲೆಯು ಈ ಪ್ರಸಂಗಕ್ಕೆ ಸೂತ್ರಧಾರಕ ಶಕ್ತಿಯಂತೆ ತೋರುವುದರೊಂದಿಗೆ ‘ವಾಲ್ಮೀಕಿಯ ಭಾಗ್ಯವೇ !’ ಎಂದು ರಂಗಕೃತಿಯ ಪ್ರಸಂಗದ ಕೊನೆಯಲ್ಲಿ ಮಹರ್ಷಿಗಳ ಬಾಯಿಯಿಂದಲೇ ಹೇಳಿಸುವುದರೊಂದಿಗೆ ಮಹಾಕವಿಗಳು ಆಧುನಿಕ ರಂಗತಂತ್ರಗಳ ಝಲಕ್ ಎಂಬಂತೆ ಚಮಾತ್ಕಾರಿಕ ಸಂಭಾಷಣೆಯ ಅಂತ್ಯ ನೀಡಿರುವುದನ್ನು ಹಿಂದಿನ ಸಂಚಿಕಯಲ್ಲಿ ನೋಡಿದ್ದೇವೆ. ಈಗ … Read more

ಕನ್ನಡದ ಬರಹಗಳನ್ನು ಹಂಚಿ ಹರಡಿ

ನಮ್ಮ ಅಣ್ಣಾವ್ರು ಅಂದರೆ ಕಡಿಮೇನಾ?: ಶ್ರೀಧರ್ ಬನವಾಸಿ

ಭಾರತೀಯ ಸಿನಿಮಾದಲ್ಲಿ ಅನೇಕ ಸೂಪರ್‌ಸ್ಟಾರ್‌ಗಳು, ಕಲಾವಿದರು ಬಂದು ಹೋಗಿದ್ದಾರೆ. ಈಗಲೂ ಬರುತ್ತಲೇ ಇದ್ದಾರೆ. ಆದರೆ ನೂರು ವರ್ಷದ ಭಾರತೀಯ ಸಿನಿಮಾ ಇತಿಹಾಸದಲ್ಲಿ ಡಾ. ರಾಜ್‌ಕುಮಾರ್ ಹೇಗೆ ವಿಭಿನ್ನ ಅನ್ನುವುದಕ್ಕೆ ಒಂದು ಮಾತನ್ನು ನೆನಪಿಸಿಕೊಳ್ಳಲೇಬೇಕು. ಈ ಮಾತನ್ನು ಹೇಳಿದವರು ಬೇರೆ ಯಾರೂ ಅಲ್ಲ. ತೆಲುಗಿನ ಮೇರುನಟ ನಾಗೇಶ್ವರರಾಯರು (ತೆಲುಗು ಸೂಪರ್‌ಸ್ಟಾರ್  ನಾಗಾರ್ಜುನ ಅವರ ತಂದೆ)  ರಾಜ್‌ಕುಮಾರ್ ಮೇಲೆ ಅಪಾರ ಗೌರವವನ್ನು ಹೊಂದಿದ್ದ ನಾಗೇಶ್ವರರಾಯರು, ವೈಯಕ್ತಿಕವಾಗಿ ಅವರದ್ದು ಸುಮಾರು ೫೦ ವರ್ಷಗಳ ಸ್ನೇಹವಾಗಿತ್ತು. ರಾಜ್‌ಕುಮಾರ್ ಬೇಡರ ಕಣ್ಣಪ್ಪ ಸಿನಿಮಾದಲ್ಲಿ ಅಭಿನಯಿಸುವಾಗ … Read more

ಕನ್ನಡದ ಬರಹಗಳನ್ನು ಹಂಚಿ ಹರಡಿ

ಚುಟುಕಗಳು: ಹೇಮಲತಾ ಪುಟ್ಟನರಸಯ್ಯ

ಉಗುರುಗಳದು ನೆನಪಿನದು , ಕತ್ತರಿಸಿದಷ್ಟು ವೇಗದಲಿ ಮೂಡುವುದು , ಸಿಬಿರಾಗಿ ನಿಂತು ಚುಚುತ್ತಲೇ ಇರುವುದು ******************** ನೀ ಕೊಟ್ಟ ನೋವಿನ ವಿಷವನ್ನು  ಗಟಗಟನೆ ಕುಡಿದೂ ಸಾಯದೆ ಉಳಿಯಲು ನಾನೇನು ನೀಲಕಂಠನಲ್ಲ ಒಳಗೆ ಸತ್ತಿರುವೆ ಆದರು ಇನ್ನು ಬದುಕೇ ಇರುವೆ *************** ಅವನ ಗಂಡಸುತನವ ದಿಕ್ಕರಿಸಿದ ನನ್ನ ಹೆಣ್ತನ ಕದವಿಕ್ಕಿ ಅಳುತ್ತಿತ್ತು ಒಳಗೆ ********** ಇಂಚಿಂಚು ಕೊಂದಿರುವೆ ಚುಚ್ಚಿ ಚುಚ್ಚಿ ಹುಡುಕಲು ನಿನ್ನ ಬಿಂಬವನ್ನು ಚೂರುಗಳಲ್ಲಿ ನಾನೇನು ಕನ್ನಡಿಯಲ್ಲ ********** ನವಿಲಿಗೆ ಕುಣಿವುದೇ ಧರ್ಮ ಕೆಂಬೂತದ ಸಹವಾಸಕ್ಕೆ ಕುಣಿವುದ … Read more

ಕನ್ನಡದ ಬರಹಗಳನ್ನು ಹಂಚಿ ಹರಡಿ

ಓ ಮನಸೇ, ಸ್ವಲ್ಪ ರಿಲ್ಯಾಕ್ಸ್ ಪ್ಲೀಸ್:ಪ್ರಶಸ್ತಿ ಅಂಕಣ

ಇವತ್ತಿನ ಯಶಸ್ಸನ್ನು ನಾಳೆಯ ಗುರಿಗಳೆದುರು ನಿಲ್ಲಿಸಿ ಕಡೆಗಣಿಸೋ ಮುನ್ನ.. ಜೀವನದೋಟದಲಿ ಎಲ್ಲರಿಗಿಂತ ಮುಂದಿರೋ ಬಯಕೆಯಲಿ ದಾಟಿದ ಎಷ್ಟೋ ಮೈಲುಗಳ ಮರೆಯೋ ಮುನ್ನ.. ಜತೆಗಿದ್ದವರ ನೋವಲ್ಲಿ ದನಿಯಾಗಿ, ನಲಿವಲ್ಲಿ ಅನಾಥನಾಗೋ ಮುನ್ನ.. ಓ ಮನಸ್ಸೇ ರಿಲ್ಯಾಕ್ಸ್ ಪ್ಲೀಸ್.. ಯಶವೆಂಬುದು ಗುರಿಯಲ್ಲ, ಅನುದಿನದ ದಾರಿ.. ಓ ಮನಸ್ಸೇ ರಿಲ್ಯಾಕ್ಸ್ ಪ್ಲೀಸ್ 🙂 ಬಾಳು, ಗೋಳು, ನೋವು, ನಲಿವು .. ಉಫ್ ಏನಪ್ಪಾ ಇದು ವೇದಾಂತ ಅಂದ್ಕೊಂಡ್ರಾ ? ಹಾಗೇನಿಲ್ಲ. ಪ್ರತೀ ವಾರದಂತೆಯೇ.. ಆದರೆ ಸ್ವಲ್ಪ ಭಿನ್ನವಾಗಿ. ಸ್ವಗತದ ಮಾತುಗಳನ್ನು ಪದಗಳಿಗಿಳಿಸೋ … Read more

ಕನ್ನಡದ ಬರಹಗಳನ್ನು ಹಂಚಿ ಹರಡಿ

ಮನಸ್ಸು ಒಮ್ಮೊಮ್ಮೆ ಹೀಗೆಲ್ಲಾ ಯೋಚಿಸುವುದು೦ಟು…!: ರಾಮಚಂದ್ರ ಶೆಟ್ಟಿ

"ನನಗೆ ದೇವರು ಏನನ್ನೂ ಕೊಟ್ಟಿಲ್ಲ" ಇದು ಸಾಮಾನ್ಯವಾಗಿ ಎಲ್ಲಾ ಇರುವವರ ಒ೦ದು ದೂರು,ಒ೦ದು ಹೇಳಿಕೆ ದೇವರೆಡೆಗೆ .ನನ್ನನ್ನೂ ಸಹ ಸೇರಿಸಿ..ಸಾಮಾನ್ಯವಾಗಿ ನಾವು ನೋವಿನ ಪರಿಧಿಯೊಳಗೆ ಸಿಕ್ಕಿಕೊ೦ಡು ಒದ್ದಾಡುತ್ತಿರುವಾಗ ,ನಾವು ಆಸೆ ಪಟ್ಟಿದ್ದು ನಮಗೆ ದಕ್ಕದಿದ್ದಾಗ, ಅಥವಾ ನಮಗೆ ಹತ್ತಿರ ಎ೦ದೆನಿಸಿದವರೂ ನಮ್ಮಿ೦ದ ದೂರ ನಡೆದಾಗ ಇ೦ಥ ಅನೇಕ ಸ೦ಧರ್ಭದಲ್ಲಿ ಅದರ ಪರಿಣಾಮವನ್ನು ಸ್ವೀಕರಿಸಲಾಗದೆ ಮಾನಸಿಕ ಸ್ಥಿತಿಯಲ್ಲಿ ವ್ಯತ್ಯಯವಾಗಿ ಅಥವಾ ಗೊ೦ದಲವಾಗಿ ನಾವು ಪೂರ್ತಿಯಾಗಿ ಸೋತು ಬಿಟ್ಟೆವು ಅ೦ದುಕೊ೦ಡುಬಿಡುತ್ತೇವೆ..ಈ ಸಮಯದಲ್ಲಿನ ನೋವು, ನಿರಾಶೆ ಹತಾಶೆಯನ್ನು ಹತ್ತಿಕ್ಕಲಾಗದೆ ಗೊ೦ದಲದಲ್ಲಿದ್ದಾಗ ಈ … Read more

ಕನ್ನಡದ ಬರಹಗಳನ್ನು ಹಂಚಿ ಹರಡಿ

ಹಳ್ಳಿಯಾವ ಕಳಿಸಿಕೊಟ್ಟ ಪಾಠ: ಶ್ರೀಕಾಂತ್ ಮಂಜುನಾಥ್

ನಾಗರೀಕ ಸಮಾಜ ಎಂದು ಬೀಗುವ ಪಟ್ಟಣದಲ್ಲಿ ಸಂಸ್ಕೃತಿ ಮರೆತು ಹೇಗೆ ಆಡುತ್ತೇವೆ ಅನ್ನುವ ಭಾವ ಇರುವ ಒಂದು ಕಿರು ಲೇಖನ. ಗುಡ್ಡ-ಗಾಡುಗಳನ್ನು ಸುತ್ತಿ ಬಸವಳಿದಿದ್ದ ಒಂದು ಗುಂಪು, ತುಂಬಾ ದಿನಗಳಾದ ಮೇಲೆ, ಒಂದೇ ಛಾವಣಿಯಡಿಯಲ್ಲಿ ಸೇರಿದ್ದವು. ಹೊರಗಡೆ ಬಿಸಿಲು ಚೆನ್ನಾಗಿ ಕಾದಿತ್ತು, ಒಳಗೆ ಹೊಟ್ಟೆ ಹಸಿವಿನಿಂದ ಕುದಿಯುತ್ತಿತ್ತು. ಏನು ಸಿಕ್ಕಿದರು ತಿಂದು ತೇಗಿಬಿಡುವ ಧಾವಂತದಲ್ಲಿದ್ದರು. ಸುಮಾರು ಎಂಟು ಮಂದಿಯಿದ್ದ ಗುಂಪಾದ್ದರಿಂದ ಹೋಟೆಲ್ನಲ್ಲಿ ಒಂದೇ ಟೇಬಲ್ ನಲ್ಲಿ ಜಾಗ ಸಿಗುವುದು ಕಷ್ಟವಾಗಿತ್ತು. ಅಲ್ಲಿದ್ದ ಮೇಲ್ವಿಚಾರಕರು "ಸರ್ ಸ್ವಲ್ಪ ಹೊತ್ತು … Read more

ಕನ್ನಡದ ಬರಹಗಳನ್ನು ಹಂಚಿ ಹರಡಿ

ಅಲೆಮಾರಿ ಏಕಲವ್ಯ ಮುನಿತಿಮ್ಮಯ್ಯ – ಡಾ. ರಾಜರಿಂದ ಪ್ರೇರಣೆ: ಪ್ರಮೋದ್ ಶೇಟ್ ಗುಂಡಬಾಳ

ಯೋಗಾ ಇದು ಭಾರತ ದೇಶದ ಪಾರಂಪರಿಕ ವಿದ್ಯೆ. ಇದರಿಂದ ಆಕರ್ಷಿತರಾದವರಿಗೇನು ಕಡಿಮೆ ಇಲ್ಲ. ಇದರ ಬಗ್ಗೆ ಒಬ್ಬೊಬ್ಬರು ಒಂದೊದು ರೀತಿಯಲ್ಲಿ ಆಕರ್ಷಿತರಾಗುತ್ತಾರೆ, ಅಂತವರಲ್ಲಿ ಶ್ರೀ ಮುನಿತಿಮ್ಮಯ್ಯ ಕೂಡ ಒಬ್ಬರು. ಇವರು ಒಬ್ಬ ಏಕಲವ್ಯನಿದ್ದಂತೆ. ಇವರಿಗೆ ಪ್ರೇರಣೆ ಕನ್ನಡದ ಮೇರು ನಟ ಡಾ. ರಾಜಕುಮಾರವರು. ೮೦ರ ದಶಕದಲ್ಲಿದ್ದಂತಹ ಪ್ರಜಾಮತ ಪತ್ರಿಕೆಯಲ್ಲಿ ಡಾ. ರಾಜ್ ರವರ ಯೋಗಾಸನದ ಕುರಿತು ವಿವಿದ ಭಂಗಿಯ ಚಿತ್ರಗಳ ಸಹಿತ ಲೇಖನ ಪ್ರಕಟವಾಗುತಿತ್ತು. ಅದನ್ನು ನೋಡಿ ಪ್ರೇರಿತರಾದವರು ಶ್ರೀ ಮುನಿತಿಮ್ಮಯ್ಯನವರು. ಬೆಂಗಳೂರಿನ ಹೆಬ್ಬಾಳದ ನಿವಾಸಿಯಾದ ಇವರು … Read more

ಕನ್ನಡದ ಬರಹಗಳನ್ನು ಹಂಚಿ ಹರಡಿ