ಎಕ್ಸ್ಪ್ರೆಸ್ ಟ್ರೈನ್: ಮೋಹನ ಬಣಕಾರ

“ಮೈಸೂರು ಎಕ್ಸ್ಪ್ರೆಸ್”, ಇದು ಬೆಳಗಾವಿಯಿಂದ ಬೆಳಗ್ಗೆ ಸುಮಾರು 6:15 ಕ್ಕೆ ಹೊರಟರೆ, ಮೈಸೂರನ್ನು ತಲುಪೋದು ತಡಸಂಜೆ 8:00 ಗಂಟೆಗೆ. ಸುಮಾರು 615 ಕಿಲೋ ಮೀಟರ್ ರೈಲು ಮಾರ್ಗವನ್ನು ಕ್ರಮಿಸಲು 14 ಗಂಟೆಗಳ ಸುದೀರ್ಘ ಪ್ರಯಾಣ. ಅಂದರೆ ಪ್ರಯಾಣದ ಗತಿ, ಗಂಟೆಗೆ 43 ರಿಂದ 44 ಕಿಲೋಮೀಟರ್ಗಳು. ಇದು ನಮ್ಮ ಎಕ್ಸ್ಪ್ರೆಸ್ ಟ್ರೈನ್ ಗಳ ಹಣೆಬರಹ. ಇದೆಲ್ಲಾ ರೈಲು ನಿಗದಿತ ವೇಳಾಪಟ್ಟಿಯಂತೆ ಚಲಿಸಿದರೆ ಮಾತ್ರ ಅನ್ವಯ. ವಾಸ್ತವದಲ್ಲಿ, ಬಹುತೇಕ ರೈಲು ಪ್ರಯಾಣದ ಸ್ಥಿತಿ ಹೇಗೆಂದರೆ, ರೈಲು ಬಂದಾಗ (ಬಂದಾಗ … Read more

ಮನೆ ಮಾರಾಟಕ್ಕಿದೆ: ಸೂರಿ ಹಾರ್ದಳ್ಳಿ

ನಾನು ದಿನಪತ್ರಿಕೆಗಳನ್ನು ಓದುವುದನ್ನು ನಿಲ್ಲಿಸಿ ತುಂಬಾ ಕಾಲವಾಯಿತು. ಏನಿವೆ ಅದರಲ್ಲಿ? ಕೊಲೆ, ಸುಲಿಗೆ, ದರೋಡೆ, ಭ್ರಷ್ಟಾಚಾರ, ಮಾನಭಂಗ, ಅಪಘಾತ, ಇವಿಷ್ಟೇ. ಅದೂ ಅಲ್ಲದೇ ಕೆಲ, ಅಷ್ಟೇ ಏಕೆ, ಬಹು ದರಿದ್ರದ ರಾಜಕಾರಣಿಗಳ ಚಿತ್ರಗಳೂ ಮುಖಪುಟದಲ್ಲಿಯೇ ಪ್ರಕಟವಾಗುತ್ತವೆ, ಅವನ್ನು ಶುಭ ಮುಂಜಾನೆ ನೋಡಬೇಕೇ? ಇದನ್ನು ಬೆಳ್ಳಂಬೆಳಗ್ಗೆ ಓದಿ ಯಾಕೆ ತಲೆಯನ್ನು ರಾಡಿ ಮಾಡಿಕೊಳ್ಳಬೇಕು ಎಂಬ ಅಭಿಪ್ರಾಯ ನನ್ನದು.ಆದರೆ ನನ್ನ ಹೆಂಡತಿಗೆ ಒಂದು ತಲಬು ಇದೆ, ಹಾಗೆ ಹೇಳಿದರೆ ಅವಳು ಬೇಜಾರು ಮಾಡಿಕೊಳ್ಳುವುದಿಲ್ಲ ಬಿಡಿ, ಒಂದು ಕೈಲಿ ಕಾಫಿ ಲೋಟ … Read more

ಗಾಂಜ ಮತ್ತು ಹೊಲ: ಅಕ್ಬರ್ ಅಲಿ

1ಪಂಪಣ್ಣ ಹಾಗೂ ಸಿದ್ದಪ್ಪ ತಮ್ಮ ಹೊಲಗಳನ್ನ ಮಲ್ಲಾರೆಡ್ಡಿ ಎಂಬಾತಗ ಪಾಲಿಗೆ ಕೊಟ್ಟರು. ಈ ಸಂಗತಿ ಸಂಗವ್ವಗ ಸಮಾಧಾನ ತಂದಿರ್ಲಿಲ್ಲ. ಎಷ್ಟನ ಬೆಳಿಲಿ ಮನೆವ್ರೆ ಮಾಡ್ಕೆಂದು ತಿನ್ಬೇಕು. ಭೂಮಿತಾಯಿ ಒಂದೊರ್ಷ ಕೊಡ್ಲಿಲ್ಲಂದ್ರ ಇನ್ನೊಂದೊರ್ಷ ಕೊಡ್ತಾಳ. ರೈತ್ರು ನಂಬಿಕೀನ ಕಳ್ಕಾಬಾರ್ದು ಅಂತ ಸಂಗವ್ವನ ಗಂಡ ಸತ್ಯಪ್ಪ ಹೇಳ್ತಿದ್ದ. ಎಂತಾ ತಂದಿಗೆ ಎಂತಾ ಮಕ್ಳು ಹುಟ್ಟಿದ್ರಲಾ? ಅಂತ ಸಂಗವ್ವ ಭಾಳ ಚಿಂತಿ ಮಾಡಂಗಾತಿ. ರಡ್ಡೇರು ಮೊದ್ಲ ಹೊಲ್ದಾಗ ಕಾಲಿಡ್ತಾರಾ ಆಮ್ಯಾಗ ಮಾಲಕ್ರಿಗೆ ಸಾಲ ಕೊಟ್ಗಂತ ಹೋತಾರ. ಆ ಸಾಲಾನ ಟೈಮಿಗೆ ತೀರ್ಸಲಿಲ್ಲಂದ್ರ … Read more

ವೃದ್ಧಾರಾಧನೆ: ಕೆ ಎನ್ ಮಹಾಬಲ

ಆ ದಿನ ಬೆಳಿಗ್ಗೆ ಎಂದಿನಂತೆ ಬೆಳಗಿನ ವಾಯುಸಂಚಾರಕ್ಕೆ, ತರಕಾರಿ, ಹಾಲು ತರಲು ಹೊರಟಿದ್ದೆ. ರಸ್ತೆಯ ಎದುರುಗಡೆ ಟೀ ಅಂಗಡಿಯ ರಾಜೇಶ್‌”ಸಾರ್‌, ಇಲ್ಲಿ ಬನ್ನಿ” ಎಂದು ಜೋರಾಗಿ ಕೂಗಿದ. ರಸ್ತೆ ದಾಟಿ ಅವನನ್ನು ಸಮೀಪಿಸಿ “ಏನು ರಾಜೇಶ್?”‌ಎಂದು ಕೇಳಿದೆ.“ಸಾರ್‌, ಆ ಮುದುಕ ಹೊನ್ನಪ್ಪ, ಅದೇ ನೀವು ದಿನಾ ಕಾಸು ಕೊಡ್ತಾ ಇದ್ರಲ್ಲಾ ಅವನು ಹೋದ ತಿಂಗಳು ಯುಗಾದಿ ಹಿಂದಿನ ದಿನ ತೀರ್ಕೊಂಡ್ನಂತೆ, ಲಾಕ್‌ಡೌನ್‌ಆಗಿತ್ತಲ್ಲವಾ ಬಹಳ ಕಷ್ಟ ಆಯ್ತಂತೆ ಹೆಣ ಸಾಗಿಸೋದು. ಕಡೆಗೆ ಯಾವುದೋ ಟೆಂಪೋ ಗೊತ್ತು ಮಾಡಿ ಹುಟ್ಟಿದ … Read more

ಅಪ್ಪಣ್ಣ ಭಟ್ಟರ ಶ್ರುತಿಪೆಟ್ಟಿಗೆ: ಡಾ. ವಿಶ್ವನಾಥ ಎನ್ ನೇರಳಕಟ್ಟೆ

“. . . ವಿಚ. ಕ್ಷಣಗು. ಣಶೀ. ಲದಯಾ. ಲವಾ. ಲಮಾಂ. ಪಾ. ಲಯ. . . ” ತಾರಸ್ಥಾಯಿಯೇ ಉತ್ತುಂಗವೆನಿಸಿದ್ದ ಸಾಲನ್ನು ಹಾಡುವಾಗ ಅಪ್ಪಣ್ಣ ಭಟ್ಟರ ಶ್ರುತಿ ಎಲ್ಲೋ ಕಳೆದುಹೋಯಿತು. ಶುದ್ಧ ಮಧ್ಯಮ ಧ್ವನಿ ಹೊಮ್ಮುವ ಬದಲು ಪ್ರತಿ ಮಧ್ಯಮ ಧ್ವನಿಯನ್ನು ಅವರ ಗಂಟಲು ಹೊರಡಿಸಿದ್ದರಿಂದಾಗಿ ಅಪಶ್ರುತಿ ಕೇಳಿಬಂತು. ಅದು ಅವರಿಗೆ ತಿಳಿಯದ ಸಂಗತಿಯೇನಲ್ಲ. ತಕ್ಷಣಕ್ಕೆ ತಾನೆಲ್ಲೋ ತಪ್ಪು ಮಾಡಿದ್ದೇನೆ ಎಂಬ ಭಾವ ಅವರನ್ನು ಆವರಿಸಿತು. ಆದರೆ ಅದನ್ನು ಒಪ್ಪಿಕೊಳ್ಳಲು ಮನಸ್ಸು ಬಾರದೆ ಶ್ರುತಿಪೆಟ್ಟಿಗೆಯ ಕಡೆಗೆ … Read more

ಭೀಮಹೆಜ್ಜೆ: ಡಾ. ವಿಶ್ವನಾಥ ಎನ್ ನೇರಳಕಟ್ಟೆ

ಕುರುಕ್ಷೇತ್ರ ಯುದ್ಧದ ಹತ್ತೊಂಭತ್ತನೆಯ ದಿನ ರಣರಂಗದಲ್ಲಿ ಶಬರಿ ಬಂದು ಅಳುತ್ತಾ ಕುಳಿತಂತೆ ಕಾಣಿಸುತ್ತಿದ್ದಳು,ಭರತಪುರದ ತನ್ನ ಜಮೀನಿನಲ್ಲಿ ಕೆಂಪು ನೆಲದ ಮೇಲೆ ಕುಳಿತು ಅಳುತ್ತಿರುವ ಪಳನಿಯಮ್ಮ. ಸುತ್ತಮುತ್ತ ನಡು ಮುರಿಸಿಕೊಂಡು ಚೆಲ್ಲಾಪಿಲ್ಲಿಯಾಗಿ ಬಿದ್ದಿರುವ ಬಾಳೆಯ ಗಿಡಗಳು, ಅವುಗಳ ಮಧ್ಯೆ ಎಪ್ಪತ್ತೆರಡರ ಹಿರಿಜೀವ ಪಳನಿಯಮ್ಮ. ಕದಳಿ ವನದಲ್ಲಿ ಕದಡಿ ಕುಳಿತಂತಹ ನಿಲುವು ಅವಳದ್ದಾಗಿತ್ತು. ಬಿಕ್ಕಳಿಸುತ್ತಿದ್ದಳು. ನೆಲದ ಮೇಲೆ ಎರಡೆರಡು ಸಲ ಕೈಬಡಿದಳು. ತನ್ನ ಹೊಟ್ಟೆ ಸೇರಿ ತಂಪುಮಾಡಲಿ ಎಂದು ತಾನು ನಿರುಕಿಸುತ್ತಿದ್ದ ಹಣ್ಣುಹಣ್ಣಾದ ಗೊನೆ ಇದೆಯೇ ಎಂದು ತಾನು ಕುಳಿತಲ್ಲಿಂದಲೇ … Read more

ಬ್ಲಾಕೀ ನಾಯಿ ಕಥೆ: ಕೋಡೀಹಳ್ಳಿ ಮುರಳೀ ಮೋಹನ್

ತೆಲುಗು ಮೂಲ :ಕಂದಾಳ ಶೇಷಾಚಾರ್ಯಲು ಸ್ವೇಚ್ಚಾನುವಾದ: ಕೋಡೀಹಳ್ಳಿ ಮುರಳೀ ಮೋಹನ್ ೧ ಅದು ಒಂದು ಸಣ್ಣ ಹಳ್ಳಿಯಾಗಿತ್ತು. ಅಲ್ಲಿ ಕರಣಂ (ಹಳ್ಳಿಯ ಲೆಕ್ಕಿಗ) ಅವರ ಮನೆಯಲ್ಲಿ ಒಂದು ನಾಯಿ ಮರಿಯನ್ನು ಸಾಕುತ್ತಿದ್ದರು. ಅದು ನೋಡಲು ಬೀದಿ ನಾಯಿಗಳಂತೆ ಇದ್ದರೂ, ಜೊತೆಯಲ್ಲಿ ಹುಟ್ಟಿದವರು ಯಾರೂ ಇಲ್ಲದ ಕಾರಣ, ತಾಯಿ ಹಾಲನ್ನು ಪುಷ್ಟಿಯಾಗಿ ಕುಡಿದು ಗಟ್ಟಿಮುಟ್ಟಾಗಿ ಬೆಳೆಯುತ್ತಿತ್ತು. ಅದಕ್ಕೆ ‘ರಾಮು’ ಎಂದು ಹೆಸರಿಟ್ಟರು. ಕರಣಂ ಅವರು ‘ರಾಮ್’ ಎಂದು ಕರೆಯುತ್ತಿದ್ದಂತೆ ಅದು ಅವರ ಹಿಂದೆ ಹೊಲಗಳಿಗೆ ಹೋಗಿ ಮೇಲ್ವಿಚಾರಣೆ ನಡೆಸುತ್ತಿತ್ತು. … Read more

ಧರ್ಮೊದಕ: ಚಂದಕಚರ್ಲ ರಮೇಶ ಬಾಬು

ಬೆಂಗಳೂರಿನಿಂದ ಹೊರಟು, ಹಂಪಿ ಎಕ್ಸ್ ಪ್ರೆಸ್ಸಿನಲ್ಲಿ ಹೊಸಪೇಟೆಗೆ ತಲುಪಿದ್ದೆ. ಅಲ್ಲಿಂದ ಹಂಪಿಗೆ ಹೊರಡುವುದಿತ್ತು. ರೈಲಿನ ಹೆಸರು ಹಂಪಿ ಎಕ್ಸ್ ಪ್ರೆಸ್ ಅಂತ ಇದ್ದರೂ ಅದು ಹಂಪಿಗೆ ಹೋಗುವುದಿಲ್ಲ. ಹಂಪಿಗೆ ನಿಲ್ದಾಣವೇ ಇಲ್ಲ. ಹೆಸರು ಮಾತ್ರ ಉಳಿದುಕೊಂಡಿದೆ. ಹೊಸಪೇಟೆಯಿಂದ ಹಂಪಿಗೆ ಅರ್ಧಗಂಟೆಗೊಂದು ಬಸ್ಸಿದೆ. ಹಾಗಾಗಿ ಬಸ್ ಸ್ಟಾಂಡಿನ ಎದುರಿನಲ್ಲಿರುವ ಉಡುಪಿ ಹೋಟೆಲಿಗೆ ಹೋಗಿ ಬೆಳಗಿನ ಪೆಟ್ರೋಲ್ ಹಾಕೋಣವೆಂದು ಹೊರಟೆ. ರೈಲಿನಲ್ಲಿ ಕಾಲು ನೀಡಿ ನಿದ್ರೆ ಮಾಡಿದ್ದರೂ, ಇನ್ನೂ ಪ್ರಯಾಣದ ದಣಿವು ಮಾತಾಡುತ್ತಿತ್ತು. ಹೋಟೆಲಿಗೆ ಹೋಗಿ ಸರ್ವರನಿಗೆ ಕಾಫಿ ಕೊಡಲು … Read more

ಸೇವಾ ಮನೋಭಾವ: ಎಲ್. ಚಿನ್ನಪ್ಪ, ಬೆಂಗಳೂರು

ದಯಾನಿಧಿಯವರು ಆಸ್ಪತ್ರೆಗೆ ದಾಖಲಾಗಿ ಹದಿನೈದು ದಿನಗಳಾಗಿವೆ, ಆಸ್ಪತ್ರೆಯಲ್ಲಿ ಅವರಿಗೆ ಸತತ ಚಿಕಿತ್ಸೆಗಳು ಜರುಗುತ್ತಿವೆ. ಅವರಿಗೆ ಅಂತಹ ಗಂಭೀರ ಸ್ವರೂಪದ ಖಾಯಿಲೆಯೇನೂ ಇಲ್ಲ. ವಯೋಸಹಜ ಕಾರಣಕ್ಕೆ ಕಾಣಿಸಿಕೊಂಡ ಒಂದು ಸಾಧಾರಣ ತೊಂದರೆಗೆ ಅವರು ಅತ್ಯಂತ ಮಹತ್ವಕೊಟ್ಟು ತಮ್ಮ ಹಣ ಖರ್ಚುಮಾಡಿಕೊಂಡು ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತಿದ್ದಾರೆ. ಹಾಸಿಗೆಯಲ್ಲಿ ಮಲಗಿದ್ದಂತೆಯೇ ದಯಾನಿಧಿಯವರು ತಾವೇ ಮಗ್ಗುಲು ಬದಲಾಯಿಸಿಕೊಂಡರು. ದೇಹ ಮೂತ್ರ ವಿಸರ್ಜನೆಗೆ ಕರೆ ಕೊಟ್ಟಿತು. ಅವರು ಎದ್ದು ಹತ್ತಿರವೇ ಇದ್ದ ಶೌಚಾಲಯಕ್ಕೆ ಹೋಗಿ ಬರಬಹುದಿತ್ತು, ಆದರೆ ಅವರು ಹಾಸಿಗೆ ಬಿಟ್ಟು ಮೇಲೇಳಲಿಲ್ಲ. … Read more

“ಅರ್ಥ ಹೀನ”: ಅರವಿಂದ. ಜಿ. ಜೋಷಿ.

“ಅಮ್ಮಾ…. ನೀನೂ ನಮ್ಮ ಜೊತೆಗೆ ಬೆಂಗಳೂರಿಗೆ ಬಾ,.. ಇಷ್ಟು ದಿನ ಅಪ್ಪಾ ಇದ್ರು ಆಗ ಮಾತು ಬೇರೆ ಇತ್ತು, ಈಗ ಈ ಊರಲ್ಲಿ ನೀನೊಬ್ಬಳೇ ಇರೋದು ಬೇಡಾ”ಎಂದು ಪ್ರಕಾಶ್ ತನ್ನ ತಾಯಿಗೆ ಹೇಳಿದಾಗ ಆತನ ತಾಯಿ ರಾಧಾಬಾಯಿ ಕೊಂಚ ಯೋಚನೆಗೊಳಗಾದರು. ಕಳೆದ ಹದಿನೈದು ದಿನ ಗಳ ಹಿಂದಷ್ಟೇ, ಅವರ ಪತಿ ರಾಜಪ್ಪನವರು ಹೃದಯಾಘಾತದಿಂದ ಮರಣಹೊಂದಿದ್ದರು. ಅಂದಿನಿಂದ ತಮ್ಮನ್ನು ತಾವು ಸಮಾಧಾನಿಸಿಕೊಳ್ಳಲು ಸಾಕಷ್ಟು ಪ್ರಯತ್ನಿಸಿದ್ದರು. ರಾಧಾಬಾಯಿಯ ಮಗ ಪ್ರಕಾಶ್ ಹಾಗೂ ಸೊಸೆ ಪ್ರಿಯಾ ಇಬ್ಬರೂ ಇಂಜಿನೀಯರ್ ಆಗಿದ್ದು ಇಬ್ಬರೂ … Read more

ಮತ್ತೆ ಒಂದು ನಾಟಕ: ಕೊಡೀಹಳ್ಳಿ ಮುರಳೀಮೋಹನ್

ತೆಲುಗು ಮೂಲ: ಕಸ್ತೂರಿ ಮುರಳೀಕೃಷ್ಣಕನ್ನಡ ಅನುವಾದ: ಕೊಡೀಹಳ್ಳಿ ಮುರಳೀಮೋಹನ್ ನನ್ನ ಕಣ್ಣುಗಳು ಅವನ ನಡೆ, ನುಡಿಗಳನ್ನು ಹಿಂಬಾಲಿಸಿದವು. ಅವನ ನಡಿಗೆಯಲ್ಲೇ ಒಂದು ವಿಚಿತ್ರ ಲಯವಿತ್ತು. ಆ ಲಯ, ನನ್ನ ನಾಟಕದ ಮುಖ್ಯ ಪಾತ್ರದಂತೆಯೇ ಕಂಡಿತು. ‘ಯಾರವನು?’ ಎಂದು ನನ್ನ ಸಹೋದ್ಯೋಗಿಯನ್ನು ಕೇಳಿದೆ. ‘ಅವನು ಪ್ರಸಾದರಾವ್. ಒಂದು ರೀತಿಯಲ್ಲಿ ಹುಚ್ಚ. ಅವನ ವಿಷಯದಲ್ಲಿ ಯಾರೂ ತಲೆ ಹಾಕುವುದಿಲ್ಲ’ ಎಂದು ನಕ್ಕ. ಆದರೂ ನನ್ನ ಮನಸ್ಸು ಆತನನ್ನೇ ಹಿಂಬಾಲಿಸಿತು. ಆತ ಇನ್ನೊಬ್ಬರೊಂದಿಗೆ ನಗುತ್ತಾ, ಹರಟುತ್ತಿದ್ದ. ಆ ನಗು, ಆ ಹರಟೆಗಳಲ್ಲಿ … Read more

ಸ್ಮಾರ್ಟ್ವಾಚು ಮತ್ತು ಹಳದಿ ಮೀನು: ಡಾ. ವಿಶ್ವನಾಥ ಎನ್ ನೇರಳಕಟ್ಟೆ

ನೆರಳಿನಲ್ಲಿದ್ದ ಬಂಡೆಗಲ್ಲಿನ ಮೇಲೆ ನೀಳವಾಗಿ ಮೈಚಾಚಿದ್ದ ಸೋಂಪ ದಿಗ್ಗನೆ ಒಂದೇಸಲಕ್ಕೆಎದ್ದುಕುಳಿತ. ಒಳಸೇರಿದ್ದ ದಿವ್ಯಾಮೃತ ಇದುವರೆಗೂ ಬೇರೆ ಯಾವಯಾವುದೋ ಲೋಕದಲ್ಲಿ ತನ್ನನ್ನು ಸುತ್ತಾಡಿಸುತ್ತಿತ್ತು. ಈಗದು ವೈಜಯಂತೀ ಹೊಳೆಯ ತೀರಕ್ಕೆ ಒಗೆದಿದೆ ಎಂದುಕೊಂಡ. ಒಂದು ಹಳೆಯ ಪಂಚೆ ಅವನ ಕೆಳಮೈಯ್ಯನ್ನು ಅರ್ಧಂಬರ್ಧವಾಗಿ ಆವರಿಸಿತ್ತು. ಮೇಲ್ಗಡೆ ಇದ್ದದ್ದು ಬಗೆಬಗೆಯ ಶೂನ್ಯಾಕೃತಿಗಳಿಗೆ ಜೀವಂತ ಸಾಕ್ಷಿ ಎನಿಸಿದ್ದ ಬನಿಯನ್ನು. ಅಂಗಿ ಅಲ್ಲೇ ಆ ಬಂಡೆಗಲ್ಲಿನ ಹಿಂದೆ ಬಿದ್ದಿತ್ತು. ಏನೋ ಸದ್ದು ಕೇಳಿದಂತಾಯಿತಲ್ಲ! ಅದರಿಂದಲೇ ಅಲ್ಲವೇ ತನಗೆ ಎಚ್ಚರ ಆದದ್ದು!ಎಂದುಕೊಂಡ ಅವನು. ಯಾರೋ ನೀರಿಗೆ ಹಾರಿದ … Read more

ಮಾಸಿದ ಪಟ: ಎಫ್.‌ ಎಂ. ನಂದಗಾವ

ಕ್ರಿಸ್ಮಸ್ ಬಂತಂದ್ರ ನನಗ ನಮ್ಮ ಮನ್ಯಾಗಿದ್ದ ಮಾಸಿದ ಪಟ ನೆನಪಾಗ್ತದ. ಸಣ್ಣಾಂವ ಇದ್ದಾಗ ನಾ ಮಾಡಿದ್ದ ಹಳವಂಡದ ಕೆಲಸ ನೆನಪಾಗಿ ಮನಸ್ಸ ಖಜೀಲ ಆಗ್ತದ. ನನಗ ತಿಳಿವಳಿಕಿ ಬಂದಾಗಿಂದಲೂ, ನಮ್ಮ ಮನೆಯ ದೇವರ ಪೀಠದಾಗ ಅಪ್ಪ ಜೋಸೆಫ್, ಅವ್ವ ಮರಿಯವ್ವ ಮತ್ತು ಬಾಲಯೇಸುಸ್ವಾಮಿ ಅವರ ಪವಿತ್ರ ಕುಟುಂಬದ ಚಿತ್ರಪಟದ ಜೋಡಿ ಒಬ್ಬರು ಸ್ವಾಮಿಗಳ ಚಿತ್ರಪಟಾನೂ ಐತಿ. ಕನ್ನಡ ಸಾಲಿ ಓದ ಮುಗಿಸಿ, ನಾನು ಪ್ಯಾಟಿಯೊಳಗಿನ ಹೈಸ್ಕೂಲ್ ಕಟ್ಟಿ ಏರಿದಾಗ ನನ್ನ ಸಹಪಾಠಿಗಳು ನಮ್ಮ ಮನಿಗೆ ಬಂದಾಗಲೆಲ್ಲಾ, `ಅದೇನೋ, … Read more

ಈ ಪ್ರಶ್ನೆಗೆ ಉತ್ತರವೇನು?: ಕೊಡೀಹಳ್ಳಿ ಮುರಳೀ ಮೋಹನ್

ತೆಲುಗು ಮೂಲ: ಸಂಘಮಿತ್ರಕನ್ನಡ ಅನುವಾದ: ಕೊಡೀಹಳ್ಳಿ ಮುರಳೀ ಮೋಹನ್ ದೇರೆಬೈಲು ಐ.ಟಿ. ಹಿಲ್ಸ್, ಟವರ್ ನಂಬರ್ 4, ಹತ್ತನೇ ಮಹಡಿ.ವಿವಿಧ ಕ್ಷೇತ್ರಗಳ ವಿಶ್ವಪ್ರಸಿದ್ಧ ವಿಜ್ಞಾನಿಗಳು ಮತ್ತು ಹಲವಾರು ದೇಶಗಳ ಸರ್ಕಾರಿ ಪ್ರತಿನಿಧಿಗಳಿಂದ ತುಂಬಿರುವ ಸಭಾಂಗಣ. ಇನ್ನೆಷ್ಟು ಹೊತ್ತು? ಇನ್ನು ಐದೇ ನಿಮಿಷ. ಇಡೀ ಜಗತ್ತು ಕಾತರದಿಂದ ಕಾಯುತ್ತಿರುವ ಅದ್ಭುತ ಆವಿಷ್ಕಾರವೊಂದು ಅಲ್ಲಿ ಸಂಭವಿಸಲಿದೆ. ನೋಡುತ್ತಿದ್ದಂತೆ, ವೇದಿಕೆಯ ಮೇಲೆ ತಿಳಿನೀಲಿ ಬಣ್ಣದ ತೆಳುವಾದ ಮಂಜು ಆವರಿಸಿತು. ಕುತೂಹಲಕ್ಕೆ ತೆರೆ ಎಳೆದಂತೆ, ಡಾ. ವಾಣಿ ಅವರ ಐದು ವರ್ಷಗಳ ಕಠಿಣ … Read more

ಹಕ್ಕರಕಿಯೂ, ಸಮೀಕ್ಷೆಯೂ: ಎಫ್.‌ ಎಂ. ನಂದಗಾವ

ʻʻನಾವ್, ಹಕ್ಕರಕಿ ಮಾರೂದಿಲ್ಲರಿ ಸಾವಕಾರರ.ʼʼ ʻʻಯಾಕವ್ವ, ಹಕ್ಕರಕಿ ನೀವ್ಯಾಕ ಮಾರೂದಿಲ್ಲ?ʼʼ ʻʻನಿಮಗ ಕಾಯಿಪಲ್ಲೆ ಬೇಕಲಾ? ಮೆಂತೆ ಪಲ್ಲೆ ಬೇಕೋ? ಪುಂಡಿಪಲ್ಲೆ ಬೇಕೋ, ಸಬ್ಬಸಗಿ ಬೇಕೋ, ರಾಜಗಿರಿ ಬೇಕೋ ತಗೊಳ್ರಿ. ಕೋತಂಬ್ರಿ ಬೇಕಾತು ತಗೊಳ್ರಿ. ಬರಿ ಕರಿಬೇವು ಕೊಡಾಂಗಿಲ್ಲ ನೋಡ್ರಿ.ʼʼ ಸಂತೆ ಮೈದಾನದ ಒಳಗೆ ಎತ್ತರದ ಕಟ್ಟೆಗಳಲ್ಲಿನ ಒಂದು ಕಟ್ಟೆಯಲ್ಲಿ ಕುಳಿತು ಕಾಯಿಪಲ್ಲೆ ಮಾರುತ್ತಿದ್ದ ಸಾಂವತ್ರಕ್ಕ ಹೇಳಾಕ್ಹತ್ತಿದ್ದಳು. ಸಾಂವತ್ರಕ್ಕನ ಹಣಿ ಮ್ಯಾಲ ಮೂರು ಬೆರಳಿನ ವಿಭೂತಿ ಇದ್ದರ, ಕೊರಳಾಗ ತಾಳಿ ಜೋಡಿ ಬೋರಮಾಳ ಮತ್ತು ಅವಲಕ್ಕಿ ಸರಗಳು ಇದ್ದವು. … Read more

ವಿಭಾವರಿ (ಕೊನೆಯ ಭಾಗ): ವರದೇಂದ್ರ ಕೆ ಮಸ್ಕಿ

ಇತ್ತ ಅನುಪಮಾಳ ಅಳು ನೋಡಲಾಗದೆ ತೇಜಸ್ ಕೂಡ ಬಿಕ್ಕಿ ಬಿಕ್ಕಿ ಅಳಲು ಪ್ರಾರಂಭಿಸಿದ್ದಾನೆ. ಇದನ್ನು ಕಂಡ ವಿಭಾಳ ಮನಸಲ್ಲಿ ತಲ್ಲಣವಾಗುತ್ತಿದೆ. ನಾನು ತಪ್ಪು ಮಾಡಿದೆ, ಮತ್ತೆ ಮತ್ತೆ ತಪ್ಪೇ ಮಾಡುತ್ತಿದ್ದೇನೆ. ಅಂದು ತೇಜಸ್ನನ್ನು ಬಿಟ್ಟು ಹೋಗಿ ತಪ್ಪು ಮಾಡಿದೆ, ಈಗ ಮತ್ತೆ ಅವನೊಂದಿಗೆ ಬಂದು ಮತ್ತೆ ತಪ್ಪು ಮಾಡಿದ್ದೇನೆ. ಆದರೆ ತೇಜಸ್ನ ಜೊತೆ ಬರದೇ ವಿಧಿ ಇರಲಿಲ್ಲ.. ಈಗ ಏನು ಮಾಡಲಿ.. ಏನು ಮಾಡಲಿ.. ಎಂದು ಚಿಂತೆಯಲ್ಲಿ ಮುಳುಗಿದವಳನ್ನು ಅವಳ ಗೆಳತಿ ವೇದಶ್ರೀ ಬಂದು ಕರೆದುಕೊಂಡು ಹೋಗುತ್ತಾಳೆ. … Read more

ವಿಭಾವರಿ (ಭಾಗ 4): ವರದೇಂದ್ರ ಕೆ ಮಸ್ಕಿ

ಅನುಪಮಾಳ ಅನುರಾಗದಲೆಯಲ್ಲಿ ತೇಜಸ್ ಅನುಪಮಾ ಮಾಧವನ ಒಬ್ಬಳೇ ಮುದ್ದಿನ ತಂಗಿ. ವರ್ಣನಾತೀತ ರೂಪ, ಬೆಳ್ಳನೆಯ ಚರ್ಮ ಇಲ್ಲದೆ ತುಸು ಕಪ್ಪಾದ ಮೈ ಬಣ್ಣ ಹೊಂದಿದ ಕೃಷ್ಣ ಸುಂದರಿ. ಆ ಕಣ್ಣುಗಳನ್ನು ನೋಡುತ್ತಿದ್ದರೆ ನವಿಲೇ ನಾಚಬೇಕು, ತುಂಬಿಕೊ ಂಡ ಗಲ್ಲಗಳನ್ನು ಸ್ಪರ್ಶಿಸಿದರೆ ಕೈಯಲ್ಲಿ ಹೂ ಹಿಡಿದ ಅನುಭವ. ಸುಂದರ ರೂಪಲಾವಣ್ಯದ ಜೊತೆಗೆ ಗುಣವಂತೆ, ಸಂಸ್ಕಾರವ ಂತೆ, ಸಹೃದಯ ಮನಸಿನ ಭಾವನಾತ್ಮಕ ಜೀವಿ, ಒಬ್ಬಳನ್ನು ಪ್ರೇಮಿಸಿ ಅವಳಿಗಾಗಿ ಲಕ್ಷಗಟ್ಟಲೇ ಹಣ ಖರ್ಚು ಮಾಡಿ ಅವಳಿಂದ ಮೋಸಹೋಗಿ ಕುಗ್ಗಿಹೋದವನನ್ನು ಮದುವೆ ಆಗಲು … Read more

ಆರಿದ ದೀಪ: ಎಲ್.ಚಿನ್ನಪ್ಪ, ಬೆಂಗಳೂರು

“ಸ್ಮಿತಾ ಹಸ್ಬೆಂಡ್ ಯಾರು ಎನ್ನುತ್ತ, ಡಾಕ್ಟರ್ ಐಸಿಯು ವಾರ್ಡ್ನಿಂದ ಹೊರಕ್ಕೆ ಬಂರರು. “ನಾನೇ ಡಾಕ್ಟರ್” ಎನ್ನುತ್ತ ಮೋಹನ್, ಸೀನಿಯರ್ ಡಾಕ್ಟರ್ ಸೀತಾರಾಂರವರ ಕಂಚಿನ ಕಂಟದ ಕರೆಗೆ ಅವರ ಹತ್ತಿರಕ್ಕೆ ಹೋದ. ಎದುರಿಗೆ ಬಂದು ನಿಂತ ಮೋಹನ್ನ ಮುಖ ನೋಡಿದ ಡಾಕ್ಟರ್, “ನೋಡಿ ಮಿಸ್ಟರ್ ಮೋಹನ್, ನಾವು ನಮ್ಮ ಶಕ್ತಿಮೀರಿ ಪ್ರಯತ್ನಿಸಿದ್ದೇವೆ, ನಿಮ್ಮ ಪತ್ನಿಗೆ ಕೊಡಬೇಕಾದ ಚಿಕಿತ್ಸೆಯನ್ನೆಲ್ಲಾ ಕೊಟ್ಟಿದ್ದೇವೆ, ಮುಂದಿನದು ದೈವೇಚ್ಚೆ. ನಿಮ್ಮ ಪತ್ನಿ ಈಗ ಆಕ್ಸಿಜನ್ನಿಂದ ಉಸಿರಾಡುತ್ತಿದ್ದಾರೆ. ಆಕೆಯ ನಾಡಿ ಮಿಡಿತ ಕ್ಷಣ ಕ್ಷಣಕ್ಕು ಕ್ಷೀಣಿಸುತ್ತಿದೆ. ಇನ್ನು … Read more

ಅಣ್ಣ-ತಂಗಿ: ಸಿದ್ಧರಾಮ ಹಿಪ್ಪರಗಿ (ಸಿಹಿ), ಧಾರವಾಡ.

ರಂಗಭೂಮಿಯ ವೈಭವದ ದಿನಗಳ ಅಂದಿನ ಕಾಲದ ದೀಮಂತರ ಕುರಿತಾದ ಭಾಷಣ ಕೇಳಿ ಹೊರ ಬಂದ ಸುಮಾ ಮತ್ತು ಸೂರಜ ತೀವ್ರ ಭಾವುಕರಾಗಿದ್ದರು. ತನ್ನಜ್ಜಿಯ ಕಂಪನಿಯ ಕುರಿತು ಸವಿಸ್ತಾರವಾಗಿ ವಿವರಿಸಿದ್ದ ಅಧ್ಯಯನಶೀಲ ಅನಾಮಿಕ ಭಾಷಣಕಾರರ ಮಾತುಗಳಿಂದ ಉಬ್ಬಿಹೋಗಿದ್ದ ಸುಮಾಳಿಗೆ ಏನೋ ಹೇಳಿಕೊಳ್ಳಬೇಕೆಂಬ ಉಮೇದು. “ಆ ಉಮೇದಿಗೆ ಉತ್ತರವಾಗಿ ಸ್ಪಂಧಿಸುವವನೆಂದರೆ ಕ್ಲಾಸ್‌ಮೇಟ್‌ ಸೂರಜ್‌ ಮಾತ್ರ!” ಎಂದು ಮನದಲ್ಲಿಯೇ ಯೋಚಿಸುತ್ತಾ ಸೂರಜನೆಡೆಗೆ ನೋಡಿದಳು. “ಲೇಟಾದರೆ ಪಿಜಿಯಲ್ಲಿ ಊಟ ಸಿಗೋಲ್ಲಾ, ನಾನು ಬರಲಾ ಸುಮಾ?” ಎಂದು ತನ್ನ ಇಲೆಕ್ಟ್ರಿಕ್‌ ಸ್ಕೂಟಿ ಸ್ಟಾರ್ಟ ಮಾಡಲು … Read more

ಸೆರೆಮನೆರಹಿತ ಕೈದಿ: ಎಲ್.ಚಿನ್ನಪ್ಪ, ಬೆಂಗಳೂರು.

“ನನ್ನ ಮಗ ಎಷ್ಟೇ ಕೆಟ್ಟವನಾಗಿದ್ದರೂ ನಮ್ಮೊಡಲಿನ ರಕ್ತವನ್ನು ಹಂಚಿಕೊಂಡು ಧರೆಗೆ ಬಂದವನಲ್ಲವೆ? ನಮ್ಮ ಕರುಳ ಕುಡಿಯೇ ಅಲ್ಲವೆ? ತನ್ನ ತಾಯಿಯ ತದ್ರೂಪವನ್ನೇ ಹೊತ್ತು ಬಂದಿರುವ ಅವನ ಮುಖದಲ್ಲಿ ನನ್ನ ಪತ್ನಿಯ ಪ್ರತಿಬಿಂಬ ಕಾಣುತ್ತಿದ್ದೇನೆ” ಎಂದಿನಂತೆ ಕಛೇರಿ ಕೆಲಸ ಮುಗಿಸಿಕೊಂಡು ಅಂದು ಸಂಜೆ ಮನೆಗೆ ಮರಳಿದೆ. ಬೀಗ ಹಾಕಿದ್ದ ನನ್ನ ಮನೆಯ ಬಾಗಿಲ ಬಳಿ ಆ ವೃದ್ಧರು ಕಾದು ಕುಳಿತ್ತಿದ್ದರು. ನಾನೊಬ್ಬ ಸರಕಾರಿ ನೌಕರ, ಇಲ್ಲಿಗೆ ಬಡ್ತಿಯ ಮೇಲೆ ವರ್ಗವಾಗಿ ಬಂದು ಆರು ತಿಂಗಳಾಗಿವೆ. ನನ್ನ ಸ್ವಂತ ಸ್ಥಳವು … Read more