ಪಂಜು ಕಾವ್ಯಧಾರೆ

ಎನಿತು ಇನಿದು… ಎನಿತು ಇನಿದು ಅಕ್ಷಿನೋಟ; ಇಕ್ಷು ಮಧು! ಸ್ಪರ್ಶಿಸಿದ ರೇಶಿಮೆ ಮೈ ಎಷ್ಟು ಮೆದು!! ಮಧುರ ದನಿ ಅಧರ ಗಿಣಿ ಬರುವವೀ ಜಾತಿ ಧರ್ಮ; ಘನಪದರು ಎದುರ ದಾಟಬೇಕು ಸೀಳಿ; ಕೊಡದೆ ಸದರ ಏಕೆ? ಅಂಜುವೆ; ಎದೆಗುಂದುವೆ ಬಂದಿಹ ನಾ ವ್ಯಾಧನೆ? ನಾ; ಕಾಯುವ ಯೋಧ! ನಾವು ಆವು ಜೊತೆಗಿಹರು ಹಾವು ನಿತ್ಯ ಕಾಣುವುದು ಸಾವು-ನೋವು ಈ ಬಾಳೇ; ಸಿಹಿ-ಕಹಿ-ಬೇವು! -ಅಯ್ಯಪ್ಪಕಂಬಾರ         ಕೇಳು ನನ್ನೊಲವೇ …! ಒಲವೇ – ! … Read more

ಪಂಜು ಕಾವ್ಯಧಾರೆ

ಗಜಲ್ ಕೊನೆಯುಸಿರವರೆಗೂ ನಿನ್ನದೇ ಹಾಡು ಹಾಡಬೇಕೆಂದಿರುವೆ ಮುಗಿಸಿಬಿಡು ಈ ಜಗದ ಲೆಕ್ಕ ನೆನ್ನೆಗೇ ವಿದಾಯ ಹೇಳಿ ನನ್ನೆಲ್ಲ ತಪ್ಪುಗಳ ಚೀಟಿ ಬರೆದಿಟ್ಟಿರುವೆ ಮುಗಿಸಿಬಿಡು ಈ ಜಗದ ಲೆಕ್ಕ ಪ್ರೀತಿಯ ಯುಗಾದಿ ಮೊಹರಂಗಳು ಈ ಜಗತ್ತಿನಲಿ ಎಲ್ಲಿಯವರೆಗೆ ಒಂದಾಗಲಾರವೋ ಸಾವು ಮೆರೆಯುವುದು ಗಲ್ಲಿಯಲಿ ಸದ್ದಿಲ್ಲದಂತೆ ಬೇವು ಬೆಲ್ಲ ಕೊಟ್ಟಿರುವೆ ಮುಗಿಸಿಬಿಡು ಈ ಜಗದ ಲೆಕ್ಕ ಅಪ್ಪ ಕಣ್ಣು ಅಮ್ಮ ಹೃದಯ ರಕ್ತ ಚರಿತ್ರೆಯಲಿ ದಾಖಲಾಗಿ ಕಣ್ಣೀರಿಗೆ ಬದಲು ರಕ್ತ ಸೋರಿಹುದು ಅಟ್ಟಹಾಸದ ಬೆಂಕಿಗೆ ಆಹುತಿಯಾದ ಆತ್ಮಗಳ ಕ್ಷೇಮ ಕೋರಿರುವೆ … Read more

ಪಂಜು ಕಾವ್ಯಧಾರೆ ೧

ನಾನು ಕವಿತೆ ಬರೆಯುವುದಿಲ್ಲ… ನಾನು ಕವಿತೆ ಬರೆಯುವುದಿಲ್ಲ… ನನ್ನೊಳಗಿನ ಬನಿಗೆ ದನಿಯಾಗಬೇಕೆಂಬ ಇರಾದೆ ನನಗಿಲ್ಲ. ಕೇವಲ ನನ್ನೊಳಗಿನ ಮಿಸುಗನ್ನು ನಸುಗುನ್ನಿಯನ್ನು ಅಕ್ಷರವಾಗಿಸುತ್ತೇನೆ. ಒಮ್ಮೊಮ್ಮೆ ಅಕ್ಷರಗಳು ಮಾತಾಡುತ್ತವೆ, ಕೆಲವೊಮ್ಮೆ ಹಾಡುತ್ತವೆ, ಮತ್ತೊಮ್ಮೆ-ಮಗದೊಮ್ಮೆ ಕಾಡುತ್ತವೆ. ದುಂಬಾಲು ಬಿದ್ದು ಮುದ್ದು ಮಾಡಿಸಿಕೊಳ್ಳುತ್ತದೆ. ಆಗ್ಗಾಗೆ ಮುಗಿಬಿದ್ದು ಮರುಬರೆಸಿಕೊಳ್ಳುತ್ತದೆ. ಬರೆವಾಗ ತನ್ಮಯಗೊಳಿಸಿ ಮೈಮರೆಸುತ್ತದೆ. ಲಲ್ಲೆಗರೆಯುತ್ತವೆ. ಚೆಲ್ಲುಬಡಿಯುತ್ತವೆ ಎಲ್ಲೆಂದರಲ್ಲಿ ನನ್ನೊಳಗೆ ರಾರಾಜಿಸುತ್ತದೆ. ನನ್ನ ಸೊಂಟಕ್ಕೆ ತುಂಟಮಗುವಾಗಿ, ಪಂಟುಹೊಡೆಯುವ ಲಂಪಟನಾಗಿ, ಉಪಟಳಿಸುವ ಸುಂಟರಗಾಳಿಯಂತೆ ನನ್ನ ಸುತ್ತಲೆ ತಿರುಗುತ್ತವೆ ! ಕನಸಲ್ಲಿ ಕಾಡುತ್ತವೆ ಥೇಟ್ ನನ್ನ ಪ್ರೇಮಿಯಂತೆ ! … Read more

ಗಜ಼ಲ್: ಡಾ. ಗೋವಿಂದ ಹೆಗಡೆ, ಲಕ್ಷ್ಮಿಕಾಂತ ನೇತಾಜಿ ಮಿರಜಕರ

ಗಜ಼ಲ್-೧ ಎಂಥ ಸೋಗುಗಳಲ್ಲಿ ಬದುಕಿದ್ದೇನೆ ಯಾರ ಖುಷಿಗೋ ನುಡಿಯುತ್ತ ಎಂಥ ನೋವಿನಲಿ ಮುಳುಗಿದ್ದೇನೆ ನನ್ನೊಡಲ ನಾನೇ ಬಗೆಯುತ್ತ ಬಂದ ದಾರಿಯಲಿ ಸುರಿದ ಮಂಜು ಮುಂದಕ್ಕೂ ಚಾಚಿ ಮಬ್ಬು ಯಾರಿಗೆ ದೂರು ಹೇಳಿದ್ದೇನೆ ಒಡಕು ತಮಟೆಯ ಬಡಿಯುತ್ತ ಖಚಿತ ಚಹರೆಗಳೇ ಇಲ್ಲದೆ ಹೇಗೋ ಬರೆದಿದ್ದೇನೆ ಚಿತ್ರ ಮುಖ ಮೀಸೆ ಬರಿದೆ ಮೆತ್ತಿದ್ದೇನೆ ಗೆರೆಯ ಎಳೆಯಲು ಸೋಲುತ್ತ ಎಲ್ಲದು ಅಗಣಿತ ಸಂದಣಿಯಲ್ಲಿ ಕಳೆಯಿತು ಒಂಟಿದನಿ ಬರಿದೇ ಸಂತೆ ತಿರುಗಿದ್ದೇನೆ ನನ್ನನೇ ನಾನು ಹುಡುಕುತ್ತ ಕೈ ಕೈ ಹಿಡಿದು ಒಟ್ಟಿಗೆ ನಡೆದೂ … Read more

ಪಂಜು ಕಾವ್ಯಧಾರೆ ೨

ಅಮ್ಮ ಎಂದರೆ……. ೧ ನಡೆದ ದಾರಿಯಲಿ ಎಷ್ಟೊಂದು ಹೆಜ್ಜೆಗಳು ಅಲ್ಲೆಲ್ಲೋ ದೂರದಲ್ಲಿ ಸಣ್ಣ- ದೊಡ್ಡ ಹೆಜ್ಜೆಗಳಿವೆ; ಒಂದು ನನ್ನದು ಮತ್ತೊಂದು ಈಗ ಮೃದುಪಾದವೂರುವ ನನ್ನಮ್ಮನದು! ೨ ಅಮ್ಮ ರೊಟ್ಟಿ ಬಡಿವಾಗ ಒಲೆ ಉರಿಯ ಝಳದ ಮುಂದೆ ಲೆಕ್ಕವಿಲ್ಲದಷ್ಟು ತಿನ್ನುತ್ತಿದ್ದೆವು ಈಗ ರೊಟ್ಟ ಬಡಿಲಾರದ ಅಮ್ಮನಿಗೆ ಶೆಟ್ಟರಂಗಡಿಯಿಂದ ಲೆಕ್ಕ ಮಾಡಿ ರೊಟ್ಟಿ ತಂದಿತ್ತರೆ ಮಾತಾಡದ ಅಮ್ಮ ನಗುತ್ತಿದ್ದಾಳೆ! ೩ ಉಡಿಸಿ ಉಣಿಸಿ ಖುಷಿ ಪಟ್ಟ ಅಮ್ಮ ಇದೀಗ ಕೈ ತುತ್ತಿಗೆ ಬಾಯ್ತೆರೆಯುತ್ತಿದ್ದಾಳೆ! ೪ ಕೈ ಹಿಡಿದು ನಡೆ- ನುಡಿ … Read more

ಕಥನ ಕವಿತೆ: ಫಕೀರ

    ಕಲಾಕುಂಜದ ಸಂತೆಯಲ್ಲಿ ಅಕ್ಕಪಕ್ಕ ಕಲಾಚಿತ್ರಗಳು ವರ್ಣಭಿತ್ತಿಗಳು ಎಣಿಕೆಗೆ ಸಿಗದಷ್ಟು ಹಾದಿಗುಂಟ ಮೈಲಿಗಟ್ಟಲೇ ಲಕ್ಷಲಕ್ಷ ಜನವೋ ಜನ ಸಾವಿರಾರು ಚಿತ್ರಕಲಾವಿದರು ತಮ್ಮ ತಮ್ಮ ಕಲ್ಪನೆಯ ಕನಸುಗಳೊಂದಿಗೆ ನಿಂತಿಹರು ಚಿತ್ರಪಟದ ಎದುರು -1- ಬಣ್ಣಗಳು ಅಂದು ಮಾತನಾಡುತ್ತಿವೆ ಚಿತ್ರಪಟಗಳು ಅತ್ತಿಂದತ್ತ ಓಡಾಡುತ್ತಿವೆ ಕಲಾರಸಿಕರ ಮನದೊಳಗೆ ಕಲಾವಿದನ ಕಲ್ಪನೆಯ ಚಿತ್ರಗಳು ಅಂದು ಮಾರಾಟಕ್ಕಿವೆ ಲಕ್ಷೋಪಲಕ್ಷ ಕಂಗಳ ಚಿತ್ತ ಅಕ್ಕಪಕ್ಕದಲಿ ನಿಂತ ಚಿತ್ರಪಟಗಳತ್ತ ಅರಸುತಿವೆ ಎಡಬಿಡದೆ ಕಣ್ಣುಗಳನು ಮಿಟುಕಿಸುತಿವೆ ತಮ್ಮನು ಕೊಳ್ಳುವ ರಸಿಕರತ್ತ ಆಸೆ ಕಂಗಳದಿ ಬೆರಗು ಹುಟ್ಟಿಸುವಂತೆ ಕಲಾವಿದನ … Read more

ಪಂಜು ಕಾವ್ಯಧಾರೆ

ಹೆಣ್ಣೊಂದು ತಾಯ್ತನದ ಕಣ್ಣು ಬಾಲ್ಯದಲಿ ಅಂಕುರ ಬೆಳೆಯುತ್ತ ಹೂವು ಸುಮಧುರ ಅಮ್ಮನಿಗೆ ಸಹೋದರಿ ಅಪ್ಪನಿಗೆ ಭಾಗ್ಯದ ಗರಿ ಮನೆ ಬೆಳಗುವ ಜ್ಯೋತಿ ನೀನಿಲ್ಲದ ಜಗವೊಂದು ಭೀತಿ ಹೆಣ್ಣೊಂದು ಅಗಾಧ ಶಕ್ತಿ ಪವಾಡದಂತೆ, ಇದೊಂದು ಸೃಷ್ಟಿ ಒಲಿದರೆ ನಾರಿ ಮುನಿದರೆ ಮಾರಿ ಈ ಗಾಧೆಗೆ ಸರಿ ಸಾಟಿ ಬರೋಬರಿ ಸಂಗೀತ ಸಾಹಿತ್ಯ ದೇವತೆ ಸುಂದರ, ನಯನ ಮನೋಹರ ನೀನಿಲ್ಲದ ಯುಗವೇ ಅವನತಿ ಹೆಣ್ಣೊಂದು ಭಕ್ತಿ, ಕೈ ಮುಗಿಯಲು ಜನ್ಮ ದಾತೆಯ ರೂಪ ಸದಾ ಮಿಗಿಲು ಒಡಲ ಪ್ರೀತಿಯ ಸಾರುವ … Read more

ಪಂಜು ಕಾವ್ಯಧಾರೆ

ಅಜ್ಜ ಬರುವುದ ಇನ್ನೂ ಬಿಟ್ಟಿಲ್ಲ..!! ಅಗೋ..! ನೋಡು ಅಲ್ಲಿ..? ಗೋಡೆನೆತ್ತಿಯ ಮೊಳೆಯಲ್ಲಿ ಅಹಿಂಸಾ ಮೂರುತಿಯ ಬಂಧಿಸಿ ಕಟ್ಟಿ ಹಾಕಿದಂತೆ ನೇತು ಹಾಕಿದೆ ಬಿಟ್ಟ ಕಣ್ಣು ಬಿಟ್ಟ ಹಾಗೆ ಹುಬ್ಬುಗಂಟಿಕ್ಕದೆ ಒಮ್ಮೆ ನಸು ನಗುತ್ತಾ ಜೀಸಸ್ ಕ್ರಿಸ್ತನಂತೆ ಕಾಣುತ್ತಿದ್ದಾನೆ..!! ನನ್ನ ತಾತ ಕೋಲು ಹಿಡಿದು ಸುಕ್ಕುಗಟ್ಟಿದ ಮೈಯ್ಯಲ್ಲಿ ತುಂಡು ಬಟ್ಟೆ ತೊಟ್ಟು ಮೇಲೆ ಹೊದಿಕೆ ಹೊದ್ದು ಕಾಲ್ನಡಿಗೆಯಲ್ಲೇ ಯಾರನ್ನೋ ? ಯಾವುದನ್ನೋ ! ಅರಸುತ್ತಾ , ನಡೆಯುತ್ತಾ ಹೊರಟಂತಿದೆ…!! ಕಪ್ಪು ಜನಾಂಗೀಯ ನಿಂದನೆ ದಹಿಸಿ ಅಹಿಂಸೆಯಿಂದ ಹಿಂಸೆ ಜಯಿಸಿ … Read more

ಪಂಜು ಕಾವ್ಯಧಾರೆ

ನಿನ್ನ ಅಕ್ಷರ ಪ್ರೀತಿ ಅಮರವಾಗಲಿ (ಜಿಎಸ್‍ಎಸ್ ನೆನಪು) ಕನ್ನಡ ಸಾಹಿತ್ಯದ ಕಿರೀಟವಾದೆ ಕನ್ನಡಿಗರ ಮನದ ಮುಕುಟವಾದೆ ಪ್ರೀತಿ ಇಲ್ಲದ ಮೇಲೆ ಎಂದು ಎಲ್ಲರಿಗೂ ಪ್ರೀತಿಯ ಅರ್ಥ ತಿಳಿಸಿದೆ ಕಾಣದ ಊರಿಗೆ ನಿನ್ನ ಪಯಣ ಸದಾ ತುಂಬಿರುವೆ ಜನಮನ ಕನ್ನಡ ಭೂಮಿಯಲ್ಲಿರುವ ಒಂದೊಂದು ಕಣಕಣ ಹಾಡಿ ಹೊಗಳಿದೆ ನಿನ್ನ ಗುಣಗಾನ ಕನ್ನಡಾಂಬೆಯ ಪುತ್ರ ನೀ ಕನ್ನಡಿಗರೆಲ್ಲರ ಮಿತ್ರ ನೀ ದೇಹದಿ ಆತ್ಮ ಅಗಲಿದರೇನು ಭಾವದಿ, ಜೀವದಿ ನಿನ್ನ ನೆನಪು ಅಳಿಯುವುದೇನು? ನಾನು ನೊಂದೆ, ಒಮ್ಮೆ ನಿನ್ನ ನೋಡಬೇಕೆಂಬ ಆಸೆ … Read more

ಪಂಜು ಕಾವ್ಯಧಾರೆ

ಅದೆಷ್ಟು ಕಷ್ಟ ಬುದ್ಧನಾಗುವುದೆಂದರೆ…! ಅದೆಷ್ಟು ಕಷ್ಟ ಈಗ ಬುದ್ಧನಾಗುವುದೆಂದರೆ ಆಸೆಯ ಬಿಡುವ ಯುದ್ಧ ಒಂದೆಡೆಯಾದರೆ ಸಕಲವ ತ್ಯಜಿಸಿ ಎದ್ದು ಬಿಡುವುದು ಇನ್ನೊಂದು! ಕಲ್ಲೆಸೆದವರ ಎದೆಯಲ್ಲಿ ಪ್ರೀತಿ ತುಂಬಿ ಬೆರಳ ಹಾರ ಮಾಡಿದವರ ಕೊರಳಲ್ಲಿ ಶಾಂತಿ ಧ್ವನಿ ನುಡಿಸಿ ರೋಗಕ್ಕೆ ಹೆದರಿ, ಸಾವಿಗೆ ಬೆದರಿ ಮಧ್ಯರಾತ್ರಿ ದಿಗ್ಗನೆ ಎದ್ದು ನಡೆದುಬಿಡುವುದೆಂದರೆ ಉದ್ದುದ್ದ, ಮಾರುದ್ದದ ಬೋಧನೆ ನೀಡದೇ ಸದ್ದು ಮಾಡದೆ ಭೋಧಿಯಡಿಯಲ್ಲಿ ಸಿದ್ಧಿ ಪಡೆದು ಸಿದ್ದಾರ್ಥನ ನಿರ್ವಾಣ ಮಾಡಿ ಗೌತಮನ ನಿರ್ಮಾಣ ಹೊಂದುವುದೆಂದರೆ ಕಡು ಕಷ್ಟವೇ ಅದು!! ಬುದ್ಧನಾಗುವುದೆಂದರೆ ಬರೀ … Read more

ಪಂಜು ಕಾವ್ಯಧಾರೆ

ಒಡೆದ ನೆನಪಿನ ಚೂರುಗಳು…!! ಆ ತೋರು ಬೆರಳು ಸಹ ಕಣ್ಣ ಮಿಟಿಗಿಸುತ್ತ ಮೊಬೈಲ್ನ ಮೂರು ಗಳಿಗೆಯೂ ಬ್ಲಾಕ್ ಮಾಡಿರುವ ವಾಟ್ಸಾಪ್ ನಂಬರ್, ಫೇಸ್ಬುಕ್ನ ಐಡಿ ನೋಡುವುದ ಬಿಡೋದಿಲ್ಲ ಅದಕ್ಕೂ ತಿಳಿದಿರಬೇಕು ನಾವು ದೂರವಾಗಿರುವ ವಿಷಯವು ಪದೇ ಪದೇ ನಿನ್ನ ನೆನಪಿಸುತ್ತಿದೆ !! ನೋಡು ನಮ್ಮನಗಲಿಕೆಯ ಕಂಡು ಆ ಬಸ್ಸು – ಲಾರಿ, ಕಾರು- ಸ್ಕೂಟರುಗಳು ಒಂದೇ ಸಮನೇ ಜೋರು ಸದ್ದು ಮಾಡಿ ರಸ್ತೆಗುಂಟ ಕೇಕೆ ಹಾಕುತ್ತ ಹೊಟ್ಟೆ ಉರಿಸುತ್ತಿವೆ…!! ಒಡೆದ ಕನ್ನಡಿಯೂ ಹೇಳುತ್ತಿತ್ತು ಛಿದ್ರ -ಛಿದ್ರವಾದ ಚೂರುಗಳಲ್ಲಿಯೂ … Read more

ಪಂಜು ಕಾವ್ಯಧಾರೆ

**ಮಾರಿಬಲೆಯಾ ** ಬಲೆಯೆತ್ತಿ ಹೊರಟಿಹರು ಬೆಸ್ತರು ಸಡಗರದಿ ಜಡಿಮಳೇಲಿ ಕಡಲ ತಡಿಗೆ I ಇಂದು ಸಿಕ್ಕಾವೋ? ಭೂತಾಯಿ ಕೊಡವಾಯಿ ಕಂಡಿಕಿ ಜಾರಿ ನನ್ನ ಬಲಿಗೆ I ಬಂದಿಹುದು ಮಳೆಗಾಲ ಬೀಸುವುದೇ ಬಲೆ ಈಗ! ಸಿಕ್ಕೇ ಸಿಕ್ಕಾವು ಎಸುಡಿ ಸಿಗಡಿ I ಮರವಂತೆ ಕಡೆಹೋಪ ಬರುವುದು ಬಾರಿ ಬೆಲೆ ಸಿಕ್ಕರೆ ಭೂತಾಯಿ ಕಂಡಿಕಿ I ಬೋರ್ಗರೆವ ಕಡಲೆಡೆಗೆ ಬಂದಾನೋ ಮೊಗವೀರ ಬೀಸಿದಾ *ಮಾರಿ**ಬಲೆಯಾ I ನನ್ನಯ ಮನೆಯಿಂದ ದೂರಾದ ಮೈಲುವರೆಗೂ ಇಂದು ನನ್ನದೇ ಬಲೆಯೂ I ಬಲೆ ಬಿಡುವುದು … Read more

ಪಂಜು ಕಾವ್ಯಧಾರೆ

೧. *ಒಲವಿನ ಕನಸು * ಕಂಡಿರದ ಮೊಗದ ಮೂರ್ತಿಯನು ಕೆತ್ತಿ… ತನ್ನಿಷ್ಟದ ಭಾವಗಳ ಅದರೆದೆಗೆ ಮೆತ್ತಿ… ಕಣ್ಣಕಾಂತಿಯಲಿ ಸವಿದು ಒಲವ ಸೊಬಗನು… ನೆನಪು-ಕನಸುಗಳ ಜಂಟಿ ಓಲಗದಿ… ಸಾಕ್ಷ್ಯ ಬರೆದಿತ್ತು ಚಂದ್ರಮನ ಕಾಂತಿ… ೨. *ತೆರೆದ ಪುಸ್ತಕದಂತ ಬದುಕು* ತೆರೆದ ಪುಸ್ತಕದಂತ ಬದುಕು ಓದುಗರು ಹಲವರು ಹಲವು ತೆರನವರು ತೆಗಳುವವರು, ಹೊಗಳುವವರು ಓದಿಯು ಓದದಂತಿರುವವರು ಓದದೆಯು ಜರೆಯುವವರು ಓದದೆಯು ಹೊಗಳುವವರು ಎಲ್ಲರ ಬಾಯಿಗೆ ಆಹಾರವಾಗೋ ಬಾಳು ತೆರೆದ ಪುಸ್ತಕದಂತ ಬಾಳು ಎನ್ನ ನೋವುಗಳ ಜ್ವಾಲೆಯಲ್ಲಿ ಚಳಿ ಕಾಯಿಸಿಕೊಂಡವರೆಷ್ಟೋ ಎನ್ನ … Read more

ಪಂಜು ಕಾವ್ಯಧಾರೆ

ಇನ್ನಾದರೂ ತುಸು ಹೊತ್ತು ಖುಷಿಯಿಂದ ಉಳಿದುಬಿಡುತ್ತೇನೆ ಬದುಕಿಗೆ ಬೇಸರ ಬರುವಷ್ಟು .. ಈ ಬದುಕು ಸುರುವಿದ ಅಸಂಖ್ಯ ಅವಕಾಶಗಳ ಎಣಿಸುತ್ತಾ ಕೂತು ಕಳೆದಿದ್ದೇನೆ ಹೀಗೆ ಬಳಸಿಕೊಳ್ಳೋದ ಮರೆತು ಪ್ರತಿ ಖುಷಿಯ ಹಿಂದೊಂದು ಮುಗಿಯದ ಖಾಲಿತನವನ್ನು ಸುಮ್ಮನೇ ಉಳಿಸಿಕೊಂಡಿದ್ದೇನೆ ನನ್ನಂಥ ಕಡುಮೌನಿಯೂ ನಿನ್ನ ಮಾತಿಗೆ ಹಪಹಪಿಸಲು ಶುರುವಿಡುವ ಈ ಹೊತ್ತು ಇಲ್ಲೇ ಸ್ತಬ್ಧವಾಗಲಿ ಬಿಡು ಮಾತು ಮೀರಿದ ಘಳಿಗೆ ಎದುರಿಗಿದ್ದಾಗ … ಬೆರಳ್ಹಿಡಿದು ನಡೆಸಿದ ಕಾಲುಹಾದಿಯ ಬದುಕು ಜಾರಿಸಲು ಶುರುವಿಟ್ಟು ನಗುತಾ ನಿಂತ ಸಮಯ ಬೇಕೆನಿಸಿದೆ ನಿನ್ನ ಸಾಂಗತ್ಯ … Read more

ಪಂಜು ಕಾವ್ಯಧಾರೆ

ನೀವಲ್ಲವೆ… ಬದುಕಲ್ಲಿ ಸಖನಾಗಿ ಒಲವಲ್ಲಿ ಜೊತೆಯಾಗಿ ಮನದಲ್ಲಿ ಹಿತವಾಗಿ ಪ್ರೀತಿ ಅರಳಿಸಿದವರು ದ್ವಂದದಲಿ ನಾನಿರಲು ಕರವಹಿಡಿದೆನ್ನ ಸಿಹಿಕನಸು ಮನದಲ್ಲಿ ಮುಡಿಸಿದವರು ನಾ ಮುನಿಸುಗೊಂಡಾಗ ಮಲ್ಲಿಗೆಗೆ ಮುನಿಸೇಕೆ ಎಂದೆನುತಾ ಮುತ್ತಿಟ್ಟು ಒಳಗೊಳಗೆ ನಕ್ಕವರು ತವರೂರು ಹೊರಟಾಗ ಬಾಗಿಲಬಳಿ ನಿಂದು ಬೇಗ ಬಾ ಎಂದೆನುತಾ ಕಣ್ಣಂಚಲಿ ನೀರ ಹನಿಸಿದವರು ವಾರವೂ ಕಳೆಯುವ ಮುನ್ನ ಮತ್ತೆ ತವರಿಗೆ ಬಂದು ಬೇಗ ಬರುವೆಯಾ ಎನುತ ಬೇಸರದಿ ಎನ್ನ ಕರವ ಹಿಡಿದವರು ಮನದ ವೇದನೆಯ ಮೌನದಲೇ ಮುಟ್ಟಿಸಿ ಮನೆಯ ದಾರಿಯ ತೋರಿದವರು ನೀವಲ್ಲವೆ. -ರೇಷ್ಮಾ … Read more

ಪಂಜು ಕಾವ್ಯಧಾರೆ

ಸ್ವರ್ಗ ಸೃಷ್ಟಿಯಾಗುತಿರಲು ಸುಳಿಯುತಿರುವ ಗಾಳಿ ಗಂಧ ಬಳಿಯಲಿರುವ ಯಮುನೆ ಚಂದ್ರ ಸುಳಿಯದಿರುವ ಸಖನ ನೆನೆದು ನಳಿನೆ ಕಾಯುತಿದ್ದಳು ಅಂದುಗೆ ಧನಿ ‘ಘಲ್” ಎನಲು ಎದೆಯು ಮಿಡಿದು ‘ಝಲ್” ಎನಲು ಬಂದನೇನೆ………. ಮಾಧವನು ಎಂದು ರಾಧೆ ನೊಂದಳು ಸುತ್ತಮುತ್ತ ಭೃಂಗ ಪಾನ ಹೊತ್ತಿ ಎದೆಯ ರಸದ ಗಾನ ಮೆತ್ತನೊಮ್ಮೆ ಮುಖವನೆತ್ತಿ ಮುತ್ತನೊತ್ತ ಬಾರದೇ ಹಾರುತಿತುವ ಸೆರಗ ಬಿಟ್ಟು ಜಾರುತಿರುವ ನೆರಿಗೆ ಬಿಟ್ಟು ಹಾರಿ ಬರುವ ಮುರಳಿಯಡೆಗೆ ನೀರೆ ಓಡಿ ಬಂದಳು ಬಂದ ನಲ್ಲನೊಡನೆ ಕೂಡಿ ಒಂದು ಘಳಿಗೆ ಎಲ್ಲ … Read more

ಪಂಜು ಕಾವ್ಯಧಾರೆ

Me too ಮುಗಿದು ಹೋದ ಕಥೆಗೆ ಅನುಭವಿಸಿಯಾದ ವ್ಯಥೆಗೆ ಯಾಕೆ ಬೇಕಿತ್ತು ಈಗ Me too ಬಿಸಿ ಇರುವಾಗಲೇ ಮುಗಿಸಬೇಕಿತ್ತು ಕಂಪ್ಲೆಂಟ್ ಕೊಟ್ಟು ಆಗುತ್ತಿತ್ತಾಗಲೇ ಗುಟ್ಟು ರಟ್ಟು ಅಂದು ಅನುಭವಿಸುವಾಗ ಮಜ ಈಗ ಅದು ಸಜ ಇರಬಹುದು ಇದಕೆ ಕಾರಣ ದ್ವೇಷ ಜೊತೆಗೆ ಹಣದ ಆಮಿಷ ಯೋಚಿಸಲಿ ಪೂರ್ವಾಗ್ರಹ ಬದಿಗಿಟ್ಟು ಸತ್ಯಾಸತ್ಯತೆಗೆ ಬೆಲೆಕೊಟ್ಟು ಬಲಿಯಾಗದಿರಲಿ ಮರ್ಯಾದೆ ಸುಮ್ಮ ಸುಮ್ಮನೆ ತೆಗೆಯದಿರಲಿ ತಗಾದೆ ನಿಜಕೂ ಅನ್ಯಾಯವಾಗಿದ್ದರೆ ಅದು ಸರಿ ಬರಲಿ ಬೆಳಕಿಗೆ ರಕ್ಕಸರ ತೇವಲಿ ಅನ್ಯಾಯವಾದರೂ ಆಗಿಹರಾಗಲೇ ಬಲಿ … Read more

ಪಂಜು ಕಾವ್ಯಧಾರೆ

ಆರದಿರಲಿ‌ ಬೆಳಕು ಒಲೆ ಉರಿಸುವುದು ಕಲೆಯೇ… ಬಲು ತಾದ್ಯಾತ್ಮಕತೆಯ ಅಲೆ ಮೆಲ್ಲನೆ ಕಡ್ಡಿ ಗೀರಿ ಇನ್ನೂ ಮೆಲ್ಲನೆ ಬೆಂಕಿ ನೀಡಿ ಉಸಿರ ಸಾರ ಹೀರಿ ಚಿಕ್ಕದಾಗಿ ಪೇರಿಸಿಟ್ಟ – ಗರಿ ಗರಿ ಕಾಯಿ ಸಿಪ್ಪೆ ಚಿಕ್ಕ ಚಿಕ್ಕ ಸೌದೆ ಚೂರು ಇದಕ್ಕೆಲ್ಲ ಕಿಚ್ಚು ಹಿಡಿಸಬೇಕೆಂದರೆ ಬೆಂಕಿ ತಲ್ಲೀನತೆಯ ಬೇಡುತ್ತದೆ ತಾಳ್ಮೆ ಪರೀಕ್ಷಿಸುತ್ತದೆ! ಈ ಕಲೆಯ ಅಸ್ಮಿತೆ ಉಳಿಸಲಿಕೋಸ್ಕರ ಏನೇನೆಲ್ಲ ಮಾಡಬೇಕಿದೆ… ಕಣ್ತುಂಬ ನೀರು ತಂದು ಕೊಳವೆ ತುಂಬ ಗಾಳಿ ಊದಿ ಸುರುಳಿ ಸುರುಳಿ ಹೊಗೆಯ ಹೊದೆದು ಬೂದಿಯೊಳಗಿನ … Read more

ಪಂಜು ಕಾವ್ಯಧಾರೆ

ಗುರುದಕ್ಷಿಣೆ ಬಿಳುಪಿಗೂ ಬಿಲ್ಲಿಗೂ ಹೊಸ್ತಿಲಾದ ಹನಿಗೆ ಹುದುಗಿದ್ದ ಚೈತನ್ಯದ ಗುರು ಕಿರಣವೇನೇ? ಮಳೆಹನಿಯ ರಭಸಕ್ಕೆ ತಾಳಿಕೆಯ ತೋರಿಸಿದ ಮರದೆಲೆಯು ಹನಿಗೆ ಗುರು ತಾನೇ? ಹರಿವ ಆಸೆಗೆ ತಗ್ಗಿಗೆ ನುಗ್ಗಿದೊಡೆ ಸಾಗರದ ಹಾದಿಗೊಯ್ದ ಗುರುವು ಭುವಿ ತಾನೇ? ಕಣ್ಣಹನಿ ಮುತ್ತೆಂದು ಒಡನೆ ಚಾಚಿದ ಬೊಗಸೆ ಮೌಲ್ಯದ ಮತಿಹೇಳೋ ಗುರು ತಾನೇ? ರಕ್ತ ಮಾಂಸವಂತೆ ಬುದ್ಧಿ ಭಾವಗಳಂತೆ ಪಂಚಭೂತಗಳಂತೆ ಜೀವದಾ ರಚನೆಗೆ. ಜೀವಿಯ ಜೀವಂತಿಕೆಗೆ ಪಂಚವೆಲ್ಲಾ ಕೊಂಚ! ಕಣಕಣದೊಳೊಕ್ಕಿ ಕಲಿಕೆ ಹುಚ್ಚ ಹಚ್ಚೋ ಅಸಂಖ್ಯಾಣು ಅದ್ಭುತಗಳೇ ಶಿಲ್ಪಿ ಬದುಕೀಗೆ. ದಕ್ಷಿಣೆಯ … Read more

ಪಂಜು ಕಾವ್ಯಧಾರೆ

ಶ್ರಾವಣ…. ಎಲ್ಲೆಲ್ಲೂ ಹಸಿರು, ತಳಿರು ತೋರಣ, ನೀ ಬಂದೊಡನೆ ಬಂಜರು ಭೂಮಿಯಲ್ಲೂ ಹಬ್ಬದ ವಾತಾವರಣ … ಎಲ್ಲೆಲ್ಲೂ ಸಂತೋಷ, ನಗು, ಸಂಭ್ರಮ, ಸ್ವರ್ಗ ವಾಗುವುದು ಧರೆ ಲೆಕ್ಕಿಸದೆ ಪಟ್ಟಣ ಗ್ರಾಮ … ಆದರಲ್ಲಿ ಸಂಭವಿಸಿದ್ದು ಕಾಲನ ತಾಂಡವ, ಹರಿಯಿತು ಜಲ ಧಾರೆ ಲೆಕ್ಕಿಸದೇ ನಿನ್ನಯ ಬರುವಿಕೆಯ… ಆಕ್ರಂಧನ ಮಾತ್ರ ಕೇಳುತಿತ್ತು, ಅಲ್ಲಿ ದೇವರ ಸ್ವಂತ ನಾಡು ಮುಳುಗುತಿತ್ತು…. ನಿಸ್ಸಹಾಯಕರಾದರು ಮನುಜರು, ದಡ ಸೇರದಾದರು ಈಜಿದರೂ…. ನಿನ್ನ ಆಗಮನಕ್ಕೆ ಕಾದಿದ್ದ ಹೂರಾಶಿಗಳೆಲ್ಲ, ನೆಲದ ಮೇಲಿನ ರಂಗೋಲಿಯಾಗದೆಯೇ ಅಸುನೀಗಿದವು… ಎಲ್ಲವನ್ನು … Read more