ಬದುಕು ಸ್ನೇಹಮಯವಾಗಿರಲಿ ಬದುಕು ಸುಂದರ!!: ಗೂಳೂರು ಚಂದ್ರು

ಸ್ನೇಹ ಅಂದ ತಕ್ಷಣ ಮನಸ್ಸಿಗೆ ಬರೋದು ಒಂದು ಆಗಾದವಾದ ಸಂಬಂಧ, ಸಂಬಂಧಗಳ ಬಗ್ಗೆ ಗೊತ್ತಿಲ್ಲದವರಿಗೆ ನಿಜವಾಗಿಯೂ ಸ್ನೇಹದ ಮೌಲ್ಯ ಗೊತ್ತಿರಲಿಕ್ಕೆ ಸಾಧ್ಯವೇ ಇಲ್ಲ. ಅದು ಪಕ್ಕಕಿರಲಿ ಬಿಡಿ. ನಮ್ಮನ್ನ ಆಳವಾಗಿ ಅಧ್ಯಯನ ಮಾಡಿ ಅರ್ಥ ಮಾಡಿಕೊಂಡು ಅದಕ್ಕೆ ತಕ್ಕನಾಗಿ ಸ್ಬಂದಿಸಿಕೊಂಡು ಸರಿದೂಗಿಸುವವರು ನಿಜವಾದ ಸ್ನೇಹಿತರು. ಈಗಿನ ಜಮಾನದಲ್ಲಿ ನಮ್ಮನ್ನ ಅರ್ಥ ಮಾಡಿಕೊಂಡವರು ಎಷ್ಟು ಜನ ಅಂತ ಯೋಚನೆ ಮಾಡಿದರೆ ಸಿಗವವರು ಬೆರಳೆಣಿಕೆಗಿಂತ ಕಡಿಮೆ. ಇಲ್ಲಿ ಎಲ್ಲಾ ನಿರೀಕ್ಷೆಗಳನ್ನ ಇಟ್ಟುಕೊಂಡು ಬರುವವರು ಹೆಚ್ಚು. ಮೊನ್ನೆ ನನ್ನ ಸ್ನೇಹಿತ ಫೋನ್ … Read more

ಮಾನ ಕಾಪಾಡಿದ “ಫುಟೇಜ್”: ಚಂದ್ರೇಗೌಡ ನಾರಮ್ನಳ್ಳಿ

ಕೆಲವೊಮ್ಮೆ ಹೀಗಾಗುವುದುಂಟು. ಯಾರದೋ ತಪ್ಪಿಗೆ ಮತ್ತಾರಿಗೋ ಶಿಕ್ಷೆ, ಬಹುಮಾನ ನಿರೀಕ್ಷಿಸಿದ ಸಮಯದಲ್ಲಿ ಅವಮಾನ, ಕಾಣದ ಕೈಗಳ ಮೇಲಾಟ, ಸ್ಥಬ್ದ ತಿಳಿಗೊಳದಂತಿದ್ದ ದಿನಗಳಿಗೆ ಪ್ರಕ್ಷುಬ್ದ ಅಲೆಗಳ ಹೊಡೆತ. ಘಟನೆಯ ನೈಜತೆ ತಿಳಿಯುವವರೆಗೆ ತಳಮಳ. ಆಮೇಲೆ ಸಮಾಧಾನದ ಒಂದು ನಿಟ್ಟುಸಿರು. ಕಳೆದ ತಿಂಗಳು ಮಂಡ್ಯ ಜಿಲ್ಲೆಯ ಶ್ರೇಷ್ಠ ಕವಿಯೊಬ್ಬರ ಸ್ಮರಣಾರ್ಥ ನಡೆದ ಕವಿಗೋಷ್ಟಿಯಲ್ಲಿ ಭಾಗವಹಿಸಿದ್ದೆನು. ಕಾರ್ಯಕ್ರಮ ತುಂಬಾ ಅಚ್ಚುಕಟ್ಟಾಗಿತ್ತು. ಬಿಡುವಿನಲ್ಲಿ ಹೊರಬಂದಾಗ ದಾಖಲೆ’ಯ ಪ್ರಕಾಶಕರೊಬ್ಬರು ಸಿಕ್ಕಿದರು. ಅವರನ್ನು ಮಾತನಾಡಿಸಿ ಫೋಟೋ ತೆಗೆಸಿಕೊಂಡೆವು. ಕೆಲವೇ ನಿಮಿಷಗಳಲ್ಲಿ ಉದ್ಘಾಟಿಸಿದ ಗಣ್ಯ ಸಾಹಿತಿಯೂ ಹೊರಬಂದರು. … Read more

ನಮ್ಮತನವ ಉಳಿಸಿಕೊಳ್ಳೋಣ: ಸ್ಮಿತಾ ಮಿಥುನ್

ಹಬ್ಬ ಗಳು ಅಂದ್ರೆ ನನ್ಗೆ ತುಂಬಾ ಇಷ್ಟ, ಯಾಕೆ ಅಂದ್ರೆ ಆವತ್ತು ಸಂಭ್ರಮ ಪಡೋ ದಿನ ಹಬ್ಬಗಳ ಮಹತ್ವ ಗೊತ್ತಾಗಿದೆ ನಾನು ಇಲ್ಲಿ ಅಂದ್ರೆ ದೂರದ ಗಲ್ಫ್ ಗೆ ಬಂದ ಮೇಲೆ. ಹಬ್ಬಗಳು ನಮ್ಮತನದ ಪ್ರತೀಕ. ಇವತ್ತು ನಾವು ನಮ್ಮತನವನ ಯಾಕೋ ಬಿಟ್ಟು ಬಿಡುತಿದ್ದೇವೋ ಅಂಥ ಅನಿಸೋಕೆ ಶುರು ಆಗಿದೆ. ನಾವು ಅಂದ್ರೆ ಕನ್ನಡಿಗರೇ ಹೀಗೆನಾ ? ಯಾಕೆ ಅಂದ್ರೆ ನೀವು ಗುಜರಾತಿಗಳನ್ನ ನೋಡಿ ಎಲ್ಲಿ ಹೋದ್ರು ಅಲ್ಲಿ ಒಂದು ಸಣ್ಣ ಗುಜರಾತ್ ನ ನಿರ್ಮಿಸಿಬಿಡ್ತಾರೆ. ಆದ್ರೆ … Read more

ಪರೀಕ್ಷೆಯನ್ನು ಹಬ್ಬದಂತೆ ಆಚರಿಸಿ ಉತ್ತಿರ್ಣರಾಗಿರಿ: ಜಯಶ್ರೀ ಭ. ಭಂಡಾರಿ.

ಇಂದಿನ ಮಕ್ಕಳು ನಾಳಿನ ನಾಡ ಬೆಳಗುವ ನಾಯಕರು. ಅವರಿಗೆ ಸರಿಯಾದ ಮಾರ್ಗದರ್ಶನ ಬೇಕು. ಶಾಲೆಯಲ್ಲಿ ಗುರುಗಳು ಮನೆಯಲ್ಲಿ ಪಾಲಕರು ಮಕ್ಕಳ ಶ್ರೇಯಸ್ಸಿಗೆ ಶ್ರಮಿಸುತ್ತಾರೆ. ಹುಟ್ಟಿದ ಪ್ರತಿಮಗುವಿನಲ್ಲಿ ಪ್ರತಿಭೆ ಇರುತ್ತದೆ. ಅದನ್ನು ಗುರುತಿಸಿ ಅವನನ್ನು ಭಾವಿಭವಿಷ್ಯತ್ತಿಗೆ ಅಣಿಮಾಡುವ ಗುರುತರ ಜವಾಬ್ದಾರಿ ಶಿಕ್ಷಕರ ಹಾಗೂ ಪಾಲಕರ ಮೇಲಿದೆ. ಮಗ/ಳು ಶಾಲೆಗೆ ಹೋಗತಾರೆ ಅಂದರೆ ಅವರ ಬಗ್ಗೆ ಪಾಲಕರ ಕಾಳಜಿ ಬೇಕೆಬೇಕು. ತಯಾರಿ ಮಾಡಿ ಶಾಲೆಗೆ ಕಳಿಸಿದರೆ ಜವಾಬ್ದಾರಿ ಮುಗಿತು ಅವರ ಕೇಳಿದ್ದೆಲ್ಲ ಕೊಡಿಸಿದರೆ ಆಯ್ತಲ್ಲವಾ ಅನ್ನಬೇಡಿ. ನಿಮ್ಮ ಮಗು ನಿಮ್ಮ … Read more

ಗಿಲಿಗಿಲಿ ಪುವ್ವಾ : ಕೃಷ್ಣ ಶ್ರೀಕಾಂತ ದೇವಾಂಗಮಠ

ಪಾತ್ರ ವರ್ಗ ಚಾರು – ಒಂದು ಕೈ ಮಾತ್ರ ಇರುವ ಕೇರಿಯ ಹುಡುಗ ಮಾನು – ಕೇರಿಯ ಹುಡುಗ ಮೀರಾ – ಕೇರಿಯ ಹುಡುಗಿ ಮಾದಪ್ಪ – ಮಾನುವನ ತಂದೆ ಅನಾಮಿಕ – ಧ್ವನಿ ಪುಟ್ಟಿ – ಲಂಬೋದರ & ಜಾನ್ನವಿಯ ಮಗಳು ಗೌರಿ – ಗೆಳತಿ ದೇವ್ರು – ಅಜ್ಜಿಯ ಮಮ್ಮಕ್ಕಳು ಅನಿ – ಅಜ್ಜಿಯ ಮಮ್ಮಕ್ಕಳು ಮಾಯಾ – ಅಕ್ಕನಂಥ ಗೆಳತಿ ಜಾನ್ನವಿ – ಪುಟ್ಟಿಯ ತಾಯಿ ಲಂಭೋದರ – ಪುಟ್ಟಿಯ ತಂದೆ ದೃಶ್ಯ … Read more

ಜೀವನದ ಅಂಚಿನಲ್ಲಿರುವ ಪುಟಗಳನ್ನು ಪ್ರೀತಿಯ ಬಣ್ಣದಿಂದ ತುಂಬೋಣ: ಜಯಶ್ರೀ. ಜೆ. ಅಬ್ಬಿಗೇರಿ

ಅದ್ಯಾಕೆ ಹೀಗೆ ಅಂತ ನನಗೂ ಗೊತ್ತಿಲ್ಲ. ಮೊದಲಿನಿಂದಲೂ ಹಾಗೆ ಗೆಳತಿಯರು ಅಂತ ಸಮೀಪವಿದ್ದವರೆಲ್ಲ ನನ್ನೊಂದಿಗೆ ಒಂದಿಷ್ಟು ಜಾಸ್ತಿನೇ ಅನ್ನುವಷ್ಟು ಆತ್ಮೀಯರಾಗ್ತಾರೆ. ತಮ್ಮ ಮನಸ್ಸಿನಲ್ಲಿರುವುದನ್ನು ನನ್ನ ಬಳಿ ಮುಕ್ತವಾಗಿ ಹೇಳಿಕೊಳ್ಳುತ್ತಾರೆ. ಬಹುಶಃ ನಾನು ನನ್ನದೇನೋ ಕೆಲಸವಿದೆ ಎಂದು ಅವರಿಗೆ ಬೆನ್ನು ಹಾಕಿ ಎದ್ದು ಹೋಗದೇ ಇರುವುದರಿಂದಲೋ, ಅವರು ಹೇಳಿದ್ದನ್ನೆಲ್ಲ ದೇವರ ಹಾಗೆ ಕೂತು ಕೇಳಿಸಿಕೊಳ್ಳುತ್ತೇನೆ ಎನ್ನುವುದಕ್ಕೋ ಅಥವಾ ಅವರು ಏನು ಹೇಳಿದರೂ ಅದನ್ನು ಪ್ರಶ್ನಿಸದೇ ಒಪ್ಪಿಕೊಳ್ಳುತ್ತೇನೆ ಎನ್ನುವ ಕಾರಣಕ್ಕೋ, ಏನೋ ಗೊತ್ತಿಲ್ಲ. ಒಟ್ಟಿನಲ್ಲಿ ವಯಸ್ಸಿನಲ್ಲಿ ಹೆಚ್ಚು ಕಡಿಮೆ ಹಿರಿಯರು … Read more

ಯುಗಾದಿ: ವೈ. ಬಿ. ಕಡಕೋಳ

ಯುಗ ಯುಗಾದಿ ಕಳೆದರೂ ಯುಗಾದಿ ಮರಳಿ ಬರುತಿದೆ ಹೊಸ ವರುಷಕೆ ಹೊಸ ಹರುಷವ ಹೊಸತು ಹೊಸತು ತರುತಿದೆ ಎಂಬ ಬೇಂದ್ರೆಯವರ ಗೀತೆಯ ಸಾಲುಗಳಲ್ಲಿ ಯುಗಾದಿಯ ಬರುವಿಕೆ, ಅದರಲ್ಲಿನ ಸಡಗರ ವರ್ಣನಾತೀತ. ಋತುಗಳ ರಾಜ ವಸಂತನ ಆಗಮನದ ಸೂಚನೆಯ ಜೊತೆಗೆ ಯುಗಾದಿಯು ಎಲ್ಲ ಹಬ್ಬಗಳಿಗೂ ನಾಂದಿಯಾಗಿ ಪ್ರತಿ ಸಂವತ್ಸರದ ಚೈತ್ರ ಮಾಸ ಶುಕ್ಲಪಕ್ಷದ ಪಾಡ್ಯಮಿ ತಿಥಿಯಂದು ಆಚರಿಸಲ್ಪಡುವ ಹಬ್ಬ ಯುಗಾದಿ. ರಾಮಾಯಣ ಕಾಲಕ್ಕಿಂತ ಮೊದಲು ಉತ್ತರಾಯಣದಿಂದ ಹೊಸ ವರ್ಷದ ಗಣನೆ ಪ್ರಾರಂಭವಾಗುತ್ತಿತ್ತು. ಶ್ರೀರಾಮನು ಆವತರಿಸಿದ ಮಾಸ ಹಾಗೂ ಪಟ್ಟಾಭಿಷೇಕವಾದ … Read more

ತನ್ನ ಅಹಂನ ಮುಂದೆ ದೇಶ ಕಾಯುವ ಯೋಧರ ತ್ಯಾಗ ಬಹು ದೊಡ್ಡದು: ನಾಗರಾಜ್.ಮುಕಾರಿ (ಚಿರಾಭಿ)

ಬೇಸಿಗೆ ಕಾಲ ಬಂದಾಗಲೆಲ್ಲಾ ಊಟಿ ಅಥವಾ ಮನಾಲಿಯ ನೆನಪಾಗುತ್ತಿತ್ತು ಕಾರಣ ನಿಮಗೆ ಗೊತ್ತೇ ಇದೆ. ಅಲ್ಲಿಯ ವಾತಾವರಣ ದೇಹ ತಂಪು ಮಾಡುವುದರ ಜೊತೆಗೆ ಕಣ್ಣುಗಳಲ್ಲಿ ಅಲ್ಲಿಯ ಸ್ವರ್ಗರಮಣೀಯ ದೃಷ್ಯಗಳನ್ನು ತುಂಬಿ ಆನಂದ ಪಡೆಸುತ್ತದೆ. ಹಾಗಾಗಿ ಈ ಬಾರಿ ಮನಾಲಿಗೆ ಹೋಗುವುದಾಗಿ ನಿರ್ಧರಿಸಿ ತಿರುವನಂತಪುರಂ-ಡೆಲ್ಲಿಗೆ ಹೊರಡುವ ರಾಜಧಾನಿ ಎಕ್ಸ್‍ಪ್ರೆಸ್‍ನಲ್ಲಿ ಟಿಕೆಟ್ ಬುಕ್ ಮಾಡಿ ಕುಟುಂಬ ಸಮೇತರಾಗಿ ಹೊರಟೇ ಬಿಟ್ಟೆವು. ರೈಲಿನ ಒಳಹೊಕ್ಕೊಡನೇ ತಂಪಾದ ಗಾಳಿ ಮೈಯಲ್ಲಾ ತಣ್ಣಗಾಗಿಸಿತು. ಮನಾಲಿಯ ಸುಖ ಇಲ್ಲಿಂದಲೇ ಸಿಗಲು ಶುರುವಾಯಿತು. ನಮಗೆ ನಿಗಧಿ ಪಡಿಸಿದ … Read more

ಧೈರ್ಯವೇ ಹಿಮಾಲಯ, ಗೆಲ್ಲು ನೀ ಅಧೈರ್ಯವಾ. . . . : ಸುನಂದಾ ಎಸ್ ಭರಮನಾಯ್ಕರ

ಧೈರ್ಯ ಎಂದರೆ ಛಾತಿ, ಕೆಚ್ಚು, ಎದೆಗಾರಿಕೆ. ಧೈರ್ಯವು ಭಯ, ನೋವು ಅಪಾಯ ಅನಿಶ್ಚಿತತೆ ಅಥವಾ ಬೆದರಿಕೆಯನ್ನು ಎದುರಿಸುವ ಸಾಮಥ್ರ್ಯ ಮತ್ತು ಇಚ್ಛೆಯಾಗಿದೆ. ಮನುಷ್ಯ ಯಾವುದೇ ಸಾಧನೆ ಮಾಡಬೇಕಾದರೂ ಆತನಲ್ಲಿ ಮೊದಲು ಇರಬೇಕಾದದ್ದು ಧೈರ್ಯ. “ಧೈರ್ಯಂ ಸರ್ವತ್ರ ಸಾಧನಂ”. ಮನುಷ್ಯನಲ್ಲಿ ಸಿಗುವ ಅತಿ ವಿರಳ ಹಾಗೂ ಅತಿ ಅಮೂಲ್ಯವಾದ ವಸ್ತುವೆಂದರೆ ಧೈರ್ಯವೇ ಆಗಿದೆ. ಅದನ್ನು ಪೇಟೆಯಲ್ಲಿ ಖರೀದಿ ಮಾಡಲಾಗುವುದಿಲ್ಲ. ಅದು ಮಾರಾಟದ ವಸ್ತುವಾಗಿದ್ದರೆ ಪುಕ್ಕಲರೂ, ಶ್ರೀಮಂತರಾದಿಯಾಗಿ ಎಲ್ಲರೂ ಅದನ್ನು ಕೊಂಡು ಕೊಂಡು ತಮ್ಮ ಬಳಿ ಇರಿಸಿಕೊಳ್ಳುತ್ತಿದ್ದರು. ಬದುಕು ಗೆಲ್ಲಲು … Read more

ಹೊಸ ಚೈತನ್ಯ ನೀಡುವ ಹಬ್ಬ ಯುಗಾದಿ: ಡಾ. ಶಿವಕುಮಾರ ಎಸ್‌. ಮಾದಗುಂಡಿ

ಪ್ರಾಚೀನ ರೋಮನ್ ಕವಿ ಓವಿಡ್ ಒಮ್ಮೆ ಜ್ಯೋತಿಷಿ ಜಾನುಸ್ನನ್ನು ಕೇಳಿದ: ‘ಹೊಸ ವಷ೯ ಜನವರಿಯಿಂದಲೇ ಏಕೆ ಆರಂಭವಾಗಬೇಕು’? ಎಂದು. ಅದಕ್ಕೆ ಜ್ಯೋತಿಷಿ ಹೇಳಿದರೂ ಜನವರಿ ತಿಂಗಳಿನಲ್ಲಿ ಸೂರ್ಯ ಮಕರ ರಾಶಿ ಪ್ರವೇಶಿಸುತ್ತಾನೆ. ಅಂದಿನವರೆಗೆ ಹಿಮದಿಂದ ಮಂಕಾಗಿದ್ದ ಜಗತ್ತು ಅಂದಿನಿಂದ ಸ್ವಚ್ಛವಾಗಿ ಜನತೆಯಲ್ಲಿ ಹೊಸ ಉತ್ಸಾಹ, ನವೋದಯ ಆರಂಭವಾಗುವುದರಿಂದ ಅಂದಿನಿಂದ ಹೊಸವರ್ಷದ ಆರಂಭ ಎಂದು ಹೇಳಿದರು. ಆದರೆ, ಸಾಮಾನ್ಯವಾಗಿ ಹೊಸ ವರ್ಷ ಎಂದರೆ ಜಗತ್ತಿನಲ್ಲಿ ಜನವರಿ ಒಂದು ಎಂದು ನಾವೆಲ್ಲರೂ ಭಾವಿಸುತ್ತೇವೆ. ಆದರೆ, ಆ ದಿನ ಮನೆಯ ಗೋಡೆಯ … Read more

ಮನದಲಿ ಮೂಡಿದ ಸಂಭ್ರಮದ ಯುಗಾದಿ: ಪಿ. ಕೆ. ಜೈನ್ ಚಪ್ಪರಿಕೆ.

ಭೂಮಿಯು ಸೂರ್ಯನ ಸುತ್ತ ಸುತ್ತುವಾಗ ಹವಮಾನದಲ್ಲಿ ಹಾಗೂ ನಿಸರ್ಗದಲ್ಲಿ ಉಂಟಾಗುವ ಬದಲಾವಣೆಗಳಿಗೆ ಋತುಗಳು ಎನ್ನುತ್ತೇವೆ. ಭಾರತೀಯರ ಪದ್ಧತಿಯಲ್ಲಿ 6 ಋತುಗಳಿದ್ದು ವಸಂತ ಋತುವು ಹಿಂದೂ ವರ್ಷದ ಆರಂಭದ ಋತುವಾಗಿದೆ. ಒಂದೊಂದು ಋತುವಿಗೂ ಎರಡು ಮಾಸಗಳಿದ್ದು ಚೈತ್ರ ಮತ್ತು ವೈಶಾಖ ಮಾಸಗಳು ವಸಂತ ಋತುವಿನಡಿಯಲ್ಲಿ ಬರುತ್ತವೆ. ಹೀಗೆ ಚೈತ್ರ ಮಾಸ ಶುಕ್ಲ ಪಕ್ಷದಲ್ಲಿ ಬರುವ ಯುಗಾದಿಯನ್ನು ಹೊಸ ವರ್ಷವೆಂದು ಆಚರಿಸುತ್ತೇವೆ. ಯುಗಾದಿಯು ದಕ್ಷಿಣ ಬಾರತದ ಜನರಿಗೆ ವರ್ಷದ ಮೊದಲ ಹಬ್ಬವಾಗಿ ಉತ್ತರ ಭಾರತದವರಿಗೆ ಇದು ಹೋಳಿಯ ನಂತರ ಬರುವ … Read more

ಹರಕೆ ಸಂದಾಯ: ಕೃಷ್ಣವೇಣಿ ಕಿದೂರು

ನಮ್ಮ ತುಳು ಭಾಷೆಯಲ್ಲಿ ಒಂದು ಮಾತಿದೆ. ಯಾರಿಗಾದರೂ ಒಂದು ಕೆಲಸ ಒಪ್ಪಿಸಿದಾಗ ಅಸಡ್ಡೆಯಿಂದ ಅಥವಾ ಉಡಾಫೆಯಿಂದ ಅರೆಬರೆ ಮಾಡಿದ್ದು ಕಂಡಾಗ ’ ಉಂದ್ ಎಂಚಿನ? ಪರಕೆ ಸಂದಾಯನಾ” (ಏನಿದು ? ಹರಕೆ ಸಂದಾಯವಾ ಅಂತ ಕೇಳುವುದು. ಕನ್ನಡದಲ್ಲಿಯೂ ಅದೇ ಅರ್ಥದ ಮಾತು ಉಂಟು. ಮಾಡುವ ಕಾರ್ಯವನ್ನು ಔದಾಸಿನ್ಯದಿಂದ ಅರ್ಧಮರ್ಧ ಮಾಡಿದಾಗ ಅದಕ್ಕೆ ಹೆಸರೇ’’ ಹರಕೆ ಸಂದಾಯವಾ” ಅಂತ ಸಣ್ಣಕ್ಕೆ ಗದರಿಸುವುದು. ಒಪ್ಪಿಸಿದ ಕೆಲಸ ಒಪ್ಪವಾಗಿ ಮಾಡಿದಾಗ ಅಂಥ ಮಾತಿಗಲ್ಲಿ ಎಡೆಯಿಲ್ಲ. ಬದಲಿಗೆ ಮೆಚ್ಚುಗೆ, ಪ್ರಶಂಸೆ , ಅಭಿಮಾನ … Read more

ಪ್ರಸವ ಕಾಲ….: ಆಶಾಜಗದೀಶ್

  ಮನೆ ಮುಂದಿನ ಮಲ್ಲಿಗೆ ತನ್ನ ಎಂದಿನ ತನ್ಮಯತೆಯಲ್ಲಿ ತಾರಸಿಯ ಮೇಲೆ ಧ್ಯಾನಸ್ಥವಾಗಿತ್ತು. ಮಿಸುಗಾಡುವ ಒಡಲು ಅದಕ್ಕೊಂದು ಗರ್ಭಿಣಿಯ ಕಳೆ ತಂದಿತ್ತಿತ್ತು. ಅದೂ ತೀರಾ ಇತ್ತೀಚಿನಿಂದ ಹೀಗೆ….. ಅದು ನವೆಂಬರ್ ಡಿಸೆಂಬರಿನ ಸಂದರ್ಭ… ಗುಬ್ಬಿಯೊಂದು ತನ್ನ ಸಂಗಾತಿಯೊಂದಿಗೆ ಬಾಣಂತನಕ್ಕಾಗಿ ಬಂದಿತ್ತು… ಹೀಗೆ ಹಕ್ಕಿಗಳು ಮೇಲಿಂದ ಮೇಲೆ ನಮ್ಮ ತೋಟವಲ್ಲದ ಪುಟ್ಟ ತೋಟಕ್ಕೆ ಬರುವುದು ಮಾಮೂಲೇ ಇತ್ತಾದರೂ ಪ್ರತಿ ಬಾರಿಯೂ ಹೋಸದೆಂಬಂತಹ ಉತ್ಸಾಹ ಮಾತ್ರ ನಮ್ಮನ್ನು ಅದೇಕೆ ತುಂಬುತ್ತಿತ್ತೋ ಗೊತ್ತಿಲ್ಲ… ಬಹುಶಃ ಹುಟ್ಟು ಎನ್ನುವುದು ಸಕಲ ಜೀವರಾಶಿಯೊಳಗೆ ಪ್ರವೇಶಿಸುವಾಗ … Read more

ಆಸೆಯೆಂಬ ಬಿಸಿಲು ಕುದುರೆ ಏಕೆ ಏರುವೆ…?: ರಮೇಶ್ ವಿ

ಆಸೆ ಯಾರಿಗಿರಲ್ಲ  ಹೇಳಿ! ಪ್ರತಿಯೊಬ್ಬ ಮನುಷ್ಯನಿಗೂ ಅವನೆದೆಯಾದಂತ ಆಸೆ ಆಕಾಂಕ್ಷೆ ಇರುತ್ತೆ, ಅವನ ಆಸೆಯೇ ನಾಳೆಗೆ ಪ್ರೇರಣೆ, ಭರವಸೆ ಹಾಗು ಮುನ್ನುಡಿ. ಆದ್ರೆ ಅದು ದುಃಖದ ಮೂಲವು ಹೌದು. ನನಗು ನನ್ನ ತಂದೆ ಉಳಿಸಿಕೋ ಬೇಕೆಂಬ ಮಹದಾಸೆ ಇತ್ತು ಆದ್ರೆ ಕಡೆಯಲ್ಲಿ ನಮ್ಮಾಸೆ ಜೊತೆ ಅಪ್ಪನಿಗೂ ಎಳ್ಳು ನೀರು ಬಿತ್ತಂತಾಯಿತು! ನನ್ನ ಅನುಭವದ ಮಾತು…! ಮಾರ್ಚ್ ೨೦೧೭ ಅಪ್ಪನಿಗೆ ೬೦ ವಸಂತ ತುಂಬಿದಾಗ ಷಷ್ಠಿಪೂರ್ತಿ ಪೂಜೆ ಮಾಡಲಾಗಲಿಲ್ಲ, ಈಗ ೭೦ ನೇ ಹುಟ್ಟುಹಬ್ಬದ ಪ್ರಯುಕ್ತ ವಿಶೇಷ ಷಷ್ಠಿಪೂರ್ತಿ … Read more

ಮೋಹಕ ತಿರುವು: ಕಮಲ ಬೆಲಗೂರ್.

ಪಾರ್ವತಿ ಒಲೆಯ ಮುಂದೆ  ಕುಳಿತು ರೊಟ್ಟಿ ಮಾಡ್ತಿದ್ದಾಳೆ. ಯಾಂತ್ರಿಕವಾಗಿ ಕೈ ಕೆಲಸಮಾಡುತ್ತಿದ್ದರೂ ಮನಸ್ಸು ಗಾಢವಾದ ಯೋಚನೆಯಲ್ಲಿ ಸಿಲುಕಿದೆ. ಕಣ್ಣು ಗಳು ಉರಿಯನ್ನೇ ದಿಟ್ಟಿಸಿ ನೋಡುತ್ತಿವೆ. ಮನಸ್ಸು ಮಗನ ಬಗ್ಗೆ ಯೋಚಿಸುತ್ತಾ ಕೊರಗುತ್ತಿದೆ. ಮಗನ ಸಂಸಾರವನ್ನು ನೋಡುತ್ತಾ ಕಣ್ತುಂಬಿಸಿಕೊಳ್ಳಬೇಕೆಂಬ ಆಸೆ ಆಸೆಯಾಗಿಯೇ ಉಳಿದುಬಿಟ್ಟಿದೆ. ಪಾರ್ವತಿ ವಿಧವೆ. ಮಗ ಸೋಮು ಪ್ರತಿಭಾವಂತ. ಚಿಕ್ಕಂದಿನಲ್ಲಿಯೇ ಅಪ್ಪನನ್ನು ಕಳೆದುಕೊಂಡು ಬೆಳೆದ ಅವನಿಗೆ ಅಮ್ಮನೇ ಸರ್ವಸ್ವ. ಅಪ್ಪನ ಕೊನೆಯ ಆಸೆಯಂತೆ ಅವರ ಸ್ನೇಹಿತರ ಮಗಳೊಂದಿಗೆ ಅವನ ಬಾಲ್ಯ ವಿವಾಹವಾಗಿರುತ್ತದೆ. ತಂದೆಯ ಮರಣಾನಂತರ ಎರಡೂ ಕುಟುಂಬಗಳು … Read more

ಯುಗಾದಿ ವಿಶೇಷಾಂಕಕ್ಕೆ ಲೇಖನ ಆಹ್ವಾನ

ಪ್ರಿಯ ಪಂಜುವಿನ ಓದುಗರೇ ಹಾಗು ಬರಹಗಾರರೇ, ನಿಮ್ಮೆಲ್ಲರ ಅಭಿಮಾನದಿಂದ ಪಂಜು ಕಳೆದ ತಿಂಗಳು ಜನವರಿ 21 ರಂದು ಐದು ವರ್ಷ ತುಂಬಿ ಆರನೇ ವರ್ಷಕ್ಕೆ ಕಾಲಿಟ್ಟಿದೆ. ಹತ್ತಾರು ವೆಬ್ ತಾಣಗಳ ನಡುವೆಯೂ ತನ್ನದೇ ಆದ ಓದುಗ ಬಳಗವನ್ನು ಹೊಂದಿರುವ ಪಂಜು, ತಿಂಗಳಿಗೆ ಕಡಿಮೆ ಎಂದರೂ ಎರಡೂವರೆ ಲಕ್ಷ ಹಿಟ್ಸ್ ಜೊತೆಗೆ ಸುಮಾರು ಏಳೂವರೆ ಸಾವಿರ ಓದುಗರು ಪಂಜುಗೆ ಭೇಟಿ ನೀಡುತ್ತಾರೆ ಎಂಬುದು 2017ರ ಹೈಲೈಟ್ಸ್.. ಪಂಜು ಆಗಾಗ ವಿಶೇಷ ಸಂಚಿಕೆಗಳನ್ನು ಹೊರ ತರುವುದು ವಾಡಿಕೆ. ಈ ವರ್ಷದ … Read more

ವರ್ಣಮಯ ಬದುಕು ಆನಂದಮಯ: ಜಯಶ್ರೀ.ಜೆ. ಅಬ್ಬಿಗೇರಿ

ಮುದ್ದು ಕಂದಮ್ಮ ರಚ್ಚೆ ಹಿಡಿದು ಅಳುವಾಗ ಅದರ ಕೈಯಲ್ಲಿ ಬಣ್ಣದ ಗೊಂಬೆಯನ್ನು ಕೊಟ್ಟರೆ ಸಾಕು ತಕ್ಷಣಕ್ಕೆ ಅಳು ನಿಲ್ಲಿಸಿ ನಗು ಚೆಲ್ಲುತ್ತದೆ. ಬಣ್ಣದ ಆಕರ್ಷಣೆಯೇ ಅಂಥದು. ಬಣ್ಣವಿಲ್ಲದ ಬದುಕನ್ನು ಊಹಿಸಲು ಸಾಧ್ಯವೇ ಇಲ್ಲ. ಎನ್ನುವಷ್ಟರ ಮಟ್ಟಿಗೆ ಬಣ್ಣ ನಮ್ಮ ಜೀವನದಲ್ಲಿ ಹಾಸು ಹೊಕ್ಕಾಗಿದೆ. ಬಣ್ಣಗಳು ತಮ್ಮ ಪ್ರಭಾವಲಯವನ್ನು ಅಷ್ಟೊಂದು ವ್ಯಾಪಕವಾಗಿ ವಿಸ್ತರಿಸಿಕೊಂಡಿವೆ. ದಿನಗಳೆದಂತೆ ನಾವೂ ಅವುಗಳ ಮೋಡಿಗೆ ಹೆಚ್ಚು ಹೆಚ್ಚು ಬೀಳಿತ್ತಲೇ ಇದ್ದೇವೆ.ನಮ್ಮಲ್ಲಿ ಬಣ್ಣಗಳಿಲ್ಲದೇ ಹಬ್ಬದ ರಂಗು ಹೆಚ್ಚುವುದೇ ಇಲ್ಲ. ನವರಾತ್ರಿಯಲ್ಲಿ ಶಕ್ತಿ ದೇವತೆಗೆ ಹಲವಾರು ರತ್ನ … Read more

ಪ್ರೇಮ ಪತ್ರ ತಂದ ಪೇಚು: ವೈ. ಬಿ. ಕಡಕೋಳ

ಆ ದಿನ ಎಂದಿನಂತಿರಲಿಲ್ಲ ವಿಜಯ್ ಗರಬಡಿದವನಂತೆ ಕುಳಿತಿದ್ದ. “ಯಾಕೋ ಹೀಗೆ ಕುಳಿತಿರುವೆ ಏನಾಗಿದೆ ನಿನಗೆ? “ಎಂದ ಅಮಿತ್. “ಮಾಡೋದೆಲ್ಲ ಮಾಡಿಬಿಟ್ಟು ಏನೂ ಗೊತ್ತಿಲ್ಲ ಅನ್ನುವಂತೆ ಇದ್ದೀಯಲ್ಲ ನೀನೂ ಒಬ್ಬ ಗೆಳೆಯನಾ? “ಎಂದ. “ಯಾಕಪ್ಪಾ ಅಂಥಾ ತಪ್ಪು ನನ್ನಿಂದ ಆಗಿದ್ದಾದರೂ ಏನು? ” ಎಂದು ಅಮಿತ್ ಕುತೂಹಲದಿಂದ ಪ್ರಶ್ನಿಸಲು “ನನ್ನ ಭಾವಿ ಪತ್ನಿಗೆ ಪತ್ರ ಬರೆದಿದ್ದು  ಎಡವಟ್ಟಾಗಿದೆ ಏನು ಮಾಡಲಿ? ” ಎಂದ ಸಪ್ಪೆ ಮೋರೆಯಿಂದ, “ಅದಕ್ಯ್ಕಾಕೋ ಬೇಜಾರು? ” ಎಂದ ಅಮಿತ್ . ಆಗ ವಿಜಯ್ “ನೀನು … Read more

ಯುವ ಜನತೆಗೆ ವಿವೇಕಾನಂದರ ಆದರ್ಶಗಳು: ವೈ. ಬಿ. ಕಡಕೋಳ

ಸ್ವಾಮಿ ವಿವೇಕಾನಂದ(ನರೇಂದನಾಥ ದತ್ತ)(ಜನೇವರಿ 12 1863 ಜನನ) ಭಾರತದ ಅತ್ಯಂತ ಪ್ರಸಿದ್ದ ಹಾಗೂ ಪ್ರಭಾವಶಾಲೀ ತತ್ವಜ್ಞಾನಿಗಳು. ನಿರ್ಭಯತೆ, ಆಶಾವಾದ, ಮತ್ತು ಸಾಮಾಜಿಕ ಸಮಸ್ಯೆಗಳ ಬಗೆಗಿನ  ವಿಶಾಲ ದೃಷ್ಟಿಯ ಸಂಕೇತವಾಗಿ ಇಡೀ ವಿಶ್ವಕ್ಕೆ ಮಾದರಿಯಾದ ಸನ್ಯಾಸಿ. ಸ್ವಾಮಿ ವಿವೇಕಾನಂದರ ಜನ್ಮದಿನವಾದ ಜನೇವರಿ 12 “ರಾಷ್ಟ್ರೀಯ ಯುವ ದಿನ”ವೆಂದು 1984 ರಿಂದ ಕೇಂದ್ರ ಸರಕಾರ ಸೂಚಿಸಿದ್ದು ಅಂದಿನಿಂದ ಇದನ್ನು ಆಚರಿಸಲಾಗುತ್ತಿದೆ. ಪ್ರತಿಯೊಬ್ಬರೂ ವಿವೇಕಾನಂದರ ಬದುಕಿನ ಆದರ್ಶಗಳ ಕುರಿತು ಈ ಸಂದರ್ಭದಲ್ಲಿ ಅರ್ಥೈಸಿಕೊಳ್ಳಬೇಕು. ವಿವೇಕಾನಂದರ ಪೂರ್ವಾಶ್ರಮದ ಹೆಸರು ನರೇಂದ್ರನಾಥ ದತ್ತ. ತಂದೆ … Read more

ವೃದ್ಧಾಪ್ಯ: ವೈ. ಬಿ. ಕಡಕೋಳ

ವೃದ್ಧಾಪ್ಯ ಮನುಷ್ಯನ ನಾಲ್ಕು ವಿಧದ ಅವಸ್ಥೆಗಳಲ್ಲಿ ಒಂದು. ಬಾಲ್ಯ, ಯೌವನ. ಗೃಹಸ್ಥ, ನಂತರ ಬರುವುದು ವೃದ್ಧಾಪ್ಯ. ಜೀವಿಯ ದೇಹವು ಬೆಳವಣಿಗೆಯ ಕೊನೆಯ ಹಂತದಲ್ಲಿರುವಾಗ ಬರುವ ಈ ವೃದ್ಧಾಪ್ಯ ಬದುಕಿನಲ್ಲಿ ಕೆಲವು ಕುಟುಂಬಗಳಲ್ಲಿ ಸಂತಸವನ್ನು ತಂದರೆ ಇನ್ನು ಕೆಲವು ಕುಟುಂಬಗಳಲ್ಲಿ ದುಃಖದ ಛಾಯೆಯನ್ನು ನೀಡುವ ಬದುಕಿನ ಕೊನೆಯ ಘಟ್ಟದ ಗಳಿಗೆಯನ್ನು ತಂದೊಡ್ಡುತ್ತಿದೆ. ನಾವು ಇತಿಹಾಸದಲ್ಲಿ ಶ್ರವಣಕುಮಾರನ ಕಥೆಯನ್ನು ಕೇಳುತ್ತೇವೆ. ಹಾಗೂ ಒದುತ್ತೇವೆ. ತನ್ನ ವೃದ್ದ ತಂದೆ-ತಾಯಿಯನ್ನು ಬುಟ್ಟಿಯಲ್ಲಿ ಕುಳ್ಳಿರಿಸಿ ತೀರ್ಥಯಾತ್ರೆ ಮಾಡಿಸಿದ್ದನ್ನು ಮತ್ತೊಬ್ಬರಿಗೆ ಆದರ್ಶಪ್ರಾಯವೆಂಬ ಉದಾಹರಣೆ ಕೊಡುತ್ತೇವಲ್ಲವೇ, ? … Read more