ಮಾತುಗಳೆಲ್ಲಾ ಮೌನವಾದಾಗ, ಎದೆಯಾಳದ ಪದಗಳೆಲ್ಲಾ ಎಚ್ಚೆತ್ತಾಗ: ಡಿ ಜಿ ನಾಗರಾಜ ಹರ್ತಿಕೋಟೆ
ನನ್ನೆಲ್ಲಾ ಕೊರತೆಗಳ ನೀಗಿಸಿಬಿಡು. ನಿನ್ನ ಕಣ್ಣಲ್ಲೊಂದು ಪುಟ್ಟ ಹಣತೆಯಿದೆ ನನ್ನೆಲ್ಲಾ ಕನಸುಗಳ ಬೆಳಗಿಬಿಡು. ಮಾತುಗಳೆಲ್ಲಾ ಮೌನವಾದಾಗ, ಎದೆಯಾಳದ ಪದಗಳೆಲ್ಲಾ ಎಚ್ಚೆತ್ತಾಗ ನನ್ನೊಳಗೊಳಗೆ ಪ್ರೀತಿಯ ಪದಗಳ ಪಯಣ. ಅದೆಂತಾ ಅಮೃತಘಳಿಗೆಯೊ ನಾ ತಿಳಿಯೆ ! ಸಂಬಂಧಿಯ ಮದುವೆಮನೆಯಲ್ಲಿ ಲಂಗ ದವಣಿ ತೊಟ್ಟು, ಮಲ್ಲಿಗೆ ಮುಡಿದು ಉತ್ಸಾಹದಿಂದ ನಲಿದಾಡುತ್ತಿದ್ದ ನಿನ್ನ ನೋಡಿದಾಕ್ಷಣವಂತೂ ಮನಸ್ಸು ಪ್ಯಾರಾಚ್ಯೂಟನಂತಾಗಿಬಿಟ್ಟಿತ್ತು. ಹಸಿಹಸಿ ಹೃದಯದಲಿ ನೀನಿಟ್ಟ ಮೊದಲ ಹೆಜ್ಜೆಗುರುತದು. ನಿನ್ನ ಕಣ್ಣಂಚಿನ ಕುಡಿನೋಟಕ್ಕಾಗಿ,ಮಂದಹಾಸಕ್ಕಾಗಿ ಅದೆಷ್ಟು ಕಾತರಿಸಿದೆನೊ. ನೀ ಸೂಸಿದ ಮಲ್ಲಿಗೆಯ ಮನಸ್ಸಿನ ಘಮದ ಪರಿಮಳ ಮನದಂಗಳದಲ್ಲೆಲ್ಲಾ ಸೂಸಿ … Read more