ರಾಷ್ಟ್ರೀಯ ‘ ಹುತಾತ್ಮರ ದಿನ ‘: ಡಾ.ಅವರೆಕಾಡು ವಿಜಯ ಕುಮಾರ್

ಜನವರಿ 30 ಈ ವಿಶೇಷ ದಿನವನ್ನು ದೇಶದ ಸ್ವಾತಂತ್ರ್ಯಕ್ಕಾಗಿ, ದೇಶದ ಭವಿಷ್ಯಕ್ಕಾಗಿ, ದೇಶದ ಬೆಳವಣಿಗೆಗಾಗಿ ತಮ್ಮ ಪ್ರಾಣವನ್ನು ಮುಡಿಪಾಗಿಟ್ಟು, ಹೋರಾಡಿ ಮಡಿದ ರಾಷ್ಟ್ರೀಯ ವೀರ ನಾಯಕರುಗಳನ್ನು ನೆನೆಯುವ ದಿನ. ಭಾರತವು ಸೇರಿದಂತೆ ಜಗತ್ತಿನ 15ಕ್ಕೂ ಹೆಚ್ಚು ರಾಷ್ಟ್ರಗಳಲ್ಲಿ ಈ ರಾಷ್ಟ್ರೀಯ ದಿನವನ್ನು’ ಹುತಾತ್ಮರ ದಿನ’ ಅಥವಾ ‘ಸರ್ವೋದಯ ದಿನ’ ಎಂಬ ಹೆಸರಿನಿಂದ ಕರೆಯಲಾಗುತ್ತದೆ.ಭಾರತ ಸರ್ಕಾರದ ಆದೇಶದನ್ವಯ ದೇಶದಾದ್ಯಂತ ದೇಶದ ರಕ್ಷಣೆಯಲ್ಲಿ ಪ್ರಾಣತೆತ್ತ ಹುತಾತ್ಮರನ್ನು ಗೌರವಿಸುವ ಸಲುವಾಗಿ ಈ ದಿನವನ್ನು ಆಚರಿಸಿಕೊಂಡು ಬರಲಾಗುತ್ತಿದೆ. ದೇಶಕ್ಕಾಗಿ ಪ್ರಾಣತೆತ್ತವರ ತ್ಯಾಗಕ್ಕೆ ಎಂದೆಂದಿಗೂ … Read more

ಮೆಟ್ಟು ಹೇಳಿದ ಕಥಾ ಪ್ರಸಂಗ ಒಂದು ನೀಳ್ಗಾವ್ಯ (ಭಾಗ 63 & 64): ಎಂ. ಜವರಾಜ್

-೬೩-ದಿನ ಕಳಿತಾ ಊರು ಬಣ್ಗೆಡ್ತಿತ್ತುಚೇರ್ಮನ್ ಗಿರಿನು ಮುಗಿತಾ ಇತ್ತುಬರವ್ರು ನಿಂತ್ರು ಹೋಗವ್ರು ಹೋದ್ರುಮೈನೆರಿದೆ ಇರ ಆ ದೊಡ್ಡವ್ವುನ್ ಮೊಮ್ಮೆಣ್ಣುಮದ್ವ ಆಗಿ ಗಂಡುನ್ ಮನ ಸೇರ್ತುಆದ್ರ ಆ ಆಳ್ ಮಾತ್ರ ಹಂಗೆ ನಗ್ತಾ ನಗ್ತಾಈ ಅಯ್ನೋರ್ ತಿಕುದ್ ಸಂದಿ ಬುಟ್ಟದು ಕಾಣಿಈಗಿರ ಅರ್ಧ ತ್ವಾಟ ಅವ್ನೆಸ್ರುಗ ಖಾತನು ಆಗಿತ್ತುಅನ್ನದು ಗುಟ್ಟಾಗಿ ಉಳಿಯದೇನ್ ಬಂತು… ರಾತ್ರ ಸ್ಯಾನೆ ಹೊತ್ತಾಗಿತ್ತುಆ ಆಳು ಅದ್ಯಾತಿಕ್ಯಾ ಏನಾಈ ಅಯ್ನೋರ್ ಜಗುಲಿ ಮ್ಯಾಲಹೆಡ್ತಿನ ಕುಂಡ್ಸಿ ತ್ವಾಟ್ಕ ಹೋದಂಗಿತ್ತುಆ ಆಳ್ನ ಹೆಡ್ತಿ ಅಯ್ನೊರ್ ಮಾತ್ಗ ನಗ್ತಸೆರುಗು ಜಾರಿ … Read more

‘ಮಾತೆಂಬುದು ಜ್ಯೋತಿರ್ಲಿಂಗ’: ವಸುಂಧರಾ ಕದಲೂರು.

ನನ್ನ ಸ್ನೇಹಿತೆಯ ಸ್ನೇಹಿತೆ ಆಕೆ. ನನಗೂ ಒಂದೆರಡು ಬಾರಿಯ ಒಡನಾಟದಿಂದ ಪರಿಚಿತಳಾಗಿದ್ದಳು. ಕೆಲವು ದಿನಗಳ ಹಿಂದೆ ಒಂದು ಸಂಜೆ ನಾನು ಆಫೀಸು ಮುಗಿಸಿ ಮನೆಗೆ ಹೊರಡುವ ಸಮಯದಲ್ಲಿ ‘ಕಾಫಿ ಕುಡಿಯೋಣ ಎಲ್ಲಾದರೂ ಸಿಗಲು ಸಾಧ್ಯವಾ?’ ಎಂಬ ಮೆಸೇಜು ಮಾಡಿದ್ದಳು. ನಾನು ವರ್ಷಾರಂಭದಿಂದಲೇ ಚಹಾ- ಕಾಫಿ ಸೇವನೆ ಬಿಟ್ಟಿರುವುದಾಗಿ ಆಕೆಗೆ ಗೊತ್ತಿತ್ತು. ಆದರೂ ಬೇರೆ ಏನನ್ನೋ ಫೋನಿನಲ್ಲಿ ಹೇಳಿಕೊಳ್ಳಲಾರದ್ದಕ್ಕೆ ಕಾಫಿಯ ನೆವ ತೆಗೆದು ಮಾತನಾಡಲು ಕರೆದದ್ದಿರಬಹುದೆ? ಎಂಬುದು ನನಗೆ ಅರ್ಥವಾಗಿ, ’ಸರಿ, ಬರುವೆ. ಆದರೆ ‘ಕಾಫಿ ಡೇ‘ಗೆ ಹೋಗೋಣ. … Read more

ದೀಪಗೃಹದಲ್ಲಿ ಒಂದು ರಾತ್ರಿ…..: ಜೆ.ವಿ.ಕಾರ್ಲೊ.

ಇಂಗ್ಲಿಷ್ ಮೂಲ: ಜೆ.ಎಸ್.ಫ್ಲೆಚರ್ಅನುವಾದ: ಜೆ.ವಿ.ಕಾರ್ಲೊ. ‘ಶಿವರಿಂಗ್ ಸ್ಯಾಂಡ್’ ದೀಪಗೃಹಕ್ಕೆ ಮತ್ತೊಬ್ಬ ಕಾವಲುಗಾರನಾಗಿ ಮೊರ್ಡೆಕಾಯ್ ಚಿಡ್ಡೋಕ್ ಬಂದು ಇಳಿದಾಗ , ಜೆಝ್ರೀಲ್ ಕಾರ್ನಿಶ್ ತನ್ನ ಪಾಲಿನ ಪಾಳಿಯನ್ನು ಮುಗಿಸಿ ಆಗ ತಾನೇ ನಿದ್ದೆ ಹೋಗಿದ್ದ. ಕಾರ್ನಿಶ್ ನಿದ್ದೆಯಿಂದ ಏಳುವಾಗ ತಾನು ಎದುರುಗೊಳ್ಳಲಿರುವ ಮನುಷ್ಯ ಯಾರು, ಎಂತವನು ಎಂದು ಅವನಿಗೆ ಆ ಗಳಿಗೆಯಲ್ಲಿ ಗೊತ್ತಾಗಿರುವ ಸಂಭವವಿರಲಿಲ್ಲ. ಗೊತ್ತಿದ್ದರೆ ಅವನು ಆಗಷ್ಟೇ ತಿಂಗಳ ರೇಶನ್ ಮತ್ತು ಚಿಡ್ಡೋಕನನ್ನು ಇಳಿಸಿ ಹಿಂದುರಿಗಿದ ದೋಣಿಯನ್ನು ಹತ್ತುವುದರಲ್ಲಿ ಯಾವುದೇ ಸಂಶಯವಿರಲಿಲ್ಲ! ಚಿಡ್ಡೋಕ್ ಬರುವ ಮುನ್ನ ನಾವಿಬ್ಬರೇ … Read more

ನಮ್ಮ ಜಿಲ್ಲೆಯ ಗಜಲ್ ಕಾರರು…(ಕೊನೆಯ ಭಾಗ): ವೇಣು ಜಾಲಿಬೆಂಚಿ

ಮತ್ತೋರ್ವ ಭರವಸೆಯ ಗಜಲ್ ಬರಹಗಾರರು ಶ್ರೀ ಪ್ರಕಾಶ ಬುದ್ದಿನ್ನಿಯವರು… ಅವರು ಬರೆದ ಗಜಲ್ ನ ಸಾಲು ಹೀಗಿದೆ… ” ನೀ ಬರುವೆಯೆಂದು ಕಾದೆ ನೀನು ಬರಲಿಲ್ಲ ದೀಪ ಹಚ್ಚಿಟ್ಟ ರಾತ್ರಿನನ್ನೆದೆಯ ಬಾನಿನಲ್ಲಿ ನೀನು ಚಿತ್ತಾರವಾಗಲಿಲ್ಲ ದೀಪ ಹಚ್ಚಿಟ್ಟ ರಾತ್ರಿ “ ಎಂತಹ ಮನೋಜ್ಞವಾದ ಸಾಲು… ರಾತ್ರಿ ಎಂಬುದೇ ಪ್ರೀತಿಯ ಸಲ್ಲಾಪಕ್ಕೆ ಕರೆಯುವ ವೇದಿಕೆ. . . ಅದರಲ್ಲೂ ದೀಪ ಹಚ್ಚಿಟ್ಟುಕೊಂಡು ಪ್ರಿಯತಮೆಯ ಬರುವಿಕೆಗಾಗಿ ಕಾಯುತ್ತಿರುವ ಪ್ರಿಯಕರ. ಆದರೆ ಎಷ್ಟು ಕಾದರೂ ಅವಳು ಬಂದಳಾ? ನಿರಾಶೆಯನ್ನೇ ಉಳಿಸಿತೆಂದು ಮುಂದಿನ … Read more

‘ಎಮ್ಮೆಗುಂಡಿಯಲ್ ಒಂದು ದಿನ ‘ “ನಿಲುವಂಗಿಯ ಕನಸು “: ದಾಕ್ಷಾಯಿಣಿ

ಯಾವುದೇ ಕೃತಿಯೊಂದನ್ನು ಓದುವಾಗಲೂ ನನ್ನನ್ನು ಬಹುವಾಗಿ ಸೆಳೆಯೋದು ಆ ಕೃತಿಯಲ್ಲಿ ಚಿತ್ರಿತವಾಗುವ ಸ್ತ್ರೀ ಪಾತ್ರಗಳ ಪರಿಭಾವನೆಗಳು.ಈ ನಿಟ್ಟಿನಲ್ಲಿ “ಹಾಡ್ಲಹಳ್ಳಿ ನಾಗರಾಜ್” ಸರ್ ಅವರ “ನಿಲುವಂಗಿಯ ಕನಸು ” ಕಾದಂಬರಿಯಲ್ಲಿಯೂ ನನ್ನ ಗಮನ ಸೆಳೆದ ಪ್ರಮುಖ ಸ್ತ್ರೀ ಪಾತ್ರಗಳು ಎರಡು, ಒಂದು”ಅವ್ವ” ನದು ಮತ್ತೊಂದು “ಸೀತೆ” ಯದು.ಇವರಿಬ್ಬರೂ ಇಡೀ ಕಾದಂಬರಿಯಲ್ಲಿ ಹಸಿರಿನೊಂದಿಗೆ ಜೀವ ಬೆಸೆದು ಮಾತನಾಡುವ ಸ್ತ್ರೀ ತತ್ವದ ಸಂಕೇತಗಳಾಗೇ ನನಗೆ ಕಂಡು ಬರುತ್ತಾರೆ. ಕೃಷಿ ಎಂದ ತಕ್ಷಣ ಅದ್ಯಾಕೋ ನನಗೆ ರೈತ ಪುರುಷನ ಚಿತ್ರ ಕಣ್ಮುಂದೆ ಬರೋದೇ … Read more

ಮತ್ತೊಂದು ಮಹಾಭಾರತ (ಭಾಗ ೧): ಡಾ.ಸಿ.ಎಂ.ಗೋವಿಂದರೆಡ್ಡಿ

ಅರಿಕೆ ಹಸ್ತಿನಾವತಿ ಶಂತನು ಸತ್ಯವತಿಯರ ಪ್ರೇಮ ಪ್ರಸಂಗ -ಸಮುದ್ರದ ನೀರಿನಿಂದ ಆವರಿಸಲ್ಪಟ್ಟ ಜಂಬೂದ್ವೀಪದ ಭರತಕ್ಷೇತ್ರದಲ್ಲಿ ಕುರುಜಾಂಗಣವೆಂಬ ದೇಶವಿದ್ದು ಸಹಜ ಸೊಬಗಿನಿಂದ ಮೆರೆಯುತ್ತ ಸಿರಿಗೆ ತವರುಮನೆಯಾಗಿತ್ತು.ಈ ದೇಶಕ್ಕೆ ಹಸ್ತಿನಾಪುರವೆಂಬುದು ರಾಜಧಾನಿ.ಇಲ್ಲಿ ಚಂದ್ರವಂಶದ ಅರಸ ದುಷ್ಯಂತ ಹಾಗೂ ಶಕುಂತಲೆಯರ ಮಗನಾದ ಭರತನ ಪರಂಪರೆಯಲ್ಲಿ ಜನಿಸಿದಂತಹ ಪ್ರದೀಪನ ಮಗನಾದ ಶಂತನು ಮಹಾರಾಜನು ರಾಜ್ಯವಾಳುತ್ತಿದ್ದನು. ಇವನು ಒಮ್ಮೆ ಬೇಟೆಯಾಡಲಿಕ್ಕೆಂದು ಕಾಡಿಗೆ ಹೊರಟವನು ಆಯಾಸ ಪರಿಹಾರಾರ್ಥವಾಗಿ ಗಂಗಾನದಿಯ ತೀರದಲ್ಲಿ ವಿಶ್ರಮಿಸುತ್ತಿರುವಾಗ ಪರಮ ಸುಂದರಿಯಾದ ಗಂಗಾದೇವಿಯೆಂಬ ಹೆಣ್ಣನ್ನು ಕಂಡು ಅವಳ ರೂಪಸಂಪತ್ತಿಗೆ ಮರುಳಾದ- -ಡಾ.ಸಿ.ಎಂ.ಗೋವಿಂದರೆಡ್ಡಿ ಮುಂದುವರೆಯುವುದು.. … Read more

ಸ್ಪೂರ್ತಿಯ ಸುಮಗಳೊಂದಿಗೆ ಮನಸ್ಪೂರ್ತಿಯಾಗಿ ಮಾತಾದಾಗ…: ಸುರೇಶ ಎಲ್.ರಾಜಮಾನೆ, ರನ್ನಬೆಳಗಲಿ

ಕವನಸಂಕಲನ: ಸ್ಪೂರ್ತಿಯ ಸುಮಗಳುಲೇಖಕಿಯರು: ಶ್ರೀಮತಿ ದಾಕ್ಷಾಯಣಿ ಮಂಡಿ ‘ಸ್ಪೂರ್ತಿಯ ಸುಮಗಳು’ ಶ್ರೀಮತಿ ದಾಕ್ಷಾಯಿಣಿ ಮಂಡಿ ಅವರ ಮೊದಲ ಕವನ ಸಂಕಲನ ಈ ಸಂಕಲನದಲ್ಲಿ 60 ವಿಭಿನ್ನವಾದ ಕವಿತೆಗಳಿವೆ. ಪ್ರತಿಯೊಂದು ಕವಿತೆಯ ವಸ್ತುವು ವಿಭಿನ್ನತೆಯಿಂದ ಕುಡಿದೆ. ಮುಧೋಳ ತಾಲೂಕಿನ ರನ್ನಬೆಳಗಲಿಯಲ್ಲಿ ಶಿಕ್ಷಕಿಯರಾಗಿ ಕಾರ್ಯನಿರ್ವಹಿಸುತ್ತಿರುವ ಇವರು ವಿಶೇಷವಾಗಿ ಮಹಾಕವಿ ರನ್ನ, ಹೆಣ್ಣಿನ ಕೋರಿಕೆ, ಮನದ ಹಂಬಲ, ಗುರುವಿನ ಮಹಿಮೆ, ಮಹಾತ್ಮ ಗಾಂಧೀಜಿ, ನೂತನ ಪಿಂಚಣಿ, ದೇಶ ರಕ್ಷಕ, ನಿಸರ್ಗ ರಮ್ಯತೆ, ಮತದಾನ, ಗೆಳೆತನದ ಮಾಧುರ್ಯ, ಕೃಷಿ, ಭ್ರಷ್ಟಾಚಾರ, ವೈಯಕ್ತಿಕ ಹೋರಾಟದ … Read more

ಅಂತರ್ಜಾಲ ಪತ್ರಿಕೆ ನಡೆಸುವವರ ಕಷ್ಟಸುಖಗಳು: ನಟರಾಜು ಎಸ್.‌ ಎಂ.

ಪಂಜುವಿಗೆ ಎಂಟು ವರ್ಷಗಳು ತುಂಬಿ ಒಂಬತ್ತನೇ ವರ್ಷಕ್ಕೆ ಕಾಲಿಟ್ಟಿತು. ಇಷ್ಟು ಸುದೀರ್ಘ ಕಾಲ ಕನ್ನಡದಲ್ಲಿ ನೆಲೆ ನಿಂತ ಅಂತರ್ಜಾಲ ಪತ್ರಿಕೆಗಳು ಬೆರಳೆಣಿಕೆಯಷ್ಟು ಮಾತ್ರ.. ಒಮ್ಮೊಮ್ಮೆ ಅಂತರ್ಜಾಲ ಪತ್ರಿಕೆಗಳನ್ನು ನಡೆಸೋದು ಒಂದು ರೀತಿಯಲ್ಲಿ ಸುಲಭ ಮತ್ತೊಂದು ರೀತಿಯಲ್ಲಿ ಬಲು ಕಠಿಣ. ಸುಲಭ ಯಾಕೆಂದರೆ ಇವತ್ತು ಒಂದಷ್ಟು ದುಡ್ಡು ಖರ್ಚು ಮಾಡಿದರೆ ಚಂದದ ವೆಬ್‌ ಸೈಟ್‌ ಗಳನ್ನು ಒಂದಷ್ಟು ಗಂಟೆಗಳಲ್ಲಿ ತಯಾರು ಮಾಡಿಬಿಡಬಹುದು. ಆದರೆ ವೆಬ್ ತಯಾರು ಮಾಡಿದ ಮೇಲೆ ಅದನ್ನು ನಡೆಸೋದು ಕಠಿಣ. ಯಾಕೆಂದರೆ ಮೊದಲಿಗೆ ವೆಬ್‌ ಸೈಟ್‌ … Read more

ಪಂಜು ಹುಟ್ಟುಹಬ್ಬದ ಫೇಸ್ ಬುಕ್‌ ಚಾಲೆಂಜ್

ಜನವರಿ ೨೧ ಪಂಜು ಮ್ಯಾಗಜಿನ್‌ ಹುಟ್ಟಿದ ದಿನ.ಪಂಜುವಿನ ಒಂಬತ್ತನೇ ಹುಟ್ಟಹಬ್ಬದ ದಿನವನ್ನು ನಾವು ನೀವು ಎಲ್ಲರೂ ಸೇರಿ ಆಚರಿಸೋಣ.ಪಂಜುವಿನ ಕುರಿತು ನಿಮಗೆ ಅನಿಸಿದ್ದನ್ನು ಅಥವಾ ಪಂಜುವಿನಲ್ಲಿ ನೀವು ಓದಿದ/ಬರೆದ ಯಾವುದಾದರೊಂದು ಬರಹದ ಒಂದಷ್ಟು ಸಾಲುಗಳನ್ನು ಓದಿ ಪುಟ್ಟ ವಿಡಿಯೋ ಮಾಡಿಆ ವಿಡಿಯೋವನ್ನು ಫೇಸ್‌ ಬುಕ್‌ ನಲ್ಲಿ #panjumagazinebirthday #ಪಂಜುಪತ್ರಿಕೆಹುಟ್ಟುಹಬ್ಬ ಹ್ಯಾಷ್‌ ಟ್ಯಾಗ್‌ ಬಳಸಿ ಅಪ್‌ ಲೋಡ್‌ ಮಾಡಿಈ ಚಾಲೆಂಜ್‌ ಸ್ವೀಕರಿಸಲು #panjumagazinebirthday #ಪಂಜುಪತ್ರಿಕೆಹುಟ್ಟುಹಬ್ಬ ಹ್ಯಾಷ್‌ ಟ್ಯಾಗ್‌ ನೊಂದಿಗೆ ನಿಮ್ಮ ಗೆಳೆಯರನ್ನು ಟ್ಯಾಗ್‌ ಮಾಡಿ ನಾಮಿನೇಟ್‌ ಮಾಡಿ.‌ಕನ್ನಡದ ಬರಹಗಳು … Read more

“ಅಲೈದೇವ್ರು” ನಾಟಕ ಪ್ರದರ್ಶನ

ಬೆಂಗಳೂರಿನ ವಿಶ್ವರಂಗ ತಂಡವು ಕೋರೊನಾ ನಂತರದಲ್ಲಿ “ಅಲೈದೇವ್ರು” ಎಂಬ ಮಹತ್ವದ ನಾಟಕವನ್ನು ಆಯ್ದುಕೊಂಡಿದ್ದು, ರವಿವಾರ ಸಂಜೆ ೪.೩೦ಕ್ಕೆ ಮತ್ತು ೭.೩೦ಕ್ಕೆ ಬಸವೇಶ್ವರ ಇಂಜಿನಿಯರ್ಸ್ ಅಕಾಡೆಮಿಯ ಕೆಇಎ ಪ್ರಭಾತ ರಂಗಮಂದಿರದಲ್ಲಿ ಎರಡು ಪ್ರದರ್ಶನ ನೀಡುತ್ತಿದೆ. ಹನುಮಂತ ಹಾಲಿಗೇರಿಯವರ ರಚನೆಯ ಈ ನಾಟಕವನ್ನು ಸಿದ್ದರಾಮ ಕೊಪ್ಪರ ನಿರ್ದೇಶಿಸುತ್ತಿದ್ದಾರೆ. ಈ ನಾಟಕದಲ್ಲಿ ೩೫ಕ್ಕೂ ಹೆಚ್ಚು ಕಲಾವಿದರು ನಟಿಸುತ್ತಿರುವುದು ವಿಶೇಷ. ಉತ್ತರ ಕರ್ನಾಟಕ ಪ್ರತಿಯೊಂದು ಹಳ್ಳಿಯಲ್ಲೂ ನಡೆಯುವ ಜನಪದರ ಹಬ್ಬ ಅಲೈಹಬ್ಬದ ಕುರಿತತಾದ ಕಥಾ ಹಂದರವನ್ನು ಈ ನಾಟಕ ಹೊಂದಿದೆ. ಈ ಹಬ್ಬದಲ್ಲಿ … Read more

“ಮೂಚಿಮ್ಮ ಕಥಾ ಸಂಕಲನ”ದ ಬಿಡುಗಡೆ ಸಮಾರಂಭ

ಪ್ರಪಂಚದ ಯಾವುದೇ ಮೂಲೆಯಿಂದ ಕನ್ನಡ ಪುಸ್ತಕಗಳನ್ನು ತಮ್ಮ ಮೊಬೈಲಿನಲ್ಲಿ ಓದುವ, ಕೇಳುವ ಆಯ್ಕೆ ಕಲ್ಪಿಸಿರುವ ಮೈಲ್ಯಾಂಗ್ ಬುಕ್ಸ್ ತನ್ನ ಪ್ರಕಾಶನ ಸಂಸ್ಥೆಯ ಅಡಿಯಲ್ಲಿ ಹೊರ ತರುತ್ತಿರುವ ನಾಲ್ಕನೆಯ ಪುಸ್ತಕ “ಮೂಚಿಮ್ಮ ಕಥಾ ಸಂಕಲನ”ದ ಬಿಡುಗಡೆಯನ್ನು ಇದೇ ಜನವರಿ 22, ಶುಕ್ರವಾರ ಬೆಳಿಗ್ಗೆ ಹನ್ನೊಂದು ಗಂಟೆಗೆ ಮೈಲ್ಯಾಂಗ್ ಫೇಸ್ ಬುಕ್ ಪುಟದಲ್ಲಿ ನಡೆಯುವ ಲೈವ್ ಮೂಲಕ ಹಮ್ಮಿಕೊಂಡಿದೆ. ವೃತ್ತಿಯಿಂದ ವೈದ್ಯರಾಗಿರುವ ಡಾ.ಅಜಿತ್ ಹರೀಶಿ ಅವರು ಬರೆದಿರುವ ಮೂಚಿಮ್ಮ ಕಥಾ ಸಂಕಲನ ಇಬುಕ್, ಆಡಿಯೋಬುಕ್ ಹಾಗೂ ಪ್ರಿಂಟ್ ಮೂರೂ ಆವೃತ್ತಿಯಲ್ಲಿ ಬಿಡುಗಡೆಯಾಗುತ್ತಿದೆ. … Read more

ಪಂಜು ಕಾವ್ಯಧಾರೆ

ಗಝಲ್ ಜಾತಿಸೀಮೆಯ ದಾಟಿ ಹೊಸನಾಡಕಟ್ಟುವೆನು ಜಗದೊಳಗೆ||ಮೌಢ್ಯತೆಯ ಕಡಿದೊಗೆದು ಸತ್ಯವನುತೋರುವೆನು ಜಗದೊಳಗೆ|| ಕಾರ್ಗತ್ತಲ ದಾರಿಯಲಿ ಮುಳ್ಳುಗಂಟಿಎತ್ತರಕೆ ಬೆಳದಿದೆ ನೋಡು|ಬಿರುಕು ಬಿಟ್ಟ ಮನಗಳಲ್ಲಿ ಪ್ರೀತಿಯನುಬಿತ್ತುವೆನು ಜಗದೊಳಗೆ|| ದ್ವೇಷ ಅಸೂಯೆಗಳ ಕಿಡಿಕಾರಿ ಬೆಂಕಿಉಗುಳುತ್ತಿದ್ದಾರೆ ಸುತ್ತಲೂ|ಘಾಸಿಗೊಂಡ ಮೃದುಮನಕೆ ಔಷಧಹಚ್ಚುವೆನು ಜಗದೊಳಗೆ|| ಅನ್ಯಾಯ ಅಕ್ರೋಶಗಳ ಮೆಟ್ಟಿ ನಿಂತುರಣಭೇರಿ ಬಾರಿಸುವೆ|ಜಯದ ಹಾದಿಯನು ವೀಕ್ಷಿಸುತಲಿಸಾಗುವೆನು ಜಗದೊಳಗೆ|| ಅಭಿನವನ ಒಡಲ ಕಿಚ್ಚದು ನಿಗಿನಿಗಿಕೆಂಡವಾಗಿ ಸುಡುತ್ತಿದೆ ||ಕೆಸರು ತುಂಬಿದ ಹೃದಯವನು ಪರಿಶುದ್ದಮಾಡುವೆನು ಜಗದೊಳಗೆ|| ಶಂಕರಾನಂದ ಹೆಬ್ಬಾಳ ಗಜಲ್ ಅನುರಾಗದ ಮೇಘವು ಅವತರಿಸಿದೆ ಮನದಲ್ಲಿಮುತ್ತಿನ ಹನಿಗಳು ಹೆಪ್ಪುಗಟ್ಟಿವೆ ನನ್ನ ಅಧರದಲ್ಲಿ ಗಾಳಿಯಾಗಿ … Read more

“ಜ಼ೀರೋ ಬ್ಯಾಲೆನ್ಸ್- ಒಂದು ಚೌಕಟ್ಟಿನೊಳಗೆ ಹುದುಗಿರುವ ವಿಷಾದ ಹಾಗು ಜೀವಗಳ ತೀವ್ರ ಸತ್ಯದ ಶೋಧ”: ಎಂ.ಜವರಾಜ್

ಕವಿತೆ, ಕವನ, ಕಾವ್ಯ, ಪದ್ಯ, ಕಥನ ಕಾವ್ಯ, ನೀಳ್ಗಾವ್ಯ ಹೀಗೆ ಗುರುತಿಸುವ ವಿವಿಧ ರೂಪದ ಬಾಹ್ಯ ಮತ್ತು ಆಂತರಿಕ ಭಾವದ ರಚನೆ ಒಂದೇ ತರಹದ್ದೆನಿಸುವ ಕನ್ನಡದ ಸಾಂಸ್ಕೃತಿಕ ಆಸ್ಮಿತೆ ಹೆಚ್ವಿಸಿದ ಸಾಹಿತ್ಯ ಪ್ರಕಾರವಿದು. ಕಾಲಗಳುರುತ್ತ ಭಾಷೆಯ ಅಸ್ತಿತ್ವದ ಪ್ರಶ್ನೆ ಎದುರಾಯಿತು. ಜನರ ಭಾವನೆಗಳ ಮೇಲೆ ಅಭಿವ್ಯಕ್ತಿ ಸ್ವಾತಂತ್ರ್ಯಕ್ಕೆ ಧಕ್ಕೆಯಾಯ್ತು. ಧಾರ್ಮಿಕವಾದ ಜಟಿಲ ಸಮಸ್ಯೆಗಳೂ ಸೃಷ್ಟಿಯಾದವು. ಅಸಮಾನ ಸಾಮಾಜಿಕ ವ್ಯವಸ್ಥೆ ವಿರುದ್ಧ ಸಾಹಿತ್ಯದ ಮನಸ್ಸುಗಳು ಕವಿತೆಗಳನ್ನು ಬರೆದು ರಾಗ ಕಟ್ಟಿ ಕೆಚ್ಚೆದೆಯಲ್ಲಿ ದನಿಯೇರಿಸಿ ಹಾಡಿ ಜನ ಸಮೂಹವನ್ನು ಎಚ್ಚರಿಸಿದವು. … Read more

ಬಾಳಿ ಬದುಕಿದವರು: ಎಸ್.ಗಣೇಶ್, ಮೈಸೂರು.

ಇತ್ತೀಚೆಗೆ ನನ್ನ ಸಂಬಂಧಿಯೊಬ್ಬರು ಮರಣ ಹೊಂದಿದರು, ಕುಟುಂಬದವರೆಲ್ಲಾ ಒಂದು ಕಡೆ ಸೇರಿ, ಮೃತರ ಆತ್ಮ ಶಾಂತಿಗಾಗಿ ಉತ್ತರಕ್ರಿಯೆಗಳನ್ನು ಹೇಗೆ ನೆರವೇರಿಸಬೇಕು? ದಾನಗಳನ್ನು ಏನು ಕೊಡಬೇಕು? ಪ್ರತ್ಯಕ್ಷ ದಾನಗಳನ್ನು ಕೊಡಬೇಕೋ? ಅದರ ವೆಚ್ಚವೆಷ್ಟು? ಎಲ್ಲಿ ಕರ್ಮಗಳನ್ನು ಮಾಡಬೇಕು? ಹೀಗೆ ಅನೇಕ ವಿಚಾರಗಳ ಬಗ್ಗೆ ಚರ್ಚೆ ಆಗುತ್ತಿತ್ತು.. ನಾನು ತದೇಕಚಿತ್ತದಿಂದ ಎಲ್ಲವನ್ನು ಗಮನಿಸುತ್ತಿದ್ದೆ, ಗುಂಪಿನಲ್ಲಿನ ಹಿರಿಯರೊಬ್ಬರು ಪ್ರತಿಯೊಂದು ಪ್ರಶ್ನೆಗಳಿಗೂ ಸಲಹೆಗಳನ್ನು ನೀಡುತ್ತಿದ್ದರು, ಅದನ್ನ ಉಳಿದವರು ಅನುಮೋದಿಸುತ್ತಿದ್ದರು.. ಒಟ್ಟಿನಲ್ಲಿ ಆ ಹಿರಿಯರ ಮಾತನ್ನು ಯಾರು ಮರು ಪ್ರಶ್ನಿಸುತ್ತಿರಲಿಲ್ಲ.. ಅವರ ಮಾತೇ ಅಂತಿಮವಾಗುತ್ತಿತ್ತು.. … Read more

ಪ್ರೊಫೆಷನಲ್ ಅಲ್ಲದ ಫೋಟೋಗ್ರಾಫರ್ ನ ಒಂದು ಪ್ರಸಂಗ…: ಪಿ.ಎಸ್. ಅಮರದೀಪ್.

ಸಮಾರಂಭದ ಊಟಕ್ಕೆ ಮುಂಚೆ ಬಾಳೆ ಎಲೆಯಲ್ಲಿ ಉಪ್ಪು, ಕೋಸಂಬರಿ, ಉಪ್ಪಿನಕಾಯಿ ಮುಂಚೆಯೇ ನೀಡುವ ಅಭ್ಯಾಸ ಎಷ್ಟರಮಟ್ಟಿಗೆ ಇದೆಯೋ ಹಾಗೆಯೇ ಒಂದು ಕಾರ್ಯಕ್ರಮ, ಅದರಲ್ಲೂ ಕೌಟುಂಬಿಕ ಕಾರ್ಯಕ್ರಮ ಅಂದರೆ ನಿಶ್ಚಿತಾರ್ಥ, ಹರಿಶಿಣ ಶಾಸ್ತ್ರ, ಮದುವೆ, ರೆಸೆಪ್ಷನ್ನು, ಸೀಮಂತ‌ ಕಾರ್ಯ, ನಾಮಕರಣ ಶಾಸ್ತ್ರ, ಹೀಗೆ ಯಾವುದೇ ಇರಲಿ, ಫೋಟೋಗ್ರಾಫರ್, ವಿಡಿಯೋಗ್ರಾಫರ್ ಅವರಂತೂ ಊರ ಮುಂಚಿತವಾಗಿ ರೆಡಿಯಾಗಿರಬೇಕು.. ಈಗೀಗಂತೂ ಎಲ್ಲದಕ್ಕೂ ಪ್ರೀ ಮತ್ತು ಪೋಸ್ಟ್ ಫೋಟೋ ಶೂಟ್ ಟ್ರೆಂಡ್ ಶುರುವಾಗಿದೆ. ಮೊದಲು‌ ಹೇಳಿದ್ನಲ್ಲ? ಆ ಎಲ್ಲಾ ಕಾರ್ಯಕ್ರಮಗಳದ್ದೂ ಪ್ರೀ ಮತ್ತು ಪೋಸ್ಟ್ … Read more

ನಮ್ಮ ಜಿಲ್ಲೆಯ ಗಜಲ್ ಕಾರರು… (ಭಾಗ ೧): ವೇಣು ಜಾಲಿಬೆಂಚಿ

ಗಜಲ್ ಬರೆಯುವ ವಿಷಯದಲ್ಲಿ ಬಹಳಷ್ಟು ಪಳಗಿದ ಕೈಗಳು ನಮ್ಮಲ್ಲಿ ಸಾಕಷ್ಟಿವೆ. . . . (ಇಲ್ಲಿ ಕೇವಲ ನಮ್ಮ ರಾಯಚೂರು ಜಿಲ್ಲೆಯನ್ನು ಸೀಮಿತವಾಗಿಟ್ಟುಕೊಂಡು ಹೇಳುವ ಪ್ರಯತ್ನ ಹಾಗೂ ಈ ಬರಹದ ಹಿಂದೆ ಯಾವ ಉದ್ದೇಶವೂ ಇಲ್ಲ. . . ಕೇವಲ ವಿಚಾರ ವಿನಿಮಯ ಮಾತ್ರ) ನಮ್ಮ ಭಾಗದ ಹೆಮ್ಮೆಯ ಗರಿಮೆ ದಿವಂಗತ ಶಾಂತರಸರನ್ನು ಈ ಗಜಲ್ ವಿಷಯದಲ್ಲಿ ಮೂಲ ಸಂಸ್ಥಾಪಕರಾಗಿ ನಾವು ಕಾಣುತ್ತೇವೆ. . ತರುವಾಯ ಶ್ರೀಮತಿ ಎಚ್. ಎಸ್ ಮುಕ್ತಾಯಕ್ಕ, ತರುವಾಯ ದಿವಂಗತ ಶ್ರೀ ಜಂಬಣ್ಣ … Read more

ಮೆಟ್ಟು ಹೇಳಿದ ಕಥಾ ಪ್ರಸಂಗ ಒಂದು ನೀಳ್ಗಾವ್ಯ (ಭಾಗ 61 & 62): ಎಂ. ಜವರಾಜ್

-೬೧-ಈ ಅಯ್ನೋರ್ ಪಾದಬೀದ್ಬೀದಿಲಿ ತಿರ್ಗಾಡ್ತಿತ್ತುಆ ಪಾದ ತಿರ್ಗಾಡ ಬಿರುಸ್ಗಬೀದ್ಬೀದಿಲಿ ಲಾರಿಗಳು ತಿರುಗ್ತಿದ್ದುಆ ತಿರುಗ್ತಿದ್ದ ಲಾರಿಗಳು ಮಣ್ಸುರ್ಸ್ದುಬರ್ಗುಟ್ಗ ಮೊರ್ಗುಟ್ಗ ಹೋಯ್ತಿದ್ದು ಚೇರ್ಮನ್ನಾಗಿ ವರ್ಸಾಗಿತ್ತುಊರೊಳ್ಗ ಮೋರಿಗಳು ದಿಕ್ಕಾಪಾಲು ಹರಿತಾಬೀದಿ ಯಾವ್ದ ಮೋರಿ ಯಾವ್ದ ಅನ್ನದೇ ತಿಳಿದೆಪುಂಡೆಲ್ಲ ಸೇರಿ ಪಂಚಾಯ್ತಿಲಿ ಗುಲ್ಲೆಬ್ಬಿತ್ತು ಆ ಆಳು ಇದ ಮೊದುಲ್ಗೆ ಹೇಳಿದ್ದಆದ್ರ ಈ ಅಯ್ನೋರುಆ ಆಳ್ ಮಾತ್ನ ಬೀದಿ ಪಾಲ್ ಮಾಡಿನಗಾಡ್ತ ಇದ್ದದ ನಾ ಕಂಡಿದ್ದಿ ಈಗ ಈ ಅಯ್ನೋರ್ ಪಾದ್ಗಳುಬೀದಿ ಬುಟ್ಟು ದೂರಸ್ಟ ನಡ್ದುಜೊತ್ಗ ಆ ಆಳೂಹಿಂದಿಂದ ನಡಿತಾ ಬತ್ತಿದ್ನಸಂದ ಆಯ್ತ ಬಂತುಆಗಆ … Read more

“ಧಣೇರ ಬಾವಿ”ಪುಸ್ತಕದ ಕುರಿತ ನನ್ನ ಸಣ್ಣ ವಿಮಶೆ೯: ಸುರೇಶ್ ಮಲ್ಲಿಗೆ ಮನೆ

ಈ ಕಥೆಗಳೇ ಹಾಗೆ ಅನಿಸುತ್ತೆ, ನಮ್ಮ ಮುಖದಲ್ಲಿನ ನವರಸಗಳನ್ನು ಹೊರಹಾಕಲು ಕಥೆಗಾರರು ಕಾಯುತ್ತಿರುತ್ತಾರೆ..!!? ನಮ್ಮ ತುಟಿಯ ಪಿಸು ನಗುವಿನಿಂದ ಪ್ರಾರಂಭವಾದ ಕೆಲ ಕಥೆಗಳು ಕೊನೆಗೆ ಕೊನೆಗೊಳ್ಳುವುದು ದುರಂತ ಕಣ್ಣೀರಿನ ಹನಿಗಳಿಂದ..!! ಕೆಲವು ಮೂಕವಿಸ್ಮಿತನನ್ನಾಗಿ ಮಾಡುತ್ತವೆ, ಕೆಲವು ಒಂದು ಬಗೆಯ ಮ್ಲಾನತೆಯ ಭಾವನೆಯನ್ನು ಮೂಡಿಸುತ್ತದೆ, ಕೆಲವಂತೂ ನಮ್ಮದೇ ಕಥೆಯೇ ಎನ್ನಿಸುವಂತಿರುತ್ತವೆ, ಕೆಲವು ನಮ್ಮ ಗತಕಾಲವನ್ನು ನೆನಪಿಸುವಂತಿರುತ್ತವೆ. ಹೀಗೆ ನಾನಾ ಬಗೆಯವು. ಕಥೆಗಳೇ ದಾರಿತಪ್ಪಿರುವ ಕಾಲದಲ್ಲಿ ಕಥೆಗಾರ ರಾಗುವುದು ಕಥೆಗಳಲ್ಲಿ ಮಾತ್ರ ನೋಡುವಂತಹ ಈ ಕಾಲದಲ್ಲಿ ಕಥೆಗಳು ಕಥೆಗಳಾಗಿ ಮಾತ್ರ … Read more