ರಸ್ತೆ ರಾಗ: ಅಖಿಲೇಶ್ ಚಿಪ್ಪಳಿ

ಯಾವುದೋ ಕೆಲಸದ ಮೇಲೆ ಸೊರಬ ತಾಲ್ಲೂಕಿನ ಒಂದು ಊರಿಗೆ ಹೋಗುವುದಿತ್ತು. ಆ ರಸ್ತೆಯಲ್ಲಿ ಹೋಗದೆ ಮೂರ್‍ನಾಲ್ಕು ತಿಂಗಳು ಕಳೆದಿತ್ತು. ವಾಪಾಸು ಬರುವಾಗ ರಸ್ತಯ ಬದಿಯಲ್ಲಿ ಏನೋ ಬದಲಾವಣೆಯಾದಂತೆ ಕಂಡು ಬಂತು. ಗಮನಿಸಿದಾಗ ಲೋಕೋಪಯೋಗಿ ಇಲಾಖೆಯ ಕರಾಮತ್ತು ಬೆಳಕಿಗೆ ಬಂತು. ರಸ್ತೆಗಳಿಗೆ ದೇಶದ ನರನಾಡಿಗಳು ಎಂದು ಕರೆಯುತ್ತಾರೆ. ಒಂದು ದೇಶದ ಅಭಿವೃದ್ದಿಯನ್ನು ಮನಗಾಣಬೇಕಾದರೆ ಆ ದೇಶದ ರಸ್ತೆಗಳ ಗುಣಮಟ್ಟವನ್ನು ನೋಡಬೇಕು ಎನ್ನುವ ಜನಜನಿತ ಅಭಿಪ್ರಾಯವಿದೆ. ರಸ್ತೆಗಳಲ್ಲೂ ಸುಮಾರು ವಿಧಗಳಿವೆ, ರಾಷ್ಟ್ರೀಯ ಹೆದ್ದಾರಿ, ರಾಜ್ಯ ಹೆದ್ದಾರಿ, ಜಿಲ್ಲಾ ಹೆದ್ದಾರಿ, ಜಿಲ್ಲಾ … Read more

ಕನ್ನಡದ ಬರಹಗಳನ್ನು ಹಂಚಿ ಹರಡಿ

ಮೂವರ ಕವಿತೆಗಳು: ಬಸವರಾಜ ಕದಮ್, ರಮೇಶ್ ನೆಲ್ಲಿಸರ, ತ.ನಂ.ಜ್ಞಾನೇಶ್ವರ

ಪ್ರೀತಿಯ ಹೆಜ್ಜೆಗಳು : ಪ್ರೀತಿಯ  ನಿನ್ನ  ಹೆಜ್ಜೆಗಳು ನನ್ನ  ಹೃದಯದ ಒಳಗೆ ಗೆಜ್ಜೆ  ಕಟ್ಟಿಕೊಂಡು  ಕುಣಿಯುತ್ತಿದೆ ಪ್ರೇಮದ ತಾಳದ  ಸದ್ದು ಮನಸ್ಸಿಗೆ  ಮುದಕೊಡುತ್ತದೆ. ಪ್ರೀತಿಯ ಅನುಭವ : ನಿನ್ನ  ಕಾಲಿಗೆ  ಚುಚ್ಚಿದ ಮುಳ್ಳನ್ನು  ಪ್ರೀತಿಯಿಂದಲೇ  ಮುಳ್ಳಿಗೂ  ನನಗೂ  ನೋವಾಗದೆ ತೆಗೆಯುವಾಗ  ಅಲ್ಲೊಂದು  ಪ್ರೀತಿಯ  ಅನುಭವವೇ ಬೇರೆ ….!!! ಹೊಸತನ : ನೀ ಬರೆದ ರಂಗೋಲೆ ಅಂಗಳದ  ಅಲಂಕಾರವೇ  ಬದಲಾಗಿ ಹೊಸತನ  ತಂದಿದೆ  ಒಂದೊಂದು  ಚುಕ್ಕೆಗಳ ಸಾಲುಗಳು  ನನ್ನ  ಹೃದಯದಲ್ಲಿ  ಚಿತ್ತಾರ ಮೂಡಿಸಿದೆ.. ನಗು : ಗೆಳತಿ, ನಿನ್ನ … Read more

ಕನ್ನಡದ ಬರಹಗಳನ್ನು ಹಂಚಿ ಹರಡಿ

ಸಾಮಾನ್ಯ ಜ್ಞಾನ (ವಾರ 53): ಮಹಾಂತೇಶ್ ಯರಗಟ್ಟಿ

ಪ್ರಶ್ನೆಗಳು: ೧.    ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆಯ ಈಗಿನ ಅಧ್ಯಕ್ಷರು ಯಾರು? ೨.    ಹಚ್ಚೇವು ಕನ್ನಡದ ದೀಪ ಗೀತೆಯನ್ನು ಬರೆದವರು ಯಾರು? ೩.    ಹೇಮಾವತಿ ನದಿಯ ಉಗಮ ಸ್ಥಳ ಯಾವುದು? ೪.    ಭಾರತ ಸರಕಾರದಿಂದ ತೈಲ ಮತ್ತು ಅನಿಲ ಆಯೋಗವನ್ನು ಸ್ಥಾಪಿಸಲಾದ ವರ್ಷ ಯಾವುದು? ೫.    ಗಡಿಯಾರ ರಿಪೇರಿ ಮಾಡುವಾಗ ಬಳಸುವ ಮಸೂರ ಯಾವುದು? ೬.    ಸೀತಾತನಯ ಇದು ಯಾರ ಕಾವ್ಯನಾಮ? ೭.    ಮರುಭೂಮಿ ಹಡಗು ಎಂದು ಯಾವ ಪ್ರಾಣಿಯನ್ನು ಕರೆಯುತ್ತಾರೆ? ೮.    ಮಜ್ಜಿಗೆಯಲ್ಲಿ ಇರುವ ಆಮ್ಲ … Read more

ಕನ್ನಡದ ಬರಹಗಳನ್ನು ಹಂಚಿ ಹರಡಿ

ಅಪ್ಪಾ ಐ ಲವ್ ಯೂ ..: ಅನಿತಾ ನರೇಶ್ ಮಂಚಿ

ಟಿ ವಿಯಲ್ಲಿ ಒಂದು ಇಂಟರ್ ವ್ಯೂ ನೋಡುತ್ತಿದ್ದೆ. ಅದರಲ್ಲಿ ಅಪ್ಪ ಮತ್ತು ಮಗಳ ಸಂದರ್ಶನ ಪ್ರಸಾರವಾಗುತ್ತಿತ್ತು. ಸಂದರ್ಶಕರು ಮಗಳೊಡನೆ ನೇರವಾಗಿ ’ನೀವು ಎಂದಾದರೂ ಅಪ್ಪನಿಗೆ ತಿಳಿಯದಂತೆ ಏನಾದರೂ ತರಲೆ ಮಾಡಿದ್ದು ಇದೆಯೇ? ಅದನ್ನಿಲ್ಲಿ ಹಂಚಿಕೊಳ್ಳಲು ಇಷ್ಟ ಪಡ್ತೀರಾ’ ಎಂದು ಕೇಳಿದರು. ಆಕೆ ನಗುತ್ತಾ ’ ಇಲ್ಲ ಅನ್ಸುತ್ತೆ.. ನನ್ನೆಲ್ಲಾ ತಂಟೆ ತರಲೆಗಳಿಗೆ ನಮ್ಮಪ್ಪನೇ ಸಾಥ್..  ನಾವಿಬ್ಬರೂ ಅಪ್ಪ ಮಗಳು ಎನ್ನುವುದಕ್ಕಿಂತ ಫ್ರೆಂಡ್ಸ್ ಹೆಚ್ಚು’ ಎಂದಳು. ಕಾಲ ಎಲ್ಲಿಂದ ಎಲ್ಲಿಗೆ ತಲುಪಿತು ಎಂದು ಒಂದು ಕ್ಷಣ ಯೋಚಿಸಿದೆ.  ಅಪ್ಪ … Read more

ಕನ್ನಡದ ಬರಹಗಳನ್ನು ಹಂಚಿ ಹರಡಿ

ಮಂಗಳ ಗ್ರಹದ ಕಕ್ಷೆ ಪ್ರವೇಶಿಸಿದ ’ಮಂಗಳಯಾನ’ : ಜೈಕುಮಾರ್.ಹೆಚ್.ಎಸ್,

ಮಂಗಳ ಗ್ರಹದಲ್ಲಿ ಕೋಟ್ಯಾಂತರ ವರ್ಷಗಳ ಹಿಂದೆ ಜೀವಿಗಳು ಇದ್ದುವೇ? ಜೀವಿಗಳ ಇರುವಿಕೆಗೆ ಕಾರಣವಾಗಿರುವ ಮಿಥೇನ್ ಯಾವ ಪ್ರಮಾಣದಲ್ಲಿ ಅಲ್ಲಿದೆ? ಇತ್ಯಾದಿ ಪ್ರಶ್ನೆಗಳಿಗೆ ಉತ್ತರ ಕಂಡುಕೊಳ್ಳುವುದು ಸೇರಿದಂತೆ ಭೂಮಿಯಿಂದ ಇತರೆ ಗ್ರಹಗಳಿಗೆ ಉಪಗ್ರಹ ರವಾನಿಸಲು ಅವಶ್ಯವಿರುವ ತಂತ್ರಜ್ಞಾನವನ್ನು ಸ್ವತ: ಅಭಿವೃದ್ಧಿಪಡಿಸುವುದನ್ನು ಭಾರತ ಖಾತರಿಪಡಿಸಿಕೊಳ್ಳುವುದು ಮಂಗಳಯಾನ ಉಡಾವಣೆಯ ಉದ್ದೇಶ.  ಭಾರತಕ್ಕೆ ಮೊದಲ ಯತ್ನದಲ್ಲೇ ಯಶಸ್ಸು: ಇದೀಗ ಭಾರತ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ತ್ರೋ) ತಯಾರಿಸಿದ್ದ ’ಮಂಗಳಯಾನ’ ಉಪಗ್ರಹವು ಯಶಸ್ವಿಯಾಗಿ ಮಂಗಳ ಗ್ರಹದ ಕಕ್ಷೆಯನ್ನು ಪ್ರವೇಶಿಸಿ ಎಲ್ಲೆಡೆ ಹರ್ಷ ಮೂಡಿಸಿದೆ. ಭೂಮಿಯಿಂದ … Read more

ಕನ್ನಡದ ಬರಹಗಳನ್ನು ಹಂಚಿ ಹರಡಿ

ಗಡಿನಾಡ ಕನ್ನಡ: ನಾಗೇಶ್ ಟಿ.ಕೆ.

ನನ್ನ ಹೆಸರು ನಾಗೇಶ್ ಟಿ.ಕೆ. ಮೂಲತ: ಹಾಸನ ಜಿಲ್ಲೆ ಅರಕಲಗೂಡು ತಾಲ್ಲೂಕಿನ ಬನ್ನಿಮರದಕೊಪ್ಪಲು ನಿವಾಸಿ. ಪ್ರಸ್ತುತ ಗೌರಿಬಿದನೂರು ತಾಲ್ಲೂಕಿನ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಸಹಶಿಕ್ಷಕನಾಗಿ ಕರ್ತವ್ಯ ನಿರ್ವಹಿಸುತ್ತಿದ್ದೇನೆ. ೨೦೦೭ರಲ್ಲಿ ಶಿಕ್ಷಕನಾಗಿ ತೆಲುಗು ಪ್ರಭಾವವಿರುವ ಗಡಿನಾಡಿನ ಶಾಲೆಯಲ್ಲಿ ನಿಯೋಜನೆಗೊಂಡು ಕೆಲಸ ಪ್ರಾರಂಭಿಸಿದಾಗ ನನಗಾದ ಭಾಷಾ ಸಮಸ್ಯೆ ಹಾಗೂ ಇಲ್ಲಿನ ಜನರಿಗೆ ಕನ್ನಡ ಭಾಷೆಯ ಬಗ್ಗೆ ಆಳವಾದ ಜ್ಞಾನ ಅಥವಾ ಮಾತೃಭಾಷಾ ಅಭಿಮಾನ ಇಲ್ಲದಿರುವುದನ್ನು ನೋಡಿ ಈ ೮ ವರ್ಷದಲ್ಲಿ ನನಗಾದ ಎಲ್ಲಾ ಅನುಭವಗಳನ್ನು ಕ್ರೋಢೀಕರಿಸಿ ಈ ಲೇಖನವನ್ನು … Read more

ಕನ್ನಡದ ಬರಹಗಳನ್ನು ಹಂಚಿ ಹರಡಿ

ಬದುಕ ಕಟ್ಟಿಕೊಳ್ಳಲು ಬಂದವರು ಭಾಷೆಯನ್ನು ಕಟ್ಟಿದ್ದರು: ನಿಶಾಂತ್. ಜಿ.ಕೆ

ಯಾವ ಟಿ.ವಿ, ಚಾನೆಲ್ ಹಾಕಿದ್ರೂ ಈಗ ಸ್ವಲ್ಪ ದಿನದಿಂದ ಬರೀ ಅಮ್ಮನದೇ ಸುದ್ದಿ, ಓ ಕನ್‌ಫ್ಯೂಸ್ ಆದ್ರ ಸಾರಿ ನಾನ್ ಹೇಳಿದ್ದು ನಮ್ಮ ನೆರೆಯ ರಾಜ್ಯದ ಮಾಜಿ ಮುಖ್ಯಮಂತ್ರಿ ಕುಮಾರಿ ಜೆ. ಜಯಲಲಿತಾ ಅವರ ಬಗ್ಗೆ ಅವರ ಅವ್ಯವಹಾರ, ಅದು ಇದು ಸದ್ಯಕ್ಕೆ ಬೇಡ ಆದ್ರೆ ನಾನು ಈಗ ಹೇಳ್ಬೇಕು ಅಂತ ಹೊರಟಿರೋ ವಿಷಯ ತಮಿಳರ ಅಭಿಮಾನದ ಬಗ್ಗೆ, ಅದು ಕೇವಲ ಜಯಲಲಿತಾ ಅವರ ವಿಷಯವಾಗಿ ಅಲ್ಲ ಮುಖ್ಯವಾಗಿ ಅವರ ಭಾಷಾಬಿಮಾನ, ನಾಡಿನ ಬಗೆಗಿರುವ ಅತಿಯಾದ ಕಾಳಜಿಯ … Read more

ಕನ್ನಡದ ಬರಹಗಳನ್ನು ಹಂಚಿ ಹರಡಿ

ನೋವಿನ ಸಮುದ್ರದ ಮೇಲೆ ಸತ್ತ ಮನುಷ್ಯನ ನಡೆದಾಟ: ಸಚೇತನ

  ಡೆಡ್ ಮ್ಯಾನ್ ವಾಕಿಂಗ್ ನೋಡಿಬಿಡು ಪ್ರೀತಿಯ ಮುಖದಲ್ಲಿನ  ಆ ಕಣ್ಣುಗಳ ಅವಳ ಕಣ್ಣುಗಳ ದಿಟ್ಟಿಸು ಓ  ಅಲ್ಲೊಂದು ಶಾಂತಿಯಿದೆ. ಇಲ್ಲ, ಯಾವುದೂ ಸಾಯುವದಿಲ್ಲ ಈ ದಿವ್ಯ ಬೆಳಕಿನಲ್ಲಿ. ಮೂವತ್ತು ವರ್ಷದ ಜೀವನ ಕಳೆಯಲು ಕೇವಲ ಒಂದು ಘಂಟೆಯ  ಈ ಪವಿತ್ರ ಬೆಳಕು ಮಾತ್ರ  ಸಾಕು. ಕೇವಲ ಒಂದು ಘಂಟೆ ದಯವಿಟ್ಟು ಬಂದು ಹೋಗು ! ಮರಣ ಅಥವಾ ಬದುಕು ಇವೆರಡರ ಮಧ್ಯದ ಸೂಕ್ಷ್ಮತೆಗಳನ್ನು ಬಿಡಿಸಿಡುವ  ಟಿಮ್ ರಾಬಿನ್ಸನ್ ನಿರ್ದೇಶನದ  ಡೆಡ್  ಮ್ಯಾನ್ ವಾಕಿಂಗ್ ಎನ್ನುವ ಶಕ್ತಿಯುತ … Read more

ಕನ್ನಡದ ಬರಹಗಳನ್ನು ಹಂಚಿ ಹರಡಿ

ಹುಸೇನಿ ಕಥೆಯಾಗಿ ಹೋದ ಕಥೆ.. (ಭಾಗ 3): ನಾರಾಯಣ ಬಾಬಾನಗರ

ಇಲ್ಲಿಯವರೆಗೆ ಅವನಿಗೆ ‘’ಹುಸೇನಿ’’ ಹಂಗಂತ ಕರೀತಿದ್ದದ್ದು ಮಾತ್ರ ನೆನಪು…ಅವನ ಪೂರ್ತಿ ಹೆಸರು ಈಗ ಗೊತ್ತಿಲ್ಲಂತಲ್ಲ ನಾವು ಸಣ್ಣವರಾಗಿದ್ದಾಗಲೂ ಖರೇ ಅಂದ್ರೂ ಗೊತ್ತಿರಲಿಲ್ಲ ಬಿಡ್ರಿ..ಅವನ ವಯಸ್ಸೆಷ್ಟಿದ್ದಿತ್ತು ಅಂತ ಲೆಕ್ಕಾ ಹಾಕಲಾಕ ಹೋಗಿ ನಾವು ಸೋತು ಸುಣ್ಣರಾಗಿದ್ದಕ್ಕಾಗಿ ಮುಂದ ಅವನ ವಯಸ್ಸಿನ ಬಗ್ಗೆ ತಿಳಕೊಳ್ಳಲಾಕ ಹೋಗು ಗೋಜಿಗೇ ಹೋಗಲಿಲ್ಲ.ಅಂವಾ ನಮಗ ವಿಚಿತ್ರವಾಗಿ ಕಾಣಲಾಕ ತರಹಾವರಿಯ ಕಾರಣಗಳಿದ್ದವು…ಅಂವಾ ಹುಡುಗರ ಕೂಡ ಇದ್ದಾಗ ಹುಡುಗರಂಗಿರತಿದ್ದ…ಹಿರಿಯರಗೂಡಾ ಥೇಟ್ ಹಿರಿಯರ ಹಂಗ ಇರತಿದ್ದ..ಹಿಂಗಾಗಿ ನಮಗ ಒಮ್ಮೊಮ್ಮೆ ಮಳ್ಳ ಹಿಡಿತಿತ್ತು…ಅವನ ಗೂಡಾ ಹೆಂಗಿರಬೇಕು ಅಂತ…ಅಂಥಾದರಾಗ ಅಂವಾ ತೊದಲಿಸಿ … Read more

ಕನ್ನಡದ ಬರಹಗಳನ್ನು ಹಂಚಿ ಹರಡಿ

ಒಂದು ಹನಿ ಕಣ್ಣೀರು: ಪಾರ್ಥಸಾರಥಿ ಎನ್

ಎಲ್ಲವೂ ಅನಿರೀಕ್ಷಿತ ಅನ್ನಿಸುವಂತೆ ಮುಗಿದುಹೋಯಿತು. ಬೆಳಗಿನ ಜಾವ ನಾಲಕ್ಕು ಗಂಟೆ ಇರಬಹುದು ರೂಮಿನಲ್ಲಿ ಮಲಗಿದ್ದ ಅಮ್ಮ ತುಂಬಾನೆ ಕೆಮ್ಮುತ್ತಿದ್ದಳು, ಇದೇನು ಎಂದು ಎದ್ದುಹೋದೆ. "ಏನಮ್ಮ ತುಂಬಾ ಕೆಮ್ಮು ಇರುವ ಹಾಗಿದೆ , ಕುಡಿಯಲು ನೀರು ಕೊಡಲಾ? " ಎಂದೆ, ದೀಪ ಹಾಕುತ್ತ. ಅವಳಿಗೆ ಉತ್ತರಿಸಲು ಆಗಲಿಲ್ಲ ಅನ್ನಿಸುತ್ತೆ, "ಕೊಡು" ಅನ್ನುವಂತೆ ತಲೆ ಆಡಿಸಿದಳು. ಹೋಗಿ ನೀರು ತಂದೆ. ಎದ್ದು ಕುಳಿತು ಕುಡಿಯಲು ಪ್ರಯತ್ನಿದಳು, ಆದರೆ ಪೂರ್ತಿ ನೀರು ಕುಡಿಯಲೇ ಇಲ್ಲ. ತಲೆ ಪಕ್ಕಕ್ಕೆ ವಾಲಿಸಿ ಹಾಗೆ ಹಿಂದಕ್ಕೆ … Read more

ಕನ್ನಡದ ಬರಹಗಳನ್ನು ಹಂಚಿ ಹರಡಿ

ನಾಕವನ್ನು ನರಕ ಮಾಡುತ್ತಿರುವವರ ಹುನ್ನಾರ!?: ಅಖಿಲೇಶ್ ಚಿಪ್ಪಳಿ

ಕಳೆದೆರಡು ತಿಂಗಳಲ್ಲಿ ಭೂಮಿಯ ಆರೋಗ್ಯದ ಕುರಿತು ವಿಶ್ವ ವನ್ಯ ನಿಧಿ ಸಂಸ್ಥೆ ಮತ್ತು ಗ್ರೀನ್‌ಪೀಸ್ ಸಂಸ್ಥೆಗಳು ವಿಸೃತವಾದ ವರದಿ ನೀಡಿವೆ. ಭೂಮಾತೆಗೆ ಬಂದಿರುವ ಜ್ವರ ವಿಪರೀತ ಮಟ್ಟಕ್ಕೆ ಹೋಗಿದೆ ಎಂಬುದೇ ಎರಡೂ ವರದಿಗಳ ಸಾರಾಂಶ. ಮನುಷ್ಯ ಕೇಂದ್ರಿತ ಅಭಿವೃದ್ಧಿ, ಕಾಡುನಾಶ ಇತ್ಯಾದಿಗಳು ಕಾರಣ ಎಂದು ರೋಗದ ಮೂಲವನ್ನು ಪತ್ತೆ ಮಾಡಿದ್ದಾರೆ. ಯಾವುದೇ ಅತ್ಯುತ್ತಮ ವೈದ್ಯನ ಕೌಶಲ್ಯ ಅಭಿವ್ಯಕ್ತಗೊಳ್ಳುವುದು ಖಾಯಿಲೆಯನ್ನು ಗುರುತಿಸುವ ಬಗೆಯಲ್ಲಿರುತ್ತದೆ. ಚಿಕಿತ್ಸೆ ನೀಡುವುದು ಎರಡನೆಯ ಹಂತ. ಹಾಗೆಯೇ ಭೂಜ್ವರಕ್ಕೆ ಕಾರಣ ಗೊತ್ತಾಗಿದೆ. ವಿಪರ್ಯಾಸವೆಂದರೆ, ಕಾಯಿಲೆ ಹರಡುವವರೇ … Read more

ಕನ್ನಡದ ಬರಹಗಳನ್ನು ಹಂಚಿ ಹರಡಿ

ಬರೆಯಲೊಲ್ಲದ ಮನಕ್ಕೊಂದು ಪೆನ್ನ ಕೊಟ್ಟು: ಪ್ರಶಸ್ತಿ

  ಈ ವಾರ ಬರೆಯೆಂದರೂ ಬರೆಯಲೇನೋ ಬೇಸರ. ವಿಷಯವಿಲ್ಲವೆಂದಲ್ಲವೀ  ಕಸಿವಿಸಿ. ಆದರೆ ಇರೋ ದುಃಖಗಳಲ್ಲಿ ಯಾವುದರ ತೋಡಿಕೊಳ್ಳಲೆಂಬುದರ ತೊಳಲಾಟ. ತೀರ್ಥಹಳ್ಳಿಯಲ್ಲೊಂದು ಹೂವ ಅರಳೋ ಮೊದಲೇ ಕೊಂದ ಖದೀಮರ ಬಗ್ಗೆ ಬರೆಯಲಾ ? ಬೆಂಗಳೂರಲ್ಲಾದ ದೌರ್ಜನ್ಯಗಳ ಬಗ್ಗೆ ಬರೆಯಲಾ ? ಸ್ವಚ್ಛ ಭಾರತವೆಂದ ತೆಂಡೂಲ್ಕರನಿಗೇ ಬೇಸರವೆನಿಸುವಷ್ಟು ಆ ಜಾಗದಲ್ಲಿ ಮಾರನೆಯ ದಿನವೇ ಕಸ ಹಾಕಲು ಹೋದ ಬೇಜವಬ್ದಾರಿ ಭಾರತೀಯರ ಬಗ್ಗೆ ಬರೆಯಲಾ ? ಗಡಿಯಲ್ಲಿ ಅತ್ತ ಪಾಕಿಗಳು ಗುಂಡಿನ ಮಳೆಗಯ್ಯುತ್ತಿದ್ದರೆ ಮತ್ತೊಂದೆಡೆ ಚೀನಾದವ್ರು ನಮ್ಮ ನೆಲದಲ್ಲಿ ರಸ್ತೆ ಮಾಡೋಕೂ … Read more

ಕನ್ನಡದ ಬರಹಗಳನ್ನು ಹಂಚಿ ಹರಡಿ

ಸಾಮಾನ್ಯ ಜ್ಞಾನ (ವಾರ 52): ಮಹಾಂತೇಶ್ ಯರಗಟ್ಟಿ

ಪ್ರಶ್ನೆಗಳು: ೧.    ಇತ್ತೀಚಿಗೆ ಬಿಡುಗಡೆಯಾದ ಸಚಿನ್ ತೆಂಡೂಲ್ಕರ್ ರವರ ಆತ್ಮಚರಿತ್ರೆಯ ಪುಸ್ತಕದ ಹೆಸರೇನು? ೨.    ಇತ್ತೀಚಿಗೆ ಎಲ್.ಜಿ.ಐಸಿಸಿ ವರ್ಷದ ಏಕದಿನ ಕ್ರಿಕೆಟಿಗ ಪುರಸ್ಕಾರಕ್ಕೆ ಆಯ್ಕೆಯಾದ ಭಾರತೀಯ ಏಕೈಕ ಕ್ರಿಕೆಟ್ ಆಟಗಾರ ಯಾರು? ೩.    ಸೋಮಣ್ಣ ಕೆ.ಎಂ. ಅವರ ಯಾವ ಕ್ರೀಡೆಗೆ ೨೦೧೩ರ ಏಕಲವ್ಯ ಪ್ರಶಸ್ತಿಯನ್ನು ನೀಡಲಾಯಿತು? ೪.    ಐಬಿಡಬ್ಲ್ಯೂಎಲ್ (IBWL) ನ ವಿಸ್ತೃತ ರೂಪವೇನು? ೫.    ಬಾರ್ಡೋಲಿ ಸತ್ಯಗ್ರಹದ ನೇತಾರ ಯಾರು? ೬.    ಭಾರತೀಯ ರಿಸರ್ವ್ ಬ್ಯಾಂಕಿನ ಲಾಂಛನದಲ್ಲಿ ಯಾವ ಪ್ರಾಣಿ ಅಂಕಿತವಾಗಿದೆ? ೭.    ಮೋಳಿಗೆ ಮಾರಯ್ಯ … Read more

ಕನ್ನಡದ ಬರಹಗಳನ್ನು ಹಂಚಿ ಹರಡಿ

ಮಕ್ಕಳ ದಿನದ ಮಹತ್ವ: ಹೊರಾ.ಪರಮೇಶ್ ಹೊಡೇನೂರು

    ಅಪ್ಪ ತನ್ನ ಅಂಗಿ ಜೇಬಿನಲ್ಲಿ ಸದಾ ಎರಡು ಪೆನ್ನುಗಳನ್ನು ಇಟ್ಟುಕೊಳ್ಳುತ್ತಿದ್ದ ಶಿಸ್ತುಬದ್ಧ ಜೀವನದ ವಕೀಲರು. ಮಗನಿಗೆ ಮಾತ್ರ ಆ ಎರಡು ಪೆನ್ನುಗಳ ಅಗತ್ಯವೇನು ಎಂಬ ತರ್ಕ. ಒಮ್ಮೆ ಅಪ್ಪನಿಗೆ ಹೇಳದೆ ಆ ಎರಡು ಪೆನ್ನುಗಳಲ್ಲಿ ಒಂದನ್ನು ಮಗ ಎಗರಿಸಿಬಿಟ್ಟ ಇದನ್ನು ಗಮನಿಸಿದ ಅಪ್ಪ ಹೆಂಡತಿ ಮಗನನ್ನು ಗದರಿಸಿ ಕೇಳಿದಾಗ ಮಗನು ತಾನು ತೆಗೆದುಕೊಂಡಿದುದಾಗಿ ಹೇಳಿದನು. ಇದನ್ನು ಕೇಳಿದ ಅಪ್ಪನು ಹೇಳದೇ ಕೇಳದೇ ಪೆನ್ನು ತೆಗದುಕೊಂಡಿದ್ದು ತಪ್ಪೆಂದು ತಿಳಿಸಿ ಬೈಯ್ದು ಬುದ್ಧಿ ಹೇಳಿದರು. ಈ ಪ್ರಸಂಗದಿಂದಲೇ … Read more

ಕನ್ನಡದ ಬರಹಗಳನ್ನು ಹಂಚಿ ಹರಡಿ

ನಿಮ್ಮ ಗಮನಕ್ಕೆ

ಬ್ಲೂ ವೇವ್ಸ್ : ನಿಕ್ಷೇಪ- 2014 : ಯುವ ಬರಹಗಾರರಿಂದ ಕನ್ನಡ ಬರಹಗಳಿಗೆ ಆಹ್ವಾನ ಕನ್ನಡ ಯುವ ಬರಹಗಾರರ ಸಾಮಾಜಿಕ ಜಾಲತಾಣದ ಸಾಹಿತ್ಯ ವೇದಿಕೆ ಬ್ಲೂ ವೇವ್ಸ್ (ನೀಲಿ ಅಲೆಗಳು) ಫೇಸ್ಬುಕ್ ಪೇಜ್ ಬಳಗದ ವತಿಯಿಂದ ಕನ್ನಡದ ಯುವ ಬರಹಗಾರರನ್ನು ಗುರುತಿಸುವ ಮತ್ತು ಪ್ರೋತ್ಸಾಹಿಸುವ ನಿಟ್ಟಿನಲ್ಲಿ ನಿಕ್ಷೇಪ – 2014 (ನವ ಚಿಂತನೆಗಳ ಅಗೆತ) ಎಂಬ ಸ್ಪರ್ಧೆಯಡಿ ಏಳು ಪ್ರಸಕ್ತ ವಿದ್ಯಮಾನಗಳ ಕುರಿತು ಲೇಖನಗಳನ್ನು ಆಹ್ವಾನಿಸಲಾಗಿದೆ. ಪ್ರಜ್ಞಾವಂತ ಸೃಜನಶೀಲ ಯುವ ಬರಹಗಾರರು ಇದರಲ್ಲಿ ಪಾಲ್ಗೊಳ್ಳಬಹುದು.  ವಿಷಯಗಳು ಇಂತಿವೆ. … Read more

ಕನ್ನಡದ ಬರಹಗಳನ್ನು ಹಂಚಿ ಹರಡಿ

ಪತ್ರ: ಗಣೇಶ್ ಖರೆ

ಕಳೆದ ಕೆಲ ವರ್ಷಗಳಿಂದ ನಾನಾಯಿತು ನನ್ನ ಕೆಲಸವಾಯಿತು. ಇನ್ನೇನು ಕೆಲಸ ಕೆಲ ವರ್ಷದ್ದಷ್ಟೇ..  ಈಗಂತೂ ಟಿವಿ, ಕಂಪ್ಯೂಟರ್ ಅಂತ ಸಮಯ ಕಳೆದದ್ದೂ ತಿಳಿಯುವುದಿಲ್ಲ. ಇಂದಿನ ಆಧುನಿಕ ಯುಗದಲ್ಲಿ ಪತ್ರ ವ್ಯವಹಾರ ಮುಗಿದೇ ಹೋಗಿದೆ. ಆದರೆ ತುಂಬಾ ದಿನದ ಮೇಲೆ ಮನೆಗೊಂದು ಪತ್ರ ಬಂದಿತ್ತು… ಹಲ್ಲೋ ಸರ್… ನಾನು ಶರತ್ ಅಂತ. ಜರ್ನಲಿಸಮ್ ಮಾಡ್ತಾ ಇದ್ದೇನೆ. ಕೆಲ ಹಳೆಯ ಬರಹಗಾರರ ಬಗ್ಗೆ ಮಾಹಿತಿ ಸಂಗ್ರಹಿಸುತ್ತಿದ್ದೇನೆ. ಅದರಲ್ಲಿ ನಿಮ್ಮದೂ ಹೆಸರಿದೆ. ಸ್ವಲ್ಪ ಮಾಹಿತಿ ಸಂಗ್ರಹಿಸಿದಾಗ ನಿಮ್ಮ ಬಗ್ಗೆ ಕೆಲ ವಿಷಯ … Read more

ಕನ್ನಡದ ಬರಹಗಳನ್ನು ಹಂಚಿ ಹರಡಿ

ನನಗೂ ನಿನಗೂ ಅಂಟಿದ ನಂಟಿನ: ಪ್ರವೀಣ

ಆತ ಮರೆತುಹೋದಾಗಲೆಲ್ಲ ಆಕೆ ನೆನಪು ಮಾಡಿಕೊಡುತ್ತಾಳೆ.  ಅದು ಬಾನು, ಇದು ಭುವಿ, ಅವ ಚಂದ್ರ, ಇವ ರವಿ, ಇದು ಇರುವೆ ಸಾಲು, ಅದು ಕುಡಿಯುವ ಹಾಲು. ಆ ದಿನ ರೈಲಿನಲ್ಲಿ ಅವಳು ಎಲ್ಲೋ ಪ್ರಯಾಣಿಸುವಾಗ ಆತ ಮೊದಲ ಬಾರಿಗೆ ಕಂಡಿದ್ದ.  ಕೊಳಕು ಅರಿವೆ, ಜಿಡ್ಡುಗಟ್ಟಿದ ಕೂದಲು, ಮಹಾ ದುರ್ಗಂಧ ಸೂಸುತ್ತ ಬಾಗಿಲ ಬಳಿ ಮುದುಡಿ ಕುಳಿತಿದ್ದ.  ಆತ ನೇರವಾಗಿ ಕಣ್ಣಲ್ಲಿ ಕಣ್ಣಿಟ್ಟು ನೋಡಿದ್ದರಿಂದ ಅವಳು ಬೆದರಿ, ಬೇರೆಡೆ ದೃಷ್ಟಿ ತಿರುಗಿಸಿ ಬಾತರೂಮು ಹೊಕ್ಕು ಹೊರಬಂದಳು.  ವಾಪಸು ಬರುವಾಗ … Read more

ಕನ್ನಡದ ಬರಹಗಳನ್ನು ಹಂಚಿ ಹರಡಿ