ಜಗದ್ವಂದ್ಯ ಭಾರತಂ ಪುಸ್ತಕ ವಿಮರ್ಶೆ: ಅಶ್ಫಾಕ್ ಪೀರಜಾದೆ

ಜಗದ್ವಂದ್ಯ ಭಾರತಂ {ಕಾದಂಬರಿ} ಲೇಖಕರು- ರಾಜಶೇಖರ ಮಠಪತಿ [ರಾಗಂ] “ದೇಶವೆಂದರೆ ದೇವರಿಗೂ ಮಿಗಿಲು, ನಮ್ಮ ಕಲ್ಪನೆಯಲ್ಲಿ ಹುಟ್ಟುವ ದೇವರಗಳು ಕೋಟಿ ಕೋಟಿ. ಅವರ ರೂಪ ಅವತಾರಗಳು ಸಾವಿರ ಸಾವಿರ. ಆದರೆ ದೇಶ ಹಾಗಲ್ಲ.ಅದು ನಾವು ನೆಲಸಿದ ನೆಲೆಯಾಗಿ ನೆಲವಷ್ಟೆ ಅಲ್ಲ. ನಮ್ಮ ಅನ್ನ, ಅಸ್ತಿತ್ವ, ಸ್ವಾತಂತ್ರ್ಯಗಳ ಭರವಸೆ. ನಾವು ಕಂಡು ಮುಟ್ಟಿ ಅನುಭವಿಸಬಹುದಾದ ವಾಸ್ತವ. ದೇಶ ಭದ್ರವಾಗಿದ್ದರೆ ನಾವೂ ಭದ್ರ. ನಮ್ಮ ನಾಳೆಗಳೂ ಭದ್ರ. ದೇಶದ ಗೌರವಕ್ಕೆ ಧಕ್ಕೆಯಾಗದಂತೆ ಬದುಕುಬೇಕು” ಇದು ಮುಸ್ಲಿಂ ಕುಟುಂಬವೊಂದರ ಆದರ್ಶ ಮತ್ತು … Read more

“ಚೌಕಟ್ಟಿನಾಚೆ” ಒಂದು ತೌಲನಿಕ ಕೃತಿ: ಕೆ.ಎಂ.ವಿಶ್ವನಾಥ ಮರತೂರ

ಅನುಭವಗಳಾದರೆ ಅಕ್ಷರಗಳ ಜೊತೆಗೆ ಆಟವಾಡಬಹುದು. ನಮ್ಮೊಳಗೆ ಕಾಡಿದ ಅದೆಷ್ಟೊ ವಿಷಯಗಳಿಗೆ ಧ್ವನಿಯಾಗಬಹುದು. ಇಂತಹದ್ದೆ ಪ್ರಯತ್ನ “ಚೌಕಟ್ಟಿನಾಚೆ” ಕೃತಿ ಪ್ರಯತ್ನ ಮಾಡಿದೆ. ಸಮಾಜದಲ್ಲಿರುವ ಅನೇಕ ವಿಷಯಗಳು ಸಮಯ ಬಂದಂತೆ ನಮಗೆ ಕಾಡಲಾರಂಭಿಸುತ್ತವೆ ಅವಶ್ಯಕ ಮತ್ತು ಅನಾವಶ್ಯಕ ಎನ್ನುವ ವಿಚಾರಗಳತ್ತ ತೊಳಲಾಡುತ್ತವೆ. ಯಾವುದು ಸರಿ ಯಾವುದು ತಪ್ಪು ಎನ್ನುವ ವಿಚಾರದತ್ತ ವಿನಮಯದತ್ತ ಕೇಂದ್ರಿಕೃತವಾಗುತ್ತವೆ. ಇಂತಹ ವಿಚಾರಗಳತ್ತ ಹೊರಳುವುದೇ “ಚೌಕಟ್ಟಿನಾಚೆ” ಕೃತಿಯ ಮುಖ್ಯ ಉದ್ದೇಶವಾಗಿದೆ. ಲೇಖಕರು ತಮ್ಮ ಲೇಖನಗಳ ಮೂಲಕ ಬೀದರ ಜಿಲ್ಲೆಯ ಸಾಹಿತ್ಯದ ಕೊಡುಗೆ ಅದರ ಆಳ ಅಗಲ ತಿಳಿಸುವುದಕ್ಕೆ … Read more

ಶ್ರೀ ಗುರೂಜಿ ಹೇಳಿದ ಕಥೆಗಳು: ಹೊರಾ.ಪರಮೇಶ್ ಹೊಡೇನೂರು

ಅದೊಂದು ಶನಿವಾರದ ಮಧ್ಯಾಹ್ನದ ಬಿಡುವಿನ ಸುದಿನ. ಅರಕಲಗೂಡಿನ ಕೇಂದ್ರ ಕನ್ನಡ ಸಾಹಿತ್ಯ ವೇದಿಕೆಯ ತಾಲ್ಲೂಕು ಘಟಕದ ಉದ್ಘಾಟನಾ ಕಾರ್ಯಕ್ರಮಕ್ಕಾಗಿ ಹಾಸನದ ಆದಿಚುಂಚನಗಿರಿ ಶಾಖಾ ಮಠದ ಪೂಜ್ಯ ಶ್ರೀ ಶ್ರೀ ಶಂಭುನಾಥ ಸ್ವಾಮೀಜಿ ಅವರ ಸಲಹೆ ಮಾರ್ಗದರ್ಶನ ಪಡೆಯಲು, ಬಿಜಿಎಸ್ ಕಾಲೇಜಿನ ಪ್ರಾಂಶುಪಾಲರಾದ ಮಹೇಶ್ ಹೊಡೇನೂರು ಅವರ ಸಲಹೆಯಂತೆ, ನಿಯೋಜಿತ ಅಧ್ಯಕ್ಷ ಗಂಗೇಶ್ ಬಸವನಹಳ್ಳಿ, ಶಿವಣ್ಣ ಕೆರೆಕೋಡಿ ಮತ್ತು ಆರ್. ಬಿ.ರಂಗನಾಥ್ ಅವರೊಂದಿಗೆ ಶ್ರೀ ಮಠಕ್ಕೆ ಪ್ರವೇಶಿಸಿದೆವು. ಈ ಪವಿತ್ರವಾದ ಮಠದೊಳಗೆ ನನ್ನ ಮೊದಲ ಪ್ರವೇಶವೂ ಅದೇ ಆಗಿತ್ತು. … Read more

‘ಅವ್ವ ಮತ್ತು ಅಬ್ಬಲಿಗೆ’ ಪುಸ್ತಕ ಪರಿಚಯ..: ಸಚಿನ್ ಅಂಕೋಲಾ

ವೃತ್ತಿಯಲ್ಲಿ ಶಿಕ್ಷಕಿಯಾಗಿರುವ ಶಿರಸಿಯ ಶೋಭಾ ಹಿರೇಕೈ ಅವರ ಚೊಚ್ಚಲ ಕವನ ಸಂಕಲನ ಈ ‘ಅವ್ವ ಮತ್ತು ಅಬ್ಬಲಿಗೆ’. ಸುಮಾರು ನಲವತ್ತು ಕವಿತೆಗಳನ್ನು ಒಳಗೊಂಡಿರುವ ಈ ಸಂಕಲನವನ್ನು ಹಿರಿಯ ಕವಿ ವಿಷ್ಣು ನಾಯ್ಕರು ತಮ್ಮ ಸುದೀರ್ಘ ಮುನ್ನುಡಿಯ ಆರಂಭದಲ್ಲಿಯೇ ‘ಇದೊಂದು ದೇಸಿ ಚಿಂತನೆಯ ನೆಲ ಮೂಲದ ಕವನ ಗುಚ್ಛ’ ಎಂದು ಉಲ್ಲೇಖಿಸಿದ್ದಾರೆ. ಈ ಕೃತಿಯ ಶೀರ್ಷಿಕೆಯೇ ಅವರ ಮಾತನ್ನು ಅನುಮೋದಿಸುವಂತಿದೆ. ಕನಕಾಂಬರ ಹೂವನ್ನು ನಮ್ಮ ಆಡುಭಾಷೆಯಲ್ಲಿ ಅಬ್ಬಲಿಗೆ ಅಥವಾ ಅಬ್ಬಲಿ ಹೂವು ಎಂದು ಕರೆಯುತ್ತೇವೆ.ಈ ಅಬ್ಬಲಿಗೆ ಹೂವು ಯಾವುದೇ … Read more

ಈ ನೆಲಮೂಲದ ಅನುಭವ ಮತ್ತು ಅಧ್ಯಯನದ ಘಮಲು “ಹಾಣಾದಿ: ಕೆ.ಎಂ.ವಿಶ್ವನಾಥ ಮರತೂರ.

“ಈ ಬಿಸಿಲಂದ್ರೆ ಅಪ್ಪ ಇದ್ದಂಗೆ, ಮುಂಜಾನೆ ಎಳೆ ಮಗುವಿನಂತೆ, ಮಧ್ಯಾನ ಉರಿ ಬಿಸಿಲಿನಂತೆ ಸಿಡುಕಿನ ಮನುಷ್ಯ, ರಾತ್ರಿ ಬಿಸಿಲು ಬಿಟ್ಟು ಹೋದ ಅವಶೇಷದಂತಿರುತ್ತಿದ್ದ. ಬಿಸಿಲಿನಷ್ಟೆ ಸದ್ದಿಲ್ಲದೆ ಕುದಿಯುತ್ತಿರುವ ಮನುಷ್ಯ” “ನೀರು ಹರಿದು ನುಣುಪಾದ ಜಾರು ಕಲ್ಲುಗಳು. ಉಸುಕು ಮಣ್ಣು ಬೆರೆತು ನೆಲದಲ್ಲಿ ನೀರು ನಿಂತ ಅಗಲವಾದ ಜಾಗ. ಮಧ್ಯೆ ಮಧ್ಯೆ ವಿಚಿತ್ರ ಕೀಟಗಳ ಹಾರಾಟ” ಈ ಮೇಲಿನ ಸಾಲುಗಳು ನಾನು ಇತ್ತೀಚಗೆ ಓದಿರುವ ಕಪಿಲ ಪಿ ಹುಮನಾಬಾದೆ ಎನ್ನುವ ಪ್ರೀತಿಯ ಹರೆಯದ ಹುಡುಗನ “ಹಾಣಾದಿ” ಕಾದಂಬರಿಯ ಸಾಲುಗಳು. … Read more

ಸಾಂಸ್ಕೃತಿಕ ವೀರ ಮೈಲಾರಲಿಂಗ ಪುಸ್ತಕ ವಿಮರ್ಶೆ: ಪ.ನಾ.ಹಳ್ಳಿ.ಹರೀಶ್ ಕುಮಾರ್

ಪುಸ್ತಕ ವಿಮರ್ಶೆ ಪುಸ್ತಕದ ಶೀರ್ಷಿಕೆ;- ಸಾಂಸ್ಕೃತಿಕ ವೀರ ಮೈಲಾರಲಿಂಗ ಲೇಖಕರು:- ಡಾ.ಚಿಕ್ಕಣ್ಣ ಯಣ್ಣೆಕಟ್ಟೆ. ಪ್ರಕಾಶನ:- ಗಡಿನಾಡ ಜಾನಪದ ಸಂಪರ್ಕಾಧ್ಯಯನ ಕೇಂದ್ರ ಪ್ರತಿಷ್ಠಾನ. ಕಾಳಿದಾಸ ನಗರ. ಸಿರಾ. ತುಮಕೂರು ಜಿಲ್ಲೆ. ಬೆಲೆ:- 150ರೂ ಪ್ರಥಮ ಮುದ್ರಣ: 2019 ಪುಟಗಳು: 214 ಡಾ.ಚಿಕ್ಕಣ್ಣ ಯಣ್ಣೆಕಟ್ಟೆ ವಿರಚಿತ ಸಾಂಸ್ಕೃತಿಕ ವೀರ ಮೈಲಾರಲಿಂಗ ಕೃತಿಯು ಕ್ಷೇತ್ರ ಕಾರ್ಯಾಧಾರಿತ ಅಧ್ಯಯನದಿಂದ ಸಂಗ್ರಹಿಸಿದ ಪ್ರತ್ಯಕ್ಷ ಸಾಕ್ಷಿಯಾಧಾರಿತ ಮಾಹಿತಿಗಳನ್ನೊಳಗೊಂಡ ರಚನೆಯಾಗಿದ್ದು ನಾಡಿನ ಸಾಂಸ್ಕೃತಿಕ ಹಾಗೂ ಜನಪದ ದೈವ ಮೈಲಾರಲಿಂಗಪ್ಪನ ಐತಿಹ್ಯ ಕುರಿತಾದ ಸಂಪೂರ್ಣ ಚಿತ್ರಣವನ್ನು ಓದುಗರಿಗೆ ಕಟ್ಟಿಕೊಡುವಲ್ಲಿ … Read more

‘ಗೀರು’ ನನ್ನ ಮನಸ್ಸಲ್ಲಿ ಗೀಚಿದ್ದು – ಗೀರು ಕಥಾಸಂಕಲನ ವಿಮರ್ಶೆ: ಕೊಟ್ರೇಶ್ ಕೊಟ್ಟೂರು

ಕನ್ನಡ ಕಥಾ ಪರಂಪರೆಯಲ್ಲಿ ಮಹಿಳಾಪರ ಕಥೆಗಳು ಬರುವುದು ತುಂಬಾ ಮುಖ್ಯವಾಗಿದೆ. ಕನ್ನಡ ಕಥೆಗಳಲ್ಲಿ ಮಹಿಳಾ ಅಸ್ಮಿತೆಯನ್ನು ಉಳಿಸಿಕೊಂಡು ಹೋಗುವ ಕಥೆಗಳು ಇತ್ತೀಚಿಗೆ ಅಪರೂಪವಾಗಿದೆ. ಮತ್ತು ನನಗದು ಸ್ವಲ್ಪ ಸಮಾಧಾನವಿದೆ ಅಂತಹ ಸಮಾಧಾನ ತರುವಲ್ಲಿ ದೀಪ್ತಿ ಭದ್ರಾವತಿ ಅವರ ಗೀರು ಕಥಾಸಂಕಲನ ಯಶಸ್ವಿಯಾಗಿದೆ. ಬಹುಶಃ ಇದರಲ್ಲಿನ ಎಲ್ಲಾ ಕಥೆಗಳಲ್ಲೂ ಮಹಿಳೆ ಮುಖ್ಯಪಾತ್ರವಹಿಸಿ, ಬದುಕಿನ ಕಾಲಘಟ್ಟದಲ್ಲಿ ಅವಳ ಪಾತ್ರ ಎಷ್ಟು ಮುಖ್ಯ ಎನ್ನುವುದನ್ನು ಸಾರಿ ಸಾರಿ ಹೇಳುತ್ತದೆ. ಈ ಕಥೆಗಳಲ್ಲಿನ ಮಹಿಳೆ ತಾನು ಅನುಭವಿಸುವ ಕಷ್ಟಗಳನ್ನು ನೋಡಿದರೆ ಕರುಳು ಕಿತ್ತು … Read more

“ಉತ್ತಮ ಸಮಾಜಕ್ಕೆ ಮಿಡಿಯುವ ಭಾವ ಬುಗುರಿ”: ಯಲ್ಲಪ್ಪ ಎಮ್ ಮರ್ಚೇಡ್

ಪುಸ್ತಕ: ಭಾವ ಬುಗುರಿ ಕೃತಿ ಕತೃ: ಶ್ರೀದೇವಿ ಹೂಗಾರ, ಬೀದರ ಬೆಲೆ:100 ರೂ ಕನ್ನಡ ಕಾವ್ಯ ಪರಂಪರೆಯಲ್ಲಿ ಹಲವಾರು ಕವಿ ಗಣಗಳು ಬೆಳೆದು ಬೆಳೆಸುತ್ತಾ ಬೆಳೆಯುತ್ತಿರುವುದನ್ನು ಕಾಣಬಹುದಾಗಿದೆ ಕನ್ನಡ ಸಾಹಿತ್ಯ ಸಾಗರ ತುಂಬಾ ವಿಶಾಲವಾದದ್ದು ಪ್ರಾಚೀನ ಕಾಲದ ದಾಸ ಶರಣ ಸಾಹಿತ್ಯ ಆಧುನಿಕ ಕನ್ನಡ ಕಾವ್ಯ ಬಂಡಾಯ ದಲಿತ ಸಾಹಿತ್ಯ ಇಂದು ಹೆಮ್ಮರವಾಗಿ ಬೆಳೆದಿದೆ. ಸಾಹಿತ್ಯ ಸಮ್ ಪ್ರೀತಿಯು ಇಂದು ಯುವಜನತೆಯ ಮನಸೆಳೆದು ಕಾವ್ಯ ಜಗತ್ತಿನ ಕಡೆಗೆ ಕೈಬೀಸಿ ಕರೆಯುತ್ತಿದೆ ಆಧುನಿಕ ಕಾಲದ ನವ ನವ ತಂತ್ರಜ್ಞಾನದ … Read more

ನಿಷೇಧಕ್ಕೊಳಪಟ್ಟ ಆ ಒಂದು ನೋಟು- ವಿಮರ್ಶೆ: ಸಚಿನ್ ಅಂಕೋಲಾ..

ಕವಿತೆಗಳ ಮೂಲಕವೇ ಪರಿಚಿತರಾದ ವಿಲ್ಸನ್ ಕಟೀಲ್ ಅವರ ಚೊಚ್ಚಲ ಕನ್ನಡ ಕವಿತೆಗಳ ಸಂಕಲನವನ್ನು ಓದುವ ಈ ಹೊತ್ತಿಗೆ ಅವರೊಬ್ಬ ಪ್ರಭುದ್ಧ, ವೈಚಾರಿಕ, ಸಾಮಾಜಿಕ ಕಳಕಳಿಯುಳ್ಳ, ಸರಳ ವ್ಯಕ್ತಿತ್ವದ ವಿಶೇಷ ಕವಿಯಾಗಿ ನಮ್ಮೆಲ್ಲರಿಗೂ ಆಪ್ತರಾದವರು.. ಸಮಾಜದಲ್ಲಿ ಜನಸಾಮಾನ್ಯರ ನೆಮ್ಮದಿಯ ಬದುಕಿಗೆ ಘಾಸಿಯಾದಂತೆಲ್ಲಾ ತಾವು ಲೇಖನಿಯ ಮೂಲಕ ತಕ್ಷಣದಲ್ಲಿ ಪ್ರತಿಕ್ರಿಯಿಸುವ ವಿಲ್ಸನ್ ಕಟೀಲ್ ಅವರು ಈ ದಿನಗಳ ಬಹಳ ಅಗತ್ಯದ ಕವಿ ಮತ್ತು ಅವರ ಕವಿತೆಗಳು ಇಂದಿನ ಅತ್ಯಾವಶ್ಯಕ ರಚನೆಗಳಾಗಿವೆ.. ಪ್ರಸ್ತುತ “ನಿಷೇಧಕ್ಕೊಳಪಟ್ಟ ಒಂದು ನೋಟು” ಕವಿತೆಗಳ ಸಂಕಲನ ಯಾವ … Read more

ಮಾತಿಗೂ ಮನಸ್ಸಿಗೂ ಮೌನಯುದ್ಧ ಆರಂಭವಾಗಿದೆ: ಜ ಹಾನ್ ಆರಾ

ವಾರದ ಹಿಂದೆಯಷ್ಟೆ ನನ್ನಲ್ಲಿಯೂ ಅನೇಕ ವಸ್ತುವಿಷಯಗಳು ತಲ್ಲಣಗಳನ್ನು ತಂದು ಮಾತನ್ನು ಮನಸ್ಸನ್ನು ಯುದ್ಧಕ್ಕೆ ನಿಲ್ಲಿಸಿರುವಂತಹ ಕವಿ ಸುರೇಶ ಎಲ್.ರಾಜಮಾನೆಯವರ ‘ಮೌನಯುದ್ಧ’ ಕವನ ಸಂಕಲನ ಕೈಗೆ ಸಿಕ್ಕಿತು. ಕಳೆದ 21ನೇ ಅಕ್ಟೋಬರರಂದು ಲೋಕಾರ್ಪಣೆಯಾದ ಈ ಕೃತಿ ಸುರೇಶನವರ ಎರಡನೇ ಹೆಗ್ಗುರುತು. ಅನುಭವ ಕಲ್ಪನೆ ಆಸೆಗಳ ಹೂರಣವನ್ನು ಸಿಹಿ ಹೊಳಿಗೆಯಾಗಿದರೂ ರುದ್ರ ಭಯಂಕರ ಭಾವನೆಗಳು ಇದ್ದರೂ ಶೀರ್ಷಿಕೆಯೇ ಅನೇಕ ಒಳಾರ್ಥ ಜಾಲವಾಗಿ ಹರಡಿದೆ. ಈ ಜಾಲವನ್ನು ಜಾಲಾಡಿಸಿದಾಗ ಕವಿ ಮನಸ್ಸಿನ ಆಶಯ ಪ್ರೇಮದ ನದಿಯಲ್ಲಿ, ತನ್ನತನದ ನಿಲುವಿನಲ್ಲಿ ತಾನು ಅನುಭವಿಸಿದ … Read more

ಚೇತನ್ ನಾಗರಾಜರ ಖಾಲಿ ಕೋಣೆಯ ಹಾಡು: ಸುರೇಶ ಎಲ್.ರಾಜಮಾನೆ, ರನ್ನಬೆಳಗಲಿ.

ಗಜಲ್ ಸಂಕಲನ: ಖಾಲಿಕೋಣೆಯ ಹಾಡು ಲೇಖಕರು: ಚೇತನ್ ನಾಗರಾಳ ಅವಲೋಕನ: ಸುರೇಶ ಎಲ್.ರಾಜಮಾನೆ, ರನ್ನಬೆಳಗಲಿ. ಆತ್ಮೀಯ, ಪ್ರೀತಿಯ ಗೆಳೆಯ ಚೇತನ್ ನಾಗರಾಳ ಬರೆದ #ಖಾಲಿಕೋಣೆಯ_ಹಾಡು” ಗಜಲ್ ಸಂಕಲನ ಓದಿದಾಗ ನನ್ನ ಓದಿಗೆ ದಕ್ಕಿದ್ದಿಷ್ಟು… ಶೃಂಗಾರಕಾವ್ಯ, ರಮ್ಯಕಾವ್ಯ, ರಮಣೀಯ ಕಾವ್ಯ, ಮನಮೋಹಕ ಕಾವ್ಯ ಪ್ರಕಾರ ಎಂದು ಕರೆಸಿಕೊಳ್ಳುವ ಗಜಲ್ ಚೇತನ್ ನಾಗರಾಳನ ಭಾವದ ತೆಕ್ಕೆಯಲಿ ಸಿಕ್ಕು ದಿಕ್ಕು ದಿಕ್ಕುಗಳನ್ನೇ ಸಂಚರಿಸಿ ಎಲ್ಲ ಪ್ರಕಾರದ ಭಾವಗಳನ್ನು ವಿಶೇಷವಾಗಿ, ವಿಶಿಷ್ಟವಾಗಿ ಮತ್ತು ವಿಸ್ಮಯವಾಗಿ ಕಟ್ಟಿಕೊಟ್ಟ ಬಗೆ ಇಷ್ಟವಾಗುತ್ತದೆ. ಎಲ್ಲವನ್ನು ಹೇಳುವಾಸೆ ಆಗಿದೆ … Read more

“ಮಳೆಬಿಲ್ಲು” ಪುಸ್ತಕಾವಲೋಕನ: ಯಲ್ಲಪ್ಪ ಎಮ್ ಮರ್ಚೇಡ್

ಕವನ ಸಂಕಲನ: ಮಳೆಬಿಲ್ಲು ಲೇಖಕರು: ಶಿವಶಂಕರ ಕಡದಿನ್ನಿ ಪ್ರಕಾಶಕರು: ತಾಯಿ ಪ್ರಕಾಶನ, ಮಾನ್ವಿ ಮೊ.ನಂ: 7899211759 ಪುಸ್ತಕಾವಲೋಕನ: ಯಲ್ಲಪ್ಪ ಎಮ್ ಮರ್ಚೇಡ್ ಕನ್ನಡ ಸಾಹಿತ್ಯ ಪರಂಪರೆಯನ್ನು ಗತಕಾಲದಲ್ಲೂ ಬರೆದು ಪೋಷಿಸಿಕೊಂಡು ಬಂದ ಕವಿ ಗಣವನ್ನೇ ಕಾಣಬಹುದು. ಆಧುನಿಕ ಯುಗದಲ್ಲಿಯೋ ಕಾಣಬಹುದು, ಸಾಹಿತ್ಯ ರಚಿಸುವ ಕವಿ ಬಳಗಕ್ಕೆ ಕೊರತೆ ಇಲ್ಲ, ಕನ್ನಡ ಸಾಹಿತ್ಯ ಕೃಷಿಯಲ್ಲಿ ಅನೇಕ ಸಾಹಿತಿಗಳು ಬೆಳೆದಿದ್ದಾರೆ, ಬೆಳೆಯುತ್ತಿದ್ದಾರೆ, ಮತ್ತು ಬೆಳೆಯುತ್ತಲಿದ್ದಾರೆ, ಆ ಸಾಲಿನಲ್ಲಿ ಬೆಳೆಯುವ ಸಿರಿ ಮೊಳೆಕೆಯಲ್ಲಿ ಕಾಣುವಂತೆ ಯುವಕವಿ “ಶಿವಶಂಕರ ಕಡದಿನ್ನಿ” ಹೆದ್ದೊರೆ ನಾಡೆಂದೆ … Read more

ಸಾಮಾಜಿಕ ಸಂವೇಧನೆಯಲ್ಲಿ ಉಸಿರು ಬಿಗಿ ಹಿಡಿದ ಭವರಿ: ಕೆ.ಎಂ.ವಿಶ್ವನಾಥ ಮರತೂರ.

ಈ ಭವರಿಗಾಗಿ ಒಂದು ದಿನ ಕಾಯಬೇಕಾಯಿತು. ಪಾರ್ವತಿ ಸೋನಾರೆಯವರು ಕರೆ ಮಾಡಿ ಪುಸ್ತಕ ಓದಿ ಸರ್ ಎಂದರು. ಅವರ ಮಾತಿನಲ್ಲಿ ಒಬ್ಬ ಕಥೆಗಾರ ತನ್ನ ಮೊದಲ ಕಥಾ ಸಂಕಲನದ ಬಗ್ಗೆ ಅವರಿಗಿರುವ ಕಾಳಜಿ ಎದ್ದು ಕಂಡಿತು. ಭವರಿ ಕೈಸೇರಿದಳು. ಭಾರಿ ಒತ್ತಡದ ಕೆಲಸಗಳು. ವೃತ್ತಿ ಹಾಗೂ ಪ್ರವೃತ್ತಿಗಳ ಮಧ್ಯೆ ಪ್ರತಿದಿನ ಜಟಾಪಟಿ ಜೀವನ ನಮ್ಮದು ಆದರೂ ಭವರಿ ಯಾರು ಎಂಬ ಪ್ರಶ್ನೆ ಕಾಡಿದಾಗ “ಭವರಿ” ಕಥಾಸಂಕಲನ ಓದಬೇಕಾಯಿತು. ಇಲ್ಲಿ ಭವರಿ ಒಬ್ಬಳೆ ಅಲ್ಲಾ ಎಂಬುವುದು ಅರ್ಥವಾಯಿತು. ಬಂಜಗೇರೆ … Read more

ಬಂದೂಕು ಹಿಡಿದ ಕೈಗಳು ಪುಸ್ತಕಾವಲೋಕನ: ಸುರೇಶ ಎಲ್.ರಾಜಮಾನೆ, ರನ್ನಬೆಳಗಲಿ.

ಕವನ ಸಂಕಲನ: ಬಂದೂಕು ಹಿಡಿದ ಕೈಗಳು ಲೇಖಕಿ: ಕು.ಅಂಜಲಿ ಬೆಳಗಲ್, ಹೊಸಪೇಟೆ ಬಂದೂಕು ಹಿಡಿದ ಕೈಗಳಿಂದ ಎದೆಗಿಳಿದ ಗುಂಡುಗಳು (ಕವಿತೆಗಳು)….. ಕನ್ನಡದ ಕೆಚ್ಚೆದೆಯ ಯುವ ಕವಯಿತ್ರಿ ಕುಮಾರಿ ಅಂಜಲಿ ಬೆಳಗಲ್ ಅವರ “ಬಂದೂಕು ಹಿಡಿದ ಕೈಗಳು” ಕವನ ಸಂಕಲನ ಕನ್ನಡ ಸಾಹಿತ್ಯದಲ್ಲಿ ಮೊಳಗುವ ಗಂಟಾನಾದವೇ ಸರಿ. ಬದುಕಿನ ಏಳು ಬೀಳುಗಳೊಂದಿಗೆ ಬದುಕಿನ ಚಿತ್ರಣವನ್ನು ಹಾಗು ಆಸರೆಯಾದ ತೃಣವನ್ನೂ ಮನಸಾರೆ ನೆನೆಯುವ ಮತ್ತು ಕವಿತೆಯ ಮೂಲಕ ಕೃತಜ್ಞತೆ ಸಲ್ಲಿಸುವ ಕವಿಭಾವ ಅದ್ಭುತ. ಕವಯಿತ್ರಿ ಯುವಪೀಳಿಗೆಯ ಬರಹಗಾರರಿಗೆ ಮಾದರಿಯಾಗಿ ನಿಲ್ಲಬಲ್ಲ … Read more

ಮುರಿದ ಟೊಂಗೆಯ ಚಿಗುರು ಪುಸ್ತಕಾವಲೋಕನ: ಸುರೇಶ ಎಲ್.ರಾಜಮಾನೆ

ಕವನಸಂಕಲನ; “ಮುರಿದ ಟೊಂಗೆಯ ಚಿಗುರು” ಲೇಖಕರು; ಸೂಗುರೇಶ ಹಿರೇಮಠ(ಸುಹಿ) ಪುಸ್ತಕಾವಲೋಕನ; ಸುರೇಶ ಎಲ್.ರಾಜಮಾನೆ. ಚಿಗುರಿನ ಕವಿತೆಗಳೊಂದಿಗೆ ಮಾತಿಗಿಳಿದಾಗ…. ಇತ್ತೀಚಿಗೆ ತಾಂತ್ರಿಕ ಜಗತ್ತು ತನ್ನದೇ ಆದ ವೇಗ ಪಡೆದುಕೊಳ್ಳುತ್ತಿರುವದು ನಮ್ಮೆಲ್ಲರ ಕಣ್ಮುಂದಿರುವ ಸತ್ಯ. ಇದರ ಹಿನ್ನೆಲೆಯಲ್ಲಿ ಮುಖಪುಟದ ಮೂಲಕ ಸಾಹಿತ್ಯ ಲೋಕಕ್ಕೆ ಹೊಸ ಹೊಸ ಪ್ರತಿಭೆಗಳು ಲಗ್ಗೆ ಇಡುತ್ತಿವೆ ಎಲ್ಲರ ಮನಸನ್ನು ಆವರಿಸುತ್ತಿವೆ. ಹೀಗೆ ಅಂತರ್ಜಾಲದ ಮೂಲಕ ನನ್ನ ಅಂತರಂಗವನ್ನು ಸೇರಿಕೊಂಡ ಗೆಳೆಯ ಸೂಗುರೇಶ ಹಿರೇಮಠ ಅದರಾಚೆಗೂ ಭಾವನಾತ್ಮಕ ಬದುಕಿನ ದಾರಿಯಲಿ ಬದುಕಿರುವ ಒಬ್ಬ ಭಾವುಕ ಜೀವಿ. ಕವಿತೆಗಳಿಂದಲೇ … Read more

ಬಲ್ಲಾಳರ ಬಂಡಾಯ: ಪ್ರೇಮಾ ಟಿ ಎಮ್ ಆರ್

ಒಳ್ಳೆಯ ಓದುಗ ವಿಮರ್ಶಕನಾಗುತ್ತಾನೆ ನಿನ್ನೆ ಮೊನ್ನೆ  ಎಲ್ಲಿಯೋ ಓದಿದ ನೆನಪು. ಬಹುಶಹ ಗಂಗಾಧರ್ ಸರ್ 'ನನ್ನ ಪುಟ'ದಲ್ಲಿ?  ನಾನೋ ವಿಮರ್ಶೆ ನನಗೆ ಒಗ್ಗಲ್ಲ ಎನ್ನುತ್ತಲೇ ಹಾಗೆ ಓದಿ ಹೀಗೆ ತಲೆ ಕೊಡವಿಕೊಳ್ಳುವ ಜಾತಿ. ಆದರೆ ಓದಿ ಬದಿಗಿಟ್ಟಮೇಲೂ ಬಿಡದಲೇ  ಬೆನ್ನಿಗೆ ಬಿದ್ದು ದನಿಯಾಗಿ ಕಾಡಿದ ಕ್ರತಿಗಳ ಕಾರಣದಿಂದಲೇ ಒಮ್ಮೊಮ್ಮೆ ನೋಡೋಣವೆಂತಲೇ ಕಚ್ಚಿ ಕೂತಿದ್ದಿದೆ. ಅಂಥ ಕ್ರತಿಗಳಲ್ಲೊಂದು ಇತ್ತೀಚೆಗೆ ಕೈಗೆ ಬಂದ ಪುಸ್ತಕ ಬಲ್ಲಾಳರ 'ಬಂಡಾಯ'.  ತಮ್ಮ ಕೊನೆಯ ದಿನಗಳಲ್ಲಿ ಬೆಂಗಳೂರಿನಲ್ಲಿದ್ದು ೩೦೦೮ರಲ್ಲಿ ನಿಧನರಾದ  ಹಿರಿಯ ಸಾಹಿತಿ ವ್ಯಾಸರಾಯ … Read more

ಬಂಡಾಯದ ಪ್ರತಿಬಿಂಬದಂತಿರುವ “ಶಬರಿಯರು” ಕೃತಿ: ದಂಡಿನಶಿವರ ಮಂಜುನಾಥ್

ಕವಿ, ಕಥೆಗಾರ, ನಾಟಕಕಾರ ಹಡವನಹಳ್ಳಿ ವೀರಣ್ಣಗೌಡರು ಈಗಾಗಲೇ ಸಾಹಿತ್ಯ ಕ್ಷೇತ್ರದಲ್ಲಿ ಗುರುತಿಸಿಕೊಂಡಿರುವ ಪ್ರತಿಭಾನ್ವಿತರು. ಇವರ ಹೊಸಸೃಷ್ಟಿ ‘ಶಬರಿಯರು’ ಕವನ ಸಂಕಲನದ ಬಗ್ಗೆ ಹೇಳಬೇಕೆಂದರೆ ಇಲ್ಲಿನ ಕವಿತೆಗಳಲ್ಲಿ ಕವಿಯು ವರ್ತಮಾನದ ಜಟಿಲತೆಗಳನ್ನು ಅಭಿವ್ಯಕ್ತಪಡಿಸಿದ್ದಾರೆ. ಸಾಲುಗಳು ಸರಳವಾಗಿದ್ದರೂ ಕವಿತೆಗಳು ಹತ್ತು ಹಲವು ಭಾವಗಳನ್ನ ಧ್ವನಿಸುತ್ತವೆ. ಸಂಕಲನದಲ್ಲಿರುವ ಕವಿತೆ, ಕಥನಕಾವ್ಯ ಮತ್ತು ವಚನ ಪ್ರಾಕಾರಗಳಲ್ಲಿ ಒಂದು ವಿಭಿನ್ನತೆಯನ್ನು ಗುರುತಿಸಬಹುದಾಗಿದೆ.   ‘ಶಬರಿಯರು’ ಸಂಕಲನದಲ್ಲಿರುವ ಕೆಲವು ಕವಿತೆಗಳು ಸಾಮಾಜಿಕ ನ್ಯಾಯದ ಹಕ್ಕೊತ್ತಾಯದ ಜೊತೆಗೆ ದಲಿತ-ಬಂಡಾಯದ ಪ್ರತಿಬಿಂಬಗಳಂತೆ ಗೋಚರಿಸುತ್ತವೆ. ಬುದ್ದ, ಬಸವ, ಗಾಂಧಿ, ಅಂಬೇಡ್ಕರ್ … Read more

ಕಪ್ಪು ಹುಡುಗಿ: ಸುನೀತಾ ಕುಶಾಲನಗರ

     “ಮಡಿಕೇರಿ ಮಂಗಳೂರು ರಾಜ್ಯ ಹೆದ್ದಾರಿಯ ನಡುವೆ ಸಿಗುವ ಸುಳ್ಯದ ಸಮೀಪದ ಕಲ್ಲುಗುಂಡಿ ಎಂಬ ಸಣ್ಣಪೇಟೆಯಿಂದ ಒಂದಿಷ್ಟು ಊರೊಳಗೆ ಹೋದರೆ ಸಿಗುವ ಚೆಂಬು ಎಂಬ ಪುಟ್ಟ ಹಳ್ಳಿಯ ಹೊಸೂರು ಎಂಬಲ್ಲಿ ಕುಳಿತುಕೊಂಡು ಜಗತ್ತಿಗೆ ಪ್ರತಿಕ್ರಿಯಿಸುತ್ತಿರುವ ಶ್ರೀಮತಿ ಸಂಗೀತಾ ರವಿರಾಜ್ ಅವರಿಗೆ ಸಾಹಿತ್ಯವೆಂದರೆ ಒಂದು ರೀತಿಯ ಭರವಸೆ” ಎನ್ನುತ್ತಾರೆ ಬೆನ್ನುಡಿಸುತ್ತಾ ಡಾ|| ಪುರುಷೋತ್ತಮ ಬಿಳಿಮಲೆಯವರು.  ದಿಟ! ಬೆರಗುಗೊಳಿಸಿದ ಕಾಲ  ತಲ್ಲಣಗಳ ರಂಗಲ್ಲಿಯ ಚುಕ್ಕಿ ಉತ್ಸಾಹದ ಮೂಟೆ ಸಕ್ಕರೆಯ ಸಾಲು ಬಿತ್ತುತ್ತಾ ನಡೆಯುವೆನು ಹೆಜ್ಜೆ ಹಾಕಿ ಎಂಬ ಮೆಲುದನಿಯ … Read more

ಭವಿಷ್ಯದ ಭರವಸೆಯ ಕಥೆಗಾರ ತಿರುಪತಿ ಭಂಗಿ: ಮಹಾದೇವ ಎಸ್, ಪಾಟೀಲ

  ಬಾಗಲಕೋಟೆ ನಗರದಗೌರಿ ಪ್ರಕಾಶನದಿಂದ ಲೋಕಾರ್ಪಣೆಗೊಂಡ"ಕೈರೊಟ್ಟಿ"ಕಥಾಸಂಕಲನ,  ಕನ್ನಡ ಸಾಹಿತ್ಯದಲ್ಲಿ ಸಣ್ಣಕಥೆ ಪ್ರಕಾರಸಫಲ ಸಮೃದ್ಧತೆಯಿಂದ, ಉಳಿದೆಲ್ಲ ಪ್ರಕಾರಗಳನ್ನು ಮೀರಿ ನಿಂತು ಹೊಸ ಸಾಧ್ಯತೆಗಳನ್ನು ಹುಟ್ಟು ಹಾಕುತ್ತಿದೆ ಎನ್ನುವ: ಶ್ರೀಇಂದ್ರಕುಮಾರ ಎಚ್,ಬಿ ದಾವಣಗೆರೆ ರವರು "ಕೈರೊಟ್ಟಿ" ಕಥಾಸಂಕಲನಕ್ಕೆ ಮುನ್ನುಡಿ  ಬರೆಯುತ್ತಾ ಹೇಳಿರುವಮಾತು' ತಿರುಪತಿ ಭಂಗಿಯಂತ ಇನ್ನು ಅನೇಕ ಹೋಸ ಕಥೆಗಾರರಿಗೆ ಬೆನ್ತಟ್ಟಿದಂತಾಗಿದೆ'. ಬಾಗಲಕೋಟೆ ಜಿಲ್ಲೆಯ ದೇವನಾಳದ ತಿರುಪತಿ ಭಂಗಿಯವರು ರ್ಬಾಲ್ಯದಲ್ಲಿಯೇಹೆತ್ತವರ ಕಳೆದುಕೊಂಡುಅಜ್ಜ- ಅಜ್ಜಿಯರ ಆಶ್ರಯದಲ್ಲಿ ಬೆಳೆಯುವ ಅನಿವಾರ್ಯದೊಂದಿಗೆ, ಕೂಲಿ- ನಾಲಿ ಮಾಡುತ್ತಲೇ ಓದುವ ಮೂಲಕ; ಅಜ್ಜ- ಅಜ್ಜಿಯರನ್ನು ಕಳೆದುಕೊಂಡು, ತಂಗಿಯನ್ನು … Read more

‘ಅವಳ ನೆನಪಲ್ಲೆ’ ಪುಸ್ತಕ ಪರಿಚಯ: ಸೂಗೂರಯ್ಯ.ಎಸ್.ಹಿರೇಮಠ

ಆತ್ಮೀಯ ಹಿರಿಯರಾದ ಶ್ರೀಯುತ ಪ್ರಕಾಶ ಡಂಗಿ ಯವರ ಕವನ ಸಂಕಲನ "ಅವಳ ನೆನಪಲ್ಲೆ" ಕುರಿತು ನಿಮ್ಮೊಡನೆ ಒಂದಷ್ಟು ಅನಿಸಿಕೆಗಳು ಹಂಚಿಕೊಳ್ಳುವ ಮನಸಾಗಿದೆ…  ಪುಸ್ತಕಬಿಡುಗಡೆಯ ದಿನ ಅದೆಷ್ಟು ಚಂದದ ಕಾರ್ಯಕ್ರಮವಿತ್ತೆಂದರೆ ಶ್ರೀಯುತ ಕುಂ.ವೀ ಸರ್ ರವರ ರುಚಿಕಟ್ಟಾದ ಹಾಸ್ಯಮಯ ಮಾತುಗಳು ಹಾಗೆಯೇ ಕವಯಿತ್ರಿ ಮಮತಾ ಅರಸಿಕೇರೆ  ಮೇಡಂ ಅವರು ಕೃತಿ ಪರಿಚಯ ಮಾಡಿಕೊಟ್ಟರು. ಕವನ ಸಂಕಲನದ ಶಿರ್ಷೀಕೆಯೆ ಮನಸೆಳೆಯುವಂತಿದೆ. ನೋಡಿದ ತಕ್ಷಣವೆ ಇದೊಂದು ಪ್ರೇಮ ಕವಿತೆಗಳ ಸಂಕಲನವೆನ್ನುವುದು ಸರಿ. ಅವಳ ನೆನಪನ್ನು ಸುಂದರ ಭಾವಗಳನ್ನು ಶ್ರೀಯುತ ಪ್ರಕಾಶ ಡಂಗಿಯವರು … Read more