ಮಾನಸ ಸರೋವರದಲ್ಲಿ ವೇದತರಂಗ: ಹೃದಯಶಿವ ಅಂಕಣ
ಶಿವರುದ್ರಪ್ಪನವರಿಗೆ ವಂದಿಸುತ್ತಾ… ಜೆಎಸ್ಸೆಸ್ ಎಂದೇ ಖ್ಯಾತರಾಗಿರುವ ರಾಷ್ಟ್ರಕವಿ ಜಿ.ಎಸ್. ಶಿವರುದ್ರಪ್ಪನವರು ಕನ್ನಡ ಸಾರಸ್ವತ ಲೋಕದ ಅಗ್ರಪಂಕ್ತಿಯಲ್ಲಿ ನಿಲ್ಲುವ ಕವಿಜೀವ. ಶಿವಮೊಗ್ಗ ಜಿಲ್ಲೆಯ ಶಿಕಾರಿಪುರದಲ್ಲಿ ೧೯೨೬ರ ಫೆಬ್ರವರಿ ೭ನೇ ತಾರೀಖು ಜನಿಸಿದ ಈ ಸಮನ್ವಯ ಕವಿಯ ಸಾಹಿತ್ಯಕೃಷಿ ನವೋದಯದಲ್ಲಿ ಶುರುವಾಗಿ ನವ್ಯದಲ್ಲಿ ಮುಂದುವರೆಯುತ್ತಿದೆ. ವೃತ್ತಿಯಲ್ಲಿ ಅಧ್ಯಾಪಕರಾಗಿ ಸಾವಿರಾರು ಚಿಂತನಾ ಜೀವಿಗಳನ್ನು ಹುಟ್ಟುಹಾಕಿದ ಇವರು ರಾಷ್ಟ್ರಕವಿ ಕೆ.ವಿ.ಪುಟ್ಟಪ್ಪನವರ ಪಟ್ಟಶಿಷ್ಯ. ಇದುವರೆಗೂ ಸಾಮಗಾನ, ಒಲವು-ಚೆಲುವು, ತೆರೆದಮನ, ದೀಪದ ಹೆಜ್ಜೆ, ಕಾವ್ಯಾರ್ಥ ಚಿಂತನೆ, ಕಾವ್ಯರ್ಥ ಲೋಕ, ವಿಮರ್ಶೆಯ ಪೂರ್ವಪಶ್ಚಿಮ ಒಳಗೊಂಡಂತೆ ಇನ್ನೂ … Read more