ನಿತ್ಯೋತ್ಸವ ಮತ್ತು ನಾನು : ಉಷಾ ನರಸಿಂಹನ್

ಬದುಕಿನಲ್ಲಿ ಎಲ್ಲದಕ್ಕು ಮೊದಲೆಂಬುದಿರುತ್ತದೆ. ಭಾವಗೀತೆ ಕೇಳುವುದಕ್ಕು… ಸಾವಿರದೊಂಬೈನೂರ ಎಂಬತ್ತನೆ ಇಸವಿ. ನಮ್ಮ ಮನೆಗೆ ನಿತ್ಯೋತ್ಸವ ಕ್ಯಾಸೆಟ್ ತಂದರು. ಎಲ್ಲರ ಸಮಕ್ಷಮ ಟೇಪ್ ರೆಕಾರ್ಡರ್ ನಲ್ಲಿ ಹಾಕಿದರು. ನಾನು ಭಾವಗೀತೆಗಳನ್ನು ಕೇಳಿದ ಮೊದಲ ಬಾರಿಯದು. ಕವಿಯೇ ಕಾವ್ಯಸಾರಾಂಶ ಹೇಳಿದ ಪರಿ ಅನನ್ಯ. ಮನೋಜ್ಞ ಸಾಹಿತ್ಯ, ಸಂತುಲಿತ ರಾಗಸಂಯೋಜನೆ, ರತ್ನಮಾಲಾಪ್ರಕಾಶ್ ಅವರ ಮಧುಸಿಂಚಿತ ನುಣ್ದನಿ, ಮೈಸೂರು ಅನಂತಸ್ವಾಮಿ ಅವರ ಭಾವಪೂರ್ಣಗಾಯನ… ನಾನು ಹಾಡಿಗೆ ಪರವಶವಾದ ಮೊದಲ ಸಲವದು. ಬದುಕಿನಲ್ಲಿ ವಸಂತ ಅಡಿಯಿಡುತ್ತಿದ್ದ ರಮ್ಯಕಾಲದಲ್ಲಿದ್ದೆ! ನವಿರು, ಪುಳಕ, ತವಕಗಳಿಗೆ ಹಾತೊರೆಯುತ್ತಿದ್ದ ಮೈ … Read more

ಕಾರ್ಮಿಕರ ಅಳಲು: ಸುನಿತಾ. ಎಸ್. ಪಾಟೀಲ

ಎಲ್ಲರೂ ಮಾಡುವುದು ‘ಹೊಟ್ಟೆಗಾಗಿ ಗೇಣು ಬಟ್ಟೆಗಾಗಿ’ ಎಂಬ ಪದವನ್ನು ನಾವೆಲ್ಲರೂ ಕೇಳಿದ್ದೇವೆ. ಕೇಳಿ ತಲೆದೂಗಿದ್ದೇವೆ. ನಾವೆಲ್ಲಾ ಒಂದಲ್ಲಾ ಒಂದು ಉದ್ಯೋಗ ಮಾಡುತ್ತೇವೆ ಹಣಗಳಿಸುತ್ತೇವೆ. ಹೊಟ್ಟೆ ಮತ್ತು ಬಟ್ಟೆಗಾಗಿ ಸಂಪಾದನೆ ಮಾಡುತ್ತೇವೆ ಹಾಗಾದರೆ ನಮ್ಮ ಉದ್ಯೋಗದ ಉದ್ದೇಶ ಇಷ್ಟೇನಾ? ಹೊಟ್ಟೆ ತುಂಬಲು ದುಡಿಯುವುದು ಕಣ್ತುಂಬಾ ನಿದ್ದೆ ಮಾಡುವುದು, ಕೆಲಸಗಳು ಪ್ರಾರಂಭಿಸುವಾಗ ಬಹು ಕಷ್ಟವೆನಿಸುತ್ತದೆ ನಿಜ, ಆದರೆ ಒಂದು ಕಡೆ ಸಿದ್ದಯ್ಯ ಪುರಾಣಿಕರು ಹೇಳುವಂತೆ ‘ಸುಲಭವಾದದ್ದೆಲ್ಲಾ ಶುಭಕರವಲ್ಲ; ಕಷ್ಟವಾದದೆಲ್ಲ ಕಷ್ಟಪರವಲ್ಲ, ಎಂದು ಭಾವಿಸಿ, ಪ್ರಾರಂಭದಲ್ಲಿ ಕಷ್ಟವೆನಿಸಿದರೂ ಪರಿಣಾಮದಲ್ಲಿ ಫಲಪ್ರದವಾಗಿರುತ್ತದೆ ಎಂಬ … Read more

ಅಂತರ್ಜಾಲ ಬಳಸಿ ಪಾಠಬೋಧನೆ: ವೈ. ಬಿ. ಕಡಕೋಳ

ಕೊರೋನಾ ಬಂದಿದ್ದರಿಂದ ಶಿಕ್ಷಣ ಕ್ಷೇತ್ರದಲ್ಲಿ ಬಹುದೊಡ್ಡ ಪರಿವರ್ತನೆಗೆ ನಾಂದಿಯಾಗಿದೆ. ಅದು ಅಂತರ್ಜಾಲ ಬಳಸಿ ಮನೆಯಿಂದಲೇ ಪಾಠವನ್ನು ಬೋಧನೆ ಮಾಡುವ ಮೂಲಕ ಎಲ್ಲರೂ ಈಗ ಅಂತರ್ಜಾಲ ಬಳಸುವ ಅನಿವಾರ್ಯತೆ ಎದುರಾಗಿದೆ. ಪ್ರಾಥಮಿಕ ಶಾಲಾ ಶಿಕ್ಷಣದಲ್ಲಿ ಟೆಲಿ ಎಜುಕೇಶನ್ ಈಗಾಗಲೇ ಸೀಮಿತ ಶಾಲೆಗಳಿಗೆ ಬಂದಿತ್ತು. ಅಲ್ಲಿ ಕಂಪ್ಯೂಟರ ಮತ್ತು ಅಂತರ್ಜಾಲ ಸೌಕರ್ಯ ಬ್ಯಾಟರಿ ಇತ್ಯಾದಿ ಪರಿಕರಗಳನ್ನು ನೀಡಲಾಗಿತ್ತು. ಆ ರೀತಿ ವೇಳಾಪಟ್ಟಿಯ ಮೂಲಕ ಪಾಠಬೋಧನೆ ಕೂಡ ಸಾಗಿತ್ತು. ಹಾಗೆಯೇ ಹಲವಾರು ಸಭೆಗಳು ತರಭೇತಿಗಳು ಕೂಡ ಅಂತರ್ಜಾಲ ಬಳಸಿ ಸೆಟ್ ಲೈಟ್ … Read more

ಬಂಧಗಳು, ಸಂಬಂಧಗಳು. ಸತ್ಯ… ಆದರೆ ಶಾಶ್ವತ ಅಲ್ಲ… : ಭಾರ್ಗವಿ ಜೋಶಿ

ಬದುಕಿನ ದೋಣಿಯ ಪಯಣದಲ್ಲಿ ಹಲವಾರು ರೀತಿಯ ಬಂಧಗಳು, ಸಂಬಂಧಗಳು ಬೆಸೆದಿರುತ್ತವೆ. ಕೆಲವು ಗಟ್ಟಿಯಾಗಿ ಬೇರೂರಿರುತ್ತವೆ ನಮ್ಮ ಮನಸಲ್ಲಿ ಮತ್ತು ಜೀವನದಲ್ಲಿ. ಕೆಲವು ಹೀಗೆ ಬಂದು ಹಾಗೆ ಹೋಗಿ ಬಿಡುತ್ತವೆ. ಹುಟ್ಟಿದಾಗ ಜೊತೆಯಲ್ಲಿ ಬಂದ ಸಂಬಂಧಗಳನ್ನು ರಕ್ತ ಸಂಬಂಧಗಳು ಎನ್ನುತ್ತೇವೆ. ಅವು ಎಂದಿಗೂ ಮಾಸದವು. ಬೇಕಾಗಲಿ, ಬೇಡವಾಗಲಿ ಮುಗಿಯದ ಅನುಬಂಧ ಅದು. ಯಾವುದೊ ಕೋಪ, ಬೇಜಾರು ಏನೇ ಬಂದ್ರು ಮತ್ತೆ ಸ್ವಲ್ಪ ಸಮಯಕ್ಕೆ ತಾನಾಗೇ ಎಲ್ಲ ಮರೆತು ಬೆಸೆವಂತೆ ಮಾಡುತ್ತದೆ. ಕೆಲವು ಸಂಬಂಧಗಳು ಎಂದೂ ಬೆಸೆಯದ ಹಾಗೆ ದ್ವೇಷ … Read more

ಕೈಯಲ್ಲಿ ಏಳು ಡಾಲರ್ ಹಿಡಿದು ಸ್ವಾಮೀಜಿ ಹೊರಟೇ ಬಿಟ್ಟರು : ಅಭಿಜಿತ್. ಎಮ್

ಇಸ್ಕಾನ್(ISKCON). ಈ ಸಂಸ್ಥೆಯ ಹೆಸರು ನೀವೆಲ್ಲರೂ ಕೇಳಿರಬಹುದು. ಇಂದು ಹೊರದೇಶಗಳಲ್ಲಿಯೂ ಹಿಂದೂ ಮಂದಿರಗಳಿವೆ ಎಂದರೆ, ಅದಕ್ಕೆ ಇಸ್ಕಾನ್ ಸಂಸ್ಥೆಯ ಕೊಡುಗೆ ಅಪಾರ. ಆದರೆ ಈ ಸಂಸ್ಥೆಯ ಸ್ಥಾಪಕರ ಬಗ್ಗೆ ಭಾರತದಲ್ಲಿಯೇ ತಿಳಿದಿರುವವರ ಸಂಖ್ಯೆ ಬಹಳ ಕಡಿಮೆ. ನೀವು ಯಾವುದಾದರೂ ದೇವಸ್ಥಾನಕ್ಕೆ ಹೋದಾಗಲೋ ಅಥವಾ ಜಾತ್ರೆಗಳಲ್ಲಿಯೋ ಅಥವಾ ಪುಸ್ತಕ ಮೇಳಗಳಲ್ಲಿಯೋ ಖಾದಿ ತೊಟ್ಟು, ತಲೆ ಹಿಂದೆ ಜುಟ್ಟು ಇರಿಸಿ, ಹಣೆ ಮೇಲೆ ಗಂಧದ ತಿಲಕವನ್ನು ಇಟ್ಟುಕೊಂಡು ಶ್ರೀಮದ್ ಭಗವದ್ಗೀತೆ ಗ್ರಂಥವನ್ನು ಮಾರಾಟ ಮಾಡುತ್ತಿರುವುದನ್ನು ನೀವು ಗಮನಿಸಿರಬಹುದು. ಇವರ ಎಲ್ಲಾ … Read more

ಉರಿಯುವ ಒಲೆಯೂ ಮತ್ತು ಹೊಳೆಯುವ ನಕ್ಷತ್ರವೂ ! : ಈರಮ್ಮ ಹಾವರಗಿ

ಈ ಬದುಕು ಕೇವಲ ಅನಿಶ್ಚಿತತೆಗಳ ನಡುವೆಯೇ ಕಳೆದು ಹೋಗಿ ಬಿಡುತ್ತದೆನೋ ಎಂಬ ಜಿಜ್ಞಾಸೆ ಮೂಡುತ್ತಿದೆ. ಏನನ್ನು ಸಾಧಿಸಲಾಗದೆ, ಅಂದುಕೊಂಡಂತೆ ಬದುಕಲಾಗದೆ ಜೀವನ ವ್ಯರ್ಥವಾದರೆ ಹೇಗೆ ? ಎಂಬ ನನ್ನ ಮನದ ದುಗುಡವನ್ನು ಹೇಳುವುದಕ್ಕೂ ಆಗದ ಪರಿಸ್ಥಿತಿ. ಹೆಣ್ಣಾಗಿ ಹುಟ್ಟಿದ್ದಕ್ಕೆ ಹೆಮ್ಮೆ ಪಡುತ್ತೇನೆ, ಜೊತೆಗೆ ಮದುವೆ,ಮಕ್ಕಳು, ಸಂಸಾರವೆಂಬ ಸಮಾಜದ ಕಟ್ಟು ಪಾಡುಗಳಿಗೆ ಹೆದರಿದ್ದೇನೆ. ಹಾಗಂತ ನಾನು ಅದನ್ನೆಲ್ಲ ವಿರೋಧಿಸುತ್ತಿಲ್ಲ. ನಮ್ಮ ಕನಸುಗಳಿಗೆ ಬೆಲೆ ಕೊಡದೆ ಹೆಣ್ಣನ್ನು ದ್ವಿತೀಯ ದರ್ಜೆಯ ಪ್ರಜೆಯನ್ನಾಗಿ ನೋಡಲಾಗುತ್ತಿದೆ, ಚಿಕ್ಕ ವಯಸ್ಸಿನಲ್ಲಿಯೆ ಮದುವೆ ಮಾಡಲಾಗುತ್ತಿದೆ. ನಮ್ಮ … Read more

ನೈಸರ್ಗಿಕ ಸಂಪನ್ಮೂಲಗಳ ಬಳಕೆ: ಎಂ.ಎಚ್.ಮೊಕಾಶಿ

ಭೂಮಿಯು ಸೌರವ್ಯೂಹದ ನವಗ್ರಹಗಳಲ್ಲಿ ಒಂದು ವಿಶಿಷ್ಟ ಗ್ರಹವಾಗಿದೆ. ಇದರಲ್ಲಿ ಗಾಳಿ, ನೀರು, ಬೆಳಕು, ಮಣ್ಣು, ತೇವಾಂಶ ಮೊದಲಾದವುಗಳು ಜೀವಿಗಳು ವಾಸಿಸಲು ಅನುಕೂಲವಾದ ವಾತಾವರಣದ ಆವಾಸವನ್ನು ಸೃಷ್ಟಿಸಿವೆ. ಇದುವರೆಗಿನ ಸಂಶೋಧನೆಯಿಂದ ಸೌರವ್ಯೂಹದಲ್ಲಿ ಏಕಕೋಶ ಸೂಕ್ಷ್ಮ ಜೀವಿಯಾದ ಅಮೀಬಾದಿಂದ ಹಿಡಿದು ಜೀವವಿಕಾಸದ ಶೃಂಗದಲ್ಲಿರುವ ಮಾನವನವರೆಗಿನ ಜೀವಿಗಳಿರುವ ಏಕೈಕ ಗ್ರಹವೆಂದರೆ ಭೂಮಿಯೊಂದೇ ಆಗಿದೆ. ಭೂಮಿಯು ಅನೇಕ ನೈಸರ್ಗಿಕ ಸಂಪನ್ಮೂಲಗಳ ಆಗರ. ಸಾಮಾನ್ಯವಾಗಿ ಮಾನವನ ಅಭಿವೃದ್ಧಿಗಾಗಿ ಮಾನವರ ಉತ್ಪಾದನಾ ಕ್ರಿಯೆಗಳಲ್ಲಿ ಬಳಕೆಯಾಗುವ ನೈಸರ್ಗಿಕ ಪದಾರ್ಥಗಳನ್ನೆಲ್ಲಾ ನೈಸರ್ಗಿಕ ಸಂಪನ್ಮೂಲಗಳೆನ್ನುವರು. ಗಾಳಿ, ನೀರು, ಸೂರ್ಯನರಶ್ಮಿ, ಅರಣ್ಯ, … Read more

ಕರ್ನಾಟಕದ ಗಾಂಧಿ ಹರ್ಡೇಕರ್ ಮಂಜಪ್ಪ: ವೈ. ಬಿ. ಕಡಕೋಳ

ನಾವೆಲ್ಲ ಬಸವಜಯಂತಿ ಬಂದಾಗ ಬಸವಣ್ಣನವರ ಬದುಕಿನ ವ್ಯಕ್ತಿತ್ವ ಕುರಿತು ಮಾತನಾಡುತ್ತೇವೆ. ಹಾಗಾದರೆ ಈ ಬಸವ ಜಯಂತಿ ಆಚರಣೆ ಮೊದಲು ಮಾಡಿದವರ ನೆನಪನ್ನು ಈ ಸಂದರ್ಭದಲ್ಲಿ ನೆನೆಯುವುದು ಸೂಕ್ತವಲ್ಲವೇ. ? ಹರ್ಡೆಕರ ಮಂಜಪ್ಪನವರು ದಾವಣಗೇರೆಯಲ್ಲಿದ್ದಾಗ ಶ್ರೀಮನ್ ನಿರಂಜನ ಪ್ರಣವ ಸ್ವರೂಪಿ ಶ್ರೀ ಮೃತ್ಯುಂಜಯ ಮಹಾಸ್ವಾಮಿಗಳ ಒಡನಾಟ ಅಲ್ಲಿನ ಮಠದಲ್ಲಿ ಭಜನಾಸಂಘ ಮಾಡಿ ಪ್ರತಿ ಸೋಮವಾರ ಭಜನೆ ಮಾಡುವುದನ್ನು 26-6-1911 ರಲ್ಲಿ ಆರಂಭಿಸುತ್ತಾರೆ. ಹಾಗೆಯೇ ಶ್ರಾವಣ ಮಾಸೋಪನ್ಯಾಸಮಾಲಾ ಕಾರ್ಯಕ್ರಮ ಕೂಡ ಮಾಡುತ್ತಾರೆ. ನಂತರ 1913 ರಲ್ಲಿ ವೈಶಾಖ ಶುದ್ಧ ರೋಹಿಣಿ … Read more

ಗೃಹ ಬಂಧನದ ಸದ್ಬಳಕೆ: ಸೂರಿ ಹಾರ್ದಳ್ಳಿ

ಕೊರೋನಾ ಮಾರಿಯಿಂದಾಗಿ ಭಾರತದಲ್ಲಿ ಲಾಕ್‍ಡೌನ್ ಅನುಭವಿಸಬೇಕಾಗಿ ಬಂದಿದೆ. ನಾಲ್ಕು ಗೋಡೆಗಳ ನಡುವೆ ಬಂಧಿಯಾಗಿರಬೇಕಾಧ ಇಂತಹ ಸಂದರ್ಭಗಳಲ್ಲಿಯೂ ನಮ್ಮ ಸಮಯವನ್ನು ಹೇಗೆ ಉಪಯೋಗಿಸಿಕೊಳ್ಳಬಹುದು ಎಂಬುದಕ್ಕೆ ಕೆಲ ಟಿಪ್ಸ್‍ಗಳು ಇಲ್ಲಿವೆ. ನಿಮ್ಮ ಸಂಬಂಧಿಕರ, ಗೆಳೆಯರ, ಶತ್ರುಗಳ ಹೆಸರಿನ ಪಟ್ಟಿ ಮಾಡಿ. ಅವರ ವಿಳಾಸಗಳು, ದೂರವಾಣಿ ಸಂಖ್ಯೆಗಳು, ಇ-ಮೈಲ್ ಐಡಿಗಳು, ಇವನ್ನೆಲ್ಲಾ ಸಂಗ್ರಹಿಸಿ ನಿಮ್ಮ ಕಂಪ್ಯೂಟರಿನಲ್ಲಿ ಅಥವಾ ಪುಸ್ತಕಗಳಲ್ಲಿ ಬರೆದಿಡಿ. ಅರೆರೆ, ಇವರ ಸಂಖ್ಯೆ ಇಷ್ಟೊಂದಿದೆಯೇ ಎಂಬ ಅಚ್ಚರಿ ನಿಮಗಾಗಿಯೇ ಆಗುತ್ತದೆ. ಈ ಪಟ್ಟಿಯಲ್ಲಿ ನಿಮ್ಮ ಅವಶ್ಯಕ ಕೆಲಸಗಳಿಗೆ ಬೇಕಾದವರ ಹೆಸರನ್ನು … Read more

ಮಲೆನಾಡಿನ ಸ್ಥಿತಿ-ಗತಿಯೂ ಕೊರೋನ-ಮಂಗನ ಖಾಯಿಲೆಯಂತಹ ಮಹಾಮಾರಿಯೂ. . . . : ವಿಜೇತ ಎಂ. ವಿ

ಮಲೆನಾಡು ಹಚ್ಚ ಹಸಿರು ಹೊದಿಕೆಯ ಮೇಲ್ಮೈ,ದಟ್ಟ ಕಾನನದ ನಡುವೆ ಅಲ್ಲಲ್ಲಿ ಒಂದೋ ಎರಡೋ ಮನೆಗಳು ಮತ್ತೆಲ್ಲೋ ಚಿಕ್ಕ ಹಳ್ಳಿ ಊರು ಕೇರಿ ಇತ್ಯಾದಿ. ಸ್ವರ್ಗಕ್ಕೆ ಮೂರೇ ಗೇಣು ಎಂಬಂತಿರುವ ಪ್ರಕೃತಿಯ ಮಡಿಲು . ಕೆರೆ ನದಿ ಹಳ್ಳ ಕೊಳ್ಳಗಳಿಂದ ಸಮೃದ್ಧ ಗಾಳಿ ಬೀಸುತ್ತಿದೆ. ಬೇಸಿಗೆಯಲ್ಲೂ ಮರದ ನೆರಳು ರಸ್ತೆಗಳನ್ನು ಮುಚ್ಚುವಷ್ಟು ತಂಪಾಗಿರುತ್ತದೆ. ಹಲವು ಹಣ್ಣು ಹೂಗಳು ಹಾಗೇ ಪ್ರಾಣಿ ಪಕ್ಷಿಗಳು ಹೀಗೆ ವೈವಿಧ್ಯಮಯವಾಗಿದೆ ಮಲೆನಾಡು. ಮಾನವರಿಗೆ ಮಾತ್ರವಲ್ಲ ಪ್ರಾಣಿ ಪಕ್ಷಿಗಳಿಗೂ ವಿವಿಧತೆಯ ತಾಣವಾಗಿದೆ. ಇಷ್ಟೆಲ್ಲಾ ಸಕಲ ಸಮೃದ್ಧ … Read more

ಕನಸಿನ ಮಾಯಾಲೋಕಕ್ಕೆ ಡ್ರೀಮ್ ಕ್ಯಾಚರ್ ನ ಕೊಡುಗೆ..: ಚೈತ್ರಭೂಲಕ್ಷ್ಮಿ ಬೆಂಗಳೂರು

ಕೆಲವು ಸ್ಥಳೀಯ ಅಮೆರಿಕನ್ ಸಂಸ್ಕೃತಿಗಳಲ್ಲಿ, ಡ್ರೀಮ್‌ಕ್ಯಾಚರ್ ಗಳನ್ನು ಕೆಲವು ಗರಿಗಳು ಅಥವಾ ಮಣಿಗಳಂತಹ ಪವಿತ್ರ ವಸ್ತುಗಳನ್ನ ಬಳಸಿ ತಯಾರಿಸಲಾಗುತ್ತದೆ. ಸಾಂಪ್ರದಾಯಿಕವಾಗಿ ಅವುಗಳನ್ನು ಹೆಚ್ಚಾಗಿ ತೊಟ್ಟಿಲಿನ ಮೇಲೆ ರಕ್ಷಣೆಯಾಗಿ ನೇತುಹಾಕಲಾಗುತ್ತದೆ. ಇದು ಒಜಿಬ್ವೆ ಸಂಸ್ಕೃತಿಯಲ್ಲಿ ಬಹಳ ಶ್ರೇಷ್ಠವಾದ ತಾಯತರೂಪವಾಗಿದೆ. ಡ್ರೀಮ್ ಕ್ಯಾಚರ್ ರಾತ್ರಿಯ ದುಃಸ್ವಪ್ನಗಳನ್ನು ಗೊಂದಲಗೊಳಿಸುತ್ತದೆ ಮತ್ತು ಆಹ್ಲಾದಕರ ಕನಸುಗಳೊಂದಿಗೆ ಒಳ್ಳೆಯದನ್ನು ಆಕರ್ಷಿಸುತ್ತದೆ. ಒಂದು ಕಾಲದಲ್ಲಿ, ಕನಸಿನ ಕ್ಯಾಚರ್ ಅನ್ನು ಆಸಕ್ತಿ ಹೊಂದಿರುವ ಜನರ ಮನೆಗಳಲ್ಲಿ ಮಾತ್ರ ಕಾಣಬಹುದಾಗಿತ್ತು. ಇತ್ತೀಚಿನ ದಿನಗಳಲ್ಲಿ, ಸಂಪೂರ್ಣವಾಗಿ ವಿಭಿನ್ನ ಜನರು ಇದನ್ನು ಆಯ್ಕೆ … Read more

ಕನಸುಗಳಿಗೆ ರೆಕ್ಕೆ ಬಂದಾಗ: ನಿಂಗಪ್ಪ ಹುತಗಣ್ಣವರ

ಹಿಡಿಯಷ್ಟು ಕನಸುಗಳನ್ನು ಎದೆಗಪ್ಪಿಕೊಂಡು ಧಾರಾಳವಾಗಿ ಜಗತ್ತಿನ ಬಗ್ಗೆ ಒಂದಷ್ಟು ಕಾಳಜಿಯಿಲ್ಲದೆ ಬದುಕಿಬಿಡುತ್ತೇವಲ್ಲ ಅದಕ್ಕಿಂತಲೂ ನಾಚಿಕೆಗೇಡಿನ ಸಂಗತಿ ಬೇರೊಂದಿಲ್ಲ. ಬದುಕಿನ ಅಸ್ತಿತ್ವಕ್ಕಾಗಿ ಯಾವುದೇ ಸಿದ್ಧಾಂತದೊಂದಿಗೆ ಮುಲಾಜಿಲ್ಲದೆ ರಾಜಿಯಾಗುವ ನಮ್ಮ ಮನಸ್ಥಿತಿಯ ಬಗ್ಗೆಯೂ ಒಂದಷ್ಟು ತಕರಾರಿದೆ. ಏನೇ ಇರಲಿ ನೇರವಾಗಿ ವಿಷಯಕ್ಕೆ ಬಂದುಬಿಡೋಣ. ಮಕ್ಕಳ ಬಾಲ್ಯವನ್ನು ಕಸಿಯಲಾಗುತ್ತಿದೆ ಮತ್ತು ಅವರ ವರ್ತಮಾನದ ಜೀವನದೊಂದಿಗೆ ಚೆಲ್ಲಾಟವಾಡಿ, ಭವಿಷ್ಯದ ಬದುಕಿಗೆ ಕೊನೆಯ ಮೊಳೆ ಹೊಡೆದಂತೆ ಭಾಸವಾಗುತ್ತದೆ. ನಾವು ಚೆನ್ನಾಗಿ ನಟಿಸುತ್ತಿದ್ದೇವೆ ಶಿಕ್ಷಣ ಮಗುವಿನ ಮೂಲಭೂತ ಹಕ್ಕು ಎಂಬುದನ್ನು ಮರೆತು. ಇದನ್ನು ನಾನು ಹೇಳುವುದಕ್ಕೂ … Read more

ಗಣಿತದ ಸುಲಭ ಅಧ್ಯಯನಕ್ಕೆ ವೇದ ಗಣಿತ: ಶ್ರೇಯ ಕೆ.ಎಂ.

ಮೊದಲಿನಿಂದಲೂ ನನಗೆ ಗಣಿತ ಎಂದರೆ ಅಚ್ಚುಮೆಚ್ಚು, ಎಷ್ಟೇ ಕ್ಲಿಷ್ಟ ಸಮಸ್ಯೆ ಇದ್ದರು ಲೀಲಾಜಾಲವಾಗಿ ಬಿಡಿಸುವುದು ನನ್ನ ಹವ್ಯಾಸಗಳಲ್ಲಿ ಒಂದು ಹಾಗಾಗಿ ನಾ ಆಯ್ದುಕೊಂಡ ವೃತ್ತಿ ಗಣಿತದ ಶಿಕ್ಷಕಿ. ಗಣಿತ ಎಂದರೆ ಮಾರು ದೂರ ಹೋಗುವವರೇ ಹೆಚ್ಚು, ಗಣಿತ ಅಂದರೆ ಕಬ್ಬಿಣದ ಕಡಲೆ ಅಂತ ತುಂಬಾ ಜನ ಹೇಳೋದು ಕೇಳಿದ್ದೇನೆ, ಆದರೆ ಗಣಿತ ಅನ್ನುವುದು ಕಬ್ಬಿಣದ ಕಡಲೆಯಲ್ಲ ಅದನ್ನ ನಾವು ಆಸಕ್ತಿ ಹಾಗೂ ಶ್ರಮವಹಿಸಿ ಕಲಿತಾಗ ಎಂಥಹ ಕ್ಲಿಷ್ಟ ಸಮಸ್ಯೆಯನ್ನು ಕೂಡ ಸುಲಭವಾಗಿಸಬಹುದು. ಗಣಿತವು ನಮ್ಮ ದೈನಂದಿನ ಜೀವನದಲ್ಲಿ … Read more

ಅಂತ್ಯಸಂಸ್ಕಾರ: ಪ್ರಭುರಾಜ್‌ ಹೂಗಾರ್

ಮಗು ಹುಟ್ಟಿದ ನಂತರ ಎಲ್ಲರೂ ಒಳ್ಳೆಯ ಪಾಲನೆ, ಪೋಷಣೆ, ಶಿಕ್ಷಣ ಕೊಡುವ ಕುರಿತು ಯೋಚಿಸುತ್ತಾರೆ. ಒಟ್ಟಾರೆಯಾಗಿ ಹೇಳುವುದಾದರೆ ಒಳ್ಳೆಯ ಸಂಸ್ಕಾರಗಳನ್ನು ನೀಡುವುದು ಪಾಲಕರ ಕರ್ತವ್ಯ/ಜವಾಬ್ದಾರಿ. ಈಗ ನಾನು ಪ್ರಸ್ತಾಪಿಸಬೇಕೆಂದಿರುವುದು ಮರಣೋತ್ತರ ಸಂಸ್ಕಾರದ ಬಗ್ಗೆ, ಅಂತ್ಯಸಂಸ್ಕಾರದ ಆಸುಪಾಸಿನ ಕೆಲ ಸನ್ನಿವೇಶಗಳ ಬಗ್ಗೆ. ಕೆಲವು ವಿಷಯಗಳಲ್ಲಿ ನಂಬಿಕೆ ಇಲ್ಲದಿದ್ದಲ್ಲಿ ಧಾರ್ಮಿಕವಾಗಿ ನೋಡದೆ ಮಾನವೀಯ ದೃಷ್ಟಿಯಿಂದ ನೋಡೋಣ, ಮನಸಿದ್ದಲ್ಲಿ ಭಾವನೆಗಳು ಇರಲೇಬೇಕಲ್ಲವೇ. ದಿನಕ್ಕೆ ನೂರು ರೂಪಾಯಿ ಸಂಪಾದಿಸುವ ಒಬ್ಬ ದಿನಗೂಲಿ ನೌಕರ ದೇವಸ್ಥಾನಕ್ಕೆ ಹೋದಾಗಲೆಲ್ಲ ಹತ್ತು ರೂಪಾಯಿ ದಾನ ಮಾಡುತ್ತಿದ್ದ, ಅವನಂತೆ … Read more

ಮಗು ಮತ್ತು ಶಿಕ್ಷಣ: ಗಾಯತ್ರಿ ನಾರಾಯಣ ಅಡಿಗ

‘ವಿದ್ಯೆ ಇಲ್ಲದವನ ಮುಖ ಹಾಳೂರ ಹದ್ದಿನಂತಿಕ್ಕು ಸರ್ವಜ್ಞ’ ಎಂಬ ಸರ್ವಜ್ಞನ ನುಡಿಗಳು ವಿದ್ಯೆಯ ಮಹತ್ವವನ್ನು ತಿಳಿಸುತ್ತದೆ. ಮುಂದುವರಿದ ಈ ಯುಗದಲ್ಲಿ ಶಿಕ್ಷಣವು ತನ್ನದೇ ಆದ ವಿಶಿಷ್ಟತೆಯನ್ನು ಪಡೆದಿದೆ. ಮಗು ಇಡೀ ಶಿಕ್ಷಣ ಪ್ರಕ್ರಿಯೆಯಲ್ಲಿ ಕೇಂದ್ರಬಿಂದು. ಮಗುವಿನ ಆಸಕ್ತಿ, ಅಭಿರುಚಿಯನ್ನು ಗ್ರಹಿಸುತ್ತಾ, ಮನ್ನಣೆ ನೀಡುತ್ತಾ ಸಂಪೂರ್ಣ ಸ್ವಾತಂತ್ರ್ಯ ನೀಡಿ ಸರ್ವತೋಮುಖ ಬೆಳವಣಿಗೆಗೆ ಅನುವು ಮಾಡಿಕೊಡುವುದೇ “ಮಗು ಕೇಂದ್ರಿತ ಶಿಕ್ಷಣ ಪದ್ಧತಿ. “ “ಮನೆಯೇ ಮೊದಲ ಪಾಠಶಾಲೆ. ತಾಯಿಯೇ ಮೊದಲ ಗುರು”. ಪ್ರಥಮತವಾಗಿ ಮಗು ತನ್ನ ಮನೆಯಿಂದಲೇ ಶಿಕ್ಷಣ ಪಡೆಯಲು … Read more

ಬಿಸಿಲು ಮಾಗಿ ಬೆಳದಿಂಗಳಾಗುವ ಸೊಗಸಿದೆ!: ಜಯಶ್ರೀ. ಜೆ. ಅಬ್ಬಿಗೇರಿ

ದಿನವೂ ದೇವರ ಮೂರ್ತಿಗಳನ್ನು ನೀರಿನಿಂದ ತೊಳೆದು, ಹಾಲಿನ ಅಭಿಷೇಕ ಮಾಡಿ,ಮೆತ್ತನೆಯ ಬಟ್ಟೆಯಲ್ಲಿ ಒರೆಸಿ, ವಿಭೂತಿ, ಅರಿಷಿಣ, ಕುಂಕುಮ, ಗಂಧ,ಅಕ್ಷತೆ,ಬಿಲ್ವಪತ್ರೆಯನ್ನು ಏರಿಸಿ ಕೈ ಮುಗಿದರೆ ಸಾಕು ಮನದಲ್ಲಿ ಅಂದುಕೊಂಡದ್ದು ನಡೆಯುತ್ತದೆ ಎನ್ನುವುದು ನಮ್ಮಲ್ಲಿಬಹುತೇಕರ ನಂಬಿಕೆ. ದೇವರ ಪೂಜೆ ಭದ್ರತಾ ಭಾವವನ್ನು ಒದಗಿಸುವುದು ಎನ್ನುವ ಭಾವ ಸುಳ್ಳೇನಲ್ಲ. ಇಷ್ಟೇ ಅಲ್ಲ ಆಶಾಭಾವ ಲವಲವಿಕೆಯ ಮನೋಭಾವನೆಯನ್ನೂ ಹೆಚ್ಚಿಸುವುದು. ಪ್ರಯತ್ನಿಸದೇ, ಬದಲಾವಣೆಯ ಗಾಳಿಗೆ ಮೈ ಒಡ್ಡದೇ, ವಾಸ್ತವವನ್ನು ಅರಿಯದೇ, ಅದೊಂದೇ ಬದುಕಿನ ಚಿತ್ರವನ್ನು ಬದಲಿಸಿಬಿಡುವುದು ಎನ್ನುವುದು ನಾವು ಸೃಷ್ಟಿಸಿಕೊಂಡ ಮಾಯದ ಬಲೆಯಲ್ಲಿ ನಾವೇ … Read more

ರಾಮಾಯಣದಲ್ಲಿ ಕಾಡುವ ಪಾತ್ರ ಉರ್ಮೀಳಾ: ಶ್ರೇಯ ಕೆ ಎಂ ಶಿವಮೊಗ್ಗ

ನಾವು ಹುಟ್ಟಿದಾಗಿನಿಂದಾನು ರಾಮಾಯಣ ಮಹಾಭಾರತಗಳೆರಡನ್ನು ನೋಡಿಕೊಂಡು ಕೇಳಿಕೊಂಡು ಓದಿಕೊಂಡು ಬೆಳೆದವರು.. ನಮ್ಮ ಅಜ್ಜಿ ದೊಡ್ಡಮ್ಮನ ಬಾಯಲ್ಲಿ ಎಲ್ಲಾ ಪಾತ್ರಗಳು ಕರತಲಾಮಲಕ ಆಗಿದ್ದವು, ಯಾವುದೇ ಸನ್ನಿವೇಶವನ್ನಾದರೂ ಲೀಲಾಜಾಲವಾಗಿ ಹೇಳುತ್ತಿದ್ದ ಪರಿ ಎಂಥವರನ್ನು ಭಾವಪರವಶ ಮಾಡುತ್ತಿತ್ತು. ಹಾಗೆಯೆ ನಾವೇನು ಇದರಿಂದ ಹೊರತಲ್ಲ, ಹೀಗೆ ಕೇಳುತ್ತ ಬೆಳೆದ ನಾವು ಅವರ ಬಾಯಲ್ಲಿ ರಾಮ ಲಕ್ಷ್ಮಣ ಸೀತೆ ಎಲ್ಲರೂ ದೇವರೇ, ಆದರೆ ಅ ಚಿಕ್ಕ ವಯಸ್ಸಲ್ಲೇ ನಂಗೆ ಕಾಡುತ್ತಿದ್ದ ಪಾತ್ರ ಊರ್ಮಿಳೆ, ದೊಡ್ಡವರು ಹೇಳುವ ಪ್ರಕಾರ ಊರ್ಮಿಳೆ ಆರಾಮಾಗಿ ರಾಜ್ಯದಲ್ಲಿ ಇದ್ದು ರಜಾ … Read more

ಕರೋನಾ ಕರ್ಫ್ಯೂ ಕಲಿಸುತ್ತಿರುವ ಪಾಠ: ಹೊ.ರಾ.ಪರಮೇಶ್ ಹೊಡೇನೂರು

ಅತ್ಯಾಧುನಿಕ ಕಾಲಘಟ್ಟದಲ್ಲಿ ಬದುಕುತ್ತಿರುವ ನಾವು ಇಂದು ವೈಜ್ಞಾನಿಕವಾಗಿ ಸಾಕಷ್ಟು ಸಾಧಿಸಿದ್ದೇವೆ, ವೈಚಾರಿಕ ಪ್ರಜ್ಞೆಯನ್ನು ಮೈಗೂಡಿಸಿಕೊಂಡು ಬುದ್ಧಿವಂತರೆಂದು ಬೀಗುತ್ತಿದ್ದೇವೆ, ಉನ್ನತ ಶಿಕ್ಷಣವನ್ನು ಪಡೆದು, ಲಕ್ಷಾಂತರ ರೂಪಾಯಿಗಳನ್ನು ಸಂಪಾದಿಸುವ ನೌಕರಿ ಹಿಡಿದುಕೊಂಡು ಐಷಾರಾಮಿ ಜೀವನವನ್ನು ನಡೆಸುತ್ತಿದ್ದೇವೆ. ತಾಂತ್ರಿಕವಾಗಿ ಮುಂದುವರೆದು ಇಡೀ ಪ್ರಪಂಚದ ಯಾವುದೇ ಮೂಲೆಯಲ್ಲಿ ಏನೇ ವಿದ್ಯಮಾನ ಘಟಿಸಿದರೂ ಕ್ಷಣಾರ್ಧದಲ್ಲಿ ವೀಕ್ಷಿಸುವ ಮಾಧ್ಯಮಗಳನ್ನು ಸೃಷ್ಟಿಸಿಕೊಂಡಿದ್ದೇವೆ. ಮಂಗಳನ ಅಂಗಳದಲ್ಲಿ ಆಟವಾಡುವಷ್ಟು ಸಾಮರ್ಥ್ಯವನ್ನು ಹೊಂದಿದ್ದೇವೆ, ಚಂದ್ರನ ಮೈಲ್ಮೈಯಲ್ಲಿ ತುಸುಹೊತ್ತು ವಿರಮಿಸುವಷ್ಟರ ಮಟ್ಟಿಗೆ ಸಂಶೋಧನಾ ಕಾರ್ಯಗಳನ್ನು ಕೈಗೊಂಡು ಯಶಸ್ಸು ಕಂಡಿದ್ದೇವೆ. ವೈದ್ಯಕೀಯ ಲೋಕದ ಅದ್ಭುತವಾದ … Read more

ಅಳಿವಿನ ಅಂಚಿನಲ್ಲಿ ಮಾನವ ಕುಲ…? !: ಶಶಿಧರ ರುಳಿ

ರಸ್ತೆಯಲ್ಲಿ ಹೋಗುವಾಗ ಗಿಡದಲ್ಲಿಯ ಹೂವೊಂದು ಕಮರಿ ಹೋಗಿದ್ದು ಕಂಡಿತು. ಮುದುಡಿದ ಆ ತಾವರೆ ಕದಡಿದ ನನ್ನ ಮನಸ್ಸಿಗೆ ಸಾಕ್ಷಿಯಾಗಿ ನಿಂತಂತೆ ತೋರುತ್ತಿತ್ತು. ರಣ ಬಿಸಿಲಿನ ಹೊಡೆತಕ್ಕೆ ಬಾಡಿಹೋದ ಅದರ ಸುಂದರ ಪಕಳೆಗಳು ಯಾವುದೋ ಒಂದು ಕಾಲದಲ್ಲಿ ವೈಭವೋಪಿತ ಕಟ್ಟಡವಾಗಿದ್ದು ಈಗ ಬಿದ್ದುಹೋದ ಗೋಡೆಗಳು ಅದರ ಪಳಿಯುಳಕೆಯಂತೆ ಕಂಡವು. ಬೆಳಗಿನ ಜಾವ ಅರಳಿ ಸಂಜೆಯಾಗುತ್ತಿದ್ದಂತೆ ನಿಸ್ತೇಜವಾದ ಹೂವಿನ ಸುಂದರ ತನು, ಜೀವನದ ಕ್ಷಣಿಕತೆಯ ನೀತಿ ಹೇಳುತ್ತಿರುವಂತೆ ಅನಿಸಿತು. ಈ ಮೂಲಕ ಬದುಕಿನ ಪಯಣ ರಭಸದ ಯಾತ್ರೆ ಎಂಬ ಸತ್ಯವನ್ನು … Read more

ಬದಲಾದ ಬದುಕು: ಜ್ಯೋತಿ ಬಾಳಿಗ

ದಿನವಿಡೀ ಒಂಟಿ ಪಿಶಾಚಿಯಂತೆ ಮನೆಯಲ್ಲೇ ಇರುತ್ತಿದ್ದ ಕೀರ್ತಿಗೆ ಈ ಲಾಕ್ಡೌನ್ ಪಿರಿಯಡ್ ನಲ್ಲಿ ಗಂಡ ,ಮಕ್ಕಳು ಮನೇಲಿ ಇರೋದು ಒಂದು ರೀತಿಯ ಸಂತಸಕೂಡ ಕೊಟ್ಟಿದೆ. ಎಲ್ಲರೂ ಒಟ್ಟಿಗೆ ಬೆಳಗಿನ ತಿಂಡಿ ತಿನ್ನೋದು, ಒಟ್ಟಿಗೆ ಮಾತಾಡುತ್ತಾ ಊಟ ಮಾಡೋದು, ಒಬ್ಬರಿಗೊಬ್ಬರು ತಮಾಷೆ ಮಾಡಿಕೊಂಡು ಸಂಜೆಯ ಸಮಯ‌ ಕಳೆಯೋದು‌, ಜೀವನಕ್ಕಾಗಿ ಗಂಡನ ವರ್ಕ್ ಫ್ರಂ ಹೋಂ ಕೆಲಸ ಇವೆಲ್ಲವೂ ಎಷ್ಟೋ ವರ್ಷಗಳ ನಂತರ ಕೀರ್ತಿಗೆ ನೆಮ್ಮದಿಯ ಜೀವನ ನೀಡಿದೆ. ಇದು ಕೀರ್ತಿಯ ಕಥೆ ದಿನಾ ಬೆಳಿಗ್ಗೆ ಬೇಗ ಎದ್ದು ‌ಗಡಿಬಿಡಿಯಲ್ಲಿ … Read more