ಮೆಟ್ಟು ಹೇಳಿದ ಕಥಾ ಪ್ರಸಂಗ ಒಂದು ನೀಳ್ಗಾವ್ಯ (ಭಾಗ 47 & 48): ಎಂ. ಜವರಾಜ್

-೪೭-ಈ ಅಯ್ನೋರುಈ ಆಳುನ್ ಗುಟ್ಟ ಕಂಡಿರ್ನಿಲ್ಲಸಂದಲಿಈ ಆಳಾಡ್ದ ಮಾತ್ಗಅಯ್ನೋರ್ ತಿಕುದ್ ಸಂದಿಲೆಇರಂಗಾಯ್ತು ‘ಏ ಬಲ ಇಲ್ಲಿ’ತಲ ಕೆರಿತಾ‘ಅಯ್ನೋರಾ’ ಅನ್ತ ಬಂದರಾತ್ರ ಎಂಟೆಂಟುವರೆ ಗಂಟ್ಯಾಗಿತ್ತು.‘ಅದೇನ್ಲ ನಾ ಅನ್ಕಂಡಂಗೆಕಡ್ಡಿ ಮುರ್ದಾಗಿ ಅನ್ಕಡಾ’‘ಆ ಕಾಲುನ್ ಮಗಂವ್ನಲ್ಲಪರ್ಶುರಾಗಿ ಮಿಲ್ತವ್ಶಿವ್ಲಿಂಗಪ್ಪೋರ್ ಜೊತ್ಗ ನಿಂತಿದ್ನಆ ಶಿವ್ಲಿಂಗಪ್ಪೋರು,‘ಏ ಕಾಲುನ್ ಮಗ್ನೆನಿಮ್ಮಯ್ನೋರು ಗೆದ್ದರಾ’ ಅಂದ್ರುಅದ್ಕ ಪರ್ಶು‘ನಾ ಮಾತಾಡಗಿದ್ದ ಬುದ್ದಿಸೋಲ್ಲಿ ಅಂತಾನೆ ನಾನುಅದ್ರ ಗೆಲ್ಲದೆ ಆವಯ್ಯಬುದ್ದಿ ನೀವೆಲ್ಲ ಕೈಕಟ್ಟುದ್ರಏನಾರ ಮಾಡ್ಬೇದು’ಅಂದ ಅಯ್ನೋರಾಅದ್ಕ ಆ ಶಿವ್ಲಿಂಗಪ್ಪೋರು‘ಎಲಕ್ಷನು ಕಸ್ಟ ಕಣಆದ್ರ ಒಂದ್ ಕೆಲ್ಸ ಮಾಡು’ಅಂದ್ರು ಅದ್ಕ ಈ ಪರ್ಶು‘ಹೇಳ್ಬದ್ದಿ ನೀವು ಕಾಲ್ಲಿತೋರುದ್ದ ಕಣ್ಗೊತ್ತಿ … Read more

ಮೆಟ್ಟು ಹೇಳಿದ ಕಥಾ ಪ್ರಸಂಗ ಒಂದು ನೀಳ್ಗಾವ್ಯ (ಭಾಗ 45 & 46): ಎಂ. ಜವರಾಜ್

-೪೫-ಈ ಅಯ್ನೋರುತೂರಾಡ್ತ ಬಂದುಮನ ಬಾಗುಲ್ಗ ಕಾಲೂರವತ್ಗಮೂರ್ಗಂಟ ರಾತ್ರಒಳಗ ನೀಲವ್ವೋರು‘ಅಯ್ಯೊ ಉಸ್ಸೊ’ ಅನ್ತನಳ್ಳಾಡದು ಕೇಳ್ತಿತ್ತು ಈ ಅಯ್ನೋರುಬಾಗ್ಲ ತಟ್ಟಿಕಾಲ್ನ ಒದರ ರಬುಸುಕ್ಕನಾ ದಿಕ್ಕಾಪಾಲಾದಿಒಳಕೋದ ಆಸಾಮಿಕೆಮ್ನು ಇಲ್ಲಕ್ಯಾಕುರ್ಸ್ನು ಇಲ್ಲ‘ಇದೇನಯಾಕಿಂಗ ನಳ್ಳಾಡಿಯೆ’ಅನ್ತಕೇಳ್ದ ಮಾತುನಂಗಂತೂ ಕೇಳ್ನಿಲ್ಲ.ಆದ್ರಈ ನೀಲವ್ವೋರು‘ಅಯ್ಯೊ ಉಸ್ಸೊಅಯ್ಯಯ್ಯಪ್ಪಾ’ ಅನ್ತನರಳಾಡದನಂಗ ತಡಿಯಕಾಗ್ದೆ‘ದೊಡ್ಡವ್ವಾ…’ ಅನ್ತನಾನ್ಯಂಗ್ ಕೂಗ್ಲಿ..ಸಂಕ್ಟ ಕಿತ್ತು ಕಿತ್ತು ಬತ್ತಿತು. ಮೊಬ್ಗೆಬಂದೊರ್ಯಾರ ಕಾಣಿಒಬ್ಬೆಂಗ್ಸು ಒಬ್ಬ ಗಂಡ್ಸುನಡ್ಬಾಗುಲ್ಲಿ ಕುಂತ್ರು ಈ ದೊಡ್ಡವ್ವಬಾಗುಲ್ ತಗ್ದುಸದ್ದ ಮಾಡ್ಕಂಡುಈಚ್ಗ ಬಂದುಇತ್ತಗ ನೋಡ್ಬುಟ್ಟುಸಂದಿದಿಕ ಹೋಗಿಮೂತ್ರುಸ್ಬುಟ್ಟು ಬಂದಗಾಯ್ತು. ‘ಕುಸೈ ಇದೇನವ್ವ ಇಸ್ಟೊತ್ಗೆಬಾಣಳ್ಳಿಯಿಂದ ಇಬ್ರೆಎಲ್ಲ ಚಂದಗಿದ್ದರ ಇದೇನ್ ಬಂದ್ರಿ’‘ಅಮೈ ಚಂದಗರಇದೇನಾಗಿದ್ದು ಇವುಳ್ಗಇದ ಇವ್ಳನೋಡಂವ್ ಅನ್ತ … Read more

ಮೆಟ್ಟು ಹೇಳಿದ ಕಥಾ ಪ್ರಸಂಗ ಒಂದು ನೀಳ್ಗಾವ್ಯ (ಭಾಗ 43 & 44): ಎಂ. ಜವರಾಜ್

-೪೩-ಮದ್ಯಾನ ಮೂರಾಗಿಬಿಸುಲ್ಲಿದ್ರ ಚುರ್ ಅನ್ತನೆಳ್ಗೋದ್ರ ಸಳಿಡ್ಯತರ ಆಗದುಈ ದನುರ್ಮಾಸ್ವೆ ಹಿಂಗೆಲ್ವ ಈ ಅಯ್ನೋರುತ್ವಾಟುದ್ ಮನಲಿಬಿಸುಲ್ಗೊಸಿ ನೆಳ್ಗೊಸಿಎದ್ದು ಬಂದು ಕುಂತ್ಗಳದುಹಿಂಗೆ ಎಡ್ತಾಕರು ಸುಗ್ಗಿ ಈಗಅರ್ಧ ಒಕ್ಣ ಆಗಿಇನ್ನರ್ಧ ಇತ್ತುಕಾಯಮ್ಮಾಗಿ ಚೆಲ್ವಿ ಬರವ ಹಿಂಗಬಿಸುಲ್ಗು ನೆಳ್ಗು ಎಡ್ತಾಕಅಯ್ನೋರ್ ಕಾಲ್ದೆಸಲಿಚೆಲ್ವಿ ಕುಂತ್ಕಂಡು,‘ಅಯ್ನೋರಾ ಸವ್ವಿ ಹೆಂಗಿದಳುಅಂವ ಚೆಂಗುಲಿ ನೋಡಿನಾ..’‘ನೋಡು ಸುಮ್ಗ ಇದ್ಬುಡುಮಾತಾಡಿ ಮಾತಾಡಿಊರ್ಗ ಆರ ಯಾಕಾದೈ’‘ಆರ್ತಿಂಗ ಆಗದ ಮಗಿಗನಂಗ ಜೀವ ಬಡ್ಕತ್ತ ಅಯ್ನೋರಾ’‘ಜೀವ ಬಡ್ಕಂಡುದಾ..ಹೆತ್ಕರ್ಳು ಬಡ್ಕಳ್ದೆ ಇದ್ದಾ..’‘ಅಯ್ನೋರಾ ಒಗ್ಟಾಗಿ ಆಡ್ಬೇಡಿಕರ್ಳು ಕರ್ಳೇ..’‘ಆ ಕರ್ಳ ನಿ ಹೆಂಗ್ ನೋಡ್ಕಬೇಕು,ಕರ್ಳನ್ತ ಕರ್ಳು..ಅವ್ಳ್ ಬಗ್ಗ ಸೊಲ್ಲತ್ಬೇಡಅಂವ ಇಲ್ವ … Read more

ಮೆಟ್ಟು ಹೇಳಿದ ಕಥಾ ಪ್ರಸಂಗ ಒಂದು ನೀಳ್ಗಾವ್ಯ (ಭಾಗ 41 & 42): ಎಂ. ಜವರಾಜ್

-೪೧- ಮೊಕ್ಕತ್ತಲ ಬೆನ್ನು ನಾ ಇಂಜದಿಂದ ಹಿಂಗೆ ಬೇವರ್ಸಿ ತರ ಆಗಿ ಜಾಗ ಬುಟ್ಟು ಕದ್ಲಿಲ್ಲ ಈ ಅಯ್ನೋರು ಯಾವ್ದೇಶುಕ್ಕೋದ್ರು ಅನ್ನದೆ ಗೊತ್ತಾಯ್ತಿಲ್ಲ ಈ ಕತ್ಲೊಳ್ಗ ಈ ದೊಡ್ಡವ್ವ ಮೆಲ್ ಮೆಲ್ಗ ತಡಕಾಡ್ತ ಬಾಗ್ಲ ತಳ್ಳಿ ‘ಕುಸೈ..’ ಅನ್ತ ಕೂಗ್ದ ನೀಲವ್ವೋರು ಬಂದ್ರು ಅನ್ಸುತ್ತ ಲಾಟೀನ್ ಬೆಳ್ಕು ಈಚ್ಗಂಟ ಕಾಣ್ತು. ‘ಕುಸೈ.. ನಿನ್ಗಂಡ ಬದ್ನಾ’ ‘ಇಲ್ಲ ಕಮ್ಮಾ..’ ‘ನಿಂಗೊತ್ತಾ… ಆ ಕಾಲ್ನೆಣ್ಣು ಸವ್ವಿ ಓಡಗಿದ್ದಂತ’ ಲಾಟೀನ್ ಬೆಳ್ಕು ಒಳಕ್ಕೇ ಹೋದಂಗಾಯ್ತು. ಸರೊತ್ತು. ಊರು ಗಕುಂ ಅನ್ತಿತ್ತು ನಾಯ್ಗಳು … Read more

ಮೆಟ್ಟು ಹೇಳಿದ ಕಥಾ ಪ್ರಸಂಗ ಒಂದು ನೀಳ್ಗಾವ್ಯ (ಭಾಗ 39 & 40): ಎಂ. ಜವರಾಜ್

-೩೯- ಕುಲ ಸೇರಿತ್ತು ಈ ಅಯ್ನೋರು ಕೆಂಡವಾಗಿದ್ರು ಶಂಕ್ರಪ್ಪೋರು ಕೈಕಟ್ಟಿದ್ರು. ‘ಅಯ್ನೋರಾ, ನೀವಿಲ್ಗ ಬರಂಗೇ ಇರ್ನಿಲ್ಲ ನಾವು ಕುಲ ಸೇರ್ಬೇಕೇ ಇರ್ನಿಲ್ಲ ಆದ್ರ ಕುಲ ಕುಲನೆ ಈ ಕುಲ್ಕ ಬ್ಯಲ ಕೊಟ್ಟು ಬಂದಿದರಿ… ಇಸ್ಟು ಜಿನ್ವು ನೀವೆ ನ್ಯಯ ಮಾಡ್ತಿದ್ರಿ ಆದ್ರ ದೂರು ನಿಮ್ಮನ ಕಡಿಂದ ಅದ ಕುಲ್ದ ನಿಯ್ಮ ಎಲ್ರುಗು ಒಂದೆ ಅನ್ತ ಗೊತ್ತಿರದೆ ಅಲ್ವ. ನಾವು ನಿಮ್ಬುಟ್ಟು ಕುಲ ಮಾಡ್ಬೇಕಾಗಿ ಬಂದುದಾ. ಈ ಕಾರ್ಣ ನಿಮ್ಮ ಕರೆಸ್ಬೇಕಾಯ್ತು, ಕರಸ್ದು.. ನೀವು ಬಂದಿದರಿ ಅದ್ಕ ಈ … Read more

ಮೆಟ್ಟು ಹೇಳಿದ ಕಥಾ ಪ್ರಸಂಗ ಒಂದು ನೀಳ್ಗಾವ್ಯ (ಭಾಗ 37 & 38): ಎಂ. ಜವರಾಜ್

-೩೭- ಬಾಗ್ಲು ‘ಕಿರ್..’ ಅನ್ತು ನನ್ಗ ಮಂಪ್ರು ನೋಡ್ಬೇಕು ಅಂದ್ರು ಆಯ್ತಿಲ್ಲ ಹಂಗೆ ಕಣ್ಮುಚ್ದಿ ‘ಕಿರ್..’ ಅದೆ ಬಾಗ್ಲು ಸದ್ದು ಇನ್ನೊಂದ್ಸಲ. ಈ ಅಯ್ನೋರು ನಾಟ್ಕ ನೋಡ್ತ ಎದ್ಬಂದಾಗ ಬೆಳುಗ್ಗ ನಾಕತ್ರ ಆಗಿತ್ತು ಈಗ್ತಾನೆ ನಿದ್ದ ಹತ್ತಿತ್ತು ಅರಗಣ್ಣು ಬುಟ್ಟಿ ನೀಲವ್ವೋರು ಕಂಡ್ರು ಅದ್ಯಾಕಾ ಏನಾ ಇವತ್ತು ಸೀಗಕಡ್ಡಿ ಹಿಡಿದೆ ಇಟ್ಗ ಗುಡ್ಡಲಿ ತಿಕ ಊರಿ ಮಂಡಿ ತಬ್ಕಂಡು ಬಿಸುಲ್ಗ ಮುಖ ಕೊಟ್ಗಂಡು ಕುಂತ್ರು. ದೊಡ್ಡವ್ವ ಬಂದು ‘ಕುಸೈ ನೀಲ ಹೆಂಗಿದ್ದಯ್ ನೀ ಯೋಚ್ನ ಮಾಡ್ಬೇಡ ಮೈಯಿಳಿಸ್ಕಂಡದು … Read more

ಮೆಟ್ಟು ಹೇಳಿದ ಕಥಾ ಪ್ರಸಂಗ ಒಂದು ನೀಳ್ಗಾವ್ಯ (ಭಾಗ 35 & 36): ಎಂ. ಜವರಾಜ್

-೩೫- ‘ದೊಡ್ಡವ್ವವ್..’ ಎದುರು ಮನ ಪಡ್ಸಾಲ್ಲಿ ಕುಂತು ಎಲ ಅಡ್ಕ ಹಾಕತ ಅಯ್ನೋರ್ ದನಿ. ಆ ದನಿಗ, ‘ಕುಸೈ ಒಳ್ಳಿ ಕೆಲ್ಸ ಮಾಡ್ದ ಬುಡು ಊರು ಸುಮ್ನಿದ್ದಾ.. ಈ ವಯ್ಸಲಿ ಇದ್ಯಾನ ಹಿಂಗಾ.. ನೀಲ ಒಳ್ಳೋಳೆ ಆದ್ರ ಹಣಬರ ಇರ್ಬೇಕಲ್ಲ ಬುಡು ಈಗೇನ ಶಂಕ್ರಿಲ್ವ.. ಸಾಕು ಬುಡು ಹೆಂಗು ಅವ್ನುಗು ಗಂಡಾಗದ ವಂಶ ಹೆಸರೇಳಕಾದ್ರು ಆಯ್ತಲ್ಲ ಬುಡು’ ‘ದೊಡ್ಡವ್ವವ್ ಸುಮ್ನಿದ್ದಯ.. ಕುಲ್ಗೆಟ್ಟವೆಲ್ಲ ನನ್ ವಂಶನಾ..’ ‘ಮೊಗ ಅವ ಕುಲ್ಗೆಟ್ಟ ಹೆಣ್ಣೇ ಇರಬೋದು ನಿನ್ ರಕ್ತ ಕುಲ್ಗೆಟ್ಟೊಗಿದ್ದಾ.. ಶಂಕ್ರನ್ … Read more

ಮೆಟ್ಟು ಹೇಳಿದ ಕಥಾ ಪ್ರಸಂಗ ಒಂದು ನೀಳ್ಗಾವ್ಯ (ಭಾಗ 35 & 36): ಎಂ. ಜವರಾಜ್

-೩೫- ‘ದೊಡ್ಡವ್ವವ್..’ ಎದುರು ಮನ ಪಡ್ಸಾಲ್ಲಿ ಕುಂತು ಎಲ ಅಡ್ಕ ಹಾಕತ ಅಯ್ನೋರ್ ದನಿ. ಆ ದನಿಗ, ‘ಕುಸೈ ಒಳ್ಳಿ ಕೆಲ್ಸ ಮಾಡ್ದ ಬುಡು ಊರು ಸುಮ್ನಿದ್ದಾ.. ಈ ವಯ್ಸಲಿ ಇದ್ಯಾನ ಹಿಂಗಾ.. ನೀಲ ಒಳ್ಳೋಳೆ ಆದ್ರ ಹಣಬರ ಇರ್ಬೇಕಲ್ಲ ಬುಡು ಈಗೇನ ಶಂಕ್ರಿಲ್ವ.. ಸಾಕು ಬುಡು ಹೆಂಗು ಅವ್ನುಗು ಗಂಡಾಗದ ವಂಶ ಹೆಸರೇಳಕಾದ್ರು ಆಯ್ತಲ್ಲ ಬುಡು’ ‘ದೊಡ್ಡವ್ವವ್ ಸುಮ್ನಿದ್ದಯ.. ಕುಲ್ಗೆಟ್ಟವೆಲ್ಲ ನನ್ ವಂಶನಾ..’ ‘ಮೊಗ ಅವ ಕುಲ್ಗೆಟ್ಟ ಹೆಣ್ಣೇ ಇರಬೋದು ನಿನ್ ರಕ್ತ ಕುಲ್ಗೆಟ್ಟೊಗಿದ್ದಾ.. ಶಂಕ್ರನ್ … Read more

ಮೆಟ್ಟು ಹೇಳಿದ ಕಥಾ ಪ್ರಸಂಗ ಒಂದು ನೀಳ್ಗಾವ್ಯ (ಭಾಗ 33 & 34): ಎಂ. ಜವರಾಜ್

-೩೩- ಕರಿ ನಾಯಿ ಕಿಂವ್ಞ್ ಕಿಂವ್ಞ್ ಅನ್ತ ಬಾಲ ಅಳ್ಳಾಡುಸ್ತ ಬಂದು ಶಂಕ್ರಪ್ಪೋರ ಕಾಲ್ನೆಕ್ಕಕ ಶುರು ಮಾಡ್ತು ಈ ಶಂಕ್ರಪ್ಪೋರು ಬಂದು ಕುಂತು ಎಸ್ಟೊತ್ತಾಯ್ತು ಈ ಅಯ್ನೋರ್ ನಿದ್ದ ಮುಗಿನೇ ಇಲ್ಲ.. ತ್ವಾಟದ ಬೇಲಿ ಇಣುಕುದ್ರ ಊರೊಳಗ ತಮ್ಟ ಸದ್ದು ಜೋರಾಯ್ತು ಜೊತ್ಗ ಬೆಳಕೂ ಹರಿತು. ಈ ಅಯ್ನೋರು ಈಗ ಈಚ ಬಂದು ಮೈ ಮುರಿತಾ… ಆಕುಳುಸ್ತಾ ಕಣ್ಣಾಡುಸ್ತ ಕಣ್ಣಾಡುಸ್ತ ಕಲ್ಲಾಸಿನ ಮ್ಯಾಲ ಶಂಕ್ರಪ್ಪೋರು ಕುಂತಿರದ ನೋಡುದ್ರು ಈ ಅಯ್ನೋರು, ‘ಹ್ಞು ಈಗ ಗ್ಯಾನ ಬತ್ತಾ’ ‘ನಾನೇನು … Read more

ಮೆಟ್ಟು ಹೇಳಿದ ಕಥಾ ಪ್ರಸಂಗ ಒಂದು ನೀಳ್ಗಾವ್ಯ (ಭಾಗ 31 & 32): ಎಂ. ಜವರಾಜ್

-೩೧- ಬೀದಿ ದೀಪ್ಗಳು ಇಲ್ದೆ ಊರು ಗವ್ವನ್ನದು ಈ ಅಯ್ನೋರು ಗ್ಯಾನ ಇಲ್ದೆ ಬಿದ್ದಾಗ ಅವ್ರ್ ಕಾಲು ದಿಕ್ಕಾ ಪಾಲಾಗಿ ನಾನು ಮೋರಿ ಪಾಲಾದಿ ಮೋರಿ ಬದಿ ನನ್ ಮೈಮಾರ ಮೆತ್ತಿ ನಿಗುರಿ ನಿಗುರಿ ನೋಡ್ತಿದ್ದಾಗ ನೀಲವ್ವೋರು ಬಾಗುಲು ಸಂದಿಲಿ ಇಣ್ಕುದ್ರು. ಚೆಂಗುಲಿ ಅಯ್ನೋರ ಮೇಲುಕ್ಕೆತ್ತಿ ನಿಲ್ಸಿ ಹೆಗುಲ್ಗ ಕೊಟ್ಗಂಡು ಯಳ್ಕಂಡು ಒಳಕ ತಳ್ಳಾಗ ಒಂದ್ಕಾಲು ಸಿಗಕತ್ತು ಒಳಗಿಂದ ನೀಲವ್ವೋರು ಎಳಿತಿದ್ರ ಈಚ್ಲಿಂದ ಚೆಂಗುಲಿ ತಳ್ತಿದ್ದ ನೀಲವ್ವೋರು ಎಳುದ್ರು ಚೆಂಗುಲಿನು ತಳ್ದ ಆ ದೆಸ್ಗ, ಅಯ್ನೋರು ಒಳಕ್ಕೋದಂಗಾಯ್ತು … Read more

ಮೆಟ್ಟು ಹೇಳಿದ ಕಥಾ ಪ್ರಸಂಗ ಒಂದು ನೀಳ್ಗಾವ್ಯ (ಭಾಗ 29 & 30): ಎಂ. ಜವರಾಜ್

-೨೯- ಅವತ್ತೊಂದಿನ ಈ ಅಯ್ನೋರು ಹೊಳಕರಲಿ ಕೈಯಿ ಕಾಲು ತೊಳಕಂಡು ನನ್ನೂ- ಮರುಳ್ಗಾಕಂಡು ಉಜ್ಜಿ ತೊಳ್ದು ನೀರಂಜಿ ಮರದ ಬುಡದಲ್ಲಿ ನೀರ ಸೋರಕ ಬುಟ್ಟು ಗರಕ ಮ್ಯಾಲ ತಿಕ ಊರಿ ಕುಂತ್ಮೇಲ ಅಕ್ಕ ಪಕ್ಕ ಊರೋರು ಅನ್ತ ಕಾಣುತ್ತ ನೆಪ್ಪಿರ ಮುಂದಾಳು ಬಂದ್ರು. ನಾನು ನೋಡ್ತನೆ ಇದ್ದಿ ಗಗ್ಗೇಶ್ವರಿ ಆಣ್ಗುಂಟ ಹೊಳ ದಾಟ್ಗಂಡು ಚೆಂಗುಲಿ ಬತ್ತಿರದು ಕಾಣ್ತು ಅವನ ಕಂಕುಳಲ್ಲಿ ಏನಾ ಇತ್ತು. ಬಂದವ ಸುತ್ತ ಕುಂತಿದವ್ರ ಮುಂದ ಟವಲ್ಲ ಹಾಸಿ ಪುರಿ ಸುರುದು ಕಾರಸ್ಯಾವ್ಗ ಕಳ್ಳ … Read more

ಮೆಟ್ಟು ಹೇಳಿದ ಕಥಾ ಪ್ರಸಂಗ ಒಂದು ನೀಳ್ಗಾವ್ಯ (ಭಾಗ 27 & 28): ಎಂ. ಜವರಾಜ್

-೨೭- ಕತ್ತಲಾಗಿತ್ತು. ಹೆಂಡದ ಗುಳ್ಳಲಿ ಲಾಟೀನು ಉರಿತಾ ಉರಿಯೋ ಬೆಳಕಲಿ ಕುಡಿಯೋರು ಕುಡಿತಾ ತೂರಾಡ್ತ ಆ ಕುಡ್ದೋರು ಗಂಟ್ಲು ಗಳ್ಳಾಕ ಸದ್ದಿತ್ತು. ‘ಅಯ್ನೋರಾ ನಾ ಈಗ ಏನ್ಮಾಡ್ಲಿ ಸಂತ ಒಳಗ ಹೇಳುದ್ದಾ ನಾ ಯಾಗಾರು ನಂಬ್ಲಿ ಮದ್ವಿ ಆಗಿ ಮಕ್ಳ ಫಲ ಇಲ್ದೆ ಈ ಸವ್ವಿನೇ ದೇವ್ತಿತರ ಬಂತು ಆ ದೇವ್ತಿ ಕಿಲಕಿಲ ಅನ್ನವತ್ಲಿ ನನ್ ಪರ್ಶು ಹುಟ್ತು ಆ ದೇವ್ತಿ ಈಗ ಈತರ ಅಂದ್ರ ನನ್ ಕಳ್ಳು ಕಿತ್ಬತ್ತುದ ಅಯ್ನೋರಾ..’ ಅಂತ ನನ್ ಕಾಲಯ್ಯ ಬಿಕ್ಕುಳುಸ್ತ … Read more

ಮೆಟ್ಟು ಹೇಳಿದ ಕಥಾ ಪ್ರಸಂಗ ಒಂದು ನೀಳ್ಗಾವ್ಯ (ಭಾಗ 25 & 26): ಎಂ. ಜವರಾಜ್

-೨೫- ಮ್ಯಾಲ ತಿಂಗ್ಳು ಬೆಳುಗ್ತಾ ಇತ್ತು ಬೆಳ್ಕು ಹಾಲ್ ಚೆಲ್ಕಂಡಂಗೆ ಚೆಲ್ಕಂಡಿತ್ತು ನಾ ಮೂಲ ಸೇರಿ ಬಾಳ ಹೊತ್ತಾಗಿತ್ತು ಆಗ, ‘ಅಯ್ನೋರಾ ಇಳ್ಯ ಬಂದುದ ಕೆಳಗಿಂದ’ ಕುಲೊಸ್ತರ ಗುಂಪು ನೆರುದು ಹೇಳ್ತು. ‘ಊ್ಞ.. ಗೊತ್ತು’ ‘ಗೊತ್ತು ಅಂದ್ರ ಏನಾ ಅಯ್ನೋರಾ.. ಎಮ್ಮ ದನ ಕುಯ್ಯ ಬೀದಿಗ ಎಂಗೆ’ ‘ಊರಂದ್ಮೇಲ ಬ್ಯಲ ಕೊಡ್ಬೇಕು ಇಳ್ಯ ಕೊಟ್ಮೇಲ ಕುಲ ಮೀರಗಿದ್ದಾ.. ಕಾಲ್ದಿಂದು ನಡಕಾ ಬಂದಿರದು ಅಲ್ವ.. ಸತ್ಗ ಕೊಡ್ಬೇಕು. ಕೊಟ್ಟ ಸತ್ಗಗ ಹೂ ಸಿಂಗಾರ ಮಾಡಿ ಕುರುಬನ ಕಟ್ಟೆ ಕಂಡಾಯ … Read more

ಮೆಟ್ಟು ಹೇಳಿದ ಕಥಾ ಪ್ರಸಂಗ ಒಂದು ನೀಳ್ಗಾವ್ಯ (ಭಾಗ 23 & 24): ಎಂ. ಜವರಾಜ್

-೨೩- ‘ಏಯ್, ಕೇಳಿಲ್ಲಿ..’ ಆ ಮೋರಿ ಅಂಚಿಂದ ಬೆಳಕಿನ ಜ್ವಾಲೆ ಎದ್ದು ಆ ಜ್ವಾಲೆಯೊಳಗಿಂದ ಗದರಿದಂಥ ಮಾತು. ಸಡನ್ ಎದ್ದೆ ನನಗೆ ಮಂಪರು ಆ ಬೆಳಕಿನ ಜ್ವಾಲೆ ಬೆಂಕಿ ತರ ಆಯ್ತು ಆ ಬೆಂಕಿ ಜ್ವಾಲೆಗೆ ನನ್ನ ಮಂಪರು ಅಳಿದು ಸೆಟೆದು ನಿಂತೆ. ಮೇಲೆ ಮಿಂಚು ಸೊಂಯ್ಯನೆ ಫಳಾರಂತ ಸಿಡಿಲು ಸಿಡಿಸಿಡಿ ಸಿಡಿತಾ ಗುಡುಗು ನಿಧಾನಕೆ ಗುಡುಗುಡುಗುಡುಕ್ತಾ ಇತ್ತು ‘ನನ್ ಮಾತ ನೀ ತಲಗಾಕತಿಲ್ಲ ಗಾಳಿ ಬೀಸ್ತ ಅದ ಆ ಮೋರಿಯಿಂದ ಈ ಮೋರಿಲಿ ಬಿದ್ದಿನಿ’ ‘ಅದೇನ … Read more

ಮೆಟ್ಟು ಹೇಳಿದ ಕಥಾ ಪ್ರಸಂಗ ಒಂದು ನೀಳ್ಗಾವ್ಯ (ಭಾಗ 21 & 22): ಎಂ. ಜವರಾಜ್

-೨೧- ಅಯ್ಯಯ್ಯೋ ಅಯ್ಯಯ್ಯಪ್ಪಾ ಅಂತಂತಾಗಿ ಮೈಕೈ ನೋವ ತಡಿದೆ ಪಕ್ಕಂತ ಕಣ್ಬುಟ್ಟು ನೋಡುದ್ರಾ.. ಸೂರ್ಯ ಮೂಡಿ ನಾ ಗಬ್ಬುನಾತ ಬೀರೋ ಮೋರಿ ಬದಿಲಿ ಬಿದ್ದು ನನ್ನ ಆಕಡ ಒಂದು ಈಕಡ ಒಂದು ಹಾಲ್ಕುಡಿಯೋ ಸಣ್ಣ ನಾಯಿ ಮರಿಗಳು ಎಳಿತಾ ಈಜಾಡ್ತ ಆಟ ಆಟ್ತ ಪಣ್ಣ ಪಣ್ಣಾಂತ ಆಕಡ್ಕು ಈಕಡ್ಕು ನೆಗೆದಾಡ್ತ ಗುರುಗುಡ್ತ ಇದ್ದು. ಅಸ್ಟೊತ್ಗ ಬಾಗ್ಲು ಕಿರುಗುಟ್ತು ನನ್ನ ದಿಗಿಲು ಅತ್ತಗೋಗಿ ನೋಡ್ತು.. ಸವ್ವಿ ಕಣ್ಣುಜ್ಕೊಂಡು ತಲ ಕೆರಕೊಂಡು ಲಂಗ ಮ್ಯಾಲಕ್ಕೆತ್ಕಂಡು ಬಾಯಾನಿ ಆಕುಳಿಸ್ಕಂಡು ಮೂಲಲಿರ ಸೀಗಕಡ್ಡಿ … Read more

ಮೆಟ್ಟು ಹೇಳಿದ ಕಥಾ ಪ್ರಸಂಗ ಒಂದು ನೀಳ್ಗಾವ್ಯ (ಭಾಗ 19 & 20): ಎಂ. ಜವರಾಜ್

-೧೯- ಸೂರ್ಯ ಕಣ್ಬುಟ್ಟು ನಾನು ಕಪಿಲ ಬಾವಿ ಮೆಟ್ಲತ್ರ ಇದ್ದಿ ಅಯ್ನೋರು ಬಾವಿ ನೀರೊಳ್ಗ ಈಜ್ತಾ.. ಚೆಂಗುಲಿ ಬಾವಿ ಕಟ್ಟ ಮ್ಯಾಲ ನಗ್ತಾ.. ಅರೆ, ಮ್ಯಾಲಿಂದ ತಿಗುನ್ ತಳ್ಳು ಬೀಳ್ತಲ್ಲಾ.. ಚೆಂಗುಲಿ, ‘ಅಯ್ನೋರಾ ತಳ್ಳು ಉದುರ್ತಾ ಅವ ಆದು ಗುಡ್ಯಾಕಕಿಲ್ವ. ಶಂಕ್ರಪ್ಪೋರು ಈಚೀಚ್ಗ ಬರದೇ ಇಲ್ಲ’ ‘ಅಂವ ನಿಗುರ್ತ ಅವ್ನ ನೀನೆ ಮಾಡ್ಲಾ ಸಂತಗೋಗಿ ಹರಾಜಾಕ್ಲಾ ನಿಂಗೇನ್ ಕೇಮಿ ಇದ್ದದು..’ ‘ಆಯ್ತು ಅಯ್ನೋರಾ ಆಗ ನನ್ನೇನಾರ ಶಂಕ್ರಪ್ಪೋರ್ ಕೇಳುದ್ರಾ..’ ‘ಏಯ್, ಲೌಡೆ ಬಂಚೊತ್ ಅಂವ ಹಂಗೇನಾರ ಬಂದ್ರ … Read more

ಮೆಟ್ಟು ಹೇಳಿದ ಕಥಾ ಪ್ರಸಂಗ ಒಂದು ನೀಳ್ಗಾವ್ಯ (ಭಾಗ 17 & 18): ಎಂ. ಜವರಾಜ್

-೧೭- ಬಾಗಿಲು ಕಿರುಗುಟ್ಟಿತು ನನ್ನ ದಿಗಿಲು ಕಿರುಗುಟ್ಟಿದ‌ ಬಾಗಿಲ ಕಡೆಗೋಯ್ತು. ಅಯ್ನೋರು ಬಗ್ಗಿ ಹೊಸಿಲ ಮೇಲೆ ಕಾಲಿಟ್ಟು ಆಚೀಚೆ ನೋಡ್ತ ಬೀಡಿ ತಗ್ದು ತುಟಿಗಿಟ್ಟು ಕಡ್ಡಿ ಗೀರಿ ಬೀಡಿ ಮೊನೆಗೆ ಹಚ್ಚಿ ಅದೇ ಕಡ್ಡಿ ಬೆಳಕಲ್ಲಿ ನನ್ ಕಡೆ ತಿರುಗಿ ಆ ಬೆಳಕು ನನ್ ಮೇಲೂ ಬಿದ್ದು ಅಯ್ನೋರು ಹೊಸಿಲು ದಾಟಿ ನನ್ನ ಮೆಟ್ಟಿ ಬಲಗೈಲಿ ಸೂರು ಹಿಡಿದು ಎಡಗೈಲಿ ಬೀಡಿ ಹಿಡಿದು ಸೇದ್ತಾ ಹೊಗೆ ಬಿಡ್ತಾ ಇರೋವತ್ಲಿ ಒಳಗೆ ಸವ್ವಿ ಗುಕ್ಕಗುಕ್ಕನೆ ದುಮುಗುಡುತ ಅಳ್ತಾ ಇರೋದು … Read more

ಮೆಟ್ಟು ಹೇಳಿದ ಕಥಾ ಪ್ರಸಂಗ ಒಂದು ನೀಳ್ಗಾವ್ಯ (ಭಾಗ 15 & 16): ಎಂ. ಜವರಾಜ್

– ೧೫- ಇಲ್ಲಿ ಕತ್ಲು ಅಂದ್ರ ಕತ್ಲು ಅಲ್ಲಿ ಕಾಣ್ತ ಮಾರ್ದೂದಲ್ಲಿರ ಹೆಂಡದಂಗಡಿಲಿ ಲಾಟೀನ್ ಬೆಳಕು ಇಲ್ಲಿ, ಯಾರು ಹೋದ್ರು ಯಾರ್ ಬಂದ್ರು ಗೊತ್ತಾಗದ ಹೊತ್ತು ಈ ಅಯ್ನೋರು ಅತ್ತಿಂದಿತ್ತ ಇತ್ತಿಂದತ್ತ ತಿರುಗಾಡ್ತ ಬೀಡಿ ಸೇದ್ತ ಎಳೆಯೋ ದಮ್ಮು ದಮ್ಮಿಗೂ ಬೀಡಿ ಮೊನೆಲಿ ಬೆಂಕಿನುಂಡೆ ಕಾಣ್ತಿತ್ತು ಅರೆ ಹೆಂಡದಂಗಡಿಲಿ ಜಗಳ ಅಯ್ನೋರು ದಿಟ್ಟಿಸಿ ನೋಡ್ದಾಗಾಯ್ತು ನಂಗು ದಿಗಿಲು ಯಾರ ಈ ಜಗಳ ಮಾಡ್ತ ಇರದು? ಆ ದನಿಯ ಎಲ್ಲೊ ಕೇಳಿರ ನೆಪ್ಪು ಆ ದನಿ ಜೋರಾಯ್ತು ಅರೆ … Read more

ಮೆಟ್ಟು ಹೇಳಿದ ಕಥಾ ಪ್ರಸಂಗ ಒಂದು ನೀಳ್ಗಾವ್ಯ (ಭಾಗ 13 & 14): ಎಂ. ಜವರಾಜ್

೧೩- ಬಿಸ್ಲು ಬಿಸ್ಲು ಏನಪ್ಪಾ ಬಿಸ್ಲು ಉಸ್ಸ್… ಅಲಲಲಾ ಏಯ್,  ಮಲ್ಗಿ ನಿದ್ರಾ ಮಾಡ್ತ ಇದ್ದಯ ಎದ್ರು ಮ್ಯಾಕ್ಕೆ.. ಬೆಚ್ಚಿ ಬೆರಗಾಗಿ ಒರಗಿದ ಕಂಬದಿಂದ ತಲೆ ಎತ್ತಿದೆ ಮಂಪರಿಡಿದ ಕಣ್ಣು ತೆರೆಯುತ್ತ ಎದುರು ದಿಟ್ಟಿಸಿದೆ ಫಳಾರ್ ಮಿಂಚಾಯ್ತಲ್ಲಾ.. ಅಯ್ನೋರ್ ಮಲ್ಗಿ ನಿದ್ರ ಮಾಡ್ತ ಒದ್ದಾಡ್ತ ನಾ ಬೆಂಕಿ ಬಿಸುಲ್ಲಿ ನರಳಾಡ್ತ ಇದ್ರ ನೀ ಸುಖವಾಗಿ ನಿದ್ರ ಮಾಡ್ತ ಇದ್ದಯ ನಾನೇನು ದೆವ್ವುಕ್ಕು ಭೂತುಕ್ಕು  ಹೇಳವ್ನು ಅನ್ಕಂಡಿದ್ದಯ.. ಇಲ್ಲ ಹೇಳು ಚೂರು ಮಂಪ್ರಾಯ್ತು.. ಅದೆ ಅಯ್ನೋರು ಮರದ ಕೆಳಗೆ … Read more

ಮೆಟ್ಟು ಹೇಳಿದ ಕಥಾ ಪ್ರಸಂಗ ಒಂದು ನೀಳ್ಗಾವ್ಯ (ಭಾಗ 11 & 12): ಎಂ. ಜವರಾಜ್

೧೧- ಅಲಲಲಲೇ ಇದೇನ ಇದು ಗರಿಗರಿ ಪಿಲ್ಲ ಪಂಚ ಜಾರ್ತ ನನ್ನ ಮೈನ ಸೋಕ್ತ ಮಣಮಣನೆ ಮಾತಾಡ್ತ ಬೀದಿ ಧೂಳ ತಾರುಸ್ತ ಏಳುಸ್ತಲ್ಲೊ.. ‘ನೀ ಯಾವೂರ್ ಸೀಮೆನಪ್ಪ ನೀ ಯಾಕ ಈ ಅಯ್ನೋರ್ ಕಾಲ್ಗಾದೆ ನಾ ಈ ಅಯ್ನೋರ ಸೊಂಟ ಸೇರಿ ನೋಡಬಾರದ ನೋಡ್ದಿ ಕೇಳಬಾರದ ಕೇಳ್ದಿ ಶಿವಶಿವ ಆ ನೀಲವ್ವೋರ ನೋಡ್ದೆಯಲ್ಲೊ ನಾ ನೋಡ್ದೆ ಇರ ಜಿನ್ವೆ ಇಲ್ಲ ನಾ ಕೇಳ್ದೆ ಇರ ಜಿನ್ವೆ ಇಲ್ಲ’ ಅಂತಂತ ಮಾತಾಡ್ತಲ್ಲೊ… ನಾ ಕೇಳ್ತ ನೀಲವ್ವೋರು ಕಣ್ಮುಂದ ಬರ್ತಾ … Read more