ಆತ್ಮಗಳ ದನಿ: ತಿರುಪತಿ ಭಂಗಿ
ನದಿ ತುಂಬಿ ಹರಿಯುತ್ತಿತ್ತು.. .. ಸಕ್ಕಿ ನೀರಲ್ಲಿ ಕಾಲಿಟ್ಟಳು. ಮೈನಡಗುತ್ತಿತು. ಎಂಥ ಚಳಿ.ಇದರಲ್ಲಿ ಮುಳುಗಿ ಸಾಯುವುದು ಹೇಗೆ? ಸಾಯಲು ಬಂದವಳಿಗೆ ಚಳಿಯೋ-ಮಳಿಯೋ, ಬಿಸಿಲೋ-ಬೆಂಕಿಯೋ ಅಷ್ಟೊಂದು ತರ್ಕ ಸಮ್ಮತವಾದುದಲ್ಲ. “ಹೂಂ.. ಸಾಯಿss ಸಾಯಿss ನಾನು ಬೇಗನೇ ನೀನು ಸಾಯುವುದನ್ನು ನೋಡಬೇಕು, ಈ ರೀತಿ ದಡದಲ್ಲಿಯೇ ನಿಂತು ಏನು ವಿಚಾರಿಸುತ್ತಿರುವೆ? ಸಾಯಲು ಬಂದವರು ವಿಚಾರಿಸಿದರೆ ಏನೂ ಫಲವಿಲ್ಲ”. ಸಕ್ಕಿಯ ಮನಸ್ಸು ಅವಳನ್ನೇ ಹಂಗಿಸತೊಡಗಿತು. ಸಕ್ಕಿಗೆ ಮನಸು ಹಂಗಿಸಿದ್ದಕ್ಕೆ ಅವಮಾನವೆನಿಸಿ ಮುಂದೊಂದು ಹೆಜ್ಜೆ ಇಟ್ಟಳು. ತುಂಬಿ ಹರಿಯುವ ಗಂಗಾದೇವಿ “ಮಗಳೇ ದುಡಕಬೇಡಮ್ಮಾ … Read more