ಇತಿ-ಮಿತಿಗಳ ನಡುವೆ ಅಂದು-ಇಂದಿನ ಮಹಿಳೆ: ತೇಜಸ್ವಿನಿ ಹೆಗ್ಡೆ

 ಪ್ರಾಚೀನ ಕಾಲದಿಂದಲೂ (ವೇದ ಕಾಲವನ್ನು ಬಿಟ್ಟು) ಭಾರತದಲ್ಲಿ ಮಾತ್ರವಲ್ಲ, ವಿಶ್ವದ ಎಲ್ಲೆಡೆಯಲ್ಲೂ ಸ್ತ್ರೀಯನ್ನು ಎರಡನೆಯ ದರ್ಜೆಯ ಪ್ರಜೆಯೆಂದೇ ಪರಿಗಣಿಸಲಾಗಿದೆ. ಆಯಾ ಕಾಲದಲ್ಲಿ ರಚಿತವಾದ ಧರ್ಮಗ್ರಂಥಗಳನ್ನು ಅನುಸರಿಸಿ ಅಥವಾ ಅವುಗಳಲ್ಲಿ ಪ್ರಸ್ತಾಪಿಸಲ್ಪಟ್ಟ ನಿಯಮಾವಳಿಗಳನ್ನು ತಮಗೆ ಮನಬಂದಂತೇ ತಿರುಪಿ, ಅವುಗಳನ್ನೆಲ್ಲಾ ಹೆಣ್ಣಿನ ಮೇಲೆ ಹೇರಿ ಪಿತೃಪ್ರಧಾನ ಸಮಾಜ ಅವಳನ್ನು ಹಲವು ರೀತಿಯಲ್ಲಿ ನಿರ್ಬಂಧಿಸಿ, ದೌರ್ಜನ್ಯವೆಸಗುತ್ತಲೇ ಬಂದಿದೆ.   ಆದರೆ ಸರಿ ಸುಮಾರು ೫,೦೦೦ ವರುಷಗಳ ಹಿಂದಿನ ವೇದದ ಕಾಲದಲ್ಲಿ ಮಹಿಳೆಯರ ಸ್ಥಿತಿ ಉತ್ಕೃಷ್ಟವಾಗಿತ್ತು ಎನ್ನುವುದಕ್ಕೆ ಸಾಕಷ್ಟು ಪುರಾವೆಗಳಿವೆ. ವೇದಕಾಲದ ಪೂರ್ವಾರ್ಧದಲ್ಲಿ … Read more

ಹಿಂತಿರುಗಿ ನೋಡಿದಾಗ: ರುಕ್ಮಿಣಿಮಾಲಾ

೧೯೭೪ನೇ ಇಸವಿಯಲ್ಲಿ ದಕ್ಷಿಣಕನ್ನಡ ಜಿಲ್ಲೆಯ ಬಂಟ್ವಾಳ ತಾಲೂಕಿನ ಮಿತ್ತನಡ್ಕದಲ್ಲಿರುವ ಸರ್ಕಾರೀ ಪ್ರಾಥಮಿಕ ಶಾಲೆಗೆ ಒಂದನೇ ತರಗತಿಗೆ ಸೇರಿದಾಗ ನನ್ನ ವಯಸ್ಸು ಐದು. ಮನೆಯಿಂದ ಶಾಲೆಗೆ ಒಂದು ಮೈಲಿ ನಡೆದೇ ಹೋಗುತ್ತಿದ್ದುದು. ನಮಗೆ ಮಹಮ್ಮದ್ ಎಂಬ ಶಿಕ್ಷಕರು ಅ ಆ ಇ.. ..  ಕನ್ನಡ ಅಕ್ಷರ ಮಾಲೆ ಕಲಿಸಿದವರು. ಅವರ ಮೇಜಿನಮೇಲೆ ನಾಗರಬೆತ್ತ ಸದಾ ಇರುತ್ತಿತ್ತು. ಒಮ್ಮೆಯೂ ನಾನು ಅದರ ಪೆಟ್ಟಿನ ರುಚಿ ಪಡೆದವಳಲ್ಲ! ಆದರೆ ಏಕೋ ಗೊತ್ತಿಲ್ಲ ಆ ಬೆತ್ತದಮೇಲೆ ನನಗೆ ಬಲು ಕೋಪವಿತ್ತು. ನಮ್ಮ ಮೇಸ್ಟರು … Read more

ಸ್ತ್ರೀ, ಸ್ವಾತ೦ತ್ರ್ಯ, ಸ್ತ್ರೀ ಸ್ವಾತ೦ತ್ರ್ಯ: ರೂಪ ಸತೀಶ್

  ಸ್ಪ್ರಿ೦ಗ್ ಟ್ರೀ ಅಪಾರ್ಟ್ಮೆ೦ಟ್ ರೆಸಿಡೆ೦ಟ್ಸ್ ಅಸೋಸಿಯೇಷನ್ನಿನ ನಿಯಮದ೦ತೆ / ಸರದಿಯ೦ತೆ ಈ ಬಾರಿಯ ಅಧ್ಯಕ್ಷೆಯಾಗಿ ಆಯ್ಕೆಯಾಗಿದ್ದು ೪೦೪ ನೇ ಫ್ಲಾಟಿನ ಶಾ೦ತ ಇನಾಮ್ದಾರ್. ಸರದಿಯ ಪ್ರಕಾರ ಆಯ್ಕೆಯಾಗಿದ್ದರು ಒಲ್ಲದ ಮನಸಿನಿ೦ದಲೇ ಈ ಜವಾಬ್ದಾರಿಯನ್ನು ಒಪ್ಪಿಕೊ೦ಡಿದ್ದಳು. ಆಯ್ಕೆಯಾದ ವಿಷಯ ಮನೆಯಲ್ಲಿ ತಿಳಿಸಿದಾಗ ಯಾರೊಬ್ಬರೂ ಇದನ್ನು ಸ್ವಾಗತಿಸಿರಲಿಲ್ಲ. ಬದಲಿಗೆ ಗೇಲಿ ಮಾಡಿ ತಮಾಷೆ ಮಾಡಿದ್ದರು.   ಮು೦ದಿನ ವಾರ ಅ೦ತರಾಷ್ಟ್ರೀಯ ಮಹಿಳಾ ದಿನಾಚರಣೆಯ ಅ೦ಗವಾಗಿ ಅಸೋಸಿಯೇಷನ್ನಿನ ಸಧಸ್ಯರೆಲ್ಲರೂ ಸೇರಿ ಒ೦ದು ಕಾರ್ಯಕ್ರಮ ಆಯೋಜಿಸಿಕೊ೦ಡಿದ್ದು, ಅದಕ್ಕಾಗಿ ಶಾ೦ತ ಅಪಾರ್ಟ್ಮೆ೦ಟಿನ ಹೆ೦ಗಸಿರಿಗೆ … Read more

ಛಾಯಾಗ್ರಹಣ: ರಜನಿ ನಿಟ್ಟೆ

ನಾನು ಬೆಂಗಳೂರಿನ ತಂತಜ್ಞಾನ ಸಂಸ್ಥೆಯಲ್ಲಿ ಉದ್ಯೋಗಿ. ಉಡುಪಿ ಜಿಲ್ಲೆಯ ಕಾರ್ಕಳ ತಾಲೂಕಿನ ಪುಟ್ಟ ಹಳ್ಳಿ ನಿಟ್ಟೆ ನನ್ನೂರು. ನನಗೂ ಎಲ್ಲರಂತೆ ಬಿಡುವಿನ ವೇಳೆ ಕಳೆಯಲು ಕೆಲವು ಹವ್ಯಾಸಗಳು. ಸುಮಾರು ಐದಾರು ವರ್ಷಗಳಿಂದ ತುಂಬಾ ಆಸಕ್ತಿಯಿಂದ ಬೆಳೆಸಿಕೊಂಡು ಬಂದಿರುವ ಒಂದು ಮುಖ್ಯ ಹವ್ಯಾಸ ಛಾಯಾಗ್ರಹಣ. ಹಾಗೆಂದು ನಾನು ವ್ರತ್ತಿಪರ ಛಾಯಾಗ್ರಾಹಕಿಯೆಂದಾಗಲೀ ಅಥವಾ ಪರಿಣಿತೆ ಎಂದಾಗಲಿ ಅಂದುಕೊಳ್ಳಬೇಡಿ. ಮನಸ್ಸಿಗೆ ಇಷ್ಟವಾದದ್ದನ್ನು ನನಗೆ ತಿಳಿದಂತೆ ಸೆರೆಹಿಡಿಯುವುದಷ್ಟೇ ನನಗೆ ತಿಳಿದಿರುವುದು.    ಛಾಯಾಗ್ರಾಹಕಿಯಾಗಿ ಪ್ರಕೃತಿ ಮತ್ತು ಜನಜೀವನದ ಚಿತ್ರಗಳನ್ನು ಸೆರೆಹಿಡಿಯುವುದು ನನಗೆ ತುಂಬಾ … Read more

ಕೊಡಗಿನಲ್ಲಿ ಪ್ರವಾಸೋಧ್ಯಮ ಮತ್ತು ಮಹಿಳೆ: ಸವಿತಾ ಮಡಿಕೇರಿ

ಪುರಾಣ ಕಾಲದಲ್ಲಿ ಮಹಿಳೆಯರಿಗೆ ಉನ್ನತ ಸ್ಥಾನಮಾನವಿತ್ತು. ಒಳ್ಳೆಯ ಗೌರವ ಹಾಗೂ ಬೆಲೆ ಇತ್ತು. ಕ್ರಮೇಣ ಕಾಲ ಬದಲಾದಂತೆ ಮಹಿಳೆಯನ್ನು ಅಡಿಗೆ ಮನೆಗೆ ಸೀಮಿತವಾಗಿಡಲಾಯಿತು. ಮಹಿಳೆ ಎಷ್ಟೇ ಬುದ್ಧಿವಂತಳಾದರೂ ಬೇರೆ ವ್ಯವಹಾರಗಳಲ್ಲಿ ಅವಳಿಗೆ ಪ್ರವೇಶವಿರಲಿಲ್ಲ. ಅವಳಿಗೆ ಹೆಚ್ಚಿನ ವಿದ್ಯಾಭ್ಯಾಸ ದೊರೆಯುತ್ತಿರಲಿಲ್ಲ. ಆದರೆ ಈಗ ಕಾಲ ಬದಲಾಗಿದೆ. ಮಹಿಳೆಯರು ಅಡಿಗೆ ಮನೆಗೆ ಸೀಮಿತರಾಗಿಲ್ಲ. ಮಹಿಳೆ  ಹೊರಜಗತ್ತಿನಲ್ಲಿ ಪುರುಷರಿಗೆ ಸರಿಸಮನಾಗಿ ದುಡಿಯುತ್ತಿದ್ದಾಳೆ. ಜೊತೆಗೆ ಮನೆ ಮಕ್ಕಳನ್ನು ಸರಿಯಾಗಿ ನೋಡಿಕೊಳ್ಳುತ್ತಿದ್ದಾಳೆ. ಪುರುಷರಿಗಿಂತ ಒಂದು ಹೆಜ್ಜೆ ಮುಂದೆಯೇ ಇದ್ದಾಳೆ ಎನ್ನಬಹುದು.ಪ್ರತಿವರ್ಷ ಪರೀಕ್ಷೆಯ ಫಲಿತಾಂಶ ಬಂದಾಗ … Read more

ಯೋಗ ಸಂಜೀವಿನಿ: ಪೂರ್ಣಿಮಾ ಗಿರೀಶ್

ಯೋಗ ಅನ್ನುವುದು ಎಲ್ಲರಿಗೂ ಎಟುಕುವ ವಿದ್ಯೆ. ನಿರಂತರ ಅಭ್ಯಾಸದಿಂದ ಯೋಗವನ್ನು ಕರಗತ ಮಾಡಿಕೊಳ್ಳಲು ಸಾಧ್ಯ. ದಿನದ ೨೪ ಘಂಟೆಗಳಲ್ಲಿ ನಮ್ಮ ದೇಹ ಮತ್ತು ಮನಸ್ಸು ವಿವಿಧ ಕೆಲಸಗಳಲ್ಲಿ, ಯೋಚನೆಗಳಲ್ಲಿ ಲೀನವಾಗಿರುತ್ತದೆ. ಅಗತ್ಯವಾಗಿರುವ ವಿಶ್ರಾಂತಿ ದೊರೆಯದಿದ್ದಾಗ ನಾವು ಮಾಡುವ ಕೆಲಸಗಳು ಪರಿಪೂರ್ಣವಾಗಿರುವುದಿಲ್ಲ ಮತ್ತು ದೇಹ ಅನಾರೋಗ್ಯಕ್ಕೀಡಾಗುವ ಸಾಧ್ಯತೆಗಳು ಬಹಳ. ಯೋಗಭ್ಯಾಸದಲ್ಲಿ ದೀರ್ಘ ಉಸಿರಾಟಕ್ಕೆ ಬಹಳ ಪ್ರಮುಖವಾದ ಸ್ಥಾನವಿದೆ. ದೀರ್ಘ ಉಸಿರಾಟದೊಡನೆ ಮಾಡುವ ಆಸನಗಳಿಂದ ಚಿತ್ತಕ್ಕೆ ಶಾಂತಿ ಮತ್ತು ಸಂಯಮ ದೊರಕಿ ನಮ್ಮ ದಿನನಿತ್ಯದ ಕೆಲಸ ಕಾರ್ಯಗಳನ್ನು ಉತ್ಸಾಹದಿಂದ ಮಾಡಬಹುದಾಗಿದೆ. … Read more

ಸರ್…. ಡ್ರಾಪ್ ಪ್ಲೀಸ್!!: ಸಂತೋಷ್ ಕುಮಾರ್ ಎಲ್. ಎಮ್.

ಒಂದು  ಸುಮಾರು 15 ವರ್ಷಗಳ ಹಿಂದೆ ಮೈಸೂರಿನಲ್ಲಿ PUC ಓದುತ್ತಿದ್ದ ಸಂದರ್ಭ. ಅಪ್ಪ ನನಗೆ ಕೊಡಿಸಿದ ಸೆಕೆಂಡ್ ಹ್ಯಾಂಡ್ ಬೈಸಿಕಲ್ಲು ಮುರಿದು ಮೂಲೆ ಸೇರಿತ್ತು. ಅದರ ರಿಪೇರಿಗೂ ನೂರು ರೂಪಾಯಿ ಇಲ್ಲದ ಪರಿಸ್ಥಿತಿ. ಕಾಲೇಜು ಶುರುವಾಗುತ್ತಿದ್ದುದೇ ಒಂಭತ್ತು ಗಂಟೆಗೆ. ಮೊದಲ ಪಿರಿಯಡ್ ಮುಂಗೋಪಿ ಮತ್ತು ಮಹಾಸಿಡುಕ ಪ್ರೊಫೆಸರ್ ಸಾಂಬಶಿವಯ್ಯನವರದ್ದು. ಆದ್ದರಿಂದ ಅವರು ಕ್ಲಾಸಿಗೆ ಪ್ರವೇಶವಾಗುವ ಮೊದಲೇ ಎಲ್ಲರೂ ಒಳಗಿರಬೇಕಿತ್ತು. ಲೇಟಾಗಿ ಬಂದವರಿಗೆ ಮರದ ಸ್ಕೇಲಿನ ಬಿಸಿಯೇಟು. ಬರದೆ ಹೋದವರ ಮನೆಗೆ absence report. ಇಂತಹ ಸಂದಿಗ್ಧ ಪರಿಸ್ಥಿತಿಯಲ್ಲಿ … Read more

ಭೀಷ್ಮ ಪ್ರತಿಜ್ಞೆ: ಡಾ . ಸಿ.ಎಂ.ಗೋವಿಂದರೆಡ್ಡಿ

ಶ್ರೀ ವ್ಯಾಸಮಹರ್ಷಿಗಳು ತಮ್ಮ ಶಿಷ್ಯರಿಗೆ ಹೇಳಿದ ಮಹಾಭಾರತ ಕಥೆಯನ್ನು, ಅರ್ಜುನತನಯನಾದ ಅಭಿಮನ್ಯುವಿನ ಪುತ್ರ ಪರೀಕ್ಷಿತನ ಮಗನಾದ ಜನಮೇಜಯನು ಸರ್ಪಯಾಗ ಮಾಡುವ ಕಾಲದಲ್ಲಿ ವೈಶಂಪಾಯನನಿಂದ ಕೇಳಿ ತಿಳಿದನು : ಮಹರ್ಷಿ ವಿಶ್ವಾಮಿತ್ರ ಮೇನಕೆಯರ ಮಗಳೂ ಕಣ್ವಮಹರ್ಷಿಗಳ ಸಾಕುಮಗಳೂ ಆದ ಶಕುಂತಲೆಯನ್ನು ವರಿಸಿದವನು ಚಂದ್ರವಂಶದ ರಾಜನಾದ ದುಷ್ಯಂತ. ಈ ದುಷ್ಯಂತ ಶಕುಂತಲೆಯರ ಮಗನೇ ಭರತ. ಭರತನಿಂದಲೇ ಭಾರತವಂಶವಾಯಿತು. ಭರತನ ಮಗ ಸುಹೋತ್ರ ; ಸುಹೋತ್ರನ ಮಗ ಹಸ್ತಿ. ಇವನಿಂದಲೇ ರಾಜಧಾನಿಗೆ ಹಸ್ತಿನಾಪುರವೆಂಬ ಹೆಸರು ಬಂದದ್ದು. ಹಸ್ತಿಯ ಮಗ ಸಂವರಣ ; … Read more

ಚೈಲ್ಡ್ ಲೇಬರ್: ಕ್ರಾಕ್ ಬಾಯ್

        ನವೆಂಬರ್ ತಿಂಗಳ ಚುಮು ಚುಮಿ ಚಳಿಯಲ್ಲಿ ಮಲೆನಾಡಿನಿಂದ ತಂದ ಕೊಟ್ಟೆ ಕಂಬಳಿಯ ಒಳಗೆ ಬೆಚ್ಚಗೆ ಮಲಗಿ ಸುಖ ನಿದ್ರೆಯಲ್ಲಿ ತೇಲುತ್ತಿದ್ದೆ, ಮಲಗಿದ್ದವನನ್ನು ಬಡಿದೆಬ್ಬಿಸುವಂತೆ ಒಂದೇ ಸಮನೆ ನನ್ನ ಮೊಬೈಲ್ ಕೂಗಿಕೊಳ್ಳತೊಡಗಿತು, ಈ ಹಾಳ್ ಮೊಬೈಲು ನನ್ ನಿದ್ದೆ ಹಾಳ್ ಮಾಡಕ್ಕೇ ಇರದೇನೋ ಅನ್ನೋವಷ್ಟು ಸಿಟ್ಟು ಬಂದಿತ್ತು ಆ ಮೊಬೈಲ್ ಮೇಲೆ, ಕೋಪದಿಂದ ಅದರ ಕಡೆಗೆ ತೀಕ್ಷ್ಣ ದೃಷ್ಠಿಯನ್ನು ಬೀರಿ ಅದನ್ನು ಕೈಗೆತ್ತಿಕೊಂಡು, ಬಡ್ಕೋತಿದ್ದ ಅಲಾರಾಂ ಅನ್ನು ಆಫ್ ಮಾಡಿಟ್ಟೆ,  ಟೈಂ ಆಗ್ಲೇ … Read more

ನಾಡ ಹಬ್ಬ ಉಡುಪಿ ಪರ್ಯಾಯ: ವೆಂಕಟೇಶ್ ಪ್ರಸಾದ್

ದೇವಾಲಯಗಳ ನಾಡು , ಅನ್ನಬ್ರಹ್ಮನ ಬೀಡು ಉಡುಪಿಯಲ್ಲಿ ದೀಪಾವಳಿ ತಿ೦ಗಳ ನ೦ತರ ಶ್ರೀ ಕೃಷ್ಣನಿಗೆ ನಿತ್ಯ ಉತ್ಸವಗಳ ಸ೦ಭ್ರಮ.  ಶ್ರೀ ಕೃಷ್ಣ ಮುಖ್ಯಪ್ರಾಣರ ಉತ್ಸವ ಮೂರ್ತಿಗಳು ಅಲ೦ಕೃತ ತೇರುಗಳಲ್ಲಿ ವಿರಾಜಮಾನರಾದರೆ ಭಜಕರು ರಥಬೀದಿಯ ಸುತ್ತ ತೇರನ್ನೆಳೆದು ಕೃತಾರ್ಥರಾಗುತ್ತಾರೆ. ಈ ಉತ್ಸವಗಳಲ್ಲಿ ಮುಖ್ಯವಾದುದು ಜನವರಿ ತಿ೦ಗಳಲ್ಲಿ ಬರುವ ಮಕರಸ೦ಕ್ರಾ೦ತಿ ಉತ್ಸವ ಅ೦ದು ಏಕ ಕಾಲಕ್ಕೆ ಮೂರು ತೇರುಗಳನ್ನೆಳೆದು ಉಡುಪಿಗೆ ಉಡುಪಿಯೇ ಸ೦ಭ್ರಮಿಸುತ್ತದೆ. ಮರುದಿನ ಹಗಲು ಹೊತ್ತಿನಲ್ಲಿ ನಡೆಯುವ ಚೂರ್ಣೋತ್ಸವ ಅಥವಾ ಸುವರ್ಣೊತ್ಸವಕ್ಕೂ ಅಷ್ಟೇ ಸ೦ಖ್ಯೆ ಯಲ್ಲಿ ಜನ ಸೇರುತ್ತಾರೆ. … Read more

ಅಜ್ಞಾತ ಶಿಲ್ಪಿಗಳಿಗೆ ಕೃತಜ್ಞತೆ: ಎಸ್.ಪಿ. ಜಯಣ್ಣಾಚಾರ್ ಶಿಲ್ಪಿ

          ಕನ್ನಡ ನುಡಿನಾಡಿಗಾಗಿ ನೀರುನೆಲಗಳೆಲ್ಲಕಾಗಿ ದುಡಿದು ಮಡಿದ ಎನಿತೊಜನರ ಸರತಿ ನಿಂತ ಸಾಲಿನಲ್ಲಿ ಕಾಡಿನ ಕಗ್ಗಲ್ಲಿನಲ್ಲಿ ಶಿಲ್ಪಕಲೆಯ ಸೌಧಕಟ್ಟಿ ಆಳಿದ ಅರಸು ಕುಲದ ಹೆಸರ ಅನುಗಾಲವು ಸ್ಮರಿಸುವಂತೆ ಗುಡಿಗೋಪುರಗಳ ಎಮಗೆ ಇತ್ತು ತೆರೆಯ ಮರೆಗೆ ಸರಿದು ಹೋದ ಮಹಾಮಹಿಮ ಶಿಲ್ಪಿ ಜನರ ಕೊಡುಗೆ ಏನು ಅಲ್ಪವೇ? ಕವಿ ಸೌರ್ವಭೌಮರಿಗೂ ಎದಿರು ಸ್ಪರ್ಧೆ ನೀಡುವಂತ ಶಿಲ್ಪಕಲಾ ಪ್ರತಿಭೆ ಇದ್ದೂ ಇತಿಹಾಸದಿ ಮೆರೆಯಲಿಲ್ಲ ವೀಣೆವಾದ್ಯದೆದುರು ವೇಣು ಮಿಗಿಲಿದ್ದರೂ ಮಿಂಚದಲ್ಲ ಇಂದಿನ ಶೋದನೆಯೊಳಲ್ಲು ಜಕಣ ಡಕಣರಾರು … Read more

ವಿಸ್ಮಯಭರಿತ ವಿರಾಟ ವಿಶ್ವ (ಕೊನೆಯ ಭಾಗ): ನಾರಾಯಣ ಎಂ.ಎಸ್.

ಇಲ್ಲಿಯವರೆಗೆ ಸಿನಿಮಾ ಎಂದಾಗ ನೆನಪಾಯ್ತು. ನೀವು ‘ಅನಿಮಲ್ಸ್ ಆರ್ ಬ್ಯೂಟಿಫ಼ುಲ್ ಪೀಪಲ್’ ಅನ್ನೋ ಚಿತ್ರ ನೋಡಿದ್ದೀರಾ? ನೋಡಿಲ್ಲದಿದ್ದರೆ ಖಂಡಿತಾ ನೋಡಿ. ಎಲ್ಲರೂ ನೋಡಲೇಬೇಕಾದ ಚಿತ್ರವದು. ಆ ಚಿತ್ರದಲ್ಲಿ, ಆಫ್ರಿಕಾದ ಕಾಡುಗಳಲ್ಲಿ ವಾಸಿಸುವ ಹನಿ ಗೈಡ್ ಹಕ್ಕಿ ಮತ್ತು ಹನಿ ಬ್ಯಾಡ್ಜರ್ ಅಥವಾ ರಾಟೆಲ್ ಎನ್ನುವ ಪ್ರಾಣಿಯ ಜೊತೆಗಿನ ಸಿಂಬಯೋಸಿಸ್ಸಿನ ಸಂಬಂಧವನ್ನು ಅತ್ಯಂತ ಪರಿಣಾಮಕಾರಿಯಾಗಿ ತೋರಿಸಲಾಗಿದೆ. ಈ ಹನಿ ಗೈಡ್ ಹಕ್ಕಿಗೆ ಜೇನುತುಪ್ಪ ಮತ್ತು ರಸವತ್ತಾದ ಜೇನುಮೇಣವೆಂದರೆ ಎಲ್ಲಿಲ್ಲದ ಆಸೆ. ಜೇನು ಹುಳುಗಳು ರಹಸ್ಯವಾಗಿ ಸಂದಿಗೊಂದಿಗಳಲ್ಲಿ ಕಟ್ಟಿರುವ ಜೇನುಗೂಡುಗಳನ್ನು … Read more

ವಿಸ್ಮಯಭರಿತ ವಿರಾಟ ವಿಶ್ವ (ಭಾಗ 1): ನಾರಾಯಣ ಎಂ.ಎಸ್.

ನಿಮಗೆ ನೆನಪಿರಬಹುದೇನೋ? ಇಲ್ಲ, ಖಂಡಿತವಾಗಿಯೂ ನೆನಪಿದ್ದೇ ಇರುತ್ತದೆ. ಏಕೆಂದರೆ, ಬಾಲ್ಯದ ಉತ್ಕಟ ಅನುಭವಗಳ ನೆನಪು ಎಲ್ಲಕ್ಕಿಂತ ಸ್ಪಷ್ಟ ಮತ್ತು ನಿಚ್ಚಳವಾಗಿರುತ್ತದಂತೆ. ನಮ್ಮ ಕೈ ಸೋಕಿದೊಡನೆ ನಾಚಿ ಮುದುಡುವ ಆ ಮುಟ್ಟಿದರೆ ಮುನಿ ಗಿಡ, ಕತ್ತಲಲ್ಲಿ ಮಿಂಚುವ ಆ ಮಿಣಿಕೆ ಹುಳ, ಆ ಬಣ್ಣದ ಚಿತ್ತಾರದ ಪಾತರಗಿತ್ತಿ, ಪರಿಸರಕ್ಕೆ ತಕ್ಕಂತೆ ಬಣ್ಣ ಬದಲಿಸುವ ಆ ಊಸರವಳ್ಳಿ, ಕಾರ್ಮುಗಿಲಿನಲ್ಲಿ ಕಂಡ ಆ ಬೆಳ್ಳಿ ಮಿಂಚು ಮತ್ತು ಆಗಸದಲ್ಲಿನ ರಂಗು ರಂಗಾದ ಮಳೆಬಿಲ್ಲು ಇತ್ಯಾದಿಗಳನ್ನು ನಾವು ನಮ್ಮ ಬೆರಗು ಕಣ್ಗಳಿಂದ ಮನದಣಿಯೆ … Read more

ಬಾಲ ಕಾರ್ಮಿಕ: ಫ್ಲಾಪೀಬಾಯ್

ಅಣ್ಣಾ, ಅಣ್ಣಾ ಏನಾದ್ರೂ ಕೊಡಣ್ಣಾ.. ಅಂತ ದೈನ್ಯತೆಯ ದ್ವನಿಯೊಂದು ಅವನ ಹಿಂದಿನಿಂದ ಕೇಳಿ ಬಂತು. ಹಿಂತಿರುಗಿ ನೋಡಿದಾಗ ಕಾಣಿಸಿದ್ದು, ಎಣ್ಣೆಯೇ ಕಾಣದಿದ್ದ ಕೆದರಿದ ಕೂದಲು, ಕಳೆಗುಂದಿದ್ದ ಬೆಂಗಳೂರಿನ ಡಾಂಬರು ರಸ್ತೆಯಂತಾಗಿದ್ದ ಕಣ್ಣು, ಹೊರಗೆ ಮಾಸಿದ ಹರಕಲು ಬಟೆ, ಬಟ್ಟೆಯೊಳಗೆ ಹೊರಗಿಂದಲೇ ಗೋಚರಿಸುವ ಹಸಿದ ಹೊಟ್ಟೆ. ಆ ಹೊಟ್ಟೆಯ ಒಡೆಯ ಸುಮಾರು ೧೦-೧೧ ಪ್ರಾಯದ ಒಬ್ಬ ಹುಡುಗ. ಅವನನ್ನು ನೋಡುತ್ತಲೇ ಈತ ತನ್ನ ಫ್ಲಾಶ್‌ಬ್ಯಾಕ್‌ಗೆ ಜಾರಿದ..! ಬಹಳ ವರ್ಷಗಳ ಹಿಂದೆ ಈತ ಕೊಳ್ಳೆಗಾಲದಿಂದ ಬೆಂಗಳೂರಿಗೆ ಬಂದಾಗ ಈತನಿಗೂ ಹತ್ತು … Read more

ಜಾದವ್ ಪಯೆಂಗ್ ಒಂಟಿಯಾಗಿ ಬೆಳೆಸಿದ ೧೩೬೦ ಎಕೆರೆ ಕಾಡು: ಮಂಜು ಅರ್ಕಾವತಿ

            ಜಾದವ್ ಪಯೆಂಗ್ ಒಂಟಿಯಾಗಿ ಬೆಳೆಸಿದ ೧೩೬೦ ಎಕೆರೆ ಕಾಡುಸುಮಾರು ಸಲ ನಾವೇ ಅಂದುಕೊಳ್ತಾ ಇರ್‍ತೀವಿ ನಾನು ಒಬ್ನೆ / ಒಬ್ಳೆ ನಾನೇನು ಮಾಡೋಕು ಆಗಲ್ಲ ಅಂತ. ಆದ್ರೆ ದೊಡ್ಡ ಪ್ರವಾಹ ಶುರುವಾಗೋದು ಮೊದಲ ಹನಿಯಿಂದಲೇ, ದೂರದ ಪ್ರಯಾಣ ಶುರುವಾಗೋದು ಮೊದಲ ಹೆಜ್ಜೆಯಿಂದಲೇ, ಹೀಗೆ ದೊಡ್ಡ, ದೊಡ್ಡದು ಅಂತ ನಾವೇ ಏನೆ ಅಂದು ಕೊಂಡ್ರು ಅದಕ್ಕೆ ಮೂಲ ಒಂದೇ ಒಂದು ಎಂಬುದೇ ಆಗಿರುತ್ತೆ. ಹೀಗೆ ಎಲೆಮರೆಯ ಕಾಯಿಗಳಂತೆ ನಮ್ಮ ನಡುವೆ … Read more

ವಾಯೇಜರ್ ಗಗನ ನೌಕೆಗಳು – ೩೬ ವರ್ಷಗಳ ಕಾಲ ೧೯೦೦ ಕೋಟಿ ಕಿ.ಮೀ ದೂರ ಪಯಣ: ಜೈಕುಮಾರ್.ಹೆಚ್.ಎಸ್.

ವಾಯೇಜರ್ ಗಗನನೌಕೆಗಳ ಪಯಣ: ೧೯೭೭ರಲ್ಲಿ ಅಮೇರಿಕಾದ ರಾಷ್ಟ್ರೀಯ ಬಾಹ್ಯಾಕಾಶ ಸಂಸ್ಥೆ (ನಾಸಾ) ’ವಾಯೇಜರ್ ೧’ ಮತ್ತು ಅದರ ಅವಳಿ ಗಗನನೌಕೆ ’ವಾಯೇಜರ್ ೨’ ಹೆಸರಿನ ಎರಡು ಗಗನನೌಕೆಗಳನ್ನು ೧೬ ದಿನಗಳ ಅಂತರದಲ್ಲಿ ಗಗನಕ್ಕೆ ಹಾರಿಬಿಟ್ಟಿತು. ಇವೆರಡೂ ಇನ್ನೂ ತಮ್ಮ ಪಯಣವನ್ನು ಮುಂದುವರೆಸುತ್ತಾ ಸೌರವ್ಯೂಹದಾಚೆಗಿನ ಮಾಹಿತಿಯನ್ನು ನಮಗೆ ರವಾನಿಸುತ್ತಲೇ ಇವೆ. ಇವೆರಡೂ ಗಗನನೌಕೆಗಳು ಮೊದಲಿಗೆ ಗುರು ಮತ್ತು ಶನಿ ಗ್ರಹವನ್ನು ಹಾದು ಹೋಗಿ ನಂತರದಲ್ಲಿ ಯುರೇನಸ್ ಮತ್ತು ನೆಪ್ಚೂನ್ ಗ್ರಹಗಳನ್ನು ಹಾದು ಮುಂದೆ ಹೋಗಿವೆ. ಇಲ್ಲಿಂದಾಚೆಗೆ ಅಂತರನಕ್ಷತ್ರ ಪ್ರದೇಶವಿದೆ. … Read more

ಸ್ನೇಹ ಭಾಂದವ್ಯ (ಭಾಗ 8): ನಾಗರತ್ನಾ ಗೋವಿಂದನ್ನವರ

ಇಲ್ಲಿಯವರೆಗೆ ನಿನ್ನ ಹಾಗೆ ಅವಳು ಒಂದು ಮಗುವಿನ ತಾಯಿಯಾಗುವವಳು. ಅಲ್ವೆನಮ್ಮ ಅವಳಿಗೂ ತನ್ನ ಮಗುವಿನ ಬಗ್ಗೆ ನೂರಾರು ಆಸೆ ಕನಸುಗಳು ಇರುತ್ತದೆಯಲ್ಲಮ್ಮ, ಆದರೆ ನೀನು ಅವಳಿಗೆ ತಾಯಿಯಾಗಲಿಲ್ಲ. ಅವಳ ಭಾವನೆಗಳನ್ನು ಅರ್ಥಮಾಡಿಕೊಳ್ಳಲಿಲ್ಲ ಎಂದು ದುಃಖಿಸುತ್ತಾ ಹೊರಗೋಡಿ ಬಂದ, ರಮಾನಂದರು ವಾಕಿಂಗ್ ಮುಗಿಸಿ ಬರುತ್ತಿದ್ದವರು ಮಗನನ್ನು ನೋಡಿ ಏನಾಯಿತು ಯಾಕೋ ಹೀಗಿದ್ದೀಯಾ ಎಂದು ಕೇಳಿದರು. ರಾಜೇಶ ನಡೆದುದೆಲ್ಲವನ್ನು ವಿವರಿಸಿದ. ಅವನಿಗೆ ಹೆಂಡತಿಯ ಮೇಲೆ ವಿಪರೀತ ಕೋಪ ಬಂದಿತು. ನೀನು ಆಸ್ಪತ್ರೆಗೆ ನಡಿ ರಾಜೇಶ ತಡಮಾಡಬೇಡ. ನಾನು ಆಮೇಲೆ ಬರುತ್ತೇನೆ … Read more

ಎರಡು ಕಿರು ಲೇಖನಗಳು: ಹೆಚ್.ಕೆ. ಶರತ್, ಸಂದೇಶ್ ಎಲ್. ಎಂ.

ಬದುಕಿನ ಬುಡದಲ್ಲಿ ಅದೆಷ್ಟು ದ್ವಂದ್ವಗಳು? ಮಡುಗಟ್ಟಿದ ಮೌನ. ಮಾತಿನ ಮನೆಯಲ್ಲಿ ಸೂತಕ. ಸಂತಸ ಹೊತ್ತು ಮೆರೆಯುತ್ತಿದ್ದ ಮನಸ್ಸು ನೀರವತೆಯ ದಡದಲ್ಲಿ ನಿಸ್ತೇಜವಾಗಿ ಕೂತಿದೆ. ಅಕಾರಣವಾಗಿ ಬದುಕು ಬೇಸರವೆನಿಸಿದೆ. ಎಲ್ಲದಕ್ಕೂ ಕಾರಣ ಹುಡುಕುವ ಬುದ್ಧಿಗೆ ಸವಾಲೊಡ್ಡುವ ಅಕಾರಣಗಳ ನಡುವಲ್ಲಿ ಬದುಕಿನ ಬಹುದೊಡ್ಡ ಸಡಗರವಿದೆ. ಹಾದಿ ಬದಿಯಲ್ಲಿ ಕಣ್ಣಿಗೆ ಬಿದ್ದ ಅವಳನ್ನು ಆವಾಹಿಸಿಕೊಳ್ಳುವುದರಲ್ಲಿ ಇರುವುದು ಕೇವಲ ಅಕಾರಣ. ಎಲ್ಲವನ್ನೂ ಲೆಕ್ಕಾಚಾರದ ತಕ್ಕಡಿಯೊಳಗೆ ತೂಗಲು ಸಾಧ್ಯವಾದರೆ ಬದುಕು ಸಿದ್ಧ ಮಾದರಿಯೊಳಗೆ ಸಮಾಧಿಯಾದಂತಲ್ಲವೇ? ತಿಕ್ಕಲುತನ ಮೈಗಂಟಿಸಿಕೊಳ್ಳದೇ ಹೋದರೆ ಮನಸು ಹಗುರಾಗಿಸಿಕೊಳ್ಳುವುದು ಹೇಗೆ? ಗಾಂಭೀರ್ಯದ … Read more

ನಾನೇಕೆ ಬರೆಯುವುದಿಲ್ಲ?: ಎಂ. ಎಸ್. ನಾರಾಯಣ

‘ನಾನೇಕೆ ಬರೆಯುವುದಿಲ್ಲ’ ಎಂಬ ಪ್ರಶ್ನೆ ಈ ಹಿಂದೆಯೂ ಕೆಲವೊಮ್ಮೆ ನನ್ನನ್ನು ಕಾಡಿರುವುದು ನಿಜ. ಹೌದು, ಎಲ್ಲರೂ ಬರೆಯಲೇಬೇಕೆಂಬ ನಿಯಮವೇನೂ ಇಲ್ಲ. ಅಸಲು, ಕೆಲವರು ಬರೆಯದೇ ಇರುವುದೇ ಕ್ಷೇಮ. ಆದರೆ ಒಂದು ಮಟ್ಟಿಗೆ ಓದಿಕೊಂಡಿರುವ ನನ್ನಲ್ಲಿ ಬರೆಯಬೇಕೆಂಬ ಕಾಂಕ್ಷೆಗೇನೂ ಕೊರತೆಯಿಲ್ಲ. ಸಮಸ್ಯೆ ಏನೆಂದರೆ, ನನ್ನ ತಿಳುವಳಿಕೆಯಂತೆ ನನಗೆ ಸುಮಾರಾಗಿ ಬರುವ ಇಂಗ್ಲೀಷಿನಷ್ಟೂ ಚೆನ್ನಾಗಿ ಕನ್ನಡ ಬರುವುದಿಲ್ಲ. ಜೊತೆಗೆ ಗಣಕಯಂತ್ರದಲ್ಲಿ ಕನ್ನಡ ಬರೆಯುವ ಕೌಶಲ್ಯವೂ ಕಡಿಮೆಯೇ. ಇಷ್ಟೆಲ್ಲಾ ಇತಿಮಿತಿಗಳಿರುವಾಗ, ನಾನು ಬರೆದು ಏನಾಗಬೇಕು? ನಾನು ಬರೆಯದೇ ಇದ್ದಲ್ಲಿ ಸಮಸ್ತ ಕನ್ನಡ … Read more

ನಂಬಿಕೆ, ಮೂಢನಂಬಿಕೆ: ಅಖಿಲೇಶ್ ಚಿಪ್ಪಳಿ ಅಂಕಣ

ಹೊಸದಾಗಿ ಮದುವೆಯಾಗಿದ್ದ ದಂಪತಿಗಳು ಸಿನಿಮಾ ನೋಡಲು ಹೋಗಿದ್ದರು. ಅದೇನಾಯಿತೋ ಗೊತ್ತಿಲ್ಲ ಹೆಂಡತಿಗೆ ವಿಪರೀತ ತಲೆನೋವು ಶುರುವಾಯಿತು. ಗಂಡನಿಗೆ ಏನು ಮಾಡುವುದು ತಲೆ ಓಡಲಿಲ್ಲ. ಅಷ್ಟರಲ್ಲಿ ಪರಿಚಿತ ಡಾಕ್ಟರು ಅದೇ ಸಿನೆಮಾ ನೋಡಲು ಬಂದ್ದಿದ್ದರು. ಗಂಡ ಹೋಗಿ ಸಂಕೋಚದಿಂದ ಡಾಕ್ಟರಲ್ಲಿ ಅವಲತ್ತುಕೊಂಡ. ಡಾಕ್ಟರ್ ಬುದ್ಧಿವಂತನಿದ್ದ, ಥಿಯೇಟರ್‌ನ ಒಳಗಡೆ ಕತ್ತಲಿತ್ತು, ಗಂಡನಿಗೆ ಗೊತ್ತಾಗದ ಹಾಗೆ ತನ್ನದೆ ಕೋಟಿನ ಒಂದು ಗುಂಡಿಯನ್ನು ಕಿತ್ತು, ಈ ಮಾತ್ರೆಯನ್ನು ಬಾಯಲಿಟ್ಟುಕೊಳ್ಳಲು ಸಲಹೆ ಮಾಡಿದರು. ಹತ್ತು ನಿಮಿಷದಲ್ಲಿ ತಲೆನೋವು ಮಾಯ. ಗಂಡ-ಹೆಂಡತಿ ಸಿನಿಮಾವನ್ನು ಎಂಜಾಯ್ ಮಾಡಿದರು … Read more