ಸಾಮಾನ್ಯ ಜ್ಞಾನ (ವಾರ 36): ಮಹಾಂತೇಶ್ ಯರಗಟ್ಟಿ

ಪ್ರಶ್ನೆಗಳು  ೧.    ಬಾಹ್ಯಾಕಾಶದಲ್ಲಿ ಪ್ರಥಮ ಬಾರಿ ಆಡಲಾದ ಕ್ರೀಡೆ ಯಾವುದು? ೨.    ಸಿತಾರ್‌ನ್ನು ಕಂಡು ಹಿಡಿದ ಕೀರ್ತಿ ಯಾರದು? ೩.    ಪದ್ಮವಿಭೂಷಣ ಪ್ರಶಸ್ತಿ ಪುರಸ್ಕೃತ ಸುಪ್ರೀಂ ಕೋರ್ಟಿನ ಮುಖ್ಯ ನ್ಯಾಯಾಧೀಶರು ಯಾರು? ೪.    ತಂಬಾಕಿನಲ್ಲಿರುವ ವಿಷ ಪದಾರ್ಥ ಯಾವುದು? ೫.    ಮಹಾಭಾರತದಲ್ಲಿ ನಡೆದ ಕುರುಕ್ಷೇತ್ರ ಯುದ್ಧದ ಸ್ಥಳ ಎಲ್ಲಿದೆ? ೬.    ಮೊದಲ ಪಾಣಿಪತ್ ಕದನ ನಡೆದ ವರ್ಷ ಯಾವುದು? ೭.    ಹ್ಯಾಲಿ ಧೂಮಕೇತು ಎಷ್ಟು ವರ್ಷಗಳಿಗೊಮ್ಮೆ ಕಾಣಿಸಿಕೊಳ್ಳುತ್ತದೆ? ೮.    ಅಹಂ ಬ್ರಹ್ಮಾಸ್ಮಿ ಎಂದು ಪ್ರತಿಪಾದಿಸಿದವರು ಯಾರು? ೯.    ಎಂ.ಎಸ್.ಸುಬ್ಬಲಕ್ಷ್ಮಿಯವರಿಗಿದ್ದ … Read more

ಕರ್ಮ ಕಾದಂಬರಿ ವಿಮರ್ಶೆ: ಗಣೇಶ್ ಖರೆ, ಪ್ರಶಾಂತ್ ಭಟ್

ಮೊದಲಿನಿಂದಲೂ ನಾನು ಓದಿದ್ದು ಕಡಿಮೆಯೇ… ಅದರಲ್ಲೂ ಪುಣೆಗೆ ಬಂದಮೇಲೆ ಮುಗಿಯಿತು, ಇಲ್ಲಿ ಕನ್ನಡ ಪುಸ್ತಕವೂ ದೊರೆಯುವುದಿಲ್ಲ. ಆದರೆ ಇತ್ತೀಚೆಗೆ ಓದುವ ಹವ್ಯಾಸ ಬೆಳೆದಿದೆ. ಹಾಗಾಗಿ ಊರಿಗೆ ಹೋದಾಗೆಲ್ಲ ಬರುವಾಗ ಒಂದಿಷ್ಟು ಕಾದಂಬರಿಗಳನ್ನ ತಂದಿರುತ್ತೇನೆ. ಅವರಿವರಲ್ಲಿ ಕೇಳಿ ಯಾವ ಕಾದಂಬರಿಗಳು ಚೆನ್ನಾಗಿವೆ ಅಂತ ಖರೀದಿಸುವುದು ನನ್ನ ವಾಡಿಕೆ. ಮೊನ್ನೆ ಹೀಗೆ ಫೇಸ್ ಬುಕ್ ಲ್ಲಿ ಗೆಳತಿಯೊಬ್ಬಳು "ಕರಣಂ ಪವನ್ ಪ್ರಸಾದ್" ಬರೆದಿರುವ "ಕರ್ಮ" ಕಾದಂಬರಿ ತುಂಬಾ ಚೆನ್ನಾಗಿದೆ, ಓದಲೇಬೇಕಾದ ಪುಸ್ತಕ ಅಂದಾಗ ಇವರು ಯಾವ ಲೇಖಕರು ಇವರ ಹೆಸರನ್ನು … Read more

ನೋವೊಂದು ಬಳಿ ಬಂದು .. : ಅನಿತಾ ನರೇಶ್ ಮಂಚಿ

ದೊಡ್ಡಪ್ಪನ ಮನೆಯೊಳಗೆ ಕರ್ಫ್ಯೂ ವಿಧಿಸಿದಂತಿದ್ದ ವಾತಾವರಣ. ದೊಡ್ಡಮ್ಮ ಮತ್ತು ಅತ್ತಿಗೆಯರ ಸಂಭಾಷಣೆಯೆಲ್ಲಾ ಸನ್ನೆಯಲ್ಲೇ ಸಾಗುತ್ತಿತ್ತೇ ವಿನಃ ಸ್ವರ ಹೊರ ಬರುತ್ತಿರಲಿಲ್ಲ. ಅಣ್ಣಂದಿರು ಅಲ್ಲಲ್ಲಿ ತಮ್ಮ ಕೆಲಸದಲ್ಲಿ ತೊಡಗಿದಂತೆ ಕಂಡರೂ   ಅವರ ಗಮನವೆಲ್ಲಾ ಈಸೀಚೇರಿನಲ್ಲಿ ಕುಳಿತ ದೊಡ್ಡಪ್ಪನ ಕಡೆಯೇ ಇತ್ತು. ಅವರೊ ಇತ್ತಲಿನ ಪರಿವೆಯಿಲ್ಲದೆ  ಕೈಯನ್ನು ಮೇಲೆತ್ತಲು ಪ್ರಯತ್ನಿಸುತ್ತಾ ಎತ್ತಲಾಗದೇ ಕೆಳಗೆ ಹಾಕುವುದು ಮಾಡುತ್ತ ಕುಳಿತಿದ್ದರು. ಕಣ್ಣಿನಲ್ಲಿ ಶೂನ್ಯ ಭಾವ.  ಮನೆಯೆಲ್ಲಾ ಮೌನದಲ್ಲಿ ಮುಳುಗಿ ಯಾವುದೋ ಶೋಕವನ್ನು ನಿರೀಕ್ಷಿಸುವಂತೆ ಇತ್ತು. ನನ್ನ ಆಗಮನ ಎಲ್ಲರ ಮೊಗದಲ್ಲೂ ನಗೆರೇಖೆಯನ್ನು … Read more

ಅಂತರ್ಜಾಲದ ಖೆಡ್ಡಾಗಳು ಮತ್ತು ಕಾಟಕೊಡೋ ಕುಕ್ಕಿಗಳು: ಪ್ರಶಸ್ತಿ. ಪಿ.

ದಿನ ಬೆಳಗಾದಾಗ ಮುಖ ತೊಳೆಯೋ ಮುನ್ನವೇ ವಾಟ್ಸಾಪು ಮೆಸೇಜು ನೋಡ್ಲಿಲ್ಲ ಅಂದ್ರೆ ರಾತ್ರೆಯೊಳಗೆ ಒಮ್ಮೆಯೂ ಫೇಸ್ಬುಕ್ಕು ಹೊಕ್ಕಿಲ್ಲ ಅಂದ್ರೆ ನಮ್ಮ ಆ ದಿನವೇ  ಅಪೂರ್ಣವಾದ ಭಾವ !. ಈ ಅಂತರ್ಜಾಲದಲ್ಲಿ ನಾವು ಎಷ್ಟು ಮುಳುಗಿ ಹೋಗಿದ್ದೇವೆ ಅಂದ್ರೆ ಕಾಲ್ಪನಿಕ ಜಗತ್ತೇ ಸರ್ವಸ್ವವೂ ಆಗಿ ಇಲ್ಲೇ ಕೃಷಿ ಮಾಡೋದ್ರಿಂದ(farm villa), ಓಡೋವರೆಗೆ(temple run) ನಿಜಜೀವನದ ಎಲ್ಲವನ್ನೂ ಅನುಕರಿಸೋ ತಂತ್ರಾಂಶಗಳನ್ನು ಬರೆದು ಅವುಗಳಲ್ಲೇ ಮುಳುಗಿ ಹೋಗಿ ಒಂಥರಾ ಕಾಲ್ಪನಿಕ ಜಗತ್ತಲ್ಲೇ ಕಳೆದುಹೋಗಿದ್ದೇವೆ. ಒಂದು ವಾರ ಫೇಸ್ಬುಕ್ಕಲ್ಲಿ ದಿನಾ ರಾತ್ರಿ ಹರಟಿದವ … Read more

ಹೊಟ್ಟೆ ಗಟ್ಯಾ, ಸೊಂಟ ಗಟ್ಯಾ? (ಅಳಿದುಳಿದ ಭಾಗ): ಸೂರಿ ಹಾರ್ದಳ್ಳಿ

ಇಲ್ಲಿಯವರೆಗೆ ಇದು ಮುಗಿದ ನಂತರ ಸಿಹಿ ತಿಂಡಿಯ ಸರದಿ. ಸುಮಾರಾಗಿ ಒಬ್ಬಟ್ಟು ಇದ್ದೇ ಇರುತ್ತದೆ. ಒಬ್ಬಟ್ಟು ಎಂದರೆ ಹೋಳಿಗೆ, ಇಂಗ್ಲಿಷಿನವರು ಕುಲಗೆಡಿಸಿ ಹೇಳಿದ ಸ್ವೀಟ್ ಚಪಾತಿ. ಎಷ್ಟೋ ಕನ್ನಡ ಪದಗಳಿಗೆ ಇಂಗ್ಲಿಷಿನ ಪದಕೋಶದಲ್ಲಿ ಶಬ್ದಗಳೇ ಇಲ್ಲ. ಅವುಗಳಲ್ಲಿ ಮುಖ್ಯವಾಗಿ ಮಡಿ, ಮೈಲಿಗೆ, ಸೂತಕ, ಮುಸುರೆ ಇತ್ಯಾದಿ. ಇವು ಏನೆಂದು ಕೇಳಬೇಡಿ, ಹೇಳುವುದಕ್ಕೂ, ಕೇಳುವುದಕ್ಕೂ ಇದು ಸಮಯವಲ್ಲ! ಸಿಹಿ ತಿಂಡಿಗಳಲ್ಲಿ ಒಬ್ಬಟ್ಟು ಮಾತ್ರವೇ ಮೇಲೆ ಒಂದಿಷ್ಟು ಸಕ್ಕರೆ ಹಾಕಿಸಿಕೊಳ್ಳುತ್ತದೆ. ಕಾಯಿ, ಸಕ್ಕರೆ, ಬೇಳೆ ಒಬ್ಬಟ್ಟು ಮಾಡಿದರೆ ಅದರ ಮೇಲೆ … Read more

ಮಹದಾನಂದ: ಉಮೇಶ ಕ. ಪಾಟೀಲ

                   ಭೂಮಿಯ ಮೇಲೆ ಸಹಸ್ರ ಕೋಟಿ ಜೀವರಾಶಿಗಳು ಇವೆ. ಇವೆಲ್ಲ ಜೀವಿಗಳಿಗೆ ಸುಖ, ದು:ಖ, ಸಂತೋಷ, ಆನಂದ ಇರಲೇಬೇಕು. ಅದರಲ್ಲಿಯೂ ಮನುಷ್ಯನು ಪ್ರತಿಯೊಂದು ಕೆಲಸದಲ್ಲಿ ಆನಂದವನ್ನು ಕಂಡುಕೊಳ್ಳಲು ಬಯಸುತ್ತಾನೆ. ಆನಂದ ಅಥವಾ ಮಹದಾನಂದ ಅಂದರೆ ವಿಶೇಷ ಆನಂದ, ಅತಿಶಯ ಆನಂದ, ದೊಡ್ಡ ಆನಂದ, ಈ ಆನಂದವು ಯಾವಾಗ ಯಾರಿಗೆ, ಯಾವ ಕಾರಣದಿಂದ ಬರುತ್ತದೆ ಎನ್ನುವದನ್ನು ನಿಶ್ಚಿತವಾಗಿ ಹೇಳಲು ಬರುವದಿಲ್ಲ. ಉದಾಹರಣೆಗೆ-ವಿದ್ಯಾರ್ಥಿಯು ಪರೀಕ್ಷೆಯಲ್ಲಿ ಹೆಚ್ಚಿನ ಅಂಕಗಳಿಸುವುದರಿಂದ  ಆನಂದ … Read more

ಮಕ್ಕಳ ಪದ್ಯಗಳು: ಹೃದಯಶಿವ

೧)ಶುಭೋದಯ  __________________ ದಿನಾ ನಾನು ಶಾಲೆಗೆ  ಹೋಗುವಂಥ ವೇಳೆಗೆ  ಹಾದಿಬದಿಯ ಬೇಲಿಯು  ಮುಡಿದು ನಿಂತ ಹೂವಿಗೆ  ಹೇಳುವೆ ಶುಭೋದಯ ಹೊಳೆದಂಡೆಯ ಬಂಡೆಗೆ  ಒರಗಿನಿಂಥ ಜೊಂಡಿಗೆ  ರೆಕ್ಕೆಗೆದರಿ ಹಾರುವ  ಹಚ್ಚಹಸಿರು ಮಿಡತೆಗೆ  ಹೇಳುವೆ ಶುಭೋದಯ ಎತ್ತರೆದೆಳನೀರಿಗೆ  ಹತ್ತುವಂಥ ಅಳಿಲಿಗೆ  ಪುಟ್ಟ ಮೂರುಗೆರೆಗಳ   ಅದರ ಮುದ್ದುಬೆನ್ನಿಗೆ ಹೇಳುವೆ ಶುಭೋದಯ ಹಾಲ್ದುಂಬಿದ ತೆನೆಗೆ ಕೊಕ್ಕಿಡುವಾ ಹಕ್ಕಿಗೆ  ತೊಟ್ಟಿಲಾಗಿ ತೂಗುವ  ತಾಯಿಯಂಥ ಪೈರಿಗೆ  ಹೇಳುವೆ ಶುಭೋದಯ  ಬೆಳ್ಳಿಯಂಥ ಬೆಳಗಿಗೆ  ಚಿನ್ನದಂಥ ಕಿರಣಕೆ  ಬದುಕಿರುವ ತನಕವೂ  ಬದುಕುಳಿಯುವ ಚಿತ್ರಕೆ  ಹೇಳುವೆ ಶುಭೋದಯ ೨)ಗುಂಡನ … Read more

ಕಿರು ಪ್ರಬಂಧಗಳು: ರುಕ್ಮಿಣಿ ಮಾಲ, ಸಿರಾ ಸೋಮಶೇಖರ್

    ಬೆನ್ನಚೀಲ ೧೯೭೫ರ ದಶಕದಲ್ಲಿ ಬೆನ್ನಿಗೆ ಹಾಕುವ ಚೀಲ ಅಷ್ಟಾಗಿ ದಕ್ಷಿಣಕನ್ನಡ ಜಿಲ್ಲೆಯಲ್ಲಿ ಚಾಲ್ತಿಯಲ್ಲಿರಲಿಲ್ಲ. ಶಾಲೆಗೆ ಮಕ್ಕಳು ಉದ್ದಕೈ ಇರುವ ಬಟ್ಟೆಚೀಲ ತೆಗೆದುಕೊಂಡು ಹೋಗುತ್ತಿದ್ದರು. ಕೆಲವೇ ಕೆಲವು ಮಂದಿ ಬಳಿ ಬೆನ್ನಚೀಲ ಇರುತ್ತಿದ್ದ ಕಾಲವದು. ನನಗೆ ಆಗ ಬೆನ್ನಿಗೆ ಹಾಕುವ ಚೀಲ ಬೇಕು ಎಂಬ ಆಸೆ ಪ್ರಬಲವಾಗಿ ಇತ್ತು. ಅದರಲ್ಲಿ ಪುಸ್ತಕ ಹಾಕಿ ಶಾಲೆಗೆ ತೆಗೆದುಕೊಂಡು ಹೋಗಬೇಕು ಎಂಬ ಕನಸು ಕಾಣುತ್ತಿದ್ದೆ. ಆದರೆ ನನ್ನಲ್ಲಿ ಆ ಚೀಲವೇ ಇರಲಿಲ್ಲ. ಉದ್ದ ಕೈ ಇರುವ ಬಟ್ಟೆ ಚೀಲವನ್ನೇ … Read more

ವಿಶ್ವ ಜನಸಂಖ್ಯಾ (ಸ್ಪೋಟ!) ದಿನಾಚರಣೆ – ಜುಲೈ ೧೧: ಅಖಿಲೇಶ್ ಚಿಪ್ಪಳಿ

ತುಂಬಾ ನೇರವಾಗಿ ಹೇಳಬೇಕೆಂದರೆ, ನೊಣ, ಸೊಳ್ಳೆ, ಇಲಿ-ಹೆಗ್ಗಣ, ತಿಗಣೆ, ಉಣ್ಣಿ, ಊಜಿನೊಣ ಇತ್ಯಾದಿಗಳು ಈ ಸೃಷ್ಟಿಯ ರಾಕ್ಷಸ ರೂಪಗಳು. ಇವುಗಳನ್ನು ಸಂಹಾರ ಮಾಡಲು ಯಾವುದೇ ಆಯುಧಗಳಿಲ್ಲ. ಯಾವುದೇ ಪ್ರತಿಕೂಲ ಪರಿಸ್ಥಿತಿಯನ್ನು ಎದುರಿಸಿ ಬದುಕ ಬಲ್ಲ ಸಾಮರ್ಥ್ಯವನ್ನು ಈ ರಾಕ್ಷಸ ರೂಪಿಗಳು ಹೊಂದಿವೆ. ಯಾವುದೇ ರಾಸಾಯನಿಕಗಳಿಂದಲೂ ಇವುಗಳನ್ನು ನಾಶ ಮಾಡಲು ಆಗದು. ಇವುಗಳ ಸಂಖ್ಯೆಯೂ ಅಧಿಕ. ಇದೇ ಸಾಲಿಗೆ ಇನ್ನೊಂದು ಜೀವಿ ಸೇರ್ಪಡೆಯಾಗಿದೆ. ಅದೇ ಆಧುನಿಕ ಮಾನವ. ಕಳೆದೊಂದು ಶತಮಾನದಲ್ಲಿ ತನ್ನ ಸಂಖ್ಯೆಯನ್ನು ಮೂರು-ನಾಲ್ಕು ಪಟ್ಟು ಹೆಚ್ಚಿಸಿಕೊಂಡು ಭೂಮಿಯ … Read more

ಭವಿಷ್ಯ ಭಾರತದಲ್ಲಿ ವಿಜ್ಞಾನದ ಏಳಿಗೆ: ಪ್ರಸನ್ನ ಗೌಡ

ಪ್ರೊ. ಸಿ. ಎನ್. ಆರ್. ರಾವ್ ಭಾಷಣ ಆಧಾರಿತ ಲೇಖನ  ವೈಜ್ಞಾನಿಕ ಕ್ಷೇತ್ರದಲ್ಲಿ ಉತ್ತಮ ನಾಯಕರನ್ನು ಸೃಷ್ಟಿಸುವ ಪ್ರಯತ್ನದಲ್ಲಿ ಶಿಕ್ಷಕರ ಪಾತ್ರ ಅತ್ಯಮೂಲ್ಯ ವಾದುದ್ದು. ಪ್ರಾಥಮಿಕ ಮತ್ತು ಪ್ರೌಢಶಾಲಾ ಮಕ್ಕಳಿಗೆ ವೈಜ್ಞಾನಿಕ ವಿಚಾರಗಳಲ್ಲಿ ಹೆಚ್ಚಿನ ಆಸಕ್ತಿ ಬೆಳೆಸುವ ನಿಟ್ಟಿನಲ್ಲಿ ದೇಶದ ಭವಿಷ್ಯ ನಿಂತಿದೆ. ನಮ್ಮ ನೆರೆಯ ರಾಷ್ಟ್ರ ಚೀನಾದ ಜೊತೆ ನಮ್ಮ ದೇಶವನ್ನು ಹೋಲಿಸಿ ನೋಡಿದರೆ ನಮ್ಮ ದೇಶದ ವೈಜ್ಞಾನಿಕ ಬೆಳವಣಿಗೆ ತುಂಬಾ ಕಡಿಮೆ ಇದೆ. ದಿನೆ ದಿನೆ ಮಕ್ಕಳಲ್ಲಿ ವೈಜ್ಞಾನಿಕ ಪ್ರಜ್ಞೆ ಹೆಚ್ಚಿದಂತೆಲ್ಲ ದೇಶದ ಅಭಿವೃದ್ದಿ ತನಗೆ … Read more

ನಮಸ್ಕಾರ….ನಮಸ್ಕಾರ: ಹೊರಾ.ಪರಮೇಶ್

'ನಮಸ್ಕಾರ' ಈ ಸಂಬೋಧನಾ ಶಬ್ದವನ್ನು ಬಳಸದಿರುವ ಅಥವಾ ಕೇಳದಿರುವ ಯಾವುದೇ ವ್ಯಕ್ತಿ ಅಥವಾ ಕನ್ನಡಿಗ ಇಲ್ಲವೆಂದೇ ಭಾವಿಸಿದ್ದೇನೆ.ಆಂಗ್ಲ ಭಾಷಾ ಪ್ರೇಮಿಗಳು ಗುಡ್ ಮಾರ್ನಿಂಗ್ ; ಆಫ್ಟರ್ ನೂನ್, ಗುಡ್ ನೈಟ್ ಎಂದು ಹೇಳಿದರೂ ಅದರ ಅಂತರಾರ್ಥದ ಭಾವ 'ನಮಸ್ಕಾರ'ವೇ ಆಗಿದೆ.ಈ ಶಬ್ದದ ಹರವು ಸಾಗರದಷ್ಟು ವಿಶಾಲವಾದುದಾಗಿದೆ.ವಿವಿಧ ಸಂದರ್ಭಗಳಲ್ಲಿ ವಿಧ ವಿಧ ಅರ್ಥವಂತಿಕೆಯನ್ನು ಹೇಗೆಯ ಪಡೆದುಕೊಂಡಿದೆ ಎಂಬುದರ ಸುತ್ತ ಮುತ್ತ ಸುತ್ತಾಡಿ ಬರುವ ಉದ್ದೇಶ ನನ್ನದು.ಅದಕ್ಕೂ ಮುಂಚೆ ನಮಸ್ಕಾರ ಎಂದರೇನು? ಎಂದು ನೋಡಿಬಿಡೋಣ. ಸಾಕು ಸುಮ್ನಿರ್ರಿ, 'ನಮಸ್ಕಾರ' ಅಂದ್ರೆ … Read more

ಈ ಸಂಜೆ ಯಾಕಾಗಿದೆ . . . ?: ಮಂಜುನಾಥ್ ಬಂಡಿಹೊಳೆ

ಸಂಜೆ ಸೂರ್ಯ ಮೆಲ್ಲನೆ ಮರೆಯಾಗುವುದನ್ನು ನೋಡಿದಾಗ, ಮನಸ್ಸಿನ ಆಸೆಗಳು ನಿಧಾನವಾಗಿ ಕರಗತೊಡಗಿದವು.  ನೀ ಬರುವ ಹಾದಿಯನ್ನು ದಿಟ್ಟಿಸಿದಾಗ ನಿರಾಸೆಯ ಕಾರ್ಮೋಡ ಕವಿಯಿತು.  ಈ ಸಂಜೆಯು ನೀ ಬರಲಿಲ್ಲ, ಪ್ರೀತಿಗಾಗಿ ಕಾಯುವುದರಲ್ಲಿ ಏನೋ ನೆಮ್ಮದಿ.  ನನ್ನ ತಾಳ್ಮೆಗೆ ಮನಸೋತ ಬಾನಿಂದ ಕಣ್ಣೀರ ಸಿಂಚನ. . . ! ಮತ್ತದೇ ಹಳೆಯ ನೆನಪುಗಳು ಒಂದೋದಾಗಿ ನೆನಪಾಗತೊಡಗಿದವು.   ಅಂದು ಯಾವುದೋ ಕೆಲಸದ ತರಾತುರಿಯಲ್ಲಿ ಹೋಗುತ್ತಿದ್ದ ನನಗೆ ನಾಲ್ಕಾರು ಹುಡುಗಿಯರ ಮದ್ಯೆ ನಗುತ್ತಾ ನಿಂತಿದ್ದ ನೀನು ಕಾಣಿಸಿದೆ. ಭೇಟಿ ಆಕಸ್ಮಿಕವಾದರೂ ಸಂಬಂಧ ಶಾಶ್ವತ ಅಲ್ಲವೇ?ಕ್ಷಣಕಾಲ … Read more

ಸಾಮಾನ್ಯ ಜ್ಞಾನ (ವಾರ 35): ಮಹಾಂತೇಶ್ ಯರಗಟ್ಟಿ

ಪ್ರಶ್ನೆಗಳು: ೧.    ಬ್ಯಾಂಕುಗಳನ್ನು ರಾಷ್ಟ್ರೀಕರಣಗೊಳಿಸಿದ ಭಾರತದ ಪ್ರಧಾನಿ ಯಾರು? ೨.    ಭಾರತೀಯ ಜ್ಞಾನಪೀಠದ ಸ್ಥಾಪಕರು ಯಾರು? ೩.    ಅಶೋಕನ ಶಾಸನಗಳು ಯಾವ ಭಾಷೆಯಲ್ಲಿವೆ? ೪.    ಐಫೆಲ್ ಟವರ್ ಎಲ್ಲಿದೆ? ೫.    ಸುಫೀರಿಯರ್ ಸರೋವರ ಇರುವ ಖಂಡ ಯಾವುದು? ೬.    ರಾಷ್ಟ್ರೀಯ ವಯಸ್ಕರ ಶಿಕ್ಷಣ ಕಾರ್ಯಕ್ರಮವನ್ನು ಪ್ರಾರಂಭಿಸಿದ ವರ್ಷ ಯಾವುದು? ೭.    ಮೃತ ಶರೀರವನ್ನು ಕೆಡದಂತೆ ಕಾಪಾಡಲು ಯಾವ ರಾಸಾಯನಿಕವನ್ನು ಬಳಸುತ್ತಾರೆ? ೮.    ಸ್ವಾತಂತ್ರ್ಯ ಚಳುವಳಿಯ ಯಾವ ಘಟನೆಯನ್ನು ೨೦೦೫ರಲ್ಲಿ ವಜ್ರಮಹೋತ್ಸವ ವರ್ಷಾಚರಣೆಯಾಗಿ ಆಚರಿಸಲಾಯಿತು? ೯.    ಆಕಾಶವಾಣಿಗೆ ಇದ್ದ … Read more

ಹೊಟ್ಟೆ ಗಟ್ಯಾ, ಸೊಂಟ ಗಟ್ಯಾ?: ಸೂರಿ ಹಾರ್ದಳ್ಳಿ

ಲೇಖನ ಬರೆದರೆ ರುಚಿಕಟ್ಟಾಗಿರಬೇಕು, ಓದುಗರಿಗೆ ರುಚಿಸಬೇಕು. ಸಾಹಿತ್ಯದಲ್ಲಿ ರಸಕವಳ ಇರಬೇಕು, ಅದರಲ್ಲಿ ಮಸಾಲೆಯೂ ಇರಬೇಕು ಎಂತೆಲ್ಲಾ ನಮ್ಮ ಹಿರಿಯ ಸಾಹಿತಿಯೊಬ್ಬರು ಉಪದೇಶಿಸಿದ್ದರಿಂದ ಈ ನನ್ನ ಲೇಖನವು ಊಟದ ಬಗ್ಗೆ, ಅದರಲ್ಲಿಯೂ ವಿಶೇಷ ಭೂರಿಭೋಜನದ ವಿಷಯವನ್ನೊಳಗೊಂಡಿದೆ. ನೀವೆಲ್ಲಾ ಬಾಯಿಯಲ್ಲಿ ನೀರು ಬರಿಸಿಕೊಳ್ಳುತ್ತಾ ಇದನ್ನು ಓದುತ್ತೀರಿ, ಖಾದ್ಯಾದಿಗಳ ರುಚಿಯನ್ನು ಕಲ್ಪಿಸಿಕೊಳ್ಳುತ್ತಾ ಒಣ ತೇಗಿಗೆ ಪಕ್ಕಾಗುತ್ತೀರಿ ಎಂದುಕೊಂಡಿದ್ದೇನೆ. ಬನ್ನಿ, ಉಡುಪಿಯ ಬ್ರಾಹ್ಮಣರ ವಿವಾಹದ ಸಮಾರಂಭಕ್ಕೆ ನುಗ್ಗೋಣ. ಓ.. ಆಗಲೇ ಎಲೆ ಹಾಕಿಬಿಟ್ಟಿದ್ದಾರೆ. ಬನ್ನಿ, ಕುಳಿತುಕೊಳ್ಳೋಣ. ನೋಡಿ, ಓ ಅಲ್ಲಿ, ನೆಲದ ಮೇಲೆ ಎಲೆ … Read more

ಧರೆಗೆ ದೊಡ್ಡವರು: ಹೃದಯಶಿವ

ಮಹಾಕಾವ್ಯಗಳೆಂದರೆ ಕೇವಲ ರಾಮಾಯಣ, ಮಹಾಭಾರತಗಳಷ್ಟೇ ಅಲ್ಲ. ಭಾರತದ ಮಟ್ಟಿಗೆ ನೋಡುವುದಾದರೆ ಪ್ರತಿಯೊಂದು ಪ್ರದೇಶಕ್ಕೂ ತನ್ನದೇ ಆದ ಸಂಸ್ಕೃತಿ ಇದೆ. ತನ್ನದೇ ಆದ ನೆಲದ ಗುಣವಿದೆ. ಹಾಗೆಯೇ, ತನ್ನ ಪರಂಪರೆಯಿಂದ ರೂಪುತಳೆದದೈವ ಪುರುಷರ, ಸಾಂಸ್ಕೃತಿಕ ನಾಯಕರ ಕುರಿತಾದ ಮೌಖಿಕ ಕಾವ್ಯಗಳಿವೆ. ಅಂಥವುಗಳಲ್ಲಿ 'ಮಂಟೇಸ್ವಾಮಿ ಕಾವ್ಯ'ವೂ ಪ್ರಮುಖವಾದುದು. ಕರ್ನಾಟಕದ ದಕ್ಷಿಣ ಭಾಗದ ಸೋಲಿಗರು, ಕುರುಬರು, ಬೇಡರು, ಪರಿವಾರದವರು, ಉಪ್ಪಾರರು ಹಾಗೂ ಆದಿ ಕರ್ನಾಟಕ ಆದಿ ದ್ರಾವಿಡರೂ ಆದ ಹೊಲೆಯರು, ಮಾದಿಗರು ಈ ಕಥನವನ್ನು ಹಾಡುವವರಾಗಿದ್ದಾರೆ. ಇವರನ್ನೇ ನೀಲಗಾರರೆಂದು ಕರೆಯಲ್ಪಡುವುದು. ನೀಲಗಾರರೆಂದರೆ … Read more

ಕೀನ್ಯಾದ ಸತಾವ್ ಮತ್ತು ಇಂಡಿಯಾದ ಘೆಂಡಾ: ಅಖಿಲೇಶ್ ಚಿಪ್ಪಳಿ

ಸತಾವ್ ಹೆಸರಿನ ಅವನೊಬ್ಬನಿದ್ದ. ೪೫ ವರ್ಷದ, ಭೀಮಕಾಯದ, ಬಾಳೆಯ ದಿಂಡಿನಷ್ಟು ಬೆಳ್ಳಗಿದ್ದ ದಂತವನ್ನು ಹೊಂದಿದ ಬೃಹತ್ ಗಾತ್ರದ ಗಂಭೀರವಾದ ಆನೆ ತ್ಸಾವೋ ಸಂರಕ್ಷಿತ ಅರಣ್ಯವನ್ನು ಅಕ್ಷರಷ: ಆಳಿದವ. ಇಡೀ ಜಗತ್ತಿನ ಅತಿ ದೊಡ್ಡ ಆನೆಗಳ ಪೈಕಿ ಒಬ್ಬನಾಗಿದ್ದ.  ಆಕಾಶದಿಂದ ಹಣಿಕಿದರೂ ಕಾಣುವಂತಿದ್ದ ಉದ್ದದ ಬಿಳಿ ಕೋರೆಯನ್ನು ಹೊಂದಿದ್ದ. ಒಂದೊಂದು ಕೋರೆಯೂ ೫೦ ಕೆ.ಜಿ.ಗಳಿಗಿಂತ ಜಾಸ್ತಿ ತೂಗುತ್ತಿದ್ದವು. ತ್ಸಾವೋ ಸಂರಕ್ಷಿತ ಅರಣ್ಯ ಪ್ರದೇಶಕ್ಕೆ ಭೇಟಿ ನೀಡುವ ಲಕ್ಷಾಂತರ ಪ್ರವಾಸಿಗರನ್ನು ತನ್ನ ದೈತ್ಯ ಗಾತ್ರ ಮತ್ತು ಕೋರೆಗಳಿಂದಾಗಿ ಗಮನ ಸೆಳೆಯುತ್ತಿದ್ದ. … Read more