ದಂತಕತೆ: ಅನಿತಾ ನರೇಶ್ ಮಂಚಿ

ಈಗೊಂದೆರಡು ದಿನಗಳಿಂದ ಯಾರನ್ನು ಕಂಡರೂ ಕೆಂಡದಂತಹ ಕೋಪ. ಅದರಲ್ಲೂ ಸುಮ್ಮನೆ ಹಲ್ಲು ಕಿಸಿದುಕೊಂಡು ನಗ್ತಾ ಇರ್ತಾರಲ್ಲ ಅಂತವರನ್ನು ಕಂಡರೆ ಅವರ ಅಷ್ಟೂ ಹಲ್ಲುಗಳನ್ನು ಕೆಳಗುದುರಿಸಿ ಅವರ ಬೊಚ್ಚು ಬಾಯಿ ಪೆಚ್ಚಾಗುವಂತೆ ಮಾಡಬೇಕೆಂಬಾಸೆ.. ಇದ್ಯಾಕೋ  ’ಏ ಹಾತ್ ಮುಜೆ ದೇದೋ ಠಾಕುರ್’ ಎಂದು ಅಬ್ಬರಿಸುವ ಗಬ್ಬರ್ ಸಿಂಗನನ್ನು ನಿಮಗೆ ನೆನಪಿಸಿದರೆ ಅದಕ್ಕೆ ನಾನಲ್ಲ ಹೊಣೆ. ನನ್ನ ಹಲ್ಲೇ ಹೊಣೆ.  ಹೌದು .. ಇಷ್ಟಕ್ಕೂ ಮೂಲ ಕಾರಣ ನನ್ನ ಹಲ್ಲುಗಳೇ. ಮಕ್ಕಳಿಗೆ ಮೊದಲು ಮೂಡುವ ಹಲ್ಲುಗಳನ್ನು ಹಾಲು ಹಲ್ಲುಗಳೆಂದು ಅದ್ಯಾರೋ … Read more

ದೆವ್ವಗಳ ಸುತ್ತ: ಹೃದಯಶಿವ ಅಂಕಣ

ದೆವ್ವಗಳ ಬಗ್ಗೆ ಚರ್ಚಿಸುವುದೇ ವೇಳೆ ಹಾಳುಮಾಡಿಕೊಳ್ಳುವ ಕೆಲಸ. ಆ ವಿಷಯದ ಬಗ್ಗೆ ಚರ್ಚಿಸುವವರು ಅಪಾರ ಅನುಭವಿಗಳಂತೆಯೂ, ಅದ್ಭುತವಾಗಿ ಕಥೆ ಕಟ್ಟುವವರಂತೆಯೂ, ಅಪ್ಪಟ ಮೂಢರಂತೆಯೂ ಕಾಣುತ್ತಾರೆ. ದೆವ್ವಗಳ ಅಸ್ತಿತ್ವ ಕುರಿತು ವಾದಿಸುವುದಕಿಂತಲೂ ಅವುಗಳ ಇಲ್ಲದಿರುವಿಕೆಯನ್ನೇ ಪ್ರಬಲವಾಗಿ ವಾದಿಸಬಹುದು; ದೆವ್ವಗಳಿವೆ ಎಂದು ನಂಬಿರುವವರು ಈ ಪ್ರಪಂಚದಲ್ಲಿರುವ ಅಥವಾ ಎಂದೋ ಸವೆದುಹೋದ ಕಟ್ಟುಕತೆ, ಕಪೋಲಕಲ್ಪಿತ ಘಟನೆಗಳನ್ನು, ಅವನ್ನು ನಂಬಿದ್ದವರನ್ನು ಚರ್ಚೆಯ ಮಧ್ಯೆ ಎಳೆದು ತಂದು ತಾವೇ ಮತ್ತೊಮ್ಮೆ ಬೆಚ್ಚಿ, ಬೆವರು ಒರೆಸಿಕೊಳ್ಳಬಹುದು. ಅದೆಲ್ಲವನ್ನು ನೋಡಿ ಸುಮ್ಮನಾಗಬೇಕಷ್ಟೇ. ನಮ್ಮ ನಡುವೆಯೇ ಇರುವ ಕೆಲವರನ್ನು … Read more

ಸ್ವಾತಂತ್ರ್ಯವೋ ಸ್ವಾತಂತ್ರ್ಯ! : ಎಸ್.ಜಿ.ಸೀತಾರಾಮ್, ಮೈಸೂರು.

ಒಂದಾನೊಂದು ಕಾಲದಲ್ಲಿ ಭಾರತದಲ್ಲಿ ಹಚ್ಚಿದ ಸ್ವಾತಂತ್ರ್ಯದ ಕಿಚ್ಚು ಈಗ ಯಾವ ಆಳ-ಅಗಲಕ್ಕೆ ಹಬ್ಬಿದೆ ಎಂಬುದನ್ನು, ಸ್ವತಂತ್ರ ಭಾರತ ಜನನದ ಮಹಾಮಹೋತ್ಸವಕ್ಕೆಂದು ಇಂದು ನಾವು ಹಚ್ಚುವ ೬೭ ಹಣತೆಗಳ ಬೆಳಕಿನಲ್ಲಿ ಒಮ್ಮೆ ನಿಟ್ಟಿಸಿ ನೋಡುವುದು ಒಳಿತು. ಅಂದು ರಾಷ್ಟ್ರಸ್ವಾತಂತ್ರ್ಯಕ್ಕೆಂದು ಎಬ್ಬಿಸಿದ್ದ ಆ ಕಿಚ್ಚು ತಡವಿಲ್ಲದೇ ರಾಜ್ಯಸ್ವಾತಂತ್ರ್ಯಗಳೆಡೆಗೆ ತಿರುಗಿ, ಎಲ್ಲ ರಾಜ್ಯಗಳೂ ತಂತಮ್ಮ ಸ್ವಾತಂತ್ರ್ಯಕ್ಕಾಗಿ ಹೋರಾಡತೊಡಗಿದವು. ೧೯೫೬ರಲ್ಲಿ ಪುನರ್ವಿಂಗಡನೆಯ ಕಾರಣ ಕೇವಲ ಹದಿನಾಲ್ಕು ಆಗಿದ್ದ ರಾಜ್ಯಗಳ ಸಂಖ್ಯೆ ಇಂದು ಇಪ್ಪತ್ತೊಂಬತ್ತಾಗಿದೆ. ಬೋಡೋಲ್ಯಾಂಡ್, ಗೋರ್ಖಾಲ್ಯಾಂಡ್, ಪೂರ್ವಾಂಚಲ, ಬುಂದೇಲ್‌ಖಂಡ್, ವಿಂಧ್ಯದೇಶ, ವಿದರ್ಭ ಮತ್ತು … Read more

ಚೌತಿಯ ಚಂದ್ರ ಎನಗೆ ಅಪವಾದ ತಂದ: ಲಕ್ಷ್ಮೀಶ ಜೆ. ಹೆಗಡೆ

                                  ಈ ಘಟನೆ ನಡೆದಿದ್ದು ಸುಮಾರು ಹತ್ತು ವರ್ಷಗಳ ಹಿಂದೆ. ಆಗ ನಾನು ಐದನೇ ತರಗತಿಯಲ್ಲಿ ಕನ್ನಡ ಮಾಧ್ಯಮ ಶಾಲೆಯಲ್ಲಿ ಓದುತ್ತಿದ್ದೆ. ಏಪ್ರಿಲ್, ಮೇ ತಿಂಗಳಿನ ಬೇಸಿಗೆ ರಜೆಯಲ್ಲಿ ಮಗ ಕಂಪ್ಯೂಟರ್ ಕಲಿಯಲಿ ಎಂದು ನನ್ನಪ್ಪ ನನ್ನನ್ನು ಒಂದು ಕಂಪ್ಯೂಟರ್ ಕೋಚಿಂಗ್ ಸೆಂಟರ್ ಗೆ ಸೇರಿಸಿದರು. ಜೊತೆಗೆ ನನಗಿಂತ ಒಂದು ವರ್ಷ ದೊಡ್ಡವನಾಗಿದ್ದ ನನ್ನೊಬ್ಬ ಮಿತ್ರನೂ … Read more

ಅಜ್ಜಿ ಲಿಪ್ಟ್ ಪಡೆದದ್ದು …!: ಪಾ.ಮು.ಸುಬ್ರಮಣ್ಯ, ಬ.ಹಳ್ಳಿ.

   ಹೀಗೇ ಸುಮ್ಮನೆ ಏನನ್ನಾದರೂ ಹೇಳುತ್ತಿರಬೇಕೆಂಬ ಮನಸ್ಸಿನ ವಾಂಛೆಯನ್ನು ಅದುಮಿಟ್ಟುಕೊಳ್ಳಲು ಸಾಧ್ಯವಾಗದೆ ವಸ್ತುವಿಗಾಗಿ ಹುಡುಕಾಟ ಶುರುಮಾಡಿದೆ.  ರಸ್ತೆಯಲ್ಲಿ ಅನೇಕ ವಸ್ತುಗಳು ಸಿಗುತ್ತವೆಂಬ ನಂಬಿಕೆ ಅನೇಕ ಬರಹಗಾರರದು.  ವಸ್ತುಗಳೇನೋ ಸಿಗುತ್ತವೆ, ಆದರೆ ನೋಡುವ ಕಣ್ಣಿರಬೇಕು.  ಆಘ್ರಾಣಿಸುವ ಮನಸ್ಸಿರಬೇಕು.  ಅನುಭವಿಸುವ ಆಸೆ ಇರಬೇಕು. ಹೇಳಬೇಕೆಂಬ ಇಚ್ಚೆ ಇರಬೇಕು.  ಒಮ್ಮೆ ಹೀಗೆ ನಡೆದು ಬರುತ್ತಿರುವಾಗ ಸುಮಾರು ಎಂಬತ್ತು ವರ್ಷ ವಯಸ್ಸಿನ ಹೆಂಗಸು ಕೈಯಲ್ಲಿ ಕೆಂಪು ಬಣ್ಣದ ಸಣ್ಣ ಚೀಲವೊಂದನ್ನು ಹಿಡಿದು ನಡೆದು ಬರುತ್ತಿದ್ದಳು.  ತನ್ನ ದೀರ್ಘಕಾಲದ ಬದುಕಿನಲ್ಲಿ ಸಾಕಷ್ಟು ಹಿತ-ಅಹಿತ ಅನುಭವಗಳನ್ನು … Read more

ಗಣನಾಥನಿಗೊಂದು ನಮನವೆನ್ನುತ್ತಾ: ಪ್ರಶಸ್ತಿ

ವಿಘ್ನೇಶನ ಬಗ್ಗೆ ಬರೆಯೋದೇನನ್ನ ನಾಥನೆನ್ನಲೇ ಗೌರೀತನಯನನ್ನ ಯಶವ ಹಂಚುವ ಆದಿ ಪೂಜ್ಯನನ್ನ ಕರವ ಮುಗಿಯುವೆ ಹರಸು ಗಣಪನೆನ್ನ ಗಣೇಶನೆಂದರೆ ಏನು ಹೇಳಲಿನ್ನ ಜಾಣನೆನ್ನಲೇ ವಿದ್ಯಾ ದೇವನನ್ನ ನಮನವೆನ್ನಲೇ ವಕ್ರದಂತನನ್ನ ನಶಿಶು ವಿಘ್ನವ ನೀಡಿ ಹರುಷ, ಹೊನ್ನ ವಿನಾಯಕ, ಗಜಾನನ ಅಂತ ಬರಿಯೆ ಬರೆಯೋದೇನು, ಅದನ್ನೇ ಆದಿಯಕ್ಷರಗಳಾಗಿಸಿ ಒಂದಿಷ್ಟು ಸಾಲು ಗೀಚಬಾರದೇಕೇ ಅಂತೆನ್ನೋ ಆಲೋಚನೆ ನರನ ತಲೆಯಲ್ಲಿ ಹೊಳೆದಿದ್ದೇ ತಡ ಕೃಷ್ಣ ಪಿಂಗಾಕ್ಷನ ಬಗ್ಗೆ ಒಂದಿಷ್ಟು ಸಾಲು ಜೋಡಿಸಾಯ್ತು. ತನ್ನ ದಂತದಿಂದಲೇ ರಾಮಾಯಣವನ್ನು ಬರೆದನೆಂಬೋ ಧೂರ್ಮವರ್ಣನ ಬಗ್ಗೆ ಒಂದಿಷ್ಟು … Read more

ಎರಡು ಕವಿತೆಗಳು:ವಿಲ್ಸನ್ ಕಟೀಲ್, ಸಿ.ಮ.ಗುರುಬಸವರಾಜ್ ಇಟ್ಟಿಗಿ

ಮೂರ್ತಿಗಳಿಗೆ ಉಚ್ಚೆ ಉಯ್ಯಬೇಡಿ ಮೂರ್ತಿಗಳಿಗೆ ಉಚ್ಚೆ ಹುಯ್ಯಬೇಡಿ ವಿಚಾರವಾದಿಗಳೆ! ಮೂರ್ತಿಗಳಿಗೆ ಉಚ್ಚೆ ಹುಯ್ಯಬೇಡಿ ಹಸಿದ, ಬಾಯಾರಿದ ಕೋಟಿ ಜನರ ಕಂಬನಿಯನ್ನೂ ಒರೆಸದ ಶುಷ್ಕ ಕೈಗಳಿಂದ  ಮಾಡಿಸಿದ ಹಾಲು, ತುಪ್ಪ, ಎಳನೀರಿನ  ಅಭಿಶೇಕವೇ ಸಾಕವುಗಳಿಗೆ! ಮೂರ್ತಿಗಳಿಗೆ ಉಚ್ಚೆ ಹುಯ್ಯಬೇಡಿ!! * ಮೂರ್ತಿಗಳಿಗೆ ನೀವು ಬಯ್ಯಬೇಡಿ ವಿಚಾರವಾದಿಗಳೆ! ಮೂರ್ತಿಗಳಿಗೆ ನೀವು ಬಯ್ಯಬೇಡಿ ಕಂದಪದ್ಯದಲ್ಲೂ ಹೊಳೆದ ಹೊಸ ವಿಚಾರವನ್ನು ಓದಿ ಅರ್ಥೈಸಲಾಗದ ಮಂತ್ರ ಪಂಡಿತರ  ಬಾಯ್ಗಳಿಂದ ಹೊರಟ ಒಣ ಪಠಣಗಳ ಕಿರಿಕಿರಿಯೇ ಸಾಕವುಗಳಿಗೆ! ಮೂರ್ತಿಗಳಿಗೆ ನೀವು ಬಯ್ಯಬೇಡಿ!! * ಸಾಧ್ಯವಾದರೆ ನಾವೆಲ್ಲಾ … Read more

ಭಾರತಾಂಭೆಯೇ ನಿನ್ನ ಮಕ್ಕಳು ಕ್ಷೇಮವೇ???: ಅಖಿಲೇಶ್ ಚಿಪ್ಪಳಿ

ದೇಶದ ಜನ ಗಣಪತಿ ಹಬ್ಬದ ಸಡಗರದಲ್ಲಿದ್ದಾರೆ. ಬ್ರಹ್ಮಚಾರಿ ಗಣೇಶನ ಹಬ್ಬದ ವಾರ್ಷಿಕ ವಹಿವಾಟನ್ನು ಲೆಕ್ಕ ಹಾಕಿದವಾರೂ ಇಲ್ಲ. ವಿಘ್ನನಿವಾರಕನೆಂಬ ಖ್ಯಾತಿವೆತ್ತ, ಮೊದಲ ಪೂಜಿತನೆಂಬ ಹೆಗ್ಗಳಿಕೆಗೊಳಗಾದ ಗಣೇಶನ ಹಬ್ಬಕ್ಕೂ, ರಾಜಕೀಯಕ್ಕೂ, ಮಾಲಿನ್ಯಕ್ಕೂ ನೇರಾನೇರ ಸಂಬಂಧವಿರುವುದು ಸುಳ್ಳೇನಲ್ಲ. ಗಲ್ಲಿ-ಗಲ್ಲಿಗಳಲ್ಲಿ ಗಣಪತಿ ಪೆಂಡಾಲ್ ತಯಾರಾಗಿದೆ. ವರ್ಷವೂ ರಶೀದಿ ಪುಸ್ತಕ ಹಿಡಿದು ಬರುವವರ ಸಂಖ್ಯೆ ಹೆಚ್ಚುತ್ತಲೇ ಇದೆ. ಗಣಪತಿಯನ್ನು ವಿಸರ್ಜನೆ ಮಾಡುವಾಗಿನ ಮಾಲಿನ್ಯದ ಪ್ರಮಾಣವೂ ಹೆಚ್ಚುತ್ತಲೇ ಇದೆ. ಪಟಾಕಿ ಸಿಡಿಸುವುದು ಎಂದರೆ ಹಿಂದೆಲ್ಲಾ ಸಂಭ್ರಮವಾಗಿತ್ತು. ಈಗ ಪ್ರತಿಷ್ಠೆಯ ವಿಷಯವಾಗಿದೆ. ರಾಸಾಯನಿಕ ಬಣ್ಣಗಳಿಂದ ಕೂಡಿದ … Read more

ಅವಳು ನಮ್ಮವಳಲ್ಲವೆ?: ಕೆ.ಎಂ.ವಿಶ್ವನಾಥ(ಮಂಕವಿ) ಮರತೂರ.

ದೇಶ ನನಗೇನು ಮಾಡಿದೇ ಎನ್ನುವುದಕ್ಕಿಂತ, ದೇಶಕ್ಕಾಗಿ ನಾನೇನು ಮಾಡಿದೆ ಎನ್ನುವುದು ಮುಖ್ಯವಾದ ವಿಚಾರ. ನಮ್ಮ ದೇಶದಲ್ಲಿ ಮಹಿಳೆ ಎಂದಾಕ್ಷಣ ಗೌರವ, ಭಕ್ತಿ, ಶಕ್ತಿ ಎಂಬ ಪದಗಳು ಬಳಕೆಯಾಗುತ್ತವೆ. ಅವಳ ಸೇವೆ ಈ ದೇಶಕ್ಕೆ ಅನನ್ಯ ಎಂಬ ಮಾತು ಎಲ್ಲರ ಮನದೊಳಗೆ ಮನೆಮಾಡಿದೆ. ಮಹಿಳಾ ಸಬಲೀಕರಣ ಎನ್ನುವ ವಿಚಾರ, ಹಿರಿಯರ ತಲೆಯೊಳಗೆ ಇದೆ ಆದರೆ ಪಾಲನೆಯಲ್ಲಿ ಕಾರ್ಯಗತಿಯಲ್ಲಿ ಹೊರಬರುತ್ತಿಲ್ಲ. ನಮ್ಮ ಮಹಿಳೆಯನ್ನು ಸೂಕ್ತವಾಗಿ ಸಬಲೀಕರಣ ಮಾಡುತ್ತೇವೆ ಎಂದು ಬರಿ ಮಾತಿನಲ್ಲಿ ಬರವಣಿಗೆಯಲ್ಲಿ ಹೇಳುತ್ತಿದ್ದೇವೆ. ನೈಜ ಬದುಕಿನಲ್ಲಿ ಅವಳನ್ನು ಸಬಲೀಕರಣವನ್ನು … Read more

ಸಾಮಾನ್ಯ ಜ್ಞಾನ (ವಾರ 43): ಮಹಾಂತೇಶ್ ಯರಗಟ್ಟಿ

ಪ್ರಶ್ನೆಗಳು:  ೧.    ಹಿಂದಿ ಲೇಖಕ ರಾಮ್ ಧಾರಾಸಿಂಗ್ ದಿನಕರ ಅವರ ಯಾವ ಕೃತಿಗೆ ಜ್ಞಾನಪೀಠ ಪ್ರಶಸ್ತಿ ದೊರಕಿದೆ? ೨.    ೨೦೦೨ರಲ್ಲಿ ತುಮಕೂರಿನಲ್ಲಿ ನಡೆದ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರು ಯಾರಾಗಿದ್ದರು? ೩.    ಗೀತ ರಹಸ್ಯ ಗ್ರಂಥದ ಕರ್ತೃ ಯಾರು? ೪.    ವನ್ಯ ಜೀವಿ ರಕ್ಷಣಾ ಅಧಿನಿಯಮವನ್ನು ಯಾವ ವರ್ಷದಲ್ಲಿ ಜಾರಿಗೊಳಿಸಲಾಯಿತು? ೫.    ಎನ್ಕೆ ಇದು ಯಾರ ಕಾವ್ಯ ನಾಮ? ೬.    ನಂದಾದೇವಿ ಶಿಖರವು ಯಾವ ರಾಜ್ಯದಲ್ಲಿದೆ? ೭.    ಪೆನ್ಸಿಲ್‌ನ ಸಂಶೋಧಕರು ಯಾರು? ೮.    ಹಿಮೋಗ್ಲೋಬಿನಲ್ಲಿರುವ … Read more

ಧ್ವಜ ಹಾರಿ ಪಾರಿವಾಳವಾಗಿ: ಪ್ರವೀಣ

೬೭ನೆಯ ಸ್ವಾತಂತ್ರ್ಯ ದಿನಾಚಾರಣೆಯ ಬೆಳಿಗ್ಗೆ ಎಂಟೂವರೆಗೆ ಕಣ್ಣೂರಿನ ಇತಿಹಾಸದಲ್ಲಿ ಅಸ್ತಿತ್ವವೇ ಇಲ್ಲದ ಜಾಲಪ್ಪ ಹೀಗೆ ಏಕಾಏಕಿ ಗೊಂದಲದಲ್ಲಿ ಸ್ಥಿಮಿತ ಕಳೆದುಕೊಂಡ ಜನಜಂಗುಳಿಯಲ್ಲಿ ಗೂಳಿಯಂತೆ ನುಗ್ಗಿ ತೋರಿದ ಧೈರ್ಯಕ್ಕೆ, ಮೆರೆದ ಸಾಹಸಕ್ಕೆ ಪೊಲೀಸ್ ಕೈಕೋಳ ತೊಡಿಸಿದರೆ ಊರಜನತೆ ಕರತಾಡನ ಜಯಕಾರಗಳಲ್ಲಿ ದುಮುದುಮಿಸಿತು.   ಜಾಡರ ಜಾಲಪ್ಪನ ಕೈಗೆ ಪೊಲೀಸರು ಕೈಕೋಳ ಹಾಕಿ ಬೀದಿಯಲ್ಲಿ ಮೆರವಣಿಗೆಯೋಪಾದಿಯಲ್ಲಿ ಅವನನ್ನು ಎಳೆದೊಯ್ಯುತ್ತಿದ್ದಾರೆಂಬ ಸುದ್ದಿ ಶರವೇಗದಲ್ಲಿ ಊರಿನ ಮೂಲೆಮೂಲೆಗಳಲ್ಲಿ ತಲುಪಿದರೆ ಅವನ ಜೋಕುಗಳನ್ನು ಗುಲಾಬ ಜಾಮೂನಿನಂತೆ ನುಂಗಿ ನಕ್ಕು ನಲಿದವರೂ ನಂಬುತ್ತಿರಲಿಲ್ಲ, ಬೆಳಿಗ್ಗೆ ಭಾಂಡೆ … Read more

ಯು.ಆರ್.ಅನಂತಮೂರ್ತಿ; ಮತ್ತೆಂದೂ ಮರಳದ ಚೇತನ: ಹೃದಯಶಿವ

ಅನಂತಮೂರ್ತಿಯವರ ಕುರಿತು ಒಂದಿಷ್ಟು ಧ್ಯಾನಿಸುವ ಸಮಯವಿದು. ಅನಂತಮೂರ್ತಿ ನಮ್ಮನ್ನು ಅಗಲಿದ್ದಾರೆ. ಬರೋಬ್ಬರಿ ಎಂಭತ್ತೊಂದು ವರ್ಷ ಬಾಳಿದ ತುಂಬುಜೀವನ ಅವರದು; ನಮಗೆಲ್ಲ ಗುರುವಿನಂತಿದ್ದರು. ಸಾಮಾಜಿಕವಾಗಿ, ಧಾರ್ಮಿಕವಾಗಿ, ರಾಜಕೀಯವಾಗಿ ಯಾವುದಾದರು ಸಮಸ್ಯೆ ಎದುರಾದಾಗ ಅನಂತಮೂರ್ತಿ ಏನು ಹೇಳುತ್ತಾರೆ ಎಂದು ಕಾತರಿಸುತ್ತಿದ್ದೆವು. ಅವರನ್ನು ನೋಡುವುದು, ಅವರೊಂದಿಗೆ ಮಾತಾಡುವುದು ಇನ್ನು ಸಾಧ್ಯವಿಲ್ಲ. ಅವರು ಅನಾರೋಗ್ಯಕ್ಕೆ ತುತ್ತಾದಾಗಲೆಲ್ಲ ನಾವು ಆತಂಕಗೊಳಗಾಗುತ್ತಿದ್ದೆವು. ಅವರಿಲ್ಲದ ಈ ಶೂನ್ಯವನ್ನು ತುಂಬಿಕೊಳ್ಳಲು ಈಗ ಸ್ವಲ್ಪ ಕಷ್ಟವಾಗುವುದಂತೂ ನಿಜ. ಅವರ ಮುಪ್ಪು, ವಿವಾದಗಳಿಂದ ಜರ್ಜರಿತವಾದ ಕವಿಮನಸು, ಟೀಕಾಕಾರರ ಮಾತುಗಳಿಂದ ನೊಂದುಹೋದ ಮುದಿಜೀವ- … Read more

ಪವಾಡ?: ಗುರುಪ್ರಸಾದ ಕುರ್ತಕೋಟಿ

(ಅತೀಂದ್ರಿಯ ಅನುಭವದ ಕಥೆಗಳು – ಭಾಗ ೫): ಈ ಸಲ ಒಂದು ಚಿಕ್ಕ ಘಟನೆಯಾ ಬಗ್ಗೆ ಹೇಳುತ್ತೇನೆ. ಇದು ನನ್ನ ಅಜ್ಜ (ಅಮ್ಮನ ತಂದೆ) ಅವರಿಗಾದ ಅನುಭವ. ಸುಮಾರು ಐದು ದಶಕಗಳ ಹಿಂದೆ ನಡೆದದ್ದು. ಆಗ ನನ್ನಜ್ಜ ಮಧ್ಯ ವಯಸ್ಕ. ಅವರ ಹೆಂಡತಿ, ಅಂದರೆ ನನ್ನ ಅಜ್ಜಿ, ರಾಘವೇಂದ್ರ ಸ್ವಾಮಿಗಳ ಭಕ್ತಳು. ಅಂತಿಂಥ ಭಕ್ತಳಲ್ಲ, ಘನಘೋರ ಭಕ್ತಳು! ರಾಯರ ಬಗ್ಗೆ ಅವಳಿಗೆ ಸಿಕ್ಕಾಪಟ್ಟೆ ನಂಬಿಕೆ. ಅದೇ ರೀತಿಯಾಗಿ ಅವರ ಸೇವೆಯನ್ನೂ ಚಾಚು ತಪ್ಪದೇ ಮಾಡುತ್ತಿದ್ದಳು. ಅದು ಪೂಜೆ-ಪುನಸ್ಕಾರವೋ, … Read more

ಸಮರ್ಥ ಶಿಕ್ಷಕ, ರಾಷ್ಟ್ರ ರಕ್ಷಕ: ಹೊರಾ.ಪರಮೇಶ್

ನಮ್ಮ ಭೂಮಂಡಲದಲ್ಲಿ ಜೀವಿಗಳು ಸೃಷ್ಟಿಯಾದಾಗಿನಿಂದಲೂ 'ಚಿಂತನ-ಮಂಥನ' ಕ್ರಿಯೆಯು ನಡೆಯುತ್ತಲೇ ಬಂದಿದೆ. ಅಂದರೆ, ಹೊಸ ವಿಷಯಗಳ ಬಗ್ಗೆ ಕುತೂಹಲ, ಹುಡುಕಾಟ, ಆವಿಷ್ಕಾರಗಳು ಸಾಗುತ್ತಲೇ ಸಾಮಾನ್ಯ ಬುದ್ಧಿ ಶಕ್ತಿಯು ಅಸಾಮಾನ್ಯ ಅನ್ವೇಷಣೆಗಳಿಗೆ ನಾಂದಿ ಹಾಡಿರುವುದರಿಂದಲೇ ಇಂದು ಜಗತ್ತು ಅತ್ಯಾಧುನಿಕ ಕಾಲ ಘಟ್ಟಕ್ಕೆ ತಲುಪಿದೆ. ಒಂದು ವೇಳೆ ಮಾನವನಲ್ಲಿ ಈ "ಮಂಥನ" ಕಾರ್ಯ ಆಗದೇ ಇದ್ದಿದ್ದರೆ, ಇಂದು ವಿದ್ಯುತ್ ಸೌಲಭ್ಯವಾಗಲೀ, ಸಾರಿಗೆ-ಸಂಪರ್ಕ ಸಾಧನಗಳಾಗಲೀ, ಹರಿಯುವ ನೀರಿನ ಸದುಪಯೋಗವಾಗಲೀ, ಐಷಾರಾಮೀ ಬದುಕಿನ ಸೌಕರ್ಯಗಳಾಗಲೀ, ವೈಜ್ಞಾನಿಕ ಆವಿಷ್ಕಾರಗಳಾಗಲೀ ಯಾವುವೂ ಆಗುತ್ತಿರಲಿಲ್ಲ. ಇತಿಹಾಸದ ಪುಟಗಳು ನಮಗೆ … Read more

ನಂಬಿಕೆ ಮತ್ತು ಜೀವನ: ಜಯಪ್ರಕಾಶ್ ಪುತ್ತೂರು

ಜೀವಿಗಳಲೆಲ್ಲಾ ಶ್ರೇಷ್ಠ ಮಾನವ, ಈ ಭೂಮಿಯ ಮೇಲೆ ಹುಟ್ಟಿದ ಪ್ರತಿಯೊಂದು ಜೀವಿಯಲ್ಲೂ ಈ ನಂಬಿಕೆ ಅನ್ನುವುದು ಇದ್ದೇ ಇದೆ. ಮತ್ತೆ ಮನುಷ್ಯರಾದ ನಮಗೆ ಇದು ಸಾಮಾನ್ಯವೇ ಅಲ್ಲವೇ. ಜೀವನ ನಿಂತಿರುವುದೇ ನಂಬಿಕೆಯ ಮೇಲೆ ಹಾಗಂತ ನಂಬಿಕೆಯೇ ಜೀವನ ಆಗಲಾರದು ಅನ್ನೋದು ಸತ್ಯ. ಮನುಷ್ಯ ಸಂಘ ಜೀವಿ ಅದಕ್ಕೆ ಕಾರಣ ಹಲವಾರು ಇದ್ದರೂ ನಂಬಿಕೆಯೇ ಮೊದಲು ಹೊರತು ಬೇರಾವ ಮ್ಯಾಜಿಕ್ ಅಂತೂ ಅಲ್ಲ ಅನ್ನೋದು ಸತ್ಯ. ಸಾಮಾಜಿಕವಾಗಿ ಬದುಕುವುದು ಅವಶ್ಯಕವೇ ಆಗಿದ್ದರೂ ಅನಿವಾರ್ಯವೇನಲ್ಲ. ನಂಬಿಕೆಯು ಸೃಷ್ಟಿಸಿರುವ ಬುನಾದಿಯ ಮೇಲೆ … Read more

ಅಧ್ಯಕ್ಷ ಅಧ್ಯಕ್ಷ: ಪ್ರಶಸ್ತಿ

ಹೇ. ಯಾವ್ದಾದ್ರೂ ಮೂವಿಗೆ ಹೋಗನ ಕಣೋ ಸುಮಾರು ದಿನ ಆಯ್ತು . ಸರಿ, ಸಿಂಗಂ ರಿಟರ್ನ್ಸ್ ಗೆ ಹೋಗೋಣ್ವಾ ? ಇಲ್ಲಪ್ಪ. ನಾ ಬರೋಲ್ಲ. ಎಕ್ಸ್ ಪ್ಯಾಂಡಬಲ್ ೩ ? ಇಲ್ಲೋ. ಅಂಜಾನ ? ಊಹೂಂ. ಮತ್ಯಾವ ಮೂವಿಗೆ ಬರ್ತಿಯೋ ನೀನು ? ನಾನು ಥಿಯೇಟ್ರಿಗೆ ಹೋಗಿ ನೋಡೋದು ಅಂದ್ರೆ ಕನ್ನಡ ಮೂವಿಗಳ್ನ ಮಾತ್ರ ಕಣ್ರೋ. ಹೋ. ಕನ್ನಡ ಇಂಡಸ್ಟ್ರಿ ಉದ್ದಾರ ಮಾಡ್ತಿದೀಯ ಅನ್ನು ಅನ್ನೋ ಕಾಲೆಳತದ ದಾಟಿ ಮುಗಿಯೋ ಮೊದ್ಲೇ ಅದಕ್ಕೊಂದು ತೇಪೆ ಹಚ್ಚಿದೆ. ಅಧ್ಯಕ್ಷಕ್ಕೆ … Read more

ಕೊಲ್ಲುವ ರಸ್ತೆಗಳ ಪುರಾಣ: ಅಖಿಲೇಶ್ ಚಿಪ್ಪಳಿ

ಸೊರಬ ತಾಲ್ಲೂಕಿನ ಉಳವಿ ಹೋಬಳಿಯ ಕಾನಳ್ಳಿಯಿಂದ ತನ್ನ ಗಂಡ ಮತ್ತು ಎರಡು ಮುದ್ದು ಮಕ್ಕಳನ್ನು ಕರೆದುಕೊಂಡು ಹೈಸ್ಕೂಲ್ ಮಾಸ್ತರಾದ ತನ್ನ ಅಣ್ಣನಿಗೆ ರಾಖಿ ಕಟ್ಟಲು ಮೊಬೈಕಿನಲ್ಲಿ ಹೊರಟಿದ್ದ ಅಂಗನವಾಡಿ ಟೀಚರ್ ದಾರಿ ಮಧ್ಯದಲ್ಲಿ ಗುಂಡಿ ಹಾರಿದ ಬೈಕಿನಿಂದ ಬಿದ್ದು ತಲೆಗೆ ಏಟಾಗಿ ಸತ್ತೇ ಹೋದಳು. ಹಾಲು ಕುಡಿಯುವ ಮಗುವಿಗೆ ಏನೂ ಆಗಲಿಲ್ಲ. ಆಕೆಗಿನ್ನೂ ಇಪ್ಪತ್ತೇಳು ವರ್ಷವಾಗಿತ್ತಷ್ಟೆ. ಕಳಪೆ ಕಾಮಗಾರಿಯಿಂದಾದ ಹೊಂಡ ಚಿಕ್ಕ ಮಕ್ಕಳನ್ನು ತಬ್ಬಲಿ ಮಾಡಿತು. ಹೀಗೆ ದೇಶದಲ್ಲಿ ನಿತ್ಯವೂ ಸಾವಿರಾರು ಸಾವು ಸಂಭವಿಸುತ್ತದೆ. ಇದರಲ್ಲಿ ದೂರುವುದು … Read more

ಮೂವರ ಕವನಗಳು: ಗಣೇಶ್ ಖರೆ, ಶ್ರೀದೇವಿ ಕೆರೆಮನೆ, ಲಕ್ಷ್ಮೀಶ ಜೆ.ಹೆಗಡೆ

ಮಸಣದ ಹೂವು:   1.ವಿಕೃತ ಕಾಮಿಗಳ ಕಾಮದಾಹಕೆ ಬಲಿಯಾದ ಹುಡುಗಿಯ ಗೋರಿಯ ಮೇಲಿನ ಹೂವಲ್ಲೂ ಅದೇ ಮುಗ್ಧ ನಗು… ಆದರೆ ಇಲ್ಯಾರೂ ಹೊಸಕುವವರಿಲ್ಲ. 2.ಇಂದು  ಮಸಣದಲ್ಲೂ ನೀರವ ಮೌನ ಆಕೆ ಬಂದಿದ್ದಾಳೆ ಕಾಮುಕರ ಕಾಮಕ್ರೀಡೆಗೆ ಪ್ರಾಣತೆತ್ತು. 3.ಹೆಣ್ಣೊಡಲ ಮಾತು… ಯಾರ ಭಯವಿಲ್ಲ ನನಗೆ ಹುಟ್ಟಿಬಂದರೆ ಮಸಣದ ಹೂವಾಗಿ. 4.ಹೆಣ್ಣು ಸುರಕ್ಷಿತ ಒಂದು ತಾಯಿಯ  ಗರ್ಭದಲ್ಲಿ, ಇನ್ನೊಂದು  ಮಸಣದ  ಗೋರಿಗಳಲ್ಲಿ. 5.ಮಸಣದಲ್ಲಿ  ನನ್ನವಳ  ಗೋರಿಯ ಮೇಲೆ ಅರಳಿದ್ದ ಹೂವೂ ನನ್ನ ನೋಡಿ ನಕ್ಕಿತ್ತು ಅವಳು ನಕ್ಕಂತೆ. 6.ಎಷ್ಟಿದ್ದರೂ ಏನಿದ್ದರೂ … Read more