ಪಶ್ಚಿಮ ಘಟ್ಟಗಳ ಸ್ಥಿತಿ-ಗತಿ – ಅವಲೋಕನ-೨: ಅಖಿಲೇಶ್ ಚಿಪ್ಪಳಿ

ಇಲ್ಲಿಯವರೆಗೆ ಫ್ರೊ:ಮಾಧವ ಗಾಡ್ಗಿಳ್ ನೇತೃತ್ವದ ಸಮಿತಿಯು ಕೇಂದ್ರ ಸರ್ಕಾರ ವಹಿಸಿದ ಮಹತ್ವದ ಈ ಮಹಾಕಾರ್ಯವನ್ನು ಪ್ರಚಂಡ ಉತ್ಸಾಹದೊಂದಿಗೆ ಪ್ರಾರಂಬಿಸಿತು. ದೀರ್ಘಕಾಲದಿಂದ ಚರ್ಚೆಗೊಳಪಟ್ಟ, ಗೊಂದಲಗಳ ಗೂಡಾದ ಪಶ್ಚಿಮಘಟ್ಟಗಳ ಉಳಿವಿಗೆ ಸಂಬಂಧಿಸಿದಂತೆ ಬಹುಮುಖ್ಯ ಕಾರ್ಯತಂತ್ರದ ಭಾಗವಾಗಿ ಬಹು ಮುಖ್ಯವಾಗಿ ಮೂರು ಹಂತಗಳನ್ನು ಗುರುತಿಸಿಕೊಂಡಿತು. ೧. ಈಗಾಗಲೇ ಪಶ್ಚಿಮಘಟ್ಟಗಳಿಗೆ ಸಂಭಂದಿಸಿದಂತೆ ಲಭ್ಯವಿರುವ ಎಲ್ಲಾ ಮಾಹಿತಿಗಳನ್ನು ಕ್ರೂಡಿಕರಿಸುವುದು. ೨. ಪಶ್ಚಿಮಘಟ್ಟಗಳ ಭೌಗೋಳಿಕ ವಿಸ್ತಾರದಲ್ಲಿ ಪರಿಸರ ಸೂಕ್ಷ್ಮಪ್ರದೇಶಗಳನ್ನು ನಿಖರವಾಗಿ ಗುರುತಿಸಿ ಅದನ್ನು ವ್ಯವಸ್ಥಿತವಾಗಿ ಗಣಕೀಕೃತಗೊಳಿಸುವುದು. ೩.ಮುಖ್ಯ ಕೈಗಾರಿಕೋದ್ಯಮಿಗಳ, ಸಂಘ-ಸಂಸ್ಥೆಗಳ, ಜನಸಾಮಾನ್ಯರ, ಜನಪ್ರತಿನಿಧಿಗಳಿಂದ ಸಮಗ್ರವಾಗಿ ಮಾಹಿತಿಯನ್ನು … Read more

ಚಳಿಗಾಲ…ಆರೋಗ್ಯ ಜೋಪಾನ: ಗಣೇಶ್.ಹೆಚ್.ಪಿ.

ಮೊನ್ನೆ ಆಕಸ್ಮಿಕವಾಗಿ ಗೆಳೆಯನೊಬ್ಬನನ್ನು ಭೇಟಿಯಾದೆ. ಹೇಗಿದೆ ಶಾಲೆ ? ಕ್ಲಾಸಸ್ ಎಲ್ಲಾ ಚೆನ್ನಾಗಿ ನಡೀತಿದೆಯೋ ಎಂದು ವಿಚಾರಿಸಿದೆ. ಅವನು ಸಪ್ಪೆ ಮುಖದಿಂದ ಇಲ್ಲಾ ಕಣೋ ಎರಡು ದಿನದಿಂದ ಜ್ವರ, ಶೀತ ಆಗಿ ಶಾಲೆಗೆ ಹೋಗಿಲ್ಲ ಎಂದು ಹೇಳಿದ. ನಾನು ಅವನಿಗೆ ಆರೋಗ್ಯದ ಮೇಲೆ ನಿಗಾ ಇಡು, ಹಾಗೇ ಶಾಲೆಯನ್ನು ತಪ್ಪಿಸಬೇಡ ಎಂದು ಬುದ್ಧಿ ಹೇಳಿದೆ. ಮೈ ಕೊರೆಯುವ ಚಳಿ :  ಈ ಕಾಲದಲ್ಲಂತೂ ಕಳೆಗುಂದಿದ ವಾತಾವರಣ, ಹೊರಗೆ ಕಾಲಿಟ್ಟರೆ ಸಾಕು ಮೈ ಕೊರೆಯುವ ಚಳಿ, ಬೆಳಿಗ್ಗೆ ಹಾಸಿಗೆ … Read more

ನಿಮ್ಮ ಗಮನಕ್ಕೆ

ದಿನಾಂಕ 30 ಡಿಸೆಂಬರ್ 2014 ರಿಂದ 3 ಜನವರಿ 2015ರ ವರೆಗೆ ಮೈಸೂರಿನ ನಿರಂತನ ಫೌಂಡೇಷನ್ ವತಿಯಿಂದ ರಾಷ್ಟ್ರೀಯ ರಂಗ ಉತ್ಸವವನ್ನು ಆಯೋಜಿಸಲಾಗಿದೆ. ಈ ನಿಮಿತ್ತ ರಂಗಾಸಕ್ತರಿಗೆ ನಿರಂತರ ಫೌಂಡೇಷನ್ ಆಹ್ವಾನ ಕೋರಿದೆ.  ಹೆಚ್ಚಿನ ವಿವರಗಳಿಗಾಗಿ ಸಂಪರ್ಕಿಸಿ: ನಿರಂತರ ಫೌಂಡೇಷನ್ ಕಾಂತರಾಜ ರಸ್ತೆ ಸರಸ್ವತಿ ಪುರಂ ಮೈಸೂರು ದೂರವಾಣಿ: 0821-2544990 ****

ಸಾಮಾನ್ಯ ಜ್ಞಾನ (ವಾರ 59): ಮಹಾಂತೇಶ್ ಯರಗಟ್ಟಿ

ಪ್ರಶ್ನೆಗಳು ೧.    ಇತ್ತೀಚಿಗೆ ಭಾರತ ರತ್ನ ಪುರಸ್ಕಾರಕ್ಕೆ ಯಾರನ್ನು ಆಯ್ಕೆ ಮಾಡಲಾಯಿತು? ೨.    ಜಿಎಮ್‌ಟಿ (GMT)ಯ ವಿಸ್ತೃತ ರೂಪವೇನು? ೩.    ಅಡಿಗೆಉಪ್ಪಿನ ರಾಸಾಯನಿಕ ಹೆಸರೇನು? ೪.    ಆಹಾರ ಶಕ್ತಿಯನ್ನು ಯಾವ ಮಾನದಿಂದ ಅಳೆಯುತ್ತಾರೆ? ೫.    ಅಶ್ವಿನಿ ಇದು ಯಾರ ಕಾವ್ಯ ನಾಮವಾಗಿದೆ? ೬.    ಪ್ರಸಿದ್ಧ ಶಿರಹಟ್ಟಿಯ ಫಕಿರೇಶ್ವರ ಮಠ ಕರ್ನಾಟಕದ ಯಾವ ಜಿಲ್ಲೆಯಲ್ಲಿದೆ? ೭.    ರಾಷ್ಟ್ರೀಯ ಕೂಲಿಗಾಗಿ ಕಾಳು ಕಾರ್ಯಕ್ರಮವನ್ನು ಜಾರಿಗೊಳಿಸಲಾದ ವರ್ಷ ಯಾವುದು? ೮.    ಡೆನ್ಮಾರ್ಕ್ ವಿಶಿಷ್ಟವಾಗಿ ಯಾವ ಪ್ರಾಣಿಗಳಿಗೆ ಪ್ರಸಿದ್ಧಿ ಪಡೆದಿದೆ? ೯.    ಕನ್ನಡದ … Read more

ಪಂಜುವಿನ ಕನ್ನಡ ಪದಗಳ ಮೆರವಣಿಗೆಗೆ ನೂರರ ಸಂಭ್ರಮ: ನಟರಾಜು ಎಸ್. ಎಂ.

ಡಿಸೆಂಬರ್ 3, 2014 ರಂದು ವಿಶ್ವ ವಿಕಲ ಚೇತನರ ದಿನದ ಸಲುವಾಗಿ ಎನ್ ಜಿ ಓ ಒಂದರ ಕಾರ್ಯಕ್ರಮಕ್ಕೆ ಹೋಗಬೇಕಿತ್ತು. ಅವತ್ತೇ ಪಶ್ಚಿಮ ಬಂಗಾಳದ ಸಿಎಂ ನಾನಿರುವ ಪುಟ್ಟ ಊರಾದ ಜಲ್ಪಾಯ್ಗುರಿಗೆ ಆಗಮಿಸಿದ್ದರು. ಆ ಕಾರಣಕ್ಕೆ ಇಡೀ ಊರಿನ ತುಂಬಾ ಬಂದೋಬಸ್ತಿನ ವಾತಾವರಣವಿತ್ತು. ಆ ಎನ್ ಜಿ ಓ ಆಫೀಸಿನ ಹತ್ತಿರದ ಪ್ರವಾಸಿ ಮಂದಿರದಲ್ಲಿ ಸಿಎಂ ತಂಗಿದ್ದ ಕಾರಣ ಆ ಎನ್ ಜಿ ಓ ಗೆ ಮಧ್ಯಾಹ್ನದವರೆಗೂ ತನ್ನ ಕಾರ್ಯಕ್ರಮಗಳನ್ನು ಶುರು ಮಾಡಲು ಒಂಚೂರು ತೊಂದರೆಯೇ ಆಗಿತ್ತು. … Read more

ಅರುಣ್ ಅಂತರಾಳದ ಮಾತು: ಅರುಣ್ ನಂದಗಿರಿ

ನಿನ್ನ ಭವಿಷ್ಯಕ್ಕೆ ನೀನೇ ಶಿಲ್ಪಿ ಇದು ಸ್ವಾಮಿ ವಿವೇಕಾನಂದರ ಮಾತು, ಈ ಸುಭಾಷಿತವನ್ನು ದಿನಪತ್ರಿಕೆಯೊಂದರಲ್ಲಿ ನೋಡಿದ್ದೆ. ಆಗ ನಾನಿನ್ನು ೮ ವರ್ಷದ ಬಾಲಕನಾಗಿದ್ದೆ. ಆದರೂ ಈ ಮಾತನ್ನು ಅರ್ಥಮಾಡಿಕೊಂಡಿದೆ! ಭವಿಷ್ಯದಲ್ಲಿ ನಾನೇನಾಗಬೇಕೋ ಅದನ್ನು ನಾನೇ ನಿರ್ಧರಿಸಬೇಕು. ಗುರಿ ಈಡೇರುವವರೆಗೂ ಛಲ ಬಿಡಬಾರದೆಂದು. ಆಗ ನಾವೆಲ್ಲ ಬೆಂಗಳೂರಿನಲ್ಲಿದ್ದೆವು. ಸುಮಾರು ೨೨ ವರ್ಷದಷ್ಟು ಹಳೆಯ ಬೆಂಗಳೂರದು. ಡಾ| ಲಕ್ಷ್ಮಿ ಡೇ ನಮ್ಮ ಮನೆಯ ಹತ್ತಿರವೇ ತಮ್ಮ ಕ್ಲಿನಿಕ್ ಇಟ್ಟಿದ್ದರು. ’ಆರೋಗ್ಯ ಧಾಮ’ ಅಂತ ಅದರ ಹೆಸರು ಅದರ ಒಂದು ಭಾಗದಲ್ಲಿ … Read more

ಸಮಾಜದ ಚೇತರಿಕೆಗೆ ಊರುಗೋಲಾಗ ಬಯಸಿದ “ಚೇತನ”: ಬೀರಪ್ಪ ಅಂಡಗಿ ಚಿಲವಾಡಗಿ

ಅಂಗವಿಕಲತೆ ಎಂಬುದನ್ನು ಯಾವ ವ್ಯಕ್ತಿಯು ಪಡೆದುಕೊಂಡು ಬಂದುದಲ್ಲ. ಅದು ಆಕಸ್ಮಿತವಾಗಿ ಬರುವಂತದ್ದಾಗಿದೆ. ಅಂಗವಿಕಲತೆಯನ್ನು ಹೊಂದಿರುವ ವ್ಯಕ್ತಿಯು ತನ್ನ ವಿಕಲತೆಯ ಕಡೆಗೆ ಗಮನವನ್ನು ಹರಿಸದೇ ಸಾಧನೆಯನ್ನು ಮಾಡಿ ತೋರಿಸುವುದರ ಕಡೆಗೆ ಗಮನವನ್ನು ಹರಿಸುವರು. ಅಂಗವಿಕಲತೆಗೆ  ಒಳಗಾದ ವ್ಯಕ್ತಿಯು ಸಾಧಾರಣ ವ್ಯಕ್ತಿಗಳಿಗಿಂತ ವಿಶೇಷವಾದ ಶಕ್ತಿಯನ್ನು ಹೊಂದಿರುತ್ತಾರೆ. ಅದಕ್ಕೆ ಉದಾಹರಣೆಯೆಂದರೆ ನಾನೇ. ನಾನು ಐದನೇ ವಯಸ್ಸಿನಲ್ಲಿ ಇರುವಾಗ ಪೋಲಿಯೋ ಲಸಿಕೆಯನ್ನು ಹಾಕಿಸಿಯೂ ಅಥವಾ ಹಾಕಿಸದೆಯೋ ನನ್ನ ಎಡಗಾಲು ಶಕ್ತಿಯನ್ನು ಕಳೆದುಕೊಂಡೆ. ಪ್ರಾಥಮಿಕ ಶಿಕ್ಷಣವನ್ನು ನನ್ನ ಸ್ವ ಗ್ರಾಮವಾದ ಕೊಪ್ಪಳ ತಾಲೂಕಿನ ಚಿಲವಾಡಗಿಯಲ್ಲಿ … Read more

‘ಎಲ್ಲಾ ನ್ಯೂನತೆಗಳಾಚೆ ಮನಸ್ಸು ಜೀವಿಸಲಿ’: ದಿವ್ಯ ಆಂಜನಪ್ಪ

ಆ ತಾಯಿ ದಿನವೂ ತನ್ನ ಮಗುವನ್ನು ಶಾಲೆಗೆ ಕರೆದೊಯ್ಯುತ್ತಿದ್ದಳು. ಮಗುವಿಗೆ ಇನ್ನೂ ಮೂರುವರೆ ವರುಷಗಳು. ಒಂದೇ ಬಸ್ಸಿನ ಪ್ರಯಾಣಿಕಳಾಗಿ ನಾನು ಸಹ ಆಗಾಗ ಇವರನ್ನು ಗಮನಿಸುತ್ತಿದ್ದೆನು. ಮಗುವಿಗೆ ಇನ್ನೂ ಸರಿಯಾಗಿ ನಾಲಿಗೆ ಹೊರಳದು, ಕಿವಿಯೂ ತುಸು ಮಂದವೇ. ಹಾಗಾಗಿ ಆಕೆ ಒಂದು ವಿಶೇಷ ಅಗತ್ಯಯುಳ್ಳ ಶಾಲೆಗೆ ಸೇರಿಸಿದ್ದರು. ಮಗು ಮುದ್ದು ಮುದ್ದುಗಿದ್ದು ಬಸ್ಸಿನ ಎಲ್ಲರ ಗಮನವನ್ನು ಸೆಳೆದಿತ್ತು. ಹಾಗೆಯೇ ಅಕ್ಕಪಕ್ಕದವರನ್ನು ಮುಟ್ಟಿ ಮುಟ್ಟಿ ಮಾತನಾಡಿಸಿ ನಕ್ಕು ಮನ ಗೆದ್ದಿತ್ತು. ಮಗುವಿನ ಮುಗ್ಧತೆಯು ಅದರ ನ್ಯೂನತೆಯನ್ನು ನಮ್ಮೆಲ್ಲರ ಮನಗಳಿಂದ … Read more

ವಿಕಲಚೇತನರಿಗಾಗಿ ಸಮನ್ವಯ ಶಿಕ್ಷಣ: ವೈ.ಬಿ.ಕಡಕೋಳ

  ಶೈಕ್ಷಣಿಕ ಮುಖ್ಯವಾಹಿನಿಯಲ್ಲಿ ಸಾಮಾನ್ಯ ಮಕ್ಕಳೊಂದಿಗೆ ವಿಶೇಷ ಅಗತ್ಯವಿರುವ ಮಕ್ಕಳನ್ನು ಸೇರಿಸಿ ನೀಡುವ ಶಿಕ್ಷಣವನ್ನು ಸಮನ್ವಯ ಶಿಕ್ಷಣ ಎನ್ನುವರು.೧೯೮೬ ರ "ರಾಷ್ಟ್ರೀಯ ಶಿಕ್ಷಣ ನೀತಿ",೧೯೯೦ ರಲ್ಲಿ ವಿಶ್ವಸಂಸ್ಥೆ ಮಂಡಿಸಿದ "ಸರ್ವರಿಗೂ ಶಿಕ್ಷಣ" ೧೯೯೫ ರ "ಅಂಗವಿಕಲ ವ್ಯಕ್ತಿಗಳ ಸಮಾನ ಹಕ್ಕುಗಳ ಸಂರಕ್ಷಣೆ ಹಾಗೂ ವಿಕಾಸ ಕಾಯೆ"ಯು ಅಂಗವಿಕಲ ಮಕ್ಕಳು ಸಾಮಾನ್ಯ ಶಾಲೆಯಲ್ಲಿ ಶಿಕ್ಷಣ ಪಡೆಯುವ ಅವಕಾಶವನ್ನು ಹೊಂದಿ ಅಂತಹ ಮಕ್ಕಳು ಕೂಡ ದೈರ್ಯ ಮತ್ತು ಆತ್ಮವಿಶ್ವಾಸದಿಂದ ಜೀವನವನ್ನು ಎದುರಿಸಬೇಕು ಹಾಗೂ ಸಮಾಜದ ಮುಖ್ಯವಾಹಿನಿಯಲ್ಲಿ ಬೆರೆಯಬೇಕು ಎಂಬುದನ್ನು ತಿಳಿಸಿವೆ. … Read more

ಪ್ರತಿಕ್ ರವರ ಸಂದರ್ಶನ: ಚೈತ್ರ ಭವಾನಿ

ಕಸ್ತೂರಿ ವಾಹಿನಿಯ ಕ್ರೈಂ ಕಾರ್ಯಕ್ರಮಗಳನ್ನು ವೀಕ್ಷಿಸುತ್ತಿದವರಿಗೆ ಪ್ರತಿಕ್ ಅವರ ಧ್ವನಿ ಚಿರಪರಿಚಿತ. ಮಾಧ್ಯಮ ಕ್ಷೇತ್ರದಲ್ಲಿ ಇವರ ಹೆಸರನ್ನು ಕೇಳಿದವರು ಒಮ್ಮೆ ಹುಬ್ಬೆರಿಸೋದು ಸಾಮಾನ್ಯ. ಮಾಧ್ಯಮ ಕ್ಷೇತ್ರದಲ್ಲಿ ಪ್ರತಿಕ್ ಎಲ್ಲರಿಗಿಂತಲೂ ವಿಭಿನ್ನವಾಗಿ ನಿಲ್ಲುತ್ತಾರೆ. ಕೆಲಸ ಮಾಡಲು ದೈಹಿಕವಾಗಿ ಸಮರ್ಥರಿದ್ದರೂ ಕೆಲಸದ ಒತ್ತಡ, ಅತೃಪ್ತಿ, ಸಂಬಳದ ಕೊರತೆ ಹೀಗೆ ನಾನಾ  ಕಾರಣಗಳಿಂದ ಮಾಧ್ಯಮ ಕ್ಷೇತ್ರಕ್ಕೆ ಗುಡ್ ಬೈ ಹೇಳುತ್ತಿರುವವರ ನಡುವೆ ಹುಟ್ಟಿದಾಗಿನಿಂದಲೂ ತಮ್ಮ ಎಡಗೈ ಸ್ವಾಧೀನ ಕಳೆದುಕೊಂಡ ಪ್ರತಿಕ್  ಅದೊಂದು ಸಮಸ್ಯೆಯೇ ಅಲ್ಲವೆಂದು  ಇಂದಿಗೂ, ಮುಂದೆಯೂ ಇದೆ ಕ್ಷೇತ್ರದಲ್ಲಿ ಹೊಸ … Read more

ವಲ್ಸಮ್ಮನ ಕಥೆ: ಭಾರವಿ

 "ಇನ್ನೊಂದ್ ಹೆಜ್ಜೆ ಮುಂದಿಟ್ರೆ ತಲೆ ಒಡಿತೀನಿ" ದೊಣ್ಣೆ ಹಿಡಿದ ವಲ್ಸಮ್ಮನ ಎಚ್ಚರಿಕೆ ನಾಲ್ಕು ಗೋಡೆಗಳ ಒಳಗಿಂದ ಹೊರಗೆ ಕೇಳಿಸುತ್ತಿದೆ. ಗಂಡನೆನೆಸಿಕೊಂಡವ ಇನ್ನೂ ಗುರುಗುಟ್ಟುತ್ತಲೇ ಇದ್ದಾನೆ. ಕುಡಿದ ಬಾಯಿಂದ ಅಸ್ಪಷ್ಟವಾಗಿ ಕೆಟ್ಟ ಪದಗಳು ವಾಸನೆಯೊಂದಿಗೆ ಉರುಳುತ್ತಿವೆ. 6 ವರ್ಷದ ಮಗ ವಿನಿತ್ ಮೂಲೆಯಲ್ಲಿ ನಿಂತುಕೊಂಡು ಅಪ್ಪನನ್ನು ದುರುಗುಟ್ಟಿಕೊಂಡು ನೋಡುತ್ತಿದ್ದಾನೆ. ಆದರೆ ವರ್ಗೀಸ್ ಗೆ ಇದ್ಯಾವುದರ ಪರಿವೆಯೂ ಇಲ್ಲ. ಅವನಿಗೆ ಒಂದು ಬಾರಿ ಹೆಂಡತಿಯ ಮೇಲೆ ಕೈ ಮಾಡುವ ಆಸೆ. ಆದರೆ ಅವಳನ್ನು ಸಮೀಪಿಸಲು ಹೆದರಿಕೆ. ಎಲ್ಲಿ ದೊಣ್ಣೆಯ ಹೊಡೆತ … Read more

ಗೆದ್ದು ಬಂದಳು ಸೀತೆ ..: ಅನಿತಾ ನರೇಶ್ ಮಂಚಿ

 ಶಾಲೆಯಿಂದ ಬರುವ ದಾರಿಯಲ್ಲೇ ಇದ್ದ ಅಪ್ಪನ ಕ್ಲಿನಿಕ್ಕಿನ ಪಕ್ಕದ  ಖಾಲಿ ಕೋಣೆ ನನ್ನ  ಕಣ್ಣಿಗೆ ನಿತ್ಯವೂ ಬೀಳುತ್ತಿತ್ತು.  ಎಲ್ಲಾ ಅಂಗಡಿಯ ಬಾಗಿಲುಗಳಂತೆ ಇದಕ್ಕೂ ಮರದ ಉದ್ದುದ್ದ ಹಲಗೆಗಳೇ ಬಾಗಿಲು. ಒಂದರ ಪಕ್ಕದಲ್ಲಿ ಒಂದರಂತೆ ಜೋಡಿಸಿ ಇಡುತ್ತಿದ್ದ ಇದನ್ನು ಹಾಕುವುದು ಮತ್ತು ತೆರೆಯುವುದೂ ಕೂಡಾ ನಾಜೂಕಿನ ಕೆಲಸವೇ. ಯಾಕೆಂದರೆ ಆಯಾಯ ಜಾಗ ತಪ್ಪಿ ಹಲಗೆಗಳನ್ನು ಜೋಡಿಸಿದರೆ ಅಂಗಡಿಯ ಬಾಗಿಲು ಹಾಕಲೇ ಸಾಧ್ಯವಾಗುತ್ತಿರಲಿಲ್ಲ. ಅದಕ್ಕಾಗಿಯೇ ಹೆಚ್ಚಿನೆಲ್ಲಾ ಬಾಗಿಲಿನ ಹಲಗೆಗಳ ಮೇಲೆ ಒಂದು, ಎರಡು, ಮೂರು …  ಎಂದು ಸಂಖ್ಯೆಗಳನ್ನು ಬರೆದಿಡುತ್ತಿದ್ದರು. … Read more

ಕತ್ತಲಡಗಿಸಲು ಹಣತೆಯೊಂದು ಸಾಕು: ಸಚೇತನ

ಕ್ಲಾಸಿನಲ್ಲಿ ಪಾಠ ಓದಲು  ಎದ್ದು ನಿಂತ ಪುಟ್ಟ ಕಂದಮ್ಮ  ಭಯಗೊಂಡಿದ್ದಾನೆ, ಸಣ್ಣನೆಯ ನಡುಕ ಮೈ ತುಂಬಾ ಹರಡಿ ತುಟಿಯ ತುದಿಯಲ್ಲಿ ಕುಳಿತಿದೆ, ತೊದಲಿದರೆ ಎನ್ನುವ ಆತಂಕ ಆ ಚಿಕ್ಕ ಕಣ್ಣುಗಳನ್ನು ದಾಟಿ ಹೊರ ಬರುತ್ತಿದೆ,   ಕೈಯಲ್ಲಿ ಅಂಗಿಯ ತುದಿಯನ್ನು ಹಿಡಿದು ಎಳೆಯುತ್ತಿದ್ದಾನೆ, ಶಕ್ತಿಮೀರಿ ಹೊರಡಿಸಿದ ಮಾತು ಬೆಚ್ಚನೆಯ ಗೂಡಿನಿಂದ ಕೆಳಬಿದ್ದ ನಡುಗುವ ಗುಬ್ಬಚ್ಚಿಯಂತೆ,ಮುದ್ದಾಗಬೇಕಿದ್ದ ಮಾತು ಮೊದ್ದಾಗಿದೆ, ತೊದಲು. ಕಂದಮ್ಮನ ಕಣ್ಣಿನಿಂದ ಮಾತು ಹೊರಬರುತ್ತಿಲ್ಲ ಶಬ್ದಗಳು ಹನಿಗಳಾಗಿವೆ.  ಇಲ್ಲಿಯೂ ಹಾಗೆ ಕಥೆಯ ನಾಯಕ ಅಂತಿಥವನಲ್ಲ, ಅವನು ಬ್ರಿಟಿಷರ … Read more

ತನ್ನಂತೆ ಪರರ ಬಗೆದೊಡೆ ಕೈಲಾಸ: ಆರಿದ್ರಿಕಾ ಭಾರತಿ

ಅಪ್ಪಾ ಹೆಣ್ಣು ಮಗುವಿಗಾಗಿ ಕಾಯುತ್ತಾ ಕಾಯುತ್ತಾ, ೭ನೇ ಮಗು ಜನಿಸಿದ ಮೇಲೆ ಭೂಮಿಗೆ ಇಳಿಯುತ್ತಾಳೆ 'ಲತಾ, ಮುದ್ದು ಮುಖ, ಬೆಳ್ಳಿ ಗುಂಡಿಗೆ ಟೋಪಿ ಹಾಕಿದಂತೆ ದಟ್ಟ ಕರಿ ಕೂದಲು, ಉದ್ದ ಮೂಗಿನ ಸುಂದರ ಗೊಂಬೆ, ಊರಣ್ಣ, ನಿನ್ ಮಗಳು ಸ್ಪುರದ್ರೂಪಿ, ಕೈ ತೊಳೆದು ಮುಟ್ಬೇಕು. ಎಂದರೆ ತಂದೆಗೊಂದು ಗರಿ. ಉಳಿದ ಯಾವುದೇ ಮಕ್ಕಳಿಗೆ ಪೋಲಿಯೋ ಹನಿ ಹಾಕಿಸದ ಊರಣ್ಣ ನಿಗೆ 'ಏ ನನ್ ವಂಶಕ್ಕೆ ಪೋಲಿಯೋ, ಮಣ್ಣು ಮಸಿ ಬರಲ್ಲ, ಎಂಬ ಧೋರಣೆ. ಲತಾ ಗೆ ೩ … Read more

ಜೀವನದ ಕೆಲವು ಪುಟಗಳಿಂದ

ಆಕೆ ಜಾರಿ ಬಿದ್ದಾಗೆಲ್ಲಾ ಆಕೆಗಿಂತ ಹೆಚ್ಚು ನೋವಾಗುವುದು ನನಗೆ. ಆಕೆ ನಸು ನಗುತ್ತಾಳೆ. ನಾನು ಪೆಚ್ಚು ಪೆಚ್ಚಾಗಿ ನಗುತ್ತೇನೆ. ಮದುವೆಯಾದ ಮೊದಲು – ಸುಮಾರು ಇಪ್ಪತ್ತೈದು ವರ್ಷಗಳ ಹಿಂದೆ. ಕತ್ತಲಾಗಿತ್ತು. ಅದು ಹಳ್ಳಿ. ಹೊಸ ಮದು ಮಗ ಮದುಮಗಳು ಕೈ ಕೈ ಹಿಡಿದುಕೊಂಡು ಹೋಗುವಾಗ, ಯಾರೋ ತಮಾಶೆ ಮಾಡಿದರು. ಆಕೆ ಕೈ ಕೊಸರಿಕೊಂಡು ನಡೆದಳು. ಅದು ಒಂದು ಕ್ಷಣ ಮಾತ್ರ. ಬಿದ್ದ ಸದ್ದು. ಹಿಂದೆ ನೋಡಿದರೆ ಆಕೆ ಬಿದ್ದಿದ್ದಾಳೆ. ಇಂದಿಗೂ ಆ ಘಟನೆ ನೆನೆದಾಗ, ಆಕೆಯ ಅಸಾಹಯಕತೆಯ … Read more

ಆಪ್ತ ರಕ್ಷಕ!: ಗುರುಪ್ರಸಾದ ಕುರ್ತಕೋಟಿ

ಅವತ್ತು  ಕೆಲಸ ಮುಗಿಸಿ ನಾನು ಮನೆಗೆ ಬಂದಾಗ ರಾತ್ರಿ ಹನ್ನೊಂದು ಗಂಟೆ. ಕೆಲಸದ ಸುಸ್ತು, ತಲೆ ಬೇರೆ ಸಣ್ಣಗೆ ನೋಯುತ್ತಿತ್ತು. ನಮ್ಮ ಅಪಾರ್ಟಮೆಂಟಿನ ಹೊರಗೆ ಕಾರು ನಿಲ್ಲಿಸಿಕೊಂಡು "ಅವನು" ಗೇಟು ತೆಗೆಯಲೆಂದು ಕಾಯುತ್ತಿದ್ದೆ…  ಅವನ ಹೆಸರು ನಂದೀಶ. ಅವನನ್ನು ಏನಂತ ಪರಿಚಯಿಸಬೇಕೆಂದು ಗೊತ್ತಾಗುತ್ತಿಲ್ಲ. ಸೆಕ್ಯುರಿಟಿ ಅನ್ನಲೇ? ಊಹುಂ, ಅವನು ಅದಕ್ಕಿಂತ ಜಾಸ್ತಿ. ವಾಚ್ ಮನ್ ಅನ್ನಲೂ  ಮನಸ್ಸಿಲ್ಲ, ಏಕೆಂದರೆ ವಾಚ್ ಮ್ಯಾನ್ ಗಳು ಬರೀ ವಾಚ್ ಮಾಡುತ್ತಾರೆ ಅಷ್ಟೆ!  ಅವನನ್ನು  ನಮ್ಮ "ಆಪ್ತ ರಕ್ಷಕ" ಅಂತ ಕರೆಯುವುದೇ … Read more

ಆಟಿಸಂ ಅನ್ನೋ ಸಂಕೀರ್ಣ ಮನೋ ಅವಸ್ಥೆ: ಪ್ರಶಸ್ತಿ

ದೈಹಿಕ ಅಂಗವೈಕಲ್ಯ ಅನ್ನೋದು ಮೇಲುನೋಟಕ್ಕೆ ಕಂಡುಬರುತ್ತೆ. ಆದ್ರೆ ಮಾನಸಿಕ ಅಂಗವೈಕಲ್ಯ ? ಕಣ್ಣೆದ್ರೇ ಇದ್ರೂ ಗೊತ್ತಾಗಲ್ಲ.  ಏ ಅವನ್ಯಾಕೆ ಅಷ್ಟು ದೊಡ್ಡದಾಗಿ , ಎಳೆದೆಳೆದು ಮಾತಾಡ್ತಾನೆ, ದೇಹ ನೋಡಿದ್ರೆ ಅಷ್ಟು ವಯಸ್ಸಾದಂತಿದೆ ಆದ್ರೆ ಬುದ್ದಿ ಮಾತ್ರ ಇನ್ನೂ ಬೆಳೆದಿಲ್ಲವಾ ಅನ್ನುವಂತಹಾ ಸಿಲ್ಲಿ ಪ್ರಶ್ನೆಗಳನ್ನು ಕೇಳುತ್ತಾನೆ.  ಇದ್ದಕ್ಕಿದ್ದಂಗೆ ಜಗಳಕ್ಕೆ ಬಂದು ಬಿಡ್ತಾನೆ ಮಾರಾಯ ಅವ. ಸ್ವಲ್ಪ ಹುಷಾರಾಗಿರು ಅಂತಿದ್ದ ಹೊಸದಾಗಿ ಪೀಜಿಗೆ ಬಂದವನ ಬಗ್ಗೆ ಗೆಳೆಯ. ಹೂಂ. ಅವನು ಆಟಿಸಂ ಇಂದ ಒದ್ದಾಡ್ತಾ ಇದಾನೆ . ನಿನ್ನೆ ಸಿಕ್ಕಾಗ … Read more

ಮನಸ್ಸಿದೆ! ಕನಸಿದೆ! ಅನುಕಂಪ ಬೇಡ, ಅವಕಾಶ ಕೊಡಿ: ಪಾ.ಮು. ಸುಬ್ರಮಣ್ಯ, ಬ.ಹಳ್ಳಿ.

   ನಾವು ಯಾರಿಗೇನೂ ಕಮ್ಮಿ ಇಲ್ಲ.  ಯಾರ ಹಂಗೂ ನಮಗಿಲ್ಲ.  ನಮಗೂ ಒಂದು ಮನಸ್ಸಿದೆ. ಕನಸಿದೆ. ಬದುಕಿದೆ. ಅಸಹಾಯಕತೆಯ ಅನುಕಂಪದಲೆಯಲ್ಲಿ ಮುಳುಗಿಸಿ, ಕಾರುಣ್ಯಧಾರೆಯಲ್ಲಿ ತೇಲಿಸುವ ಅಗತ್ಯವಿಲ್ಲ.  ನಮಗೆ ಅವಕಾಶ ಕೊಡಿ.  ’ಆಗುವುದಿಲ್ಲ’ ಎಂಬುದನ್ನೆಲ್ಲಾ ’ಆಗಿಸಿ’ ಬಿಡುತ್ತೇವೆ.  ಪ್ರತಿಯೊಬ್ಬ ವಿಕಲಚೇತನರಲ್ಲಿ ಕಂಡು ಕೇಳಿ ಬರುವ ದೃಢ ವಿಶ್ವಾಸದ ನುಡಿಗಳಿವು.   ವಿಕಲಚೇತನರೆಂದರೆ ಸಮಾಜದಲ್ಲಿ ಅವಗಣನೆಗೆ ಒಳಗಾಗಿ ಅವರಿಗೆ ತಮ್ಮದೇ ಆದ ಸ್ವಂತಿಕೆ ಇಲ್ಲದಂತಹ ಸ್ಥಿತಿಗೆ ತಂದು ಬಿಟ್ಟಿದ್ದೇವೆ.   ಯಾರೀ ವಿಕಲಚೇತನರು?  ’ಅಂಗವಿಕಲ’ ಎಂಬ ಪದಕ್ಕೆ ಪರ್ಯಾಯವಾಗಿ ಇಂದು … Read more

ವಿಶೇಷ ಮಕ್ಕಳ ಪೋಷಣೆಯೂ ಘಾಸಿಗೊಳಿಸುವ ಮತಾಂಧತೆಯೂ: ಅಮರ್ ದೀಪ್ ಪಿ.ಎಸ್.

ಮಕ್ಕಳು ದೇವರ ಸಮಾನ ಅಂತಾರೆ.   ಅಂಥ ಮಕ್ಕಳು ಹುಟ್ಟಿದ ಸಮಯದಿಂದ ಹಿಡಿದು ಬೆಳೆದು ನಾಲ್ಕು ಹೆಜ್ಜೆ ಇಟ್ಟು ನಾಲ್ಕು ತೊದಲು ಮಾತಾಡುವಂತಾಗುವಷ್ಟರಲ್ಲಿ ತಂದೆ ತಾಯಿಯರು ಅದೆಷ್ಟೇ ಮೊಂಡರು, ಸಿಡುಕರು, ದುಡುಕರು, ಗತ್ತು ಗೈರತ್ತಿನವರಿದ್ದರೂ ಮಕ್ಕಳ ಮುಂದೆ ಮೊಳಕಾಲೂರಿ “ಬಾಲೇ ಕಂದಾ, ಬಾರೇ ಬಂಗಾರಿ, ಹೌದಾ ಚಿನ್ನು, ನನ್ ಸೋನು, ಮೈ ಸ್ವೀಟಿ ಅಂತೆಲ್ಲಾ ಕರೆದು ಮುದ್ದು ಮಾಡದೇ ಬೇರೆ ಕಾರಣವೇ ಇಲ್ಲದಂತೆ ರಿಲೇಟ್ ಆಗಿಬಿಡುತ್ತಾರೆ.  ಅದು ದೊಡ್ಡವರನ್ನು ಬೆಂಡ್ ಮಾಡಲು ಮಕ್ಕಳಿಗಿರುವ ಶಕ್ತಿಯೂ ಹೌದು ಮತ್ತು … Read more